ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ ,

ಇಂದು ನನಗೆ ಚಲನಚಿತ್ರ ನಿರ್ದೇಶಕ ಮಿತ್ರರು ಹತ್ತು ಸಾಲು ಗಳಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆಗಳ ಸಾರಾಂಶ ನೀಡಲು ಕೇಳಿಕೊಂಡರು.

ಸಂಗ್ರಹಿಸಲು ಕುಳಿತುಕೊಂಡಿರುವೆ,ಎಲ್ಲಿಂದ ಪ್ರಾರಂಭ ಮಾಡಲಿ ,ಎಲ್ಲಿಗೆ ಕೊನೆಗೊಳಿಸಲಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.ಸಂಗ್ರಹದ ಪುಟ್ಟ ಪ್ರಯತ್ನದ ಸಾಲುಗಳು ಹೀಗಿವೆ

1.         ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.

2.        ಶ್ರೀ ಕುಮಾರ ಶಿವಯೋಗಿಗಳು  ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು.

3.        ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.

4.        ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು  ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾg ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದÀ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

5.        ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ  ಮಾತೃ ಪ್ರೇಮವನ್ನು ತೋರಿಸಿದವರು.  ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ.  ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ  ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.

6.        ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ  ಇವೆಲ್ಲವೂ  ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು  ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು  ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ  ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.

7.         ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು.   ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .

8.        ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು.  ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.

9.        ಉದ್ಯಮ ಸೃಷ್ಟಿ : ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಯಾಂತ್ರಿಕ ಉದ್ಯೋಗಗಳ ಪ್ರಸ್ತಾವನೆಗೆ ಹೆಚ್ಚು ಶ್ರಮಪಟ್ಟವರು, ಶಿವಯೋಗಮಂದಿರದ ಆರ್ಥಿಕ ಭದ್ರತೆಯನ್ನು ಲಕ್ಷಿಸಿ, ಶ್ರೀಗಳವರು ಬಾಗಲಕೋಟೆಯಲ್ಲಿ ‘ಶಿವಾನಂದ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌  ಫ್ಯಾಕ್ಟರಿಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು, ಅದು ಶಿವಯೋಗಮಂದಿರ ಬೆನ್ನೆಲುವಿನಂತಿದೆ, ವಿರಕ್ತಸ್ವಾಮಿಗಳೊಬ್ಬರ ಉದ್ಯಮ ಸೃಷ್ಟಿಯ ಈ ಮಹದ್ಯೋಜನೆ ಎಂತಹ ಚಾಣಾಕ್ಷಸಿರಿವಂತನ ಉದ್ಯೋಗ ಪ್ರಗತಿಯ ಕಾರ್ಯದಕ್ಷತೆಯನ್ನೂ ಮೀರಿ ನಿಲ್ಲುತ್ತದೆ. ಶ್ರೀಗಳವರಲ್ಲಿಯ ಬುದ್ಧಿವೈಭವ, ದೂರದೃಷ್ಟಿ ಅಪರಿಮಿತವಾಗಿದ್ದವು, ಆಸಾಧಾರಣವಾಗಿದ್ದವು. ಅವರ ದೂರದೃಷ್ಟಿಯಿಂದಾಗಿ ಅಂದಿನ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯೇನಿರ್ಮಿತವಾಗಿ ಅದು ಉಳಿದ ಉದ್ಯಮ ಪ್ರೇಮಿಗಳಿಗೂ ಮಾದರಿಯಾಯಿತು.

10.       ಬಾಗಲಕೋಟೆಯ ಶ್ರೀ ಗುರುಸಿದ್ದೇಶ್ವರ ಚಿತ್ರಮಂದಿರ:

ಶಿವಯೋಗಮಂದಿರ ಸಂಸ್ಥೆಯು ತನ್ನ ಕಾಲಮೇಲೆ ತಾನು ನಡೆಯುವಂತೆ ಮಾಡುವುದಕ್ಕಾಗಿ ಜಿನ್ನಿಂಗ್ ಫ್ಯಾಕ್ಟರಿ, ಕಬ್ಬಿಣ ವ್ಯಾಪಾರ ಕೇಂದ್ರ ಸ್ಥಾಪಿಸಿದರೆಂದು ಸ್ಪಷ್ಟ, ಬಾಗಲಕೋಟೆಯ ಶ್ರೀ ಶಿವಾನಂದ ಜೆನ್ನಿಂಗ್ ಫ್ಯಾಕ್ಟರಿಗೆ ಹೊಂದಿಕೊಂಡ ಪ್ರಾಯಶಃ ಶ್ರೀಗುರುಸಿದ್ಧೇಶ್ವರ ಚಿತ್ರಮಂದಿರವನ್ನು ೧೯೨೪ರ ವೇಳೆಗೆ ಸ್ಥಾಪನೆ ಮಾಡಿದರು.

ಈ ಕಾರ್ಯವನ್ನು ಸ್ವಾಮಿಗಳೇಕೆ ಕೈಕೊಂಡರು? ಎಂಬ ಪ್ರಶ್ನೆ ಉದ್ಭವಿಸುವುದು

ಸಹಜ. ಆದರೆ ಇದರ ಹಿಂದಿರುವ ಹಿನ್ನೆಲೆ ಉದ್ದೇಶ,ಕುಮಾರಶಿವಯೋಗಿಗಳ ಈ ಬಗೆಯ ಉದ್ದೇಶ ಮತ್ತು ದೂರದರ್ಶಿತ್ವವನ್ನು ಈ ಕೆಳಗಿನ

ಅಂಶಗಳಿಂದ ಮನವರಿಕೆ ಮಾಡಿಕೊಳ್ಳಬಹುದಾಗಿದೆ.

೧. ಕಲಾಕಾರರಿಗೆ ಪ್ರೋತ್ಸಾಹ.

೨. ರಂಗಕಲೆ, ಚಿತ್ರೋದ್ಯಮಕ್ಕೆ ಪ್ರೋತ್ಸಾಹ.

೩ ಸಂಗೀತ ವಾದನ ಕಲೆಗೆ, ಶಿವಧರ್ಮ ಪ್ರಚಾರಾದಿಗಳಿಗೆ ಪ್ರೋತ್ಸಾಹ.

ಈ ಮೂರು ಅವಶ್ಯಕತೆಗಳ ಜೊತೆಗೆ ಶಿವಯೋಗಮಂದಿರ ಸಂಸ್ಥೆಗೆ ಆರ್ಥಿಕ ಭದ್ರತೆ ಸರಿದೂಗಿಸಲು ಕೈಕೊಂಡ ಯೋಜನೆಯು.

ಒಂದು ಕಾಲಕ್ಕೆ ಬೇಕಾಗುವ ಅಗತ್ಯತೆಗಳನ್ನು ಗುರುತಿಸುವಲ್ಲಿ ಮತ್ತು ಅವುಗಳು ಸಾಕಾರಗೊಳ್ಳುವಲ್ಲಿ ಶ್ರೀ ಕುಮಾರಶಿವಯೋಗಿಗಳ ಕಾರ್ಯ ವೈಖರಿಯು ಮುಂದಿನವರಿಗೆ ಆದರ್ಶಪ್ರಾಯವಾಗಿ ಪರಿಣಮಿಸಿದೆ.

