General

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3

ಜ.ಚ.ನಿ

ಹಿನ್ನೆಲೆ

ಸುಮಾರು ಎಂಬತ್ತು ಅಥವಾ ನೂರು ವರ್ಷಗಳ ಹಿಂದೆ ವೀರಶೈವ ಸಮಾಜವು ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ಪಕ್ಕಾಗಿತ್ತು. ನಾಡಿಕ್ರಿಯೆಗಳು ನಿಲ್ಲುತ್ತ ಬಂದಿದ್ದವು. ಸಮಾಜವು ಶೈವಸಂಪ್ರದಾಯಕ್ಕೆ ಕಟ್ಟುಬಿದ್ದಿತ್ತು. ಒಂದೆಡೆಗೆ

ನಿರಾಚಾರಗಳು ಇನ್ನೊಂದೆಡೆಗೆ ಅನಾಚಾರಗಳು ಹೆಚ್ಚಿಹೋಗಿದ್ದವು. ಅತ್ಯಾಚಾರಗಳು ಅತಿಯಾಗಿದ್ದವು. ಗುರುಗಳು ತಮ್ಮ ಗೊತ್ತುಗುರಿಗಳನ್ನು ಮರೆತಿದ್ದರು. ಲಿಂಗಗಳು ಅಂಗಗಳಿಂದ ಅಗಲಿ ಮನೆಯ ಜಗುಲಿಗಳ ಏರಿದ್ದವು. ಪಂಚಸೂತ್ರದ ಮಾತು

ಸೂತಕವಾಗಿತ್ತು. ಪವಿತ್ರ ಶಿಲೆಯ ಬದಲು ಅಪವಿತ್ರ ಮಣ್ಣು ಮಟ್ಟೆಯ ಶಿಲೆಯು ಸಾಕ್ಷಿಯಾಗಿತ್ತು. ಜಂಗಮರು ತತ್ವಹೀನರಾಗಿ ತುತ್ತಿಗಾಗಿ ಅಲೆಯುತ್ತಿದ್ದರು. ಭಸ್ಮ ಭಸ್ಮವಾಗಿತ್ತು. ಮಣ್ಣು ಮಟ್ಟೆಗಳಿಂದ ಸಿಕ್ಕ ಬೂದಿ ಬೆರಣಿಗಳಿಂದ ಭಸ್ಮಗಳು ಸಿದ್ಧವಾಗುತ್ತಿದ್ದವು. ರುದ್ರಾಕ್ಷಿಗಳ ಧರಿಸುವುದೊಂದೆಡೆಗಿರಲಿ, ಕಂಡವರೆ ಇರಲಿಲ್ಲ. ಮಠಮಾನ್ಯಗಳಲ್ಲಿಯೆ ಕಾಣುವುದು ಅಪರೂಪವಾಗಿತ್ತು. ಮಂತ್ರೋಚ್ಛಾರಣೆ ಮಾಯವಾಗಿತ್ತು. ಸಂಸಾರ ಚಿಂತೆ ಮಿತಿಮೀರಿತ್ತು. ಎಲ್ಲಿಯೊ ಯಾರಾದರು ಕೆಲವರು

ಮಂತ್ರ ಜಪ ಮಾಡುತ್ತಿದ್ದರೆ ಅವರಿಗೆ ಅದರ ಅರ್ಥವೇನು, ಮರ್ಮವೇನು, ಹೇಗೆ  ಜಪಿಸಬೇಕು ಎಂಬುದೇ ತಿಳಿದಿರಲಿಲ್ಲ. ಪಾದೋದಕ ವಿಧಿ-ವಿಧಾನಗಳನ್ನು ಅರಿತವರಿರಲಿಲ್ಲ. ಪ್ರಸಾದ ಪ್ರಭಾವ ಕುಂದಿತ್ತು. ಪಂಚಾಚಾರಗಳ ಪ್ರಾಣ ತ್ರಾಣಗಳ ಸುಳಿವಿರಲಿಲ್ಲ.

 ಭಕ್ತರು ಶ್ರದ್ಧೆಗೆ ಮಹೇಶ್ವರರು ನಿಷ್ಠೆಗೆ ಪ್ರಸಾದಿಗಳು ಅವಧಾನಕ್ಕೆ ತಿಲಾಂಜಲಿಯ ಬಿಟ್ಟಿದ್ದರು. ಪ್ರಾಣಲಿಂಗಿಗಳಿಗೆ ಆನಂದದ ಸೊಗಸು ಸೋಂಕಿರಲಿಲ್ಲ. ಶರಣರಿಗೆ ಅನುಭಾವದ ಗಂಧವೇ ಗೊತ್ತಿರಲಿಲ್ಲ. ಐಕ್ಯರು ಅಲ್ಲಲ್ಲಿ ಒಬ್ಬೊಬ್ಬರು ಮಿಣುಗುತ್ತಿದ್ದರು. ಆದರೆ ಸಮಾಜದ ಸಾಮರಸ್ಯ ಅವರಿಗಿರಲಿಲ್ಲ. ಇದ್ದರೂ ಸಾಮಾಜಿಕ ಕುಂದುಕೊರತೆಗಳನ್ನು ಪೂರೈಸುವ ಕ್ರಿಯಾಶಕ್ತಿ ಅವರಲ್ಲಿರಲಿಲ್ಲ. ಜ್ಞಾನಪ್ರಚಾರವಿರಲಿಲ್ಲ. ಹೀಗೆ ಸಮಾಜವು ಅಜ್ಞಾನಾಂಧಕಾರದಲ್ಲಿ ಮುಳುಗಿತ್ತು. ನೀತಿ ರೀತಿಗಳ ಶ್ವಾಸೋಚ್ಛ್ವಸಗಳು ನಿಲ್ಲುತ್ತ ಬಂದಿದ್ದವು. ತೀರ ನಿಶ್ಯಕ್ತಿಯೊದಗಿತ್ತು. ಜಡವಾಗಿತ್ತು. ಜಂಜಾಟಕ್ಕಿಕ್ಕಿತ್ತು.

ಆ ಸಮಯದಲ್ಲಿ ವೈದ್ಯಭಾನುವಿನ ಉದಯವಾಯಿತು. ಅಂಧಕಾರ ಹರಿಯಿತು, ಭವರೋಗ ಅಳಿಯಿತು. ಆಚಾರ ವಿಚಾರ ಚಿಕಿತ್ಸೆಯಿಂದ ಉಸಿರು ಉತ್ತಮ ರೀತಿಯಲ್ಲಿ ಆಡತೊಡಗಿತು. ವರ್ಷವರ್ಷಕ್ಕು ಶಕ್ತಿ ಮೈಗೂಡಿ ಬರಹತ್ತಿತು. ಹೊಸರಕ್ತ ಧಮನಿಗಳಲ್ಲಿ ಹರಿಯತೊಡಗಿತು. ಸು. ೩೦-೩೫ ವರ್ಷಗಳಲ್ಲಿ ಸಮಾಜವು ಸಶಕ್ತವಾಗಿ ಸರ್ವಾಂಗ ಸುಂದರವಾಯಿತು. ಹಾಗಾದಲ್ಲಿ ಅಂತಹ ಅಮೋಘವಾದ ಶಕ್ತಿಗೆ ಕಾರಣರಾರು ಎನ್ನುವಿರಾ ? ಅವರೇ ಕಾರಣಿಕ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು. ಅವರು ಮೂಡಿಬಂದುದನ್ನು ಮಾಡಿ ನೆರವೇರಿಸಿದ ಮಣಿಹಗಳಾವವೆಂಬುದನ್ನು ತಿಳಿಯಲಪೇಕ್ಷಿಸುವಿರಾ ? ಹಾಗಾದರೆ ಬನ್ನಿ ! ಕೇಳಬನ್ನಿ !!

 ಕರ್ನಾಟಕ ಕೇಂದ್ರವಾದ ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿರುವ ‘ಜೋಯಿಸರ ಹರಳಳ್ಳಿ’ ಎಂಬುದೊಂದು ಸಣ್ಣ ಗ್ರಾಮ, ಗ್ರಾಮ ಸಣ್ಣದಾದರೂ ಅದರ ಧಾಮ ಇಂದು ಹಿರಿಯದು. ಆ ಗ್ರಾಮದಲ್ಲಿ ದೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳಿದ್ದರು. ಅವರು ತಮ್ಮ ನಡೆನುಡಿಗಳಿಂದ ನಾಮ ನೇಮಗಳಿಂದ ಹನ್ನೆರಡನೆಯ ಶತಮಾನದಲ್ಲಿದ್ದ ಕಲ್ಯಾಣದ ಬಸವ ನೀಲಾಂಬಿಕೆಯರ ನೆನಪನ್ನು ತರುವಂತಿದ್ದರು.

 ನಿಜವಾಗಿಯು ತಾಯಿ ನೀಲಮ್ಮನು ನೀಲಾಂಬಿಕೆಯ ಸದೃಶಳು. ಗುಣಗಳಲ್ಲಿ ಗುಂಜಿಯಷ್ಟು ವ್ಯತ್ಯಾಸವಿಲ್ಲ. ಬಸವಯ್ಯನವರ ಭಾಗ್ಯದ ತವರು, ಬಾಳಿನ ಭವನ, ತಾಯಿ ನೀಲಮ್ಮನು ಬಸವಯ್ಯನವರಿಗೆ ಅನುರೂಪಳಾದ ಗೃಹಿಣಿ. ಪರಮ ಪತಿವ್ರತೆ; ಪತಿಯ ಪ್ರಾಣ ದೇವತೆ, ಶಾಂತಿ ಸಂಪನ್ನೆ, ಲಿಂಗಾರ್ಚನಾಸಕ್ತಿ, ಶ್ರಮಿಸುವ ಜೀವಿ, ಸಮತಾಭಾವಿ.

ಮನೆಯ ಕುಂದುಕೊರತೆಗಳನ್ನು ಆಚೆ ನೆರೆಯವರಿಗೆ ಚಾಚೂ ಹೇಳುತ್ತಿರಲಿಲ್ಲ. ನೆರೆ ಮನೆಗಳಿಗೆ ಸ್ವೈರವಾಗಿ ಸುಳಿಯುತ್ತಿರಲಿಲ್ಲ. ಮನೆಯ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ. ಕುಂದು ಕೊರತೆ ಕಷ್ಟಕಾರ್ಪಣ್ಯಗಳ ಈ ಸಂಸಾರ ಸಾಗರ ವಿಷವನ್ನು ಕಾರಿದರೂ ಕಷ್ಟ, ನುಂಗಿದರೂ ಕಷ್ಟ, ಕಾರಿದರೆ ಮನೆತನದ ಮರ್ಯಾದೆಗೆ ಭಂಗ, ನುಂಗಿದರೆ ಮನಃಶಾಂತಿಗೆ ಭಂಗ, ಇದನರಿದು ತಾಯಿ ನೀಲಮ್ಮನವರು ಈ ನಂಜನ್ನು ಕಕ್ಕದೆ ಕುಡಿಯದೆ ಕಂಠದಲ್ಲಿಯೇ ಇರಿಸಿಕೊಂಡು ನಿಜಕ್ಕೂ ನೀಲಕಂಠಯರಾಗಿದ್ದರು. ನೀಲಕಂಧರನು ಜೀವನದಲ್ಲಿ ಒಮ್ಮೆ ವಿಷಪಾನ ಮಾಡಿ ಜಗತ್ತಿಗೆ ವರ್ಷಕ್ಕೊಂದು ಸಲ ಯುಗಾದಿ ಬರುವಂತೆ ಮಾಡಿದ್ದರೆ ತಾಯಿ ನೀಲಮ್ಮನವರು ತಮ್ಮ ಬಾಳಿನಲ್ಲಿ ನಿತ್ಯ ನಂಜುಂಡು ದಿನದಿನವೂ ಹೊಸಹಬ್ಬದ ಉಲ್ಲಾಸ ಉಣ್ಣುವಂತೆ ಮಾಡುತ್ತಿದ್ದರು. ಹೊಸ ಹೊಸ ಜೀವನ ಕಾಣುವಂತೆ ಮಾಡುತ್ತಿದ್ದರು. ಅವರು ಈ ಭಾಗ್ಯವಿಲ್ಲದ ಬಾಳಿಗೆ ಬಂದು ರುದ್ರಾಣಿಯಾಗಿದ್ದಂತೆ ತಮ್ಮ ಷಡ್ಗುಣೈಶ್ವರ್ಯಗಳಿಂದ ಇಂದ್ರಾಣಿಯೂ ಆಗಿದ್ದರು. ಅದರಿಂದ ಆ ಬಡತನದ ಬಾಳಿಗೆ ನೀಲಮ್ಮನವರು ಒಂದು ನೀಲರತ್ನ; ಬಡತನದ ಆ ಕಾಳಿರುಳಿಗೆ ಒಂದು ನೀಲಾಂಜನ ; ಬಾಳುರಿಯ ಉಪಶಾಂತಿಗೆ ಅವರೊಂದು ನೀಲಾಚಲ, ಬೋಳಾದ ಈ ಬಾಳಬನಕ್ಕೆ ಅವರೊಂದು ನೀಲೋತ್ಪಲ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ. ಅವರೇ ಆ ಬಾಳಿನ ಸಂಪತ್ತು; ಸರ್ವಸ್ವ.

 ಹೀಗೆ ಸಂಸಾರದ ಸರ್ವತೋಮುಖವಾದ ರಥ ಚಾಲನೆಗೆ ಹೆಗಲಿಕ್ಕಿ ಹೊಣೆ ಹೊತ್ತು ಪತಿಗೆ ಹಿಂದಡಿಯಿಡದೆ ಆ ಮಾತಾಯಿ ಮುನ್ನಡೆಯುತ್ತಿದ್ದಳು; ಮುನ್ನಿರೀಕ್ಷಣೆ ಮಾಡುತ್ತಿದ್ದಳು. ಆದರೂ ಬಡತನದ ಬಾಗಿಲನ್ನು ದಾಟಲು ಶಕ್ಯವಾಗಿರಲಿಲ್ಲ. ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿಯಿಂದ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿ ಅವೆರಡು ಕೂಡಿ ಬಾಳಿದವು.

 ಹೀಗೆ ಕೆಲವು ಕಾಲ ಕಳೆದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ.ಶ. ೧೮೬೭ ಪ್ರಭವ ಸಂವತ್ಸರದಲ್ಲಿ ಶ್ರೀ  ಹಾನಗಲ್ಲ ಕುಮಾರ ಪ್ರಭುಗಳು ಜನ್ಮತೊಟ್ಟರು. ವಿರಕ್ತರತ್ನ ಅವತರಿಸಿತು. ಯೋಗಿಚಂದ್ರ ಮೂಡಿತು.     ಸಮಾಜಸೂರ್ಯೋದಯವಾಯಿತು.

ಮುಂದೆ ಕುಮಾರ ಸ್ವಾಮಿಯಾಗಲಿರುವ ಈ ಕುವರನು ಸ್ವಾಮಿ ವಿವೇಕಾನಂದರಿಗೆ ಮೂರು ನಾಲ್ಕು ವರ್ಷ ಚಿಕ್ಕವನು. ಸಮಾಜದ ನಾಡಿನ ವಿವೇಕಾನಂದನಂತಿದ್ದನು. ಅದೇ ನಿಲುವು. ಅದೇ ತೇಜಸ್ಸು, ಆದರೂ ಆ ವೀರವೃತ್ತಿಯಿರಲಿಲ್ಲ; ಸಾಧು

ಸಂಪತ್ತಿಯಿತ್ತು. ಆ ಕಿಡಿನುಡಿಗಳಿಲ್ಲದಿದ್ದರು ವಿಚಾರ ಪರಿಪೂರ್ಣ ಉದಾತ್ತ ಉಪದೇಶದಿಂದ ಜನಾಂಗವನ್ನು ಚೇತರಿಸಿಕೊಳ್ಳುವಂತೆ ಮಾಡುವ ಚೈತನ್ಯವಿತ್ತು. ಹೊಸಕಾರ್ಯಕ್ಷೇತ್ರಕ್ಕೆ ಹೆಜ್ಜೆಯಿಕ್ಕುವಂತೆ ಮಾಡುವ ಅಪ್ರತಿಮ ಪ್ರತಿಭೆಯಿತ್ತು.

ಧೈಯವೊಂದೇ ಕ್ಷೇತ್ರ ಚಿಕ್ಕದು. ಮಾರ್ಗವೊಂದೇ ಪರಿಣಾಮ ಫಲಿತಾಂಶಗಳು ಬೇರೆ. ಕಾಲವೊಂದೇ ಪ್ರಾಂತ ಬೇರೆ, ಅದು ಭಾರತದ ಬೆಳಕು. ಇದು ಕನ್ನಡದ ಕಾಂತಿ, ಇಂತಹ ಕಾರಣಿಕ ಶಿಶುವನ್ನು ಹೆತ್ತತಾಯಿತಂದೆಗಳು ಎಂತಹ ಪುಣ್ಯಶಾಲಿಗಳು !

ಇಂತಹ ಕಾರಣಿಕ ಪುರುಷನನ್ನು ಪಡೆದ ನಾಡು ಸಮಾಜಗಳು ಎಂತಹ ಭಾಗ್ಯಶಾಲಿಗಳು !!

 ಈ ಕಾರಣಿಕ ಶಿಶುವಿನ ಉದಂತ ಉದಯದ ಕಾರಣಗಳಲ್ಲಿ ಹೇಳದೆ ಬಿಡುವಂತಿಲ್ಲ. ಒಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮನವರು ಪವಡಿಸಿ ನಿದ್ದೆಹೋಗಿದ್ದಾರೆ. ಆ ಸಮಯದಲ್ಲಿ ಒಂದು ಸ್ವಪ್ನ ಬಿದ್ದಿದೆ. ಜಂಗಮ ವೇಷಧಾರಿಯಾದ ಒಬ್ಬ ತಾಪಸಿಯು ದರ್ಶನ ಕೊಟ್ಟಿದ್ದಾನೆ. ಜಂಗಮ ಭಕ್ತಿಯಾದ ನೀಲಮ್ಮ ತಾಯಿಯು ನಯಭಯದಿಂದ ನಮಿಸಿದ್ದಾಳೆ. ತಾಪಸಿಯು ತನ್ನ ಕೈಯಲ್ಲಿದ್ದ ಸುರಸುಮವನ್ನು ಆಶೀರ್ವದಿಸಿ ಜಗನ್ಮಾತೆ, ನಾವು ಆಶೀರ್ವದಿಸಿದ ಕುಸುಮಕ್ಕೆ ಬದಲು ನಮಗೊಬ್ಬ ಸುಕುಮಾರನನ್ನು ಕೊಡು. ಇದೇ ನಾವು ನಿನ್ನಲ್ಲಿ ಬೇಡಬಂದ ಭಿಕ್ಷೆ ಎಂದು ಹೇಳಲು, ಅದಕ್ಕೆ ತಾಯಿಗಳು ಆಗಲಿ ಮಹಾತ್ಮ ತಮ್ಮ ಆಶೀರ್ವಾದದಿಂದ ಇನ್ನೊಬ್ಬ ಮಗನು ಹುಟ್ಟುವ ಭಾಗ್ಯವೊದಗಿದಲ್ಲಿ ಅಗತ್ಯವಾಗಿ ಅರ್ಪಿಸುತ್ತೇನೆಂದು ಮಾತುಕೊಟ್ಟಳಂತೆ | ಬಂದು ಬೇಡಿದ ತಾಪಸಿಯು ಯಾರನ್ನುವಿರಾ ? ಸಮಾಜದ ಜನತಾ ಜನಾರ್ದನನೇ ಆ ವೇಷದಲ್ಲಿ ಬಂದು ಬೇಡಿದನೆಂಬುದೇ ನೂರು ಪಾಲಿಗೂ ನಿಜ. ಕುಮಾರನು ಮುಂದೆ ಸಮಾಜ ಕುಮಾರನಾಗಿ ಬಾಳಲಿಲ್ಲವೆ ? ಇದಕ್ಕಿಂತಲು ಬೇರೆ ನಿದರ್ಶನ ಬೇಕೆ ?

 ಇನ್ನೊಂದು ದಿನ ತವರೂರಾದ ಲಿಂಗದಹಳ್ಳಿಯ ಬಳಿಯಲ್ಲಿರುವ ನಂದೀಹಳ್ಳಿಯಲ್ಲಿ ಜರುಗುವ ಬಸವೇಶ್ವರನ ಯಾತ್ರೆಗೆ ನೀಲಮ್ಮನವರು ಹೋಗಿದ್ದರು. ನಂದೀಶ್ವರನ ರಥೋತ್ಸವ ನಡೆಯುತ್ತಿತ್ತು. ಅಲಂಕರಿಸಿದ ಆ ತೇರನ್ನು ನೋಡಿ ನಲಿಯಲು ಅದರ ಬಳಿಗೆ ನೀಲಮ್ಮನವರು ನಿಂತಿದ್ದರು. ಯಾರೋ ತೂರಿದ ಖರ್ಜೂರವೊಂದು ಅನಿರೀಕ್ಷಿತವಾಗಿ ನೀಲಮ್ಮ ತಾಯಿಯ ಉಡಿಯ ಮಡಿಕೆಯಲ್ಲಿ ಬಂದು ಬಿತ್ತು. ಅದನ್ನು ಕಂಡು ಭಕ್ತಿಭರಿತರಾದ ತಾಯಿಯವರು ಇದೂ ಒಂದು ದೇವರ ಕರುಣೆಯೆಂದು ಕೈಗೆ ತೆಗೆದುಕೊಂಡು ಕಣ್ಣುಗಳಿಗೊತ್ತಿಕೊಂಡು ಮನೆಗೆ ಕೊಂಡೊಯ್ದರು. ಸ್ನಾನ ಶಿವಪೂಜೆಗಳನ್ನು ಆಗು ಮಾಡಿಕೊಂಡು ತಂದ ಪ್ರಸಾದವನ್ನು ಪ್ರಸನ್ನಚಿತ್ತದಿಂದ ಲಿಂಗಕ್ಕರ್ಪಿಸಿ ಸ್ವೀಕರಿಸಿದರು. ಅದರ ಫಲವಾಗಿ ಗರ್ಭಧಾರಣೆಯಾಗಿ ನವಮಾಸ ತುಂಬಿ ಕಾರಣಿಕ ಕುಮಾರನು ಜನಿಸಿದನು. ಮಕ್ಕಳಿಲ್ಲದೆ ಮರಗುತ್ತಿದ್ದ ಮಾದಲಾಂಬಿಕೆಗೆ ಬಾಗೇವಾಡಿಯ ದೇವಸ್ಥಾನದಲ್ಲಿರುವ ಬಸವೇಶ್ವರನ ಪುಷ್ಪಫಲಾನುಗ್ರಹದಿಂದ ದ್ವಿತೀಯ ಶಂಭು ಬಸವೇಶ್ವರನು ಜನಿಸಿದಂತೆ ನಮ್ಮ ಕಥಾನಾಯಕನು ಸಹ ಬಸವೇಶ್ವರ ಫಲಾನುಗ್ರಹದಿಂದಲೇ ಜನಿಸಿದ್ದು ಮತ್ತೊಂದು ಉದಂತ ಉದಯದ ಕುರುಹು.

ದಿನವಾವುದೋ ತಿಳಿಯದು ಒಂದು ದಿನ ಬ್ರಾಹ್ಮಿಮುಹೂರ್ತ, ಮಗು ಜನಿಸಿದೆ. ಮನೆಯವರಿಗೆಲ್ಲ ಆನಂದ. ಮನೆಯನ್ನು ಸಾರಣೆ ಕಾರಣೆಗಳಿಂದ ಶುದ್ಧಗೊಳಿಸಿದ್ದಾರೆ. ರಂಗವಲ್ಲಿ ತಳಿರುತೋರಣಗಳಿಂದ ಅಲಂಕರಿಸಿದ್ದಾರೆ. ಜನ್ಮಲಿಂಗಧಾರಣೆಗೆಂದು ಜಂಗಮರೊಬ್ಬರನ್ನು ಕರೆಯಲು ಹೋಗಿದ್ದರು. ಅಷ್ಟರಲ್ಲಿ ಒಬ್ಬ ಮುದುಕ ಮಹೇಶ್ವರರು ಭಿಕ್ಷಕ್ಕಾಗಿ ಮನೆಗೆ ಬಂದರು. ಕೆಲಸ ಮಾಡಲು ಬಂದಿದ್ದ ಒಬ್ಬ ಮುದುಕಿಯು ಸ್ವಾಮಿ ! ಮನೆಯಲ್ಲಿ ಹೆತ್ತಿರುವರು. ಈ ದಿನ ಭಿಕ್ಷೆ ನೀಡುವಂತಿಲ್ಲ, ಮತ್ತೊಂದು ಮನೆಗೆ ಹೋಗಿರಿ ಎಂದು ಹೇಳಿದಳು. ಅಮ್ಮಾ, ಏನು ಹೆತ್ತಿರುವರು ? ಗಂಡುಕೂಸನ್ನು, ಹಾಗಾದಮೇಲೆ ನೀನೇಕಮ್ಮ ಹೀಗೆ ಹೇಳುತ್ತೀಯೆ ! ಸುತನು ಜನಿಸಿದರೆ ಸಂತೋಷವಲ್ಲವೆ? ಸಕ್ಕರೆ ಹಂಚುವುದಿಲ್ಲವೆ? ದೀನದರಿದ್ರರಿಗೆ ದಾನ ಮಾಡುವುದಿಲ್ಲವೆ? ಹೀಗೆ ಲೋಕರೂಢಿಯಿದ್ದು ನೀನು ಒಂದು ಹಿಡಿ ಕಾಳು ನೀಡುವದಿಲ್ಲೆಂದು ಹೇಳುವುದು ಧರ್ಮವೇ? ಸ್ವಾಮಿ, ನೀವು ಹೇಳುವುದೆಲ್ಲ ಸರಿಯೆ. ಆದರದು ಶ್ರೀಮಂತರ ಮಾತು. ನಮ್ಮಂತಹ ಬಡವರು ಎಲ್ಲಿಂದ ಮಾಡಬೇಕು? ಮೊದಲೆ ನಮಗೆ ಮಕ್ಕಳು ಹುಟ್ಟುವುದು ಹೆಚ್ಚು. ದಾನಧರ್ಮ ಮಾಡಿದರೆ ಮತ್ತಷ್ಟು ಹುಟ್ಟ ಬಹುದಲ್ಲವೆ? ಎಂದು ನಗೆ ನುಡಿದಳು. ಅಮ್ಮಾ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಈಗ ಹುಟ್ಟಿದ ಮಗುವನ್ನು ನಮಗೆ ಕೊಟ್ಟುಬಿಡಿರಿ. ಸ್ವಾಮಿ, ಯಾರು ಬೇಡೆನ್ನುವರು? ಅಗತ್ಯವಾಗಿ ತಗೆದುಕೊಂಡು ಹೋಗಿರಿ, ಸಾಕುವ ಸಾಮರ್ಥ್ಯ ನಿಮಗಿದ್ದರೆ ಎಂದು ನಗೆಮಾತಿನಿಂದ ನುಡಿದಳು. ಆಗ ಮಹೇಶ್ವರನು ಹರ್ಷಚಿತ್ತನಾಗಿ ಹೊರಟು ಹೋದನು. ತಾಯಿಯ ಕನಸಿಗೆ ಬಂದು ಹೋಗಿದ್ದ ಆ ಜನತಾಜನಾರ್ದನನೆ ಮರಳಿ ಮಹೇಶ್ವರನ ರೂಪದಲ್ಲಿ ಬಂದು ಸಮಾಜದ ಶಿಶುವನ್ನು ಸಮಾಜಕ್ಕೆ ಕೊಡುವಂತೆ ಜಾಗ್ರತಾವಸ್ಥೆಯಲ್ಲಿ ಮಾತು ತೆಗೆದುಕೊಂಡು ಮರಳಿದನು. ಇದೂ ಒಂದು ಉದಂತ ಉದಯದ ಚಿನ್ಹೆಯಲ್ಲವೆ ?

ಆಮೇಲೆ ಜಂಗಮರೊಬ್ಬರು ಬಂದು ಜನ್ಮಲಿಂಗಧಾರಣೆಯನ್ನು ಮಾಡಿ ಹೋಗುವರು. ಮೂರಾರು ದಿನಗಳು ಕಳೆದ ನಂತರ ಇದ್ದಕ್ಕಿದ್ದಂತೆ ಮಗು ಹಾಲು ಕುಡಿಯದೆ ಹೋಯಿತು. ತಾಯಿಗೆ ದಿಗಲಾಯಿತು. ಮನೆಯವರಿಗೆ ಭಯವಾಯಿತು. ಎಲ್ಲರು ಮಮ್ಮಲ ಮರುಗಿದರು. ಏನಾಗಿದೆಯೋ ಎಂದು ಯಾರಾರನ್ನೋ ಕರೆಯಿಸಿ ತೋರಿಸಿದರು. ಒಬ್ಬೊಬ್ಬರು ಒಂದೊಂದು ಉಪಾಯವನ್ನು ಹೇಳಹತ್ತಿದರು. ‘ಹಾಲಯ್ಯ’ ಎಂದು ಹೆಸರಿಟ್ಟು ನೋಡಿದರು. ಇದುವೆ ಹುಟ್ಟುಹೆಸರಾಯಿತು. ಏನಾದರೂ ಹಸುಮಗು ಹಾಲು ಕುಡಿಯಲಿಲ್ಲ. ಆಗ ಅವರಲ್ಲಿ ಒಬ್ಬರು ಗ್ರಾಮದೇವತೆಯ ಅಂಗಾರವನ್ನು ತಂದು ಹಚ್ಚಬೇಕೆಂದರು. ಆ ಮಾತು ಮಾತೆಯಾದ ನೀಲಮ್ಮನವರ ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿ ಶ್ರೀಗುರುವಿನಿಂದ ಶುದ್ಧವಾದ ಭಸಿತವನ್ನು ತಂದು ಹಣೆಗೆ ಧರಿಸಿದರು. ಆ ಕೂಡಲೇ ಮಗುವು ಮೊಲೆಯುಂಡಿತು. ಸರ್ವರು ಸಂತೋಷಭರಿತರಾದರು. ಕಂದನ ಉಜ್ವಲಂತ ಉತ್ಕ್ರಮಣ ಜೀವನಕ್ಕೆ ಬೀಜಾವಾಪವಿದು.

ದಿನದಿನಕ್ಕೆ ಮಗುವಿಗೆ ಬಲಬಂದಿತು. ಮೈಕೈ ತುಂಬಿಬಂದವು. ಶುಕ್ಲಪಕ್ಷದ ಚಂದ್ರನಂತೆ ಬೆಳೆದನು. ನಗೆ ಬೆಳದಿಂಗಳ ಬೀರಿದನು. ಹನ್ನೊಂದನೆಯ ದಿನ ‘ಸದಾಶಿವ’ನೆಂದು ಹೆಸರಿಟ್ಟರು. ನೆರೆಯವರ ನೇಹದ ಶಿಶುವಾಗಿ ಮನೆಯವರ ಮುದ್ದುಮಗನಾಗಿ ದಿನಗಳೆದನು. ಎಲ್ಲರಿಗೂ ಹಾಲಿನಂತೆ ಹರ್ಷಪ್ರದನಾಗಿ ಅಂಬೆಗಾಲಿನಿಂದ ಆಟವಾಡಿದನು. ಆಡಿಸುವವರ ತೊಡೆಯ ಶಿಶುವಾಗಿ, ಮುದ್ದಿಸುವವರ ಮುಂಗೈಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಬೆಳೆದನು. ತೊದಲ್ನುಡಿಗಳ ಕೇಳಿ ಆನಂದಿಸಿದರು. ನಗೆಮೊಗವ ಕಂಡು ನಲಿದರು. ಮೊಗದ ತೇಜವ ನೋಡಿ ಹರುಷಿಸಿದರು. ಮೃದುತನುವ ಮುಟ್ಟಿ ಸುಖಪಟ್ಟರು. ಹೀಗೆ ಸಕಲರ ಸಂತಸದ ಕೇಂದ್ರವಾಗಿ ಬೆಳೆದು ವರುಷದವನಾದನು.

ಸದಾಶಿವನಿಗೆ ಯಾವ ಆಟಗಳ ಮೇಲೆ ಪ್ರೇಮವಿಲ್ಲದಿದ್ದರು ಗೋಲಿಯಾಟ (ಗುಂಡಿನಾಟ)ದಲ್ಲಿ ಗಮನವಿತ್ತು. ಗುರಿಯಿಟ್ಟು ಹೊಡೆದರೆ ಎಷ್ಟು ದೂರದಲ್ಲಿದ್ದರೂ ತಪ್ಪುತ್ತಿರಲಿಲ್ಲ. ಗುಂಡಿನಾಟದಲ್ಲಿ ಆತನನ್ನು ಸೋಲಿಸುವ ಹುಡುಗರೆ ಇರಲಿಲ್ಲ. ಹೀಗಾಗಿ ಸದಾಶಿವನ ದೃಷ್ಟಿಯೋಗ ಈ ಆಟದಿಂದಲೇ ಪ್ರಾರಂಭವಾಯಿತು. ಸದಾಶಿವನ ಮೆಚ್ಚುಗೆಯ ಮತ್ತೊಂದಾಟವೆಂದರೆ ದೊಂಬರಾಟ, ದೊಂಬರೆಲ್ಲಿ ಬಂದಾಡಿದರು. ಅಲ್ಲಿಗೆ ಹೋಗಿ ನೋಡುತ್ತಿದ್ದನು. ಅವರ ಮೈಕುಣಿತಗಳನ್ನು ಅಂತರದಲ್ಲಿ ಹಗ್ಗದ ಮೇಲೆ ಮಧ್ಯಬಿಂದುವಿನ ತೂಕವಿಡಿದು ಕೆಳಕ್ಕೆ ಬೀಳದಂತೆ ನಡೆವುದನ್ನು ನೋಡಿ ಅಚ್ಚರಿಪಡುತ್ತಿದ್ದನು. ಅದರ ಫಲವಾಗಿ ಹಠಯೋಗದತ್ತ ಆತನ ಮನಸ್ಸು ವಾಲಿತು.

ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ಕಲಿತ ದೃಷ್ಟಿಯೋಗವನ್ನು ಅಲ್ಲಿಗೆ ಕೈ ಬಿಡದೆ ಕೊನೆಯವರೆವಿಗೂ ಸಾಧಿಸಿ ಅದರ ಪರಿಪೂರ್ಣ ಸಿದ್ಧಿಯನ್ನು ಸಫಲತೆಯನ್ನು ಪಡೆದರು. ‘ದೃಷ್ಟಿಶುದ್ಧಿ’ ಎಂಬ ಪ್ರಕರಣದಲ್ಲಿ ಈ ವಿಷಯವನ್ನು ಓದಿ ತಿಳಿಯಬಲ್ಲಿರಿ. ಗೋಲಿಯಾಟದ ಮೇಲೆ ಶ್ರೀಗಳವರಿಗೆ ಕೊನೆಯವರೆಗೂ ಮೆಚ್ಚುಗೆಯಿತ್ತು.

ದೊಂಬರಾಟಗಳನ್ನು ನೋಡಿದ ಫಲವಾಗಿ ಹಠಯೋಗ ಉದ್ಧಾರವಾಯಿತು. ಆ ವಿಷಯದಲ್ಲಿ ಶಿವಯೋಗಮಂದಿರವೆ ಸಾಕ್ಷಿ. ಸಾಧಕರೆ ಪರಮ ಸಾಕ್ಷಿ. ಶಿವಯೋಗಮಂದಿರದಲ್ಲಿಯೂ ಸಹ ದೊಂಬರಾಟ ಬಂದರೆ ಬಿಡದೆ ಕರೆಯಿಸಿ ಆಡಿಸಿ ವಟುಗಳಿಗೆ ಸಾಧಕರಿಗೆ ತೋರಿಸುತ್ತಿದ್ದರು. ಪರಸ್ಪರ ಇರುವ ಆಸನ ವ್ಯತ್ಯಾಸ ಭಾವ ವ್ಯತ್ಯಾಸ ಫಲ ವ್ಯತ್ಯಾಸಗಳನ್ನು ವಿವರಿಸಿ ಹೇಳುತ್ತಿದ್ದರು.   ಹೀಗೆ ಚಿಕ್ಕವಯಸ್ಸಿನ ಆಟಗಳಲ್ಲಿಯೂ ಸಹ ಅವರ ನೋಟ ಹಿರಿದಾಗಿತ್ತು.

ಈ ಆರನೆಯ ವಯಸ್ಸಿನಲ್ಲಿಯೇ ಒಳ್ಳೆಯ ದಿನದಲ್ಲಿ ಅಕ್ಷರಾಭ್ಯಾಸಕ್ಕೆ ಆರಂಭವಾಯಿತು. ಊರಿನಲ್ಲಿ ಬೇರೆ ಶಾಲೆಯಿರಲಿಲ್ಲ. ಸದಾಶಿವನ ಅಜ್ಜಂದಿರಾದ ಶ್ರೀ ಕೊಟ್ರಪ್ಪಯ್ಯನವರೇ ಒಂದು ಸ್ವತಂತ್ರಶಾಲೆ (ಗಾವಠೀಶಾಲೆ) ಯನ್ನು ತೆರೆದಿದ್ದರು. ಅದರಲ್ಲಿಯೆ ಓದಿಗೆ ಮೊದಲಾಯಿತು. ಸದಾಶಿವನು ಕುಶಲಮತಿಯಾಗಿದ್ದನು. ಅಕ್ಷರಾಭ್ಯಾಸವನ್ನು ಆದಷ್ಟು ಬೇಗ ಮುಗಿಸಿ ಶ್ರೇಣಿಗೆ ಸೇರಿದನು. ವರ್ಗದಲ್ಲಿಯೂ ಮೊದಲಿನವನಾಗಿಯೇ ಇರುತ್ತಿದ್ದನು. ಎಲ್ಲರಿಗಿಂತಲೂ ಹೆಚ್ಚಾಗಿಯೇ ಅಂಕಗಳನ್ನು ಪಡೆಯುತ್ತಿದ್ದನು. ಪ್ರತಿವರ್ಷವೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದನು. ಹೀಗೆ ಮೂರು ನಾಲ್ಕು ವರುಷ ಅಬಾಧಿತವಾಗಿ ಓದು ಮುಂದುವರೆಯಿತು. ಆಮೇಲೆ ಎರಡು ಹೊತ್ತು ಶಾಲೆಗೆ ಹೋಗಿ ಓದಲು ಆತಂಕವೊದಗಿತು. ಮನೆಯ ಬಡತನ, ಬಾಳಿನ ಬವಣೆ ಅದಕ್ಕೆ ಕಾರಣವಾಯಿತು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

‘ನಿಯಮ’ ಶಬ್ದದ ತದ್ಭವ ರೂಪ ನೇಮ. ವ್ರತ ಕಟ್ಟಳೆ, ಧರ್ಮಾಚರಣೆಗಳ ಅರ್ಥದಲ್ಲಿ ನೇಮ ಶಬ್ದದ ಬಳಕೆಯನ್ನು ಕಾಣುತ್ತೇವೆ. ನಿತ್ಯ ಪಾಲಿಸುವ ಮತ್ತು ಕಾಲಬದ್ಧ ನೇಮಗಳಿಗೆ ನಿತ್ಯ ನೇಮ ಅಥವಾ ನೇಮನಿತ್ಯ ಎನ್ನುವರು. ನೇಮ- ನಿತ್ಯಗಳ ಪಾಲನೆಯ ಉದ್ದೇಶ ದೈವದಲ್ಲಿರುವ ನಮ್ಮ ಶ್ರದ್ಧೆಯನ್ನು ಗಟ್ಟಿಗೊಳಿಸುವುದು. ಹಾಗೆಯೇ ಆಶೆ-ಆಮಿಷಗಳನ್ನು ತೊರೆದು ಮನಸ್ಸನ್ನು ಪರಿಶುದ್ಧಗೊಳಿಸುವುದು. ಆದರೆ ಬದುಕಿನಲ್ಲಿ ಸುಖ ಶಾಂತಿಗಳನ್ನು ಪಡೆಯುವುದಕ್ಕಾಗಿಯೇ ಅನೇಕರು ನೇಮಾದಿಗಳನ್ನು ಪಾಲಿಸುವುದುಂಟು. ವ್ಯಕ್ತಿಯ ಅಧ್ಯಾತ್ಮಿಕ ಬದುಕಿಗೆ ಪೂರಕವಾಗಬೇಕಿದ್ದ ನೇಮನಿತ್ಯಗಳು ಕ್ಷಣಿಕ ಫಲಾಪೇಕ್ಷೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಅದರಲ್ಲೂ ಕೆಲವರ ವ್ರತ ನೇಮಗಳಿಗೆ ಯಾವುದೇ ನಿಶ್ಚಿತ ಉದ್ದೇಶವಿರುವುದಿಲ್ಲ. ಅಲ್ಲಿರುವುದು

ಇನ್ನೊಬ್ಬರ ಅನುಕರಣೆ ಮಾತ್ರ.

 ನೋಡಿ ನೋಡಿ ಮಾಡುವ ನೇಮ, ತನು ಉದ್ದೇಶವಾಗಿ ಮಾಡುವ ನೇಮ, ಗುರುಪಥ ಮೀರಿ ಮಾಡುವ ನೇಮ ಶಿವಾರ್ಪಿತವಾಗಲಾರವು. ಪರಮಾರ್ಥ ಸಾಧನೆಗಾಗಿ ಗುರುವಿನ ಮಾರ್ಗದರ್ಶನದಂತೆ ನೇಮ ನಿತ್ಯಗಳನ್ನು ಪಾಲಿಸಬೇಕು. ತನ್ನ ಲಿಂಗ (ದೇವರಿಗೆ)ಕ್ಕೆ ಮಾಡುವ ನಿತ್ಯ ನೇಮಗಳನ್ನು ತಾನೇ ಮಾಡಬೇಕೆಂಬುದು ಬಸವಣ್ಣನವರ ಸ್ಪಷ್ಟ ಆದೇಶ.

 ಮನದಲ್ಲಿ ನಿಷ್ಠೆ ಇಲ್ಲದೆ ಹಾಲು, ಕಡಲೆ, ನೀರು, ಪುಷ್ಪಾದಿಗಳ ನೇಮ ಹಿಡಿದವರು ಕ್ರಮವಾಗಿ ಬೆಕ್ಕು, ಕುದುರೆ, ಕಪ್ಪೆ, ತುಂಬಿಯಾಗಿ ಹುಟ್ಟುವರೆಂದು ಒಂದೆಡೆ ಅಲ್ಲಮಪ್ರಭು ವಿಡಂಬಿಸಿದ್ದಾನೆ. ಇಂಥ ನೇಮಗಳು ನಿರರ್ಥಕ. ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ನೇಮ, ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯ ಒಪ್ಪಿಸುವುದೇ ನೇಮ. ಅಂದರೆ ಇದ್ದುದರಲ್ಲಿ ತೃಪ್ತಿ ಹೊಂದುವ, ವಂಚನೆ ಇಲ್ಲದೆ ಹಂಚಿ ಉಣ್ಣುವ, ನಡೆ ನುಡಿ ಪರಿಶುದ್ಧವಾಗಿಟ್ಟುಕೊಳ್ಳುವ ಮತ್ತು ದುಡಿಮೆಯ ಫಲವನ್ನು ಶರಣರಿಗೊಪ್ಪಿಸಿ ದಾಸೋಹಂಭಾವದಿಂದ ಬದುಕುವ ನೇಮಗಳೆ ನಿಜವಾದ ನೇಮಗಳು.  ಅವು ದೇವರಿಗೆ ಒಪ್ಪಿತವಾದ ನೇಮಗಳು.

 ಶಿವರಾತ್ರಿ, ಏಕಾದಶಿ, ಸಂಕಷ್ಟಿಗಳಲ್ಲಿ ಮಾಡುವ ಉಪವಾಸಾದಿ ನೇಮಗಳು ಅರ್ಥವನ್ನು ಕಳೆದುಕೊಂಡು ಆಹಾರ ಬದಲಾವಣೆಗೆ ಸೀಮಿತಗೊಂಡಿವೆ. ಶ್ರಾವಣ ಶುಕ್ರವಾರಗಳ ಲಕ್ಷ್ಮಿ ಪೂಜೆ, ಮಾರ್ಗಶಿರ ಗುರುವಾರಗಳ ಗೌರಿಪೂಜೆಗಳಲ್ಲಿ ಭಕ್ತಿ, ಶ್ರದ್ಧೆಗಳಿಗಿಂತ ವಿಶೇಷಾಲಂಕಾರ ಮತ್ತು ಆಭರಣ ಪ್ರದರ್ಶನಗಳಿಗೆ ಅಗ್ರಸ್ಥಾನ. ವಾಸ್ತುಶಾಂತಿ ಹಾಗು ಗೃಹಶಾಂತಿಗಳಲ್ಲಿ ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ಹೋಮಹವನಗಳಿಂದ ಪವಿತ್ರ ಪ್ರಸಾದದ ಕೇಡು. ಇದಲ್ಲದೆ ಕೆಲವು ವಿಶಿಷ್ಟ ಪದಾರ್ಥಗಳನ್ನು ತಿನ್ನದಿರುವುದು, ಕ್ಷೌರ ಮಾಡಿಕೊಳ್ಳದಿರುವುದು, ಮೌನದಿಂದಿರುವುದು ಮುಂತಾದ ನೇಮಾದಿಗಳನ್ನು ಪಾಲಿಸುವವರೂ ಉಂಟು. ಆದರೆ ಶುದ್ಧ ಮನಸ್ಸಿನಿಂದ ದೈವವನ್ನು ನೆನೆದವರಿಗೆ ಇಂಥ ಯಾವ ನೇಮನಿತ್ಯಗಳ ಅವಶ್ಯಕತೆ ಇರದು. ಒಟ್ಟಾರೆ

ನೇಮ ನಿತ್ಯಗಳು ನಮ್ಮ ದುರ್ವ್ಯಸನ ದುರಾಚಾರಗಳಿಗೆ ಕಡಿವಾಣದಂತಿರಬೇಕು. ಹಾಗೆಯೇ ಅಧ್ಯಾತ್ಮಿಕ ಪ್ರಗತಿಗೆ, ಅಂತರಂಗ-ಬಹಿರಂಗ ಶುದ್ಧಿಗೆ ಪೂರಕವಾಗಿರಬೇಕು ಎಂಬುದೇ ಮುಖ್ಯ.

 

ಲೇಖಕರು: ಚಿಂದೋಡಿ ಬಂಗಾರೇಶ

ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು

ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು.

“ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ”

ನಿಷ್ಠೆಯಿಂದ ಲಿಂಗವ ಪೂಜಿಸಿ

ಮತ್ತೊಂದು ಪಥವನರಿಯದ ಶರಣರು

ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ !

ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು,

ಕೂಡಲಸಂಗಮದೇವಾ, ನಿಮ್ಮ ಶರಣರು.

ಹೀಗೆ ಭಕ್ತಿ ಜ್ಞಾನ ಸ್ವರೂಪರಾದ ಶ್ರೀ ಕುಮಾರ ಶಿವಯೋಗಿಗಳು ಬಸವಾದಿ ಪ್ರಮಥರ ತತ್ವಗಳನ್ನು ಬೆಳಸಲು ಶರಣ ಧರ್ಮವನ್ನು ಪುನರ್ಸ್ಥಾಪಿಸಲೆಂದೇ ಜನಿಸಿ ,ಶರಣರಿಗೆ ಸರಿದೊರೆಯಾಗಿ ದೀನರಿಗೆ ದಯಾಮೂರ್ತಿಯಾಗಿ ,ಗುರುಗಳಿಗೆ ಪರಮ ಗುರುವಾಗಿ ಭಕ್ತಿ ಸ್ವಾತಂತ್ರ್ಯ ಕರುಣಿಸಿದರು..ಬತ್ತಿದ ಮನಸುಗಳಿಗೆ ಭಕ್ತಿಯ ಸೇವೆಯ ಮಳೆಯನ್ನೇ ಸುರಿಸಿದರು.ಕರುಣಾಮಯ ಶ್ರೀಕುಮಾರೇಶ.

ಕುಮಾರೇಶರ, ಬಾಲ್ಯ- ಬೆಳವಣಿಗೆ- ಸಾಧನೆ- ಹಾನಗಲ್ಲ ಮಠಕ್ಕೆ ಬಂದು  ಅವರ ಸಮಾಜ ಸೇವೆಯ ವೈಭವತೆ,ಎಲ್ಲರು ಬಲ್ಲರು “ಘಟದಿಂದ ಮಠ ಬೆಳೆಯಬೇಕು .ಮಠದಿಂದ ಘಟ ಬೆಳೆಯಬಾರದು” ಇದು ಅವರ ಧ್ಯೇಯ,ಘೋಷ. ಅದರಂತೆ ನಡೆದರು.ನುಡಿದಂತೆ ನಡೆದರು.

ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತರ ಸಮುದಾಯವನ್ನು ಕನ್ನಡನಾಡಿನಾದಯಂತ ಸಂಚರಿಸಿ ಸಮಾಜದ ಹಿರಿಯಶಕ್ತಿಗಳೆನ್ನೆಲ್ಲಾ ಒಂದು ಗೂಡಿಸಿ ಸಮಾಜ ಸಿದ್ದಾಂತ ಉಳಿವಿಗಾಗಿ ,ಜೊಯಿಸರಹರಳಹಳ್ಳಿಯ ಯೋಗಿ,ಜೋಳಿಗೆ ಹಿಡಿದು ಭಿಕ್ಷೆಬೇಡಿ ಸಮಾಜದ ಸರ್ವಶಕ್ತಿಯನ್ನು ಒಂದೇ ನೆಲೆಯಲ್ಲಿ ಸಾಕಾರಗೊಳಿಸಿದ ಸಾಕ್ಷಿ ಸೌಧವೇ ಅಖಿಲಭಾರತ ವೀರಶೈವಮಹಾಸಭೆಯ ಸ್ಥಾಪನೆಯ ರೂವಾರಿ ಶ್ರೀಕುಮಾರೇಶರು, ಇಂದು ನಮಗೆಲ್ಲ ಹೆಮ್ಮೆಯ ಹೆಮ್ಮರವಾಗಿ ನಿಂತಿದೆ.

ಅವರ ಆಸೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆ ಸೇರಿದ ಆಭವ್ಯ ದೃಶ್ಯವ ನೋಡಿ ಆನಂದಿತರಾಗಿ ಅದರ ನಿರ್ಮಾಣ ರೂವಾರಿಗಳಾದ ಸಮಾಜದ ಗಣ್ಯಾತಿ ಗಣ್ಯರನ್ನು ಅಂದು ನೋಡಿ ಬಸವಣ್ಣನವರ ಒಂದು ವಚನ ನೆನಪಿಸಿಕೊಂಡರಂತೆ.

“ಕಣ್‌ ಗಳ ನೋಟ ಹೃದಯದ ಜ್ಞಾನ

ಮನದಲ್ಲಿ ಮಾತಅಡುತಿರ್ದಯ್ಯ

ಜೇನು ಮಳೆಗಳು ಕರೆದವು

ಅಮೃತದ ಕಳೆಗಳು ಸುರಇದವು

ಕೂಡಲಸಂಗಮ ದೇವನೆಂಬ

ಸಾಗರದೊಳಡುತಿದ್ದನಯ್ಯ

ಕೂಡಲಸಂಗಮದೇವ.

ಎಂದು ಆನಂದಿರಾದವರಂತೆ ಅದರಂತೆ ಸಮಾಜದ ಇನ್ನೋದು ಮುಖ,ಕಾಯಕ -ದಾಸೋಹ ಸಾಧನೆಗೆ ತರಬೇತಿ ಕನ್ನಡ ವಚನ ಸಾಹಿತ್ಯ ಸಂಸ್ಕೃತಿ ಬೆಳಗಲು ಸ್ಥಾಪಿಸಿದ ಶಿವಯೋಗಮಂದಿರ ಸಂಗೀತ ಲೋಕಕ್ಕೆ ಧೃವತಾರೆಗಳಾದ ಪಂಚಾಕ್ಷರ ಗವಾಯಿಗಳು ,ಪುಟ್ಟರಾಜ ಗವಾಯಿಗಳನ್ನು ಸಮಾಜಕ್ಕೇ ಅಲ್ಲ ದೇಶ-ವಿದೇಶಕ್ಕೆ ಸಂಗೀತ ಸಾಧನೆಯ ಸುಧೆಯನ್ನು ಹರಿಸಿದ ಹರಿಕಾರರು ಇವರು ಶ್ರೀಕುಮಾರ ಶಿವಯೋಗಿಗಳು.

ಆ ಮಹನಿಯರನ್ನು ಎಷ್ಟು ನೆನೆದರು ಸಾಲದು ,ಎಷ್ಟು ಪೂಜಿಸಿದರೂ ಸಾಲದು.ಅವರ ನಿಸ್ವಾರ್ಥ ಸೇವೆಯನ್ನು ನೂರರಲ್ಲಿ ಒಬ್ಬರಾದರು ಅನುಸರಿಸಿದರೆ,ನಡೆದರೆ ಅದೇ ಅವರಿಗೆ ನೀಡುವ ಭಕ್ತಿ ಕಾಣಿಕೆ.

ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ

ನಿಮ್ಮಾಣೆ! ನಿಮ್ಮ ಪುರಾತರಾಣೆ.

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,

ಕೂಡಲಸಂಗಮದೇವಾ.

ಎಂಬ ವಚನದ ಅಕ್ಷರ ಅಕ್ಷರ ಪಾಲಿಸಿದರು.ಮೈಮೇಲೆ ವಸ್ತ್ರ ಹರಿದಿದ್ದರೂ,ತಾವೇ ಹೊಲೆದುಕೊಂಡು,ಮರೆ ಮಾಡಿಕೊಂಡು ,ಸಮಾಜ-ಸಮಾಜ ಸಮಾಜವೆಂದೇ  ಶಿವಯೋಗಮಂದಿರದಲ್ಲಿ ಮಹಾಲಿಂಗದೊಳು ಐಕ್ಯವಾದ ಅವರ ಜೀವಾತ್ಮ ಸಕಲರಿಗೆ ಸಂಜೀವಿನಿಯಾಗಿರುವುದು. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿದರು.ಒಂದು ಸಭೆಗೂ ಅಧ್ಯಕ್ಷರಾಗದ ನಿಷ್ಕಾಮ ಸಂತರು.ಕುರುಬ ತಂದ ಹಾಲನ್ನು ಶಿವನಿಗರ್ಪಿಸಿ ಸಮಾನತೆಯ ಸಾಕ್ಷಿಭೂತರಾದರು.ಅವರ ಆಸೆಯೊಂದೆ “ ದುಡಿ-ಸುಖ ಪಡಿ”,ಕಾಯಕ ಮಾಡದೇ ಒಂದಗಳ ಅನ್ನವ ಸೇವಿಸಬಾರದು.ಕಾಯಕ-ದಾಸೋಹ-ವಿದ್ಯೆ-ಧರ್ಮ-ಶೃದ್ಧೆ-ಪರೋಪಕಾರದ ಮನಸ್ಥಿತಿಯನ್ನೇ ಬೇಳಗಿಸಿಕೊಳ್ಳಬೇಕೆಂಬ ಸಂದೇಶ ಸಾರಿದ ಜಂಗಮರ ಜಂಗಮ,ಮಹಾ ಜಂಗಮ.