11.        ಭೂ ಅಭಿವೃದ್ಧಿ ಕಾರ್ಯ :

ಶಿವಯೋಗಮಂದಿರ ಸಂಸ್ಥೆಯು ಅಬಾಧಿತವಾಗಿ ಮುನ್ನಡೆಯಲೆಂಬ ಕಾರಣದಿಂದ ಶ್ರೀ ಕುಮಾರಶಿವಯೋಗಿಗಳು ನೂರಾರು ಎಕರೆ ಜಮೀನನ್ನು ಕೂಡಿಹಾಕಿದರು. ಅದರಲ್ಲಿ ನವೀನ ಮಾದರಿಯ ಕೃಷಿಯನ್ನು ಅಳವಡಿಸಿದರು. ಸ್ವತಃ ನೇಗಿಲು ಹಿಡಿದು ಉಳಿಮೆಯನ್ನು ಮಾಡಿದರು. ನೂರಾರು ಎತ್ತುಗಳನ್ನು, ಗೋವುಗಳನ್ನು ಸಾಕಿ ಸಲುಹಿದರು. ಸ್ವತಃ ಪರಿಸರ ಪ್ರೇಮಿಯಾಗಿದ್ದ ಶ್ರೀ ಕುಮಾರಶಿವಯೋಗಿಗಳು ಮಲಪ್ರಭಾ ನದಿಯಿಂದ ಭೂಮಿಗೆ ನೀರು ಒದಗಿಸಿ ಔಷಧೀಯ ಸಸ್ಯಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸಿದ್ದಾರೆ. ಶಿವಯೋಗಮಂದಿರದ ಸುತ್ತಮುತ್ತ ಹಸಿರನ್ನು ಸಮೃದ್ಧಗೊಳಿಸಿದ್ದಾರೆ. ಅವರು ಬೆಳೆಸಿದ ಲತಾಮಂಟಪ, ವೃಕ್ಷಮೂಹ, ಔಷಧೀಯ ಸಸ್ಯ ಇಂದಿಗೂ ಶಿವಯೋಗಮಂದಿರದಲ್ಲಿ ಸಾಕ್ಷಿಯಾಗಿ ಬದುಕಿವೆ.

12.       ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ  ನಾಡಿನ ತುಂಬೆಲ್ಲ  ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.

ಹಾಗೆ ಆರಂಭಗೊಂಡ ಶಿಕ್ಷಣ ಸಂಸ್ಥೆ ಗಳು ನೂರಾರು ಅವುಗಳಲ್ಲಿ

ಬಳ್ಳಾರಿಯ ವೀರಶೈವ ವಿದ್ಯಾವರ್ದಕ ಸಂಘ

ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ದಕ ಸಂಘ

ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ದಿ ಸಂಸ್ಥೆ

ಪ್ರಮುಖವಾದುವು.

ಆರ್ಥಿಕ ಸಂಕಷ್ಠದಲ್ಲಿದ್ದ ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆ ಆರ್ಥಿಕ ಸಹಾಯ ಮಾಡಿದ್ದು ಚಿರಸ್ಮರಣೀಯ

ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಹೆಸರಿನಲ್ಲಿಯೇ ಆರಂಭಗೊಂಡ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯಗಳು   ಗಡಿನಾಡ ಭಾಗಗಳಾದ ಬೆಳಗಾವಿ ಮತ್ತು ಬೀದರಿನ ಭಾಲ್ಕಿ ಗಳು ಬಹುದೊಡ್ಡ ಕ್ರಾಂತಿಯನ್ನು ಮಾಡಿದ್ದು ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು

ಜುಲೈ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ದೇವ ದೇವ ಜೀವಗುಣವ ಜೀವದಿ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀಗಳವರ ಮಹತ್ಕಾರ್ಯಗಳು ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ
  4. ಯೋಗದ ಉಪಯೋಗವೇನು? ಲೇಖಕರು :ಶ್ರೀ ಕೊಟ್ಟೂರಸ್ವಾಮಿಗಳು ಜಡೆ ( ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು)
  5. ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-1 ಅರ್ಚನೆ :ಲೇಖಕರು : ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
  6. ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-೨ ಅರ್ಪಣ            ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇವರು ( ವಿಜಯ ಪ್ರಭು ದೇವರು) ಬೂದಗುಂಪ
  7. ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-೩ ಅನುಭಾವ ಲೇಖಕರು: ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
  8. ವಚನ ಸಂಪಾದನೆ ಪರಂಪರೆ ಲೇಖಕರು: ಡಾ|| ಬಿ. ನಂಜುಂಡಸ್ವಾಮಿ
  9. ಹಾನಗಲ್ಲ ದೈವ ಶ್ರೀಕುಮಾರಸ್ವಾಮಿ  ಲೇಖಕರು ಡಾ. ಕಿರಣ ಪೇಟಕರ
  10. ವಿಡಿಯೋ ೧ Shri Kumareshwara Life & Contributions  : Smt Supriya  Antin Kaddargi
  11. ವಿಡಿಯೋ ೨ Yuga Purusha Shri Hanagal Kumareshwara  (Hindi) by Smt Sapna Jain
  12. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಸಿಂಧುರ)

ದೇವ, ದೇವ | ಜೀವಗುಣವ ಜವದಿ

ನಾಶಗೊಳಿಸಿ ಕಾಯೋ              || ಪ ||

ಘನಪಾಶವು ಮುಸುಕಿ | ನಿರ್ನಾಮನಾದೆ |

ಮನುಮುನಿವಂದ್ಯಾ           || 1 ||

ಮಮತಾ ವಿಷಯದೊಡನೆ | ಪ್ರಮಾದಗೊಳುವೆ |

ಸುಮನವನಿತ್ತು                 || 2 ||

ಶಿವಯೋಗದೊಳಿರಿಸಿ | ನಿರ್ವಾಣ ಸುಖವ

ತವೆ ಪಾಲಿಸುತೆ                                || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಗಾಳಿ ಗಾಳಿಯ ಕೂಡಿ | ಜಾಳಂದ್ರ ಗಿರಿಗಳನು

ದಾಳಿಯನು ಒಯ್ದು-ಆಳುವ ಬಗೆಯನು ನಾ

ಕೇಳಿದೆನು ಗುರುವೆ ಕೃಪೆಯಾಗು || ೫೯ ||

ಅನಲಭೂತವನ್ನು ವರ್ಣಿಸಲು ರಾಮಾಯಣ ಕಥೆಯನ್ನು ಪ್ರಸ್ತಾಪಿಸಿದ್ದರೆ ಅನಿಲ ಭೂತದ ಭಯಾನಕತೆಯನ್ನು ವ್ಯಕ್ತಗೊಳಿಸಲು ಪೌರಾಣಿಕ ಕಥೆಯ ಮಾಧ್ಯಮವನ್ನು ಗ್ರಹಿಸಿದ್ದಾನೆ. ಶಿವಕವಿಯು

ಹಿಂದೆ ಗಾಳಿಯಲ್ಲಿ ಪರ್ವತಗಳು ಪಕ್ಷಿಗಳಂತೆ ಹಾರಾಡಿ ಜನತೆಯನ್ನು ಉಧ್ವಸ್ಥ ಗೊಳಿಸುತ್ತಿದ್ದವಂತೆ. ದೇವತೆಗಳ ಮೊರೆ ಕೇಳಿ ಇಂದ್ರನು ತನ್ನ ವಜ್ರಾಯುಧದಿಂದ ಗಿರಿಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿದನು. ಅಂದಿನಿಂದ ಪರ್ವತಗಳು ಕದಲುವದಿಲ್ಲ. ಹೀಗೆ ಇಂದ್ರನಿಂದ ಜಾಳಾದ (ಹಾಳಾದ) ಗಿರಿಗಳಲ್ಲಿ ಸಾಮಾನ್ಯ ಗಾಳಿಯು ಬಿರುಗಾಳಿಯೊಡನೆ ಕೂಡಿ ದಾಳಿಮಾಡಿ ಗಿಡ-ಬಳ್ಳಿಗಳನ್ನು ಹಾರಿಸಿಕೊಂಡು ಹೋಗಬಹುದು. ಆದರೆ ಆ ಗಾಳಿಯು ಪರ್ವತವನ್ನೇನೂ ಮಾಡಲಾರದು. ಇದೇ ಮಾತನ್ನು ಮಹಾಕವಿ ಕಾಳಿದಾಸನು ತನ್ನ ರಘುವಂಶ” ಕಾವ್ಯದಲ್ಲಿ

“ನ ಪಾದಪೋನ್ಮೂಲಶಕ್ತಿರಂಹಃ

ಶಿಲೋಚ್ಛಯೇ ಮೂರ್ಚ್ಛತಿ ಮಾರುತಸ್ಯ ‘

 ಮರಗಳನ್ನು ಕಿತ್ತುಹಾಕಬಲ್ಲ ಶಕ್ತಿಯುಳ್ಳ ಗಾಳಿಯು ಪರ್ವತವನ್ನು ಹಾರಿಸುವಲ್ಲಿ ಬಲಹೀನವಾಗಿದೆ. ಅಂದರೆ ಅದು ಗಿರಿಯನ್ನು ಏನೂ ಮಾಡಲಾರದೆಂದೇ ತಿಳಿಸಿದ್ದಾನೆ.

ಶರೀರದಲ್ಲಿ ವಾಯು ತತ್ತ್ವದ ಮನವೇ ಗಾಳಿಯೆನಿಸುವದು. ಈ ಗಾಳಿರೂಪಿ ಮನವು ಗಾಳಿಯ ಕೂಡಿ=ಪ್ರಾಣವಾಯುವನ್ನು ಬೆರೆತು ಸಂಚರಿಸುತ್ತದೆ. ಶರೀರದ ಸಂಚಲನೆಗೆ ಐದು ವಾಯುಗಳು ಮುಖ್ಯ. ಪ್ರಾಣ, ಅಪಾನ, ವ್ಯಾನ,   ದಾನ,ಸಮಾನಗಳೆಂದು.  ಇವಕ್ಕೇನೆ _ ಪ್ರಾಣಪಂಚಕವೆನ್ನುವರು ಅಮರಸಿಂಹನು ಅಮರಕೋಶ’ದಲ್ಲಿ –   |

“ಪ್ರಾಣೋSಪಾನಃ ಸಮಾನಶ್ಚೋದಾನವ್ಯಾನೌ ಚ ವಾಯವಃ !

ಹೃದಿ ಪಾಣೋ ಗುದೆ…ಪಾನಃ ಸಮಾನೋ ನಾಭಿಮಂಡಲೇ|

ಉದಾನಃ ಕಂಠದೇಶ ಸ್ಯಾತ್ ವ್ಯಾನಃ ಸರ್ವಶರೀರಗಃ ||

ಹೃದಯದಲ್ಲಿ ಪ್ರಾಣವಾಯು, ಗುದದಲ್ಲಿ ಅಪಾನವಾಯು, ನಾಭಿಯಲ್ಲಿ ಸಮಾನ ವಾಯು, ಕಂಠದಲ್ಲಿ ಉದಾನವಾಯು ಮತ್ತು ಸಂಪೂರ್ಣಶರೀರದಲ್ಲಿ ವ್ಯಾನವಾಯು ವ್ಯಾಪಿಸಿರುತ್ತವೆಂದು ಈ ಐದು ವಾಯುಗಳು ಇರುವ ಸ್ಥಾನಗಳನ್ನು ನಿರ್ದೇಶಿಸಿದ್ದಾನೆ. ಈ ಐದಲ್ಲದೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ವೆಂದು ಮತ್ತೆ ಐದು ಉಪವಾಯುಗಳಿವೆ. ಇವುಗಳಿಗೆ  ನಾಗಪಂಚಕವೆನ್ನುತ್ತಾರೆ.

ಮಾನವನು ಅನ್ನ ನೀರುಗಳಿಲ್ಲದೇ ಕೆಲವು ಕಾಲ ಬದುಕಬಹುದು. ಆದರೆ ಗಾಳಿಯಿಲ್ಲದೆ ಬದುಕಲಾರನು. ವಾಯುಗಳು ಜೀವಾತ್ಮನಿಗೆ ಬಹುಮುಖ್ಯವಾಗಿವೆ. ಈ ವಿಷಯವನ್ನು ಷಟ್‌ಸ್ಥಲ ಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರ ವಾಗಿ ತಿಳಿಪಡಿಸಿದ್ದಾರೆ. ಒಂದೊಂದೆ ವಾಯುವಿನ ಗುಣಧರ್ಮವನ್ನು ಪ್ರತ್ಯೇಕವಾಗಿ ವಿವೇಚಿಸಿದ್ದಾರೆ.

೧) ಪ್ರಾಣವಾಯು : ಇಂದ್ರ ನೀಲವರ್ಣ, ಹೃದಯಸ್ಥಾನದಲ್ಲಿರ್ದು, ಅಂಗುಷ್ಠ ತೊಡಗಿ ಘ್ರಾಣಾಗ್ರಪರಿಯಂತರ ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸನಂಗೈಸಿ ಅನ್ನಜೀರ್ಣಿಕರಣಮಂ ಮಾಡಿಸುತ್ತಿಹುದು.

೨) ಅಪಾನವಾಯು : ಹರಿತವರ್ಣ, ಗುದಸ್ಥಾನದಲ್ಲಿರ್ದು, ಮಲಮೂತ್ರಂಗಳ ವಿಸರ್ಜನವಂ ಮಾಡಿಸಿ ಅಧೋದ್ವಾರವಂ ಬಲಿದು ಅನ್ನರಸ ವ್ಯಾಪ್ತಿಯ ಮಾಡಿಸುತ್ತಿಹುದು.

೩) ವ್ಯಾನವಾಯು : ಗೋಕ್ಷೀರವರ್ಣ, ಸರ್ವಸಂಧಿಯಲ್ಲಿರ್ದು ನೀಡಿಕೊಂಡಿ ಹುದನು, ಮುದುಡಿಕೊಂಡಿಹುದನು ಅನುಮಾಡಿ ಅನ್ನಪಾನಮಂ ತುಂಬಿಸುತ್ತಿಹುದು.

೪) ಉದಾನವಾಯು : ಎಳೆಮಿಂಚಿನ ವರ್ಣ, ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸು ಕಾಣುವ, ಏಳಿಸುವ, ಛರ್ಧಿಸುವ (ವಮನ) ರೋದನಂಗಳ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು.

೫) ಸಮಾನವಾಯು : ನೀಲವರ್ಣ, ನಾಭಿಸ್ಥಾನದಲ್ಲಿರ್ದು ಅಪಾದಮಸ್ತಕ

ಪರಿಯಂತರ ಸಪ್ರಾಣಸಿಕೊಂಡ ಅನ್ನರಸಮಂ ಎಲ್ಲ ರೋಮನಾಳಂಗಳಿಗೆ ಹಂಚಿಕ್ಕುತ್ತಿಹುದು ” ಇವು ಪ್ರಾಣಪಂಚಕದ ಕೆಲಸಗಳು. ಇನ್ನು ನಾಗಪಂಚಕದ ಕಾರ್ಯವನ್ನು  ಸಂಕ್ಷಿಪ್ತದಲ್ಲಿ ನೋಡುವಾ

೬) ನಾಗವಾಯು : ಪೀತವರ್ಣ, ವಾಗಿಂದ್ರಿಯ (ಬಾಯಿ)ಕ್ಕೆ ಕಾರಣವಾಗಿ ಸುವಾಕ್ಯ ದುರ್ವಾಕ್ಯಗಳನ್ನು ನುಡಿಸುವದು.

೭) ಕೂರ್ಮವಾಯು : ಶ್ವೇತವರ್ಣ ಪಾಣೀಂದ್ರಿಯ (ಕೈ)ದಿಂದ ಆದಾನ- ಪ್ರದಾನಗಳನ್ನು ಮಾಡಿಸುತ್ತಿಹುದು.

೮) ಕೃಕರ ವಾಯು : ಅಂಜನವರ್ಣ ಪಾದೇಂದ್ರಿಯವು ಗಮನಾಗಮನಗಳನ್ನು ಹೊಂದುವದು.