ಅವರಾತ್ಮಕ್ಕೊಂದು ಶರಣು ಶರಣಾರ್ಥಿಗಳು

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಹಲವು ಯೋಗವ ಮಾಡಿ | ಫಲವೇನು ಮಗನೆ ಎಂ-

ದೊಲಿದು ಲಿಂಗಾಂಗ-ಸುಲಭಯೋಗವನೊಡನೆ

ಕಲಿಸಿದಾ ಗುರುವೆ ಕೃಪೆಯಾಗು     I ೧೦ II

 ಯೋಗಮಾರ್ಗದ ವಿಚಾರಕ್ಕೆ ವಿರಾಮವಿತ್ತು ಅವುಗಳಿಗಿಂತಲೂ ಮಿಗಿಲಾದ ಲಿಂಗಾಂಗಯೋಗದ ಸುಲಭತೆಯನ್ನು ಮತ್ತು ಸಾರ್ಥಕತೆಯನ್ನು ಸರಳವಾಗಿ ಸಾರುತ್ತಾನೆ ಶಿವಕವಿಯು.  

ಯೋಗ ಮಾರ್ಗದಲ್ಲಿ ಮಂತ್ರ, ಲಯ, ಹಠ, ರಾಜಯೋಗಳು ಮುಖ್ಯವಾದ ನಾಲ್ಕು ಯೋಗಗಳಾದರೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಯೋಗಗಳು ಹಲವಾರು ಇವೆ. ಗೀತೆಯಲ್ಲಿ ಪ್ರತಿಯೊಂದು ಅಧ್ಯಾಯದ ಒಂದೊಂದು ವಿಷಯವೂ ಒಂದೊಂದು ಯೋಗವೆಂಬುದಾಗಿಯೇ ಪ್ರತಿಪಾದಿತವಾಗಿದೆ. ಮುಖ್ಯವಾಗಿ ಸಾಂಖ್ಯ ಯೋಗ, ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಜ್ಞಾನ-ವಿಜ್ಞಾನ ಯೋಗ, ರಾಜವಿದ್ಯಾ-ರಾಜಗುಹ್ಯಯೋಗ, ವಿಭೂತಿಯೋಗ, ಭಕ್ತಿಯೋಗ ಮೊದ ಲಾದವುಗಳು ವಿವರಿಸಲ್ಪಟ್ಟಿವೆ. ಸ್ವಾಮಿ ವಿವೇಕಾನಂದರು ಕರ್ಮಯೋಗ, ಜ್ಞಾನ ಯೋಗ, ರಾಜಯೋಗ, ಭಕ್ತಿಯೋಗಗಳನ್ನು ವಿಶ್ಲೇಷಿಸಿದ್ದಾರೆ. ಇವೆಲ್ಲ ಹಲವಾರು ಯೋಗಗಳನ್ನು ಸಾಧನೆ ಮಾಡಿದರೆ ಏಕೈಕ ಫಲವು ಸಿಕ್ಕಬಹುದು. ಆದರೆ ಸಂಪೂರ್ಣ ಫಲ ಸಿಕ್ಕಲಾರದೆಂಬ ಅಭಿಪ್ರಾಯ ಈ ಕೃತಿಕರ್ತರದು. ಅಲ್ಲದೆ ಶರಣ ಸಿದ್ಧಾಂತವೂ ಇದನ್ನೇ ಅನುಮೋದಿಸಿದೆ.

ಹರಭಕ್ತನಾದ ಹರದ ಶರಣನು ತನ್ನ ಸ್ವಾನುಭಾವವನ್ನು ವಿವರಿಸುತ್ತ ಅಷ್ಟಾಂಗ ಯೋಗಗಳಿಗಿಂತ ತಾಂತ್ರಿಕ ಮುದ್ರೆಗಳಿಗಿಂತ ಈ ಲಿಂಗಾಂಗ ಯೋಗದ ಸಹಜತೆಯನ್ನು ತಾತ್ವಿಕತೆನ್ನು ಬಿತ್ತರಿಸುತ್ತಾನೆ. ಕರುಣಾಳು ಗುರುರಾಯನು ಒಲುಮೆಯಿಂದ ಎನಗೆ ಲಿಂಗಾಂಗ ಯೋಗವನ್ನು ಬೋಧಿಸಿದನು. ಇದು ಸುಲಭ ಹಾಗೂ ಸಹಜ ಯೋಗವು. ಎಲ್ಲ ಯೋಗಗಳಲ್ಲಿ ರಾಜಯೋಗವು ಮಿಗಿಲೆನಿಸಿದರೆ  ಅವೆಲ್ಲವುಗಳಿಗೂ ರಾರಾಜಿಸುವ ಈ ಲಿಂಗಯೋಗ, ಅಥವಾ ಶಿವಯೋಗವಾಗಿದೆ. ಇದರಲ್ಲಿ ಎಲ್ಲ ಯೋಗಗಳ ಸಾರ ಅಡಕವಾಗಿದೆ. ಅಂತೆಯೇ ಶಿವಯೋಗವನ್ನು ಯೋಗರಾಜವೆಂದು ಬಣ್ಣಿಸಿದ್ದಾರೆ.  

ಒಂದೊಂದು ಪದಾರ್ಥಗಳಲ್ಲಿ ಒಂದೊಂದು ಗುಣವಿರುವಂತೆ ಒಂದೊಂದು ಯೋಗ ಸಾಧನೆಯಿಂದ ಏಕೈಕ ಫಲ ಲಭ್ಯವಾಗಬಹುದು. ಅನೇಕ ಸಾರವತ್ತಾದ ವಸ್ತುಗಳಿಂದ ತಯಾರಿಸಿದ ‘ಸಾರು’ (ಸಾಂಬಾರ) ವನ್ನು ಊಟದ ಕೊನಗೆ ಸುರಿದು

ಸಂತೃಪ್ತರಾಗುತ್ತಾರೆ. ಹಾಗೇ ಈ ಶಿವಯೋಗದಲ್ಲಿ ಮಂತ್ರಾದಿ ನಾಲ್ಕು ಯೋಗಗಳು, ಕರ್ಮ, ಭಕ್ತಿ, ಜ್ಞಾನ ಯೋಗಗಳು ಮುಪ್ಪುರಿಗೊಂಡು ಶೋಭಿಸುವ ಶಿವಯೋಗವು ಶಿವಭಕ್ತನನ್ನು ಮುಕ್ತನನ್ನಾಗಿಸುವದು. ಶಿವಯೋಗ ಸಾಧಿಸಿದ ಮೇಲೆ ಪುನರ್ಜನ್ಮವಿಲ್ಲ ಕರ್ಮದ ತೊಡಕಿಲ್ಲ. ಭವ-ಬಂಧನದ ಸೋಂಕಿಲ್ಲ.

ಶಿವಲಿಂಗಭಕ್ತನು ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿ, ಅವಧಾನಭಕ್ತಿ, ಅನುಭವಭಕ್ತಿ, ಆನಂದಭಕ್ತಿ, ಸಮರಸಭಕ್ತಿಗಳನ್ನು ಮೈಗೂಡಿಸಿಕೊಳ್ಳುತ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರು ಸ್ಥಲಗಳಲ್ಲಿ ನಿಲ್ಲುತ್ತ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗಗಳನ್ನು ಆರಾಧಿಸುತ್ತ ಅವುಗಳಲ್ಲಿ ಬೆರೆಯುವನು. ಗಂಧ, ರಸ, ರೂಪ, ಸ್ಪರ್ಶ ಶಬ್ದ ಹಾಗೂ ಇವುಗಳಿಂದ ದೊರೆಯುವ ತೃಪ್ತಿಯೆಂಬ ಪದಾರ್ಥಗಳನ್ನು ಸುಚಿತ್ತ, ಸುಬುದ್ದಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವಗಳೆಂಬ ಹಸ್ತದಿಂದ ಸುಗಂಧ, ಸುರಸ, ಸುರೂಪ, ಸುಸ್ಪರ್ಶ, ಸುಶಬ್ದ, ಸಂತೃಪ್ತಿಗಳೆಂಬ ಪ್ರಸಾದಗಳನ್ನಾಗಿ

ಉದಾತ್ತೀಕರಿಸಿ ಕೊಂಡು ಆಯಾ ಲಿಂಗ ಮುಖಕ್ಕೆ ಸಮರ್ಪಿಸಿ ಪರಮಾನಂದದಲ್ಲಿ ಲೀನನಾಗಿ ಲೋಲಾಡುವನು. ಇದಲ್ಲದೆ ಲಿಂಗಗತ ಶಕ್ತಿಗಳನ್ನು, ಪ್ರಣವಗಳನ್ನು ಕಲೆಗಳನ್ನು ಸಾದಾಖ್ಯಗಳನ್ನು, ಅಧಿದೇವತೆಗಳನ್ನು ಮತ್ತು ಲಕ್ಷಣಗಳನ್ನು ಅಳವಡಿಸಿ

ಕೊಳ್ಳುವನು. ನೂರೊಂದು ಸ್ಥಲವನ್ನರಿತು ಇನ್ನೂರಾ ಹದಿನಾರು (೨೧೬) ಸಕೀಲುಗಳಲ್ಲಿ ಆಚರಿಸುವನು. ಇಂಥ ಅಸದೃಶವಾದ ಆತ್ಮವಿಜ್ಞಾನಿಯಾಗಿ ಶಿವಯೋಗಿಯೆನಿಸುವನು.

 ಪರಮ ಗುರುವು ಹರಸುವ ಈ ಸರಳವಾದ ಶಿವಯೋಗದಲ್ಲಿ ಯಮಾ ದ್ಯಷ್ಟಾಂಗ ಯೋಗಗಳೂ, ಕ್ರಿಯಾ-ಜ್ಞಾನ-ಭಕ್ತಿ ಸಮನ್ವಯವೂ ಹಾಸುಹೊಕ್ಕಾಗಿದೆ. ಅದು ಕಾರಣ ಈ ಲಿಂಗಾಂಗ ಯೋಗಕ್ಕೆ ಇತರ ಯೋಗಗಳು ಸರಿಬಾರವು.

ಓ ನಿರಂಜನ ನಿರಾಭಾರಿ ಗುರುವೆ ! ಇಂಥ ಸುಲಭ ಸಹಜವಾದ ಲಿಂಗಾಂಗ ಯೋಗವನ್ನು ಮೈಗೂಡಿಸಿಕೊಳ್ಳುವ ಅನುವನ್ನು ಆಚರಿಸಿ ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿ ಕಾಪಾಡು. ನಿನ್ನ ಕೃಪೆಯಿಲ್ಲದೆ, ಮಾರ್ಗದರ್ಶನವಿಲ್ಲದೆ ಈ ಶಿವಯೋಗ ಅರಿವಿಗೆ ಬರಲಾರದು.

ಈ ಲಿಂಗ ನಿನ್ನಂಗ | ಕಾಲಿಂಗನವಾಗಲ್ಕೆ

ನೀ ಲಿಂಗ ನಿನ್ನ-ಮೈಲಿಂಗವೆಂದೆನ್ನೊಳ್

ಕೀಲಿಸಿದ ಗುರುವೆ ಕೃಪೆಯಾಗು     ||೧೦೭||

 ಲಿಂಗಾಂಗಯೋಗದ ಮಹತ್ವವನ್ನು ಪುನಃ ಪುನಃ ವರ್ಣಿಸಿದ್ದಾನೆ. ಶಿವಕವಿಯು. ಗುರುಕರುಣಿಸುವ ಇಷ್ಟಲಿಂಗ ಪ್ರತ್ಯಕ್ಷ ಕಾಣುವದು. ಈ ಲಿಂಗವು ಶಿಷ್ಯನಂಗವನ್ನು ಆಲಿಂಗಿಸುತ್ತಲೇ ಅಂಗವನ್ನು ಲಿಂಗಮಯವನ್ನಾಗಿಸುವದು. ಒಳಗಿರುವ ಚೈತನ್ಯವು

ಗುರು-ಲಿಂಗ-ಜಂಗಮ ಕೃಪೆಯಿಂದ ಹೊರಗೆ, ವ್ಯಾಪಿಸಿ ಒಳಹೊರಗು ಬೆಳಗುವದು. ಲಿಂಗಚೈತನ್ಯವು ಜಾಗೃತಗೊಂಡು ಅಜ್ಞಾನ-ದುರ್ಭಾವನೆಗಳನ್ನು ದೂರಗೊಳಿಸುವದು. ಸೂರ್ಯನ ಸನ್ನಿಧಿಯಲ್ಲಿ ಕತ್ತಲಿರಲು ಸಾಧ್ಯವೆ ! ಶ್ರೀಗುರುವು ಶಿಷ್ಯನ ಮಸ್ತಕದ ಚಿಚೈತನ್ಯವನ್ನು ತನ್ನ ಭಾವದಲ್ಲಿ ಭಾವಿಸಿ  ಆತನ ಹೃದಯ ಕಮಲವನ್ನು ಅರಳಿಸಿ ಮಹಾಲಿಂಗವನ್ನು ಕರಕಮಲದಲ್ಲಿ ಕಾಣಿಸು ವಂತೆ ಕರುಣಿಸುವಾಗ ತನು-ಮನ-ಭಾವಗಳನ್ನು ಹಿಂದೆ ವಿವರಿಸಿದಂತೆ ಸಂಸ್ಕರಿಸಿ ಪರಿಶುದ್ಧಗೊಳಿಸುವನು “ಲಿಂಗವನ್ನು ಧರಿಸಿಕೊಂಡ ನೀನು ಸದಾ ಶುದ್ಧ’ ನೆಂದು ಬೋಧಿಸುವನು. ಸಂಚಿತ-ಪ್ರಾರಬ್ಧ-ಆಗಾಮಿಕರ್ಮಗಳಿಂದ ಮುಕ್ತನನ್ನಾಗಿಸುವನು. ತ್ರಿಮಲಗಳ ನಾಶ ಮಾಡುವನು. ಅಗ್ನಿಯನ್ನು ಆವರಿಸಿದ (ಸಂಪರ್ಕಿಸಿದ) ಕಟ್ಟಿಗೆಯು ಅಗ್ನಿಯೇ ಆಗುವಂತೆ; ಲಿಂಗವನ್ನು ಧರಿಸಿದವನು ಲಿಂಗಮಯನೇ ಆಗುವನು. ಆಗಮದಲ್ಲಿ ಉಕ್ತವಾದ ಉತ್ತಮ ಉದಾಹರಣೆ ಉದಾಹರಿಸಲು ಯೋಗ್ಯವಾಗಿದೆ. ಈ ಮಾತನ್ನು ಶ್ರೀಪತಿಪಂಡಿತರು ಶ್ರೀಕರಭಾಷ್ಯದಲ್ಲಿ ಒತ್ತಿ ಹೇಳಿದ್ದಾರೆ-

“ಮಾನವಃ ಶಿವಯೋಗೇನ ಶಿವೋ ಭವತಿ ನಾನ್ಯಥಾ |

ಭ್ರಮಮರಚಿಂತಾಯಾಂ ಕೀಟೋಪಿ ಭ್ರಮರಾಯತೇ”

ಮನೆಗಳಲ್ಲಿ ಇದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಆದರೆ ಆ ವಿಷಯವನ್ನು ಅನುಭವದಲ್ಲಿ ತಂದುಕೊಳ್ಳುವದಿಲ್ಲ, ಕುಡೀಕುಕಾರವೆಂಬ ಭ್ರಮರವು ಬಾಯಲ್ಲಿ ಮಣ್ಣನ್ನು ತಂದು ಬಾಗಿಲು ಕಿಡಿಕಿಗಳ ಸಂಧಿಯಲ್ಲಿ ಮನೆಮಾಡುತ್ತದೆ. ಅದರಲ್ಲಿ ಸಣ್ಣ

ಕೀಡೆಯನ್ನು ತಂದು ತನ್ನ ಭಾವವನ್ನು ನಿತ್ಯವೂ ಭಾವಿಸುತ್ತದೆ. (ತುಂಬುತ್ತದೆ) ಕ್ರಮೇಣ ಕೆಲವು ದಿನಗಳಲ್ಲಿ ಕ್ರೀಡೆಯೂ ಆ ಭ್ರಮರದಂತಾಗುವದು. ಅಂದಮೇಲೆ ಮಾನವನು ಶಿವಲಿಂಗದ ಸಂಪರ್ಕದಿಂದ ಶಿವಮಯನಾಗುವದರಲ್ಲಿ ಯಾವ ಸಂದೇಹವಿಲ್ಲ. ಶಿವನು ತನ್ನ ಸೃಷ್ಟಿಯಲ್ಲಿ ಅನಂತ ಉಪದೇಶವನ್ನು ತುಂಬಿರಿಸಿದ್ದಾನೆ. ಅದನ್ನು ತಿಳಿದುಕೊಳ್ಳುವ ಅಂತರ್ದೃಷ್ಟಿಯು ನಮ್ಮಲ್ಲಿ ಬೆಳೆದು ಬಂದರೆ ನಾವು ನಿಜವಾಗಿಯೂ ಸುಜ್ಞಾನಿಗಳಾಗುತ್ತೇವೆ. ಅರಿವನ್ನು ಕುರುಹನ್ನಾಗಿ ಕರುಣಿಸಿ

ಇಂಥ ಅಂರ್ತದರ್ಶನ ಮಾಡಿಸುವವನೇ ಗುರುವು. ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡರೆ ಅರಿವುಳ್ಳವನನ್ನಾಗಿಸುವನು. ಲಿಂಗವೇ ತಾನಾಗುವದರಲ್ಲಿ ಯಾವ ನ್ಯೂನತೆಯೂ ಇರದು.

 ಓ ಗುರುವೆ ! ಲಿಂಗವನ್ನು ಕರುಣಿಸಿ ಲಿಂಗ ಗುಣಗಳನ್ನು ಎನ್ನಂಗದಲ್ಲಿ ಕೀಲಿಸಿ ಲಿಂಗಮಯನನ್ನಾಗಿ ಮಾಡಿದ ನಿನಗೆ ನಾನು ಚಿರಋಣಿ, ನಿನ್ನ ಋಣ ಎಂದೆಂದಿಗೂ ತೀರದು.  ಮನುಷ್ಯನಾಗಿ ಬಾಳಿ ಬದುಕಿದ ಮೇಲೆ ಮಾತೃಋಣ, ಪಿತೃಋಣ, ಸಮಾಜ

ಋಣಗಳನ್ನು ತೀರಿಸಲೇಬೇಕು. ಅವರವರ ಉಪಕೃತಿಯನ್ನು ಸ್ಮರಿಸಿ ತಕ್ಕ ಕರ್ತವ್ಯ ನಿಷ್ಠನಾದರೆ ಆ ಋಣಗಳು ತೀರಿದಂತಾಗುವವು.

ಈ ಲಿಂಗವೆ ಸತ್ಕ್ರಿ| ಮೂಲ ಸಮ್ಯಕ್ ಜ್ಞಾನ

ದಾಲಯ ನೀ ತ್ರೈ-ಕಾಲ ಪೂಜಿಪುದೆಂದು

ಪಾಲಿಸಿದ ಗುರುವೆ ಕೃಪೆಯಾಗು         | ೧೦೮ |

ಲಿಂಗಭಕ್ತನು ಸರ್ವಾಂಗಲಿಂಗಮಯನಾಗಲು ಲಿಂಗಪೂಜೆಯೇ ಸಾಧನವು. ಲಿಂಗಪೂಜೆಯೇ ಶಿವಯೋಗವು, ಬಾಲಲೀಲಾ ಮಹಾಂತೇಶ್ವರ ಪುರಾಣದಲ್ಲಿ ಕವಿರತ್ನ ಚನ್ನಕವಿಗಳು-

ಶಿವಪೂಜೆಯೇ ಮುಖ್ಯ ಶಿವಯೋಗಮೆನಿಸುವದು |

ಶಿವಪೂಜೆಯಿಲ್ಲದಗೆ ಮುಕ್ತಿ ಘಟಿಸದು ಮತ್ತೆ ʼ’|

ಶಿವಪೂಜೆಗೆಣೆಯುಂಟೆ ಮೂಜಗದೊಳು‘ʼ (ನಾಲ್ಕನೆಯ ಸಂಧಿ)

ಶಿವಪೂಜೆಯೇ ಮುಖ್ಯ ಶಿವಯೋಗವೆಂತಲೂ ಅದಿಲ್ಲದೆ ಮುಕ್ತಿ ದೊರಕದೆಂದೂ ಆ ಶಿವಯೋಗದ ಮಹತ್ವವನ್ನು ತಿಳಿಸಿದ್ದಾರೆ. ಈ ಶಿವಯೋಗದಲ್ಲಿ ಸತ್ಕ್ರಿಯೆಗಳು ಸಮ್ಯಕ್ ಜ್ಞಾನವು ಸಮನ್ವಯವಾಗಿರುತ್ತವೆ. ಅಂತೆಯೇ ಶಿವಯೋಗವು ಜ್ಞಾನ ಕ್ರಿಯೆಗಳ ಸಮನ್ವಯ ಮಾರ್ಗವಾಗಿದೆ. ಇಂಥ ಶಿವಯೋಗವನ್ನು ಸಾಧಿಸುವ ಮೂಲವೇ ಲಿಂಗವು.  ಅದುಕಾರಣ ಈ ಲಿಂಗವು ಸತ್ಕ್ರಿಯಾ ಮೂಲವೂ, ಸಮ್ಯಕ್ ಜ್ಞಾನಕ್ಕೆ ಆಲಯವೂ ಆಗಿದೆ. ಲಿಂಗವಿಲ್ಲದೆ ಮಾಡುವ ಕ್ರಿಯೆಗಳು ಜಡಕರ್ಮಗಳಾಗುತ್ತವೆ. ಜ್ಞಾನಪರಿಪೂರ್ಣವಾಗುವದಿಲ್ಲ. ಗುರುಕರಜಾತನಾದ ಮೇಲೆಯೇ ಲಿಂಗಕ್ರಿಯೆಗಳು ಲಿಂಗಜ್ಞಾನವು ಸಮನಿಸುತ್ತವೆ. ಲಿಂಗವು ಸಮರಸದ ಸ್ರೋತವೆನಿಸುವದು.

ಲಿಂಗಪೂಜೆಯಲ್ಲಿ ಸಮ್ಯಕ್ ಜ್ಞಾನವುಳ್ಳವನಾಗಿ ಸತ್ಕ್ರಿಯೆಗಳನ್ನು ಮಾಡುತ್ತಿರುವದರಿಂದ ಕರ್ಮವು ಜಡವಾಗಲಿ, ಬಂಧನಕಾರಿಯಾಗಲಿ ಆಗುವದಿಲ್ಲ. ಇಲ್ಲಿ ಯಾವ ಫಲಾಪೇಕ್ಷೆಯಾಗಲಿ ಇರುವದಿಲ್ಲ. ಆದರೂ ಅಷ್ಟಾವರಣದ ಪ್ರತ್ಯಕ್ಷ ಫಲಗಳೆನಿಸಿದ ಪಾದೋದಕ-ಪ್ರಸಾದಗಳು ಕೈ ಮೇಲೆಯೇ ದೊರೆಯುವವು. ಭಗವದ್ಗೀತೆಯಲ್ಲಿಯೂ ಯಾವುದೇ ಕರ್ಮವನ್ನು ಕರ್ತವ್ಯ ದೃಷ್ಟಿಯಿಂದ ಮಾಡು, ಆದರೆ ಅ ಫಲದಲ್ಲಿ ಮಾತ್ರ ನಿನಗೆ ಅಧಿಕಾರವಿಲ್ಲವೆಂದು ತಿಳಿಸಿದೆ. ಆದರೆ ನಮ್ಮ ಶರಣ ಸಿದ್ಧಾಂತವು

 ʼʼಕೂಡಲ ಸಂಗಮದೇವರನ್ನು ಪೂಜಿಸಿದ ಫಲ ಕೈಮೇಲೆʼ’

 ಎಂದು ಬಣ್ಣಿಸಿದೆ. ಗುರುವು ಶಿಷ್ಯನ ಅಂಗದಲ್ಲಿ ಕೀಲಿಸಿದ ಲಿಂಗ ಕಲೆಗಳನ್ನು ಅರುವಿನಲ್ಲಿ ತರುವದೇ ಸತ್ಕ್ರಿಯೆಯಾಗುವದು. ಈ ಕಾರ್ಯ ಶಿವಪೂಜೆಯಲ್ಲಿ ಸಾಂಗವಾಗುವದು. ಆಗಬೇಕು. ಅಂತೆಯೇ ಗುರುವು ಈ ನಿನ್ನ ಲಿಂಗವು ಸತ್ಕ್ರಿಯಾ ಜ್ಞಾನಗಳ ಸ್ವರೂಪವಾಗಿದೆ. ಅದನ್ನು ನೀನು ಪೂಜಿಸಿ ಲಿಂಗವೇ ನೀನಾಗೆಂದು ಉಪದೇಶಿಸಿದ್ದಾನೆ. ಗುರೂಪದೇಶವನ್ನು ಅನುಸಂಧಾನ ಮಾಡಿಕೊಳ್ಳುವದೇ ಶಿವಯೋಗವು.

ʼ’ಜ್ಞಾನಂ ಶಿವಮಯಂ, ಭಕ್ತಿಃ ಶೈವೀ, ಧ್ಯಾನಂ ಶಿವಾತ್ಮಕಂ |

ಶಿವವ್ರತಂ ಶಿವಾರ್ಚೇತಿ ಶಿವಯೋಗೋ ಹಿ ಪಂಚಧಾ ||

ಶಿವಯೋಗವು ಶಿವಜ್ಞಾನ ಶಿವಭಕ್ತಿ, ಶಿವಧ್ಯಾನ, ಶಿವವ್ರತ, ಶಿವಾರ್ಚನ ಎಂದು ಐದು ತೆರನಾಗುತ್ತದೆ. ಸದ್ಗುರು ಕೃಪೆಯಿಂದ ಇಷ್ಟಲಿಂಗದ ಸ್ವರೂಪ ಜ್ಞಾನವು ಅಳವಡವದು. ಲಿಂಗಜ್ಞಾನವಿಲ್ಲದೆ ಭಕ್ತಿಧ್ಯಾನಾದಿಗಳು ಸಾಧ್ಯವಾಗುವದಿಲ್ಲ. ಗುರು ಕರುಣೆಯಿಂದ ಶಿವಜ್ಞಾನೋದಯವಾಗುವದು. ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮಚಕ್ರಗತ ಮಹಾಚೈತನ್ಯವನ್ನು ಕರದಿಷ್ಟ ಲಿಂಗವನ್ನಾಗಿ ಕಂಡು ಶಿಷ್ಯನು ಭಯ ಕ೦ಪಿತನಾಗುವದೇ ಭಕ್ತಿಯ ಬೀಜವು ಮೈದೋರುವದು. ಚಿಚ್ಚೈತನವೇ ಪ್ರತ್ಯಕ್ಷವಾದ ಮೇಲೆ ತನ್ಮಯತೆಯುಂಟಾಗುವದೇ ಧ್ಯಾನಕ್ಕೆ ಮೂಲವಾಗುವದು. ಇಂಥ ಪರವಸ್ತುವೇ ಲಿಂಗವೆಂದರಿದ ಬಳಿಕ ಎಲ್ಲವೂ ಶಿವಮಯವೆಂತಲೂ ಶಿವಲಿಂಗಕ್ಕಿಂತ ಭಿನ್ನ ದೇವರಿಲ್ಲವೆಂಬ ದೃಢ ನಿಶ್ಚಯವೇ ಶಿವವೃತವಾಗುವದು. ಶಿವವ್ರತಿಯಾದ ಲಿಂಗಭಕ್ತನು ಗುರು ಪೇಳಿದಂತೆ ಇಷ್ಟಲಿಂಗವನ್ನು ಪೂಜಿಸಿ ಪೂರ್ಣಲಿಂಗನಾಗುವದೇ ಶಿವಾರ್ಚನೆ. ಈ ಐದು ಸತ್ಕ್ರಿಯೆಗಳ ಸಾಕ್ಷತ್ಕಾರವೇ ಶಿವಯೋಗವಾಗಿರುವದು.  

ಅಷ್ಟಾವರಣ ಸಂಪನ್ನನೂ ಪಂಚಾಚಾರ ಪರಾಣಯನೂ ಆದ ಸದ್ಭಕ್ತನು ಮೆಲ್ಲ ಮೆಲ್ಲನೆ ಷಟ್‌ಸ್ಥಲಗಳನ್ನು ಮೈಗೂಡಿಸಿಕೊಳ್ಳುತ್ತ ಐಕ್ಯನೆನಿಸಿ ಮಹಾಲಿಂಗ ದೊಡನೆ ಮಹವ ಸಾಧಿಸುವದೇ ಷಟ್‌ಸ್ಥಲ ಸಿದ್ಧಾಂತದ ಶಿವಪೂಜೆಯು. ಶಿವಪೂಜೆಯಲ್ಲಿ ಮಾಡುವ ಪ್ರತಿಯೊಂದು ವಿಧಾನಗಳು ಸತ್ಕ್ರಿಯೆಗಳೆನಿಸಿವೆ. ಅವುಗಳ ಅರಿವು ಸಮ್ಯಕ್ ಜ್ಞಾನವಾಗಿದೆ. ಈ ಶಿವಾದ್ವೈತ ಸಿದ್ಧಾಂತ (ಶರಣತತ್ತ್ವ) ದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ವೈಜ್ಞಾನಿಕತೆ, ತಾತ್ವಿಕತೆ ಮನೆಮಾಡಿಕೊಂಡಿವೆ. ಪರಿಶುದ್ಧಗೊಂಡ ಅಂಗತ್ರಯದಲ್ಲಿ ಲಿಂಗತ್ರಯವನ್ನು ಒಂದುಗೂಡಿಸುತ್ತಾ ಹೋಗ ಬೇಕಾಗುವದು. ಇಷ್ಟಲಿಂಗಾರ್ಚನೆಯು ಜೀವನದ ಅಮೃತ ಸಮಯವೆನಿಸಿದೆ. ಅಂತೆಯೇ ಕೇವಲ ಹದಿನಾರು ವರ್ಷ ವಯೋಮಿತಿಯುಳ್ಳ ಮಾರ್ಕಂಡೇಯನು ಸ್ಥಾವರಲಿಂಗವನ್ನು ಪೂಜಿಸಿ ಚಿರಂಜೀವಿಯಾದನು. ಅದಕ್ಕಿಂತಲೂ ಮಿಗಿಲಾದ ಶಿವಪೂಜೆಯ ಪರಿಯನ್ನು ಅರಿತು ಆಚರಿಸುವ ಸಮ್ಯಕ್ ಜ್ಞಾನವುಳ್ಳವನಾಗುವದು ಅತಿಮುಖ್ಯ.

ಶಿವಪೂಜೆಗೈಯ್ಯುವ ಪರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶಿವಪೂಜೆ (ಶಿವಯೋಗವು)ಯು ಸತ್ಕ್ರಿಯಾ ಸಮ್ಯಕ್ ಜ್ಞಾನಗಳ ಸಮರಸವೆಂಬುದು ಅರಿವಾಗದೇ ಇರದು. ಲಿಂಗವಂತನು ಲಿಂಗತಂದೆಯನ್ನು ಧ್ಯಾನಿಸಿ ನಮಿಸಿ ನಿದ್ದೆಗೈದರೆ ಸ್ವಪ್ನಾವಸ್ಥೆಯ ದೋಷಗಳಿಂದ ದೂರವಾಗುವನು. ಬ್ರಾಹೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ  ಗೈಯುತ್ತ ಜಾಗ್ರತ (ಎದ್ದು) ನಾಗಿ ಲಿಂಗವನ್ನು ಲಿಂಗಯೋಗಿಗಳ ಭಾವಚಿತ್ರಗಳನ್ನು ಸಂದರ್ಶಿಸಿ ಲಿಂಗಬಿಂದವನ್ನು ಭ್ರೂಮಧ್ಯದಲ್ಲಿ ಧ್ಯಾನಿಸಬೇಕು. ಲಿಂಗದೇವನಿಗೆ ಕೇವಲ ಶರಣೆಂದರೂ ಸಾಕು, ‘ಹೊತ್ತಾರೆ ಎದ್ದು ಲಿಂಗವ ನೆನೆದರೆ ಅಪಮೃತ್ಯುಗಳು, ಕಾಲಕರ್ಮಂಗಳು ತಪ್ಪುವವು’ ಎಂದಿದ್ದಾರೆ ನಮ್ಮ ಪ್ರಮಥರು. ಪ್ರಾತಃಕಾಲದ ಶಿವನಾಮಸ್ಮರಣೆ ಅನಂತ ಸಮಸ್ಯೆಗಳನ್ನು ಪರಿಹರಿಸುವದಲ್ಲದೆ ಭವ-ಭಯವನ್ನೇ ನಿವಾರಿಸುವದು. ಅನಂತರ ತನ್ನ ತಂದೆ-ತಾಯಿಗಳಿಗೆ, ಗುರು ಹಿರಿಯರ ಪಾದಕ್ಕೆ ಮಣಿಯಬೇಕು. ಜೀವನದಲ್ಲಿ ಬಾಗಿದವನ ಬಾಳು ಬಂಗಾರ ವಾಗುವದು.

ಸೂರ್ಯೋದಯಕ್ಕೆ ಮುಂಚೆ ಶಿವನಾಮಗಳನ್ನು ಗುರು-ಲಿಂಗ-ಜಂಗಮ ಸ್ತೋತ್ರಗಳನ್ನು ಮನದಲ್ಲಿಯೂ, ಸ್ಪಷ್ಟವಾಗಿಯೂ ಉಚ್ಚರಿಸುತ್ತ ಬಹಿರ್ದೆಶಕ್ಕೆ ಹೋಗಿ ಬಂದು ಕೈಗಳಿಗೆ ಶುದ್ಧವಾದ ಮಣ್ಣನ್ನು ಹಚ್ಚಿ ತೊಳೆದುಕೊಳ್ಳಬೇಕು. ನಂತರ ತಂಬಿಗೆಯನ್ನು

ಬೆಳಗಬೇಕು. ಶೌಚ ಕ್ರಿಯೆಯನ್ನು ಮುಗಿಸಿ ಬರುವಾಗ್ಗೆ ಎಡಗೈಯಲ್ಲಿ ತಂಬಿಗೆಯನ್ನು ಹಿಡಿದು ತರಬಾರದು. ಮಣ್ಣಿನಿಂದ ಕೈ ತೊಳೆಯುವದರಿಂದ ಅದರ ಅಗಾಧವಾದ ಶಕ್ತಿ ಉಗುರಿನ ಮುಖಾಂತರ ಶರೀರದಲ್ಲಿ ಸಂಚಾರವಾಗುವದು. ನೈಸರ್ಗಿಕ ಚಿಕಿತ್ಸಕರು ಈ ಮಾತನ್ನು ಧಾರಳವಾಗಿ ಒಪ್ಪುತ್ತಾರೆ. ಮಣ್ಣಿನ ಪಟ್ಟಿಯ ಉಪಚಾರವನ್ನು ವಿಶೇಷವಾಗಿ ಮಾಡುತ್ತಾರೆ. ಆರೋಗ್ಯ ಭಾಗ್ಯ ಆಚಾರದಲ್ಲಿ ಪೂರ್ಣವಿದೆ. ಮೊಳಕೈ ಮೊಣಕಾಲಿನ ವರೆಗೆ ಸ್ವಚ್ಛವಾಗಿ ತೊಳೆದು ಮುಖವನ್ನು ಬಾಯಿಯನ್ನು ಸ್ವಚ್ಛಗೊಳಿಸಬೇಕು. ಕನಿಷ್ಟ ೩ ಸಲುವಾದರೂ ಮುಕ್ಕುಳಿಸಬೇಕು. ಹನ್ನೆರಡಂಗುಲ ಪ್ರಮಾಣದ ಮಾವು, ಬೇವು, ಜಾಲಿ, ನೆಲ್ಲಿ, ಉತ್ತರಾಣಿ, ಹುಲಗಲಿ, ಮೊದಲಾದ ರಸವುಳ್ಳ ವನಸ್ಪತಿ (ಗಿಡ)ಗಳ ಕಡ್ಡಿಯಿಂದ ಹಲ್ಲುಗಳನ್ನು ತಿಕ್ಕಬೇಕು. ಗಿಡಗಳ ರಸ ಹಲ್ಲಿನಲ್ಲಿ ಹಾಗೂ ವಸಡೆಗಳಲ್ಲಿ ಸಂಬಂಧವಾಗಿ ದೀರ್ಘಕಾಲ ಹಲ್ಲುಗಳ ಶಕ್ತಿ ಹೀನವಾಗುವದಿಲ್ಲ. ಹಲ್ಲುಕಡ್ಡಿಯನ್ನು ಮುಖದಲ್ಲಿರಿಸುವಾಗಲೂ ಉರದ ಲಿಂಗದೇವನಿಗೆ ತೋರಿಸಿದರೆ ಆ ಕರ್ಮವೂ ಸತ್ಕ್ರಿಯೆಯೆನಿಸುವದು. ವೀರಶೈವರು ಮುಖ ತೊಳೆಯುವದಕ್ಕಾಗಲಿ, ಸ್ನಾನ ಮಾಡುವದಕ್ಕಾಗಿಯಾಗಲಿ ಅಡಿಗೆ ಮಾಡುವದಕ್ಕಾಗಲಿ ಅಥವಾ ಕುಡಿಯುವದಕ್ಕಾಗಲಿ ಯಾವದೇ ಕೆಲಸಕ್ಕೆ ಬೇಕಾದ ನೀರಿನಲ್ಲಿ ಧೂಳ ಪಾದೋದಕವನ್ನು ಬೆರೆಸಬೇಕು.

ಕೇವಲ ಬಾಯಿ (ವಾಣಿ) ಯಿಂದ ಅನಂತ ನದಿಗಳ-ತೀರ್ಥಗಳ ಸ್ಮರಣೆ ಮಾಡುವದಕ್ಕಿಂತ ಅಷ್ಟಷಷ್ಠಿ (೬೮) ತೀರ್ಥಗಳ ಫಲಕ್ಕಿಂತ ಮಿಗಿಲೆನಿಸಿದ ಧೂಳ ಪಾದೋದಕವನ್ನು ಉಪಯೋಗಿಸುವದರಿಂದ ಜಲದ ಜಡತ್ವವು ಬಯಲಾಗುವದು. ಧೂಳಪಾದೋದಕವನ್ನು ಸ್ನಾನಾದಿ ಕ್ರಿಯೆಗಳಿಗೆ ಉಪಯೋಗಿಸುವದರಿಂದ ಸ್ಥೂಲ ತನು ಪವಿತ್ರವಾಗುವದು. ಅಪ್ಯಾಯನ ಮಾಡಿದ ಮನ ತಣಿಯುವದು. ಸ್ನಾನ ಮಾಡಿ ಮಡಿಬಟ್ಟೆಯನ್ನು ಉಟ್ಟುಕೊಂಡು ಶಿವನಾಮಗಳನ್ನು ನುಡಿಯುತ್ತ ಶಿವಪೂಜಾ ಗೃಹವನ್ನು ‘ಇದು ಶಿವನ ಸದನವೆಂದು ಭಾವಿಸುತ್ತ ಪ್ರವೇಶಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಬಿಳೇ ಕಂಬಳಿ ಅಥವಾ ಹುಲ್ಲಿನ (ದರ್ಭೆಯ) ಚಾಪೆಯ ಮೇಲೆ ಮುಹೂರ್ತ ಮಾಡಬೇಕು. ನೆಲ-ಕಲ್ಲುಗಳ ಮೇಲೆ ಕುಳಿತುಕೊಂಡು  ಪೂಜಿಸಬಾರದು. ಯಾಕೆಂದರೆ ಕಟ್ಟಿಗೆಗೆ ವಿದ್ಯುತ್ ಪ್ರವಾಹ ಹರಿಯದಿರುವಂತೆ ಆಸನಗಳ ಮೇಲೆ ಕೂಡುವದರಿಂದ ಲಿಂಗತೇಜಃ ಪ್ರವಾಹವು ಶರೀರವನ್ನು ಬಿಟ್ಟು ಚಲಿಸುವದಿಲ್ಲ, ಮತ್ತು ಭೌತಿಕ ಬಾಧೆಯೂ ತಗಲುವದಿಲ್ಲ.

ಸಿದ್ಧಾಸನ, ಪದ್ಮಾಸನ, ವೀರಾಸನ ಅಥವಾ ಸುಖಾಸನಗಳಲ್ಲಿ ಯಾವುದೊಂದು ಆಸನಯುಕ್ತನಾಗಿ  ಋಜುಕಾಯನಾಗಿ ಶುದ್ಧೋದಕದಲ್ಲಿ ಪ್ರಣವವನ್ನು ಬರೆದು ಲಿಂಗಾಭಿಷೇಕ ಮಾಡಿ ಸಂಕ್ಷಿಪ್ತ ಪೂಜೆಯನ್ನು ಮುಗಿಸಬೇಕು. ಗುರುಪಾದೋದಕ ಮಾಡಿಕೊಂಡೇ ಶಿವಪೂಜೆ ಮಾಡುವದು. ಕ್ರಿಯಸ್ತರಿಗೆ ಯೋಗ್ಯವಾದುದು. ಮೊದಲು ಗುರು-ಲಿಂಗ-ಜಂಗಮ ಧ್ಯಾನಮಾಡಿ ಲಿಂಗ ಪೂಜೆಯನ್ನು ಪಾದೋದಕ-ಪ್ರಸಾದ ಸಿದ್ಧಿಗಾಗಿ ಪೂರೈಸುವೆನೆಂದು ಸಂಕಲ್ಪಿಸಬೇಕು. ಈ ಸಂಕಲ್ಪ ಜಡವಾದುದಲ್ಲ. ಜ್ಞಾನೇಂದ್ರಿಯಗಳಿಗೆ ಷಡಕ್ಷರ ಪ್ರಣವಗಳ ಸಂಬಂಧ ಅಥವಾ ಸ್ಪರ್ಶಮಾಡುವದು. ಮತ್ತು ಶರೀರದೊಳಗಿನ ಅಶುದ್ಧ ವಾಯುವನ್ನು ಪ್ರಾಣಾಯಾಮದಿಂದ ಪರಿಶುದ್ಧಗೊಳಿಸುವದಾದ ಮೇಲೆ ಭಕ್ತಸ್ಥಲದ ಆಚರಣೆಯು ಪ್ರಾರಂಭವಾಗುವದು. ಇಲ್ಲಿಯವರೆಗೆ ವಿವರಿಸಿದ ವಿಧಾನವು ಅಷ್ಟಾಂಗ ಯೋಗದ ಪೂರ್ವಭಾಗವನ್ನು ಕೆಲಮಟ್ಟಿಗೆ ಪೂರೈಸುವದು. ಈ ರೀತಿ ಸಹಜವಾದ ಆ ಯೋಗ ಇಲ್ಲಿ ಸಂಗತವಾಗುವದು.

 ಭಕ್ತಸ್ಥಲದಲ್ಲಿ ಆಚಾರಲಿಂಗದ ಅರಿವು ವೇದ್ಯವಾಗುವದು. ಅಷ್ಟಾವರಣದಲ್ಲಿ ಪೂಜಾ ಸಾಧನೆಯ ಮೊದಲನೆಯ ಸಾಮಗ್ರಿ ಭಸ್ಮವಾಗಿದೆ. ಭಸ್ಮದಿಂದ ತನು-ಮನ- ಇ೦ದ್ರಿಯಗಳ ಪೂರ್ವಭಾವವು ಭಸ್ಮವಾಗುತ್ತದೆ. ಭಸ್ಮವನ್ನು ಪೂಜಿಸಿ ಪಂಚಬ್ರಹ್ಮ ಮಂತ್ರೋಚ್ಛಾರಣೆಯಿಂದ ಸಿಂಪರಣೆ ಮಾಡಿಕೊಳ್ಳುವದು ಭಸ್ಮಸ್ನಾನವು. ಜಲಸ್ನಾನವಾದ ಮೇಲೆ ಭಸ್ಮಸ್ನಾನದಿಂದ ಅಂತರಂಗದ ಜಳಕವು ನೈರ್ಮಲ್ಯವು ಮುಗಿದಂತಾಗುವದು. ಎರಡೂ ಕೈಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಮಂತ್ರ ಸಂಬಂಧಮಾಡಿ ಶರೀರದ ಅಂಗಾಂಗಗಳಿಗೆ ಸವರಿಕೊಳ್ಳಬೇಕು. ಭಸ್ಮ ಸ್ನಾನ ಹಾಗೂ ಲೇಪನಗಳಿಂದ ಶರೀರದ ಶೈತ್ಯಾಂಶವು ನಾಶವಾಗುವದು. ಚರ್ಮದ ಪರಿಶುದ್ಧತೆ ಯುಂಟಾಗುವದು. ನಂತರ ತೋರ ಬೆರಳು, ನಡುವಿನ ಬೆರಳು, ಮತ್ತು ಉಂಗುರ ಬೆರಳು ಈ ಮೂರು ಅಂಗುಲಿಗಳಿಂದ ತ್ರಿಪುಂಡ್ರವನ್ನು ಧರಿಸಬೇಕು. ಗುರುವಿನ ಅಪ್ಪಣೆಯಂತೆ ಆಯಾ ಅವಯವಗಳಲ್ಲಿ ಸ್ಪಷ್ಟವಾಗಿ ಧರಿಸಬೇಕು. ಭಸ್ಮಧರಿಸುವಾಗ ಸಂಕೋಚಗೊಳ್ಳುವದು ಸರಿಯಲ್ಲ. ಭಸ್ಮದಿಂದ ಶರೀರವು ಪವಿತ್ರ ಹಾಗೂ ಶಾಂತ   ವಾಗುವುದು. ಇನ್ನು ರುದ್ರಾಕ್ಷಧಾರಣೆಯಿಂದ ಶರೀರದ ಹೆಚ್ಚಿನ ಉಷ್ಣತೆಯೂ ದೂರವಾಗುವದು.

ಮಾಹೇಶ್ವರ ಸ್ಥಲದಲ್ಲಿ ಮಂತ್ರನ್ಯಾಸಗಳು ದಿಗ್ಭಂಧನ, ಧ್ಯಾನ ಹಾಗೂ ಜಪ ವಿಧಾನಗಳು ಸೇರುವವು. ಶರೀರದಲ್ಲಿ ಶಿವನ ಷಟ್‌ಶಕ್ತಿಗಳನ್ನು ಮಂತ್ರಪೂರೈಕ ಸಂಬಂಧ ಮಾಡಿಕೊಳ್ಳುವದೇ ಮಂತ್ರನ್ಯಾಸವು.

 ಸರ್ವಜ್ಞತಾ ತೃಪ್ತಿರನಾದಿಬೋಧಃ |

ಸ್ವತಂತ್ರತಾ ನಿತ್ಯಮಲುಪ್ತ ಶಕ್ತಿಃ |

ಅನಂತಶಕ್ತಿಶ್ಚ ವಿಭೋರ್ವಿಧಿಜ್ಞಾ

ಷಡಾಹುರಂಗಾನಿ ಮಹೇಶ್ವರಸ್ಯ || ಪಾರಮೇಶ್ವರ ತಂತ್ರ ||

ಮಹಾಪರಶಿವನ ಆರುಶಕ್ತಿಗಳೆನಿಸಿದ ೧) ಸರ್ವಜ್ಞ ಶಕ್ತಿ ೨) ನಿತ್ಯತೃಪಶಕ್ತಿ ೩) ಅನಾದಿ ಬೋಧಶಕ್ತಿ ೪) ಸ್ವತಂತ್ರಶಕ್ತಿ ೫) ಅಲುಪಶಕ್ತಿ, ೬) ಅನಂತಶಕ್ತಿಗಳನ್ನು ಕರಗಳಲ್ಲಿ ದೇಹದಲ್ಲಿ ಮತ್ತು ಅಂಗಾಂಗಗಳಲ್ಲಿ ವಿಧಾನಪೂರ್ವಕ ನ್ಯಾಸ (ಸಂಬಂಧ) ಮಾಡಿಕೊಳ್ಳುವದರಿಂದ ಅಂಥ ಶಕ್ತಿಗಳನ್ನು ತಾನೂ ಧರಿಸಿಕೊಂಡಂತಾಗುವದು. ಅಂತೆಯೇ ಶಿವಯೋಗಿಯ ಸರ್ವಾಂಗವೂ ಲಿಂಗಮಯವಾಗುತ್ತದೆ. ಪರುಷಮಯವೆನಿಸುತ್ತದೆ. ಇಂಥ ಪೂಜ್ಯರು ಮುಟ್ಟಿದ ಪದಾರ್ಥ ಪ್ರಸಾದವಾಗಿ ಪರಿಣಮಿಸುತ್ತದೆ. ಈ

ಷಟ್‌ಶಕ್ತಿಗಳನ್ನು ನ್ಯಾಸಮಾಡಿಕೊಳ್ಳುವದರಿಂದ ಶಿವಯೋಗಿಯು ಸಾಕ್ಷಾತ್ ಶಿವನಾಗುವನು. ಪಂಚಪರುಷಗಳೂ ಅವನಲ್ಲಿ ಗುಪ್ತವಾಗಿ ಪ್ರಭಾವ ಬೀರುವವು.

ನ್ಯಾಸಗಳು ಪೂರೈಸಿದ ಮೇಲೆ ದಿಗ್ಭಂಧನ ಮಾಡಿ ಜಪಮಾಡಬೇಕು. ಜಪ ವಿಧಾನದಿಂದ ನಿಷ್ಠಾಭಕ್ತಿಯು ಬೆಳೆದು ಗುರುಲಿಂಗದ ಪೂಜೆ ಬಲಗೊಳ್ಳುವದು. ನಂತರ ವಾಮಕರವನ್ನು ಪೂಜಿಸಿ ಪಶ್ಚಿಮ ಶಿಖಾಚಕ್ರದಲ್ಲಿರಿಸಿ ಭಾವಲಿಂಗವನ್ನು ಭಾವಿಸಿ ಭ್ರೂಮಧ್ಯದಲ್ಲಿ ಪ್ರಾಣಲಿಂಗವನ್ನು ಕಲ್ಪಿಸಿ ಉರದ ಇಷ್ಟಲಿಂಗವನ್ನು ಕರ ಕಮಲಕ್ಕೆ ಬಿಜಯಂಗೈಸಿಕೊಂಡು ಷೋಡಶೋಪಚಾರ ಅಷ್ಟವಿಧಾರ್ಚನಗಳಿಂದ ಪೂಜಿಸುವದು ಪ್ರಸಾದಿ-ಪ್ರಾಣಲಿಂಗಿಸ್ಥಲದ ಪೂಜೆಯಾಗುವದು. ಜಲ, ಗಂಧ, ಅಕ್ಷತೆ, ಪತ್ರಿ, ಪುಷ್ಪ, ಧೂಪ, ದೀಪ, ನೈವೇದ್ಯ ಇವುಗಳಿಂದ ಮಾಡಿದ ಪೂಜೆ ಅಷ್ಟವಿಧಾರ್ಚನೆಯೆನಿಸುವದು. ಇನ್ನು ಅರ್ಘ್ಯ, ಪಾದ್ಯ, ಅಚಮನ, ಪತ್ರಪುಷ್ಪ ಗಂಧ, ಅಕ್ಷತೆ, ರುದ್ರಾಕ್ಷಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ ಇವು ಷೋಡಶೋಪವಿಚಾರಗಳು, ಈ ಉಪಚಾರಗಳು ಎಲ್ಲರಿಗೆ ಸಾಧ್ಯವಾಗದಿದ್ದರೂ ಅಷ್ಟ ವಿಧಾರ್ಚನೆಯನ್ನು ಮಾಡ ಬಹುದು.

 ಪೂಜೆಯ ಒಂದೊಂದು ಉಪಚಾರವೂ ಒಂದೊಂದು ಅಮೋಘ ಫಲವನ್ನು ಕರುಣಿಸುತ್ತದೆ. ಜಲವು ಶಾಂತಿಯನ್ನು ಗಂಧವು ಪುಷ್ಟಿಯನ್ನು ಮತ್ತು ಆಯುಷ್ಯವನ್ನು ಬೆಳೆಸುವದು. ಅಕ್ಷತೆಯು ಕ್ಷತಿ (ದುಃಖ) ಯನ್ನು ಕಳೆಯವದು. ಪತ್ರ-ಪುಷ್ಪಗಳು ಶಮ-ದಮಾದಿ ದೈವೀ ಸಂಪತ್ತನ್ನು, ಧೂಪವು ಪಾಪವನ್ನು ನಿವಾರಿಸಿ ಪವಿತ್ರತೆಯನ್ನು ಕೊಡುವದು. ದೀಪನೀರಾಜನವು ಅಪಮೃತ್ಯುವನ್ನು  ಹರಣ ಮಾಡುವದು. ನೈವೇದ್ಯವು ಸರ್ವಸಂಪತ್ತನ್ನು ಕೊಡುವದು. ವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಈ ಫಲವನ್ನು ಪ್ರತಿಪಾದಿಸಿದ್ದಾರೆ.

 ಉಪಚಾರಯುಕ್ತವಾದ ಅರ್ಚನೆಯನ್ನು ಪೂರೈಸಿ ತನ್ನ ನಾಶಿಕಾಗ್ರದಿಂದ ಹನ್ನೆರಡು ಅಂಗಲ ಪರಿಮಿತಿಯಲ್ಲಿ ಅಂಗೈಯೊಳಗಣ ಲಿಂಗವನ್ನು ಕಂಗಳಿಂದ ನಿರೀಕ್ಷಣ ಮಾಡುತ್ತ ಗುರೂಪದಿಷ್ಟ ಷಡಕ್ಷರ ಮಹಾಮಂತ್ರವನ್ನು ನೂರೆಂಟು ಸಲಕ್ಕೆ ಕಮ್ಮಿಯಾಗದಂತೆ ಜಪಿಸಬೇಕು. ಈ ಲಿಂಗ ನಿರೀಕ್ಷಣವು ಪ್ರಾಣಲಿಂಗಿಯ ಅನುಸಂಧಾನವಾಗುವದು. ಪ್ರಸಾದಿಯಾಗಿ ಶಿವಲಿಂಗಕ್ಕೆ ಉಪಚಾರಗಳನ್ನು ಸಮರ್ಪಿಸಿ ಪ್ರಾಣಲಿಂಗಿಯಾಗಿ ಜಂಗಮ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳನ್ನು ಬೆರೆಯಿಸಬೇಕು. ಪುನಃ ಜಪಿಸಿ ಅರ್ಘ್ಯಕೊಟ್ಟು ಮಂಗಲ ಸ್ತೋತ್ರವನ್ನು ಪಾಡುವ ಶರಣನು ಪತಿಯಾದ ಪ್ರಸಾದಲಿಂಗನ ಪ್ರಸನ್ನತೆಯನ್ನು ಪಡೆಯುವನು. ಅನುಭವದ ಆನಂದವನ್ನು ಸವಿಯುವದು.

ಪೂಜೆಯನ್ನು ಪೂರೈಸಿ ಐಕ್ಯಸ್ಥಲದಲ್ಲಿ ನಿಂದ ಶರಣನು ಗುರು-ಲಿಂಗ- ಜಂಗಮದ ಪಾದೋದಕ-ಪ್ರಸಾದದಲ್ಲಿ ಸಮರಸ ಭಕ್ತಿಯಿಂದ ಮಹಾಲಿಂಗದಲ್ಲಿ ಸಮರಸವಾಗುವನು. ಮಹದಾನಂದಭರಿತನಾಗುವನು. ಇವೆಲ್ಲವುಗಳೂ ಶಿವಪೂಜೆಯ ಸತ್ಕ್ರಿಯೆಗಳಲ್ಲದೆ ಮತ್ತೇನು ? ಈ ಸತ್ಕ್ರಿಯೆಗಳಲ್ಲಿ ಸಮ್ಯಕ್ ಜ್ಞಾನ ಅವಶ್ಯ ಬೇಕಾಗುವದು. ಸುಜ್ಞಾನವಿಲ್ಲದ ಕ್ರಿಯೆ ಸತ್ಕ್ರಿಯೆಯೆನಿಸದು. ಸುಜ್ಞಾನ-ಸತ್ಕ್ರಿಯೆಗಳ ಸಂಗಮವೇ ಶಿವಯೋಗಸಿದ್ಧಿಗೆ ಕಾರಣವಾಗುವದು. ಶಿವಯೋಗದಿಂದ ಪದಾರ್ಥ ಕಾರ್ಯವು ಪ್ರಸಾದ ಕಾಯವೆನಿಸುವದು. ಪರಿಪೂರ್ಣವೆನಿಸುವದು.