೯) ದೇವದತ್ತ ವಾಯು : ಸ್ಪಟಿಕವರ್ಣ ಪಾಯ್ವಿಂದ್ರಿಯವು (ಗುಹ್ಯ) ಕುಳಿತಲ್ಲಿ ಮಲಗಿಸಿ, ಮಲಗಿದಲ್ಲಿ ಏಳಿಸಿ, ನಿಂದಿರಿಸಿ, ಚೇತರಿಸಿ, ಒರಲಿಸುತ್ತ ಸರ್ಜನ ವಿಸರ್ಜನ ಗಳನ್ನು ಮಾಡಿಸುವದು.

೧೦) ಧನಂಜಯ ವಾಯು : ನೀಲವರ್ಣ ಗುದೇಂದ್ರಿಯವು. ಆನಂದಾದಿ ವಿಷಯದ ಅನುಭವವನ್ನು ಹೊಂದುವದು. ಈ ವಾಯುವು ಕರ್ಣದಲ್ಲಿ ಸಮುದ್ರ ಘೋಷವನ್ನು ಘೋಷಿಸಿ ಮರಣಕಾಲಕ್ಕೆ ನಿರ್ಘೋಷವನ್ನು ಪಡೆಯುವದು. ಈ ಎಲ್ಲ ವಾಯುಗಳಲ್ಲಿ ಪ್ರಾಣವಾಯುವೇ ಶರೀರದ ಜೀವಾಳವಾಗಿದೆ. ಆದರೂ ಎಲ್ಲ ವಾಯುಗಳ ಸಂಚಲನವು ಕ್ರಮಬದ್ಧವಾಗಿದ್ದರೆ ಮಾತ್ರ ಶಾರೀರಿಕ ವ್ಯವಹಾರವು ಸುಗಮವೂ, ಸುಲಲಿತವೂ ಆಗುವದು. ಈ ಶರೀರದ ಸುಸ್ಥಿತಿಗೆ ದಶವಾಯುಗಳೂ ಅವಶ್ಯವೆಂದಂತಾಯಿತು. ಚನ್ನಬಸವಣ್ಣನವರು ವಿವರಿಸಿದ ದಶವಾಯುಗಳ ವಿಚಾರ ವನ್ನು ೮೪೪ ನೆಯ ವಚನದಿಂದಲೂ ಅರಿಯಬಹುದು.

ವಾಯುತತ್ತ್ವದ ಮನವು ಪ್ರಾಣವಾಯುವಿನ ಸಂಚಲನೆಯಿಂದ ಶರೀರದಲ್ಲಿ ಚಂಚಲತನವನ್ನು ಹೊಂದುತ್ತದೆ. ಅಷ್ಟೇ ಅಲ್ಲದೆ ಗಾಳಿಯು ಜಾಳಂದ್ರ ಗಿರಿಗಳ ಮೇಲೆ ದಾಳಿಮಾಡಿ ದೇಹವನ್ನು ದಣಿಸಿ ಆಳುವ ರೀತಿಯನ್ನು ಕೇಳಿದೆನೆಂದು ಕವಿಯು ಚಕಿತನಾಗಿ ಶ್ರೀಗುರುಕೃಪೆಯನ್ನು ಯಾಚಿಸಿದ್ದಾನೆ. ಈ ಗಾಳಿಯ ದಾಳಿಯು ಪ್ರತ್ಯಕ್ಷವಾಗಿಯೂ ಕಾಣಬರುತ್ತದೆ. ಇಲ್ಲಿ ಜಾಳಂದ್ರ ಗಿರಿಗಳೆಂದರೆ ಕೆಲವರು ಈಡಾ- ಪಿಂಗಳ ನಾಡಿಗಳೆಂತಲೂ, ಎರಡೂ ಕಣ್ಣುಗಳೆಂತಲೂ ಅರ್ಥೈಸುತ್ತಾರೆ. ಪ್ರಾಣವಾಯು ಸೂರ್ಯನಾಡಿಯಾದ ಪಿಂಗಳೆಯ (ಮೂಗಿನ ಬಲರಂಧ್ರದ) ಲ್ಲಿ ಹಾಗೂ ಚಂದ್ರನಾಡಿ ಯಾದ ಈಡೆಯ (ಎಡರಂಧ್ರದ) ಲ್ಲಿ ಸಂಚರಿಸುತ್ತ ಅಂಗುಷ್ಠದಿಂದ ನೇತ್ರದವರೆಗೆ ಹರಿದಾಡುತ್ತದೆ. ಮತ್ತು ಎಲ್ಲ ವಾಯುಗಳಿಗೆ ಚೇತನವನ್ನು ಕೊಡುತ್ತದೆ. ಈ ಗಾಳಿಯ ಹರಿದಾಡುವಿಕೆಯು ಸಕ್ರಮವಾಗಿದ್ದರೆ ದೇಹಕ್ಕೆ ತೊಂದರೆಯಾಗುವದಿಲ್ಲ. ಶರೀರದಲ್ಲಿ   ಜಾಲದಂತೆ ಹಬ್ಬಿರುವ ನರಗಳಲ್ಲಿ ಮತ್ತು ಸಂಧಿ ಸ್ಥಾನಗಳಲ್ಲಿ ವಾಯುವಿಕಾರವಾದರೆ ಆಯಾಸವಾಗುವದು. ಅದಕ್ಕೋಸುಗ ಜಾಳಂದ್ರಗಿರಿಗಳೆಂದರೆ ನರಗಳ ಕೂಡುವಿಕೆ ಹಾಗೂ ಸಂಧಿಸ್ಥಾನಗಳೆಂದು ಭಾವಿಸಬಹುದು. ಈ ಜಾಳಂದ್ರಗಿರಿಗಳಲ್ಲಿ ದಾಳಿಮಾಡಿ ವಾಯು ತನ್ನ ಶಕ್ತಿಯನ್ನು ತೋರಿಸಿ ಶರೀರವನ್ನು ಆಳತಕ್ಕ ರೀತಿಯು ಕಂಡುಬರುತ್ತದೆ. ಕಾರಣ ವಾಯುವಿನ ಅಭಿಮಾನವನ್ನು ಕಳೆದುಕೊಂಡಾಗ ಶರೀರಕ್ಕೆ ಬಾಧಕವಾಗು ವದಿಲ್ಲ. ವಾಯುವಿಕಾರದ ರೀತಿಯನ್ನು ಅರಿಯದಿದ್ದರೆ ವಾಯುಮಯ ಮನಸ್ಸಿನ ಹರಿದಾಟವೂ ನಿಲ್ಲುವದಿಲ್ಲ. ಅದಕ್ಕಾಗಿ ಮನವನ್ನು ನಿಲ್ಲಿಸುವದಕ್ಕಾಗಿ ಪ್ರಾಣಾಯಾಮ ದಿಂದ ವಾಯು ಶುದ್ಧಿಯನ್ನು ಮಾಡುವರು. ಶಿವಪೂಜೆಯನ್ನು ಪ್ರಾರಂಭಿಸುತ್ತಿರಲು ರೇಚಕ ಪೂರಕ ಕುಂಭಕಗಳಿಂದ ವಾಯುವಿನ ಪರಿಶುದ್ಧತೆ ಹಾಗೂ ಚಲನೆಯನ್ನು ಸ್ಥಿರಗೊಳಿಸುವರು. ಇದರಿಂದ ಮನಸ್ಸಿನ ಸ್ಥಿರತೆಯುಂಟಾಗುವದು. ಈ ವಿಚಾರವನ್ನು ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಮಾಯಾಕೋಲಾಹಲ ಅಲ್ಲಮ ಪ್ರಭುದೇವರು (ಸಾಧಕರಿಗಾಗಿ) ಬಸವಣ್ಣನವರಿಗೆ ಬೋಧಿಸಿದ್ದಾರೆ (ಸಾಧಕಾಂಗ ಗತಿಯಲ್ಲಿ)