ಶ್ರೀ ಗುರುನಾಥನು ಇಂಥ ಮಂಗಲಮಯ ಲಿಂಗವನ್ನು ತ್ರಿಕಾಲದಲ್ಲಿ ಪೂಜಿಸಲು ಬೋಧಿಸುವನು. ಅನಾನುಕೂಲವಾದಲ್ಲಿ ದ್ವಿಕಾಲದಲ್ಲಿ ಅಥವಾ ಏಕಕಾಲದಲ್ಲಿ ಯಾಗಲಿ ಸ್ವಸ್ವರೂಪಾನುಸಂಧಾನವುಳ್ಳ ಈ ಸ್ವಯಂ ಲಿಂಗವನ್ನು ಪೂಜಿಸಿ ಪುನೀತ ನಾಗಬೇಕೆಂಬ ಪಾಲನೆಯನ್ನು ಗುರುವು ಬೋಧಿಸುತ್ತಾನೆ. ಲಿಂಗಪೂಜೆಯಿಂದಲೇ ಲಿಂಗಭಕ್ತನ ಪಾಲನ-ಪೋಷಣವಾಗುತ್ತದೆ. ಅಂತೆಯೇ ಶಿವಕವಿಯು ಪ್ರಯೋಗಿಸಿದ ಹಾಗೂ ಮುಂದೆಯೂ ಉಪಯೋಗಿಸುವ ‘ಪಾಲಿಸಿದ’ ಪದ ಅರ್ಥಪೂರ್ಣವಾಗಿದೆ.

ತ್ಮಿಕವಾಗಿದೆ. ಇಲ್ಲಿ ಪೂಜೆಯ ಪಾಲನೆ ಮತ್ತು ಈ ನಿಯಮವನ್ನು ಪಾಲಿಸುವದರಿಂದ ತನ್ನ ಪಾಲನೆಯೂ ಅವಶ್ಯವಾಗುವದು. ನಂಬಿದರಿಗೆ ಶಂಭು ಇಂಬಾಗಿರುವನು.

ಈ ಲಿಂಗವನು ಭಕ್ತಿ | ಶೀಲನೇಮಗಳಿಂದ

ಓಲೈಸು ನಿನಗೆ-ಮೇಲುಪದವಹುದೆಂದು

ಪಾಲಿಸಿದ ಗುರುವೆ ಕೃಪೆಯಾಗು   ||೧೦೯ ||

ದೃಷ್ಟವಾದ ಇಷ್ಟಲಿಂಗವನ್ನು ಪೂಜಿಸಲು ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಸಾಧನಗಳಾದರೆ ಪ್ರಾಣಲಿಂಗ ಮತ್ತು ಭಾವಲಿಂಗ ಪೂಜೆಯು ಅವುಗಳಿಂದ ಆಗಲಾರದು. ಅಲ್ಲಿ ಭಕ್ತಿ, ಶೀಲ, ನೇಮಗಳು ಮುಖ್ಯವಾಗಿವೆ. ಯಾಕೆಂದರೆ ಭಂಡಾರಿ ಬಸವಣ್ಣನವರು-

ಅಳಿಯೆರಗದ ಅನಿಲನಲುಗದ ರವಿಕರಂಪುಗದ

ಸುಳಿಗೊಂಡು ದಳವೇರಿ ಹಸುರಳಿದು ಬೆಳುಪುಳಿದ

 ಸುರುಚಿರಮೆನಿಪ್ಪ ಮೂಸಲಮೊಗ್ಗೆಯಂ ಕೊಂಡು

ತಂದು ಕೂಡಲಸಂಗಮನಾಥನನ್ನು ಭಕ್ತಿಯಿಂದ ಪೂಜಿಸಿದರೂ ತೃಪ್ತಿಯಾಗಲಿಲ್ಲ. ಭಯಕಂಪಿತರಾಗಿ ಭಗವಂತನನ್ನು ಬೇಡುತ್ತಾರೆ.

 ಹಾಲೆಂಜಲು ಪಯ್ಯನ, ಉದಕವೆಂಜಲು ಮತ್ಸ್ಯದ

ಪುಷ್ಪವೆಂಜಲು ತುಂಬಿಯು,

ಎಂತು ಪೂಜಿಸುವೆನಯ್ಯಾ,

ಶಿವ, ಶಿವಾ ! ಎಂತು ಪೂಜಿಸುವೆ ?

ಈ ಎಂಜಲವನತಿಗಳೆವಡೆ ಎನ್ನಳವಲ್ಲ

ಬಂದುದ ಕೈಕೋ ಕೂಡಲ ಸಂಗಮದೇವಾ

ವಿಚಾರಿಸಿದಲ್ಲಿ ಯಾವುದೂ ಶುದ್ಧವಾದುದಲ್ಲ, ಹಾಲುಕರುವಿನ ಎಂಜಲು, ನೀರು ಜಲಚರ ಪ್ರಾಣಿಗಳ ಎಂಜಲು, ಹೂಪತ್ರೆಗಳು ಕೀಟಗಳ ಎಂಜಲು, ಯಾವ ಪದಾರ್ಥವೂ ಮಿಸಲವಲ್ಲ, ಯಾವುದನ್ನೂ ಶುದ್ಧ ಮಾಡುವ ಶಕ್ತಿಯು ನಮ್ಮಲ್ಲಿಲ್ಲ. ದೇವಾ ! ಭಕ್ತಿಯ

ಮನದಿಂದ ಬಂದುದನ್ನು ಸ್ವೀಕರಿಸು. ಅದು ನಿನ್ನ ಪೂಜೆಯಾದೀತು. ಕೃಷ್ಣನಾದರೂ-

ಪತ್ರಂ ಪುಷ್ಪಂ ಫಲಂ ತೋಯಂ

ಯೋ ಮೇ ಭಕ್ತ್ಯಾ ಪ್ರಯಚ್ಛತಿ ।। ಗೀತೆ ||

ಯಾವ ಭಕ್ತನು ಪತ್ರಿಯನ್ನಾಗಲಿ, ಪುಷ್ಪವನ್ನಾಗಲಿ, ಫಲವನ್ನಾಗಲಿ, ನೀರನ್ನಾಗಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ ಮಾತ್ರ ನನಗೆ ಸಲ್ಲುವದು ಎಂದಿದ್ದಾನೆ. ನಾವು ಕೊಡುವ ಯಾವ ದ್ರವ್ಯವು ನಮ್ಮದಿದೆ ? ಎಲ್ಲವೂ ಶಿವನದೇ ಶಿವನಿಂದ ಬಂದಂಥವುಗಳು. ಅಂತೆಯೇ ಜ್ಞಾನನಿಧಿ ಚನ್ನಬಸವಣ್ಣನವರು ವೈಚಾರಿಕವಾದ ಸುಜ್ಞಾನ ಬೆಳಕನ್ನು ಬೀರಿದ್ದಾರೆ.

 ತನು-ಮನ-ಧನ ಮುಂತಾದವೆಲ್ಲವು

ಶಿವನೊಡವೆಯೆಂದು ಮಾಡುವ ಭಕ್ತಂಗೆ

 ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ?

ಮಾಡಬೇಕೆಂಬರಿವಿನ ಕಂದೆರೆದವರಾರು ?

ಮಾಡುವೆನೆಂದು ನೆನೆದ ಚೇತನದ ಪ್ರಾಣವ ತಂದಿರಿಸಿದವರಾರು ?

ಅವರಿಂದಾದ ಒಡವೆಯ ಅವರಿಗೀವುತ್ತ ಉಪಚರಿಯವೆ ?

ನದಿಯ ಉದಕವ ನದಿಗರ್ಪಿಸುವಂತೆ

ಒಡೆಯರಿಗೆ ಒಡವೆಯನರ್ಪಿಸಿ

ತಾ ಶುದ್ಧವಾಗಿ ನಡೆನುಡಿಯಲ್ಲಿ ಕವಲುದೋರದೆ

ತನ್ನಲ್ಲಿ ತಾನೆ ತಿಳಿದು ಘನವೆಡೆಗೊಂಡ ಮಹಾನುಭಾವಿಗಳು   (, ಬ. ವ-೬೨)

ಶಿವಭಕ್ತನು ತನ್ನ ತನು-ಮನ-ಧನಗಳು ಶಿವನವುಗಳೆಂದು ಅರಿಯಬೇಕು. ಗುರು-ಲಿಂಗ-ಜಂಗಮಕ್ಕೆ ಸಮರ್ಪಣೆ ಮಾಡುವ ದ್ರವ್ಯವನ್ನು ಸತ್ಕ್ರಿಯೆಯನ್ನು ಆಚರಿಸುವ ಮನಸ್ಸನ್ನು ಹಾಗೂ ಚೇತನವನ್ನು ಶಿವನೇ ಕೊಟ್ಟಿದ್ದಾನೆ. ನದಿಯನ್ನು ಪೂಜಿಸುವವರು ನದಿಯ ನೀರಿನಿಂದಲೇ ಅರ್ಚಿಸುವಂತೆ ಜಗದೊಡೆಯನಾದ ಪರಶಿವನ ಸೊತ್ತುಗಳನ್ನು ಆ ಶಿವನಿಗೆ ಸಮರ್ಪಿಸುವಂತೆ ಅದಾವ ದೊಡ್ಡಸ್ತನವಿದೆ. ? ನಡೆ-ನುಡಿ ಭಿನ್ನವಾಗದೆ ಎರಡೊಂದಾಗಿ ತನ್ನಲ್ಲಿ ತಾನು ಅರಿತು ಆಚರಿಸಿದರೆ; ಅರ್ಚಿಸಿದರೆ ಮಹಾನುಭಾವಿಯಾಗುವನು. ಜ್ಞಾನಯುತವಾದ ಸತ್ಕ್ರಿಯಾಭರಿತ ಭಕ್ತಿಯು ಶಿವನಿಗರ್ಪಿತವಾಗುತ್ತದೆ. ಆಂತರಿಕ ಅಷ್ಟವಿಧಾರ್ಚನೆಯಲ್ಲಿ ಅಂಗಸುಖಕ್ಕೆ ಅವಕಾಶವಿರಬಾರದು. ಅರಿಷಡ್‌ವರ್ಗಗಳು ಇಲ್ಲದಾಗಬೇಕು. ಅ೦ದರೆ ಭಕ್ತಿಯೊಡನೆ ಶೀಲವು ಸಮನಿಸುವದು.

 ಚಿತ್ತರಗಿ ಸಂಸ್ಥಾನಮಠದ ಮಹಾಂತಸ್ವಾಮಿಗಳವರು ತಮ್ಮ ಲಿಂಗತತ್ತ್ವ ಪರಾಮರ್ಶೆ” ಯಲ್ಲಿ – ಲಿಂಗಪೂಜೆ ಒಂದು ಸಿದಾಂತವೂ ಹೌದು; ವಿಜ್ಞಾನವೂ ಹೌದು, ಅರ್ಚನೆ, ಅಭಿಷೇಕ ಉಪಚಾರ ಉಪಾಸನೆಗಳು ಸ್ಥಾವರ ಲಿಂಗಮೂರ್ತಿ ಪೂಜೆಗಳ ವಿಧಾನ. ಲಿಂಗಪೂಜೆ ಮಾತ್ರ ಇವುಗಳನ್ನು ಬಳಸಿಯೂ ಅತೀತವಾಗಿ ನಿಂತ ಒಂದು ತಂತ್ರ. ಒಂದು ಪದ್ದತಿ, ಒಂದು ವಿಕಾಸಯಾತ್ರೆ, ಇದೊಂದು ಭಾರತೀಯ ಯೋಗಸಮನ್ವಯವೆಂದೂ, ಪೌರ್ವಾತ್ಯ ಸಿದಾಂತದ ತುಟ್ಟತುದಿಯ ಹೂಗೊಂಚಲೆಂದೂ ಹೇಳಲಾಗುತ್ತಿದೆ. ದ್ವೈ, ದ್ವೈ, ದ್ವೈತಾದ್ವೈ, ಶಕ್ತಿವಿಶಿಷ್ಟಾದ್ವೈತ ಕರ್ಮ-ಭಕ್ತಿ- ಜ್ಞಾನ-ಲಯ-ರಾಜಯೋಗಗಳಿಗೆ ಇದೊಂದು ಏಕೈಕ ಮಣಿಮಂಚ; ಯಾವುದೂ ಇದರಲ್ಲಿ ತ್ಯಾಜ್ಯವಿಲ್ಲ. ಎಲ್ಲವೂ ಆಂಶಿಕವಾಗಿ ಬಂದು ಪೂರ್ಣತ್ವವನ್ನು ವ್ಯವಸ್ಥೆಗೊಳಿಸುತ್ತವೆ”, ಎಂದು ಲಿಂಗಪೂಜೆಯ ಸೂಕ್ಷ್ಮತೆಯನ್ನು ಪರಾಮರ್ಶಿಸಿದ್ದಾರೆ.

ಲಿಂಗಭಕ್ತನು ಶೀಲವನ್ನು ಸಂಪಾದಿಸುವ ಪರಿ ಬಹುಸೂಕ್ಷ್ಮವಾಗಿದೆ. ಅರ್ಥ ಪೂರ್ಣವಾಗಿದೆ ಭಕ್ತನು ಆಚಾರಾದಿ ಲಿಂಗಗಳನ್ನು ಅರುವಿನಿಂದ ಅರ್ಚಿಸಬೇಕಗುವದು. ಆಚಾರಲಿಂಗದಲ್ಲಿ ಆಸಕ್ತಿಯುಳ್ಳ ಶಿವಭಕ್ತನು ಸಖೀ-ಸಹೋದರ ಮೋಹವ ಮರೆಯಬೇಕು. ಪೂರ್ವಾಚಾರವನ್ನು ಬಿಡಬೇಕು. ಅನ್ಯದೇವತಾ ಪೂಜೆಯ ಮಾಡಬಾರದು. ಹಿಡಿದ ನೇಮವ ಬಿಡಬಾರದು. ಅಶುಚಿಯಾಗದೇ, ಭಕ್ತನಿಂದೆಯ ಕೇಳದೇ ಇರಬೇಕು. ಗುರುಲಿಂಗ ಪೂಜಕನಾದರೆ ಮಾತಾ-ಪಿತರ ಮೋಹವನ್ನು ತ್ಯಜಿಸಬೇಕು. ಗುರ್ವಾಜ್ಞೆಯ ಮಿರದೆ ಗುರುಮಾರ್ಗಾಚಾರದಲ್ಲಿ ಮುನ್ನಡೆಯಬೇಕು. ಮಾನವರ ಸೇವೆ ಮಾಡಬಾರದು. ಶಿವಲಿಂಗ ಭಕ್ತನಾದರೆ ಅನ್ಯಮೋಹ, ಅನ್ಯದೈವ ಭಜನೆ ಪೂಜೆಗಳನ್ನು ಪೂರ್ಣವಾಗಿ ಪರಿಹರಿಸಬೇಕು. ಪುಣ್ಯಕ್ಷೇತ್ರಗಳನ್ನು ಕುರಿತು ಹೋಗಬಾರದು. ಅಂಗಭೋಗ, ಸತಿಸಂಗವನ್ನು ದೂರೀಕರಿಸಬೇಕು ಜಂಗಮಲಿಂಗಾರಾಧಕನೆನಿಸಿದರೆ ಪೂರ್ವಕುಲಗೋತ್ರವನ್ನು ಮರೆಯಬೇಕು. ಮತ್ತೆ ಅವರೊಡನೆ ಬೆರೆಸಬಾರದು. ಆಸೆಯಿಂದ ಅರ್ಥ ಸಂಗ್ರಹವನ್ನು ಮಾಡಬಾರದು. ಬೇಡಿದಡೆ ಇಲ್ಲೆನ್ನಬಾರದು. ಶಿವಲಾಂಛನದ ನಿಂದೆಯನ್ನು ಕೇಳಬಾರದು. ಪ್ರಸಾದಲಿಂಗದಲ್ಲಿ ಪ್ರಸನ್ನ ಮನವುಳ್ಳವನಾದರೆ ಅಂಗರುಚಿಯನ್ನು ಕಳೆದುಕೊಳ್ಳಬೇಕು. ಅನ್ಯರಿಗೆ ಕೈಯೊಡ್ಡಬಾರದು. ಜೀವ ಹಿಂಸೆಯನ್ನು ಮಾಡದೇ ಆತ್ಮನಿಗ್ರಹವನ್ನು ಸಾಧಿಸಬೇಕು. ಮಹಾಲಿಂಗ ಭಕ್ತನಾದರೆ ಲೋಕದ ಮೋಹವನ್ನು ಮರೆತು ಅಜ್ಞಾನಿಗಳ ಸಂಗವನ್ನು ಪರಿಹರಿಸಬೇಕು. ಮರಣಕ್ಕಂಜದೆ ಸಮತೆ ಸಮಾಧಾನಗಳು ನೆಲೆಗೊಳ್ಳಬೇಕು. ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗದಂತಿರಬೇಕು. ಇದು ನಿಜವಾದ ಲಿಂಗಭಕ್ತನ ಭಕ್ತಿಯ ಶೀಲವೆಂದು ಶರಣರು ಸಾರಿದ್ದಾರೆ.

ಅಚ್ಚಶೀಲತನದ ಹಾಗೂ ಶೀಲವಂತನ ವ್ಯಾಖ್ಯೆಯನ್ನು ಚನ್ನಬಸವಣ್ಣನವರು ಸುಂದರವಾಗಿ, ಸರಳವಾಗಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ-

 ಚಿತ್ತದ ಕಳವಳವಳಿದು ಮನವು ಮಹಾ ಘನದಲ್ಲಿ ನೆಲೆಗೊಂಡುದೆ ಶೀಲ

 ಪರಮ ಪರಿಣಾಮ ನೆಲೆಗೊಂಡುದೆ ಶೀಲ

ಮತ್ತು

 ಭಕ್ತರು ಮತಕ್ಕೆ ಬಂದು ಒಳಹೊರಗೆಂಬುದು ಶೀಲವೆ ?

ಎನ್ನ ಲಿಂಗಕ್ಕೆ ಒಳ್ಳೆಯ ಅಗ್ಗವಣಿಯ ತನ್ನಿ,

ಒಳ್ಳೆಯ ಪುಷ್ಪವ ತನ್ನಿ, ಒಳ್ಳೆಯ ಓಗರವ ಮಾಡಿ

 ಎಂಬುದು ಶೀಲವೆ ? ಅಲ್ಲ

ಪಂಚೇಂದ್ರಿಯ, ಸಪ್ತಧಾತು, ಅರಿಷಡ್ವರ್ಗ,

ಅಷ್ಟಮದಂಗಳ ಕೊಂದಾತನೆ ಶೀಲವಂತ

ಕೂಡಲಚನ್ನಸಂಗಮದೇವಾ    II ೧೦೮೩ II

ಶೀಲವಾದಡೆ ಪ್ರಪಂಚುನಾಸ್ತಿಯಾಗಿರಬೇಕು.

 ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು

ಇಂತಪ್ಪ ಶೀಲಕ್ಕೆ ಭವನಾಸ್ತಿ, ಸೀಮೆಗೆ ಭವನಾಸ್ತಿ,

 ಈ ದ್ವಿವಿಧ ನಾಸ್ತಿಯಾದಲ್ಲದೆ

ಕೂಡಲ ಚನ್ನಸಂಗಯ್ಯನಲ್ಲಿ ಶೀಲವಂತನೆನಿಸಬಾರದು. || ೧೦೮೪ |

ಭಕ್ತನಾದವನು ಶಿವಭಕ್ತರೊಡನೆ ಆತ್ಮೀಯವಾಗಿ ಸಹಕರಿಸಬೇಕು. ಭಿನ್ನತೆ ಯನ್ನೆಣಿಸಬಾರದು. ಪಂಚೇಂದ್ರಿಯಗುಣ, ಸಪ್ತಧಾತು, ಅರಿಷಡ್‌ವರ್ಗ ಹಾಗೂ ಅಷ್ಟಮದಗಳನ್ನು ಜಯಿಸಿದವನೇ ನಿಜವಾದ ಶೀಲವಂತನೆನಿಸುವನು. ಅಂತರಂಗದ ಸಾಧಿಸುವಲ್ಲಿಯೇ ಲಿಂಗವಂತಿಕೆ ವ್ಯಕ್ತವಾಗುವದು. ಜಡಗುಣಗಳು ದೂರವಾದಲ್ಲದೆ ಶೀಲ ಸದ್ಗುಣಗಳು ಸಮನಿಸಲಾರವು. ಸಚ್ಛೀಲವನ್ನು ಸಾಧಿಸುಚಲ್ಲಿಯೆ ಲಿಂಗವಂತಿಕೆ ವ್ಯಕ್ತವಾಗುವದು.

  ಶೀಲತನದೊಂದಿಗೆ ನಿಯಮಿತತನವು ಶಿವಭಕ್ತನನ್ನು ಸುಂದರಗೊಳಿಸುವದು. ಭಕ್ತಿಯ ಸತ್ಯತೆಯೊಂದಿಗೆ ಶೀಲದ ಶಿವಭಾವನೆಯನ್ನು ಸಂಪಾದಿಸಿದರೆ ನಿಯಮದ ಸೌಂದರ್ಯ ಶೋಭಾಯಮಾನವಾಗುವದು. ಶಿವನ ‘ಸತ್ಯಂ ಶಿವಂ ಸುಂದರಂ’ ತತ್ತ್ವ ಮೈಗೂಡಿಸಿಕೊಳ್ಳುವದು. ನೇಮದ ನಿಜವನ್ನು ಅಣ್ಣನ ಮಾತಿನಲ್ಲಿ ನೋಡಿ-

ನೋಡಿ ನೋಡಿ ಮಾಡುವ ನೇಮ ಸಲ್ಲವು ! ಸಲ್ಲವು !

ತನುವುದ್ದೇಶ, ಮನವುದ್ದೇಶವಾಗಿ,-

ಮಾಡುವ ನೇಮ ಸಲ್ಲವು ! ಸಲ್ಲವು !

ಗುರುಪಥವ ಮೀರಿ ಮಾಡುವ ನೇಮ ಸಲ್ಲವು ! ಸಲ್ಲವು !

ಕೂಡಲ ಸಂಗಮದೇವಯ್ಯ ಇವು ನಿಮ್ಮ-

ನಿಜದೊಳಗೆ ನಿಲ್ಲವು; ನಿಲ್ಲವು; (ಬ. ಷ. ವ. ೭೧)

ಮತ್ತು

ಬಂದುದ ಕೈಕೊಳಬಲ್ಲಡೆ ನೇಮ,

ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ

ನಡೆದು ತಪ್ಪದಿದ್ದಡೆ ನೇಮ

ನುಡಿದು ಹುಸಿಯದಿದ್ದಡೆ ನೇಮ

ನಮ್ಮ ಕೂಡಲ ಸಂಗನ ಶರಣರು ಬಂದಡೆ

ಒಡೆಯರಿಗೊಡವೆಯನೊಪ್ಪಿಸುವುದೇ ನೇಮ (೨೩೧ ಬ.ಷ.ವ.)

ಮತ್ತು

ತನ್ನಾಶ್ರಯದ ರತಿ ಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ,

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? || ೧೮೩||

 ಶಿವಭಕ್ತನು ಮಾಡುವ ಕ್ರಿಯೆಗಳೆಲ್ಲ ಲಿಂಗದಕ್ರಿಯೆಗಳು, ಲಿಂಗದ ನೇಮಗಳಾದುದರಿಂದ ತನು-ಮನಕ್ಕೆ ಅವಕಾಶ, ಅಲ್ಲಲ್ಲಿ, ಗುರುವಚನದಂತೆ ನಡೆಯುವದು, ನುಡಿಯುವದು ನೀಜನೇಮ. ಬಂದುದನ್ನು ಪ್ರಸಾದವೆಂದು ಕೈಕೊಳ್ಳಬೇಕು. ತನ್ನಲ್ಲಿದುದ್ದನ್ನು ಶಿವಭಕ್ತರಿಗೆ ಇಲ್ಲೊಂದು ವಂಚಿಸಬಾರದು. ನಡೆದು ತಪ್ಪದೆ, ನುಡಿದು ಹುಸಿಯಾಗದಿದ್ದಡೆ ಅದುವೆ ಶಿವನ ನೇಮವಾಗುವದು. ಶಿವನಿಗೆ ಸಮರ್ಪಿಸುವ ಸಾಮಗ್ರಿಗಳನ್ನು ಸ್ವತಃ ಸಂಪಾದಿಸಿ ಪೂರೈಸಬೇಕು. ಅಂದರೆ ಶಿವಲಿಂಗಕ್ಕೆ ತೃಪ್ತಿ ಇಂಥ ಭಕ್ತಿ ಶೀಲ-ನೇಮಗಳಿಂದ ಕೈಗೊಳ್ಳುವ ಶಿವಪೂಜೆಗೆ ಸಮನಾದ ಮೇಲುಪದವಿಲ್ಲ.

ಶಿವಪೂಜೆಗೈಯ್ಯುವ, ಶಿವಯೋಗಾನಂದದಲ್ಲಿ ತುಂದಿಲರಾಗುವ ಶರಣರು ಶಿವನ ಕೈಲಾಸವನ್ನು ಬಯಸಲಿಲ್ಲ. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಿಗೆ ಆಶಿಸಲಿಲ್ಲ.  ಅವರಿದ್ದ ಠಾವು, ಅವರಂಗಳ ವಾರಾಣಿಸಿ, ಕಾಯವೇ ಕೈಲಾಸ, ಅವರ ನುಡಿಯೊಳಗೆ ಚಿಂತಾಮಣಿ, ಅವರಂಗಳ ಮುಂದಣ ಗೋವೇ ಕಾಮಧೇನು. ವೃಕ್ಷವೇ ಕಲ್ಪವೃಕ್ಷವಾಗಿರುತ್ತದೆ. ಇದನ್ನರಿತ ಶಿವಭಕ್ತರು ಬ್ರಹ್ಮಪದವಿ, ವಿಷ್ಣು ಪದವಿ, ರುದ್ರ ಪದವಿಗೆ ಹಾತೊರೆಯದೇ ಶಿವಶರಣರ ತೊತ್ತಾಗಿಸುವಂತೆ ಶಿವನಲ್ಲಿ ಪ್ರಾರ್ಥಿಸಿರುವರು. ಶರಣ ಪದವಿಯೇ ಘನವಾದುದು. ಲಿಂಗಭಕ್ತತನವೇ ಮಿಗಿಲಾದುದು. ಅನುಪಮವಾದುದು. ಗುರುನಾಥನು ಭಕ್ತಿ-ಶೀಲ-ನೇಮಗಳಿಗಾ ಶ್ರಯವಾದ ಇಷ್ಟಲಿಂಗವನ್ನು ಕರುಣಿಸಿ ಮೇಲು ಪದವಿಯನ್ನು ಪಡೆಯಲು ಶಿವಯೋಗ ಪಾಲನೆಯನ್ನು ದಯಪಾಲಿಸಿದ್ದಾನೆ. ಅಂಥ ಆತನ ಸತ್ಕೃಪೆಗೆ ಅದಾವುದು ಸರಿಯಾದೀತು !

ಸಾಲೋಕ್ಯ ಮೊದಲಾದ | ಮೇಲಾದ ಪದನಾಲ್ಕು

ಈ ಲಿಂಗ ಪದಕೆ-ಕೀಳಾಗುತಿಹವೆಂದು

ಪೇಳಿದೈ ಗುರುವೆ ಕೃಪೆಯಾಗು   ||೧೧೦||

ಮೇಲಾದ ಪದ ಅಥವಾ ಪದವಿ, ಕೈವಲ್ಯ, ಮುಕ್ತಿ, ನಿರ್ವಾಣ, ಮೋಕ್ಷ ವೆಂಬುದಾಗಿ ಧರ್ಮ ಗ್ರಂಥಗಳು ಸಾರುತ್ತವೆ. ಜಗತ್ತಿನಲ್ಲಿ ಮಾನವನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬೇಕು. ಅಂದರೆ ಮಾನವ ಜೀವನ ಸಾರ್ಥಕವಾಗುವದು. ಪುರುಷಾರ್ಥಗಳಲ್ಲಿ ಪ್ರಧಾನವಾದುದು ಮೋಕ್ಷ, ಮೋಕ್ಷವನ್ನು ಹೊಂದುವದೇ ಜೀವಾತ್ಮರ ಮಹಾಮಣಿಹ. ಈ ಮೋಕ್ಷವು ನಾಲ್ಕು ತೆರನೆಂದು ಪ್ರತಿಪಾದಿಸುತ್ತಾರೆ -ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂದು. ಈ ನಾಲ್ಕು ಮುಕ್ತಿ-ಪದಗಳು ಲಿಂಗೈಕ್ಯನ ಸಮರಸ ಅಥವಾ ಲಿಂಗಾಂಗಸಮರಸ ಪದವಿಗೆ ಸರಿಬರುವುದಿಲ್ಲವೆಂಬುದು ಸದ್ಗುರುವಿನ ಅಪ್ಪಣೆ.

ಲಿಂಗಪದವಿಗೆ ಅವು ಕೀಳೆಂದು ಹೇಳುವ ಧೈರ್ಯ ಶರಣದು. ಇನ್ನಾವ ಸಿದ್ಧಾಂತ ಇದನ್ನು ಪ್ರತಿಪಾದಿಸುವ ಸಾಹಸ ಮಾಡಿರುವದಿಲ್ಲ.

 ಸದ್ಧರ್ಮದಿಂದ ದುಡ್ಡನ್ನು ಸಂಗ್ರಹಿಸಿ ಸತ್ಕಾಮನೆಗಳನ್ನು ಪೂರೈಸಿದರೆ ಮೋಕ್ಷದ ಒಂದೊಂದು ಮೆಟ್ಟಿಲೂ ಸಾಧಕನಿಗೆ ಸಿಕ್ಕುವದು. ಪುಣ್ಯಫಲದಿಂದ ಜೀವನು ಶಿವಸಾಕ್ಷಾತ್ಕಾರ ಮಾಡಿಕೊಂಡು ಆತನ ಲೋಕದಲ್ಲಿ ವಾಸಿಸಿ ಆ ಪರಶಿವನ

ಆಲೋಕನೆಯಲ್ಲಿರುವುದೇ ಸಾಲೋಕ್ಯ ಪದವಿಯೆನಿಸುವದು. ಅಪರಿಚಿತ ವ್ಯಕ್ತಿಯು ಮೊದಮೊದಲು ದೂರಿಂದ ಅಲೋಕಿಸುವದು ಸಹಜ. ಪರಿಚಯವಾದಂತೆ ಸಮೀಪ ಸಂಬಂಧವನ್ನು ಹೊಂದುವನು. ಅದರಂತೆ ಶಿವಕೃಪೆ ಪಡೆದು ಅವನ ಸಾಮಿಪ್ಯವನ್ನು

ಪಡೆಯುವದೇ ಸಾಮಿಪ್ಯ ಮುಕ್ತಿಯೆನಿಸುವದು. ಸಾಮಿಪ್ಯ-ಸಂಬಂಧ ಸಂಸ್ಕಾರಗಳಿಂದ ಜೀವನು ಶಿವರೂಪವನ್ನು ಸಾಧಿಸುವುದೇ  ಸಾರೂಪ್ಯ ಮುಕ್ತಿಯಾಗುವದು. ಕೊನೆಗೆ ಶಿವನೊಡನೆ ಸಮರಸವಾಗಿ ಬೆರೆಯುವಿಕೆಯು ಸಾಯುಜ್ಯವೆನಿಸುವದು. ಇದುವೇ ಶ್ರೇಷ್ಠವಾದ ಮುಕ್ತಿಯೆನಿಸುವದು. ಉಪಾಸಕರ ಇಚ್ಛೆ ಮತ್ತು ಯೋಗ್ಯತೆಗಳಿಗನುಗುಣವಾಗಿ ಪರಮಾತ್ಮನು ತಕ್ಕ ಫಲವನ್ನು ಕೊಡುತ್ತಾನೆ. ಆದರೆ ಶಿವಶರಣರು ಶಿವನ ಹಂಗನ್ನೇ ಹರಿದಿರುತ್ತಾರೆ. ನಿನ್ನನ್ನು ನಾವು ಏನನ್ನೂ ಬೇಡುವದಿಲ್ಲವೆನ್ನುತ್ತಾರೆ..

ಸಾಲೋಕ್ಯಬೇಕೆಂದು ಪೂಜಿಸಿ ಸಾಲೋಕ್ಯವರವ ಪಡೆದರು.

ಸಾಮೀಪ್ಯ ಬೇಕೆಂದು ಪೂಜಿಸಿ ಸಾಮಿಪ್ಯವರವ ಪಡೆದರು.

ಸಾರೂಪ್ಯಬೇಕೆಂದು ಪೂಜಿಸಿ ಸಾರೂಪ್ಯವರವ ಪಡೆದರು.

ಸಾಯುಜ್ಯಬೇಕೆಂದು ಪೂಜಿಸಿ ಸಾಯುಜ್ಯವರವ ಪಡೆದರು.

ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ

ಈ ನಾಲ್ಕು ಪದವಿಗಳ ಪಡೆದು ಇತ್ತಿತ್ತಲಾದವರೆಲ್ಲಾ

ಅವರು ನಿಮ್ಮ ವೇದಿಸಲರಿವರೆ ?

ಇಂತಿಪ್ಪವ ಕೊಟ್ಟು ಕೊಂಡಾಡುವ

ಕೈಕೂಲಿಕಾರರೆಲ್ಲಾ ನಿಮ್ಮ ಬಲ್ಲರೆ ?

ಕೂಡಲ ಚನ್ನ ಸಂಗಯ್ಯ

 ನಿಮ್ಮ ಶರಣಂಗೆ ಚತುರ್ವಿಧ ಬಯಕೆಯಿಲ್ಲ ಭವಕಲ್ಪಿತವಿಲ್ಲ  (ಚ.ಬ.ವ. ೯೩೯)

ಈ ನಾಲ್ಕು ಪದವಿಗಳನ್ನು ಬೇಕೆಂದು ಬಯಸಿ ಶಿವನನ್ನು ಕೊಂಡಾಡಿ ಪಡೆದ ಸಾಧಕನು ಶಿವನ ನಿಜವನ್ನು ಅರಿಯಲಾರನು. ಪುಣ್ಯವನ್ನು ಕೊಟ್ಟು ಕೊಂಡುಕೊಂಡ – (ಖರೀದಿಸಿದ) ಪದವಿ ಈ ವೇಷ. ಇಂಥದನ್ನು ನಮ್ಮ ಶರಣರು ಬಯಸುವದಿಲ್ಲವೆಂದು ಚನ್ನಬಸವಣ್ಣನವರು ನಿರ್ಧಾರವಾಗಿ ನಿರ್ವಚಿಸಿದ್ದಾರೆ.

ಲಿಂಗವನ್ನು ಸದಾ ಅಂಗದಲ್ಲಿ ಧರಿಸಿ ಇಂದ್ರಿಯಂಗಳಿಗೂ ಲಿಂಗಗಳನ್ನು ಸಂಬಂಧಿಸಿಕೊಂಡ ಲಿಂಗಭಕ್ತನಿಗೆ ಲಿಂಗಾಂಗಯೋಗದಲ್ಲಿ ಈ ಚತುರ್ವಿಧ ಫಲಗಳು ಸಹಜವಾಗಿ ಪ್ರಾಪ್ತವಾಗುತ್ತದೆ. ಶಿವನ (ಶಿವಲಿಂಗದ) ಆರಾಧನೆಯಲ್ಲಿ ಈ ನಾಲ್ಕೂ ಪದವಿಗಳು ಲಭ್ಯವಾಗುವವೆಂಬ ಮಾತನ್ನು ಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ (ಪದ್ಯ-೨೮)

ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇ |

ಸಾಮೀಪ್ಯಂ ಶಿವಭಕ್ತಿಧುರ್ಯಜನತಾ ಸಾಂಗತ್ಯ ಸಂಭಾಷಣೇ |

ಸಾಲೋಕ್ಯಂ ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ |

ಸಾಯುಜ್ಯಂ ಮಮ ಸಿದ್ಧಮತ್ರಭವತಿ ಸ್ವಾಮಿನ್ ಕೃತಾರ್ಥೋ ಸ್ಮ್ಯಹಮ್ ||

ಹೇ ಭವಾನೀಪತಿಯೇ | ನಿನ್ನ ಪೂಜೆಯಿಂದ ಸಾರೂಪ್ಯಮುಕ್ತಿಯು; ಶಿವ ಮಹಾ ದೇವ ಎಂಬ ನಾಮ ಸಂಕೀರ್ತನದಿಂದ ಸಾಮೀಪ್ಯ-ಮುಕ್ತಿಯು; ಶಿವಭಕ್ತಿಯಲ್ಲಿ ಶ್ರೇಷ್ಠರಾದ ಶರಣರೊಡನೆ ಸಹವಾಸ-ಸಂಭಾಷಣೆಗಳಿಂದ ಸಾಲೋಕ್ಯ ಮುಕ್ತಿಯು;

ನಿನ್ನ ಚರಾಚರಾತ್ಮಕರೂಪದ ಧ್ಯಾನದಿಂದ ಸಾಯುಜ್ಯ ಮುಕ್ತಿಯು ನನಗೆ ಇಲ್ಲಿ ಭೂಲೋಕದಲ್ಲಿಯೇ ಸಿದ್ಧವಾಗಿರುತ್ತವೆ. ಆದ್ದರಿಂದ ಹೇ ಸ್ವಾಮಿನ್ ನಾನು ಧನ್ಯನು” ಎಂದು ವರ್ಣಿಸಿರುವರು.

 ಇದರಂತೆ ಮಹಾಶರಣ ಉರಿಲಿಂಗ ಪೆದ್ದಿಗಳು ಚತುರ್ವಿಧ ಮುಕ್ತಿಗಳು ಶರಣನಿಗೆ ಸುಲಭ ಸಾಧ್ಯವೆಂದು ವಿಶ್ಲೇಷಿಸುತ್ತಾರೆ.

 ಸಾಲೋಕ್ಯ ವೆಂದೇನು

ಅಂಗದ ಮೇಲೆ ಲಿಂಗ ಸಂಬಂಧಿಯಾಗಿರುತ್ತಿರಲು !

ಸಾಮೀಪ್ಯವೆಂದೇನು |

ಗುರು-ಲಿಂಗ-ಜಂಗಮದ ದಾಸೋಹದ ಸನ್ನಿಧಿಯೊಳಿರುತ್ತಿರಲು

ಸಾರೂಪ್ಯವೆಂದೇನು ?

ಅನವರತ ಅರ್ಚನೆಯೊಳಿರುತ್ತಿರಲು !

ಸಾಯುಜ್ಯವೆಂದೇನು ?

ಚತುರ್ದಶಭುವನವ ಒಳಕೊಂಡ ಮಹಾಘನವ

ಮನವನಂಗವಿಸಿ ನೆನೆಯುತ್ತಿರಲು !

ಇಂತೀ ಚತುರ್ವಿಧ ಪದವೆಂದೇನು ?

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ |

ವಸತ

ನಾಲ್ಕೂ ಮುಕ್ತಿಗಳು ಶಿವಶರಣರಿಗೆ ನಿತ್ಯ ಸನ್ನಿಹಿತವಾಗಿರುತ್ತವೆ. ಅನವರತ ಅಂಗದ ಮೇಲೆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ ಸಾಲೋಕ್ಯ ಸಿದ್ಧಿ ಸುಲಭ ವಾಗುವದು. ಅಂಗದ ಲಿಂಗವನ್ನು ಅಂಗೈಯಲ್ಲಿ ಕಂಗಳಿಂದ ಕಾಣುವ ಲಿಂಗಭಕ್ತನಿಗೆ ಬೇರಾರು ಸರಿಸಾಟಿಯಾಗರು. ವಿಭೂತಿ ರುದ್ರಾಕ್ಷಧಾರಣ ಮಾಡಿಕೊಂಡು ‘ರುದ್ರೋ ಭೂತ್ವಾ, ರುದ್ರಂ ಯಜೇತ್’ ಶಿವನಾಗಿ ಶಿವಲಿಂಗವನ್ನು ಪೂಜಿಸೆಂಬ ಶ್ರುತಿಮಾತಿನಂತೆ ಶಿವನ ಸ್ವರೂಪ (ಸಾರೂಪ್ಯ) ವನ್ನು ಪಡೆಯುತ್ತಾನೆ. ಶಿವನ ಷಟ್‌ಶಕ್ತಿಗಳನ್ನು ಶರೀರದಲ್ಲಿ ನ್ಯಾಸ ಮಾಡಿಕೊಳ್ಳುತ್ತಾನೆ. ಷಡಕ್ಷರ ಮಹಾಮಂತ್ರ ಜಪದಿಂದ ಶಿವಲಿಂಗದಲ್ಲಿ ಬೆರೆಯುವವನಾದ್ದರಿಂದ ಲಿಂಗಸಾಮಿಪ್ಯ ಅತ್ಯಂತ ಸಮೀಪವಾಗುತ್ತದೆ. ಶರಣರ ಸಂಗಮಾಡಿ ಶಿವನನ್ನು ಪ್ರತ್ಯಕ್ಷ ಕಾಣುತ್ತಾನೆ. ವೀರಶೈವ ಸಿದ್ಧಾಂತದಲ್ಲಿ ಗುರು-ಲಿಂಗ- ಜಂಗಮರೇ ಪ್ರತ್ಯಕ್ಷ ಶಿವನಲ್ಲವೇ ? ವೀರಶೈವರು ಪಾದೋದಕ ಪ್ರಸಾದಲ್ಲಿ ಸಮರಸವನ್ನು ಹೊಂದಿ ಸಾಯುಜ್ಯವನ್ನು ಪಡೆಯುತ್ತಾರೆ. ಪ್ರತಿನಿತ್ಯದಲ್ಲೂ ಚತುರ್ವಿಧಮುಕ್ತಿ ಸುಖದಲ್ಲಿರುವ ಶರಣನಿಗೆ ಕಾಣದ ಪದವಿಗಳಿಗಾಗಿ ಅದೆಂತು ಆಶೆಯೊಡ ಮೂಡೀತು.

ಕೇವಲ ಪುಣ್ಯ ವಿಶೇಷದಿಂದ ಲಭ್ಯವಾಗುವ ಮೋಕ್ಷವು ದೇಹ ತ್ಯಾಗದ ನಂತರ ಪ್ರಾಪ್ತವಾದರೂ ಪ್ರಯೋಜನವಿಲ್ಲ. ಅಂದರೆ ಶರಣನು ದೇಹವಿರುವಾಗಲೇ ಪ್ರತಿ ನಿತ್ಯ ಮುಕ್ತನಾಗುವನು. ಅದುಕಾರಣ ಈ ಲಿಂಗ ಪದವಿಗೆ ಸಾಲೋಕ್ಯ ಮೊದಲಾದ ಮೇಲಾದ ಪದನಾಲ್ಕು ಕೀಳಾಗುತ್ತವೆಯೆಂದು ಶ್ರೀಗುರುವು ಬೋಧಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಿದ್ದಾನೆ.

ನದಿಗಳೆಲ್ಲ ಸಮುದ್ರವನ್ನು ಸೇರಿ ಸಮುದ್ರವೇ ಆಗುವಂತೆ ಶಿವನನ್ನು ರೋಮ ರೋಮಂಗಳಲ್ಲಿ ಧರಿಸಿಕೊಂಡ ಶಿವಭಕ್ತನು ತನ್ನ ಇಂದ್ರಿಯಗಳನ್ನೆಲ್ಲ ಲಿಂಗಗಳನ್ನಾಗಿ ಮಾಡಿಕೊಳ್ಳುತ್ತಾನೆ. ಹೃದಯದೊಳಡಗಿದ ಪ್ರಾಪಂಚಿಕ ಆಶೆ-ಆಮಿಷಗಳು ಶಿವ ಮಯವಾಗಿ ಶಿವಪ್ರಸಾದವಾದ ಮೇಲೆ ಇನ್ನಿತರ ಬಯಕೆಗಳು ಉತ್ಪನ್ನವಾಗುವದಿಲ್ಲ. ಶಿವಶರಣರ ಪ್ರಸಾದ ರುಚಿಯನ್ನುಂಡ ಶಿವನು ಕೈಲಾಸಕ್ಕೇ ಹೋಗಲಿಲ್ಲವಂತೆ ! ಅಂದಮೇಲೆ ಗುರು ಕರುಣಿಸುವ ಲಿಂಗ ಪದವಿ ಮಹತ್ತರವಾದುದಲ್ಲವೆ

ಶಿವಯೋಗಮಂದಿರದ ಸಾಧಕರಾಗಿದ್ದಾಗಿನ ಅವಧಿಯಲ್ಲಿ ಶ್ರೀ ಕುಮಾರ ಸ್ವಾಮಿಗಳು ಹೇಳಿದವಿಚಾರಗಳನ್ನು ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು ಬರೆದುಕೊಂಡ ಟಿಪ್ಪಣಿಗಳು.

ವೀರಶೈವ ತತ್ತ್ವ ವಿಚಾರ

೧. ಷಣ್ಮತಗಳಲ್ಲಿ ವೀರಶೈವ ಮತವು, ಶೈವದೊಳಗಿನ ಒಂದು ಭೇದವು. ಸಪ್ತವಿಧ ಶೈವಗಳಲ್ಲಿ ಶಿಷ್ಟತಮವಾದ ಅಪ್ರಾಕೃತವೆನಿಸಿದ ವೀರಶೈವ ಮತವು ವಿಶೇಷವು. ಈ ಮತಕ್ಕೆ ಲಿಂಗಾಂಗ ಸಾಮರಸ್ಯವೆ ಅಸಾಧಾರಣ ಲಕ್ಷಣವು.

 ೨. ವೀರಶೈವರಿಗೆಲ್ಲ ಅಪ್ರಾಕೃತತ್ವವು ಜನ್ಮದಿಂದಲೂ ಧರ್ಮದಿಂದಲೂ ಉಂಟು. ಅಪ್ರಾಕೃತತ್ವವು ಜನ್ಮದಿಂದ ಅವ್ಯಕ್ತ ಸ್ಥಿತಿಯಲ್ಲಿದ್ದು ಧರ್ಮದಿಂದ ವ್ಯಕ್ತಸ್ಥಿತಿಯನ್ನು ಹೊಂದುವುದು. ಇದರಿಂದ ಲಿಂಗಧಾರಣಾದಿಗಳು ವ್ಯರ್ಥವೆನಿಸವು. ಆಗಂತುಕರಿಗೆ ಮಾತ್ರ ಧರ್ಮದಿಂದ ಉಂಟು.

 ಈ ಧರ್ಮವು ಅತಿವರ್ಣಾಶ್ರಮಾನುಸಾರವಾದುದು. ಅಂದರೆ ಬ್ರಹ್ಮ ನಿರ್ಮಿತಗಳಾದ ಪ್ರಾಕೃತ ವರ್ಣಾಶ್ರಮ ಧರ್ಮಗಳನ್ನು ಮೀರಿದುದು. ಶಿವನಿರ್ಮಿತ ವರ್ಣಾಶ್ರಮ ಧರ್ಮವುಳ್ಳುದು. ಆದ್ದರಿಂದ ಅಪ್ರಾಕೃತ ಬ್ರಾಹ್ಮಣ್ಯಕ್ಕೂ ತದ್ಗತ ಗುರುತ್ವಕ್ಕೂ ಹಾನಿಯಲ್ಲ.

 ೩. ‘ಶಿವಲಿಂಗವನ್ನು ಧರಿಸಿದೊಡನೆ ಶಿವನೇ ಆಗುವನು’ ಎಂಬ ವಾಕ್ಯವು ಶಿವತ್ವದ ಅಂಕುರಾರೋಪಣ ಸೂಚಕವಾಗಿರುವುದು. ಕೇವಲ ತನ್ನೊಳಗೆ ಅವ್ಯಕ್ತವಾದ ಕಿಂಚಿತ್ ‘ ಶಿವತ್ವವನ್ನೇ ಲಿಂಗಧಾರಣಾದಿ ಸಂಸ್ಕಾರವು, ಅಂಕುರ ರೂಪದಿಂದ ವ್ಯಕ್ತಗೊಳಿಸುವ ಕಾರಣ ಇದು ಅರ್ಥವಾದವಲ್ಲ.  ʼʼಶಿವ ಏವ ನ ಸಂಶಯ?” ಎಂಬ ವಾಕ್ಯವು ಸಾರ್ಥಕವೆನಿಸುವುದು. ಶ್ರೀಗುರು ಸಂಸ್ಕಾರದಿಂದ ಬಂದ ಅಂಕುರರೂಪ ಶಿವತ್ವವನ್ನೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಾಂತರ್ಗತ ಲಿಂಗಾಂಗ ಸಾಮರಸ್ಯ ಮುಂತಾದವುಗಳು ಆಚಾರ ವಿಚಾರಗಳಿಂದ ಕೇವಲ ವ್ಯಕ್ತಸ್ಥಿತಿಗೆ ತರುವುದರಿಂದ ಶಿವತ್ವದ ವ್ಯಾಪಕಸ್ಥಿತಿಯು ಸ್ಪಷ್ಟ ಫಲವೆನಿಸುವುದು. ಅಂಕುರರೂಪ ಶಿವತ್ವವನ್ನು ವ್ಯಕ್ತಪಡಿಸುವುದರಿಂದ ʼʼಶಿವ ಏವ ನ ಸಂಶಯಃ” ಎಂಬ ವಾಕ್ಯ ಸಮನ್ವಯಕ್ಕೆ ಭಂಗಬಾರದು.

 ೪. ಲಿಂಗಧಾರಿಗಳಲ್ಲಿ ಏಳು ಭೇದಗಳಿರುವವು. ಅವುಗಳಲ್ಲಿ ಏಳನೇ ಭೇದವನ್ನು ಹೊಂದುತ್ತಾನೆಂದು ಕೆಲವು ಗ್ರಂಥಗಳಲ್ಲಿ ಉಕ್ತವಾಗಿರುವುದು.

 ಅಷ್ಟಾವರಣ ವಿಶಿಷ್ಟ ಪಂಚಾಚಾರವೆ ವೀರಶೈವ ಧರ್ಮವಾದ್ದರಿಂದ ಈ ಧರ್ಮವೇ ಇತರ ಲಿಂಗಧಾರಿಗಳ ಭೇದವನ್ನು ಸೂಚಿಸುವುದು. ಇದರಿಂದಾಗಿ ಇದು ವ್ಯಾವರ್ತಕ ಧರ್ಮವೆನಿಸುವುದು (ಇಲ್ಲಿ ವಿಚಾರವಿದೆ) ಯೋಗಜ್ಞಾನ ಸಮುಚ್ಚಯವೆ ವ್ಯಾವರ್ತಕ ಧರ್ಮವು

೫. ಲಿಂಗಧಾರಿಗಳಾದ ಅಪ್ರಾಕೃತರೆಲ್ಲರಿಗೂ ಪ್ರಾಕೃತ ವರ್ಣಾಶ್ರಮಗಳಿರುವುದಿಲ್ಲ. ಅಷ್ಟಾವರಣ, ಪಂಚಾಚಾರಾದಿ ಧರ್ಮವೃತ್ತಿಯಿಂದ ಜೀವಿಸುತ್ತಾರೆ. ಅದು ಹೇಗೆಂದರೆ : ಕೃಷಿ, ವಾಣಿಜ್ಯಾದಿ ವೃತ್ತಿಗಳನ್ನು ವೀರಶೈವರಲ್ಲಿ ಕಂಡರೂ ಗುರು, ಲಿಂಗ,  ಜಂಗಮ ಸೇವಾರ್ಥವಾಗಿಯೇ ಆ ವೃತ್ತಿಗಳನ್ನು ಕೈಗೊಂಡಿರುವುದರಿಂದ ಅವು ಪ್ರಾಕೃತವೆನಿಸದೆ ಅಪ್ರಾಕೃತ ವೃತ್ತಿಯಲ್ಲಿ ಗಣನೆಯಾಗಿರುವವು.

 ೬. ವೀರಶೈವ ನಿಯತಿಯಂತೆ ಲಿಂಗಧಾರಿಗಳಾದ ಅಪ್ರಾಕೃತರಲ್ಲಿಯೂ ಅಷ್ಟಾವರಣವೇ ಅಂಗ; ಪಂಚಾಚಾರವೆ ಪ್ರಾಣವಾದ ಭಕ್ತತ್ವವು ಉಂಟು.

೭. ಗುರು, ಲಿಂಗ, ಜಂಗಮ ಈ ತ್ರಿವರ್ಗಕ್ಕೂ ಅಷ್ಟಾವರಣ ವಿಶಿಷ್ಟ ಭಕ್ತತ್ವವುಂಟು.

೮. ಗುರು, ಲಿಂಗ, ಜಂಗಮವು-ಪರಶಿವ ಅಥವಾ ಪರಬ್ರಹ್ಮ ತತ್ತ್ವದ ಪರಿಣಾಮವು. ಲಿಂಗ, ಗುರು, ಜಂಗಮತ್ರಯದಲ್ಲಿ ಉಪಾಸಕೋಪಾಸ್ಯಭೇದವು ಕ್ರಮದಿಂದ ಸಂದರ್ಭಾನುಸಾರ ತೋರುವುದು. ಹೇಗಂದರೆ ಲಿಂಗ, ಗುರು, ಜಂಗಮತ್ರಯಗಳಲ್ಲಿ ಒಂದೊಂದು ಮೂರು ಮೂರು ಭೇದವಾಗಿ ನವವಿಧವಾದುದು ಶಾಸ್ತ್ರಾನುಭವ ಸಮ್ಮತವಾಗಿರುವುದರಿಂದ ಲಿಂಗದೊಳಗಿನ ಲಿಂಗಕ್ಕೆ ಗುರುವಿನಲ್ಲಿ ತೋರಿದ ಲಿಂಗವು ಉಪಾಸ್ಯವಾದುದು. ಅದಕ್ಕಿಂತಲೂ ಜಂಗಮದೊಳಗಿನ ಲಿಂಗವು ಶ್ರೇಷ್ಠ (ಉಪಾಸ್ಯ)ವಾದುದು. ಲಿಂಗದೊಳಗಿನ ಗುರುತ್ವಕ್ಕಿಂತಲೂ ಗುರುವಿನಲ್ಲಿರುವ ಗುರುತ್ವವು ಅಧಿಕ. ಅದಕ್ಕಿಂತಲೂ ಜಂಗಮದೊಳಗಿನ ಗುರುತ್ವವು ಶ್ರೇಷ್ಠ.  ಲಿಂಗದೊಳಗಿನ ಜಂಗಮತ್ವಕ್ಕಿಂತಲೂ ಗುರುವಿನಲ್ಲಿರುವ ಜಂಗಮತ್ವವು ಶ್ರೇಷ್ಠವು.

ಅದಕ್ಕಿಂತ ಜಂಗಮದೊಳಗಿನ ಜಂಗಮತ್ವವು ಅಧಿಕವು. ಈ ಕ್ರಮವನ್ನನುಸರಿಸಿ ಉಪಾಸಕೋಪಾಸ್ಯ ಭಾವವನ್ನು ತಿಳಿಯತಕ್ಕುದು. ಆದರೂ ಒಂದೊಂದು ವಸ್ತುವಿನಲ್ಲಿರತಕ್ಕ ಲಿಂಗ, ಗುರು, ಜಂಗಮ ಇವು ಸಂದರ್ಭಾನುಸಾರವಾಗಿ ಪೂಜಕ

ಪೂಜ್ಯತ್ವವನ್ನು ಹೊಂದುವವು. ಇವುಗಳಿಗೆ ಕ್ರಮವಾಗಿ ಉಪಾಸಕೋಪಾಸ್ಯಭಾವವು ಇರುವುದು. ಸಂದರ್ಭಾನುಸಾರವಾಗಿ ಭಕ್ತವರ್ಗದ ಭಕ್ತಸ್ವರೂಪವಾದ ಲಿಂಗದಲ್ಲಿರುವ ಜಂಗಮಕ್ಕಿಂತಲೂ ಗುರುವಿನಲ್ಲಿರುವ ಲಿಂಗವು ಅಧಿಕವು.  ಗುರುವಿನಲ್ಲಿರುವ ಗುರು ಜಂಗಮಕ್ಕಿಂತಲೂ ಜಂಗಮದಲ್ಲಿರುವ ಜಂಗಮವು ಅಧಿಕವಾದುದು, ಮತ್ತು ಭಕ್ತವರ್ಗದ ಭಕ್ತನಾದರೂ ಯೋಗ್ಯವೃತ್ತಿಯಿಂದ ಗುರು, ಲಿಂಗ, ಜಂಗಮ ಸ್ವರೂಪನಾಗುವನು. ಗುರು, ಜಂಗಮರು ಯೋಗ ರೂಢಿಯಿಂದ ಗುರು ಲಿಂಗ ಜಂಗಮ ಸ್ವರೂಪರಾಗುವದು. ತತ್ತ್ವರೂಪವನೈದದೆ ತತ್ತ್ವದ್ದೇವತಾರಾಧನೆ ಮಾಡಲಿಕ್ಕೆ ಬರುವುದಿಲ್ಲ. ಆದ್ದರಿಂದ ಪದಾರ್ಥ ತನುವೆ ಕಾಲಾನುಗುಣವಾಗಿ ಪ್ರಸಾದತನು ಆಗುವಂತೆ ಭಕ್ತನಾದರೂ ಯೋಗ ವೃತ್ತಿಯಿಂದ ಗುರು ಲಿಂಗ ಜಂಗಮ ಸ್ವರೂಪವನ್ನು ಹೊಂದಿ  ಸಿದ್ಧನೆನಿಸುವನು. ಇದರಂತೆ ಗುರುವರ್ಗದಲ್ಲಿ ಜನಿಸಿರುವವರು, ಗುರುತ್ವ ಸಂಸ್ಕಾರದಿಂದ ಯೋಗರೂಢಿಯಿಂದ ಗುರುಲಿಂಗ ರೂಪವನ್ನು ಹೊಂದುವರು. ಮರಳಿ ಅವರಿಗೆ ಸಂಸ್ಕಾರ ವಿಶೇಷವಾದರೆ ರೂಢಿಯಿಂದಲೂ ಗುರು ಲಿಂಗ ಜಂಗಮ ಸ್ವರೂಪರಾಗುವರು. ಇವರಾದರೂ ಮೇಲ್ಕಂಡಂತೆ ಸಾಧಕ ಸ್ಥಿತಿಯಲ್ಲಿದ್ದು ಉನ್ನತಾವಸ್ಥೆಯನ್ನು ಹೊಂದುತ್ತ ಮುಂದೆ ಸಿದ್ಧ ಸ್ಥಿತಿಯನ್ನು ಹೊಂದುವರು. ಈ ಪ್ರಕಾರವಾಗಿ ಸಂಸ್ಕಾರವಾಗಿ ಅನುಷ್ಠಾನ ಉಪಾಸಕೋಪಾಸ್ಯ ವ್ಯವಸ್ಥೆಯು.

೯. ಗುರು ಜಂಗಮರಿಗೆ ಮತ್ತೊಂದನ್ನಾಶ್ರಯಿಸಿ ಪೂಜ್ಯತ್ವವಿಲ್ಲ. ಅವರು ಸ್ವಯಂ ಪೂಜ್ಯರು. ನಿತ್ಯ ಮುಕ್ತರು.  ಜಗದ್ಧಿತಾರ್ಥವಾಗಿ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಉಪಾಸಿಸುವುದುಂಟು. ವ್ಯಾಪಕವಾದ ಪರಲಿಂಗಕ್ಕೆ ಗುರುಲಿಂಗ ಜಂಗಮವೆಂತಲೂ ಪರ್ಯಾಯ ನಾಮಗಳುಂಟು. ಇದನ್ನೇ ಭೇದೋಪಭೇದಗಳಿಂದ ಸಮಯೋಚಿತವಾಗಿ ಸ್ವಸ್ವರೂಪವಾಗಿ ವ್ಯಾಪ್ಯರಾದ ಗುರು ಲಿಂಗ ಜಂಗಮರು ಪೂಜಿಸುವರು.

 ಗುರು ಜಂಗಮರು ಪೂಜ್ಯರಾಗಬೇಕಾದರೆ ವ್ಯಾಪಕವಾದ ತಮ್ಮ ನಿಜ ಸ್ವರೂಪವಾದ ಮೂಲ ಲಿಂಗವನ್ನು ತಂತಮ್ಮನಿರಾಭಾರಿ-ಸಾಭಾರಿ ಗುರುಗಳ ಪ್ರಯತ್ನ ವಿಶೇಷದಿಂದ ಸಂಸ್ಕರಿಸಿ ಲಿಂಗಾಕಾರಗೊಳಿಸಿ, ಅಂಗತ್ರಯವನ್ನು ಸಂಬಂಧಗೊಳಿಸಿ ಆಜ್ಞಾಪಿಸಿದಂತೆ ಆಚರಿಸುವುದರಿಂದ ಪೂಜ್ಯರೆನಿಸುವರು. ವಿಶುದ್ಧ ಸತ್ವಸ್ವರೂಪೋ ಪಾಧಿಯಂದೊಪ್ಪುವ ಗುರುಮೂರ್ತಿಯು ಮಲಿನ ಸತ್ವಸ್ವರೂಪ ವಿದ್ಯೋಪಹಿತ ಪುರುಷಾಕಾರ ಶರೀರದಲ್ಲಿದ್ದು ಜೀವಕಲೆಯನ್ನು ಸಂಸ್ಕರಿಸಿ ತಮಃ ಪ್ರಧಾನ ಪ್ರಕೃತಿ ಸ್ವರೂಪ ಶಿಲಾಮಯವಾದ ಲಿಂಗಾಕಾರದಲ್ಲಿ ಸ್ಥಾಪಿಸೋಣದರಿಂದ ಲಿಂಗವು ಪೂಜ್ಯವಾಗಿರುವುದು. ಅಂದರೆ ಗುರು ಜಂಗಮರಿಂದಲೆ ಲಿಂಗಕ್ಕೆ ಪೂಜ್ಯತ್ವವು ಬಂದಿರುವುದೆಂದು ಸ್ಪಷ್ಟವೆನಿಸುವುದು.

 ಚತುರ್ವಿಧ ವಾಗ್ವ್ಯವಹಾರ ಪರಬ್ರಹ್ಮಜ್ಞಾನ ಅಧಿಕಾರವುಳ್ಳ ಜೀವ ಚೈತನ್ಯ ವಿಶಿಷ್ಟ ಮನುಷ್ಯರಲ್ಲಿ ಬದ್ಧತ್ವ ಮುಕ್ತತ್ವವಿದ್ದಂತೆ-ಪಶುಪಕ್ಷ್ಯಾದಿ ಮೃತ್ಪಾಷಾಣಾದಿಗಳಲ್ಲಿ ಇಂಥ ಬಂಧತ್ವ ಮುಕ್ತತ್ವವಿರುವುದಿಲ್ಲ. ತಮಃ ಪ್ರಧಾನ ಕೃತಿಯಿಂದ ತೋರಿದ ಜಡಶಿಲೆಯಲ್ಲಿ ಪುರುಷನ ಚೈತನ್ಯಗತವಾಗಿರುವ ಚಿತ್ಕಲೆಯನ್ನು ಪ್ರತಿಷ್ಠಿಸಲು ಆಯಾ ವ್ಯಕ್ತಿಗೆ ಅದು ಪೂಜ್ಯವಾದ ಲಿಂಗವಿರುವುದು. ಚಿತ್ಕಲಾ ಪ್ರತಿಷ್ಠಿತವಾಗುವುದಕ್ಕಿಂತಲೂ ಪೂರ್ವದಲ್ಲಿ ಶಿಲಾಮಯ ಲಿಂಗಾಕಾರದಲ್ಲಿ ಈ ಬಗೆಯ ಬಂಧತ್ವದ ವ್ಯವಹಾರವೇ ಇಲ್ಲದ್ದರಿಂದ ಆ ಲಿಂಗಕ್ಕೆ ಮೋಕ್ಷಾಧಿಕಾರವೇ ಇಲ್ಲ.

ಗುರು ಜಂಗಮರಿಗೆ ಸ್ವಾಮಿತ್ವ, ಸ್ವತಂತ್ರತ್ವದ ಅಧಿಕಾರವು, ಗುರುತ್ವ ಜಂಗಮತ್ವ ಸಂಸ್ಕಾರವಾಗುವದಕ್ಕಿಂತಲು ಮೊದಲು ಅವ್ಯಕ್ತಸ್ಥಿತಿಯಲ್ಲಿದ್ದು ಸಂಸ್ಕಾರ ವಿಶೇಷದಿಂದ ಸ್ಪಷ್ಟವೆನಿಸಿರುವ, ಅಂದರೆ ವ್ಯಕ್ತವಾಗಿರುವ ಸ್ಥಿತಿಯೇ ಮುಕ್ತಿಯೆನಿಸುವುದು. ವಿಸ್ತೃತ

ಸ್ಥಿತಿಯಲ್ಲಿದ್ದ ಬದ್ಧತ್ವವು ನಾಶವಾಗುತ್ತಾಗುತ್ತ ವ್ಯಾಪಕ ಸ್ಥಿತಿಯ ಸ್ವಾಮಿತ್ವ ಸ್ವತಂತ್ರತ್ವ ವುಂಟಾದದ್ದೇ ಮುಕ್ತತ್ವವೆನಿಸುವುದು. ಗುರು ಜಂಗಮರಲ್ಲಿ ಅಪ್ರಾಕೃತ ಪುರುಷತ್ವ ವಿದ್ದಂತೆ ಲಿಂಗದಲ್ಲಿಯಾದರೂ ಅಪ್ರಾಕೃತ ಶಿಲಾತ್ವವಿರುವುದು. ಪುರುಷಾಕಾರದ ಗುರು ಜಂಗಮಾದಿಗಳ ಪ್ರಯತ್ನದಿಂದಲೇ ಶಿಲೆಯಲ್ಲಿದ್ದ ಶಿಲಾಭಾವವು ಹೋಗಿ ಶಿವತ್ವವುಂಟಾಗುವುದು. ಆ ಶಿವತ್ವವು ವ್ಯಾಪಕಸ್ಥಿತಿಗೆ ಬರಬೇಕಾದರೆ ಆ ಭಕ್ತನು ಗುರು ಜಂಗಮರ ಪಾದೋದಕ ಪ್ರಸಾದಾದಿಗಳಿಂದ ಲಿಂಗದಲ್ಲಿ ವ್ಯಾಪಕತ್ವವನ್ನು

ತಂದುಕೊಂಡು ತದ್ವಾರಾ ವ್ಯಾಪಕನಾಗುವುದೇ ಮುಕ್ತಿಯು.  ಸಾರಾಂಶವಿದು : ಗುರು ಜಂಗಮರು ಅನ್ಯವಾದ ಲಿಂಗಾಶ್ರಯವನ್ನು ಮಾಡದೆ ಸ್ವಸ್ವರೂಪ ಲಿಂಗಾರ್ಚನಾದಿಗಳಿಂದ ಮುಕ್ತರಾಗುವರು. ಲಿಂಗವು ಗುರು ಜಂಗಮರಿಂದ ಸ್ಥಾಪಿಸಲ್ಪಟ್ಟು ಗುರು ಜಂಗಮರ ಕೃಪೆಯಿಂದಲೇ ವ್ಯಾಪಕ ಸ್ಥಿತಿಯನ್ನು ಹೊಂದಿ ತನ್ನನ್ನು ಆಶ್ರಯಿಸಿದ ಭಕ್ತನಿಗೆ ಮುಕ್ತಿಯನ್ನುಂಟು ಮಾಡುವುದು.

೧೦. ಕ್ರಿಯಾಜ್ಞಾನರೂಪ ಗುರು. ಕ್ರಿಯಾರೂಪ ಲಿಂಗ. ಜ್ಞಾನರೂಪ ಜಂಗಮ. ಹೀಗೆ ಗುರು-ಲಿಂಗ-ಜಂಗಮ ಶಬ್ದದ ಅನ್ವರ್ಥಕವಿರುವುದು. ಮತ್ತು ಭಕ್ತರ ಅನಿಷ್ಟವನ್ನು ಪರಿಹರಿಸಿ ಕೊಡುವುದರಿಂದಲೂ ‘ಇಷ್ಟಿ’ ಅಂದರೆ ಪೂಜಾ; ಆ ಪೂಜೆಯಿಂದ ನಿರಂತರ ಆರಾಧಿಸಲ್ಪಡುವುದರಿಂದಲೂ ಇಷ್ಟಲಿಂಗವೆ೦ದು ಅನ್ವರ್ಥಕವಾಗಿರುವುದು. ಮಲತ್ರಯ ರೂಪ ಅಜ್ಞಾನಾಂಧಕಾರವನ್ನು ದೂರಮಾಡಿ ಶಿವಾದೈತರೂಪ ನಿತ್ಯಾನಂದವನ್ನುಂಟುಮಾಡಿಕೊಡುವುದಕ್ಕೆ ಕರ್ತೃವಾದ್ದರಿಂದಲೂ ಸಂಶಯ ನಿರಸನದ್ವಾರದಿಂದ ನಿತ್ಯ ಮುಕ್ತಿಯನ್ನುಂಟುಮಾಡುವನಾದ್ದರಿಂದಲೂ  ಬಾಹ್ಯಾಂತರಗಳಲ್ಲಿ  ಹರಿದಾಡುವ ಮನಸ್ಸನ್ನು ಭೇದಿಸಿ ಬೋಧಿಸುವ ಘನ ಸಾಮರ್ಥ್ಯವುಳ್ಳವನಾದ್ದರಿಂದಲೂ ಗುರುವೆಂಬ ಶಬ್ದವು ಅನ್ವರ್ಥಕವಾಗಿರುವುದು.

ತನ್ನ ಪ್ರಕಾಶ ಸಾನ್ನಿಧ್ಯಮಾತ್ರದಿಂದ ಶಿವಶಕ್ತ್ಯತ್ಮಕ ಪ್ರಪಂಚವನ್ನು ಬೆಳಗಿ ಅನಿಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನುಂಟುಮಾಡಿ ಅಂತರ್ಬಹಿರ್ಮನಸ್ಸನ್ನು ಭೇದಿಸುವ ಸ್ವಯಂಪ್ರಕಾಶ ಸ್ವರೂಪವೇ ಜಂಗಮದ ಅನ್ವರ್ಥಕವಾಗಿರುವುದು.

ಸಚ್ಚಿದಾನಂದತ್ವವು ಲಿಂಗ-ಗುರು-ಜಂಗಮ ಈ ತ್ರಿವರ್ಗದ ಅಸಾಧಾರಣ ಲಕ್ಷಣಗಳಾಗಿದ್ದರೂ ಪರಸ್ಪರ ಭಿನ್ನಾಭಿನ್ನ ಲಕ್ಷಣಗಳಿಂದ (ಇಲ್ಲಿ ಅಭಿನ್ನವೆಂದರೆ ಅನ್ನೋನ್ಯವೆಂದರ್ಥ). ಜಗದ್ಧಿತಾರ್ಥವಾಗಿ ದಿವ್ಯ ಚೇಷ್ಟೆಯಿಂದ ಶೋಭಿಸುವವು.

 ೧೧. ಅಷ್ಟಾವರಣವೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಶೋಭಿಸುವ ಅಂಗನೇ ಭಕ್ತಶಬ್ದವಾಚ್ಯನು. ಶಿವನು, ‘ನಾನು ಭಕ್ತನ ಕೇವಲ ಚೈತನ್ಯ ಸ್ವರೂಪವಾದ ಶಿವಕಲೆಯಿಂದಲೂ ಶಿಲಾಮಯವಾದ ಲಿಂಗಾಕಾರದಲ್ಲಿ ಶೋಭಿಸಿ ಪೂಜ್ಯತೆಯ ಪಡೆದಿರುವದರಿಂದ ಆ ಭಕ್ತನ ಜಿಹ್ವಾದ್ವಾರದಿಂದಲೇ ಲಿಂಗರೂಪಿಯಾಗಿ ತೃಪ್ತಿಯನ್ನು ಹೊಂದುವೆನೆಂದು ಹೇಳುವುದೇ ಇದು ಪರ್ಯವಸಿತಾರ್ಥವು.

೧೨. ಅಪ್ರಾಕೃತ ಮುಮುಕ್ಷುಗಳಾದ ಗುರುಜಂಗಮೇತರ ಭಕ್ತವಂಶೀಯರೂ ಆಗಂತುಕರೂ ತಂತಮ್ಮ ಉದ್ಧಾರತೆಯ ದೆಸೆಯಿಂದ ಸ್ವಸ್ವರೂಪ ಲಿಂಗವನ್ನೂ ಆ ಲಿಂಗವನ್ನು ಕರುಣಿಸಿದ ಗುರುಮೂರ್ತಿಗಳನ್ನೂ ಆ ಲಿಂಗ ಮುಖವಾದ ಜಂಗಮ ಮೂರ್ತಿಗಳನ್ನೂ ಗುರು ಲಿಂಗ ಜಂಗಮ ಪೂಜಾಧಿಕಾರ ಪ್ರದಾಯಕ ವ್ರತರೂಪ ಭಸ್ಮ ರುದ್ರಾಕ್ಷಗಳ ಧಾರಣವನ್ನೂ ಇಷ್ಟಲಿಂಗವನ್ನು ಜಾಗ್ರತೆಗೊಳಿಸುವ ಸಾಧನವಾದ ಪಂಚಾಕ್ಷರ ಮಂತ್ರ ಜಪವನ್ನೂ ಗುರು ಲಿಂಗ ಜಂಗಮರೆಂಬ ಇಷ್ಟ ದೇವತೆಗಳ ಪಾದೋದಕ-ಪ್ರಸಾದರೂಪ ಫಲವನ್ನೂ ಭಕ್ತಿಯಿಂದ ಅರ್ಚನಾದಿಗಳ ದ್ವಾರಾ ಸೇವಿಸುವರು.

ಗುರು ಜಂಗಮರಾದರೂ ತಂತಮ್ಮ ಸಾಭಾರಿ ಗುರುಗಳಿಂದ ಮೂರ್ತಿಕರಿಸಿ. ಕೊಡಲ್ಪಟ್ಟ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಪೂಜ್ಯ ಪೂಜಕ ಕ್ರಮವನ್ನತಿಕ್ರಮಿಸದೆ ಗುರು ಜಂಗಮರಿಂದ ಕೊಡಲ್ಪಟ್ಟ ಭಸ್ಮ ರುದ್ರಾಕ್ಷಧಾರಣವನ್ನು ಮತ್ತು ಪಂಚಾಕ್ಷರ ಜಪವನ್ನು ಗುರು ಲಿಂಗ ಜಂಗಮರ ಪಾದೋದಕ ಪ್ರಸಾದಗಳನ್ನು ಜಗದ್ಧಿತಾರ್ಥವಾಗಿ ಪವಿತ್ರ ಲೀಲೆಯಿಂದ ಅಪ್ರಾಕೃತ ಮುಮುಕ್ಷುಗಳೆಂಬಂತೆ ಸಿದ್ಧರಾದವರು ಅರ್ಚನಾದಿ ದ್ವಾರದಿಂದ ಸೇವಿಸುವರು. ಇವರು ಸಹ ಮುಂದೆ ಆಚರಣೆಯ ವಿಶೇಷದಿಂದ ಸಿದ್ಧರಾಗುವರು. ಇದರಿಂದ ಜಂಗಮ ಸಂಪ್ರದಾಯಕರ ಮತ್ತು ಗುರು ಜಂಗಮೇತರ ವಂಶೀಯರ ಅಷ್ಟಾವರಣಾಚರಣೆಯಲ್ಲಿ ತಾರತಮ್ಯ ಭಾವವುಂಟೆಂದು ಸ್ಪಷ್ಟವಾಗಿ ಕಂಡುಬರುವುದು.

ಸಾರಾಂಶವಿದು : ಲಿಂಗಧಾರಿಗಳಾದ ಇತರರು ಧರಿಸಿದ ಲಿಂಗಕ್ಕೂ, ವೀರಶೈವರು ಧರಿಸಿದ ಲಿಂಗಕ್ಕೂ ಯಾವ ತಾರತಮ್ಯವುಂಟೋ ಅವೇ ತಾರತಮ್ಯವು ವೀರಶೈವರಲ್ಲಿಯ ಪೂಜ್ಯ ಪೂಜಕರು ಧರಿಸಿರುವ ಲಿಂಗದಲ್ಲಿಯೂ ಉಂಟು. ಎಲ್ಲರೂ ಧರಿಸಿದ ಲಿಂಗದಲ್ಲಿ ತಾರತಮ್ಯವಿಲ್ಲದೆ ಒಂದೇ ಎಂದು ಹೇಳಲಿಕ್ಕೆ ಬರುವುದಿಲ್ಲ. ಗುರು ಜಂಗಮರನ್ನು ಅಗಲಿದರೆ ಅಥವಾ ಅಪ್ಪಣೆಯನ್ನು ಮೀರಿದರೆ ಅದರಂತೆ ಲಿಂಗವನ್ನಗಲಿದರೆ ಅಪೂಜ್ಯತೆಯುಂಟಾಗುತ್ತದೆ.

೧೩. ಗುರುವು ದೀಕ್ಷಾಕಾಲದಲ್ಲಿ ಶಿಷ್ಯನ ಮಸ್ತಕದಲ್ಲಿದ್ದ ಚಿತ್ಕಲೆಯನ್ನು ಲಿಂಗದಲ್ಲಿ ಸ್ಥಾಪಿಸಿ ಲಿಂಗದಲ್ಲಿದ್ದ ಶಿವಕಲೆಯನ್ನು ಶಿಷ್ಯನ ಪ್ರಾಣದಲ್ಲಿ ಸ್ಥಾಪಿಸಿ ಎರಡನ್ನು ಏಕೀಕರಿಸಿದ ನಂತರ ಲಿಂಗವು ಭಕ್ತನ ಅಂಗವನ್ನು ಬಿಟ್ಟು ಅಗಲಿ ಹೋದಲ್ಲಿ ಪರಸ್ಪರ ಐಕ್ಯತೆಗೂ-ಗುರ್ವಾಜ್ಞಾಪಾಲನೆಗೂ ಭಂಗ ಬರುವುದರಿಂದ ಗುರುವಿನ ಆಜ್ಞೆಗೂ ಲಿಂಗಕ್ಕೂ ಅಪೂಜ್ಯತೆಯುಂಟಾಗುವುದಲ್ಲದೆ ಲಿಂಗವನ್ನಗಲಿದ ಸಾಧಕನಿಗೆ ಭಕ್ತತ್ವದಿಂದ ಪಾತಿತ್ಯವುಂಟಾಗುವುದು. ಲಿಂಗವು ಭಕ್ತನ ದೇಹವನ್ನಾಶ್ರಯಿಸಿಕೊಂಡು ಪೂಜ್ಯತ್ವವನ್ನು ಹೊಂದಿರುವುದು. ಭಕ್ತದೇಹದಿಂದಗಲಿ ಲಿಂಗವು ಸ್ವತಂತ್ರಿಸಿ ಪೂಜಾರ್ಹವಾಗಲಾರದು. ಭಕ್ತ ದೇಹಸಾಪೇಕ್ಷೆಯುಳ್ಳ ಲಿಂಗವು ಅಗಲಿ ಹೋದಲ್ಲಿ ಲಿಂಗತ್ವವು ಲುಪ್ತವಾಗುವುದು. ಗುರುಕುಲೋತ್ಪನ್ನ ಗುರುಕರ ಸಂಜಾತ ಗುರುಕುಲವಾಸಿ ಸಾಧಕ ಸ್ಥಿತಿಯ ಗುರು ಜಂಗಮರಿಗೆ ಸ್ವಸ್ವರೂಪವಾದ ಗುರುದತ್ತ ಲಿಂಗವು ವಿಯೋಗವಾದಲ್ಲಿ ಗುರ್ವಾಜ್ಞಾ

ಪೂರ್ಣಸಿದ್ಧತೆಯ ಉಳುಮೆಯ ಮೂಲಕ ಕ್ರಿಯಾಲೋಪವೆನಿಸಿದ್ದರಿಂದ ಅಪೂಜ್ಯತೆಯೂ ಲಿಂಗಕ್ಕೆ ಭ್ರಷ್ಟತೆಯೂ ಪ್ರಾಪ್ತವಾಗುವುದು. ಪೂರ್ಣಸಿದ್ಧತೆಯನ್ನು ಹೊಂದಿದವರ ಶರೀರದಲ್ಲಿದ್ದ ಲಿಂಗಕ್ಕೂ ಪ್ರಾಣಕ್ಕೂ ಎಂದೂ ವಿಯೋಗವಾಗಲಾರದು. ಇದರಿಂದ ಸಾಧಕ ದೆಸೆಯಲ್ಲಿ ಅವಧಾನಿಗಳ ಅವಶ್ಯಕತೆಯಿಲ್ಲ. ಲಿಂಗಮೂರ್ತಿಯಲ್ಲಿ ಅವಧಾನಕ್ಕೆ ಅವಕಾಶವೇ ಇಲ್ಲದ್ದರಿಂದ ಸಾಧ್ಯ ಸಾಧಕದೆಸೆಯು ಇಲ್ಲವು. ಭಕ್ತಿಯಲ್ಲಿ ವ್ಯಾಪ್ಯವ್ಯಾಪಕತ್ವವು ಸಿದ್ಧ ಸಾಧಕತ್ವವು ಅವಧಾನಾದಿಗಳ ಪ್ರಯತ್ನದಿಂದ ಉಂಟಾಗಿ ತೋರುವಲ್ಲಿ ಗುರು ಜಂಗಮರಲ್ಲಿ ತೋರುವ ಸ್ಥಿತಿಯನ್ನು ಹೇಳುವುದೇನು ?

೧೪. ಪೂಜಕರಾದ ಅಷ್ಟಾವರಣ-ಪಂಚಾಚಾರವುಳ್ಳ ವೀರಶೈವರಿಗೆಲ್ಲ ಪಾದೋದಕವು ಅವಶ್ಯಕವಾಗಿ ಬೇಕು. ಅದರಂತೆ ಪೂಜ್ಯರಾದ ಗುರು ಲಿಂಗ ಜಂಗಮಗಳಿಗಾದರೂ ಬೇಕು. ಲಿಂಗಕ್ಕೆ ಹೇಗೆ ಬೇಕೆಂದರೆ : ಭಕ್ತನಿಚ್ಛೆಯು. ಭಕ್ತನ ಶಿರದರಮನೆಯ ಚಿತ್ಕಲಾ ವಸ್ತುವೇ ಲಿಂಗವು. ಅದೇ ಅವನ ಕರಗತವಾದದ್ದು. ಲಿಂಗವು ಭಕ್ತನನ್ನಾಶ್ರಯಿಸಿಕೊಂಡೇ ಇರಬೇಕಾಗುತ್ತದೆ. ಭಕ್ತನು ಲಿಂಗ ಭೋಗೋಪ ಭೋಗಿಯಾಗಿರುತ್ತಾನೆ. ಅನ್ನೋನ್ಯಾಪೇಕ್ಷೆಯಿರುವುದರಿಂದ ಭಕ್ತನಿಗೆ ಪಾದೋದಕ ಬೇಕಾಗಿದ್ದರೆ ಲಿಂಗಕ್ಕಾದರೂ ಬೇಕು. ಇದರಂತೆ ಗುರು ಜಂಗಮರಿಗೂ ಅವಶ್ಯ ಅವರವರ ಸ್ವಸ್ವರೂಪವಾದ ಲಿಂಗಕ್ಕೂ ಬೇಕು.

 ಪಾದೋದಕವು ಸಂಬಂಧದಿಂದ ದಶವಿಧವಾಗಿರುವುದು. ಮುಖ್ಯವಾಗಿ ತ್ರಿವಿಧವೆನಿಸಿರುವುದು. ಇದು ಸಹಜವು.

೧೫. ಗುರುಲಿಂಗ ಜಂಗಮರಲ್ಲಿ ಅಂತಃಪ್ರಭೇದಗಳಿರುವುದರಿಂದ ಲಿಂಗದಲ್ಲಿದ್ದ ಗುರುಜಂಗಮರ ಸಾನಿಧ್ಯದಿಂದ ಅನಿರ್ವಾಹ ಪಕ್ಷದಲ್ಲಿ ಸಂಬಂಧಾಚರಣೆಯಿಂದ ಪಾದೋದಕ ಪ್ರಸಾದಗಳ ನಿರ್ವಾಹವಾಗುತ್ತದೆ.  

೧೬. ಮುಖ್ಯವಾಗಿ ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕಗಳೆಂದು ಮೂರು ಪ್ರಕಾರಗಳು. ಇವು ಒಂದೊಂದೇ ಮೂರು ಮೂರು ಭೇದಗಳಿಂದ ಕೂಡಿ ನವವಿಧವಾಗಿರುವುದು. ಇವೆಲ್ಲವುಗಳ ಸಮಷ್ಠಿಯಾದುದೇ ಮಹಾ ಪಾದೋದಕ ಜಂಗಮ ಪಾದೋದಕವು. ಇದು ಗಣನೆಯಲ್ಲಿ ಸೇರಲು ದಶ ವಿಧವಾಯಿತು. ಈ ದಶವಿಧ ಪಾದೋದಕದಲ್ಲಿ ಸಂಬಂಧದಿಂದಲೂ ಸಹಜದಿಂದಲೂ ಅನೇಕ ರೀತಿಯಿಂದ ಸಂಬಂಧವುಂಟು. ಸಹಜವು ಒಂದೇ ಪ್ರಕಾರವಿದ್ದು ಸಂಬಂಧದಿಂದ

ಅನೇಕ ವಿಧವಾಗಿರುವುದು. ಸಂದರ್ಭಾನುಸಾರ ಸಂಬಂಧವನ್ನೂ ಮತ್ತೆ ಅನೇಕ ಪ್ರಕಾರ ಮಾಡುವುದುಂಟು. ಮೂರು ಪಾದೋದಕಗಳಲ್ಲಿ ಒಂದೊಂದರೊಳಗೆ ಮೂರು ಮೂರು ಲಿಂಗಗಳ ಸಂಬಂಧ ಮತ್ತು ಪರತರ ಶಿವಲಿಂಗ ಸಂಬಂಧ ; ಇವುಗಳಿಂದ ದಶವಿಧವಾಗಿರುವುದು. ಪಂಚಾಂಗುಲಿಗಳಿಂದ ಅಂದರೆ ಸೂಚಕ ಮುದ್ರೆಯಿಂದ ಎರೆದು ಸ್ವೀಕರಿಸುವುದೇ ದೀಕ್ಷಾಪಾದೋದಕ ಅಥವಾ ಗುರು ಪಾದೋದಕ; ಶಂಖಮುದ್ರೆಯಲ್ಲಿ ಲಿಂಗದ ಮೇಲೆ ಅಭಿಷೇಕ ಮಾಡಿ ಪೂಜಿಸಿದ ಪಾದೋದಕವನ್ನು ಲಿಂಗವನ್ನೆತ್ತಿ ಸ್ವೀಕರಿಸುವುದೆ ಶಿಕ್ಷಾಪಾದೋದಕ ಅಥವಾ ಲಿಂಗ ಪಾದೋದಕ (ಕ್ರಿಯಾ ಪಾದೋದಕ)ವೆಂದು ಪರ್ಯಾಯ ನಾಮಗಳು. ಜಿಹ್ವಾಗ್ರಕ್ಕೆ ಪಾತ್ರೆಯನ್ನೆತ್ತಿ ಇಲ್ಲವೆ ಚಿನ್ಮುದ್ರೆಯಿಂದಾಗಲಿ ಕುರಂಗ ಮುದ್ರೆಯಿಂದಾಗಲಿ ಮುಟ್ಟಿ ಸ್ವೀಕರಿಸುವುದೇ ಮೋಕ್ಷ ಪಾದೋದಕ ಅಥವಾ ಜ್ಞಾನ ಪಾದೋದಕ (ಜಂಗಮ ಪಾದೋದಕ)ವೆಂದು ಹೆಸರುಗಳು. ಪಂಚಾಂಗುಲಿಗಳ ಕೂಟದಲ್ಲಿ ನಿರಾಭಾರಿಗಳು ಸಮಷ್ಟಿರೂಪ ಪ್ರಣವನನ್ನು ಭಾವಿಸಿ ಅದೇ ತನ್ನ ಗುರುವೆಂಬ ಭಾವನೆಯಿಂದ ಸ್ವೀಕರಿಸುವ ಕಾರಣ ಗುರು ಪಾದೋದಕವು; ಹಸ್ತದಲ್ಲಿಯೆ ಲಿಂಗ ಸಂಬಂಧವಿರುವುದರಿಂದಲೂ ಲಿಂಗಾಭಿಷಿಕ್ತವಾದ್ದರಿಂದಲೂ ಲಿಂಗ ಪಾದೋದಕ; ಜಿಹ್ವಾಗ್ರದಲ್ಲಿ ಜಂಗಮ ವಿರುವದರಿಂದ ಜಂಗಮಕ್ಕೆ ಮುಟ್ಟಿಸಿ ತೆಗೆದುಕೊಳ್ಳುವುದರಿಂದ ಜಂಗಮ ಪಾದೋದಕವೆಂಬ ಹೆಸರು.

೧೭. ಭ್ರಮಾರೂಪ ಸಂಸ್ಕಾರಕ್ಕೆ ಕಾರಣವಾದ ಕಲ್ಪನೆಯ ಪದಾರ್ಥ ಲಕ್ಷಣವು ಅರ್ಥಾತ್ ಕಲ್ಪಿತ ತತ್ತ್ವವೇ ಪದಾರ್ಥ ಲಕ್ಷಣವು. ಸಚ್ಚಿದಾನಂದತ್ವವೆ ಪ್ರಸಾದ ಲಕ್ಷಣವು. ಸಾಧಕರಿಂದ ವೀರಮಾಹೇಶ್ವರರು ಸ್ಥೂಲ ಪದಾರ್ಥವನ್ನು ತ್ಯಜಿಸಿ ಸೂಕ್ಷ್ಮ ರೂಪ ಪದಾರ್ಥವನ್ನು ಗುರ ಲಿಂಗ ಜಂಗಮಕ್ಕೆ ಅರ್ಪಿಸಿ ತನ್ಮುಖದಿಂದ ಒಕ್ಕುಳಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

೧೮. ಗುರು ಜಂಗಮರ ಪಾದೋದಕವು ಪ್ರಸಾದವಲ್ಲ. ಪದಾರ್ಥವೆಂದರೆ ಗುರು ಲಿಂಗ ಜಂಗಮರಿಗೆ ಅರ್ಪಣವಾದ ಪ್ರತಿಯೊಂದು ಪರಿಶುದ್ಧ ವಸ್ತುವು ಪ್ರಸಾದವಾಗುವುದೆಂಬ ಪ್ರಮಾಣ ಅನುಭವಾದಿಗಳಿಗೆ ವಿರೋಧವಾಗುವುದು. ಪ್ರಸಾದವೆಂದರೆ ಅಷ್ಟಾವರಣಗಳಲ್ಲಿ ಅಂತಿಮವಾದ ಪಾದೋದಕ ಸೇವನಾಂತರ ಗ್ರಹಿಸಬೇಕಾದ ಪ್ರಸಾದವು; -ಇದಕ್ಕೆ ಬೇರೆಯಾದುದೊ ? ಒಂದೆಯೊ ? ಒಂದೆಯಾದರೆ ಅದರ ಸ್ವೀಕಾರವೇಕೆ ? ಇದೇ ಪ್ರಸಾದವಾದರೆ ಅಷ್ಟಾವರಣಗಳು ಹೇಗೆ ನಿರ್ವಾಹಕ ಮಾಡಲ್ಪಡುವವು ? ಬೇರೆಯಾದರೆ ಪಾದೋದಕಕ್ಕೆ ಕಲ್ಪಿತತ್ವದಿಂದ ಪದಾರ್ಥತ್ವ ವುಂಟಾಗುವುದು. ಮತ್ತು ಗುರು ಲಿಂಗ ಜಂಗಮಕ್ಕೆ ಅರ್ಪಣವಾದುದು ಪ್ರಸಾದ ವಾಗುವುದೆಂಬ ಪ್ರಮಾಣಗಳಿಗೆ ವ್ಯರ್ಥತೆಯುಂಟಾಗುವುದು. ಇದಲ್ಲದೆ ಅಷ್ಟಾವರಣವೆ ಅಂಗವಾಗಿ ಪಂಚಾಚಾರವೆ ಪ್ರಾಣವಾದ ವೀರಶೈವತ್ವಕ್ಕೆ ಅಂಗಲೋಪದಿಂದ ದೋಷವುಂಟಾಗುವುದು. ಪಾದೋದಕವು ಪ್ರಸಾದವೆನಿಸುವುದು. ಪಾದೋದಕವು ಪೂಜ್ಯರ ಮಸ್ತಕದಲ್ಲಿ ಸಚ್ಚಿದಾನಂದ ಸ್ವರೂಪವಾಗಿರುವದೆಂದು ಈ ಮೊದಲು ಉಕ್ತವಾಗಿರುವುದು. ಅಂತಹ ಸಚ್ಚಿದಾನಂದ ಸ್ವರೂಪವೆ ಪ್ರಸಾದವೆನಿಸುವುದು. ಆ ಪ್ರಸಾದವೆ ಪೂಜಕನ ಇಚ್ಛಾ ಜ್ಞಾನ ಕ್ರಿಯಾದಿಗಳಿಂದ ಚಲನಕ್ರಿಯೆಯನ್ನು ಹೊಂದಿ ಚಿದ್ರಸವಾಗಿ ಬಹಿಷ್ಕರಿಸುವುದರಿಂದ ಪ್ರಸಾದವೆನಿಸಿರುವುದು. ಆ ಪೂಜ್ಯರಾದ

ಮೂರ್ತಿಗಳಲ್ಲಿ ಈ ಪಾದೋದಕ ಸಂಬಂಧಗಳಿಂದ ಇಚ್ಛಾ ಜ್ಞಾನ ಕ್ರಿಯೆಗಳೇನೂ ಇಲ್ಲದೆ ಸ್ವಸ್ವರೂಪಾನು ಸಂಧಾನವೇ ಇರುವುದು. ಇಂತಹ ಪೂಜ್ಯರ ಮಸ್ತಕಗತವಾದ ಚಿದ್ಬಿಂದುವೆ ದ್ರವಿಸಿ ಸುಷುಮ್ನಾದ್ವಾರವಾಗಿ ಪಾದಾಂಗುಷ್ಪಗಳಿಂದ ಬಹಿಷ್ಕರಿಸಿದಲ್ಲಿ ಗುರು ಲಿಂಗ ಜಂಗಮ ಪಾದೋದಕ ರೂಪವಾಗಿ ಕಂಗೊಳಿಸುವುದರಿಂದ ಪಾದೋದಕ ರೂಪ ಪ್ರಸಾದವೆನಿಸುವುದು. ಇದೇ ಪ್ರಸಾದವಾದರೆ ಮುಂದೆ ಪ್ರಸಾದವನ್ನು ಏಕೆ ಪಡೆಯಬೇಕೆಂದರೆ : ಪ್ರಸಾದವು ಸಾಮಾನ್ಯ ವಿಶೇಷವೆಂದು ಎರಡು ಬಗೆಯಾಗಿರುವುದು. ಈ ಪಾದೋದಕ ರೂಪ ಪ್ರಸಾದದ ಸಾಮಾನ್ಯ ರೂಪದಿಂದ ಪ್ರಸಾದವೆನಿಸಿ ವಿಶೇಷ ರೂಪದಿಂದ ಪಾದೋದಕವೆನಿಸುವುದು. ಇದರಂತೆ ಅಷ್ಟಾವರಣಗಳಲ್ಲಿಯೂ ಪ್ರಸಾದತ್ವವು ಸಾಮಾನ್ಯ ನೀತಿ ರೀತಿಯಿಂದಿರುವುದು. ಅಂದರೆ ಭಸ್ಮ ರುದ್ರಾಕ್ಷಿ ಮಂತ್ರಾದಿಗಳು ಸಾಮಾನ್ಯವಾಗಿ ಪ್ರಸಾದವಾಗಿದ್ದರೂ ವಿಶೇಷತ್ವದಿಂದ ಭಸ್ಮರುದ್ರಾಕ್ಷಿಗಳೇ ಆಗುವುವು. ಕಡೆಯದಾದ ಈ ಪ್ರಸಾದವು ಫಲರೂಪವಾದ್ದರಿಂದ ಇದರಲ್ಲಿ ಸಾಮಾನ್ಯ ವಿಶೇಷ ರೂಪ ಪ್ರಸಾದತ್ವವಿರುವುದು. ಸಾಮಾನ್ಯ ವಿಶೇಷತ್ವಗಳೆರಡೂ ಇಲ್ಲಿ ಐಕ್ಯವಾಗಿರುವುದರಿಂದ ಐಕ್ಯ ಸ್ಥಲದಲ್ಲಿ ನಿಲುಕಡೆಯೆನಿಸಿರುವುದು.

೧೯. ವೀರಶೈವ ಸಿದ್ಧಾಂತವು .ದ್ವೈತಾದ್ವೈ ತವಾದ್ದರಿಂದ ಗುರು ಲಿಂಗ ಜಂಗಮರಲ್ಲಿ ಭೇದಾಭೇದ ಭಕ್ತನಿಗೆ ಇರಬೇಕು. ಭಕ್ತ ಶಬ್ದವನ್ನು ವಿಚಾರಿಸಿದರೆ ಭಕ್ತಿಪ್ರಧಾನವುಳ್ಳವನೆ ವೀರಶೈವನೆಂದು ತಿಳಿಯುವುದರಿಂದಲೂ, ಭೇದಾಭೇದವನ್ನುಂಟುಮಾಡುವುದರಿಂದ ವೀರಶೈವ ಮತವು ಭಾಕ್ತಿಕ ಮತವಾದ್ದರಿಂದಲೂ, ಭೇದ ಪದವು ಭಾಗ-ವಿಭಾಗ ಮಾಡುವ ಸ್ವಭಾವವುಳ್ಳದ್ದೆಂತೂ, ಪೂಜ್ಯ ಪೂಜಕ ವಸ್ತುಗಳಲ್ಲಿ ಭೇದಾ ಭೇದವನ್ನೆಸಗುವ ಸಾಮರ್ಥ್ಯವುಳ್ಳದ್ದೆಂತಲೂ, ಪ್ರಸಾದ ಭಕ್ತಿ-ಮುಕ್ತಿಗಳಿಗೆ ಏಕದೇಶ ಸ್ಥಿತಿಯಿರುವುದರಿಂದ ಭೇದಾ  ಭೇದಭಾವನೆಯು ಅವಶ್ಯ ಇರಬೇಕಾಗುವುದು. ಆದ್ದರಿಂದ ನಿರ್ವಿಶೇಷೋಪಾಸನೆಯು ಘಟಿಸುವುದು.

೨೦. ಲಿಂಗಪಾದೋದಕವನ್ನು ಗುರು ಜಂಗಮರ ಮಸ್ತಕಕ್ಕೆ ಎರೆಯದಿದ್ದರೂ ಅದು ಲಿಂಗ ಪಾದೋದಕವಾಗುವುದು ಎಂಬ ವಿಷಯವನ್ನು ಶಾಸ್ತ್ರವು ವಿಧಿಸಿರುವುದಿಲ್ಲ; ವಿಧಿಸಬೇಕಾಗಿಯೂ ಇಲ್ಲ. ಮತ್ತು ಅಂಗರೂಪ ಭಕ್ತನಿಗೆ ಗುರು ಜಂಗಮ ಪಾದೋದಕವನ್ನು ಲಿಂಗದ ಮೇಲೆ ಅಭಿಷೇಕ ಮಾಡದಿದ್ದರೆ ಗುರು ಜಂಗಮರ ಪಾದೋದಕವಾಗುವುದಿಲ್ಲ. ಆಚಾರದಲ್ಲಿ ಸಂಬಂಧವೆಂತಲೂ, ಸಹಜವೆಂತಲೂ ಎರಡು ವಿಧವಾಗಿರುವುದು. ಇವೆರಡನ್ನೂ ಪರಸ್ಪರ ಭಿನ್ನ ಭಿನ್ನ ಕಾಲದಲ್ಲಿ ಆಚರಿಸಿ ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಹೊಂದಬೇಕು. ಗುರು ಜಂಗಮರು ಪ್ರತ್ಯಕ್ಷವಿಲ್ಲದಾಗ ಲಿಂಗಮೂರ್ತಿಯಲ್ಲಿ ಗುರುಜಂಗಮರನ್ನು ಅನುಸಂಧಾನಿಸಿ ಆ ಲಿಂಗಮೂರ್ತಿಯನ್ನು ನಿಯಮಿತ ಸ್ಥಿತಿಯಲ್ಲಿರಿಸಿ ಹಸ್ತಪಾದಾದಿಗಳನ್ನು ಭಾವಿಸಿ  ವಾಮ ದಕ್ಷಿಣ ಪಾದಾಂಗುಷ್ಠಗಳನ್ನೂ, ತನ್ನ ಧ್ಯೇಯ ಸ್ಥಾನವನ್ನೂ ಕಲ್ಪಿಸಿ ಗುರು ಲಿಂಗ ಜಂಗಮರ ಸ್ವರೂಪವನ್ನು ಮಂತ್ರಾದಿಗಳ ಅವಧಾನತೆಯಿಂದ ಎರೆದರೆ ಅವ್ಯಕ್ತವಾದ ಶಿವಸ್ವರೂಪ ಪಾದೋದಕವು ವ್ಯಕ್ತವಾಗುವುದು. ಹೀಗಾಗುವ ಪೂರ್ವದಲ್ಲಿ ಶಿವನು

ಅದೇ ಆತ್ಮನಲ್ಲಿ ತನ್ನೊಡನೆ ಐಕ್ಯವಾಗಬೇಕಾಗಿರುವುದು. ಆದರೆ ಹೇಗೆ ಸೃಷ್ಟಿಯೋ ಹಾಗೆ ಸ೦ಹಾರವಿರಬೇಕಾಗುವುದು.

೨೧. ಪೂಜ್ಯರಾದ ಗುರು ಜಂಗಮರಲ್ಲಿ ಪಾದೋದಕವನ್ನು ಕೊಡುವ ಇಚ್ಛೆ ಯತ್ನಾದಿಗಳು ಇಲ್ಲವೇ ಇಲ್ಲ. ಪ್ರದಾತೃತ್ವವು ಗುರು ಜಂಗಮರ ಭಾವನೆಯಲ್ಲಿ  ಎಂದೂ ಬರುವುದಿಲ್ಲ. ಸುಮ್ಮನೆ ನೋಡುವವರಿಗೆ ಮಾತ್ರ ಇದ್ದಂತೆ ಕಾಣಿಸಬಹುದು. ಪೂಜ್ಯರಾದ ಗುರು ಜಂಗಮರ ಮಸ್ತಕದ ಮಧ್ಯ ಸಹೃದಯದಲ್ಲಿ ನೆಲೆಸಿರುವ ಶಿವನಂದಾಮೃತವು ಪೂಜಕರ ಇಚ್ಛೆ ಯತ್ನಾದಿಗಳಿಂದ ಸುಷುಮ್ನಾ ಮಾರ್ಗವಾಗಿ ಪಾದಾಂಗುಷ್ಠ ದ್ವಾರದಿಂದ ಬಹಿಷ್ಕರಿಸಿ ಭಕ್ತನ ಹಸ್ತಗತವಾಗುವುದು. ಆ ಭಕ್ತನು ತಾನು ಪಡೆದುಕೊಂಡು ಪರಮಾನಂದ ಶಿವಸ್ವರೂಪವೇ ಪ್ರತ್ಯಕ್ಷವಾಗಿರುವುದನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸದೆ ಸ್ವೀಕರಿಸಬಾರದು. ಸ್ವೀಕರಿಸಿದ್ದಾದರೆ ಪಾತಿತ್ಯವುಂಟಾಗುವುದೆಂಬ ಶಾಸ್ತ್ರವಿಧಿಗನುಸರಿಸಿ ಆ ಪೂಜ್ಯ ಮೂರ್ತಿಗಳಿಗೆ ಭಕ್ತಿಪೂರ್ವಕ ಶಿವನಂದಾಮೃತವನ್ನು ಅರ್ಪಿಸಿದರೆ ಅವರು ಕೈಕೊಳ್ಳಲೇಬೇಕು. ಪಕ್ಷಾಂತರ ಕೈಕೊಳ್ಳದಿದ್ದರೆ ಭಕ್ತನ ಸಶಾಸ್ತ್ರೀಯವಾದ ಭಕ್ತಿಯನ್ನು ತಿರಸ್ಕರಿಸಬಾರದೆಂಬ ಶಾಸ್ತ್ರೋಕ್ತಿಯ ಉಲ್ಲಂಘನೆಯೇ ವೀರಶೈವ ಮತದ ಭಾಕ್ತಿಕ ಧರ್ಮಾಚರಣೆಗೆ ಲೋಪವುಂಟಾಗುವುದು. ಆದ್ದರಿಂದ ಯೋಗ್ಯವೆಂದು ಅದನ್ನು ಸ್ವೀಕರಿಸಿದರೆ ದತ್ತಾಪಹಾರ ದೋಷವೆನಿಸುವುದು. ಮಧ್ಯೆ ಸಮಷ್ಟಿಯಿಂದ ಆದಿ ಸಮಷ್ಟಿಗೆ ಹೋಗಬೇಕಾದುದು ಸ್ವಭಾವಸಿದ್ಧವಾದುದು. ದತ್ತಾಪಹಾರ ದೋಷವೆಂದರೆ ದಾನವನ್ನು ಕೊಡತಕ್ಕ ವಸ್ತುವಿನಲ್ಲಿ ತನ್ನದೆಂದು ತೆಗೆದುಕೊಂಡು ತನ್ನ ಸ್ವಾರ್ಥಕ್ಕಾಗಿ ಉಪಯೋಗ ಮಾಡುವುದೆ ದತ್ತಾಪಹಾರ ದೋಷವೆನಿಸುವುದು.

 ಉದಾಹರಣೆಗಾಗಿ : ಗುರು ಲಿಂಗ ಜಂಗಮಕ್ಕೆ ತನು ಮನ ಧನಗಳನ್ನು ಸಂಕಲ್ಪಪೂರ್ವಕ ಅರ್ಪಿಸಿ ಮರಳಿ ಆ ಗುರು ಜಂಗಮರ ಸೇವೆಗಾಗಿಯೂ ಆ ಗುರು ಜಂಗಮರ ಇಚ್ಛಾನುಸಾರವಾದ ವೀರಶೈವ ಧರ್ಮಾರ್ಥ ಕಾರಗಳಿಗಾಗಿಯೂ ಆ ತನು ಮನ ಧನಗಳ ವಿನಿಯೋಗಿಸದೆ ತನ್ನ ಮತ್ತು ತನ್ನವರ ಶರೀರಾದಿಗಳ ರಕ್ಷಣೆಗಾಗಿಯೂ ಬಂಧು ಬಳಗದವರ ಪೋಷಣೆಗಾಗಿಯೂ ಆ ತನು ಮನ ಧನಗಳನ್ನು ಪ್ರಯೋಗಿಸಿದರೆ ದತ್ತಾಪಹಾರ ದೋಷವೆನಿಸುವುದು. ಮತ್ತು ಶಿವನು ಲೋಕದಲ್ಲಿ ಅನೇಕ ಪದಾರ್ಥಗಳನ್ನು ಕೊಟ್ಟಿರುವನಷ್ಟೆ ? ಭಕ್ತನು ಭಕ್ತಿಯಿಂದ ಆ ಪದಾರ್ಥಗಳನ್ನು ಶಿವನಿಗೆ ಅರ್ಪಿಸಿದರೆ ಅವುಗಳನ್ನು ಪರಮಾತ್ಮನು ಸ್ವೀಕರಿಸದಿದ್ದರೆ ಆ ಭಕ್ತನು ಹೇಗೆ ಉದ್ಧಾರವಾಗಬೇಕು ? ಸ್ವೀಕರಿಸಿದ್ದಾದರೆ ಶಿವನು ದತ್ತಾಪಹಾರಕನಾಗುವನೇನು ? ಅದರಂತೆ ಪರಶಿವನ ಆಜ್ಞಾನುಸಾರವಾಗಿಯೂ ಜಗದ್ದಿತಾರ್ಥವಾಗಿಯೂ ಅವತರಿಸಿದ ಗುರು ಇಚ್ಛಾನುಸಾರವಾಗಿಯೂ ಜಂಗಮರ ಉತ್ತಮಾಂಗಗತ ಚಿದ್ರಸವನ್ನು ಶಿಷ್ಯನ ಪ್ರಾರ್ಥನಾದಿಗಳಿಂದ ಸಾಕ್ಷತ್ಕರಿಸಿದ್ದನ್ನು ಭಕ್ತನು ಭಕ್ತಿಪೂರ್ವಕ ಆರ್ಪಿಸಲು  ಅದನ್ನು ಆ ಪೂಜ್ಯರು ಸಸ್ವರೂಪವಾದ ಲಿಂಗಕ್ಕರ್ಪಿಸಿ ಆ ಲಿಂಗಮೂರ್ತಿಯ ಕೃಪಾಪ್ರಸಾದವನ್ನು ಸೇವಿಸಿದುದಕ್ಕೆ ದತ್ತಾಪಹಾರ ದೋಷವು ವಿರುವುದೆಂದು ಹೇಳುವ ಬಗೆ ಹೇಗೆ ? ಅಲ್ಲದೆ ನಾವು ನಿತ್ಯಲಿಂಗ ಪೂಜೆಯಲ್ಲಿ ಲಿಂಗಕ್ಕೆ ಅರ್ಪಿಸಿದುದನ್ನೆಲ್ಲ ಲಿಂಗವು ಕೈಕೊಂಡರೆ ಅದೂ ಸಹ ಲಿಂಗದ ದತ್ತಾಪಹಾರ ವಾದೀತಲ್ಲವೆ ?