“ಮಾಯೆಯೆಂಬುದು ಮನವು ಮನವೇ

ವಾಯುವಾಗಿಹುದಾ ಮನಸ್ಸೇ

ವಾಯುರೂಪಾಗಿರುತಲಿಹುದಾ ವಾಯು ಹರಿದಾಡಿ |

ಕಾಯವನು ಕಂಗೆಡಿಸಿ ಭಕ್ತಿಯ

ಬಾಯ ಕಾಣಿಸಲೀಯದಂತಾ

ವಾಯುವನೆ ಗೆಲುವವನೆ ಭಕ್ತನು ಬಸವ ಕೇಳೆಂದ” || ೨೦ ||

“ಮನದ ಮುಂದಣ-ಬಯಕೆಯೇ ಮಾಯೆಯಾಗಿರುವದು. ಅಂಥಾ ಮಾಯಾಮಯ ಮನವು ವಾಯುಮಯವಾಗಿದೆ. ವಾಯುವು ಶರೀರದಲ್ಲಿ ಸಂಚರಿಸಿ ಭಕ್ತಿಯ ಬಟ್ಟೆಯನ್ನು ಕಂಗೆಡಿಸುತ್ತದೆ. ಆದ್ದರಿಂದ ಈ ವಾಯುವನ್ನು ಗೆಲ್ಲಬಲ್ಲವನೇ ಭಕ್ತನು’ ಎಂದು ಹೇಳಿ ವಾಯುವನ್ನು ನಿಲ್ಲಿಸುವ ಪರಿಯನ್ನು ಮುಂದಿನ ಮಾತಿನಲ್ಲಿ ತಿಳಿಸುತ್ತಾರೆ, ಪ್ರಭುಗಳು –

ಆಲಿ ನಿಂದೊಡೆ ಸುಳಿದು ಸೂಸುವ

ಗಾಳಿ ನಿಲುವುದು ಗಾಳಿ ನಿಲೆ ಮನ

ಮೇಲೆ ನಿಲುವುದು ಮನವು ನಿಂದೊಡೆ ಬಿಂದು ನಿಂದಿಹುದು |

ಲೀಲೆಯಿಂದಾ ಬಂದು ನಿಂದೊಡೆ

ಕಾಲ ಕರ್ಮವ ಗೆದ್ದು ಮಾಯೆಯ

ಹೇಳ ಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ || ೨೨ ||

ಕಣ್ಣಿನ ರೆಪ್ಪೆಯ ಬಡಿದಾಟ ನಿಂತರೆ ಗಾಳಿನಿಲ್ಲುವದು. ಅಂದರೆ ಲಿಂಗದಲ್ಲಿ ಆನಿಮಿಷ ದೃಷ್ಟಿಯನ್ನು ನಿಲ್ಲಿಸಿ ದೃಷ್ಟಿಯೋಗವನ್ನು ಸಾಧಿಸಬೇಕು. ಆಗ ವಾಯುವಿನ ಸಂಚಾರ ಸ್ಥಿರಗೊಂಡು ಮನಸ್ಸು ನಿಲ್ಲುವದು. ಮನವು ನಿಶ್ಚಂಚಲವಾದರೆ ಲಿಂಗದಲ್ಲಿ  ಬಿಂದುವನ್ನು ಕಾಣುತ್ತೇವೆ. ಬಿಂದು (ಪ್ರಕಾಶ)ವನ್ನು ನಿಲ್ಲಿಸುತ್ತಿರಲು ಕಾಲ-ಕರ್ಮ- ಮಾಯೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಬಹುದು.. ಹೀಗೆ ವಾಯುವನ್ನು ಹಿಡಿತದಲ್ಲಿ ತಂದರೆ ಅದರ ದಾಳಿಯು ನಿಲ್ಲುವದು

 ಪ್ರಾಣವಾಯುವನ್ನು ಶರೀರದಲ್ಲಿ ತೆಗೆದುಕೊಳ್ಳುವುದಕ್ಕೆ ಶ್ವಾಸವೆಂತಲೂ, ಹೊರಕ್ಕೆ ಬಿಡುವದಕ್ಕೆ ನಿಃಶ್ವಾಸವೆಂತಲೂ ಕರೆಯುವರು. ಈ ಶ್ವಾಸ-ವಿಶ್ವಾಸಗಳು ಒಂದು ನಿಮಿಷಕ್ಕೆ ೧೫ ಸಲ ಜರುಗುವವು. ಅಷ್ಟೇ ಸಲ ನಡೆಯಬೇಕು. ಅಂದರೆ ಅದು ಕ್ರಮಬದ್ಧವಾದುದು. ಅವು ಒಂದು ತಾಸಿಗೆ ೯೦೦ ಆಗುತ್ತವೆ. ೨೪ ತಾಸು (ಒಂದು ದಿನ)ಗಳಲ್ಲಿ ೨೧,೬೦೦ ಶ್ವಾಸ ನಿಃಶ್ವಾಸಗಳು ಉಂಟಾಗುತ್ತವೆಂದು  ಶಿವಾನುಭವಿಗಳು ಹೇಳುತ್ತಾರೆ. ಈ ಸಂಖ್ಯೆಗೆ ಅನುಗುಣವಾಗಿ ಶ್ವಾಸ ನಿಶ್ವಾಸದಲ್ಲಿ ಪ್ರಣವ ಪಂಚಾಕ್ಷರಿ ಯನ್ನು ತುಂಬಬೇಕು. ವಾಯು ಪ್ರಣವನಾದದೊಡನೆ ಬೆರೆಯಬೇಕು. ಆಗ ಮನ ಘನವಾಗುವದು. ಇದನ್ನು ಶಿಕ್ಷಿಸಬಲ್ಲವನು ಗುರುವು

. ಓ ಮಹಾಗುರುವೆ ! ಎನ್ನ ಮನವನ್ನು ಶಿಕ್ಷಿಸಿ ಘನ-ಮನವಾಗುವಂತೆ ಮಾಡು. ಪ್ರಾಣವು ಪ್ರಣವ ನಾದದಲ್ಲಿ ಬೆರೆಯುವಂತೆ ಕೃಪೆಮಾಡು. ಇದರಿಂದ ವಾಯು ವಿಕಾರದ ಭಯಾನಕತೆ ದೂರವಾಗಿ ಕಾಯವು ಪ್ರಸಾದಕಾಯವಾಗುವದು. ಇಂಥ ಸದ್ಭಕ್ತನಿಗೆ ಮಾತ್ರ ವಾಯುವು ಏನನ್ನೂ ಮಾಡಲಾರದು.

ಬಯಲೊಳಗೆ ಬಯಲೊಗೆದು | ಬಯಲೊಳಗೆ ಸಂಚರಿಸಿ

ಬಯಲೊಳಗೆ ಬಯಲು-ಲಯವಾಗುತಿರೆ ಕಂಡು

ಭಯಗೊಂಡೆ ಗುರುವೆ ಕೃಪೆಯಾಗು | ೬೦ |

ಪಂಚ ಮಹಾಭೂತಗಳಲ್ಲಿ ನೆಲ-ಜಲ-ಅನಲ ಅನಿಲ ನಾಲ್ಕನ್ನು ಪ್ರತಿಪಾದಿಸಿ  ಐದನೆಯ ಆಕಾಶದ ಇರುವನ್ನು ಬಿತ್ತರಿಸುತ್ತಾನೆ.  