೨೨. ಗುರು ಕರುಣಿಸಿದ ಲಿಂಗವನ್ನು ಪೂಜ್ಯವೆಂದು ತಿಳಿದು ಆರಾಧಿಸುವರು. ಆ ಲಿಂಗಕ್ಕೆ ಮಾತೃಸ್ಥಾನವಾದ ಗುರುಮೂರ್ತಿಯನ್ನು ಮಾತ್ರ ಧಿಕ್ಕರಿಸುವುದು ತನ್ನ ಜನಕನ ಮುಖ್ಯ ಸಾಮರ್ಥ್ಯವನ್ನು ತಿರಸ್ಕರಿಸಿದವನಿಗಿಂತಲೂ ಅಧಿಕವಾದ

ದೋಷವಾಗುವುದು. ಗುರುವಿಲ್ಲದೆ ಲಿಂಗ ದೊರೆಯದು. ಕಾರಣ ಸಾಧಕ ಗುರುವಾಗಿದ್ದರೂ ಆತನಲ್ಲಿ ದೋಷವನ್ನು ಕಲ್ಪಿಸಬಾರದು; ಗುಣವನೆಣಿಸಬಾರದು. ಶಿವಸ್ವರೂಪರಾದರೂ ಸ್ವಸ್ವರೂಪ ಲಿಂಗಭಕ್ತರು ಎಣಿಸಿದ ಗುರು ಜಂಗಮರು ತಮ್ಮ

ಅನುಸಂಧಾನದ ನಿಲುಕಡೆಗೆ ಅತೀತವಾದ ಅಣುಚಕ್ರದ ನಿರಂಜನ ಲಿಂಗದಿಂದ ಭಾವಲಿಂಗಕ್ಕೆ ಪ್ರಾಣರೂಪವಾದ ಪರ ಜಂಗಮದಿಂದೊಗೆದ ಚಿತ್ಕಲೆಯೇ ಭಕ್ತನ ಭಕ್ತಿ ಪ್ರಾರ್ಥನಾದಿಗಳಿಂದ ಶಿಖಾಚಕ್ರಕ್ಕೆ ಆವಿರ್ಭವಿಸಿದಲ್ಲಿ ಪ್ರಾಣಲಿಂಗಕ್ಕೆ ಚೇತನಾ

ರೂಪವಾದ ಚರಜಂಗಮದಿಂದೊಗೆದು ಚಿನ್ನಾದ ಸ್ವರೂಪವನ್ನು ಧರಿಸಿ ಅಲ್ಲಿಂದ ಭಕ್ತನ ಪ್ರಾರ್ಥನೆಯ ವಿಶೇಷದಿಂದ ಬ್ರಹ್ಮರಂಧ್ರಕ್ಕೆ ಅವತರಿಸಿ ಅಲ್ಲಿಯ ಇಷ್ಟಲಿಂಗಕ್ಕೆ ಚೇತನ ಸ್ವರೂಪವಾದ ಸ್ವಯಜಂಗಮದಿಂದೊಗೆದ ಚಿದ್ಬಿಂದುವೇ ಚಿದ್ರಸವೆನಿಸಿ ಭ್ರೂಮಧ್ಯಾದಿ ಆಧಾರಾಂತವಾದ ಮಹಾಲಿಂಗಾದಿ ಆಚಾರ ಲಿಂಗಾಂತಮಾದ ಷಡ್ಲಿಂಗಗಳನ್ನು ಭಕ್ತನು ಪ್ರಾರ್ಥಿಸಿ ಭಾವನಾದಿ ಸಂಸ್ಕಾರ ವಿಶೇಷದಿಂದ ಆಯಾ ಲಿಂಗಗಳಿಂದ ಆಯಾ ಸ್ಥಾನಗಳಿಗೆ ಅವತರಿಸುತ್ತ ಮೂಲಾಧಾರಗತವಾದ ಆಚಾರಲಿಂಗ ಸ್ಥಾನದಲ್ಲಿ ಇತ್ತೆರನಾಗಿ ಲಿಂಗಾಂಗ ಶಿವಶಕ್ತಿ ಗುರುಲಿಂಗ ಈ ಅಪರ ಪರ್ಯಾಯ ನಾಮಗಳುಳ್ಳ ಪಾದಾಂಗುಷ್ಠ ದ್ವಯಗಳಿಂದ ಆಯಾ ಸ್ವರೂಪವನ್ನು ಹೊಂದಿ ಬಲದಂಗುಷ್ಠದಲ್ಲಿ ಗುರು  ಪಾದೋದಕವಾಗಿ   ಎಡದಂಗುಷ್ಠದಲ್ಲಿ ಲಿಂಗಪಾದೋದಕವಾಗಿ ಅವತರಿಸಿದ ನಂತರ ಆ ಎರಡು ಅಂಗುಷ್ಠಗಳ ಮಧ್ಯದಲ್ಲಿ ಸಂಬಂಧದಿಂದುಂಟಾದ ಸಾಮರಸ್ಯ ರೂಪಾದ ಜಂಗಮ ಪಾದೋದಕವು ಅವತರಿಸಿ ಆಯಾ ಮಂತ್ರ ತಂತ್ರ ಪ್ರಯೋಗಗಳಿಂದ ಸಂಸ್ಕರಿಸಿದ ಪರಿಶುದ್ಧ ಪಾತ್ರೆಯಲ್ಲಿ ಕಂಗೊಳಿಸುತ್ತಿರುವುದು.

೨೩. ಲಿಂಗದಲ್ಲಿ ಲಿಂಗ ಪಾದೋದಕವನ್ನು, ಗುರುವಿನಲ್ಲಿ ಗುರು ಪಾದೋದಕವನ್ನು, ಜಂಗಮದಲ್ಲಿ ಜಂಗಮ ಪಾದೋದಕವನ್ನು ಹೊಂದಬೇಕೆಂಬ ವಿಶೇಷ ವಿಧಿಯಲ್ಲ. ಶಿವ ಪಾದೋದಕವನ್ನು ಸ್ವೀಕರಿಸಬೇಕೆಂಬ ಸಾಮಾನ್ಯ ವಿಧಿಯಾಗಿರುವುದು. ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಸ್ವೀಕರಿಸಬೇಕು. ಅದರಲ್ಲಿ ಒಂದು ಕಡಿಮೆಯಾದರೂ ಅದು ಅನಶನವಾಗುವುದು; ಎಂಬ ವಿಶೇಷ ವಿಧಿಯು ಮಾತ್ರ ಇರುವುದು. ಗುರುಜಂಗಮರು ಸ್ವಪಾದೋದಕದಿಂದ ಸ್ವಪೂಜ್ಯವಾದ ಲಿಂಗಕ್ಕೆರೆಯುವರೆಂದು ಭ್ರಮಾದೃಷ್ಟಿಯುಳ್ಳವರಿಗೆ ಕಂಡರೂ ಪ್ರಮಾದೃಷ್ಟಿ ಯುಳ್ಳವರಿಗೆ ಮಾತ್ರ ಹಾಗೆ ಕಾಣದು. ಒಬ್ಬನು ಮಗಳನ್ನೂ ಮಡದಿಯನ್ನೂ ಆಲಂಗಿಸುವನು. ಆದರೆ ದೋಷದೃಷ್ಟಿಯುಳ್ಳವನಿಗೆ ಪುತ್ರಿಯ ಆಲಿಂಗನವೂ ಸಹ ದೋಷವಾಗಿಯೇ ಕಾಣುವುದು. ಪ್ರಮಾದೃಷ್ಟಿಯುಳ್ಳ ವಿಚಾರಿಗೆ ಮಾತ್ರ ಆ ಆಲಿಂಗನದ ನಿರ್ದೋಷದ ನಿಜಸ್ಥಿತಿಯು ಗೊತ್ತಾಗುವುದು. ಇದು ಸ್ವಚ್ಛವಾದ ನಂತರ ಪರಬ್ರಹ್ಮಸ್ವರೂಪ ಗುರು ಲಿಂಗ ಜಂಗಮದ ಪಾದೋದಕವು.

೨೪. ಪತಿ ಸ್ಥಾನವನ್ನು ಹೊಂದಿದವನು ಪೂಜ್ಯನು. ಪತ್ನಿ ಸ್ಥಾನಾಪನ್ನನಾದವನು ಪೂಜಕನು. ಪತಿರೂಪನಾದ ಪೂಜ್ಯನಿಂದ ಪತ್ನಿ ಸ್ವರೂಪನಾದ ಪೂಜಕನಲ್ಲಿ ಆವಿರ್ಭವಿಸಿ ಪಾದೋದಕ ಶಿಶುವು ತೋರುವುದು. ಇದಕ್ಕೆ ಉದಾಹರಣೆಗಾಗಿ ಕೊಟ್ಟಿರುವ

ಲೋಕಾನುಭವವಾದರೂ ವಿರೋಧಿಸದು. ಸತಿ-ಪತಿಗಳ ಸಾಮರಸ್ಯ ಸಂಯೋಗ ದಿಂದುಂಟಾಗುವ ಶಿಶುವು ಪತಿಯಲ್ಲಿ ಅವ್ಯಕ್ತರೀತಿಯಿಂದ ಬಿಂದುವಿನಷ್ಟು ಜೀವ ಚೈತನ್ಯ ರೂಪವಾಗಿ ಮೂರು ತಿಂಗಳು ವಾಸ ಮಾಡಿದ್ದು ಸತಿಪತಿಗಳ ಸಂಯೋಗ

ವಿಶೇಷದಿಂದ ಘನೀಭೂತವಾದ ಬಿಂದುವೇ ದ್ರವಿಸಿ ಆ ಜೀವ  ಚೈತನ್ಯದೊಡಗೊಂಡು ಜನನ ಧೃತಿಯೆನಿಸಿ  ಸತಿಯ ಗರ್ಭವನ್ನು ಪ್ರವೇಶಿಸಿ ಕ್ರಮದಿಂದ ಸಾವಯವ ರೂಪ ಪಿಂಡವು ವರ್ಧನವಾಗುತ್ತ ಕಡೆಗೆ ಬಹಿಷ್ಕೃತವಾಗಿ ಪುತ್ರರೂಪದಿಂದ ತೋರುವಂತೆ ಪೂಜ್ಯನಲ್ಲಿದ್ದ ಪಾದೋದಕವು ಪೂಜಕನಲ್ಲಿ ತೋರುವದಾದ್ದರಿಂದ ವಿರೋಧವೆನಿಸದು.

೨೫. ಅದು ತನ್ನ ಪಾದೋದಕವಲ್ಲ. ಹೇಗೆಂದರೆ : ವ್ಯಾಪ್ಯನಾದ ಗುರುವು ಅಥವಾ ಜಂಗಮವು ಅಭಿನ್ನವಾದ ಪರಲಿಂಗಾನುಭವದಿಂದ ಅನುಸಂಧಾನದಿಂದಿರುವಾಗ ಆ ಪಶ್ಚಿಮ ಚಕ್ರಗತವಾಗಿ ಸ್ವಸ್ವರೂಪದಿಂ ಘನೀಭೂತವಾಗಿದ್ದ ಆನಂದವೇ ದ್ರವಿಸಿ ಭಕ್ತನ ಕ್ರಿಯಾಕಲಾಪಗಳಿಂದ ಭೇದರೂಪವಾಗಿ ಪಾದದ್ವಾರಾ ತೋರುವುದು. ಅಂತಹ ಪರಲಿಂಗ ಸ್ವರೂಪ ಆನಂದ ರಸವನ್ನು ಭಕ್ತನು ಭಕ್ತಿಯಿಂದ ಶಾಸ್ತ್ರ ವಿಧಿಗನುಸರಿಸಿ ಪೂಜ್ಯರಿಗೆ ಅರ್ಪಿಸುವನು. ಅದನ್ನೇ ಆ ಭಕ್ತಿರೂಪವಾಗಿ ಬಂದ

ಶಿವಾನಂದರೂಪ ತೀರ್ಥವನ್ನೇ ಪೂಜ್ಯರು ತಮಗೆ ಪೂಜ್ಯವೆನಿಸಿದ ಸ್ವಸ್ವರೂಪ ಲಿಂಗಕ್ಕೆ ಅರ್ಪಿಸಿ ಸೇವಿಸುವುದರಿಂದ ದೋಷವೆನಿಸುವುದಿಲ್ಲ. ಆದ್ದರಿಂದ ಸ್ವಪಾದೋದಕವನ್ನು ಶ್ರೇಷ್ಟ ಲಿಂಗಕ್ಕೆ ಅಭಿಷೇಕಿಸಿ ಸ್ವೀಕರಿಸುವುದು ಭೇದಾಭೇದ ಸಿದ್ಧಾಂತ ವಿರೋಧವೆನಿಸದು. ವೀರಶೈವ ಮತವು ಭೇದಾಭೇದ ಸ್ವರೂಪವುಳ್ಳದ್ದಾದ್ದರಿಂದ ಪಾದೋದಕವಾದರೂ ಸ್ವಸ್ವರೂಪದಲ್ಲಿ ಅಭೇದರೂಪವಾಗಿಯೂ ಕ್ರಿಯೆಯಲ್ಲಿ ಭೇದರೂಪವಾಗಿಯೂ ತೋರುವುದು. ಇಂತಹ ಭೇದಾಭೇದ ಸ್ವರೂಪವೆನಿಸಿದ ಚಿದ್ರಸಕ್ಕೆ ಸ್ವಪಾದೋದಕವೆಂದು ಆಕ್ಷೇಪಿಸುವುದು ವೀರಶೈವಮತ ಸಿದ್ಧಾಂತಕ್ಕೆ ವಿರೋಧವೆನಿಸುವುದು.

ಜ.ಚ.ನಿ

ಕನ್ನಡ ನಾಡಿನಲ್ಲಿ ಇಂದಿನವರೆಗೂ ಆಗಿ ಹೋದ ಅನಂತ ಮಹಾನುಭಾವರು ಒಂದೊಂದು ಕೃತಿ ಕಲೆಗಳಿಂದ ತಮ್ಮ ತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ; ರಹಸ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಕಲಾವಂತರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿದ್ದಾರೆ. ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸಿದ ಶ್ರೇಷ್ಠ ಮಹಾನುಭಾವನೆಂದರೆ ವರಿಷ್ಠ ಕಾರಣಿಕ ಪುರುಷನೆಂದರೆ ಲಿಂ. ಶ್ರೀ ನಿ. ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು. ಅವರ ಇಡೀ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ; ಐಹಿಕಾಮುಷ್ಮಿಕ ಸಾಧನವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸದ್ಗುಣಗಳು ಗುಂಪಿತವಾಗಿದ್ದವು; ಗುಡ್ಡೆಯಾಗಿದ್ದವು. ವಿಚಾರ ಸ್ವಾತಂತ್ರ ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯಭಿಮಾನ, ಕಾರ್ಯಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದವು. ಅಸದೃಶವಾದ ಸ್ವಾರ್ಥತ್ಯಾಗ, ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ

ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾತ್ತ ಉದ್ದೇಶ, ಉದಾರ ಉತ್ತೇಜನ, ಉನ್ನತ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಪ್ರಕೃತಿ ಗುಣಗಳಾಗಿದ್ದವು. ಈ ಎಲ್ಲ ಸದ್ಗುಣಗಳಿಂದ ಶ್ರೀ ಕುಮಾರಯೋಗಿಯು ತನ್ನ

ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿಯೆ ಇಡೀ ಕನ್ನಡ ಕುವರನಾಗಿ ಬದುಕಿದನು. ಕಾರಣಿಕನಾಗಿ ಬಾಳಿದನು. ಹೊಟ್ಟೆಯಲ್ಲಿ ಹುಟ್ಟುವ ಸಾಮಾನ್ಯ ಕುವರನು ತನ್ನ ತಂದೆ-ತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಇಡೀ ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲಕೇಳಿಗಳಿಂದ ತನ್ನ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು, ಅಸಾಧಾರಣವಾದ ಪ್ರೌಢಲೀಲೆಗಳಿಂದ ಪವಿತ್ರ ಕಾರ್ಯಗಳಿಂದ ಇಡೀ ಜನಾಂಗವನ್ನು ಕಡುಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರಯೋಗಿಯು ಮಾಡಿದನು; ಮಹಾಕಾರಣಿಕನಾದನು. ಆತನ ಸಹಜವಾದ ಸಣ್ಣನಗೆ, ನನ್ನಿವಾತು, ಪುಣ್ಯಕಳೆಗಳನ್ನು ಕಂಡು ಕೇಳಿ ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ, ಮಿತವಾದ ಅನುಭವಪೂರ್ಣ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ ಪಾಮರರಿಲ್ಲ. ಅವರು ಕೈಕೊಳ್ಳುತ್ತಿರುವ ಕಲ್ಮಷರಹಿತವಾದ ಕಾರ್ಯಕಲಾಪಗಳಿಗೆ ಸಂಪತ್ತು ಸಹಾಯಗಳನ್ನು ನೀಡದ ಸಾಹುಕಾರರಿಲ್ಲ, ಸಾಮಾಜಿಕರಿಲ್ಲ.

 ಅವರು ಓಜಸ್ಸಿನಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೆ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಆಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಡಿಯನ್ನಿಟ್ಟರು. ಆ ಮಹತ್ಕಾರ್ಯಗಳಲ್ಲಿ ಒದಗುವ ತೊಡಕು ತೊಂದರೆಗಳಿಗೂ ಬರುವ ಭಯಭೀತಿಗಳಿಗೂ ಅವರು ಅಂಜಲಿಲ್ಲ; ಅಳುಕಲಿಲ್ಲ. ದೊಡ್ಡ ಪ್ರವಾಹವು ತನಗೆ ಎದುರಾಗುವ ಕಾಡುಗೀಡುಗಳನ್ನು ತನ್ನ ಸೆಳೆವಿನಿಂದ ಭೇದಿಸಿ, ದೊಡ್ಡ ದೊಡ್ಡ ದುಂಡುಬಂಡೆಗಳ ಮೇಲೆ ನೆಗೆದು ಮುಂದಕ್ಕೆ ಸಾಗುವಂತೆ, ಸಾಗರ ಸೇರುವಂತೆ ಶ್ರೀಗಳು ತಮ್ಮ ಸತ್ಕಾರ್ಯಸಾಧನೆಯಲ್ಲಿ ಎಡೆಬಿಡದೆ ಅಡ್ಡಬರುವ ದುರಂತವಾದ ಎಡರುತೊಡರುಗಳನ್ನು ಸಹ ತನ್ನ ವೈರಾಗ್ಯದ ವಜ್ರಾಘಾತದಿಂದ ಹೊಡೆದು ಒಡೆದು ಪುಡಿಮಾಡಿ ತನ್ನ ಧೈಯದತ್ತ ವಾಯುವೇಗದಿಂದ ಸಾಗಿದರು. ಸಾಧಿಸಿದರು. ಸತ್ಯವನ್ನು ಎತ್ತಿಹಿಡಿಯಲು ಸಮಾಜವನ್ನು ಸುಂದರಗೊಳಿಸಲು ಸ್ವಲ್ಪವೂ ಹೆದರದೆ ಹಿಂಜರಿಯದೆ ಛಲತೊಟ್ಟರು; ಬಲ ಮುಡಿಪಿಟ್ಟರು. ಅವರು ಮಾಡಿದ ಮಹಾಕಾರ್ಯಗಳ ಮಹಾಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು, ಬೆರಗುಗೊಳಿಸಿತು. ಆ ಪುಣ್ಯಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು; ದಾರಿ ಹಚ್ಚಿತು. ಆ ಕುಮಾರಯೋಗಿಯು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ ಪ್ರತಿಯೊಬ್ಬ ಸಮಾಜಾಭಿಮಾನಿಯ ಸಂಸ್ಕೃತಿಯಭಿಮಾನಿಯ ಹೃದಯಮಂದಿರದ ಮಾನ್ಯಮೂರ್ತಿಯಾದನು; ಪೂಜ್ಯವ್ಯಕ್ತಿಯಾದನು;  ಯೋಗಿಯಾದನು; ವಿರಾಗಿಯಾದನು ಕಾರಕನಾದನು; ಕಾರಣಿಕನಾದನು. ಅಂತಹ ಪುಣ್ಯಶ್ಲೋಕಿಯ ಪವಿತ್ರಚರಿತ್ರೆಯನ್ನು ಮನತಟ್ಟಿದ ರೀತಿಯಲ್ಲಿ ಮಂದಟ್ಟಾಗುವಂತೆ ಮುಂದಿರಿಸುವ ಪ್ರಯತ್ನ ಪಡಲಾಗಿದೆ; ಪ್ರವೇಶ ಮಾಡಲಾಗಿದೆ.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ವಿದ್ಯೆ-ಅವಿದ್ಯೆಗಳೆರಡೂ ಭಾರತೀಯ ತತ್ವಶಾಸ್ತ್ರದ ಅಮೂಲ್ಯ ಪಾರಿಭಾಷಿಕ ಪದಗಳು. ನಮ್ಮ ಪ್ರಾಚೀನ ಋಷಿಮುನಿಗಳ ದೃಷ್ಟಿಯಲ್ಲಿ ಇವು ಬ್ರಹ್ಮದ ಶಕ್ತಿಗಳು. ಈಗ ನಾವು ದಿನನಿತ್ಯ ‘ವಿದ್ಯೆ’ ಎಂದು ಕರೆಯುವುದೆಲ್ಲ ವಾಸ್ತವದಲ್ಲಿ ಅವಿದ್ಯೆ. ಅವಿದ್ಯೆ ಎಂದಾಕ್ಷಣ ತಿರಸ್ಕರಣೀಯವಾದುದು ಎಂದಲ್ಲ. ಲೌಕಿಕ ಜೀವನಕ್ಕೆ ತೀರ ಅಗತ್ಯವಾದುದು. ನಮ್ಮ ಐಹಿಕ ಸುಖ ಹಾಗು ಅಭ್ಯುದಯಕ್ಕೆ ಕಾರಣವಾದುದು ಈ ಅವಿದ್ಯೆಯೇ. ದಾರ್ಶನಿಕರು ಅವಿದ್ಯೆಗೆ ಕರ್ಮವೆಂದೂ ಕರೆದುದುಂಟು. ಕರ್ಮರಹಿತವಾಗಿ ಮನುಷ್ಯ ಬದುಕಲಾರ. ಆದರೆ ಅವನು ಮಾಡುವ ಕರ್ಮದಲ್ಲಿ ಅಂದರೆ ಭಗವತ್ಸೇವೆಯಲ್ಲಿ ನಾನೆಂಬ ಅಭಿಮಾನವಿರಬಾರದು. ಅಹಂಕಾರ ಮಮಕಾರಗಳಿಗೆ ಅಲ್ಲಿ ಅವಕಾಶವಿಲ್ಲ. ರಾಗದ್ವೇಷಗಳಿರಬಾರದು. ಪ್ರತಿಫಲಾಪೇಕ್ಷೆ ಇಲ್ಲದೆ ಶ್ರದ್ಧೆಯಿಂದ ಸೇವೆ ಮಾಡುವುದು ಸತ್ಯಕರ್ಮವೆನಿಸುವುದು. ಇದು ಮೃತ್ಯುವನ್ನು ಗೆಲ್ಲಲು ಅತ್ಯಂತ ಸಹಕಾರಿಯಾದುದು.

 ಅವಿದ್ಯೆ ಮೌಲಿಕವಾಗುವುದು ವಿದ್ಯೆಯ ಸ್ಪರ್ಶದಿಂದ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಅಂದರೆ ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಒಯ್ಯುವುದೋ ಅದು ನಿಜವಾದ ವಿದ್ಯೆ. ಇದು ಮನುಷ್ಯನನ್ನು ದೈವತ್ವಕ್ಕೇರಿಸುವುದು. ದಾರ್ಶನಿಕರ ದೃಷ್ಟಿಯಲ್ಲಿ ಈ ವಿದ್ಯೆಯೇ ಜ್ಞಾನ.  ಮನುಷ್ಯನ ಅಧ್ಯಾತ್ಮ ಸಾಧನೆಗೆ ಅತ್ಯವಶ್ಯವಾದುದು. ಇಂತಹ ವಿದ್ಯೆಯನ್ನು ಕರಗತ ಮಾಡಿಕೊಂಡವನು ನಿತ್ಯಾನಿತ್ಯವನ್ನು ವಿವೇಕವುಳ್ಳವನಾಗುತ್ತಾನೆ. ಐಹಿಕ ಸುಖ ಭೋಗಗಳನ್ನು ಕ್ಷಣಿಕವೆಂದು ಪರಿಭಾವಿಸಿ ಅವುಗಳಲ್ಲಿ ಪೂರ್ಣ ವಿರಕ್ತಿಯನ್ನು ಹೊಂದುತ್ತಾನೆ. ಸಂಯಮದಿಂದ ಕೂಡಿದ ಪವಿತ್ರ ಜೀವನವನ್ನು ನಡೆಸುತ್ತ ಸದಾ ಪರಮಾರ್ಥ ಚಿಂತನೆಯಲ್ಲಿ ಕಾಲ ಕಳೆಯುತ್ತಾನೆ. ಕೊನೆಗೆ ಬ್ರಹ್ಮನನ್ನು ಅರಿತು ಬ್ರಹ್ಮಸ್ವರೂಪಿಯೇ ಆಗುತ್ತಾನೆಂಬುದು ನಮ್ಮ ದಾರ್ಶನಿಕರ ಅಭಿಮತ.

ಮಾನವರ ಬದುಕಿನಲ್ಲಿ ವಿದ್ಯೆ-ಅವಿದ್ಯೆಗಳೆರಡೂ ಪ್ರಮುಖ ಸ್ಥಾನ ಪಡೆದಿವೆ. ಇವುಗಳ ಸಂಯೋಗದಿಂದ ಅಮೃತತ್ವವನ್ನು ಹೊಂದಲು, ಆತ್ಮತತ್ವ ತಿಳಿಯಲು ಸಾಧ್ಯವಾಗುತ್ತದೆ.

ವಿದ್ಯಾಂ ಚಾ ವಿದ್ಯಾಂ ಚ ಯಸ್ತದ್ವೇದೋ ಭಯಗ್ಂ ಸಹ

 ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ

 ಅಂದರೆ ವಿದ್ಯೆ ಮತ್ತು ಅವಿದ್ಯೆಗಳೆರಡನ್ನೂ ಅರಿತವರು ಲೌಕಿಕ ರೂಪವಾದ ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ ಅಧ್ಯಾತ್ಮ ಸಾಧಕವಾದ ವಿದ್ಯೆಯ ಮೂಲಕ ಅಮೃತತ್ವವನ್ನು ಪಡೆಯುತ್ತಾರೆ ಎಂದರ್ಥ.

ಸಾಮಾನ್ಯ ಜನರು ತಮ್ಮ ಜೀವನವನ್ನು ಅವಿದ್ಯೆಗೆ ಸೀಮಿತಗೊಳಿಸಿ, ಪ್ರಪಂಚದಲ್ಲಿ ಸುಖ ಮತ್ತು ತೃಪ್ತಿಯನ್ನು ಹೊಂದಲು ಪ್ರಯತ್ನಿಸುತ್ತಾರೆ. ಆದರೆ ಜ್ಞಾನಿಗಳು ಅಮೃತತ್ವದ ಕಡೆಗೆ ಶಾಶ್ವತ ಸುಖದ ಕಡೆಗೆ ಸಾಗುತ್ತಾರೆ. ಒಟ್ಟಾರೆ ಮನುಷ್ಯ ಜೀವನದ ಗುರಿ ಅವಿದ್ಯೆಯನ್ನು ವಿದ್ಯೆಯಲ್ಲಿ ರೂಪಾಂತರಗೊಳಿಸುವುದು. ಅಂದರೆ ಅವಿದ್ಯೆಯ ದುರ್ಗಮ ಮಾರ್ಗದಲ್ಲಿ ಮುನ್ನಡೆದು ವಿದ್ಯೆಯ ಬೆಳಕಿನಲ್ಲಿ ಜೀವನವನ್ನು ಅರಳಿಸುವುದೇ ಆಗಿದೆ. ಹೀಗೆ ಆನಂದಮಯವಾದ ವಿದ್ಯಾಭೂಮಿಕೆಯಲ್ಲಿ ಜೀವನವನ್ನು ಅರಳಿಸಿದಾಗ ದಿವ್ಯತೃಪ್ತಿ ಹಾಗು ಅಮೃತತ್ವವನ್ನು ಪಡೆಯಲು ಸಾದ್ಯವಾಗುವದು.

ಡಾ:ಸ್ನೇಹಾ ಭೂಸನೂರ

ಮನುಷ್ಯ ಸಮಾಜ ಜೀವಿ. ಈ ಕಾರಣಕ್ಕಾಗಿ ಪರಸ್ಪರ ಸೌಹಾರ್ದ ಸಂಬಂಧ ಅನಿವಾರ್ಯ. ಎಲ್ಲ ಧರ್ಮೀಯರಿಗೂ ಅವರವರ ಪರಂಪರೆಯಿಂದ ಬಂದ ಧರ್ಮ ಗ್ರಂಥಗಳವೆ. ಅವುಗಳಲ್ಲಿಯ ನೀತಿ, ನಿಯಮಗಳು ಆಯಾ ಧರ್ಮೀಯರಿಗೆ ಸಾಮಾಜಿಕ ಆಚಾರ  ಸಂಹಿತೆಗಳಾಗಿವೆ. ಜೀವನದ ನಡೆ-ನುಡಿಯಲ್ಲಿ ಮಾತ್ರವಲ್ಲದೆ ಆಹಾರ ವಿಹಾರದಲ್ಲೂ ಈ ನಿಯಮಗಳು ಸ್ಪಷ್ಟವಾಗಿವೆ .ಹಾಗೆ ವಿವಿಧ ಧರ್ಮಗಳಿಗೆ ಅವುಗಳದೇ ಆದ ಆಚಾರಗಳು. ಯಾವ ಕಾರ್ಯ ಮನುಷ್ಯನ ಅಂತರಂಗ – ಬಹಿರಂಗದ ಅಭ್ಯುದಯಕ್ಕೆ ಕಾರಣವಾಗುವುದೋ ಅದನ್ನೇ ಧರ್ಮ ಎನ್ನಬಹುದು. ʼಧರ್ಮʼ ಶಬ್ದಕ್ಕೆ ದಾರ್ಶನಿಕರು ವಿಫುಲವಾದ ಅರ್ಥ ಕೊಟ್ಟಿದ್ದಾರೆ. ಅವೆಲ್ಲವುಗಳ ಸಾರ ಮಾನವ ಜೀವನದ ಉದ್ಧಾರವೇ ಆಗಿದೆ.  ಅಂತರಂಗದ ಅಗೋಚರ ಶಕ್ತಿಯ ಸಾಕ್ಷಾತ್ಕಾರಕ್ಕಾಗಿ, ಮನುಷ್ಯನು ಕಂಡಕೊಂಡ ಸಾಧನಾ ಮಾರ್ಗಗಳು ಹಲವಾರು.  ಭಕ್ತಿಯೋಗ, ಜ್ಞಾನಯೋಗ ಕರ್ಮಯೋಗ, ಧ್ಯಾನಯೋಗ ಇತ್ಯಾದಿಗಳು ಸಾಧನಾಯುಕ್ತ ಆಚರಣೆಯ ಮಾರ್ಗಗಳಾದವು. ಜಗತ್ತು- ಜೀವಾತ್ಮ-ಪರಮಾತ್ಮ ಸಂಬಂಧಗಳ ರಹಸ್ಯಗಳನ್ನು ಬಹಿರಂಗಗೊಳಿಸಲು ಪ್ರಯತ್ನಿಸಿದ ಮಾನವನು  ಈ ಮಾರ್ಗಗಳನ್ನು ಅವಲಂಬಿಸೆದ. ಇವೆಲ್ಲಾ ಕಾರ್ಯಗಳಿಗೆ  ಜೀವವೇ ಆಧಾರ. ದೇಹವೇ ಸಾಧನ ಸಂಪತ್ತಾಯಿತು. ಕೊನೆಗೆ ಜೀವಾತ್ಮ ಪರಮಾತ್ಮರ ಸಾಮರಸ್ಯವೇ  ಜೀವನದ ಗುರಿಯೆಂಬುದು ಆತನ ಅಂತಿಮ ನಿರ್ಧಾರವಾಯಿತು. ಅದರ ಸಾಧನೆ, ಸಿದ್ಧಿಯಲ್ಲಿ ವೈವಿಧ್ಯತೆ ಬೆಳೆಸಿಕೊಂಡು, ಬಳಸಿಕೊಂಡು ಸಂತೋಷ ಪಟ್ಟ. ಈ ಸಾಧನೆಯ ಮಾರ್ಗಗಳೇ ಆಚಾರಗಳು. ಅದನ್ನು ಸರಳವಾಗಿ ಹೇಳುವುದಾದರೆ ನಡೆಯೇ ಆಚಾರ, ನುಡಿಯೇ ವಿಚಾರ . ಜಗತ್ತಿನ ಎಲ್ಲ  ಧಾರ್ಮಿಕ , ದಾರ್ಶನಿಕ, ಸಾಂಸ್ಕೃತಿಕ, ಸಾಮಾಜಿಕ ನಡೆ ನುಡಿಗಳೇ ಆಧಾರವೆಂಬುದನ್ನು ಧರ್ಮ ಗ್ರಂಥಗಳು ಒತ್ತುಕೊಟ್ಟು ಹೇಳಿವೆ.

ಆಚಾರ:

ಆಚಾರವೆಂದರೆ  ಅನುಸಂಧಾನಕ್ಕೆ ಪೂರಕವಾದ ಕ್ರಿಯೆಗಳು ಎನ್ನುಬಹುದು . ಈ ಕ್ರಿಯೆಗಳು ಸಾಧಕನು ಸಿದ್ದಿ ಪಡೆಯಲು  ಅನುಸರಿಸಬೇಕಾದ ನಿಯಮಗಳಾಗಿವೆ ಇದನ್ನು  ʼನೀತಿ ಪಾಲನೆʼ  ಎಂದು ಇನ್ನೊಂದು ಹೆಸರಿನಿಂದಲೂ ಕರೆಯಬಹುದು.ನೀತಿ ಸಾರ್ವಜನಿಕವಾದ ಆಚರಣೆಯಾಗಿದೆ, ಸಮಾಜ ಜೀವಿಯಾದವನು ಪರಸ್ಪರ  ಸೌಹಾರ್ದಯುತ ಜೀವನ ಸಾಧನೆಗೆ ಅನುಸರಿಸುವ ಸಾಮಾಜಿಕ ಬಾಹ್ಯಾ ನಿಯಮಗಳನ್ನು ನೀತಿ ಎನ್ನಬಹದು. ಹಿಂದೂ ಸಂಸ್ಕೃತಿಯಲ್ಲಿ ಆಚಾರ – ನೀತಿ -ಧರ್ಮ ಒಂದೇ ಆಗಿವೆ.  ನಮ್ಮ ಋುಷಿ ಮುನಿಗಳು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜೀವನದ ಗುರಿ ಸಾಧನೆಗೆ ಅನೇಕ ನಿಯಮಗಳನ್ನು ಸೂಚಿಸಿ ಅಪಾರ ಸಾಹಿತ್ಯವನ್ನು ಸೃಷ್ಟಿಸಿದರು. ಅವು ಶ್ರುತಿ, ಸ್ಮೃತಿ ಮತ್ತು ಸೂತ್ರ ಸಾಹಿತ್ಯವೆಂದು ಪ್ರಸಿದ್ಧಿ ಪಡೆದಿವೆ.

ಪಾಶ್ಚಾತ್ಯರ ಚಿಂತನೆ :

ಪಾಶ್ಚಾತ್ಯರು ಆಚಾರಗಳನ್ನು ‘ಎಥಿಕ್ಸ್’ (Ethics) ಎಂದೂ ‘ಮಾರಲ್’ (Moral) ಎಂದೂ ಕರೆದಿದ್ದಾರೆ. ‘ಎಥಿಕ್ಸ್’ ಪದವು ‘ಆಯಾ ಸಮಾಜದ ಸಂಸ್ಕಾರಗಳು’, ‘ಆಚಾರ ಪದ್ಧತಿಗಳು’ ಎಂಬ ಅರ್ಥವನ್ನು ಒಳಗೊಂಡರೆ, ‘ಮಾರಲ್’ ಎಂಬುದು, ತನ್ನ ಸಮಾಜದೊಡನೆ ವ್ಯವಹರಿಸುವಾಗ ಅನುಸರಿಸಬೇಕಾದ ನಿಯಮಗಳು’ ಎಂದಿದೆ. ಪಾಶ್ಚಾತ್ಯ ದಾರ್ಶನಿಕ ಸಾಕ್ರೆಟಿಸ್‌ನು ‘ಜೀವನದ ನೀತಿ ನಿಯಮಗಳ ಶ್ರೇಷ್ಠತೆಯನ್ನು ದಾರ್ಶನಿಕರ ಅನುಭವಗಳ ಆಧಾರದ ಮೇಲೆ ನಿರ್ಧರಿಸಬೇಕು’ ಎನ್ನುತ್ತಾನೆ. ಸ್ಪೇನ್ ದೇಶದ ತತ್ವಜ್ಞಾನಿ ಸ್ಪೀನೋಜಾ ತನ್ನ ‘ಎಥಿಕ್ಸ್’ ಗ್ರಂಥದಲ್ಲಿ, ‘ಜಗತ್ತಿನ ಆಗು ಹೋಗುಗಳೆಲ್ಲಾ ದೇವರ ಇಚ್ಛೆಯಂತೆಯೇ ನಡೆಯುತ್ತವೆ. ಅದನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿಲ್ಲ. ಶ್ರೇಷ್ಟ ಜನರು ಅದನ್ನೇ ಅನುಸರಿಸಿ ನಡೆಯುತ್ತಾರೆ. ಅದೇ ನೀತಿ ಮಾರ್ಗ” ಎನ್ನುತ್ತಾನೆ. ಜರ್ಮನಿಯ ದಾರ್ಶನಿಕ ಇಮ್ಯಾನುಯಲ್ ಕಾಂಟ್‌ನು ವೈಜ್ಞಾನಿಕ ಅರಿವಿನ ಹಿನ್ನೆಲೆಯಲ್ಲಿ ದರ್ಶನವನ್ನು ಚಿಂತಿಸಿದವನು. ನೀತಿಶಾಸ್ತ್ರಕ್ಕೆ ಸಂಬಂಧಪಟ್ಟಂತೆ ತನ್ನ “The Critics of Practice Reason” ಗ್ರಂಥದಲ್ಲಿ ಮಾನವ ಸ್ವತಂತ್ರ ಮತ್ತು ಶಾಶ್ವತ. ದೇವರಿದ್ದಾನೆ ಎಂಬ ನಂಬಿಗೆಗೆ ನಮ್ಮಲ್ಲಿರುವ ನೀತಿ ನಿಯಮಗಳೇ ಆಧಾರ. ನೀತಿಯು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿದೆ’ ಎನ್ನುತ್ತಾನೆ. ಹದಿನೆಂಟನೆಯ ಶತಮಾನದ ಜಾನ್ ಸ್ಟುವರ್ಟ್‌ಮಿಲ್ ಹಾಗೂ ಜೆರೆಮೆ ಬೆಂಥ್ಯಾಮ್ ಚಿಂತಕರು, ಬಹುಜನರಿಗೆ ಸುಖವಾಗುವ ನಡುವಳಿಕೆಗಳನ್ನು ನೀತಿ’ ಎನ್ನುತ್ತಾರೆ. ಹೀಗೆ ಪಾಶ್ಚಾತ್ಯ ದಾರ್ಶನಿಕರ ಪ್ರಕಾರ ಸಹ, ನೀತಿ ಎಂಬುದು ಧರ್ಮದ ಪ್ರಮುಖ ಅಂಶವಾಗಿದೆ. ಆದ್ದರಿಂದ ಧರ್ಮಕ್ಕೆ ಮಹತ್ವ ಬರುವುದು ನೀತಿಯ ಆಚರಣೆಯಿಂದ ಎಂಬುದು ಸುವ್ಯಕ್ತವಾಗುತ್ತದೆ.

ಭಾರತೀಯರ ದೃಷ್ಟಿಯಲ್ಲಿ ಧಾರ್ಮಿಕ ಆಚರಣೆಗಳು ನೀತಿಯ ಆಚರಣೆಗಳೇ ಆಗಿವೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ವಿಶಿಷ್ಟ ಆಚರಣೆಗಳಿವೆ. ಬಾಹ್ಯದಲ್ಲಿ ಭಿನ್ನತೆಯಿದ್ದರೂ ಆಯಾ ಆಚರಣೆಗಳ ಗುರಿಯೆಲ್ಲಾ ಒಂದೇ ಆಗಿರುತ್ತದೆ. ಮಾನವ ಜೀವನಕ್ಕೆ ಒಂದು ಗುರಿಯಿದೆ. ಆ ಗುರಿ ಯಾವುದೆಂದು ತೋರಿಸಿ ಕೊಡುವುದೇ ದರ್ಶನ. ನಮ್ಮಲ್ಲಿರುವ ಆಂತರಿಕ ಚೈತನ್ಯಕ್ಕೆ ಆತ್ಮ-ಜೀವಾತ್ಮಎಂದು ಕರೆಯುತ್ತೇವೆ. ಅದು ಪರಮಾತ್ಮನ ಅಂಶವೇ ಆಗಿದೆ. ಜೀವಾತ್ಮ ಪರಮಾತ್ಮ ಅಭಿನ್ನ ಎಂದು ನಿರ್ಧರಿಸಿದ ದರ್ಶನಗಳು ಕೆಲವು.  ಜೀವಾತ್ಮನು ಪರಮಾತ್ಮನ ಕೇವಲ ಅಂಶ ಮಾತ್ರ ಎಂದು ನಂಬಿದ ದರ್ಶನಗಳು ಕೆಲವು. ಜೀವಾತ್ಮ

ಪರಮಾತ್ಮರ ಸಾಮರಸ್ಯವೇ ಜೀವನದ ಗುರಿ, ಅದೇ ಮುಕ್ತಿ.   ಜೀವಾತ್ಮ ಕರ್ಮ ವಿಶೇಷದಿಂದ ದೇಹಾತ್ಮವಾಗಿ ಒಂದು ರೀತಿಯ ಬಂಧನವನ್ನು ಅನುಭವಿಸುತ್ತದೆ. ಅದು ಬಿಡುಗಡೆ ಹೊಂದಿ ಪರಮಾತ್ಮನಲ್ಲಿ ಬೆರೆಯಬೇಕು. ಅದೇ ಜೀವನದ ಗುರಿ’, ಎಂದು ಮತ್ತೆ ಕೆಲವು ದರ್ಶನಗಳು ಪ್ರತಿಪಾದಿಸಿವೆ. ವೀರಶೈವ ದರ್ಶನಗಳಲ್ಲಿ ಜೀವಾತ್ಮ ಪರಮಾತ್ಮನ ಬೆರೆಯುವಿಕೆಯನ್ನು ಲಿಂಗಾಂಗ

ಸಾಮರಸ್ಯ ಎಂದೂ ಶಿವಜೀವೈಕ್ಯವೆಂದೂ ಕರೆಯಲಾಗಿದೆ. ಹೀಗೆ ಗುರಿಯನ್ನು ವಿವಿಧ ದರ್ಶನಗಳಲ್ಲಿ ವಿವಿಧ ರೀತಿಯಲ್ಲಿ ವಿಶ್ಲೇಷಿಸಿವೆ. ಈ ಪ್ರಯತ್ನಕ್ಕಾಗಿ ಬಳಸುವ ಕ್ರಿಯೆಯೇ ಆಚಾರಗಳು ಆಚಾರಗಳೆಂದರೆ ಗುರಿಯನ್ನು ಸೇರಲು, ಬದುಕಿನಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಕ್ರಿಯೆಗಳು.  ಗುರಿ ಪರಮ ಪವಿತ್ರವಾದುದರಿಂದ ಆಚರಣೆಗಳೂ ಪರಿಶುದ್ಧ ವಾಗಿರಬೇಕು  ಪರಮ ಪವಿತ್ರವಾಗಿರಬೇಕು.  ಬಾಹ್ಯ ಆಚಾರಗಳು ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತವೆ. ಆಂತರಿಕ ಆಚಾರಗಳು ನಿರ್ದಿಷ್ಟವಾಗಿ ದೈವನಿಯಮದಂತೆ ನಡೆಯುತ್ತವೆ. ಎಲ್ಲ ಧರ್ಮಗಳೂ ಬಾಹ್ಯ ಮತ್ತು ಆಂತರಿಕ ಆಚಾರಗಳನ್ನು  ಸಮನ್ವಯಗೊಳಿಸಿ ಅವುಗಳಿಗೆ ಸೈದ್ಧಾಂತಿಕ ಸ್ವರೂಪವನ್ನು ಕೊಟ್ಟಿವೆ.

ಶೈವಾಗಮಗಳಲ್ಲಿ ಪಂಚಾಚಾರ :

ವೀರಶೈವ ಸಿದ್ಧಾಂತಕ್ಕೆ ಶಿವಾಗಮಗಳೇ ಪ್ರೇರಕಗಳಾಗಿವೆ. ಶಿವಾಗಮಗಳು ಸಂಖ್ಯೆ ೨೮.

ಇವುಗಳಲ್ಲಿ ಕಾರ್ಮಿಕದಿಂದ ಸುಪ್ರಭೇದದವರೆಗಿನ ಹತ್ತು ಆಗಮಗಳು ಶಿವಭೇದವೆಂದೂ ವಿಜಯದಿಂದ ವಾತುಲದವರೆಗಿನ ಹದಿನೆಂಟು ಆಗಮಗಳು ರುದ್ರಭೇದವೆಂದೂ ವಿಂಗಡಿಸಲಾಗಿದೆ. ಆಗಮಗಳ ಉತ್ತರಾರ್ಧವು ವೀರಶೈವ ದರ್ಶನದ ಪ್ರತಿಪಾದಿಕವೆಂದಿದೆ. ವೀರಶೈವನಿಗೆ ಸಾಧನಾ ಪ್ರಯೋಗದ ಪರಿಕರಗಳು, ಪಂಚಾಚಾರ ಅನುಸಂಧಾನದ ಅಡಿಗಲ್ಲು ಎನ್ನಬಹುದು. ಇವೆರಡೂ, ಗುರುವಿನುಪದೇಶ ಮತ್ತು ಮಾರ್ಗದರ್ಶನದಿಂದ ಅಳವಡಿಸಿಕೊಳ್ಳಬೇಕಾದವುಗಳು.

ಕಾರಣಾಮಗದಲ್ಲಿ ಶಿಷ್ಯನು ಅಷ್ಟಾವರಣಗಳಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು, ಪಂಚಾಚಾರಕ್ಕನುಗುಣವಾಗಿ ಜೀವನವನ್ನು ನಡೆಸಬೇಕು ಎಂದಿದೆ. ಚಂದ್ರಜ್ಞಾನಾಗಮದಲ್ಲಿ ಪಂಚಾಚಾರಗಳ ಕುರಿತು ವಿವರವಾಗಿ ನಿರೂಪಿಸಲ್ಪಟ್ಟಿದೆ. ಅವೆಂದರೆ, ‘ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಇವು ಪಂಚಾಚಾರಗಳು. ಗುರುವಿನಿಂದ ಕೊಡಲ್ಪಟ್ಟ ಲಿಂಗದ ಹೊರತು ಬೇರೆ ದೈವ ಭುವಿಯಲ್ಲಿ ಇಲ್ಲ ಎಂಬ ಭಾವನೆಯನ್ನು ಲಿಂಗದಲ್ಲಿಡುವುದೇ ಲಿಂಗಾಚಾರ’ ಎಂದಿದೆ.

ಸದಾಚಾರ ಕುರಿತು ಚಂದ್ರಜ್ಞಾನಾಗಮದಲ್ಲಿ ಹೀಗೆ ಹೇಳಿದೆ-ಸದಾಚಾರ ಸಂಪನ್ನರು ಎಂಟು ವಿಧವಾದ ಶೀಲಗಳನ್ನು ಅನುಸರಿಸಬೇಕು. ೧. ಈ ದೇಹವು ಅಶಾಶ್ವತ ಎಂಬ ಭಾವನೆಯನ್ನು ಬೆಳೆಸಿಕೊಂಡು ಜೀವನ ನಡೆಸುವುದಕ್ಕೆ ಅಂಕುರ ಶೀಲವೆಂದಿದೆ. ೨. ತಾವು ವಾಸಿಸುವ ಕುಟುಂಬದವರೆಲ್ಲಾ ಶಿವದೀಕ್ಷೆಯನ್ನು ಪಡೆದಿರಬೇಕೆಂಬುದು ಉತ್ಪನ್ನ ಶೀಲ ೩. ಅಷ್ಟಾವರಣದ ಭಸ್ಮ, ರುದ್ರಾಕ್ಷಧಾರಣೆ ಮಾಡಿರುವುದು ದ್ವಿದಲ ಶೀಲ ೪, ಶಿವತತ್ವಗಳಲ್ಲಿ ಅಚಲ ಶ್ರದ್ಧೆ ಇಟ್ಟಿರುವುದು ಪ್ರವೃದ್ಧ ಶೀಲ ೫ ಶಿವಲಿಂಗಾರ್ಚನೆ ಮಾಡದೆ ಯಾವುದೇ ಪ್ರಸಾದವನ್ನು ಸ್ವೀಕರಿಸದಿರುವುದು ಸಪ್ರಕಾಂಡ ಶೀಲ. ೬ ತಾನು ಸ್ವೀಕರಿಸುವ ಪ್ರಸಾದವನ್ನು ಇಷ್ಟಲಿಂಗಕ್ಕೆ ಅರ್ಪಿಸುವುದೇ ಸಶಾಖಶೀಲ ೮. ಎಲ್ಲ ವ್ಯವಹಾರಗಳನ್ನು ಶಿವಾರ್ಪಿತ ಭಾವನೆಯಿಂದ ಮಾಡುವುದು ಸುಷ್ಪಶೀಲ ೭. ಗುರುಲಿಂಗ ಜಂಗಮದಲ್ಲಿ ಒಂದೇ ತೆರನಾದ ಭಾವನೆಯಿಂದ ಕೂಡಿರುವುದು ಸಫಲ ಶೀಲ. ಹೀಗೆ ಎಂಟು ವಿಧದ ಶೀಲಗಳನ್ನು ವೀರಶೈವರು ಅನುಸಂಧಾನ ಮಾಡವುದೇ ಸದಾಚಾರವೆಂದು ಹೇಳಿದೆ.

ಶಿವಾಚಾರ ಕುರಿತು ಚ೦ದ್ರಜ್ಞಾನಾಗಮದಲ್ಲಿ ಶಾಸ್ತ್ರ ವಿಧಿಯಂತೆ ಹದಿನಾರು ವಸ್ತುಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಶುದ್ಧಗೊಳಿಸಬೇಕೆಂದು ಹೇಳಿದೆ. ಅವು ಯಾವುವೆಂದರೆ, ೧ ಭೋಗಿಸುವ ಆಹಾರ ಪದಾರ್ಥಗಳನ್ನೆಲ್ಲ ಭಸ್ಮದಿಂದ ಶುದ್ಧಿಗೊಳಿಸುವುದು ದ್ರವ್ಯಶುದ್ಧಿ ೨. ತನ್ನ ಭೂಮಿಯನ್ನು ನಂದಿಯ ಮುದ್ರೆಯಿಂದ ಆವೃತಗೊಳಿಸಿದ ಮರ, ಲೋಹ ಶಿಲೆಯನ್ನು ಬಳಸುವುದು ಕ್ಷೇತ್ರ ಶುದ್ಧಿ. ೩ ಲಿಂಗ ಮುದ್ರೆಯಿಂದ ಶೋಭಿಸುವುದು ಗೃಹಶುದ್ಧಿ, ೪, ಅದೇ ರೀತಿ ಪಾತ್ರಗಳಿರುವುದು ಭಂಡಶುದ್ಧಿ. ೫. ತೃಣ ಸಂಸ್ಕರಿಸುವುದು ತೃಣಶುದ್ಧಿ, ೬, ಬಳಸುವ ಸೌದೆ ಮರಮುಟ್ಟುಗಳ ಸಂಸ್ಕಾರಕ್ಕೆ ಕಾಷ್ಟಶುದ್ಧಿ. ೭ ತಾಂಬೂಲಕ್ಕೆ ಬಳಸುವ ವಸ್ತುಗಳಿಗೂ ಅದೇ ರೀತಿ ಸಂಸ್ಕಾರ ಕೊಟ್ಟರೆ ತಾಂಬೂಲಶುದ್ಧಿ, ೮. ಆಹಾರವನ್ನು ತಯಾರಿಸುವವರು ಶಿವದೀಕ್ಷೆಯನ್ನು ಪಡೆದಿರಬೇಕು. ಭವಿಯ ದೃಷ್ಟಿ ಬೀಳದಂತಿದ್ದರೆ ಪಾಕಶುದ್ಧಿ. ೯. ಶುದ್ಧ ಆಹಾರವನ್ನು ಸೇವಿಸುವ ಗೋವಿನ ಹಾಲು, ಮೊಸರು, ಬೆಣ್ಣೆಗಳನ್ನು ಸಂಸ್ಕರಿಸಿ ಉಪಯೋಗಿಸುವುದು ರಸಶುದ್ಧಿ, ೧೦, ಪುನರ್ಜನ್ಮಕ್ಕೆ ಒಳಗಾಗುವಂತಹ ಪಾಪ ಕರ್ಮಗಳನ್ನು ಮಾಡದಿರುವುದು ಭವಶುದ್ಧಿ ೧೧. ಪಂಚಭೂತಾತ್ಮಕವಾದ ಸೃಷ್ಟಿಯ ಪ್ರಾಣಿಗಳು ವಸ್ತುಗಳಿಗಾಗಲಿ ಅಪಕಾರ ಮಾಡದೆ ಎಲ್ಲದರ ಕ್ಷೇಮವನ್ನೇ ಬಯಸುವುದು ಭೂತಶುದ್ಧಿ, ೧೨. ಎಲ್ಲದರಲ್ಲಿಯೂ ಶಿವಭಾವವನ್ನು ತಳೆದಿರುವುದು ಭಾವಶುದ್ದಿ, ೧೩ ನಡೆಯುವ ಮಾರ್ಗದಲ್ಲಿ ಕಂಡ ಕ್ರಿಮಿಕೀಟಗಳಿಗೆ ನೋವಾಗದಂತೆ ಎಚ್ಚರವಹಿಸಿ ನಡೆಯುವುದು ಮಾರ್ಗಶುದ್ಧಿ, ೧೪. ಸೂರ್ಯನ ಉದಯಕ್ಕೆ ಮುನ್ನ ಬೆಳಗಿನ ಜಾವದಲ್ಲಿ ಶಿವಲಿಂಗಾರ್ಚನೆ ಮಾಡುವುದು ಕಾಲಶುದ್ಧಿ. ೧೫. ತನ್ನ ಮಾತಿನಲ್ಲಿ ಮತ್ತೊಬ್ಬರಿಗೆ ನೋವಾಗದಂತೆ ಕೇಳುಗರಿಗೆ ಹರ್ಷ ತರುವಂತೆ ಮಾತನಾಡುವುದು ವಾಕ್ಕುದ್ಧಿ ೧೬. ಸರ್ವ ಕಾಲದಲ್ಲಿಯೂ ಶರಣರ ಸದ್ಭಕ್ತರ ಸಹವಾಸದಲ್ಲಿರುವುದು ಜನಶುದ್ಧಿ, ಈ ರೀತಿ ಹದಿನಾರು ವಿಧವಾದ ನಿಯಮಗಳನ್ನು ಅನುಸರಿಸುವುದೇ ಶಿವಾಚಾರ.

 ಗಣಾಚಾರ ಕುರಿತಂತೆ ಚಂದ್ರಜ್ಞಾನಾಗಮದ ಕ್ರಿಯಾಪಾದದಲ್ಲಿ ಉಲ್ಲೇಖಿಸಿದಂತೆ, ಭಕ್ತನು ಅನುಸರಿಸುವ ಅರವತ್ನಾಲ್ಕು ಶೀಲಗಳು ಈ ಕೆಳಗಿನಂತಿವೆ. ೧. ಸತ್ಯವನ್ನು ನುಡಿಯುವುದು. ೨. ಪ್ರಿಯವಾದ ನುಡಿಗಳನ್ನಾಡುವುದು. ೩. ಸಂತತಿಗಳ ಅಧ್ಯಯನ, ೪, ಗುರು, ಲಿಂಗ, ಜಂಗಮ, ಹಿರಿಯರ ಸ್ತುತಿ ೫. ಮಾನವರ ಸ್ತುತಿ ಮಾಡದಿರುವುದು. ೬ ಆತ್ಮಪ್ರಶಂಸೆ ಮಾಡಿಕೊಳ್ಳದಿರುವುದು. ೭ ಅನ್ಯರನ್ನು ಹೀಯಾಳಿಸದಿರುವುದು, ಇವು ಏಳು ವಾಕ್ ಶೀಲಗಳು,  ೮. ಗುರು, ಲಿಂಗ, ಜಂಗಮನನ್ನು ಗೌರವದಿಂದ ಕಾಣಬೇಕು. ೯. ಪೂಜೆಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸುವುದು. ೧೦. ರುದ್ರಾಕ್ಷಿಮಾಲೆಯನ್ನು ಹಿಡಿದು ಶಿವಮಂತ್ರವನ್ನು ಜಪಿಸುವುದು. ೧೧ ಗುರು, ಲಿಂಗ, ಜಂಗಮರನ್ನು ಆರಾಧಿಸುವುದು. ೧೨. ಶಿವಧರ್ಮದ ಅಭ್ಯುದಯಕ್ಕಾಗಿ ದಾನ ಧರ್ಮಗಳನ್ನು ಆಚರಿಸುವುದು. ೧೩. ಗುರು, ಲಿಂಗ, ಜಂಗಮ ಸೇವೆ. ೧೪, ಗುರು, ಲಿಂಗ, ಜಂಗಮ ಪ್ರದಕ್ಷಿಣೆ. ೧೫. ಸತ್ಕಾರ್ಯಕ್ಕಾಗಿ ಸಂಚಾರ. ೧೬ ಲಿಂಗಾರ್ಚನೆಗಾಗಿ ಸ್ಥಿರಾಸನ. ೧೭ ಇಷ್ಟಲಿಂಗವನ್ನು ಸದಾ ಧರಿಸಿರುವುದು. ೧೮. ಇಷ್ಟಲಿಂಗ ದರ್ಶನದಿಂದ ಪ್ರಸನ್ನತೆ ಪಡೆಯುವುದು-ಇವು ಪಾದಗತಶೀಲಗಳು. ೧೯. ಇಷ್ಟಲಿಂಗ ನಿರೀಕ್ಷಣೆ. ೨೦. ಅದರಿಂದ ಆನಂದಬಾಷ್ಪ ಸುರಿಸುವುದು-ಇವು ಚಕ್ಷುಗತ ಶೀಲಗಳು. ೨೧. ಗುರು, ಲಿಂಗ, ಜಂಗಮಕ್ಕೆ ಅರ್ಪಿತವಾದ ಪ್ರಸಾದವನ್ನು ಸ್ವೀಕರಿಸುವುದು- ಇದು ಜಿಹ್ವಾಗತ ಶೀಲ, ೨೨. ಗುರು, ಲಿಂಗ, ಜಂಗಮಕ್ಕರ್ಪಿಸಿದ ಕುಸುಮಗಳ ಪರಿಮಳವನ್ನು ಘ್ರಾಣಿಸುವುದು ಘ್ರಾಣಗತ ಶೀಲ. ೨೩ ಗುರು, ಲಿಂಗ, ಜಂಗಮರ ಸ್ತೋತ್ರವನ್ನು ಕೇಳುವುದು. ೨೪. ಗುರು, ಲಿಂಗ, ಜಂಗಮ ನಿಂದೆಯನ್ನು ಕೇಳದಿರುವುದು -ಶ್ರೋತಗತ ಶೀಲ.

ಕಾಯಗತ ಶೀಲಗಳು ೨೭ ಮೈಲಿಗೆಯಾದಾಗ ಸ್ನಾನ ಮಾಡುವುದು ೨೮. ಭವಿಸ್ಪರ್ಶ ಮಾಡದಿರುವುದು. ೨೯. ಭಸ್ಮ, ರುದ್ರಾಕ್ಷಧಾರಣೆ ಮಾಡಿಕೊಂಡಿರುವುದು. ಮನೋಗತ ಶೀಲಗಳು -೩೦. ಬ್ರಹ್ಮಚರ್ಯೆ ೩೧ ಭಕ್ತಿರತಿ ೩೨. ಅಧರ್ಮದ ಬಗ್ಗೆ ಕ್ರೋಧ. ೩೩ ಶಿವಾರಾಧಾನೆಯ ಬಗೆಗೆ ಲೋಭ ೩೪. ಭಕ್ತರಲ್ಲಿ ಮೋಹ, ೩೫. ಇಂದ್ರಿಯಗಳ ಬಗೆಗೆ ಮಾತ್ಸರ್ಯ ೩೬. ಮಾಯಾವಿಗಳ ಬಗೆಗೆ ಮದ. ೩೭ ಗುರು, ಲಿಂಗ, ಜಂಗಮದಲ್ಲಿ ದೋಷಾರೋಪಣೆ ಮಾಡದಿರುವುದು. ೩೮. ಅಹಿಂಸೆ, ೩೯, ದಯೆ, ೪೦. ನಿರ್ವಂಚನೆ. ೪೧ ಶತ್ರುತ್ವವಿಲ್ಲದಿರುವುದು. ೪೨. ಗುರು, ಲಿಂಗ, ಜಂಗಮದಲ್ಲಿ ನಂಬಿಕೆ. ೪೩ ಆಪತ್ತಿನಲ್ಲೂ ಧರ್ಮನಿರತನಾಗಿರುವುದು. ೪೪. ವೈರಿಗಳನ್ನು ನಿಂದಿಸದಿರುವುದು. ೪೫. ಭವದ ಭೋಗದಲ್ಲಿ ನಿರಾಸಕ್ತಿಯಿರುವುದು. ೪೬. ಅಪ್ರಮಾದ ೪೭ ಅಯೋಗ್ಯವಾದುದರಲ್ಲಿ ಆಸಕ್ತಿಯಿಲ್ಲದಿರುವುದು. ೪೮ ಪರರ ವಸ್ತುಗಳ ಅಪಹರಣ ಮಾಡದಿರುವುದು. ೪೮. ಅಲಭ್ಯವಾದುದಕ್ಕೆ ಚಿಂತಿಸದಿರುವುದು. ೫೦. ಶಿವನ  ರೂಪ ನಾಮಸ್ಮರಣೆ ೫೧. ಶಿವತತ್ವ ಚಿಂತನೆ. ೫೨. ಗುರು ಹಿರಿಯರ ಪಾದಸೇವೆ ೫೩. ಮಾನಸ ಪೂಜೆ ೫೪. ಗುರು ಹಿರಿಯರ ಸ್ಮರಣೆ, ೫೫. ಸೇವಾಭಾವನೆ. ೫೬. ಶಿವನಲ್ಲಿ ಸಖ್ಯ ಭಾವನೆ. ೫೭. ಶರಣಾಗತಿ ೫೮. ಮೂಲಮಂತ್ರ ಜಪ. ೫೯. ಶಿವನ ರೂಪದ ಅನುಸಂಧಾನ. ೬೦. ನಿರಂತರ ಶಿವಸ್ಮರಣೆ. ೬೧. ಶಿವಸ್ಮರಣೆಯಲ್ಲಿ ನಿಷ್ಠೆ . ೬೨. ಶಿವೋಹಂಭಾವದ ಅನುಸಂಧಾನ. ೬೩ ಶೀಲಗಳ ಅನುಸಂಧಾನದಲ್ಲಿ ಛಲದಿಂದಿರುವುದು. ೬೪. ಶಿವನ ಅನಂತ  ರೂಪಗಳನ್ನು ತನ್ನ ರೂಪವೆಂದೇ ಭಾವಿಸಿ ಆನಂದಪರವಶನಾಗಿರುವುದು.

  ಭೃತ್ಯಾಚಾರವೆಂದರೆ ಕಿಂಕರತ್ವದಿಂದ ಗುರು, ಲಿಂಗ, ಜಂಗಮ ಸೇವೆ ಮಾಡುವುದು. ತಾನು ಅವರಿಗಿಂತ ಹಿರಿಯನಲ್ಲವೆಂಬ ಅಹಂಕಾರ ನಿರಸನದಿಂದ ಶಿವ ಸಾಕ್ಷಾತ್ಕಾರಕ್ಕಾಗಿ ಸಲ್ಲಿಸುವ ಸೇವೆ ಭೃತ್ಯಾಚಾರವೆನಿಸುವುದು.

ಹೀಗೆ ಪಂಚಾಚಾರಗಳ ವಿವರಣೆಯನ್ನು ಚಂದ್ರಜ್ಞಾನಾಗಮದಲ್ಲಿ ಸಮಗ್ರವಾಗಿ ಕಾಣಬಹುದು. ಆದರೆ ವೀರಶೈವ ದರ್ಶನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ವಾತುಲಾಗಮ, ಸೂಕ್ಷ್ಮಾ ಗಮ, ದೇವೀಕಾಲೋತ್ತರ, ಪಾರಮೇಶ್ವರ, ವಿರಾಗಮಗಳಲ್ಲಿ ವಿವರಿಸಲ್ಪಟ್ಟಿವೆ. ಶರಣ ಸಂಸ್ಕೃತಿಯಲ್ಲಿ ಉಲ್ಲೇಖಿತವಾದ ವೀರಶೈವ ಸೈದ್ಧಾಂತಿಕ ಸಂಗತಿಗಳಿಗೆಲ್ಲಾ ಆಗಮದಲ್ಲಿರುವ ವಿವರಣೆಗಳೇ ಆಧಾರವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆಗಮದ ಶ್ಲೋಕಗಳನ್ನು ಶರಣರು ತಮ್ಮ ವಚನಗಳಲ್ಲಿ ಧಾರಾಳವಾಗಿ ಬಳಸಿರುವುದು ಈ ಅಭಿಪ್ರಾಯಕ್ಕೆ ಪ್ರೇರಕವಾಗಿದೆ.

 ವೀರಶೈವವು ಜಗತ್ತಿನ ಅನ್ಯ ದರ್ಶನಗಳಂತೆ ಸ್ವತಂತ್ರವಾಗಿ ಚಿಂತನೆಗೈದ ದರ್ಶನ. ಇಲ್ಲಿ ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮ ಎಂದು ನಿಶ್ಚಯಗೊಂಡಿದೆ. ಅಷ್ಟಾವರಣಗಳು ಸಾಧಕನ ಪ್ರೇರಕಶಕ್ತಿಗಳು, ರಕ್ಷಾಕವಚಗಳು. ಇದನ್ನು ಅಳವಡಿಸಿಕೊಂಡ ಸಾಧಕನು ಪಂಚಾಚಾರಗಳಿಂದಲೇ ತನ್ನ ಯಾತ್ರೆಯನ್ನು ಆರಂಭಿಸಬೇಕು. ಈ ಸಾಧನೆಗೆ ಹತ್ತು ಇಂದ್ರಿಯಗಳು ಹೇಗೆ ಪ್ರಧಾನವೆಂಬುದನ್ನು ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ನಿರೂಪಿಸಿದ್ದಾರೆ.

ಭವಿತನಕ್ಕೆ ಹೇಸಿ ಭಕ್ತನಾದೆಹೆನೆಂದಡೆ

 ಆ ಭವಿಯ ಪೂರ್ವಾಶ್ರಮವ ಕಳೆದು

ಭಕ್ತನ ಮಾಡುವ ಪರಿಯೆಂತಯ್ಯ ?

 ತನ ಕಾಯವ ಶುದ್ಧವ ಮಾಡುವುದು

ಜೀವವ ಶುದ್ಧವ ಮಾಡುವುದು

 ಆತ್ಮವ ಶುದ್ಧವ ಮಾಡುವುದು

ಮಂತ್ರ ಶುದ್ಧವ ಮಾಡುವುದು

ವಾಕ್ಕು, ಪಾಣಿ, ಪಾದ, ವಾಯು, ಗುಹ್ಯವೆಂಬ

 ಕರ್ಮೇಂದ್ರಿಯ ಶುದ್ಧವ ಮಾಡುವುದು

ಶ್ತ್ರೋತ್ರ, ನೇತ್ರ, ಜಿಹ್ವ., ತಕ್ಕು, ಘ್ರಾಣವೆಂಬ

ಬುಧೀಂದ್ರಿಯಗಳ ಶುದ್ಧವ ಮಾಡುವುದು

ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿ

ಜೀವನೇ ಶಿವನೆಂಬ ಪರಿಯಾಯವ ಕೆಡಿಸಿ

ಶಿವನೇ ಜೀವನೆಂಬ ಪರಿಯಾಯವ ತೋರಿ ಪಂಚವಕ್ತ್ರಂಗಳ ನೆಲೆಗೊಳಿಸಿ

ಶ್ವೇತ ಪೀತ ಹರಿತ ಕಪೋತ ಮಾಂಜಿಷ್ಟ ಗೌರವರ್ಣಂಗಳ ತೋರಿ

ಪಂಚಭೂತ ಶುದ್ಧವ ಮಾಡುವುದು

ಜೀವಾತ್ಮ ಪರಮಾತ್ಮಾ ಚ ಎಂಬ ಶ್ರುತಿಯಿಂದ

ಆತ್ಮ ಶುದ್ಧವ ಮಾಡುವುದು

ಇಂತು ಸರ್ವಶುದ್ಧವ ಮಾಡುವುದು

ಆತನ ತಂದು ಗಣ ತಿಂತಿಣಿಯ ಮುಂದೆ ನಿಲ್ಲಿಸಿ

ಆ ಶಿಷ್ಯನ ಜಿಹ್ವೆಯಲ್ಲಿ ಶೃತಿಯನೋದಿಸಿ

ಓಂ ಕರ್ಮಣಾ ಮನಸಾ ವಾಚಾ ಗುರುಭಕ್ತ್ಯಾಂತು ವತ್ಸಲಃ ||

ಶರೀರಮರ್ಥ೦ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ‘||

ಎಂದು ಮನಃ ಸ್ಮರಣೆಯ ಆಡಿಸಿ

ಆ ಶಿಷ್ಯನ ಭವಚ್ಛೇದವ ಮಾಡಿ ಚೌಕ ಮಧ್ಯದಲ್ಲಿ ಕುಳ್ಳಿರಿಸಿ

ಓಂ।। ಸಮೇಕಾಮಾನ್ ಕಾಮಕಾಮಾಯಮಹ್ಯಂ

ಎಂಬ ಮಂತ್ರದಿಂದ ಅಗೋದಕವ ತಳೆದು

ಭಾಳದಲ್ಲಿ ವಿಭೂತಿಯ ಪಟ್ಟವ ಕಟ್ಟಿ

ಮಸ್ತಕ ಕಳಸದ ಮೇಲೆ ಹಸ್ತವನಿರಿಸಿ

ಸಹಸ್ರದಳ ಕಮಲದೊಳಗಿದ್ದ ವಸ್ತುವನ್ನು

ಭಾವಕ್ಕೆ ಭಾವದಿಂದ ಮನಕ್ಕೆ ಮನದಿಂದ ದೃಷ್ಟಿಗೆ ತಂದು

ಕುಮಾರ ಮೂರ್ತಿಯೊಳಗೆ ಹುದುಗಿಸಿ

ಇದೇ ಇಷ್ಟಲಿಂಗವೆಂದು ತೋರಿ

ಕರಮನಭಾವದಲ್ಲಿ ನಿರ್ಧರಿಸೆಂದು ಹೇಳಿ

ಸ್ಥಾವರಲಿಂಗ ಪೂಜೆಯ ಮಾಣಿಸಿ

ಕರಕ್ಕೆ ಕಂಕಣವ ಕಟ್ಟಿ ನಿರ್ಧಾರದ ತಾಳೆಯ ಕಂಠದಲ್ಲಿ ಕಟ್ಟಿ

ಕಲಿಯಾಗು ಎಂದು ಎನ್ನ ಕೃತಾರ್ಥವ ಮಾಡಿದ

ಕೂಡಲಚೆನ್ನಸಂಗಯ್ಯ ನಿಮ್ಮ ಶರಣ ಸಂಗನ

ಬಸವಣ್ಣನ ಪಾದಕ್ಕೆ ನಮೋ ನಮೋ ಎಂದೆನು

ಕರ್ಮೇ೦ದ್ರಿಯಗಳು ಜ್ಞಾನೇಂದ್ರಿಯಗಳ ಆಜ್ಞೆಯನ್ನು ಪಾಲಿಸಬೇಕು. ಜ್ಞಾನ ಅಂತರಂಗಕ್ಕೆ ಸಂಬಂಧಿಸಿದುದು, ಕ್ರಿಯೆ ಬಹಿರಂಗಕ್ಕೆ ಸಂಬಂಧಿಸಿದುದು. ಇವೆರಡರ ಸಮನ್ವಯವೇ ಧಾರ್ಮಿಕ ಅರ್ಥದಲ್ಲಿ ಆಚಾರವೆನಿಸುತ್ತದೆ. ಅದನ್ನೇ ಚೆನ್ನಬಸವಣ್ಣ ನವರು-

ʼʼಕ್ರಿಯೆಯೆ ಜ್ಞಾನ ಆ ಜ್ಞಾನವೆ ಕ್ರಿಯೆ

ಜ್ಞಾನವೆಂದರೆ ತಿಳಿಯುವುದು

ಕ್ರಿಯೆ ಎಂದರೆ ತಿಳಿದಂತೆ ಮಾಡುವುದು

ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ

ಅದರಂತೆ ಆಚರಿಸುವುದ ಕ್ರಿಯೆ

ಅರಿದು ಆಚರಿಸದಿದ್ದಡೆ ಅದೆ ಅಜ್ಞಾನ ನೋಡ

ಕೂಡಲ ಚೆನ್ನಸಂಗಮದೇವಾ

ಎಂದಿದ್ದಾರೆ. ಇದು ಬಾಹ್ಯಶುದ್ಧಿಗೆ ಅನುಸರಿಸುವ ನೀತಿ. ದಾರ್ಶನಿಕರ ದೃಷ್ಟಿಯಲ್ಲಿ ಆಚಾರ ಶಬ್ದವು ಮಹತ್ವದ ಅರ್ಥವನ್ನು ಪಡೆದಿದೆ. ಆಚಾರದಿಂದ ಲೌಕಿಕ ಜೀವನದ ಸುಖ ಸಮೃದ್ಧಿಗಳೂ ಲಭಿಸಬೇಕು, ಅಂತೆಯೇ ಅದು ಅಲೌಕಿಕದ ಸಾಧನವೂ ಆಗಬೇಕು

ಮಾನವ ಜೀವನ ಎಲ್ಲ ಜೀವರಾಶಿಗಳಿಗಿಂತಲೂ ಶ್ರೇಷ್ಠವೆಂದು ಎಲ್ಲ ಧರ್ಮಗಳೂ ಸಮರ್ಥಿಸಿವೆ. ಪುನರ್ಜನ್ಮವನ್ನು ಯಾವ ಧರ್ಮವೂ ಬೋಧಿಸಿಲ್ಲ. ಮನುಷ್ಯ ಮಹಾದೇವನಾಗಬೇಕೆಂಬುದೇ ಧರ್ಮದರ್ಶನಗಳ ಗುರಿಯಾಗಿದೆ. ಈ ಕುರಿತಂತೆ ಶರಣ ಹಡಪದ ಅಪ್ಪಣ್ಣನವರು ಹೀಗೆ ಹೇಳುತ್ತಾರೆ.

ಈ ಜಗದೊಳಗಣ ಆಟವ ನೋಡಿದರೆ

ಎನಗೆ ಹಗರಣವಾಗಿ ಕಾಣಿಸುತ್ತಿದೆ.

ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು

ಮುಂದಣ ಮುಕ್ತಿಯನರಿಯರು

ಬಂದ ಬಂದ ಭವದಲ್ಲಿ ಮುಳುಗುತ್ತಲಿದ್ದಾರೆ

ನಾನಿದರಂದವನರಿದು ದ್ವಂದ್ವವ ಹರಿದು

ಜಗದ ನಿಂದೆ ಸ್ತುತಿಯ ಸಮಗಂಡು

ಹಿಂದ ಹರಿದು ಮುಂದುವರಿದು

ಸದಮಳಾನಂದದಲ್ಲಿ ಐಕ್ಯವಾಗಿ

ಸತ್ಯ ಶರಣರ ಪಾದದಲ್ಲಿ

ನಿರ್ಮುಕ್ತನಾದೆನಯ್ಯಾ

ಬಸವಪ್ರಿಯ ಕೂಡಲ ಚೆನ್ನಬಸವಣ್ಣ’

ಎಂದಿದ್ದಾರೆ. ಮೋಕ್ಷ ಪ್ರಾಪ್ತಿಯೇ ಜೀವನದ ಗುರಿ. ಈ ಗುರಿ ಮುಟ್ಟುವುದಕ್ಕಾಗಿಯೇ ಸಾಧನೆ ನಡೆಯಬೇಕು. ಅದೇ ರೀತಿಯನ್ನು ಅಲ್ಲಮಪ್ರಭು ಹೀಗೆ ಹೇಳುತ್ತಾರೆ-

ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು

ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು

ಪ್ರಾಣ ನಿಮ್ಮ ರತಿ ಸುಖಕ್ಕೆ ಸಂದುದು

ಇಂತು ತನು, ಮನ, ಪ್ರಾಣ ನಿಮಗೆ ಸಂದಿಪ್ಪ

ನಿಸ್ಸಂಗಿಯಾದ ನಿಶ್ಚಟ ನಿಜ ಲಿಂಗೈಕ್ಯ

ಕಾಣಾ ಗುಹೇಶ್ವರಾ’

ಎಂದಿದ್ದಾರೆ. ತನು, ಮನ ಇವು ಸಾಮಾನ್ಯವಾಗಿ ಅಹಂಭಾವದ ಪ್ರತೀಕಗಳು. ಅವುಗಳಿಗೆ ಸಂಸ್ಕಾರವಿಲ್ಲದಿದ್ದರೆ ದಾರಿ ದುರ್ಗಮವಾಗುತ್ತದೆ.

 ಅದರಲ್ಲೂ ಮನಸ್ಸಿನ ಪಾತ್ರ ಹಿರಿದು. ಮನಸ್ಸು ಸರಿ ಮಾರ್ಗದಲ್ಲಿ ಚಲಿಸಿದರೆ ತನು ಅದನ್ನು ಅನುಸರಿಸುತ್ತದೆ. ಪ್ರಾಣ ತಾನಾಗಿ ಅದರತ್ತ ಸಾಗುತ್ತದೆ. ಈ ಮೂರರ ನಿಯಂತ್ರಣವೇ ಆಚಾರವೆನ್ನಬಹುದು. ತನು-ಮನ-ಪ್ರಾಣಗಳ ಕ್ರಿಯೆಯನ್ನು ಶರಣರು ಆಚಾರವೆಂದು ಕರೆದಿದ್ದಾರೆ. ಆಚಾರಗಳಲ್ಲಿ ಬಹಿರಂಗದ ಆಚಾರಗಳು ಹಾಗೂ ಆಂತರಿಕ ಆಚಾರಗಳೂ ಸಮಾವೇಶಗೊಳ್ಳಬೇಕು. ಇವುಗಳನ್ನೇ ವೀರಶೈವ ದರ್ಶನಕಾರರು ಪಂಚಾಚಾರಗಳೆಂದು ಕರೆದಿದ್ದಾರೆ.

ಪಂಚಾಚಾರಗಳು :

ವೀರಶೈವ ಸಂಸ್ಕೃತಿಯಲ್ಲಿ ಪಂಚಾಚಾರಗಳಿಗೆ ಪ್ರಮುಖ ಸ್ಥಾನವಿದೆ. ಶರಣರು ತಮ್ಮ ಕಾಲದಲ್ಲಿ ಎದುರಿಸಿದ ಸವಾಲುಗಳಲ್ಲಿ ತಮ್ಮ ನಂಬಿಕೆಯನ್ನು ಅನುಸರಿಸುವವರನ್ನು ಏಕಸೂತ್ರದಲ್ಲಿ ಬಂಧಿಸಿ ಸಂಘಟಿಸುವುದಾಗಿತ್ತು. ಅದಕ್ಕಾಗಿ ಅವರು ಒಂದು ಸಾಮಾಜಿಕ ನೀತಿ ಸಂಹಿತೆಯನ್ನು ಸಾಮಾನ್ಯರೆಲ್ಲರಿಗೂ ಅನ್ವಯಿಸುವಂತೆ ಸೃಷ್ಟಿಸಿದರು. ಶರಣರಿಗಿಂತ ಹಿಂದೆಯೂ ಒಬ್ಬ ವ್ಯಕ್ತಿಯು ಮಾಡಬಾರದ್ದೆಂಬ ದೃಷ್ಟಿಯಿಂದ ಪಂಚಮಹಾಪಾತಕಗಳ ಕಲ್ಪನೆಯಿತ್ತು .ಇದು ನೀತಿಯಾದರೂ ನೇತ್ಯಾತ್ಮಕವಾದದ್ದು, ಇಂಥವುಗಳನ್ನು ಮಾಡಬೇಡ ಎಂದು ತಡೆಯುವಂಥದು. ಪ್ರಾಯಶಃ ಇದಕ್ಕೆ ವೈದೃಶ್ಯರೂಪದಲ್ಲಿ ಇತ್ಯಾತ್ಮಕವಾದ, ಆಚರಿಸಲೇಬೇಕಾದ, ಆಚರಣೆಗಳನ್ನು ಶರಣರು ಬೋಧಿಸಿದರು. ಇದು ಒಂದು ಬಗೆಯಲ್ಲಿ ಮಾಡಬಾರದ ಪಂಚಪಾತಕಗಳಿಗೆ ಪೂರಕವಾದುದು. ಶರಣರು ನಾನಾ ಬಗೆಯ ಶೀಲಗಳನ್ನು ವಿವರವಾಗಿ ಬೋಧಿಸಿದ್ದಾರೆ. ಒಂದೆಡೆ ಐವತ್ತು ಆಚಾರಗಳನ್ನು ಉಲ್ಲೇಖಿಸಿದರೆ ಇನ್ನೊಂದೆಡೆ ಶ್ರೇಷ್ಠ ಶರಣನೊಬ್ಬನು ಆಚರಿಸುವ ಐವತ್ತೆರಡು ಆಚಾರಗಳನ್ನು ಹೇಳಲಾಗಿದೆ. ಮತ್ತೊಂದೆಡೆ ಅರವತ್ನಾಲ್ಕು ಆಚಾರಗಳ ಉಲ್ಲೇಖವಿದೆ. ಐವತ್ತಾರು ನೇಮ, ಮೂವತ್ತೆರಡು ಕೃತ್ಯಗಳನ್ನು ಉಲ್ಲೇಖಿಸಿದೆ. ಶರಣರು ಇವುಗಳನ್ನೆಲ್ಲಾ ಒಂದುಗೂಡಿಸಿ ಒಟ್ಟಾರೆ ಎರಡು ಭಾಗ ಮಾಡಿ ಮೊದಲ ಭಾಗದಲ್ಲಿ ಐದು ಆಚಾರಗಳನ್ನು ಸೇರಿಸಿ ಪಂಚಾಚಾರಗಳೆಂದು ಕರೆದರು. ಎರಡನೆಯ ಗುಂಪು ಸುಪ್ತಾಚಾರಗಳೆನಿಸಿದವು. ಪಂಚಾಚಾರವು ಬಾಹ್ಯ ಆಚರಣೆಗಳಿಗೆ ಅನ್ವಯಿಸಿದರೆ ಸಪ್ತಾಚಾರಗಳು ಅಂತರಂಗದ ನಡುವಳಿಕೆಗಳನ್ನು ನಿರ್ದೇಶಿಸುತ್ತವೆ.

 ಅವಿರಳ ಜ್ಞಾನಿ ಚೆನ್ನಬಸವಣ್ಣನವರು ಪಂಚಾಚಾರಗಳ ಸ್ವರೂಪವನ್ನು ವಿಸ್ತೃತವಾಗಿ ಅನೇಕ ವಚನಗಳಲ್ಲಿ ವಿವರಿಸಿದ್ದಾರೆ. ಅದರ ಗಂಭೀರ ಸ್ವರೂಪದ ಚಿತ್ರಣ ಈ ಕೆಳಗಿನ ವಚನದಲ್ಲಿ ಕಾಣಬಹುದು-

ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ

ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ||

ಲಿಂಗವನ್ನಲ್ಲದೆ ಅನ್ಯವನರಿಯದಿರುವುದೇ ಲಿಂಗಾಚಾರ,

ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗಜಂಗಮಕ್ಕೆ ನೀಡಿ

ಸತ್ಯಶುದ್ಧನಾಗಿಹುದೇ’ ಸದಾಚಾರ

ಶಿವಭಕ್ತರಲ್ಲಿ ಕುಲಗೋತ್ರ ಜಾತಿ ವರ್ಣಾಶ್ರಮವನರಸದೆ

ಅವರೊಕ್ಕುದಕೊಂಬುದೇ ಶಿವಾಚಾರ,

ಶಿವಾಚಾರದ ನಿಂದೆಯ ಕೇಳದಿಹುದೇ ಗಣಾಚಾರ,

ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ

ಭಯಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ

ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯ

ಪ್ರಭುವೆ ಕೂಡಲ ಚೆನ್ನಸಂಗಮದೇವಾ’

ಈ ಒಂದು ವಚನದಲ್ಲಿ ಪಂಚಾಚಾರಗಳ ಅಂತರಾರ್ಥ, ಬಹಿರಾರ್ಥವನ್ನೆಲ್ಲಾ ಸಮರಸಗೊಳಿಸಿದ್ದಾರೆ. ಇವುಗಳನ್ನು ಒಂದೊಂದಾಗಿ ವಿಶ್ಲೇಷಿಸಬಹುದು.

೧. ಲಿಂಗಾಚಾರ :

 ಈ ತತ್ವದಲ್ಲಿ ಎರಡು ಪದಗಳಿವೆ. ‘ಲಿಂಗ+ಆಚಾರ’ ಅಂದರೆ ಲಿಂಗದ ಬಗ್ಗೆ ಆಚಾರವುಳ್ಳವನಾಗಿರುವುದು. ವೀರಶೈವನು ಲಿಂಗದೊಡನೆ ನಡೆದುಕೊಳ್ಳಬೇಕಾದ ರೀತಿಯನ್ನು ವಿಧಿಸುತ್ತದೆ. ದೀಕ್ಷೆ ಪಡೆದು, ಲಿಂಗ ಧರಿಸಿ, ಭವಿಯಾಗಿದ್ದವನು ಭಕ್ತನಾಗಿ ಮಾರ್ಪಟ್ಟ ಮೇಲೆ ತ್ರಿಕರಣ ಪೂರ್ವಕವಾಗಿ ಆ ಲಿಂಗವನ್ನೇ ನಂಬಿರಬೇಕು. ಅನ್ಯದೈವವನ್ನಾಗಲಿ, ಸ್ಥಾವರಲಿಂಗವನ್ನಾಗಲಿ ಪೂಜಿಸ ಬಾರದು. ಲಿಂಗವು ಬಾಹ್ಯ ಕುರುಹು ಅಷ್ಟೇ. ಅದು ಸರ್ವತ್ರವ್ಯಾಪಿಯಾದ ಚೈತನ್ಯದ ಸಂಕೇತ. ಆದ್ದರಿಂದ ಲಿಂಗವನ್ನು ಧರಿಸಿರುವವರಲ್ಲಿ ಏಕತೆಯನ್ನು ಸಾಧಿಸಬೇಕೆಂಬ ಆಶಯ.

ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ

ಅಯ್ಯಾ ಶ್ರೀ ಗುರು ಕರುಣಿಸಿಕೊಟ್ಟ ಲಿಂಗಜಂಗಮವಲ್ಲದೆ

ಅನ್ಯದೈವಂಗಳ ತ್ರೈವರಣದಲ್ಲಿ ಅರ್ಚಿಸ

ದಿರ್ಪುದೆ ಲಿಂಗಾಚಾರವೆಂಬೆನಯ್ಯ’

ಎಂದು ಹೇಳುವಲ್ಲಿ ‘ಲಿಂಗ’ ಶಬ್ದಕ್ಕಿರುವ ವ್ಯಾಪಕವಾದ ಅರ್ಥವನ್ನು ಗಮನಿಸಬೇಕು. ಇಷ್ಟಲಿಂಗದ ವೈಶಿಷ್ಟ್ಯವೆಂದರೆ ಅದು ಅಂಗಡಿಯಿಂದ ತಂದು ಪೂಜಿಸುವ ವಸ್ತುವಲ್ಲ ಅದು ಶ್ರೀ ಗುರು ಕರುಣಿಸಿಕೊಟ್ಟದ್ದು, ಅಂದರೆ ಗುರುವಿಗೂ ಶಿಷ್ಯನಿಗೂ ನಿಕಟ ಸಂಪರ್ಕ ಕಲ್ಪಿಸಿದ ತತ್ವ ಸಂಪತ್ತು.  ಸಮರ್ಥ ಗುರುವಿನ ಸಂಪರ್ಕದಿಂದ ತನು ಮನದ ಅಶುಚಿತ್ವವೂ, ಅಜ್ಞಾನವೂ ಅಳಿಸಿ ಅಂತರಂಗದಲ್ಲಿ ಆತ್ಮ ಸಾಕ್ಷಾತ್ಕಾರ ಸಾಧನೆಗೆ ಸಂಕಲ್ಪ ಮಾಡುವಂತಾಗಬೇಕು. ಅದರಿಂದ ಅಂಗಕ್ಕೂ ಲಿಂಗಕ್ಕೂ ಸಂಸ್ಕಾರ  ದೊರೆಯಬೇಕು.

ವೀರಶೈವ ಸಿದ್ಧಾಂತದಲ್ಲಿ ಪ್ರತಿಪಾದಿಸಿದಂತೆ ಗುರು, ಲಿಂಗ ಮತ್ತು ಶಿಷ್ಯ (ಭಕ್ತ) ಈ ಮೂರಕ್ಕೂ ಉತ್ತಮ ಸಂಸ್ಕಾರವಿರಬೇಕಾಗುತ್ತದೆ. ಇಷ್ಟಲಿಂಗಾರ್ಚನೆ ಸಾಧನೆಯ ಪ್ರಥಮ ಹಂತ. ಈ ಹಂತದಲ್ಲಿ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ, ಷೋಡಶೋಪಚಾರಗಳನ್ನು ನಡೆಸಬೇಕಾಗುತ್ತದೆ. ಇದಕ್ಕೆ ಕಾರಣ ಮನವನ್ನು ಲಿಂಗದಲ್ಲಿ ನಿಲ್ಲಿಸುವುದಕ್ಕಾಗಿ ಪ್ರೇರಕ ಈ ಅರ್ಚನೆ; ಆದರೆ ಅದೇ ಗುರಿಯಲ್ಲ, ನಿಜವಾದ ಅರ್ಚನೆಯೆಂದರೆ ಇಷ್ಟಲಿಂಗದಲ್ಲಿ ಯೋಗದ ಅನುಸಂಧಾನ ನಡೆಯಬೇಕಾಗುತ್ತದೆ. ಷಣ್ಮುಖ ಸ್ವಾಮಿಗಳು-

ಎನ್ನ ಕರ ಕಮಲಮಧ್ಯದಲ್ಲಿ ಪರಮಶಿವ

ಲಿಂಗವ ತುಂಬಿ, ಆ ಲಿಂಗದ ಮಧ್ಯದಲ್ಲಿ ಕಂಗಳ

ತುಂಬಿ, ಆ ಕಂಗಳ ಮಧ್ಯದಲ್ಲಿ ಮನವ ತುಂಬಿ,

ಆ ಮನದ ಮಧ್ಯದಲ್ಲಿ ಭಾವವ ತುಂಬ ಪರಮಾಗಿರ್ದೆನಯ್ಯ

ನಿಮ್ಮೊಳಗೆ ಅಖಂಡೇಶ್ವರಾ

ಎಂದಿದ್ದಾರೆ. ಇದನ್ನು ಗಮನಿಸಿದಾಗ ‘ಇಷ್ಟಲಿಂಗ’ ಅರ್ಚನೆಗೆ ಬಳಸುವ ಸಾಧನ ಮಾತ್ರವಲ್ಲ, ಅದು ಮುಕ್ತಿಗೆ ಏಣಿ ಇದ್ದಂತೆ. ಅದಕ್ಕೆ ಬಳಸುವ ಶಿಲೆ ಅದರ ಮೇಲೆ ರೂಪಿಸುವ ಚಿದ್ರಸದಂತೆ. ಹೀಗೆ ಆಂತರಿಕ ಸಿದ್ಧಿಗೆ ಬಾಹ್ಯದಲ್ಲಿ ಇಷ್ಟಲಿಂಗ’ ವನ್ನು ಒಂದು ಸಾಧನವಾಗಿಸಿಕೊಂಡ ನಂತರ ಪ್ರಾಣಲಿಂಗ ಪೂಜೆ, ಕೊನೆಗೆ ಭಾವಲಿಂಗ ಪೂಜೆ ನಡೆಯಬೇಕು. ಸ್ಥೂಲ ತನುವಿನಲ್ಲಿ ಇಷ್ಟಲಿಂಗ ಪೂಜೆ, ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗ ಪೂಜೆ, ಕಾರಣತನುವಿನಲ್ಲಿ ಭಾವಲಿಂಗ ಪೂಜೆ ನಡೆಯಬೇಕು. ಇಂತಹ ಕ್ರಿಯೆಯೇ ಲಿಂಗಾಚಾರವೆಂದು ಪ್ರತಿಬೋಧಿತವಾಗಿದೆ.

೨. ಸದಾಚಾರ :

ಇದನ್ನು ಸತ್+ಆಚಾರ ಎಂದು ಬಿಡಿಸಬಹುದು. ಪಂಚಾಚಾರಗಳಲ್ಲಿ ಇದು ಎರಡನೆಯ ಆಚಾರವಾಗಿದೆ. ಶರಣ ಸಂಸ್ಕೃತಿಯ ಜೀವಾಳವೇ ಸದಾಚಾರವಾಗಿದೆ. ಸದಾಚಾರವನ್ನು ಸಮಯಾಚಾರವೆಂತಲೂ ಕರೆಯಲಾಗಿದೆ. ಇದು ಜಾತಿ ಮತ, ಲಿಂಗ, ಪಕ್ಷ, ಪಂಥ ಭೇದವಿಲ್ಲದೆ ಎಲ್ಲರೂ ಅನುಸರಿಸಿ ಆತ್ಮೋದ್ಧಾರ ಮಾಡಿಕೊಳ್ಳುವ ಸುಲಭ ಸಹಜಯೋಗ.  ಸತ್ ಪದವು ‘ಸತ್ಯ’ ಎಂಬ ಅರ್ಥವನ್ನು ಕೊಡುತ್ತದೆ. ಸತ್ ಎಂಬುದು ಪರಮಾತ್ಮನ ಸ್ಮರಣೆಯ ಸಂಕೇತ. ಆಚಾರವೆಂಬುದು ಮಾನವರ ನಡೆ-ನುಡಿ, ಜೀವನ ವಿಧಾನಗಳ ಸಂಕೇತ. ಮಾನವ ಜೀವನ ದೊರೆತಿರುವುದೇ ಭಾಗ್ಯ. ಅದನ್ನು ಸದುಪಯೋಗಪಡಿಸಿಕೊಂಡು ಸಾರ್ಥಕಗೊಳಿಸಬೇಕೆಂಬುದೇ ಸರ್ವರ ಅಪೇಕ್ಷೆ. ಅದಕ್ಕಾಗಿ ಬೇಕಾದ ಪರಿಸರವನ್ನು ಸೃಷ್ಟಿಕರ್ತನು ನಿರ್ಮಿಸಿದ್ದಾನೆ. ಅದನ್ನು ಬಳಸಿಕೊಳ್ಳುವ ಕ್ರಿಯಾಶೀಲತೆ ಬೇಕು.

 ‘ಸದಾಚಾರವು’ ಸತ್ಯಶುದ್ಧ ಮಾರ್ಗ, ಸರ್ವರ ಹಿತಕ್ಕಾಗಿ ಮಾಡುವ ಸತ್ಕಾರ್ಯಗಳು, ಸತ್ಯಶುದ್ಧ ಉದ್ಯೋಗ ಮೊದಲಾದ ಅರ್ಥಗಳನ್ನು ಒಳಗೊಳ್ಳುತ್ತದೆ. ಇಲ್ಲಿ ಕೇವಲ ಉದರನಿಮಿತ್ತವಾಗಿ ತನ್ನ  ಕುಟುಂಬದ ಕ್ಷೇಮಕ್ಕಾಗಿ ಮಾಡುವ ಕಾರ್ಯವನ್ನು ಸದಾಚಾರವೆನ್ನಲಾಗದು. ಕೇವಲ ಸ್ವಾರ್ಥ ಪರನಾಗಿರಬಾರದು. ಅಂಥವರು ಭಕ್ತನೆನಿಸಿಕೊಳ್ಳಲು ಅಯೋಗ್ಯ, ಅಂಥವರ ಬಗ್ಗೆ ಚೆನ್ನಬಸವಣ್ಣನವರು-

ʼ’ಹಸಿವಿನ ಹಂಗಿಗೆ ಭವಿತಾವಕ್ಕೆ ಇಚ್ಛೆ

ಮಾಡವವರು, ಮಥನದ ಹಂಗಿಗೆ ಭವಿಸಂಗದ

ಇಚ್ಛೆಯ ಮಾಡುವರು, ಶ್ರೋತ್ರದ, ನೇತ್ರದ

ಘ್ರಾಣದ ಸುಖವ ಭುಂಜಿಸುವನ್ನಕ್ಕ

ಭಕ್ತಿಯೆಂತೆಂಬೆ, ಲಿಂಗೈಕ್ಯನೆಂತೆಂಬೆ

ಕೂಡಲ ಚೆನ್ನಸಂಗಯ್ಯ

ಅವರು ಸದಾಚಾರಕ್ಕೆ

ಸಲ್ಲರು ದೂರ ನೋಡಯ್ಯʼʼ

ಎಂದು ತೀವ್ರವಾಗಿ ಖಂಡಿಸುತ್ತಾರೆ. ಸದಾಚಾರವು ಸಮುದಾಯದ ಸದಸ್ಯನೊಬ್ಬನು ತನ್ನ ಬಾಳನ್ನು ಇತರರೊಂದಿಗೆ ಕಳೆಯಬೇಕಾದ ರೀತಿಯನ್ನು ಹೇಳುತ್ತದೆ. ವೀರಶೈವನು ಭಿಕ್ಷೆಯೆತ್ತದೆ, ಸೋಮಾರಿಯಾಗಿ ತಿನ್ನದೆ, ತನ್ನ ಸ್ವಂತ ಸಂಪಾದನೆಯಿಂದಲೇ ಜೀವನವನ್ನು ನಡೆಸಬೇಕು. ಸದಾಚಾರಕ್ಕೆ ಮುಖ್ಯವಾದುದು ಕಾಯಕ, ಕಾಯಕದಿಂದ ಹಣ ಸಂಪಾದನೆ ಮಾಡಿ ತಾನು ಜೀವಿಸುವುದಷ್ಟೇ ಅಲ್ಲದೆ, ಅದನ್ನು ತನ್ನ ಸಮಾಜದ ಇತರರೊಂದಿಗೆ ಹಂಚಿ ಅನುಭವಿಸಬೇಕು ಎಂದು ಸದಾಚಾರವು ನಿಯಮಿಸುತ್ತದೆ.

“ಕಾಯಕವೇ ಕೈಲಾಸ’ ಎಂಬುದು ಶರಣತತ್ವದ ಜೀವಾಳ, ಕಾಯಕ ಸತ್ಯಶುದ್ಧವಾಗಿರಬೇಕು. ಮತ್ತು ಗಳಿಸಿದ್ದನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಬೇಕು. ಅದನ್ನು ಇನ್ನೂ ಸೂಕ್ಷ್ಮವಾಗಿ ಗುರುವಿಗೆ ತನುವು ಲಿಂಗಕ್ಕೆ ಮನವು, ಜಂಗಮಕ್ಕೆ ಧನವು ಅರ್ಪಿತವಾಗಬೇಕು. ಇಲ್ಲಿ ಗುರುವಿಗೆ ತನು ಎಂದರೆ ಗುರುವಿನ ಹಸ್ತಮಸ್ತಕ ಸಂಯೋಗದಿಂದ ಪರಿಶುದ್ಧಗೊಂಡ ದೇಹದ ಕ್ರಿಯೆಗಳೆಲ್ಲಾ ಗುರುವಿನ ಕೃಪೆಗೆ ಪಾತ್ರವಾಗಬೇಕು. ಗುರೂಪದೇಶ ಮಾರ್ಗದಲ್ಲಿ ಪರಮಾತ್ಮನ ಸಂಪತ್ತಾಗಿರುವ ಈ ದೇಹವು ಬಳಕೆಯಾಗಬೇಕು ಎಂಬುದೇ ಗುರುವಿಗೆ ತನುವನ್ನರ್ಪಿಸಬೇಕೆಂಬ ಭಾವ. ಅದೇ ರೀತಿ ಲಿಂಗಕ್ಕೆ ಮನವನ್ನು ಎಂದರೆ ಮನಸ್ಸು ಶಿವಮಯವಾಗಬೇಕು. ಲಿಂಗ ವಿಶ್ವದ ಪ್ರತೀಕ. ಮನಸ್ಸು ಎಲ್ಲಾ ಇಂದ್ರಿಯಗಳ ಸೂತ್ರಧಾರ, ಅದು ಚಂಚಲವಾದರೆ, ಅನೀತಿಯ ದಾರಿ ಹಿಡಿಯುವದೇ ಹೆಚ್ಚು. ಆದ್ದರಿಂದ ಅದನ್ನು ಸ್ಥಿರಗೊಳಿಸಿ ಲಿಂಗದ ನೆನಹನ್ನು ತುಂಬಬೇಕು. ಮನ ಲಿಂಗಮಯವಾಗುವುದು ಎಂದರೆ ವಿಶ್ವಮಯವಾಗುವುದು ಎಂದರ್ಥ. ಧನ ಜಂಗಮಕ್ಕೆ ಎಂದರೆ, ತನ್ನ ದುಡಿಮೆಯ ಫಲ ಪರಹಿತಕ್ಕೆ ಬಳಕೆ ಯಾಗಬೇಕೆಂಬುದು ಶರಣರ ನಿಲುವು. ಹೀಗೆ ತನು-ಮನ-ಧನವನ್ನು ಸದುಪಯೋಗಪಡಿಸುವುದೇ ಸಹಜ ಯೋಗ, ಇದೇ ಸದಾಚಾರ ಅಥವಾ ಸಮಯಾಚಾರ, ಸದಾಚಾರದ ಬಗೆಗೆ ಬಸವಣ್ಣನವರ ನಡಿಗಳು ಗಮನಾರ್ಹ.

ಲಕ್ಷಗಾವುದ ಹೋಗಿ

ಭಕ್ತಭಕ್ತನ ಕಾಂಬುದು ಸದಾಚಾರ

ಅಲ್ಲಿ ಕೂಡಿ ದಾಸೋಹವ ಮಾಡಿದಡೆ

ಕೂಡಿಕೊಂಬನು ನಮ್ಮ ಕೂಡಲ ಸಂಗಮದೇವಾ”

ಎಂದಿದ್ದಾರೆ. ಅಂತೆಯೇ ಅವರ ಮತ್ತೊಂದು ವಚನದಲ್ಲಿ,

ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಸದ್ಭಕ್ತನು;

ಮಾಡಿದಡೆ ಮಾಡಲಿ ಮಾಡಿದಡೆ ತಪ್ಪೇನು ?

ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈ ದುಡುಕಿದಡೆ

ಅದು ಪ್ರಸಾದವಲ್ಲ, ಕಿಲ್ಬ

ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ

ಪ್ರಸಾದಕ್ಕೆ ಕೈ ತೆಗೆದಡೆ, ಅದು ಲಿಂಗಕ್ಕೆ ಬೋನ,

ಇದು ಕಾರಣ, ಕೂಡಲ ಸಂಗಮದೇವಾ

ಇಂತಪ್ಪ ಸದಾಚಾರಿಗಳನೆನಗೆ ತೋರಾ |

ಎಂದಿದ್ದಾರೆ. ಇಲ್ಲಿ ಪರಸ್ಪರ ಪ್ರೇಮ ಸೌಹಾರ್ದಗಳ ಪ್ರತಿಪಾದನೆ ಇದೆ, ಸಮಾಜದಲ್ಲಿ ಸಾಮರಸ್ಯದ ಸಾಧನೆಯ ಸೂಚನೆಯಿದೆ.

ಸದಾಚಾರದಲ್ಲಿ ಎಂಟು ವಿಧಗಳು. ೧. ಉತ್ಪನ್ನ ಶೀಲ, ೨. ಆಚಾರಶೀಲ, ೩. ಉದ್ಯೋಗಶೀಲ, ೪. ಉತ್ಕುಲ ಶೀಲ, ೫. ಸಂಬಂಧಶೀಲ, ೬. ಪ್ರಸನ್ನಶೀಲ, ೭. ಉತ್ತಮಶೀಲ. ಜ್ಞಾನಶೀಲ. ಇಲ್ಲಿ ‘ಶೀಲ ಎಂದಿರುವುದು ಆಚಾರ ಶಬ್ದದ ಪರ್ಯಾಯ ಪದ. ಸದಾಚಾರದಲ್ಲಿ ಇರಬೇಕಾದ, ಗಮನಿಸಬೇಕಾದ, ಗಳಿಸಬೇಕಾದ, ಬಳಸಬೇಕಾದ ಆಂತರಿಕ ಸಂಪತ್ತಿನ ವಿವರಣೆ ಈ ಶೀಲ ಸಂಪತ್ತಿನಲ್ಲಿ ವ್ಯಕ್ತವಾಗಿದೆ. ಸದಾಚಾರದ ಅಂತರಾರ್ಥವನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಒಟ್ಟಾರೆ ಸದಾಚಾರಿಯು

ಅಷ್ಟಾವರಣಗಳಲ್ಲಿ ಅಚಲ ನಂಬಿಕೆ, ವೀರಶೈವರನ್ನೆಲ್ಲ ಸಮಾನವೆಂದು ತಿಳಿಯುವುದು ಭವಿಗಳೊಡನೆ ಸೇರದಿರುವುದು, ಲೌಕಿಕ ಕರ್ಮಗಳಲ್ಲಿಯ ವಿಧಿ ನಿಷೇಧಗಳನ್ನು ಪಾಲಿಸುವುದು ಮುಂತಾದವುಗಳನ್ನು ಒಳಗೊಳ್ಳುತ್ತಾನೆ.

೩. ಶಿವಾಚಾರ :

ಪಂಚಾಚಾರಗಳಲ್ಲಿ ಮೂರನೆಯದು ಶಿವಾಚಾರ. ಇಲ್ಲಿಯೂ ಶಿವ+ಆಚಾರ ಎಂದು ಎರಡು ಪದಗಳಿವೆ. ಶಿವಾಚಾರದ ತತ್ವಾರ್ಥವನ್ನು ಅರಿಯಬೇಕಾದಲ್ಲಿ ಮೊದಲು ‘ಶಿವ’ ಶಬ್ದದ ಮೂಲಾರ್ಥವನ್ನು ಅರಿಯಬೇಕಾಗುತ್ತದೆ. ಅಮರಕೋಶದಲ್ಲಿ ‘ಶಿವ’ ಶಬ್ದಕ್ಕೆ ʼʼಶ್ವಃ ಶ್ರೇಯಸಂ ಶಿವಂ ಭದ್ರಂ ಕಲ್ಯಾಣಕಾರಿ, ಮಂಗಳಪ್ರದವಾದುದೇ ಶಿವ” ಎಂಬರ್ಥ. ಶರಣರು ಹಿಂದೂ ಸಂಸ್ಕೃತಿಯ

ಪೌರಾಣಿಕ ಶಿವನ ಪ್ರತಿಪಾದನೆಗನುಗುಣವಾದ ಶಿವಚಾರತತ್ವ ಪ್ರತಿಪಾದಿಸಿಲ್ಲ ಬದಲಾಗಿ ಸದಾ ಲೋಕಕಲ್ಯಾಣವನ್ನೆ ಬಯಸುವ, ಲೋಕಹಿತಕರವಾದ ಮಂಗಳ ಕಾರ್ಯವನ್ನೇ ಕೈಕೊಳ್ಳುವ ಶಿವಭಕ್ತನನ್ನು ಪ್ರತಿಪಾದಿಸುತ್ತಾರೆ.

 ಶಿವಾಚಾರತತ್ವದಲ್ಲಿ ಸ್ವಾರ್ಥಭಾವವನ್ನು ತೊರೆದು ಸರ್ವವೂ ಶಿವನ ಪ್ರಸಾದವೆಂಬ ಭಾವನೆ ಬೆಳೆಯುತ್ತದೆ. ಅದರಿಂದ ಅಹಂಕಾರ, ಮಮಕಾರವಳಿಯುತ್ತದೆ. ಶಿವತ್ವವೇ ಜೀವನದಲ್ಲಿ ಬೆಳೆಯುತ್ತದೆ ಮತ್ತು ಉಳಿಯುತ್ತದೆ. “ಶಿವಭಕ್ತರಲ್ಲಿ ಕುಲಗೋತ್ರ, ಜಾತಿ, ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೇ ಶಿವಾಚಾರ” ಎಂದು ಚೆನ್ನಬಸವಣ್ಣನವರು ‘ಶಿವಾಚಾರ’ ವನ್ನು ವಿಶ್ಲೇಷಿಸಿದ್ದಾರೆ. ಶಿವಾಚಾರವು ತನ್ನ ಧರ್ಮಕ್ಕೆ ಸೇರಿದವರನ್ನು ಕಾಣಬೇಕಾದ ಬಗೆಯನ್ನು ವಿಧಿಸುತ್ತದೆ. ತನ್ನ ಧರ್ಮದ ಉತ್ತಮಿಕೆಗಾಗಿ, ಪ್ರಸಾರಕ್ಕಾಗಿ ವ್ಯಕ್ತಿಯು ತನ್ನ ನಡುವಳಿಕೆ-ಮನೋಭಾವಗಳಿಂದ ಸಲ್ಲಿಸಬೇಕಾದ ಕಾಣಿಕೆಯನ್ನು ಹೇಳುತ್ತದೆ.

ಶರಣರ ಕಾಲಕ್ಕೆ ಎಲ್ಲ ಮತಜಾತಿಗಳಿಂದ ವೀರಶೈವಕ್ಕೆ ಮತಾಂತರ ನಡೆಯಿತು. ಶರಣರು ಲಿಂಗಧಾರಿಗಳಲ್ಲಿ ಸಮಾನತೆಯನ್ನು ಬೋಧಿಸುವುದು ಆಗ ಅತ್ಯವಶ್ಯವಾಗಿತ್ತು. ವೀರಶೈವಕ್ಕೆ ಸೇರಿದ ಕೆಲವರು ತಮ್ಮ ಜಾತಿ, ಮತ, ಸಾಮಾಜಿಕ ಸ್ಥಿತಿಗತಿಗಳ ಸ್ಮರಣೆಯಿಂದ ಕೀಳೆಂದು ಪರಿಗಣಿಸುತ್ತಿದ್ದರು. ಇದು ಧರ್ಮದ ಐಕ್ಯತೆಗೆ ಮಾರಕವಾದ್ದರಿಂದ ಐಕ್ಯಮತ ಸಾಧನೆಯ ಉದ್ದೇಶದಿಂದ ಶರಣರು ಶಿವಾಚಾರವನ್ನು ನಿಯಮಿಸಿದರು. ಕೇವಲ ಊಟೋಪಚಾರಗಳಲ್ಲಿ ಮಾತ್ರವಲ್ಲದೆ, ವೈವಾಹಿಕ ಸಂಬಂಧಗಳಲ್ಲಿಯೂ ವೀರಶೈವರೆಲ್ಲ ಅಡೆತಡೆಯಿಲ್ಲದೆ ಸೇರಬೇಕೆಂದು ಬೋಧಿಸಿದರು. ಜೀವನವೇ ಶಿವಮಯವಾಗಬೇಕು. ಅದು ಶಿವಾಚಾರದ ಲಕ್ಷಣ. ಅವನು ಮಾಡುವ ಕಾರ್ಯವು ಮಂಗಳಕರವಾಗಿರಬೇಕು; ಯಾರಿಗೂ ಅಹಿತಕಾರಿಯಾಗಿರಬಾರದು.