 ಸಾಮಾನ್ಯವಾಗಿ ತೋರುವ ಈ ಮಹಾಬಯಲೊಳಗೆ ಒಂದು ಮನೆಯು ನಿರ್ಮಾಣವಾದರೆ ಅದಕ್ಕೆ ಮನೆಯ ಬಯಲೆನ್ನುವರು. ಅಂದರೆ ವಿಸ್ತಾರವಾದ ಬಯಲಿನಲ್ಲಿ ಮನೆಯಷ್ಟೇ ವಿಸ್ತಾರವಾದ ಸೀಮಿತವಾದ ಅವಕಾಶ ಕಂಡು ಬರುವದು. ಅರ್ಥಾತ್ ಹಿರಿದಾದುದು ಕಿರಿದಾಗುವದು. ಇಂಥ ಮನೆಯ ಒಳಬಯಲು ಹಾಗೂ ಹೊರ ಬಯಲುಗಳಲ್ಲಿ ಜೀವಾತ್ಮನು  ಸಂಚರಿಸುತ್ತಾನೆ. ಕಾಲಾಂತರದಲ್ಲಿ ಆ ಮನೆಯು  ನಾದುರಸ್ಥವಾಗಿ ಬಿದ್ದರೆ ಅದರ ಬಯಲು ಪುನಃ ಮೊದಲಿನ ಮಹಾ ಬಯಲಿನಲ್ಲಿ ಸೇರುತ್ತದೆ .ಜೀವಾತ್ಮನು ನಾಶವಾಗುವನು. ಆಗ ಎಲ್ಲವು ಮಹಾ ಬಯಲೇ ಆಗುವದು .ಇದು ಜಗದ ವಿಚಿತ್ರ ಗತಿಯಾಗಿದೆ.

 ಅಧ್ಯಾತ್ಮ ವಿಚಾರದಲ್ಲಿ ಬಯಲೆಂದರೆ ಮಹಾ ಚೈತನ್ಯಮಯವಾದ ಪರಾತ್ಪರ ವಸ್ತು.

 “ಯತೋ ವಾ ಇಮಾನಿ ಭೂತಾನಿ ಜಾಯಂತೇ

 ಯೇನ ಜಾತಾನಿ ಜೀವಂತಿ ಯತ್ ಪ್ರಯಂತ್ಯಭಿಸಂವಿಶಂತಿ |

ತೈತ್ತರೀಯೋಪನಿಷತ್ತು || ೩-೧

ಎಂಬುವ ಶೃತಿಯಂತೆ ಆ ಪರವಸ್ತುವಿನಿಂದ ಹುಟ್ಟಿದ ಭೂತಗಳು (ಪ್ರಾಣಿಗಳು) ಬದುಕುತ್ತವೆ. ಕೊನೆಗೊಮ್ಮೆ ಸಾಯುತ್ತವೆ. ಬ್ರಹ್ಮಾಂಡ ಬಯಲು ರೂಪಿನ ಶಿವನಿಂದ ಪಿಂಡಾಂಡ ಬಯಲನ್ನು ಹೊಂದಿದ ಜೀವನು ಸಂಜನಿಸಿ ನವದ್ವಾರಮಯವಾದ ದೇಹವೆಂಬ ಬಯಲಿನಲ್ಲಿ ಹಾಗೂ ಹೊರ ಬಯಲಿನಲ್ಲಿ ಸಂಚರಿಸುತ್ತಾನೆ. ಕೊನೆಗೆ ಶರೀರವು ನಾಶವಾಗಲು ಅದರ ನವದ್ವಾರಗಳೂ ಮಹಾ ಬಯಲಿನಲ್ಲಿ ಕೂಡಿ ಜೀವಾತ್ಮನೂ ಕಾಣದಂತಾಗುವನು. ಈ ಎಲ್ಲದರ ವೈಚಿತ್ರ್ಯತೆಯನ್ನು ಕಾಣುತ್ತಿರಲು ಭಯ ಬರುವದು ಸಹಜ. ಜೀವನದ ಆಶಾಪಾಶಗಳಲ್ಲಿ ಬಿದ್ದ ಜೀವನಿಗೆ ಸಾಯುವದೆಂದರೆ ಬಲುಕಷ್ಟ. ಈ ಸಾವನ್ನು ಗೆಲ್ಲಬೇಕಾದರೆ ಬಯಲಾತ್ಮನಾದ ಶಿವನನ್ನು ಅರಿಯಲೇಬೇಕು. ಶಿವನೇ ತಾನಾಗಿ ಶಿವನಲ್ಲಿ ಬೆರೆತರೆ ಭಯ ದುಃಖಗಳು ಹುಟ್ಟಲಾರವು. ಸಕಲ ಶಾರೀರಿಕ ಉಪಾಧಿಗಳು ಬಿಟ್ಟು ಹೋಗುತ್ತವೆ.

 ಶರಣರ ಸಾಧನೆಯಾದರೂ ಬಯಲುಗಳಿಕೆಯಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಶೂನ್ಯ ಸಂಪಾದನೆಯು ಶರಣತತ್ತ್ವದ ಮಹಾಮಣಿಹ. ಅದಕ್ಕಾಗಿ ಎಲ್ಲ ಶಿವಶರಣರು ಬಯಲು ಗಳಿಕೆಯ ಪರಿಯನ್ನು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಬಯಲು ಗಳಿಕೆಯೇ  ಐಕ್ಯಸ್ಥಿತಿಯೆನಿಸಿರುವದು. ಈ ಬಯಲುಗಳಿಕೆಯ ಸುಲಭ ಮಾರ್ಗವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು –

“ವೇದಶಾಸ್ತ್ರಾಗಮಂಗಳೆಂಬ ಕೊಟ್ಟಣವ ಕುಟ್ಟುತ್ತ

ನುಚ್ಚು ತೌಡು ಕಾಣಿಭೋ ! ಇವ ಕುಟ್ಟಲೇಕೋ ?

ಅತ್ತಲಿತ್ತ ಹರಿವ ಮನದ ಶಿರವನರಿಯಬಲ್ಲಡೆ

ಬಟ್ಟಬಯಲು ಕಾಣಾ ಚೆನ್ನಮಲ್ಲಿಕಾರ್ಜುನಾ !”

ಎಂದು ಸೂತ್ರರೂಪವಾಗಿ ಮಹದರ್ಥವನ್ನು ತಿಳಿಸಿದ್ದಾಳೆ. ವೇದಶಾಸ್ತ್ರ ಆಗಮಂಗಳವಾದ-ವಿವಾದ-ಜಂಜಾಟದಿಂದ ಬಯಲಾತ್ಮನನ್ನು ಕಾಣಲು ಸಾಧ್ಯವಿಲ್ಲ. ಅತ್ತಲಿತ್ತ ಹರಿವ ಚಂಚಲ ಮನಸ್ಸಿನ ಜುಟ್ಟವನ್ನು ಹಿಡಿದರೆ ಬಟ್ಟ ಬಯಲು ದೊರಕೊಳ್ಳುವದು. ಪ್ರಭುದೇವರೂ ಸಹ –

“ಬಯಲು ಬಯಲನೆ ಬಿತ್ತಿ,

ಬಯಲು ಬಯಲನೆ ಬೆಳೆದು ;

ಬಯಲು ಬಯಲಾಯಿತ್ತಯ್ಯಾ ;

 ಬಯಲು ಜೀವನ-ಬಯಲಭಾವನೆ,

ಬಯಲು ಬಯಲಾಗಿ ಬಯಲಾಯಿತ್ತಯ್ಯ.

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು.

ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ !’