ಶಿವಚಿಂತೆ, ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ

ಆಚಾರ ಶಿವಾಚಾರ ತಮ ತಮಗೆ ಸೂರೆಯೆ,

 ಕೂಡಲಸಂಗಮದೇವನ ನೆರೆ ಪೂಜಿಸಿದವಂಗಲ್ಲದೆʼʼ

 ಶಿವಾಚಾರಿಗಳು ಸದಾ ಶಿವಚಿಂತೆಯಲ್ಲಿರಬೇಕು. ಅವರ ಮನಸ್ಸಿನಲ್ಲಿ ದುಷ್ಟ ಆಲೋಚನೆಗಳು ಸುಳಿಯಬಾರದು. ಅದನ್ನು ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ –

ಅವರ ನಡೆಯೊಂದು ನುಡಿಯೊಂದಾದಡೆ

 ಶಿವಾಚಾರಕ್ಕವರು ಸಲ್ಲರಯ್ಯಾ |

ಬಲ್ಲನು, ಸಾತ್ವಿಕರಲ್ಲದವರನೊಲ್ಲನು;

ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು,

ಪ್ರಪಂಚಯ ಮನವನೊಲ್ಲನು ಕೂಡಲಸಂಗಮದೇವನು’,

ಈ ವಚನದಲ್ಲಿ ಶಿವಾಚಾರದ ಒಟ್ಟು ವಿಶ್ಲೇಷಣೆ ಮೂಡಿ ಬಂದಿದೆ. ಶಿವಾಚಾರ ಸಂಪನ್ನನ ನಡೆ ನುಡಿಗಳಲ್ಲಿ ಭೇದವಿರಬಾರದು, ಸ್ವಾರ್ಥ, ರೋಷಗಳಿರಬಾರದೆಂಬುದು ಅಷ್ಟೇ ನಿಖರವಾದುದು. ತತ್ವವನ್ನು ಹೇಳುವುದು ಸುಲಭ, ಆದರೆ ಆಚರಣೆ ಕಷ್ಟದಾಯಕ. ಏಕೆಂದರೆ,

ಶಿವಾಚಾರವೆಂಬುದೊಂದು ಬಾಳಬಾಯಧಾರೆ,

ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು,

ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು

ಬಿಚ್ಚಿ ಬೇರಾದಡೆ ಮೆಚ್ಚುವನೇ ನಮ್ಮ

ಕೂಡಲಸಂಗಮದೇವಾʼʼ

ಶಿವಾಚಾರವೆಂಬುದು ಕತ್ತಿಯ ಅಲಗಿನಷ್ಟೇ ಹರಿತವಾಗಿದೆ. ಅದನ್ನು ಅಳವಡಿಸಿಕೊಳ್ಳುವಲ್ಲಿ ತನ್ಮಯತೆ, ನಿರ್ವ೦ಚನೆ ಇರಬೇಕಾಗುತ್ತದೆ. ಇಲ್ಲಿ ಬಸವಣ್ಣನವರು ಆತ್ಮಸಾಕ್ಷಿಯಾಗಿ ಹೇಳುವುದೆಂದರೆ-

ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯವ ಮುಟ್ಟಲೀಯದೆ

ಆಚಾರವ ಶಿವಾಚಾರವ ಮಾಡುವೆ;

ಭಯ ಭಕ್ತಿಯಿಂದ ತೋರುವೆ ಮನದಲ್ಲಿ ವಂಚನೆಯಿಲ್ಲದೆ;

ಭಾವಶುದ್ಧ ಪೂಜೆಯ ಮಾಡುವ

ಎನ್ನ ಪ್ರಾಣ ಶಕ್ತಿಯಿಂದ ಕೂಡುವೆ

ಕೂಡಲಸಂಗಮದೇವರ ʼʼ

ಇಂತಹ ಪ್ರತಿಜ್ಞೆಯಿಂದ ತಮ್ಮ ಶಿವಾಚಾರ ಸಂಪನ್ನತೆಯನ್ನು ವ್ಯಕ್ತಪಡಿಸಿದ್ದಾರೆ.

ಶಿವಾಚಾರವು ಕೇವಲ ಬಹಿರ೦ಗದ ಆಚರಣೆಯಲ್ಲ, ಅದೊಂದು ಅಂತರಂಗದ ಸಾಧನೆಯಾಗಿದೆ. ಅದರ ವಿವರಣೆ ಸುಲಭ ಸಾಧ್ಯವಲ್ಲ ಎಂಬುದನ್ನು

ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ

ಕರಿಯ ಕನ್ನಡಿಯೊಳಡಗಿದಂತಯ್ಯಾ |

ಗುಣಿ ಅವಗುಣಿಯೊಡನಾಡಿದಡೆ

ಅದೆ ಆತನ ಕರ್ಮಫಲ ನೋಡಾ |

ಕೂಡಲಸಂಗನ ಶರಣರ ಅನುಭಾವ

ಭವದುಃಖಗಳಿಗೆ ವೇದ್ಯವಾಗದು’ʼ

ಎಂದು ಗಂಭೀರವಾಗಿ ಚಿತ್ರಿಸಿದ್ದಾರೆ.

ಶಿವಶರಣರು ವಿಶ್ವಮಾನವ ಭಾವನೆಯುಳ್ಳವರು ಎಂಬುದು ನಿತ್ಯ ಸತ್ಯ. ಆದರೆ ಅವರು ಸರ್ವಸಮ  ಭಾವವನ್ನು ಎಲ್ಲ ಮಾನವರಿಗೂ ಅನ್ವಯಿಸಿಲ್ಲ. ಅದು ‘ಶಿವಭಕ್ತರಲ್ಲಿ ಎಂದು ನಿರ್ದೇಶಿಸಿದ್ದಾರೆ. ಶಿವಭಕ್ತರೆಂದರೆ ಲಾಂಛನಧಾರಿಗಳೆಂದಲ್ಲ. ಹಿಂದೆ ಹೇಳಿದಂತೆ ಕಾಮಕ್ರೋಧಾದಿಗಳಿಂದ ದೂರಾದವರು. ಪಂಚೇಂದ್ರಿಯ, ಸಪ್ತಧಾತುಗಳಿಗೆ ದಾಸರಾಗದವರು. ಅಂಥವರಲ್ಲಿ ಭೇದವೆಣಿಸಬಾರದೆಂಬ ನಿರ್ದೇಶನ. ನಡೆಯೆಲ್ಲವೂ ಶಿವನಡೆ, ನುಡಿಯೆಲ್ಲವೂ ಶಿವನುಡಿಯಾದರೆ ಅದು ನಿಜವಾಗಿ ಶಿವಾಚಾರವೆನಿಸುತ್ತದೆ ಎಂಬುದನ್ನು ಶರಣರು ಪ್ರತಿಪಾದಿಸಿದ್ದಾರೆ.

೪. ಗಣಾಚಾರ :

ಪಂಚಾಚಾರಗಳಲ್ಲಿ ನಾಲ್ಕನೆಯ ಆಚಾರವೇ ಗಣಾಚಾರವಾಗಿದೆ. ಗಣ+ಆಚಾರ ಈ ಪದದಲ್ಲಿ ‘ಗಣ’ ಎಂಬುದು ಪ್ರಬಲ ಸಂಘಟನೆಯನ್ನು ಹಾಗೂ ಆತ್ಮರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧನಾಗುವ ಧೀರನನ್ನು ಸೂಚಿಸುತ್ತದೆ. ಗಣಾಚಾರವು ವೀರಶೈವನು ಇತರ ಧರ್ಮಗಳಿಂದ ತನ್ನ ಧರ್ಮವನ್ನು ರಕ್ಷಿಸಬೇಕಾದ, ಪೋಷಿಸಬೇಕಾದ ಕರ್ತವ್ಯವನ್ನು ಒಳಗೊಳ್ಳುತ್ತದೆ. ಗಣಾಚಾರಿಯು ಲಿಂಗ ದ್ರೋಹ, ಜಂಗಮ ದ್ರೋಹಗಳನ್ನು ಸಹಿಸಬಾರದು. ಅಂತಹ ವಿರೋಧಿ ಕೃತ್ಯಗಳನ್ನು ವೀರತನದಿಂದ

ಎದುರಿಸಬೇಕು. ಹಾಗೆ ಬಗ್ಗು ಬಡಿಯಲು ಸಾಧ್ಯವಾಗದಿದ್ದರೆ ತಾನೇ ಆ ಜಾಗದಿಂದ ಹೊರಡಬೇಕು. ಸ್ವಧರ್ಮದ ಪ್ರಸಾರಕ್ಕೆ ವೀರಾವೇಶವನ್ನು ಪಡೆದು ಪ್ರಾಣಾರ್ಪಣೆಯನ್ನು ಮಾಡಲೂ  ಹಿಂಜರಿಯಬಾರದೆಂಬ ತತ್ವವನ್ನು ಗಣಾಚಾರವು ಬೋಧಿಸುತ್ತದೆ. ಶರಣ ಸಾಮವೇದಿ, ಶರಣ ಶಂಕರದಾಸಿಮಯ್ಯ, ಶರಣ ಆದಯ್ಯ ಮೊದಲಾದವರು ಈ ಬಗೆಯ ಜೀವನವನ್ನು ನಡೆಸಿದ ಭಕ್ತರ ಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿಸಿದ ಹರಿಹರನ ಹಲವಾರು ರಗಳೆಗಳನ್ನಿಲ್ಲಿ ನೆನೆಯಬಹುದು.

ಚೆನ್ನಬಸವಣ್ಣನವರು ‘ಶಿವಾಚಾರದ ನಿಂದೆಯ ಕೇಳದಿರುವುದೇ ಗಣಾಚಾರ’ ಎಂದಿದ್ದಾರೆ. ಶರಣರ ಜೀವನ ಸಂದೇಶ ಪಾಪಿಯ ಮರ್ಧನವಲ್ಲ, ಪಾಪದ ನಿರ್ಮೂಲನೆ. ಅದನ್ನು ಅನುಸರಿಸುವ ರೀತಿ-ನೀತಿಗಳನ್ನು ಶರಣರ ನುಡಿ ಬೆಳಕಿನಲ್ಲಿ ನೋಡಬೇಕು. ಗಣಾಚಾರವೆಂಬುದು ಒಂದು ರೀತಿಯ ಜೀವನ ವ್ರತ. ಅಂತಹ ವ್ರತಿಗಳಿಗೆ ಬಸವಣ್ಣನವರು ಮಣಿಯುತ್ತಾರೆ.

ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತು ಮಾಡಿ

ಸಲಹಿದ ಸುಖವು, ಸಾಲೋಕ್ಯ, ಸಾಮೀಪ್ಯ,

ಸಾರೂಪ್ಯ, ಸಾಯುಜ್ಯದಂತುಟಲ್ಲ,

ಕೇಳಯ್ಯ ಕೂಡಲಸಂಗನ ಶರಣರು

ತಮ್ಮ ಒಕ್ಕುದನಿಕ್ಕಿ ಸಲುಹಿದ ಸುಖವ

ಎಂಬಲ್ಲಿ ಗಣಾಚಾರಿಗಳ ಸಹಯೋಗವು ಮುಕ್ತಿಗಿಂತಲೂ ಮಿಗಿಲಾದುದು ಎನ್ನುತ್ತಾರೆ. ತಮ್ಮ ಮತ್ತೊಂದು ವಚನದಲ್ಲಿ-

ಲಿಂಗಮುಖದಿಂದ ಬಂದ ಪ್ರಸಾದವನ್ನಲ್ಲದೆ

ಕೊಂಡೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ !

ಲಿಂಗಾರ್ಪಿತವಲ್ಲದೆ ಉದಕವ ಮುಕ್ಕಳಿಸಿದೆನಾಡದೆ

ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ,

ಲಿಂಗಾರ್ಪಿತವಲ್ಲದೆ, ಹುಲ್ಲುಕಡ್ಡಿಯ ಕೊಂಡೆನಾದಡೆ, ನಾ ಬಲ್ಲೆ

ಮುಂದೆ, ಭವ ಘೋರನರಕವೆಂಬುದ |

ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು, ಅಳವರಿಯದೆ

ನುಡಿದೆನು, ಕಡೆ ಮುಟ್ಟಿ ಸಲಿಸದಿದ್ದಡೆ ತಲೆದಂಡ

ಕೂಡಲ ಸಂಗಮದೇವಾʼʼ

ಎಂದು ಅರ್ಥವತ್ತಾಗಿ ಸಮರ್ಥಿಸಿದ್ದಾರೆ. ಗಣಾಚಾರವೆಂಬುದು ದೇಹ ಬಲಿದ ಪ್ರದರ್ಶನವಲ್ಲ, ಅದು ಆತ್ಮಬಲದ ಸ್ಪಂದನ. ಅಂಥವರು ಶಿವನೊಲಿದ ಶಿವಗಣಂಗಳೆನಿಸುತ್ತಾರೆ. “ದಯವೇ ಧರ್ಮ, ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’ ಎನ್ನುವ ಶರಣ ಧರ್ಮದ ಆರಾಧಕರು ಗಣಾಚಾರಿಗಳು.

೫. ಭೃತ್ಯಾಚಾರ :

 ಪಂಚಾಚಾರಗಳಲ್ಲಿ ಕೊನೆಯದು ಇದು. ಭೃತ್ಯ+ಆಚಾರ ಎರಡು ಶಬ್ದಗಳ ಸಮನ್ವಯವಿದೆ. ಭೃತ್ಯ ಎಂದರೆ ಸಾಮಾನ್ಯ ಅರ್ಥದಲ್ಲಿ ‘ಸೇವಕ’ ಎಂದು ಭಾವಿಸಲಾಗಿದೆ. ಆದರೆ ವೀರಶೈವದಲ್ಲಿ ಭೃತ್ಯಾಚಾರವು ತನ್ನ ಧರ್ಮದ ಹಿರಿಯರೊಡನೆ ನಡೆದುಕೊಳ್ಳಬೇಕಾದ ಬಗೆಯನ್ನು ವಿಧಿಸುತ್ತದೆ. “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಭಾವನೆ ಬೆಳೆದಾಗ, ತಾನು ಹೆಚ್ಚು ನೀನು ಹೆಚ್ಚು ಎಂಬ ಘರ್ಷಣೆ ಇರುವುದಿಲ್ಲ. ಅದರೊಡನೆ ತನ್ನ ಧರ್ಮಾನುಯಾಯಿಗಳ ಬಗ್ಗೆ ಪ್ರೀತಿ ವಿಶ್ವಾಸಗಳು ಬೆಳೆಯುತ್ತವೆ.

 ಸೇವಕ ಎಂಬಲ್ಲಿ ತನ್ನ ಉದರನಿಮಿತ್ತವಾಗಿ ಸೇವೆ ಮಾಡುವವರಿರಬಹುದು ಇಲ್ಲವೆ ಪ್ರಾಣಭಯದಿಂದ ಸೇವೆ ಮಾಡುವವರು ಇರಬಹುದು. ಶರಣರು ಭೃತ್ಯ ಶಬ್ದವನ್ನು ಬಳಸಿರುವುದು ಇಂತಹ ಅರ್ಥಗಳಲ್ಲಿ ಅಲ್ಲ.  ದೈವದತ್ತವಾದ ತನು-ಮನ- ಧನಗಳನ್ನು ಪರಹಿತಕ್ಕಾಗಿ ವಿನಿಯೋಗಿಸುವವನು. ಅವನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಗೈಯುವವನು ಹಾಗೂ ಅದನ್ನು ಜೀವನ ಧರ್ಮವೆಂದು ಭಾವಿಸಿದವನು. ತನ್ನ ಸೇವೆಯಿಂದ ಅನ್ಯರ ಉದ್ಧಾರ ಎಂಬ ಅಹಂಕಾರವಿಲ್ಲದೆ ಅದು ತನ್ನ ಉದ್ಧಾರ ಎಂದು ಭಾವಿಸುವವನು. ಈ ಅರ್ಥದಲ್ಲಿ ‘ಭೃತ್ಯ’ ಶಬ್ದವನ್ನು ಶರಣರು ಪ್ರಯೋಗಿಸಿದ್ದಾರೆ.

ಚೆನ್ನಬಸವಣ್ಣನವರು ”ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯ ಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ” ಎಂದಿದ್ದಾರೆ. ಈ ನಿಟ್ಟಿನಲ್ಲಿ ಬಸವಣ್ಣನವರ ಹಲವು ಸಂದೇಶಗಳು ಗಮನಾರ್ಹ.

ಸ್ವಾಮಿ ಭೃತ್ಯ ಸಂಬಂಧಕ್ಕೆ ಆವುದು ಪಥವೆಂದಡೆ,

ದಿಟವ ನುಡಿವುದು, ನುಡಿದಂತೆ ನಡೆವುದು

ನುಡಿದು ಹುಸಿವ, ನಡೆದು ತಪ್ಪುವ

ಪ್ರಪಂಚಯನೊಲ್ಲ ಕೂಡಲಸಂಗಮದೇವ’;

ಎಂಬಲ್ಲಿ ಭಕ್ತಿಯ ನೆಲೆಗಟ್ಟಿನ ಮೇಲೆ ನಿಲ್ಲಬೇಕಾದ ಭೃತ್ಯಾಚಾರದ ಚಿತ್ರ ಇದೆ. ಸೇವೆ ಯಾವತ್ತೂ ಪ್ರೇಮಮಯವಾಗಿರಬೇಕು. ಹಾಗೆಯೇ ಅನುಭವಮಯವಾಗಿರಬೇಕು. ಅದೆಂದರೆ-

ಇತ್ತ ಬಾರಯ್ಯಾ, ಇತ್ತ ಬಾರಯ್ಯಾ, ಎಂದು

ಭಕ್ತರೆಲ್ಲರೂ ಕೂರ್ತು ಹತ್ತೆ ಕರೆವುತ್ತಿರಲು

ಮತ್ತೆ ಕೆಲಕ್ಕೆ ಹೋಗಿ ಶರಣೆಂದು ಹಸ್ತಬಾಯನೆ ಮುಚ್ಚಿ

ಕಿರಿದಾಗಿ ಭೃತ್ಯಾಚಾರವ ನುಡಿದು

ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ

ಕೂಡಲಸಂಗಮದೇವ ಪ್ರಮಥರ ಮುಂದೆ ʼʼ

ಇವೆಲ್ಲವುಗಳ ಜೊತೆಗೆ ಕಳಶಪ್ರಾಯವಾದ ಸೂತ್ರವೆಂದರೆ ಮಾಡುವವನು ತಾನಲ್ಲ, ಮಾಡಿಸಿಕೊಳ್ಳು ವವನೂ ಮಾಡುವವನೂ ದೇವನೇ ಎಂಬ ಅನುಭಾವ ಅಳವಡಬೇಕು. ನೃತ್ಯಾಚಾರದಲ್ಲಿ ತನ್ನನ್ನು ತಾನ ಮರೆತು ಪರಮಾತ್ಮನ ಸೂತ್ರದಂತೆ ತಾನು ನಡೆಯುತ್ತಿರುವ ನಿಷ್ಠೆ ಬಲಗೊಳ್ಳಬೇಕು. ತಾನು ಯಾವ ಜೀವಕ್ಕೆ ಸೇವೆ ಸಲ್ಲಿಸಿದರೂ ಅದು ಪರಮಾತ್ಮನ ಸೇವೆ ಮತ್ತು ಅದು ಅವನ ಆಜ್ಞೆಯಂತೆಯೇ ನಡೆಯುತ್ತಿದೆ ಎಂಬ ಭಾವನೆ ತನು-ಮನ-ಭಾವದಲ್ಲಿ ತುಂಬಿರಬೇಕು. ನೃತ್ಯಾಚಾರವೆಂಬುದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ, ಅದಕ್ಕಾಗಿ ತಾನೆಸಗುವ ಕೈಂಕರ್ಯವಾಗಬೇಕು. ಅಣುರೇಣು ತೃಣಕಾಷ್ಟಗಳೆಲ್ಲವೂ ಶಿವಸೃಷ್ಟಿಯೆಂದು ನಂಬಿ ಸೇವೆಗೈಯಬೇಕು. ಅದೇ ನೃತ್ಯಾಚಾರದ ತಿರುಳು. ಒಟ್ಟಿನಲ್ಲಿ, ಪಂಚಾಚಾರಗಳ ಕುರಿತು ಬಸವಣ್ಣನವರು ಒಂದೇ ವಚನದಲ್ಲಿ ಸೂತ್ರಬದ್ಧವಾಗಿ ಹೀಗೆ ವಿವರಿಸಿದ್ದಾರೆ

ಲಿಂಗವೇ ಪರವೆಂದರಿದು ಅನ್ಯದೇವರ

ಭಜನೆಯಿಲ್ಲದಿಪ್ಪುದೇ ಲಿಂಗಚಾರ

ತ್ಕ್ರಿಯೆಯಿಂದ ಧನವ ಸಂಪಾದಿಸಿ

ಗುರು, ಲಿಂಗ, ಜಂಗಮ, ದಾಸೋಹ, ದಾನ

ಪರೋಪಕಾರ ಮಾಡುವುದು ಸದಾಚಾರ

ಅಂಗದ ಮೇಲೆ ಲಿಂಗವಿರ್ಪ ಶಿವಭಕ್ತನೇ

ಶಿವರೂಪವೆಂದರಿದು, ಅವರ ಮಂದಿರವ ಪೊಕ್ಕು

ಮಿಕ್ಕುದನುಂಬುದೇ ಶಿವಾಚಾರ

ಶಿವನಿಂದೆಯ ಕಿವಿಗೊಟ್ಟು

ಕೇಳದಿಪ್ಪುದೇ ಗಣಾಚಾರ

ಶಿವಭಕ್ತರ ಶಿಶುವು ಹೊಟ್ಟೆಯಲ್ಲಿರ್ಪುದ ಕಂಡು

ಯಜಮಾನನೆಂದರಿದು ನಮ್ರ ಭಾವದಿಂ

ನಡೆದುಕೊಳ್ಳುವುದೇ ಭೃತ್ಯಾಚಾರ

ಇಂತೀ ಪಂಚಾಚಾರಯುಕ್ತವಾಗಿ ನಡೆಯುವ

ಶಿವಭಕ್ತನೊಕ್ಕುಮಿಕ್ಕುದನಿಕ್ಕಿ ಸಲಹಯ್ಯಾ

ಕೂಡಲಸಂಗಮದೇವಾ

ಪಂಚಾಚಾರಗಳು ವೀರಶೈವ ವಿಶಿಷ್ಟವಾದವುಗಳೇ.  ಆದಾಗ್ಯೂ ಪಂಚಾಚಾರಗಳಲ್ಲಿ ವೀರಶೈವ ಧರ್ಮ ವಿಶಿಷ್ಟ ಅಂಶವನ್ನು ಹಿಂದಕಿಟ್ಟು ನೋಡಿದರೆ ಆ ಆಚಾರಗಳೆಲ್ಲವೂ ಇಂದಿನ ಆಧುನಿಕ ಬದುಕಿನ ಎಲ್ಲ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಮಾರ್ಗವನ್ನು ತೋರಿಸುವ ದಿಕ್ಸೂಚಿಗಳಾಗಿವೆ. ಇವು ಸರ್ವಕಾಲಕ್ಕೂ, ಸಮಸ್ತ ಮನುಕುಲಕ್ಕೂ ಅನ್ವಯಿಸುವ ಸಾಮಾಜಿಕ ಮತ್ತು ಧಾರ್ಮಿಕ ಪ್ರಕ್ರಿಯೆಗಳಾಗಿವೆ. ಇಂತಹ ದಿವ್ಯ ತತ್ವಗಳನ್ನು ಕೊಡಮಾಡಿದ ಶರಣರು ಎಲ್ಲ ಕಾಲಕ್ಕೂ ಜಗನ್ಮಾನ್ಯರಾಗುತ್ತಾರೆ. ಪಂಚಾಚಾರಗಳು ವಿಶ್ವಮಾನ್ಯ ಮಾನವೀಯ ಮೌಲ್ಯಗಳಾಗುತ್ತವೆ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಷ್ಟಾಂಗಯೋಗ ಬಲು | ಕಷ್ಟವೆಲೊ ಮಗನೆ ಎಂ

ದಿಷ್ಟ ಲಿಂಗವನು. ಸೃಷ್ಟಿಸುತ ಕರಕಿತ್ತ

ಶ್ರೇಷ್ಠ ಶ್ರೀಗುರುವೆ ಕೃಪೆಯಾಗು   ||೧೦೧||

ಇಲ್ಲಿಯವರೆಗೆ ಅಷ್ಟಾಂಗಯೋಗದ ವಿಚಾರವನ್ನು ವಿವರವಾಗಿ ಆಲೋಚಿಸಿದ್ದೇವೆ. ಅಷ್ಟಾಂಗಯೋಗದಲ್ಲಿ ಪ್ರತಿಯೊಂದು ಯೋಗಾಂಗವನ್ನು ಅನಂತಾನಂತ ನಿಯಮ ಪೂರ್ವಕ ಅನೇಕ ವ್ರತಗಳನ್ನು ಆಚರಿಸುತ್ತ ಬಾಹ್ಯಯೋಗಗಳನ್ನು ಸಿದ್ಧಿಸಿ ವಿವೇಕ ಖ್ಯಾತಿಗಳೆನಿಸಿದ ಧ್ಯಾನ ಧಾರಣ ಸಮಾಧಿಗಳನ್ನು ಸಾಧಿಸುವದು ಕೊನೆಗೆ ನಿರ್ವಿಕಲ್ಪಕ (ಅಸಂಪ್ರಜ್ಞಾತ) ಸಮಾಧಿಯನ್ನು ಸಿದ್ಧಿಸುವುದು ಸುಲಭವಲ್ಲ. ಸಿದ್ಧರಾದವರೂ ವಿರಳ. ಆದರೆ ಯೋಗಭ್ರಷ್ಟರಾಗುವವರ ಸಂಖ್ಯೆಯೇ ಬಹಳ. ಯೋಗಭ್ರಷ್ಟರಾದವರು ಪುನಃ ಪುನಃ ಹುಟ್ಟಿ ಯೋಗವನ್ನು ಸಾಧಿಸಬೇಕಾಗುವದು. ಅದು ಕಾರಣವೆ ಸಮಾಧಿಯು ತಾಮಸವೆಂದು ಹಿಂದಿನ ತ್ರಿಪದಿಯಲ್ಲಿ ಉಕ್ತವಾಗಿದೆ. ಇಂಥ ಅಷ್ಟಾಂಗಯೋಗವು ಕಷ್ಟಕರವಲ್ಲದೆ ಮತ್ತೇನು |

ಈ ಅಷ್ಟಾಂಗಯೋಗದ ಕಷ್ಟತತಿಯನ್ನು ಅರಿತ ಗುರುನಾಥನು ದಯೆಯಿಂದಲೂ ಪ್ರೀತಿಯಿಂದಲೂ ಇಷ್ಟಲಿಂಗವನ್ನು ಶಿರದರಮನೆಯಲ್ಲಿಂದ ಸೃಷ್ಟಿಸಿ ಕರಕಮಲಕ್ಕೆ ಕೊಟ್ಟಿದ್ದಾನೆ. ಈ ಕರದಿಷ್ಟಲಿಂಗಯೋಗ ಸುಲಭಯೋಗ, ಸಹಜ ಯೋಗ, ಶಿವಯೋಗ. ಅಂತೆಯೇ ಅದು ಮಂಗಲಕರಯೋಗವೆನಿಸಿದೆ.

 ಅಷ್ಟಾಂಗಯೋಗವು ಕ್ರಮಸಾಧನೆಯುಳ್ಳುದು. ಒಂದೊಂದನ್ನೇ ಆಚರಿಸುತ್ತ ಅಳವಡಿಸಿಕೊಳ್ಳುತ್ತ ಸಾಧಿಸಬೇಕಾಗುವದು. ಶಿವಯೋಗದಲ್ಲಿ ಅಥವಾ ಲಿಂಗಾಂಗ ಯೋಗದಲ್ಲಿ ಯೋಗದ ಎಂಟೂ ಅಂಗಗಳೂ ಏಕಕಾಲಕ್ಕೆ ಸಮಾವೇಶಗೊಳ್ಳುತ್ತವೆ. ಲಿಂಗಾಂಗ ಸಾಮರಸ್ಯ ಜ್ಞಾನವುಳ್ಳ ಶಿವಭಕ್ತನಿಗೆ ಸುಮನ-ಸತ್ಕ್ರಿಯೆಗಳಿಂದ ಯಮವು ಲಿಂಗಪೂಜೆಯ ನಿಯಮವು, ಶಿವಪೂಜೆಗೆ ಕುಳಿತುಕೊಳ್ಳುವ ಆಸನವು, ಪ್ರಾಣ ಲಿಂಗಾನುಸಂಧಾನದಲ್ಲಿ ಪ್ರಾಣಾಯಾಮವು, ಪ್ರಸಾದ ಶುದ್ಧಿಯಲ್ಲಿ ಪ್ರತ್ಯಾಹಾರವು, ಉಪಾಂಶು-ಮಾನಸಿಕ ಜಪಗಳೇ ಲಿಂಗಧ್ಯಾನವು, ಭಾವದಲ್ಲಿ ಭಾವಲಿಂಗವನ್ನು ಹೊಂದುವದೇ ಧಾರಣವು. ಐಕ್ಯಸ್ಥಿತಿಯಲ್ಲಿ ಸಮಾಧಿ. ಹೀಗೆ ಇವೆಲ್ಲವೂ ಶಿವಯೋಗದಲ್ಲಿ ಸಮತ್ವಗೊಳ್ಳುತ್ತವೆ.

ಅಷ್ಟಾಂಗಯೋಗದಲ್ಲಿ ಆಯಾಸವಿದೆ, ಕರ್ಮಜಡತೆಯಿದೆ. ಲಿಂಗಾಂಗ  ಯೋಗದಲ್ಲಿ ಯಾವ ಆಯಾಸವಿಲ್ಲ, ಕರ್ಮಜಡತೆಯ ಸೋಂಕಿಲ್ಲ, ನವನಾಥರಲ್ಲಿ ಪ್ರಸಿದ್ಧನಾದ ಗೋರಕ್ಷನಾಥನು ಹಠಯೋಗಸಾಧನೆಯಿಂದ ವಜ್ರದೇಹಿಯಾಗಿದ್ದರೂ, ಶಿವಯೋಗ ಸಿದ್ಧನೆನಿಸಿ ವೋಮಕಾಯನಾದ ಅಲ್ಲಮಪ್ರಭುವಿನ ಸಿದ್ಧಿಗೆ ಶರಣಾಗತ ನಾದ ಎಂಬ ಆಖ್ಯಾನಕ ರೋಚಕವೂ ತಾತ್ವಿಕವೂ ಆಗಿದೆ. ಇದರಿಂದ ಅಷ್ಟಾಂಗ ಯೋಗಕ್ಕಿಂತಲು   ಶಿವಯೋಗವೇ ಮಿಗಿಲೆಂದು ತಿಳಿಯದಿರದು.

ಅಷ್ಟಾಂಗ ಯೋಗವು ಬಹು ಕ್ರಿಯೆಗಳಿಂದ ಕೂಡಿ ಅಲ್ಪ ಫಲ ಕೊಟ್ಟರೆ ಶಿವಯೋಗವು ಅಲ್ಪ ಕ್ರಿಯೆ, ಬಹು ಫಲದಾಯಕವಾಗಿದೆ. ಸಾಮಾನ್ಯಾಧಿಕಾರಿಯೂ ಸಹ ಲಿಂಗಪೂಜೆಯ ಮರ್ಮವನ್ನು ಅರಿತು ಆಚರಿಸಬಹುದು. ಅಳವಡಿಸಿಕೊಳ್ಳ  ಬಹುದು. ಆದರೆ ಯೋಗವು ಹಾಗಲ್ಲ. ಇದನ್ನೆಲ್ಲ ತಿಳಿದ ಮಹಾಗುರುವು ಶಿಷ್ಯೋದ್ಧಾರಕ್ಕಾಗಿ ಇಷ್ಟಲಿಂಗವನ್ನು ಹುಟ್ಟಿಸಿ ಕರುಣಿಸಿದುದು ಮಹಾಕರುಣೆಯೇ ಸರಿ. ಸುಲಭದಲ್ಲಿ ಸಿಕ್ಕುವ ಮುಕ್ತಿದಾಯಕನಾದ ಗುರುವರನು ಶ್ರೇಷ್ಠವಲ್ಲದೆ ಮತ್ತೇನು ! ಅವನು ಪರಮಶ್ರೇಷ್ಠನೆನಿಸಿದ್ದಾನೆ.

ಶಾಂಬವಿಯ ಮುದ್ರೆಯ ವಿ | ಡಂಬಿಸುತಲೆನಗೆ ಸ್ವ-

ಯಂಭು ಲಿಂಗವ ಕ-ರಾಂಬುಜದೊಳಿತ್ತ ಕರು

ಣಾಂಬುನಿಧಿ ಗುರುವೆ ಕೃಪೆಯಾಗು   | ೧೦೨ |

ಶಿವಕವಿಯು ಅಷ್ಟಾಂಗಯೋಗದ ವಿಚಾರಗಳನ್ನು ಸೂಕ್ಷ್ಮವಾಗಿ ನಿರಸನ ಮಾಡಿ ಹಠಯೋಗಕ್ಕಿಂತಲೂ ಶಿವಯೋಗವೇ (ಲಿಂಗಾಂಗಯೋಗ) ಮಿಗಿಲಾದುದೆಂದು ಪ್ರತಿಪಾದಿಸಿದ ಮೇಲೆ ಯೋಗ ಮಾರ್ಗದ ಇನ್ನೊಂದು ಪ್ರಭೇದವೆನಿಸಿದ ತಾಂತ್ರಿಕ ಮಾರ್ಗದ ಮುದ್ರೆಗಳನ್ನು ಸೂಕ್ತವಾಗಿ ವಿಡಂಬಿಸುತ್ತಾನೆ.

ಮುದ್ರೆಯೆಂದರೆ ಮುದ್ರಿಕೆಯಿಂದ ಹೇಳಬಹುದು. ಅಂದರೆ ಸಂಕೇತವನ್ನು ಕೆತ್ತಿರುವ ಉಂಗುರ ಅಥವಾ ಸಾಧನವೆಂತಲೂ ಅರ್ಥ ಮಾಡಬಹುದು. ವೈಷ್ಣವರು ದೇಹ ಶುದ್ದಿಗಾಗಿ ಮತಾಚಾರ್ಯರಿಂದ ಭಗವಂತನ ಚಿನ್ಹೆಯನ್ನು (ಅಚ್ಚು) ಮುದ್ರಿಸಿಕೊಳ್ಳುವದಕ್ಕೂ ಮುದ್ರೆಯೆಂಬುದಾಗಿ ಹೆಸರಿದೆ. ಇನ್ನು ತಾಂತ್ರಿಕ ಮಾರ್ಗದಲ್ಲಿಯೂ ಈ ಮುದ್ರೆಗಳ ವಿಚಾರ ಬರುತ್ತದೆ. ತಂತ್ರವು ಆಗಮದ ಒಂದು ಭಾಗವು, ಆಗಮವು ವೇದದ ಸಮಕಾಲೀನವೆಂತಲೂ, ಕೆಲವರು ಅದಕ್ಕೂ ಮೊದಲಿನದೆಂತಲೂ ಪ್ರತಿಪಾದಿಸುತ್ತಾರೆ. ಕೆಲವು ಕಾರಣಗಳಿಂದ ಇತ್ತೀಚಿನದೆಂಬುದಾಗಿಯೂ ಹೇಳುತ್ತಾರೆ. “ಶ್ರೀಮೃಗೇಂದ್ರೋತ್ತರಾಗಮ” ದಲ್ಲಿ ೨೮ ಶಿವಾಗಮಗಳು ಶಿವನ ಸದ್ಯೋಜಾತಾದಿ-ಪಂಚಮುಖದಿಂದ ಸೃಷ್ಟಿಯ ಕಾಲಕ್ಕೇನೆ ಹುಟ್ಟಿದವೆನ್ನುವ ಸಬಲ ಪ್ರಮಾಣದಿಂದ ಆಗಮಗಳ ಬಹಪ್ರಾಚೀನತೆ ಕಂಡುಬರುತ್ತದೆ. ಉಪಾಗಮಗಳು ಅಧಿಕ ಸಂಖ್ಯೆಯಲ್ಲಿವೆ. ಆಗಮಗಳಲ್ಲಿ ಶಿವನು ಶಿವೆ (ಪಾರ್ವತಿ)ಗೆ ಕ್ರಿಯಾ- ಜ್ಞಾನವನ್ನು ಆಚಾರ-ವಿಚಾರಗಳನ್ನು, ಯೋಗ-ಶಿವಯೋಗವನ್ನು, ಏನೆಲ್ಲ  ವಿಷಯವನ್ನು ಬೋಧಿಸಿದ್ದಾನೆ. ಶಿವಾದ್ವೈತ ಸಾಹಿತ್ಯ ಕರ್ತೃಗಳೆನಿಸಿದ ಜ.ಚ.ನಿ. ಯವರು ಸೂಕ್ಷ್ಮ ತಂತ್ರಸಾರ’ದ ಮುಮ್ಮಾತಿನಲ್ಲಿ ಆಗಮದ ವಿಷಯ ವ್ಯಾಪ್ತಿ ಯನ್ನು ಪ್ರಸ್ತಾಪಿಸುತ್ತ-ಚಿತ್ತಶುದ್ಧಿಗೆ ಬೇಕಾದ ಧರ್ಮಗಳು; ಕಾಯಶುದ್ಧಿಗೆ  ಬೇಕಾದ ಕ್ರಿಯೆಗಳು, ಪ್ರಾಣಶುದ್ಧಿಗೆ ಬೇಕಾದ ಯೋಗಗಳು; ಬುದ್ಧಿವಿಕಾಸಕ್ಕೆ ಬೇಕಾದ ಜ್ಞಾನ-ವಿಜ್ಞಾನಗಳು, ಶಿಲ್ಪ ಸಂಗೀತ ಚಿತ್ರ ಮೊದಲಾದ ಮನೋಲ್ಲಾಸಕ ಕಲೆಗಳು ಆಗಮಗಳಲ್ಲಿವೆ. ಹುಟ್ಟು-ಸಾವಿನ, ಬಾಳು-ಬದುಕಿನ, ಆಗುಹೋಗುಗಳ ವಿಚಾರ ನಿಗಮಗಳಲ್ಲಿದೆ. ಉಪಾಸನೆಯ ವಿಧಿ-ವಿಧಾನಗಳು ನಿರೂಪಿತವಾಗಿವೆ. ಹೆಸರಾದ ಅರವತ್ತು ನಾಲ್ಕು ಕಲೆಗಳನ್ನು ವಿವರಿಸುತ್ತವೆ ಆಗಮಗಳು” ಎಂದುದಾಗಿ ವರ್ಣಿಸಿದ್ದಾರೆ.

 ದೇವತೆಯ ಧ್ಯಾನ ಮತ್ತು ಉಪಾಸನೆಯ ಐದಂಗಗಳಾದ ಪಟಲ, ಪದ್ಧತಿ, ಕವಚ, ಸಹಸ್ರನಾಮ, ಸ್ತೋತ್ರಗಳಿಂದ ಕೂಡಿದ ಗ್ರಂಥವು ಆಗಮದಲ್ಲಿ ತಂತ್ರ ಸಾಹಿತ್ಯವೆನಿಸುವದು. ಆಗಮಗಳಲ್ಲಿ ಸೃಷ್ಟಿ, ಪ್ರಲಯ, ದೇವತಾರ್ಚನೆ, ಸರ್ವ ಸಾಧನ ಪುರಶ್ಚರಣ, ಷಟ್‌ಕರ್ಮ (ಶಾಂತಿ-ವಶೀಕರಣ ಸ್ತಂಭನ ವಿದ್ವೇಷಣ, ಉಚ್ಚಾಟನ ಮತ್ತು ಮಾರಣಗಳು), ಮತ್ತು ಧ್ಯಾನಯೋಗ ಹೀಗೆ ಏಳು ವಿಷಯಗಳು ಉಕ್ತವಾಗಿವೆ. ಶಾಕ್ತ್ಯಾಗಮದ ವಾಮಾಚಾರ ಹಾಗೂ ಹೈಯ ಪೂಜಾಪದ್ಧತಿಗಳಿಂದ ತಾಂತ್ರಿಕವಿಧಿ-ವಿಧಾನಗಳು ನಿಂದಾಸ್ಪದವಾದವು. ಕೌಲಾಚಾರ ಅಥವಾ ಸಮಯಮಾರ್ಗಿಗಳಲ್ಲಿ ಪಂಚತತ್ತ್ವ ಸಾಧನೆಯು ಬರುತ್ತದೆ. ಕುಲವೆಂದರೆ ಆಧಾರಾದಿ ಚಕ್ರಗಳು, ಅವುಗಳನ್ನು ಅರಿಯಲು ಶ್ರೀ ಚಕ್ರದ ಪೂಜೆ ಮಾಡುವವನು ಕೌಲನೆನಿಸುವನು. ಅಥವಾ ಸಮಯಮಾರ್ಗಿಯೆಂತಲೂ ಕರೆಯಲ್ಪಡುತ್ತಾನೆ.

ಕಾಲಾಂತರದಲ್ಲಿ ಶ್ರೀಚಕ್ರದ ಕಲ್ಪನೆಯು ಸ್ತ್ರೀಯೋನಿಯ ಪೂಜೆಗೆ ಮಾರ್ಪ ಟ್ಟಿತು. ಶ್ರೀಚಕ್ರದ ಸಾಧನೆಯಲ್ಲಿ ಸಿದ್ಧಿ ಸಾಧಿಸಿದ ಮಂದಾಧಿಕಾರಿಗಳು ವಾಮ ಚಾರಿಗಳಾಗಿ ವರ್ತಿಸಹತ್ತಿದರು. ಶ್ರೀಚಕ್ರದ ಸಾಧನೆಗೆ ಪಂಚತತ್ತ್ವ ಸಾಧನೆಯೂ ಪೋಷಕವಾದುದು. ಈ ಪಂಚತತ್ತ್ವ ಸಾಧನೆಯ ಪಂಚ ಮಕಾರಗಳು. ಕೇವಲ ಬಾಹ್ಯವಾಚ್ಯಾರ್ಥದಲ್ಲಿ ಪರಿವರ್ತನಗೊಂಡವು. ಪಂಚ ಮಕಾರಗಳೆಂದರೆ- ೧) ಮಧ್ಯ ೨) ಮಾಂಸ ೩) ಮತ್ಸ ೪) ಮುದ್ರಾ ಮತ್ತು ೫) ಮೈಥುನಗಳು. ಇವುಗಳ ತಾತ್ವಿಕ ವಿಚಾರ ಅರ್ಥಪೂರ್ಣವಾಗಿದೆ.

ʼ’ಧ್ಯಂ ಮಾಂಸಂ ಚ ಮೂನಂ ಚ

ಮುದ್ರಾ ಮೈಥುನಮೇವ ಚ |

ಮಕಾರಪಂಚಕಂ ಪ್ರಾಹುಃ

ಯೋಗೀನಾಂ ಮುಕ್ತಿದಾಯಕಮ್ ”

ಪಂಚಮಕಾರಗಳು ಯಥಾರ್ಥತಃ ಯೋಗಿಗಳಿಗೆ ಮುಕ್ತಿದಾಯಕವಾಗಿವೆ ಎನ್ನುವ ಮಾತಿನ ಮಥಿತಾರ್ಥ ಹೀಗಿದೆ-ಮಧ್ಯವೆಂದರೆ ಹೊರಗಿನ ಮದವೇರಿಸಿ ಬುದ್ಧಿ  ಶೂನ್ಯನನ್ನಾಗಿಸುವ ಮಧ್ಯವಲ್ಲ. ೬೯ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಶಿರದಲ್ಲಿಯ ಬ್ರಹ್ಮರಂಧ್ರ ಅಥವಾ ಸಹಸ್ರದಳ ಕಮಲದಲ್ಲಿ ಸ್ರವಿಸುವ ಅಮೃತವನ್ನು ಯೋಗಿಗಳು ಮಧ್ಯವೆಂದು ಕರೆದಿದ್ದಾರೆ. ಇದಕ್ಕೆ ಕುಲಾರ್ಣವತಂತ್ರ ಹಾಗೂ ಗಂಧರ್ವತಂತ್ರಗಳಲ್ಲಿ ಮತ್ತು ಯೋಗಚೂಡಾಮಣ್ಯುಪನಿಷತ್ತಿನಲ್ಲಿ ಪ್ರಮಾಣಗಳು ಉಪಲಬ್ಧವಾಗುತ್ತವೆ. ಸಹಸ್ರಾರದ ಸುಧೆಯನ್ನು ಖೇಚರೀ ಮುದ್ರೆಯ ಸಾಧನೆಯಿಂದ ಸಾಧಿಸಲು ಬರುವದು. ಇದನ್ನು ಮುಂದೆ ವಿಚಾರಿಸುವಾ

 ತಂತ್ರಸಾಧಕನು ಪುಣ್ಯ ಹಾಗೂ ಪಾಪರೂಪಿಯಾದ ಜೀವಾತ್ಮನ ಪಶು (ವಿಷಯ) ಗಳನ್ನು ಜ್ಞಾನರೂಪೀ ಖಡ್ಗದಿಂದ ಸಂಹರಿಸಿ ತನ್ನ ಮನಸ್ಸನ್ನು ಬ್ರಹ್ಮದಲ್ಲಿ ಲೀನಗೊಳಿಸುವವನು ಮಾಂಸಹಾರಿಯೆನಿಸುವನು. ಶರೀರದಲ್ಲಿರುವ ಈಡಾ (ಇಡಾ) ಮತ್ತು ಪಿಂಗಳಾ ನಾಡಿಗಳಲ್ಲಿ ಪ್ರವಹಿಸುವ ಶ್ವಾಸ-ನಿಃಶ್ವಾಸಗಳೇ ಮತ್ಸ್ಯಗಳು. ಅವುಗಳನ್ನು ಕುಂಭಕದಿಂದ ಪ್ರಾಣ ವಾಯುವನ್ನು ಸುಷುಮ್ಮಾನಾಡಿಯಲ್ಲಿ ಸಂಚಾಲನೆ ಗೊಳಿಸುವುದಕ್ಕೆ ಮತ್ಸ್ಯಸಾಧನೆಯೆನಿಸುವದು. ಅಸತ್‌ಸಂಗದಿಂದ ಬಂಧನ ವಾಗುವದನ್ನು ಅರಿತು ಸತ್ಸಂಗವನ್ನು ಮಾಡಿ ಮುಮುಕ್ಷುವೆನಿಸಿ ಅಸತ್‌ಸಂಗವನ್ನು ಸಂಪೂರ್ಣ ತ್ಯಜಿಸುವದೇ ಮುದ್ರೆಯೆನಿಸುವದು. ಇನ್ನು ಮೈಥುನವೆಂದರೆ- ಸೇರಿಸುವುದು ಅಥವಾ ಕೂಡಿಸುವದು ಎಂದರ್ಥ. ಸಹಸ್ರಾರದಲ್ಲಿರುವ ಶಿವನೊಡನೆ ಕುಂಡಲಿನಿಯನ್ನು ಜಾಗೃತಗೊಳಿಸುವದು ಅಥವಾ ಸುಷಮ್ಮಾ ನಾಡಿಯಲ್ಲಿ ಪ್ರಾಣವನ್ನು ಮಿಳನಗೊಳಿಸುವದು ಎಂಬುದಾಗಿ ಅನುಭವಿಗಳು ತಿಳಿಸುತ್ತಾರೆ

.ಸಾಂಸಾರಿಕ ಸುಖಕ್ಕಿಂತ ಸಾವಿರ ಪಾಲು ಅಧಿಕವಾದ ಸುಖವು ಸುಷುಮ್ಮಾ ನಾಡಿಯಲ್ಲಿ ಪ್ರಾಣವಾಯುವನ್ನು ಸ್ಥಿರಗೊಳಿಸುವದರಿಂದ ಉಂಟಾಗುವದು. ಇದೇ ನಿಜವಾದ ಮೈಥುನವೆಂದು ತಂತ್ರವೇತ್ತರು ಪ್ರತಿಪಾದಿಸಿದ್ದಾರೆ. ತಂತ್ರ ಪ್ರಮಾಣವೂ ಉಂಟು. ನಿಜವಾದ ತತ್ತ್ವವನ್ನರಿಯದ ವಾಮಮಾರ್ಗಿಗಳು ಸ್ವೇಚ್ಛಾಚಾರದಿಂದ ವರ್ತಿಸಿ, ಸಿದ್ಧಾಂತಕ್ಕೇನೆ ಕಲಂಕವನ್ನುಂಟು ಮಾಡಿರುವರು. ಆದರೆ ನಾಥ ಸಂಪ್ರದಾಯದ ಗೋರಕ್ಷನಾಥನೇ ಮುಂತಾದ ಹಠಯೋಗಿಗಳು ಪಂಚತತ್ತ್ವ ಶುದ್ದಿಯಿಂದ ಮುದ್ರೆಗಳ ಸಾಧನೆಯಿಂದಲೂ ವಜ್ರಕಾಯರಾದ ಇತಿಹಾಸ ಯೋಗ ಶಾಸ್ತ್ರದಿಂದ ತಿಳಿದು ಬರುತ್ತದೆ.

 ಯೋಗಮುದ್ರೆಗಳಲ್ಲಿ ಮುಖ್ಯವಾದವುಗಳು ಮೂರು ಖೇಚರೀ ಶಾಂಭವೀ, ಷಣ್ಮುಖೀ ಎಂದು  ಅಂತರಾತ್ಮನ ಅರಿವಿಗಾಗಿ ನಯನ-ಮನ-ಪ್ರಾಣಗಳ ಸಂಯಮನಕ್ಕಾಗಿ ಸಾಧಿಸುವ ಬಾಹ್ಯ ಕ್ರಿಯೆಗಳೇ ಮುದ್ರೆಗಳು, ತ್ರಿಪದಿಯ ಶಿವಕವಿಯು ಮೊದಲನೆಯದಾಗಿ ಶಾಂಭವೀ ಮುದ್ರೆಯನ್ನು ವಿಡಂಬಿಸುತ್ತಾನೆ.

 ಈ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಯ ಟೀಕಾಕಾರರು-

ಮೋಚಯತಿ, ದ್ರಾವಯತೀತಿ ಮುದ್ರಾ’

 ಅಜ್ಞಾನಾಂಧಕಾರವನ್ನು ತೊಲಗಿಸಿ ಶಿವಾನಂದ ಪ್ರವಾಹವನ್ನು ನಿರಾಯಾಸದಿಂದ ಸುರಿಸುವದೇ ಮುದ್ರೆಯೆನಿಸುವದು” ಎಂದು ಪ್ರತಿಪಾದಿಸಿದ್ದಾರೆ. ನಿಜಗುಣ ಶಿವಯೋಗಿಗಳು-

ಹೃದಯಾಕಾಶಮಧ್ಯದ ದಿವ್ಯಲಿಂಗ ಸ್ಥಲದಂತರ್ಲಕ್ಷ್ಯಮಂ

ಕಾಣ್ಬುದಕ್ಕೆ ಪರಮೋಪಾಯಮಾದ ಮುದ್ರಾಲಕ್ಷಣ

ವೆಂದು ಪಾರಮಾರ್ಥ ಪ್ರಕಾಶಿಕೆ”ಯಲ್ಲಿ ಮುದ್ರೆಯ ಸ್ವರೂಪವನ್ನು ತಿಳಿಸಿದ್ದಾರೆ. ಮುದ್ರೆಗಳು ರಾಜಯೋಗಾಂತರ್ಗತವಾಗಿವೆ. ಖೇಚರೀ ಮುದ್ರೆ ಮತ್ತು ಶಾಂಭವೀ  ಮುದ್ರೆಗೆ ಹೆಚ್ಚಿನ ಅಂತರವಿಲ್ಲ. ಈ ಶಾಂಭವೀ ಮುದ್ರೆಯ ವಿವರವು ಕೆಳಗಿನಂತಿದೆ

ಅಂತರ್ಲಕ್ಷ್ಯವಿಲೀನ ಚಿತ್ತಪವನೋ ಯೋಗೀ ಯದಾ ವರ್ತತೇ |

ದೃಷ್ಟ್ಯಾ ನಿಶ್ಚಲತಾರಯಾ ಬಹಿರಧಃ ಪಶ್ಯನ್ನಪಶ್ಯನ್ನಪಿ ||

ಮುದ್ರೆಯಂ ಖಲು ಶಾಂಭವೀ ಭವತಿ ಸಾ ಲಬ್ಧಾ ಪ್ರಸಾದಾದ್ಗುರೋಃ ||

ಅಂದರೆ ಹೃದಯದ ಅನಾಹತ ಚಕ್ರಗತ ಮಹಾಚೈತನ್ಯದಲ್ಲಿ ಲಕ್ಷ ಪ್ರಾಣ ಮತ್ತು ನಿಶ್ಚಲವಾದ ದೃಷ್ಟಿಗಳನ್ನು ಇರಿಸಿ, ಹೊರಗೆ ಕೆಳಗೆ ನೋಡುತ್ತಿದ್ದರೂ ನೋಡದಂತಿರುವದೇ ಶಾಂಭವೀ ಮುದ್ರೆಯೆನಿಸುವದು. ಈ ಮುದ್ರೆಯು ಸದ್ಗುರುವಿನ ಕೃಪಾಪ್ರಸಾದದಿಂದಲ್ಲದೇ ಅರಿವಿಗೆ ಬರುವದಿಲ್ಲ, ಶಾಂಭವ ಸ್ವರೂಪವನ್ನಾಗಿಸುವ ಸಾಧನೆಯೇ ಶಾಂಭವೀಯು

ನಾಶಿಕಾಗ್ರದಲ್ಲಿರಿಸಲ್ಪಟ್ಟ ನಿಮೇಷೋನ್ಮೇಷಂಗಳಿಲ್ಲದ

ಲೋಚನಂಗಳ ದಿವ್ಯಾಲೋಕನದಿಂದೆ ಲಕ್ಷಿಸಲು ಯೋಗ್ಯ-

ಮಾದ ಹೃದಯದಲ್ಲಿ ನಿಶ್ಚಲವಾದ ಜ್ಯೋತಿರ್ಮ೦ಡಲವನು

ಕಾಂಬುದೇ ಶಾಂಭವೀ ಮುದ್ರೆಯೆನಿಸುವದು.

ಎಂದು ಶಾಂಭವೀ ಮುದ್ರಾ ಸ್ವರೂಪವನ್ನು ನಿಜಗುಣರು ವಿವರಿಸಿದ್ದಾರೆ. ಇದನ್ನೇ ಶಿವಯೋಗ ಪ್ರದೀಪಿಕೆಯ ಐದನೆಯ ಪಟಲ ೭ನೆಯ ಶ್ಲೋಕದಲ್ಲಿ ನೋಡಿ-

ಅಂತಶ್ಚಿತ್ತಂ ಬಹಿಶ್ಚಕ್ಷುರ್ನಿಮೇಷೋನ್ಮೇಷವರ್ಜಿತಂ ||

ಏಷಾ ಸಾ ಶಾಂಭವೀ ಮುದ್ರಾ ಸರ್ವತಂತ್ರೇಷು ಗೋಪಿತಾ |

ಶಾಂಭವೀ ದ್ವಿವಿಧಾ ಪ್ರೋಕ್ತಾ ಪೂರ್ವೋತ್ತರವೀಭೇದತಃ ||

ಚಿತ್ತವು ಅಂತರ್ಲಕ್ಷ್ಯವುಳ್ಳದ್ದಾಗಿ ಚಕ್ಷುಗಳು ನಿಮೇಷ (ರೆಪ್ಪೆ ಮುಚ್ಚುವದು) ಉನ್ಮೇಷ (ರೆಪ್ಪೆ ತೆರೆಯುವದು) ಗಳಿಲ್ಲದಂತಿರುವದೇ ಶಾಂಭವೀ ಮುದ್ರೆಯು. ಇದು ಎಲ್ಲ ತಂತ್ರಗಳಲ್ಲಿ ರಹಸ್ಯವಾಗಿ ಹೇಳಲ್ಪಟ್ಟಿದೆ. ಮತ್ತು ದಿವ್ಯ ಹೃದಯಲಿಂಗಾನುಸಂಧಾನಕ್ಕೆ  ಶಾಂಭವೀಯೆನಿಸುವದು. ಇದು ನಾಸಿಕಾಗ್ರದೃಷ್ಟಿಯ ದ್ವಾರಾ ನಾದನುಸಂಧಾನವನ್ನು ಮಾಡುವ ಮನದೊಳು ಕೂಡಲು ಪೂರ್ವಶಾಂಭವೀ” ಯೆನಿಸುವದು. ಆ ನಾಸಿಕಾಗ್ರದೃಷ್ಟಿಯೂ ಮನವೂ ನಾದಬ್ರಹ್ಮದಲ್ಲಿ ಮುಳುಗಲು (ಬೆರೆಯಲು) ‘ಉತ್ತರ ಶಾಂಭವೀ’ ಯೆನಿಸುವದು. ಹೀಗೆ ಇದು ಎರಡು ತೆರನಾಗಿರುವದು. ಈ ಎರಡೂ ವಿಧದಿಂದಲೂ ಯೋಗಿಗಳು ನಾದಾನುಸಂಧಾನವನ್ನು ಮಾಡುವರೆಂದು ಟೀಕಾಕಾರರು ವಿವರಿಸಿದ್ದಾರೆ.

ಮನವು ಅಂತರ್ಮುಖಗೊಂಡು ದೃಷ್ಟಿಯು ನಾಶಿಕದ ತುದಿಯಲ್ಲಿದ್ದು ನಾದಬ್ರಹ್ಮನು ಅನುಸಂಧಾನ ಮಾಡುವ ಈ ಶಾಂಭವೀ ಮುದ್ರೆಯು ಉತ್ತಮ ಗುರುವಿನ ಮಾರ್ಗದರ್ಶನದಿಂದಲೂ ಸುಲಭವಾಗಿ ಸಿದ್ಧಿಸುವದಿಲ್ಲ. ಅಂತರ್ಮುಖವಾದ ಮನಸ್ಸಿನಲ್ಲಿ ವಿಷಯಗಳ ಸುಳಿದಾಟವು ನಿಲ್ಲಬೇಕು. ಬಹಿರ್ಗತವಾದ ದೃಷ್ಟಿಗೆ ಯಾವುದನ್ನೂ ಕಾಣದಂತಿರಿಸುವದು ಸಹಜವಲ್ಲ. ಮನ-ನೇತ್ರಗಳ ಅಂತರದಿಂದ ಪ್ರಾಣವೂ ವಿಷಯವ್ಯಾಮೋಹದಿಂದ ದೂರವಾಗಲಾರದು. ಕಾರಣ ಇಂಥ ಶಾಂಭವೀ ಮುದ್ರೆಯಿಂದ ಸುಲಭ ಪ್ರಯೋಜನವೆನಿಸುವದಿಲ್ಲ ಎಂಬುದನ್ನು ಮನಸಾ ಅರಿತ ಶರಣರು ಈ ಶಾಂಭವೀ ಮುದ್ರೆಯನ್ನು ವಿಡಂಬಿಸಿದರು.

 ಶಾಂಭವಿಯ ಮುದ್ರೆಯಲ್ಲಿ ಬಾಹ್ಯ ದೃಷ್ಟಿ ಅಂತಃ ಸಂಯಮನವಿರುವದು ಸಮಂಜಸ ಹಾಗೂ ಸಹಜವೆನಿಸುವದಿಲ್ಲ. ಸಮರಸಕ್ಕೆ ಸಾಧನವಾಗಲಿಕ್ಕಿಲ್ಲವೆಂದು ಮನಗಂಡು ಕರುಣಾನಿಧಿಯಾದ ಸದ್ಗುರುವು ಸ್ವಸ್ವರೂಪವಾದ ಸ್ವಯಲಿಂಗವನ್ನು ಶಿಷ್ಯನ ಕರಕಮಲಕ್ಕೆ ತ೦ದಿರಿಸಿದುದು ಅನುಪಮ ಪವಾಡವೇ ಆಗಿದೆ. ಕರದಿಷ್ಟ ಲಿಂಗದಲ್ಲಿ ದೃಷ್ಟಿಯನ್ನು ಮನವನ್ನು ಪ್ರಾಣವನ್ನು ಬೆರೆಸಿ ಲಿಂಗವೇ ತಾನಾಗುವ ಶಾಂಭವ ಪದವನ್ನು ಪಡೆಯಲು ಉಪದೇಶಿಸಿದ್ದಾನೆ. ಧ್ಯಾನದ ವಿಷಯದಲ್ಲಿ ಹಿಂದೆ ಪ್ರತಿಪಾದಿಸಿದಂತೆ ಲಿಂಗಯೋಗದಲ್ಲಿ ದೃಷ್ಟಿಯೋಗದ ಮಹತ್ವವು ಅಗಣಿತವಾಗಿದೆ. ಅಂಥ ಶಿವಲಿಂಗಯೋಗದಿಂದಾಗುವ ಶಾಂಭವ (ಶಿವ) ಸ್ವರೂಪವು ಸಹಜವಾಗಿ ಪ್ರಾಪ್ತವಾಗುವದು. *ಇಷ್ಟಲಿಂಗವಿಲ್ಲದೆ ಮಾಡುವ ಶಾಂಭವೀ ಮುದ್ರೆಗಿಂತ ಇಷ್ಟಲಿಂಗದಲ್ಲಿರಿಸುವ ನಯನ-ಮನ-ಹರಣಗಳನ್ನು ಕೇಂದ್ರೀಕರಿಸುವ ಈ ಸ್ವಯಂಭುಲಿಂಗ ಮುದ್ರೆ ಮಹತ್ತಾದುದು. ಇದುವೆ ನಿಜವಾದ ಶಿವಯೋಗದ ಶಾಂಭವೀ ಮುದ್ರೆ. ಕ್ರಿಯಾಶಾಂಭವೀ ಮುದ್ರೆ, ಇದಕ್ಕೆ ಸರಿಸಮವಾದುದು ಬೇರೊಂದಿಲ್ಲ”

ಣ್ಮೂಗು ಕಿವಿ ಬಲಿವ | ಷಣ್ಮುಖಿಯ ಮುದ್ರೆ ಬಹು

ತಿಣ್ಣೆಂದು ಬಿಡಿಸಿ – ಷಣ್ಮಂತ್ರಲಿಂಗ ತೋ-

ರ್ದಾಣ್ಮ ಶ್ರೀಗುರುವೆ ಕೃಪೆಯಾಗು   ||೧೦೩ ||

ಆಗಮಗಳಲ್ಲಿ ಶಿವನು ಪಾರ್ವತಿಗೆ ಬೋಧಿಸಿದಂತೆ ಪುತ್ರನಾದ ಷಣ್ಮುಖನಿಗೂ ಉಪದೇಶಿಸಿದ್ದಾನೆ. ಕೆಲವು ಆಗಮಗಳಲ್ಲಿ ಪಾರ್ವತಿದೇವಿಯು ಶ್ರೋತೃವಾಗಿದ್ದರೆ ಕೆಲವೊಂದರಲ್ಲಿ ಕುಮಾರ ಷಣ್ಮುಖಸ್ವಾಮಿಯು ಶಿಷ್ಯತ್ವವನ್ನು ವಹಿಸಿದ್ದಾನೆ. ಶಾಂಭವೀ ಮುದ್ರೆಯನ್ನು ಶಂಭುವು (ಶಿವನು) ತನ್ನ ಅರ್ಧಾಂಗಿನಿಯಾದ ಶಾಂಭವಿಗೆ ತಿಳಿಯಪಡಿಸಿದ್ದರೆ ಷಣ್ಮುಖಿಯ ಮುದ್ರೆಯನ್ನು ಷಣ್ಮುಖನಿಗೆ ಬೋಧಿಸಿರುವನು. ಕುಮಾರನು ಆರು ಮುಖವುಳ್ಳವನಾಗಿರುವಂತೆ ಈ ಷಣ್ಮುಖೀ ಮುದ್ರೆಯಲ್ಲಿಯೂ ಅದನ್ನು ಮುದ್ರಿಸುವ (ಮುಚ್ಚುವ) ವಿಷಯವು ಪ್ರತಿಪಾದಿತವಾಗಿದೆ. ಸಾಂಕೇತಿಕ ಅರ್ಥವುಳ್ಳದ್ದಾಗಿದೆ. ಖೇಚರೀ ಮತ್ತು ಶಾಂಭವೀ ಮುದ್ರೆಗಳು ಉತ್ತಮ ಅಧಿಕಾರಿಗಳಿಗೆ ಸಾಧ್ಯವಾದರೆ, ಷಣ್ಮುಖೀ ಮುದ್ರೆಯು ಕನಿಷ್ಠಾಧಿಕಾರಿಗೂ ಸಾಧ್ಯವೆಂದು ನಿಜಗುಣರು ತಿಳಿಸಿದ್ದಾರೆ.

 ಷಣ್ಮುಖೀ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಕಾರರು-

“ವಕ್ತ್ರೇ ಚಾಪೂರ್ಯವಾಯುಂ ಹುತವಹನಿಲಯೇ ಅಪಾನಮಾಕೃಷ್ಯ ಧೃತ್ಯಾ |

ಸ್ವಾಂಗುಷ್ಠಾದ್ಯಂಗುಲೀಭಿರ್ನಿಜಕರತಲಯೋಃ  ಷಡ್ಭಿರೇವಂ ನಿರುಧ್ಯ  ||

ಶ್ರೋತ್ರೇ ನೇತ್ರೇ ಚ ನಾಸಾಪುಟಯುಗಳಮ್ ಅಥಾನೇನ ಮಾರ್ಗೆಣ ಧೀರಾಃ |

ಪಶ್ಯಂತಿ ಪ್ರತ್ಯಯಾನ್ ಸತ್ಪ್ರಣವಬಹುವಿಧ- ಧ್ಯಾನಸಂಲೀನಚಿತ್ತಾಃ    || ೫-೧೭ ||

ಮುಖದ ಏಕದೇಶಮಾದ ನಾಸಾಪುಟದಲ್ಲಿ ಪ್ರಾಣವಾಯುವನ್ನು ಪೂರಿಸಿ ಅಗ್ನಿ ಸ್ಥಾನವೆನಿಸುವ ಅಧಃಕುಂಡಲಿನೀ ಸ್ಥಲದ ತ್ರಿಕೋಣಾಕಾರಮಾದ ಮೂಲಾಧಾರದಲ್ಲಿಯ ಅಪಾನವಾಯುವನ್ನು ಆಕುಂಚನಗೊಳಿಸಿ ತನ್ನ ಕರತಲವೆರಡರಲ್ಲಿಯ ಅಂಗುಷ್ಠ-ತರ್ಜನೀ-ಮಧ್ಯಮ (ಅಂಗುಷ್ಠ=ಹೆಬ್ಬೆರಳು, ತರ್ಜನೀ=ತೋರಬೆರಳು; ಮಧ್ಯಮ=ನಡುವಿನ ಬೆರಳು) ಗಳೆಂಬ ಆರೂ ಬೆರಳುಗಳಿಂದ ಶ್ರೋತ್ರ, ನೇತ್ರ, ನಾಸಾಪುಟಯುಗಳವನ್ನು ತಡೆದು ಈ ಷಣ್ಮುಖೀಕರಣ ಮಾರ್ಗದಿಂದ ನಿಶ್ಚಲ ತತ್ತ್ವಚಿತ್ತರಾದ ಯೋಗೀಶ್ವರರು ಪ್ರಣವದ ದಶವಿಧನಾದಲ್ಲಿ ಲೀನಚಿತ್ತರಾಗಿ ದಶವಿಧ ಬಿಂದು ಸಾಕ್ಷಾತ್ಕಾರರೂಪವಾದ ಪ್ರತ್ಯಯಗಳನ್ನು ಕಾಣುತ್ತಿಹರು” ಎಂದು ಬಸವಾರಾಧ್ಯರು ಟೀಕೆಯಲ್ಲಿ ವಿವರಿಸಿರುವರು.

 ಈ ಷಣ್ಮುಖೀ ಮುದ್ರೆಯಲ್ಲಿ ಸಾಧಕನು ತನ್ನ ಕಿವಿಯೆರಡು, ಕಣ್ಣೆರುಡು ಮತ್ತು ಮೂಗಿನ ರಂಧ್ರಗಳೆರಡು ಸೇರಿ ಆ ಆರನ್ನು ತನ್ನ ಕೈಗಳ ಹೆಬ್ಬೆರಳು, ತೋರಬೆರಳು, ನಡುವಿನ ಬೆರಳುಗಳಿಂದ ಮುಚ್ಚುವನು. ಮುಖದ ಷಣ್ಮುಖಗಳನ್ನು (ಆರು ರಂಧ್ರಗಳ ಬಾಯಿಯನ್ನು) ಬಂದು ಮಾಡಿ ಬಾಯಿಯಿಂದ ಗಾಳಿಯನ್ನು ಒಳಗೆಳೆದು ತುಂಬಿ ಹೃದಯದಲ್ಲಿ ನಿಲ್ಲಿಸಿ ಅಗ್ನಿಸ್ಥಾನವಾದ ನಾಭಿಮಂಡಲದ ಅಧಃ ಕುಂಡಲಿನಿಯಲ್ಲಿ ಸಂಬಂಧವುಳ್ಳ ಮೂಲಾಧಾರದ ಅಪಾನವಾಯುವನ್ನು ಮೇಲೇರಿಸಿ ಹೃದಯಗತ ತುರ್ಯಾವಸ್ಥೆಯನ್ನು ಹೊಂದಿದ ಪ್ರಾಣವಾಯುವಿನೊಡನೆ ಸುಷುಮ್ಮಾನಾಡಿಯ ದ್ವಾರಾ ಮೇಲಕ್ಕೇರಿಸಿ ಸಹಸ್ರಾರದಲ್ಲಿ ಧೀರರಾದ ಯೋಗಿಗೆ ಅನಾಹತನಾದವು ಉತ್ಪನ್ನವಾಗಿ ದಶವಿಧನಾದಗಳು ಗೋಚರಿಸುವವು. ಮತ್ತು ದೃಷ್ಟಿಯಲ್ಲಿ ದಶವಿಧ ಬಿಂದುಗಳನ್ನು ಕಾಣುವರು. ಇದುವೆ ಷಣ್ಮುಖೀ ಮುದ್ರೆಯ ಮಹಾ ಸಾಧನವೆಂದು ಅನುಭವಿಗಳು ವಿವರಿಸಿದ್ದಾರೆ.

ಶಿವಯೋಗ ಪ್ರದೀಪಿಕೆಯಲ್ಲಿ ಟೀಕಾಕಾರರು ಷಣ್ಮುಖೀ ಮುದ್ರೆಯಿಂದ ಗೋಚರಿಸುವ ಬಿಂದು ಪ್ರಕಾರವನ್ನು ಈ ರೀತಿ ತಿಳಿಸಿದ್ದಾರೆ- “ಭ್ರೂಮಧ್ಯದಲ್ಲಿ ಬೆಳಗುವ ನಯನ ದೀಪ್ತಿಯೇ ಬಿಂದು ದೇವನ ಮಹಾಸ್ಥಾನವಪ್ಪುದರಿಂದೆ ೧) ಧೂಮ್ರ ವರ್ಣದಂತೆ, ೨) ಮೇಘಪಟಲದಂತೆ ಕಾಣ್ಬುದು ಶುದ್ಧತಮೋಗುಣಾತ್ಮಕವಾದ ಸ್ಥೂಲಬಿಂದುವೆನಿಸುವದು. ೩) ಕುಂಕುಮ ವರ್ಣದಂತೆ, ೪) ಖದ್ಯೋತಗಳಂತೆ ಕಾಣ್ಬುದು ಶುದ್ಧರಜೋಗುಣಾತ್ಮಕವಾದ ಮಧ್ಯಬಿಂದುವೆನಿಸುವುದು. ೫) ಶುದ್ಧಸ್ಪಟಿಕ ದಂತೆ. ೬) ನಿರ್ಮಲಾಕಾರದಿಂದ ಕಾಣ್ಬುದು ಶುದ್ಧಸಾತ್ವಿಕವಾದ ಪರಮಬಿಂದು ವೆನಿಸುವದು”.

 ಷಣ್ಮುಖೀಮುದ್ರೆಯಲ್ಲಿ ಶ್ರವಣೇಂದ್ರಿಯ, ನೇತ್ರಂದ್ರಿಯ ಮತ್ತು ಘ್ರಾಣೇಂದ್ರಿಯಗಳ ವಿಷಯಗಳಾದ ಶಬ್ದ, ರೂಪ, ಗಂಧಗಳ ವಿಕಾರವು ದೂರವಾಗುವದು ಮತ್ತು ೧) ಚಿಣ್‌ನಾದ, ೨) ಚಿಣ್ ಚಿಣ್‌ನಾದ, ೩) ಘಂಟಾನಾದ, ೪) ಶಂಖನಾದ, ೫) ತಂತಿಯನಾದ, ೬) ತಾಳಗಳನಾದ, ೭) ಕೊಳಲಿನನಾದ, ೮) ಭೇರಿಯನಾದ ೯) ಮೃದಂಗನಾದ, ೧೦) ಮೇಘನಾದಗಳೆಂಬ

ದಶವಿಧನಾದವಾಗಿ ಪರಿವರ್ತನೆ ಹೊಂದಿ ತನ್ಮಯನನ್ನಾಗಿಸುವದು. ಮತ್ತು ಆತ್ಮದ ಅರಿವೂ ಆಗಬೇಕಾದರೆ ಕಷ್ಟಸಾಧ್ಯವಾಗುವದು.

 ಇಂಥ ಷಣ್ಮುಖೀ ಮುದ್ರೆಯು ಕಣ್ಮಗು ಕಿವಿಗಳನ್ನು ಬಂಧಿಸಿ ಆಯಾಸಪಡಿಸುವದು. ಮತ್ತು ಅದು ಸುಸಾಧ್ಯವೂ ಅಲ್ಲ.  ಅದಕ್ಕಿಂತ ಷಣ್ಮಂತ್ರ ಲಿಂಗಾರಾಧನೆಯು ಸುಲಭವೆಂದು ಶಿವಕವಿಯು ಒತ್ತಿ ಹೇಳುತ್ತಾನೆ. ಸದ್ಗುರುವು ಎನ್ನೊಡೆಯನಾದುದ ರಿಂದ ನನ್ನ ಚಿಂತೆ ಅವನಿಗಿದೆ. ಆತನು ಈ ಷಣ್ಮುಖೀ ಮುದ್ರೆಯು ಶಿಷ್ಯನಿಗೆ ಬಹುತಿಣ್ಣೆಂದು ತಿಳಿದು ಅದರ ಗೋಜನ್ನು ಬಿಡಿಸುತ್ತಾನೆ. ಅಂದರೆ ಈ ಮುದ್ರೆಯು ಬಾಹುಭಾರವೂ ಆಯಾಸಕರವೂ ಎಂದು ತಿಳಿದು ಅದನ್ನು ಪರಿಹರಿಸಿ   ಷಣ್ಮಂತ್ರವೆನಿಸಿದ ಷಡಕ್ಷರ ಮಹಾಮಂತ್ರ ಭರಿತವಾದ ಇಷ್ಟಲಿಂಗವನ್ನು ಕರುಣಿಸಿದ್ದಾನೆ. ಲಿಂಗದಲ್ಲಿ ಷಣ್ಮುಂತ್ರದ ಕಲೆಯು ಪಸರಿಸಿರುವಂತೆ ಅಂಗದಲ್ಲಿಯೂ ತುಂಬುತ್ತಾನೆ. ಮೂಗಿನಲ್ಲಿ ನಕಾರ ಪ್ರಣವವನ್ನು, ಬಾಯಿಯಲ್ಲಿ ಮಕಾರ ಮಂತ್ರವನ್ನು, ಕಣ್ಣಿನಲ್ಲಿ ಶಿಕಾರವನ್ನು, ತ್ವಕ್ಕಾದ ಗಲ್ಲಗಳಲ್ಲಿ ವಾಕಾರ ಬೀಜಾಕ್ಷರವನ್ನು, ಕಿವಿಯಲ್ಲಿ ಯಕಾರವನ್ನು, ಹೃದಯದಲ್ಲಿ ಹಾಗೂ ಭ್ರೂಮಧ್ಯದಲ್ಲಿ ಓಂಕಾರ ಪ್ರಣವನ್ನು ಸಂಬಂಧಗೊಳಿಸಿ ಮಾಂಸಮಯ ಕಾಯವನ್ನು ಮಂತ್ರಮಯ ವನ್ನಾಗಿಸಿದ್ದಾನೆ.

ಜ್ಞಾನೇಂದ್ರಿಯಗಳಲ್ಲಿ ಆಯಾ ಮಂತ್ರಗಳನ್ನು ನೆಲೆಗೊಳಿಸಿ ಲಿಂಗವನ್ನು ಸಂಬಂಧ ಮಾಡಿದ್ದರಿಂದ ನನ್ನ ಸರ್ವಾಂಗವೆಲ್ಲ ಲಿಂಗಮಯವಾಗಿದೆ. ಶಿವಲಿಂಗವನ್ನು ನಿರೀಕ್ಷಣ ಮಾಡುವ ನೇತ್ರಗಳು ಶಿವಲಿಂಗವೇ ತಾವಾಗಿ ಮಹಾಮಂತ್ರದ ಜಪಾನುಷ್ಠಾನದಿಂದ ಪ್ರಣವನಾದವು ಶ್ರವಣೇಂದ್ರಿಯದಲ್ಲಿ ನಿಜಲಿಂಗಾನಂದದಲ್ಲಿ ತನ್ಮಯನಾಗುವ ಅವಕಾಶ ಈ ಷಣ್ಮಂತ್ರ ಲಿಂಗಮುದ್ರೆಯಲ್ಲಿ ಓತಪ್ರೋತವಾಗಿದೆ.

ಓ ಗುರುವೆ ! ಬಹುಭಾರವಾದ ಇಂಥ ಷಣ್ಮುಖೀ ಮುದ್ರೆಯ ಜಡತ್ವವನ್ನು ಪರಿಹರಿಸಿ ಸುಲಭ ಸಾಧ್ಯವಾದ ಷಣ್ಮಂತ್ರ ಲಿಂಗಮುದ್ರೆಯನ್ನು ಸಾಧಿಸುವ ಶಕ್ತಿಯನ್ನು ಕರುಣಿಸಿ ಕಾಪಾಡು.

ಖೇಚರಿಯ ಮುದ್ರೆ ನೀ | ನಾಚರೀಸಲೇನುಂಟು

ಗೋಚರಿಪ ಲಿಂಗ-ದಾಚರಣೆ ಘನವೆಂದು

ಸೂಚಿಸಿದ ಗುರುವೆ ಕೃಪೆಯಾಗು   ||೧೦೪||

ಯೋಗಿಗಳು ಖೇಚರೀ ಮುದ್ರೆಯನ್ನು ಉತ್ತಮ ಅಧಿಕಾರಿಗೆ, ಶಾಂಭವೀ ಮುದ್ರೆಯನ್ನು ಮಧ್ಯಮಾಧಿಕಾರಿಗೆ, ಷಣ್ಮುಖೀ ಮುದ್ರೆಯನ್ನು ಮಂದಾಧಿಕಾರಿಗೆಂದು ಹೇಳುತ್ತಾರೆ. ರಾಜಯೋಗದಲ್ಲಿ ಖೇಚರೀ ಮುದ್ರೆಯು ರಾಜಮುದ್ರೆಯೆನಿಸಿದೆ. ಇದರ ಮಹತ್ವವು ಉಪನಿಷತ್ತಿನಲ್ಲಿ ಧಾರಾಳವಾಗಿ ಬಂದಿದೆ. ಯೋಗ ಚೂಡಾಮಣ್ಯು-ಪನಿಷತ್ತಿನಲ್ಲಿ ಖೇಚರೀ ಮುದ್ರೆಯ ಮಹತ್ವವನ್ನು ಬಹುವಾಗಿ ಬಣ್ಣಿಸಿದ್ದಾರೆ. ಆಕಾಶದಲ್ಲಿ ಸಂಚರಿಸುವ ಶಕ್ತಿಯನ್ನು ಈ ಖೇಚರೀ ಮುದ್ರೆಯಿಂದ ಸಾಧ್ಯವೆಂದು ಕೆಲವರು ಪ್ರತಿಪಾದಿಸಿದ್ದಾರೆ. ಈ ಮುದ್ರೆಯನ್ನು ಭ್ರೂಮಧ್ಯದಲ್ಲಿ ಊರ್ಧ್ವ ದೃಷ್ಟಿಯಿಂದ ಸಾಧಿಸುವ ಕಾರಣ ಇದಕ್ಕೆ ಖೇಚರೀ ಎಂಬ ಸಾರ್ಥಕ ನಾಮ ಬಂದಿದೆ.

 ಯೋಗ ಚೂಡಾಮಣ್ಯುಪನಿಷತ್ಕಾರರು ಖೇಚರೀ ಮುದ್ರೆಯ ಲಕ್ಷಣವನ್ನು

ಕಪಾಲಕುಹರೇ ಜಿಹ್ವಾ ಪ್ರವಿಷ್ಟಾ ವಿಪರೀತಗಾ |

ಭ್ರುವೋರಂತರ್ಗತಾ ದೃಷ್ಟಿರ್ಮುದ್ರಾ ಭವತಿ ಖೇಚರೀ || ೫೨ ||

ನಾಲಗೆಯನ್ನು ಕೆನ್ನೆಗಳ ನಡುವಿರುವ ಸಂಧಿಯಲ್ಲಿ ವಿಪರೀತವಾಗಿ (ನಾಲಿಗೆಯಲ್ಲಿ ಎರಡು ಹೋಳು ಮಾಡಿ ಒಳಹೊರಗೆ ಹೊರಳಿಸಿ) ಸೇರಿಸಬೇಕು. ದೃಷ್ಟಿಯನ್ನು ಹುಬ್ಬುಗಳ ಮಧ್ಯದಲ್ಲಿರಿಸಬೇಕು. ಆಗ ಖೇಚರೀ ಮುದ್ರೆಯೆನಿಸುವದು. ಫೇರಂಡ ಸಂಹಿತೆಯೂ ಇದೇ ತೆರನಾಗಿ ಖೇಚರಿಯ ಚರಿತ್ರೆಯನ್ನು ಬಿತ್ತರಿಸಿದೆ. ಶಿವಯೋಗ ಪ್ರದೀಪಿಕೆಯಲ್ಲಿ ಖೇಚರೀ ಮುದ್ರೆಯನ್ನು ಎರಡು ಪ್ರಕಾರವಾಗಿ ವಿಂಗಡಿಸಿದ್ದಾರೆ. ಒಂದು ಬಾಹ್ಯದಲ್ಲಿ ಖೇಚರೀ ಇನ್ನೊಂದು ಅಂತಃ ಖೇಚರೀ ಎಂದು ಇಬ್ಬಗೆಯಾಗಿದೆ.

ಮೇಲೆ ವಿವರಿಸಿದ ಲಕ್ಷಣವು ಬಾಹ್ಯಖೇಚರಿಯಾಗಿದೆ. ಅಂತಃಖೇಚರಿಯ ಲಕ್ಷಣವು ಕೆಳಗಿನಂತಿದೆ

ಲಕ್ಷ್ಯಲೀನ ಮನಸಾನಿಲೇನ ಯೋ ವರ್ತತೇ ಅಚಲಿತತಾರಯಾ ಭವೇತ್ |

ಖೇಚರೀ ಯಾಥ ಸೈವ ಶಾಂಭವೀಮುದ್ರಯಾ ಸ ತು ತಯಾ ಜಗದ್ಗುರುಃ    II ಶಿ.ಪ್ರ. ೫-೩||

ಯಾವ ಯೋಗಿಯು ಹೃತ್ಕಮಲದ ದಿವ್ಯಲಿಂಗವೆಂಬ ಅಂತರ್ಲಕ್ಷ್ಯದಲ್ಲಿ ಮನಸ್ಸು, ಮನಸ್ಸಿನೊಡನೆ ಬೆರೆತ ವಾಯುವಿನಿಂದ ನಿಶ್ಚಲವಾದ ತಾರಕಮಂಡಲ (ಕಣ್ಣಿನಲ್ಲಿಯ ಗುಡ್ಡೆಗಳು) ವುಳ್ಳವನಾಗುವನೋ ಈ ಸ್ಥಿತಿಯು ಅಂತಃ ಖೇಚರೀಯೆನಿ ಸುವದು. ಈ ಖೇಚರೀಮುದ್ರೆಯೇ ನಾಸಿಕಾಗ್ರದೃಷ್ಟಿಯಿಂದ ಶಾಂಭವೀ ಮುದ್ರೆಯೆನಿಸುವದು. ಈ ಹಿಂದೆ ಇದರ ವ್ಯಾಖ್ಯಾನವನ್ನು ಅವಲೋಕಿಸಲಾಗಿದೆ.

 ಖೇಚರೀ ಮುದ್ರೆಗಳನ್ನು ಸಾಧಿಸಿದ ಯೋಗೀಶ್ವರನು ಜಾಗ್ರ-ಸ್ವಪ್ನ-ಸುಷುಪ್ತಿ ಗಳ ಜಯಗಳಿಸಿ ಜಗದ್ಗುರುವೆನಿಸುವನು. ಅಂದರೆ ಲೋಕ ಪೂಜ್ಯವೆನಿಸುವನು. ಇವನಿಗಿಂತಲೂ ಪೂಜ್ಯನು ಬೇರೊಬ್ಬನೆನಿಸನು. ಇದೇ ಮಾತನ್ನು ನಿಜಗುಣರೂ ಸಹ ಪಾರಮಾರ್ಥ ಪ್ರಕಾಶಿಕೆಯಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ಪ್ರತಿಪಾದಿಸಿದ್ದಾರೆ.

ಖೇಚರೀಮುದ್ರೆಯ ದೃಷ್ಟಿ ಮನೋಮಾರುತಂಗಳ

ನಿಶ್ಚಲತ್ವದಿಂ ಕ್ರಮದಿಂ ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ-

 ವಸ್ಥಾತ್ರಯಂಗಳಂ ಗೆಲಿದಾತನೇ ಜಗದ್ಗುರುವಪ್ಪಂ

 ಜಗದ್ಗುರುತ್ವದ ಲಕ್ಷಣ ಇಷ್ಟು ಗಹನವಾಗಿದೆ. ಶಿವಯೋಗಸಾಧನೆಯಲ್ಲಿಯೂ ಪರಜಂಗಮನೆನಿಸಿ ಶಿವಸಾಮ್ರಾಜ್ಯವನ್ನೇ ಕವಡಿಗೆ ಸಮಮಾಡಿ ಅವಸ್ಥಾತ್ರಯಗಳನ್ನು ಮೀರಿ ಮಹಾಮಹಿಮನೆನಿಸಿದಲ್ಲಿ ಜಗದ್ಗುರುತ್ವವು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ ವೃತ್ತಿ ಗುರುತ್ವವಾದೀತು, ಯೋಗಿಗಳು ಖೇಚರೀ ಮುದ್ರೆಯ ಮಹಾ ಸಾಧನೆಯಿಂದ ಅವರ್ಣನೀಯವಾದ ಯೋಗ್ಯತೆಯನ್ನು ಪಡೆದಿದ್ದಾರೆ. ಈ ಮುದ್ರೆಯ ಅಗಣಿತವಾದ ಮಹತ್ವಕ್ಕೆ ಯೋಗ ಚೂಡಾಮಣ್ಯುಪನಿಷತ್ತಿನ ಕೆಲವು ಪ್ರಮಾಣಗಳನ್ನು  ಅವಲೋಕಿಸಿ-

ನ ರೋಗೋ ಮರಣಂ ನಾಸ್ತಿ ನ ನಿದ್ರಾ ನ ಕ್ಷುಧಾ ತೃಷಾ |

ನ ಚ ಮೂರ್ಛಾ ಭವೇತ್ತ ಸ್ಯ ಯೋ ಮುದ್ರಾಂ ವೇತ್ತಿ ಖೇಚರೀಮ್ ||

ಪೀಡ್ಯತೇ ನ ಚ ರೋಗೇ  ಲಿಪ್ಯತೇ ನ ಸ ಕರ್ಮಭಿಃ |

ಬಾಧ್ಯತೇ ನ ಚ ಕೇನಾಪಿ ಯೋ ಮುದ್ರಾಂ ವೇತ್ತಿ ಖೇಚರೀಮ್ ||

ಖೇಚರ್ಯಾ ಮುದ್ರಿತಂ ಯೇನ ವಿವರಂ ಲಂಬಿಕೋರ್ಧ್ವತಃ |

ನ ತಸ್ಯ ಕ್ಷೀಯತೇ ಬಿಂದುಃ ಕಾಮಿನ್ಯಾಲಿಂಗಿತಸ್ಯ ಚ ||

ಯಾವದ್ಬಿಂದುಃ ಸ್ಥಿತೋ ದೇಹೇ ತಾವನ್ಮೃತ್ಯುಭಯಂ ಕುತಃ ||

ಯಾವದ್ಬದಾ ನಭೋಮುದ್ರಾ ತಾವಂದ್ಬಿಂದುರ್ನ ಗಚ್ಛತಿ ॥

ಕಥಿತೇಯಂ ಮಹಾಮುದ್ರಾ ಮಹಾ ಸಿದ್ಧಿಕರೀ ನೃಣಾಮ್ |

ಗೋಪನೀಯಾ ಪ್ರಯತ್ನೇನ ನ ದೇಯಾ ಯಸ್ಯ ಕಸ್ಯಚಿತ್ |

“ಈ ಖೇಚರೀ ಮುದ್ರೆಯನ್ನು ಸಾಧಿಸಿದ ಸಾಧಕನಿಗೆ ರೋಗ, ನಿದ್ರೆ, ಹಸಿವು ನೀರಡಿಕೆ, ಮೂರ್ಛಗಳು ಹೋಗುವವಲ್ಲದೆ ಮರಣವೂ ಇಲ್ಲದಾಗುವದು. ಅವನನ್ನು ರೋಗಗಳು, ಕರ್ಮಗಳು ಪೀಡಿಸಲಾರವು. ಈ ಮುದ್ರಾಸಾಧನೆಯ ಪ್ರಭಾವದಿಂದ ವೀರ್ಯವನ್ನು ಊರ್ಧ್ವಮುಖಗೊಳಿಸಿದವನು ಸ್ತ್ರೀಯಳನ್ನು ಅಲಂಗಿಸಿದರೂ ಅವನಿಗೆ ವೀರ್ಯಪಾತವಾಗುವದಿಲ್ಲ.  ನಭೋಮುದ್ರೆ (ಖೇಚರೀ) ಯನ್ನು ಸಾಧಿಸುತ್ತಿರುವವನಿಗೆ ವೀರ್ಯಪಾತ ನಿಂತು ಹೋಗುವದು. ದೇಹದಲ್ಲಿ ವೀರ್ಯವು ಘಟ್ಟಿಗೊಂಡರೆ ಅವನಿಗೆ ಮರಣವೆಂಬುದೇ ಇಲ್ಲ. ಇಂಥ ಸರ್ವಸಿದ್ದಿ ದಾಯಕವಾದ ಈ ಮಹಾಮುದ್ರೆಯನ್ನು ಸಿಕ್ಕ ಸಿಕ್ಕ ಮನುಷ್ಯನಿಗೆ ಹೇಳಬಾರದು. ರಹಸ್ಯವಾಗಿರಬೇಕು’, ಎಂದಿದ್ದಾರೆ ಉಪನಿಷತ್ಕಾರರು. ಕೆಲವು ಸಾಧಕ ಯೋಗಿಗಳು ಅಂತಃಖೇಚರಿಯನ್ನು ಅರಿಯದೆ ಬಹುಪ್ರಯಾಸವುಳ್ಳ ಲಂಬಿಕಾ ಯೋಗವೆನಿಸುವ ಬಾಹ್ಯ ಖೇಚರಿಯನ್ನು ಆಶ್ರಯಿಸಿ ನಾಲಿಗೆಯನ್ನು ಸೀಳುವ ವಿಷಯದಲ್ಲಿ ಆತುರ ಪಡುತ್ತಾರೆಂದು ಚನ್ನ ಸದಾಶಿವಯೋಗಿಗಳು ಹೇಳಿದ್ದಾರೆ.

ಅಂತೂ ಖೇಚರೀ ಮುದ್ರೆಯ ಬಾಹ್ಯ ಸ್ವರೂಪವು ಅತ್ಯಂತ ಆಯಾಸಕರವಾಗಿದೆ. ಅಂತಃಖೇಚರೀಯ ಅಲ್ಪವಾದ ಅನುಸಂಧಾನವು ಶಿವಯೋಗದಲ್ಲಿಯೂ ಸುಲಭವಾಗಿ ಸಮಾವೇಶವಾಗುವದು. ಅದನ್ನರಿತ ಸದ್ಗುರುವು ಖೇಚರೀ ಮುದ್ರೆ ಯನ್ನು ಆಚರಿಸುವದಕ್ಕಿಂತ ಘನವಾದ ಮತ್ತು ಪ್ರತ್ಯಕ್ಷ ಕಾಣುವ ಲಿಂಗದಾಚರಣೆಯನ್ನು ಸೂಚಿಸಿರುವನು. ಇದು ಸುಲಭ ಸಾಧ್ಯವಾದುದು. ಆದರೆ ನಾಲಗೆಯನ್ನು (ಸೀಳಿ ಒಂದು ಭಾಗವನ್ನು ಗಂಟಲೊಳಗೆ ಇನ್ನೊಂದನ್ನು) ಮುಂದಕ್ಕೆಳೆದು ಭ್ರೂ ಮಧ್ಯಭಾಗಕ್ಕೆ ಮುಟ್ಟಿಸಿ ದೃಷ್ಟಿ ನಿಲ್ಲಿಸುವ ಈ ಕಡು ಕಷ್ಟಕರವಾದ ಖೇಚರೀ  ಮುದ್ರೆಯನ್ನು ಬದಿಗಿರಿಸಿ ಅಂಗೈಯಲ್ಲಿ ಗೋಚರಿಸುವ ಮಂಗಲಮಯ ಶಿವಲಿಂಗದಲ್ಲಿ ಕಂಗಳ ದೃಷ್ಟಿಯನ್ನಿಡಲು ಕಲಿಸಿ ನಾಲಿಗೆಯಿಂದ ಷಡಕ್ಷರ ಮಂತ್ರವನ್ನು ಜಪಿಸುತ್ತ ಮನ-ಭಾವಗಳನ್ನು ಆ ಲಿಂಗದಲ್ಲಿ ಬೆರೆಯಿಸುವ ಲಿಂಗಧಾರಣೆ ಶ್ರೇಷ್ಠ ತರವಾದುದು.  ಲಿಂಗಪೂಜೆಯೆಂಬ ಘನವಾದ ಸತ್ಕ್ರಿಯೆಯಿಂದ ಕಾಮ-ಕಾಲ- ಮಾಯೆಯನ್ನು ಗೆಲ್ಲಲು ಬರುವದು. ಐಕ್ಯನೆನಿಸಿ ಬಯಲಾತ್ಮನಾಗುವ ಸಾಧನೆಗೆ ಖೇಚರಿಯ ನಿಲವು ನಿಲ್ಲಲಾರದು.

 ಶೂನ್ಯವನ್ನು ಸಂಪಾದಿಸಿ ನಿರಂಜನನಾದ ಅಲ್ಲಮನ ನಿಲುವಿಗೆ ಹಠಯೋಗವನ್ನು ಸಾಧಿಸಿ ವಜ್ರಕಾಯನಾದ ಗೋರಕ್ಷನ ವ್ಯಕ್ತಿತ್ವವು ಹಾರಿಹೋಯಿತೆಂಬುದನ್ನು ಹಿಂದೆಯೂ ತಿಳಿಸಿದೆ. ಬಯಲಾತ್ಮನಾದವನಿಗೆ ಯಾವ ಉಪಾಧಿ ತಾಗೀತು ! ಕಾರಣ ಗುರುಕುರಣೆಯಿಂದ ಕಾಣಬರುವ ಇಷ್ಟಲಿಂಗದಾಚರಣೆಗೆ ಯೋಗಮುದ್ರೆಗಳು ಸರಿಗಾಣವು, ಓ ಗುರುವೆ, ಅಂಥ ನಿಜಲಿಂಗೈಕ್ಯನನ್ನು ಮಾಡುವ ಘನವಾದ ಲಿಂಗದನಿಲವನ್ನು ಎನ್ನಲ್ಲಿ ನೆಲೆಗೊಳಿಸು. ಕೃಪೆಮಾಡಿ ಕಾಪಾಡು.

ಹಠಯೋಗಮಾರ್ಗ ಸಂ | ಕಟದಿನಾಗುವ ಮೋಕ್ಷ

ಸಟೆಯೆಂದು ಬಿಡಿಸಿ-ಘಟದ ಸಂಗದ ಲಿಂಗ

ದಿಟವೆಂದ ಗುರುವೆ ಕೃಪೆಯಾಗು    ||೧೦೫||

ಇಲ್ಲಿಯವರೆಗೆ ವಿಚಾರಿಸಿದಂತೆ ಯೋಗಮಾರ್ಗವಾಗಲಿ ತಾಂತ್ರಿಕಮಾರ್ಗವಾಗಲಿ  ಸುಲಭಸಾಧ್ಯವಲ್ಲವೆಂಬುದು ವೇದ್ಯವಾಗಿದೆ. ಯೋಗದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳು-ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ವೆಂದು. ಇಷ್ಟದೇವತಾರೂಪ ಮಂತ್ರ ಜಪವೇ ಮಂತ್ರಯೋಗವಾದರೆ ಇಷ್ಟದೇವತಾ ಮೂರ್ತಿಯಲ್ಲಿ ಪ್ರಣವಾತ್ಮಕನಾದದಲ್ಲಿ ಮನೋಮಾರುತಂಗಗಳನ್ನು ಒಡಗೂಡಿಸಿ ಬೆರೆಯುವದೇ ಲಯಯೋಗವೆನಿಸುವದು. ಯಮಾದ್ಯಷ್ಟಾಂಗಯೋಗವು, ಮಹಾ ಮುದ್ರೆಗಳು, ಬಂಧಗಳು, ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ, ಕಪಾಲಭಾತಿ ಗಳೆಂಬ ಷಟ್‌ಕರ್ಮಗಳು, ಮೊದಲಾದ ಕಷ್ಟತರ ಸಾಧನೆಗಳಿಂದ ದೇಹ-ಮನ ಜೀವವನ್ನು ಪರಿಶುದ್ಧಗೊಳಿಸುವ ಯೋಗವೇ ಹಠಯೋಗವೆನಿಸುವದು. ಈ ಹಠ ಯೋಗದ ಕೆಲವು ಅಂಗಗಳು ಮಂತ್ರಯೋಗ ಮತ್ತು ಲಯಯೋಗಕ್ಕಾದರೂ ಪೋಷಕವಾಗಿವೆ. ಹಠಯೋಗದಿಂದ ಶುದ್ಧನಾದ ಜೀವನು ಅಂತರ್ಲಕ್ಷ್ಯವುಳ್ಳವನಾಗಿ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವದು ರಾಜಯೋಗವೆನಿಸುವದು.

ʼʼ ಶಬ್ದಾತ್ಮಕ ಮಂತ್ರಯೋಗ ಸಾಧನೆಗಿಂತ ನಿಶ್ಯಬ್ದಾತ್ಮಕವಾದ ಮನೋಲಯ ವೆನಿಸುವ ಲಯಯೋಗವು ವಿಶೇಷವಾದುದು. ಪ್ರಾಣಾಯಾಮದ ಸಾಧನದಿಂದ ವಾಯುಜಯವನ್ನು ಪಡೆದು ಮನಸ್ಸಿನ ಸ್ಥಿರತೆ ಹೊಂದುವ ಹಠಯೋಗವು ಲಯಯೋಗಕ್ಕಿಂತ ಮಿಗಿಲಾಗಿದೆ. ಮನಸ್ಸು ಮತ್ತು ಅನಿಲಗಳನ್ನು ನಿರಾಯಾಸದಿಂದ ನಿಲಿಸಿ ನಿಜವಸ್ತು ಸಾಕ್ಷಾತ್ಕಾರವನ್ನು ಮಾಡಿಸುವ ರಾಜಯೋಗವು ಎಲ್ಲವುಗಳಿಗಿಂತ ಹೆಚ್ಚಿನದು ಎಂದು ನಿಜಗುಣ ಶಿವಯೋಗಿಗಳು ಯೋಗಮಾರ್ಗದ ಕ್ರಮಿಕತೆಯನ್ನು ಸಾರಿದ್ದಾರೆ. ಅಧಿಕ ಶ್ರಮ ಸಾಧ್ಯವಾದ ಯೋಗಫಲವನ್ನು ಶರಣರು ಒಪ್ಪಲಿಲ್ಲ. ಹಠಯೋಗವು ಹೆಸರಿಗೆ ತಕ್ಕಂತಿದೆ. ಅನ್ವರ್ಥಕತೆಯನ್ನು ಹೊಂದಿದೆ. ಹಟವೆಂದರೆ ಜೋರಾವರಿ ಅಥವಾ ಬಲಾತ್ಕಾರ. ಇಲ್ಲಿ ಸಹಜತೆಯಿರುವದಿಲ್ಲ.  ಬಲಾತ್ಕಾರದಿಂದ ಇಂದ್ರಿಯಗಳನ್ನು, ಮನಸ್ಸನ್ನು, ವಾಯುವನ್ನು, ಬುದ್ಧಿಯನ್ನು ನಿಗ್ರಹಿಸುವ, ನಿರೋಧಿಸುವ ಯೋಗದಿಂದ ಸಂಕಟವಾಗದೆ ಇರದು.

 ಇಂಥ ಸಂಕಷ್ಟದಿಂದಾಗುವ ಮೋಕ್ಷವೂ ದಿಟವಾದುದಲ್ಲ. ಅದು ಸಟೆಯಾದು ದೆಂದರೆ ಅನೇಕ ದುಃಖಗಳನ್ನು ಅನುಭವಿಸಿ ತನು-ಮನ-ಇಂದ್ರಿಯಗಳನ್ನು ಬಳಲಿಸಿ ಶಿವನ ಕೃಪಾಪ್ರಸಾದವನ್ನು ತ್ಯಜಿಸಿ ಯೋಗಿಯೆನಿಸಿ ಶರೀರ ನಾಶವಾದ ಮೇಲೆ ಮೋಕ್ಷವನ್ನು ಹೊಂದುವನು. ಅಣಿಮಾದಿ ಸಿದ್ಧಿಗಳನ್ನು ಪಡೆಯಬಹುದು. ಆದರೆ ಪುಣ್ಯಕ್ಷಯವಾದರೆ ಪುನಃ ಯೋಗಿಯು ಭವಕ್ಕೆ ಬರುವನು. ಅಲ್ಲದೆ ಯೋಗ ಭ್ರಷ್ಟರಾಗಿ ಜನ್ಮಾಂತರಗಳನ್ನು ಅನುಭವಿಸುವವರೇ ಹೆಚ್ಚು. ಇದು ಕಾರಣ ಸಂಕಷ್ಟ ದಿಂದ ಸಾಧ್ಯವೆನಿಸುವ ಹಠಯೋಗ ಮಾರ್ಗದಲ್ಲಿ ಲಭ್ಯವಾಗುವ ಮೋಕ್ಷವೂ ಸಟೆ ಯಾಗುವದು. ಅಂದರೆ ಸ್ಥಿರ (ಶಾಶ್ವತ) ಮೋಕ್ಷವಾಗುವುದಿಲ್ಲ.

ಇದನ್ನರಿತು ಸದ್ಗುರುವು ಕಾಯಘಟವನ್ನು ಸಂಸ್ಕರಿಸಿ ಶುದ್ಧಗೊಳಿಸಿ ಮಂತ್ರ ಮಯವಾಗಿಸಿ ಇಷ್ಟಲಿಂಗವನ್ನು ಸಂಗತ ಮಾಡುವನು. ಗುರೂಪದೇಶದಂತೆ ಸಾರ್ಥಕತೆಯನ್ನು ಪಡೆದ ಭಕ್ತನ ಕಾಯವು ಪಂಚಭೂತಗಳಲ್ಲಿ ಅಡಗುವಾಗ (ದೇಹಾವಸಾನದಲ್ಲಿ) ಲೂ ಶಿಷ್ಯನ ಸಂಗ ಬಿಡದ ಲಿಂಗವೇ ದಿಟವಾದುದು. ಈ  ಲಿಂಗೈಕ್ಯನಾಗುವ ಮೋಕ್ಷವೇ ಸತ್ಯವಾದುದು. ಲಿಂಗ ಕಳೆಯಲ್ಲಿ ಅಂಗಕಳೆಯು ಬೆರೆತು ಮಹಾಕಳೆಯಾದ ಮೇಲೆ ಸ್ಥೂಲ ಕಾಯದೊಂದಿಗೆ ಹೋಗುವ ಇಷ್ಟಲಿಂಗವು ಸತ್ಯವಾಗಿಯೂ ಸಮರಸದ ಲಿಂಗವಾಗಿದೆ.  ಕಾಯವಿಡಿದು ಕೈವಲ್ಯಕ್ಕೇರುವ ಕಷ್ಟವಿಲ್ಲದ ಯೋಗ ಲಿಂಗಾಂಗಯೋಗ. ಇದು ಕ್ರಿಯಾ-ಜ್ಞಾನಗಳ ಸಮನ್ವಯಯೋಗ, ಯೋಗಿಗಳ ಯೋಗದಲ್ಲಿ ಕ್ರಿಯೆ ಯಳಿದು ಕೇವಲ ಜ್ಞಾನ ಮಾರ್ಗದಿಂದ ಸಂತೃಪ್ತಿ ಸಮನಿಸಲಾರದು. ಸಕ್ಕರೆಯು ಸಿಹಿಯೆಂಬುವದು ಕೇವಲ ಜ್ಞಾನದಿಂದ ತಿಳಿಯದು. ಅದು ಕಾರಣ ಗುರುವು ಕರಣೇಂದ್ರಿಯಗಳನ್ನು ಸಂತೃಪ್ತಿಯಿದೆ. ನಿತ್ಯತೃಪ್ತತೆಯಿಂದ ಸತ್ಯಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ಶಿವಯೋಗಸಾಧಕನಿಗೆ. ಆದ್ದರಿಂದ ಲಿಂಗಾಂಗಯೋಗವು ದಿಟವಾದುದು. ಅಂಥ ದಿಟಯೋಗದಲ್ಲಿ ಧೀರನಾಗುವ ಧೈರ್ಯವನ್ನು ದಯಪಾಲಿಸು ಗುರುತಂದೆಯೆ

ಜ.ಚ.ನಿ

೧೯೨೪ ಇದ್ದಿರಬೇಕು. ನವಿಲುಗುಂದ ತಾಲೂಕು ಅಣ್ಣಿಗೆರೆಯ  ತೋಂಟದಾರ್ಯರ ಶಾಖಾಮಠ. ಒಂದು ದಿನ ಮುಂಜಾವು. ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು. ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತಮಾಡಿತ್ತು. ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು. ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು. ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು. ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ. ಅದು ಯೋಗ ಠೀವಿ, ಆರ್ಜವ ದೇಹ ಅಜಾನುಬಾಹು, ವಿಶಾಲವಾದ ಹಣೆ, ಎವೆಯಿಕ್ಕದ ಕಣ್ಣು, ಜಗತ್ತನ್ನೇ ಜರಿದಿದ್ದರು. ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು. ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು. ಯೋಗ ಬಲ್ಲಿದರಾಗಿದ್ದರೂ ಯೋಗದ ಏಳ್ಗೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು. ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿ ಆಸೇಚನವಾಗಿತ್ತು. ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು. ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ

ಸತ್ಕರ್ಮ-ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು. ನಿಷ್ಕಾಮಿಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ

ಕೌಶಲ್ಯವಿತ್ತು. ವಿರಕ್ತಶಿಖಾಮಣಿಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು. ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ-ಪ್ರಯೋಗಗಳ ಸಂಭ್ರಮ ಸೂರೆಗೊಂಡಿತ್ತು. ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು. ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು. ಬರಿ ದಯೆ-ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು. ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು.  ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ. ಅವರೆ ನಾ ಕಂಡ ಕಾರಣಿಕ ಕುಮಾರ

ಯೋಗಿಗಳು. ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನ್ನು ನೀಡಿ, ಜ್ಞಾನಬೆಳಗನು ಹರಡಿ, ಜಗಚ್ಛಕ್ಷುವಿನಂತೆ ಜಗಜಗಿಸಿದ್ದರು. ಅಂದು ಆ ಬಿಂಬವ ಕಂಡೆ.

ಕಂಡೆನ್ನ ಕಂಗಳು ಧನ್ಯವಾದವು. ಜನ್ಮ ಸಾರ್ಥಕವಾಯಿತು. ಇದಕ್ಕೆ ಮೂಲಕಾರಣರು ಅಡ್ನೂರಿನ ಶ್ರೀಮಂತ ಮಲ್ಲಿಕಾರ್ಜುನಗೌಡರು. ಇವರನ್ನಿಲ್ಲಿ ನೆನೆಯದಿದ್ದರೆ ಲೋಪವಾದೀತು, ಲೌಕಿಕ ವಿರೋಧವಾದೀತು!

ಇಂದು ಅದೇ ಆ ಮಹಾಕಾರಣಿಕ ಕುಮಾರ ಯೋಗಿಯ ಐತಿಹಾಸಿಕ ಭಾವಚಿತ್ರವನ್ನು ಬಲ್ಲಂತೆ ಚಿತ್ರಿಸಿ ಕಾಣುವ ಭಾಗ್ಯವು ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಸತ್ಪ್ರೇರಣೆಯಿಂದ ಮತ್ತೆ ಒದಗಿ ಬಂದಿದೆ; ಒಂದುಗೂಡಿನಿಂತಿದೆ. ಇದಕ್ಕಾಗಿ ಶ್ರೀ ಸದಾಶಿವ ಶಿವಾಚಾರ್ಯರಲ್ಲಿ ಧನ್ಯವಾದಗಳು.

 ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು, ಬೇಸರ ಬಾರದು.

ನಿಮ್ಮ ನೋಟವನಂತ ಸುಖ

 ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ

 ಕುಮಾರ ಯೋಗೀಶ್ವರ ನಿಮ್ಮ ನೋಡಿ

 ನೋಡಿ ಮನದಲ್ಲಿ

 ರತಿಹುಟ್ಟಿ ನಿಮಿರ್ದವೆನ್ನ ಕಂಗಳು

 ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ, ನಟ್ಟ ನೋಟದಿಂದ ನೋಡಿ, ನಲಿಯಲು ಮುಂದುವರಿಯಲಾಗಿದೆ, ಉಲಿಯಲು ಮೊದಲು ಮಾಡಲಾಗಿದೆ.