ಬಯಲಿನಲ್ಲಿ ಬಯಲನ್ನು ಬಿತ್ತಿ, ಅದನ್ನೇ ಬೆಳೆದು ಅದರಲ್ಲಿಯೇ ಜೀವನ ಸಾಗಿಸಿ ಕೊನೆಗೊಮ್ಮೆಆ ಬಯಲಿನಲ್ಲಿ ಬೆರೆಯಬೇಕಾದರೆ ಗುಹೇಶ್ವರನ ಪೂಜೆ ಅವಶ್ಯವೆಂದು ನಾನೂ ಆ ರೀತಿ ಆತನನ್ನು ಪೂಜಿಸಿ ಬಯಲಾಗಿದ್ದೇನೆಂದು ತಿಳಿಸಿದ್ದಾರೆ. ಈ ಬಯಲ ತತ್ತ್ವವನ್ನರಿಯಬೇಕಾದರೆ ಗುರುಕರುಣೆ ಅತ್ಯವಶ್ಯ. ಗುರುಕೃಪೆಯಿಂದ ಇಷ್ಟಲಿಂಗವನ್ನು ಪಡೆದು ಲಿಂಗಪ್ರಾಣಿಯಾಗಿ ಸರ್ವಾಂಗ-ಲಿಂಗಮಯನಾದವನು ಬಯಲಾಗುವನು. ಇಥವರಿಗೆ ಭಯವೆಂಬುದೇ ಇಲ್ಲ. ಈ ವಿಷಯವನ್ನು ಮಹಾ ಶರಣ ಹಡಪದಪ್ಪಣ್ಣಗಳು-

ಬಯಲಿಂದಲೇ ಹುಟ್ಟಿ ಬಯಲಿಂದಲೇ ಬೆಳೆದು,

ಬಯಲಾಮೃತವನೆ ಉಂಡು ಬಯಲನೆ ಉಟ್ಟು

ಬಯಲನೆ ತೊಟ್ಟು ಬಯಲು ಬಯಲೊಳಗೆ ಬೆರೆದ ಭೇದವ

ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು

ಭವವಿರಹಿತ ಶರಣರ ನಿಲವ ?

ಬಸವಪ್ರಿಯ ಕೂಡಲಚೆನ್ನಬಸವಣ್ಣ (೧೧೭ ವ.ಸಾ.ಸಂ.)

ಬಯಲಾತ್ಮರಾದ ಭವಭಯವಿರಹಿತ ಶರಣರ ನಿಲುವನ್ನು ಭವಭಾರಿಗಳು ಎಂದೂ ತಿಳಿಯಲಾರರೆಂದು ತಿಳಿಸಿದ್ದಾರೆ.

ಜಾನಪದ ಕವಿ ಹಾಗೂ ಸಂತ ಶಿಶುನಾಳ ಶರೀಫ ಸಾಹೇಬರು ಸಹ ಬಯಲು ತತ್ತ್ವವನ್ನು ಕುರಿತು ಸುಂದರವಾಗಿ ಹಾಡಿದ್ದಾರೆ.

ಬಯಲೊಳು ಬಯಲು ಪುಟ್ಟಿಸಿದಾ ನಿ-

ರ್ಭಯಲಿನೊಳಗೆ ತನ್ನ ಆಲಯವ ಕಟ್ಟಿಸಿದ !

ಭವನಿವಾರಣ ಭಕ್ತರಕ್ಷಕ ಹೌದೆನುತ ನಿಶ್ಚಯಿಸಿ ಮನದೊಳು |

ತವಕ ತೂರ್ಯದಿಂದ ಲಕ್ಷಿಸಿ ಭವ ಸಮುದ್ರವ ದಾಂಟು, ದಾಂಟುತ |

ನಡೆಯೋ ಖಾದರಲಿಂಗ ನೆಲಸಿರ್ಪ ಗುಡಿಗೆ ನಡಿಯೋ ದೇವರ ಚಾಕರಿಗೆ II

ಖಾದರಲಿಂಗನೂ ಬಯಲಾತ್ಮನೇ, ಭವಸಮುದ್ರವನ್ನು ದಾಟಲು ಬಯಲಾಗಿ ಬಯಲಾತ್ಮನನ್ನು ಪೂಜಿಸಬೇಕು.

ಅಭಯಸ್ವರೂಪಿಯಾದ ಸದ್ಗುರುವೆ ! ಈ ಭವದ ಭಯವನ್ನು ನೀಗಿಸಲು ಶರಣರ ಪರಿಯನ್ನು ತಿಳಿಸು. ಶೂನ್ಯ ಸಂಪಾದನೆಯನ್ನು ಮಾಡುವ ಸುಜ್ಞಾನವನ್ನಿತ್ತು ಕರುಣಿಸಿ ಕಾಪಾಡು. ಅಂದರೆ ಬಯಲುಗಳಿಕೆಯನ್ನು ಸಾಧಿಸಬಲ್ಲೆನು.

ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹಾನಗಲ್ಲ ವಿರಕ್ತಮಠ ಕರ್ನಾಟಕದಲ್ಲಿಯ ಪ್ರಸಿದ್ದಿಯನ್ನು ಪಡೆದ ಧರ್ಮಪೀಠ, ಅದರ ಪರಂಪರೆ ಘನವಾದುದು. ಹಿಂದಿನ ಮಹಾಸ್ವಾಮಿಗಳವರೆಲ್ಲರು ಪರಮ ತಪಸ್ವಿಗಳು, ಪಂಡಿತರು, ಕಾವ್ಯ ಪರಿಣತರ ಆಗಿದ್ದರು. ಸುಮಾರು ಒಂದು ನೂರ ಹದಿನೈದು ವರ್ಷಗಳ ಕುಮಾರಾರ್ಯರೆಂಬವರು ಈ ಪೀಠವನ್ನಲಂಕರಿಸಿದ್ದರು. ಅವರು ತಪೋನಿಷ್ಠರಾಗಿದ್ದಂತೆ ಪ್ರತಿಭಾವಂತ ಕವಿಗಳೂ ಆಗಿದ್ದರು. ಅವರು ‘ಕುಮಾರೇಶ್ವರ ಪುರಾಣ’ವೆಂಬ ಕಾವ್ಯವನ್ನು ವಾರ್ಧಿಕಷಟ್ಪದಿಯಲ್ಲಿ ಬರೆದಿದ್ದಾರೆ. ಅದು ರಸಾತ್ಮಕವಾದ ಪ್ರೌಢ ಕಾವ್ಯವಾಗಿದೆ. ‘ಭಿಕ್ಷಾಟನ ಲೀಲೆ’ ಯನ್ನು ಕುರಿತು ಬರೆದ ಅವರ ಇನ್ನೊಂದು ಕಿರುಗಾವ್ಯ ದೊರೆತಿಲ್ಲ.

ಇವರ ತರುವಾಯದ ಪರಂಪರೆಯಲ್ಲಿ ಶ್ರೀ ಫಕೀರ ಮಹಾಸ್ವಾಮಿಗಳು ಶಿವಪೂಜಾನಿಷ್ಠರು, ಶಿವಾನುಭವಿಗಳು. ಇಂತಹ ಉಜ್ವಲ ಪರಂಪರೆಯುಳ್ಳ ಮಹಾಪೀಠವನ್ನು ಅಲಂಕರಿಸಿದರೂ, ಮೇಣೆ ಪಲ್ಲಕ್ಕಿಗಳಲ್ಲಿ ಕುಳಿತು ಮೆರೆದಾಡುವ ಆ ಮಠದ ವೈಭವವು ಶ್ರೀಗಳವರನ್ನು ಸ್ವಾಗತಿಸಿ ಬಂದರೂ ಅದಕ್ಕವರು ಮಾರುವೋಗಲಿಲ್ಲ. ಈ ವೀರ ವಿರಾಗಿಗಳ ವೈರಾಗ್ಯದ ರನ್ನದೀವಿಗೆಯು ವೈಭವಾಡಂಬರಗಳ ಬಿರುಗಾಳಿಗೆ ಹೊಯ್ದಾಡದೆ ಅಚಲವಾಗಿತ್ತು. ಶ್ರೀಗಳವರು ತಮ್ಮ ಪೀಠದ ಘನವಾದ ಪರಂಪರೆಯನ್ನು ಉಳಿಸಿಕೊಂಡು ಬಂದುದಲ್ಲದೆ ಅದು ಮತ್ತಿಷ್ಟು ಉಜ್ಜಲವಾಗಿ ಬೆಳಗುವಂತೆ ಕಾರ್ಯವೆಸಗಿದರು. ಶ್ರೀಗಳವರು ಮಾಡಿದ ತ್ಯಾಗಮಯ ಕೃತಿಗಳಿಂದಾಗಿ ಹಾನಗಲ್ಲ ವಿರಕ್ತಮಠದ ಹೆಸರು ಅಜರಾಮರವಾಗಿ ಉಳಿಯುವಂತಾಯಿತು.

೧. ಸಮಾಜ ಸುಧಾರಣೆಯಾಗಬೇಕಾದರೆ ಸಮಾಜದ ಭಕ್ತೋದ್ಧಾರ ಕಾರ್ಯವಾಗಬೇಕಾದರೆ ಮಠಾಧಿಕಾರಿಗಳ ಸುಧಾರಣೆಯಾಗುವದು ಅತ್ಯಗತ್ಯವೆಂದು ವಿಚಾರಿಸಿ ಸಮಾಜದ ಮುಖ್ಯ ಗುರು- ವಿರಕ್ತ ಪೀಠಗಳಿಗೆ ವಿದ್ಯಾವಂತರಾದವರನ್ನೇ ಚುನಾಯಿಸಿ ಕಳಿಸಿದರು. ಹುಬ್ಬಳ್ಳಿಯ ಜಗದ್ಗುರು ಪೀಠಕ್ಕೆ ಲಿಂಗೈಕ್ಯ ಶ್ರೀ ಗಂಗಾಧರ ಮಹಾ ಸ್ವಾಮಿಗಳನ್ನು, ನಂತರ ಲಿಂ. ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಮತ್ತು ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಲಿಂ. ಶ್ರೀ ಜಯದೇವ ಮಹಾಸ್ವಾಮಿಗಳವರನ್ನು ಚುನಾಯಿಸಿದವರು ಶ್ರೀಗಳವರೆ, ಈ ಮೂವರು ಜಗದ್ಗುರುಗಳವರಿಂದ ಸಮಾಜಕ್ಕೆ ಅನೇಕ ಮುಖವಾಗಿ ಸಹಾಯ ಸಂದಿದೆ.

೨. ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಶ್ರೀಗಳವರು ಈ ಐದು ಮಹತ್ವದ ಉದ್ದೇಶಗಳ ಪೂರ್ತಿಗಾಗಿ ಸಂಸ್ಥಾಪಿಸಿದರು :

(ಕ) ವೀರಶೈವರಲ್ಲಿ ಸಾರ್ವತ್ರಿಕ ಸಂಘಟನೆಯಾಗಿ, ಅದರ ಮುಖಾಂತರ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಪ್ರಗತಿಯಾಗಬೇಕು ;

(ಚ) ಗುರು ಮತ್ತು ವಿರಕ್ತ ಪೀಠಗಳಲ್ಲಿ ಐಕ್ಯತೆಯುಂಟಾಗಬೇಕು. ಮಹಾಸಭೆಯ ಕಾರ್ಯಕಲಾಪಗಳೆಲ್ಲ ಅವರಿಬ್ಬರ ಪರಸ್ಪರ ಸಹಕಾರದಿಂದ ನಡೆಯಬೇಕು; 

(ಟ) ಪೀಠಾಧಿಪತಿಗಳು ಜಾಗ್ರತರಾಗಿ ಸಮಾಜದ ಪ್ರಗತಿಯ ಕಾರ್ಯದಲ್ಲಿ ವಿಧಾಯಕವಾಗಿ ಭಾಗವಹಿಸಬೇಕು; ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ;

(ತ) ದೊಡ್ಡ ದೊಡ್ಡ ನಗರಗಳಲ್ಲಿ ಮಹಾಸಭೆಯ ಅಧಿವೇಶನಗಳು ನೆರೆದು ಜನತೆಯಲ್ಲಿ ಒಕ್ಕಟ್ಟು ಕಾರ್ಯೋತ್ಸಾಹ ಮೂಡಿ ಬರುವಂತಾಗಬೇಕು ; ಧಾರವಾಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾಂವಿ, ನಿಪ್ಪಾಣಿ ಈ ಏಳು ನಗರಗಳಲ್ಲಿ ನಡೆದ ಮಹಾಸಭೆಯ ಅಧಿವೇಶನಗಳಿಗೆ ಬೇಕಾಗುವ ಧನಸಂಚಯವು ಹಾನಗಲ್ಲ ಶ್ರೀಗಳವರಿಂದಲೇ ಆಯಿತು. ನಾಡಿನ ಮೂಲೆ ಮೂಲೆಯಲ್ಲಿಯೂ ಈ ಅಧಿವೇಶನಗಳು ನಡೆದು ಜನರಲ್ಲಿ ನವಚೈತನ್ಯ ಬರುವಂತಾಗಬೇಕೆಂದು ಶ್ರೀಗಳವರು ಬಯಸಿದ್ದರು. ಹರಿದು ಹಂಚಿ ಹೋದ ನಾಡಲ್ಲಿ ಐಕ್ಯತೆ ಬರುವಂತೆ ಯೋಜನೆ ಮಾಡಿದ್ದರು. ಮೊದಲಿನ ಈ ಅಧಿವೇಶನಗಳೆಲ್ಲ ಶ್ರೀಗಳವರ ಕೃಪೆಯಿಂದಲೇ ಯಶಸ್ವಿಯಾಗಿ ನೆರವೇರಿದವು.

(ಪ) ‘ಅಖಿಲ ಭಾರತೀಯ ವೀರಶೈವ ವಿದ್ಯಾವರ್ಧಕ ನಿಧಿ’ಯನ್ನು ಶೇಖರಿಸಲು ಶ್ರೀಗಳವರೇ ಪ್ರೇರಣೆಯನ್ನಿತ್ತರು ; ಧಾರವಾಡದ ಮೊದಲನೆಯ ಅಧಿವೇಶನದ ಕಾಲಕ್ಕೆ ಅದಕ್ಕಾಗಿ ನಿಧಿಯನ್ನು ಸಂಗ್ರಹಿಸಿ ಅದನ್ನು ಧಾರವಾಡದ ‘ಲಿಂಗಾಯತ ಎಜ್ಯುಕೇಶನ್ ಫಂಡ’ ಸಂಸ್ಥೆಯಲ್ಲಿ ಜಮೆ ಮಾಡಿಸಿದರು.

೩ ವೀರಶೈವ ಮಹಾಸಭೆಯಲ್ಲಿ ಕೇವಲ ಧಾರ್ಮಿಕ ವಿಚಾರಗಳಿಗೆ ಅವಕಾಶವಿಲ್ಲದಿರುವಾಗ ಶ್ರೀಗಳವರು ‘ಧರ್ಮೋತ್ತೇಜಕ ಸಭೆ’ಯನ್ನು ಸ್ಥಾಪಿಸಿ ಅದರ ಮುಖಾಂತರ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಧಾರವಾಡದಿಂದ ‘ಧರ್ಮತರಂಗಿಣಿ’ ಮಾಸಪತ್ರಿಕೆಯು ಈ ಸಭೆಯ ಮುಖಾಂತರವಾಗಿ ಶ್ರೀಗಳವರ ಕೃಪೆಯಿಂದಲೇ ಪ್ರಕಟವಾಯಿತು. ಈ ಪತ್ರಿಕೆಯ ಸಂಚಿಕೆಗಳಲ್ಲಿ ಶಿವಯೋಗ ಮಂದಿರದ ಚಟುವಟಿಕೆಗಳ ಸವಿಸ್ತಾರ ಇತಿಹಾಸವನ್ನು ಕಾಣಬಹುದಾಗಿದೆ. ಅಲ್ಲದೆ, ಕೆಲವು ದೈನಿಕ ಮತ್ತು ವಾರಪತ್ರಿಕೆಗಳಿಗೂ ಶ್ರೀಗಳವರು ಆರ್ಥಿಕವಾಗಿ ಉತ್ತೇಜನವಿತ್ತರು. ನಾಡಿನಲ್ಲಿ ಮೂಲೆ ಮೂಲೆಯಲ್ಲಿಯ ಹಳ್ಳಿಗಳಿಗೂ ಬರಹಗಳ ಮೂಲಕ ಧಾರ್ಮಿಕ ವಿಚಾರಗಳು ಹೋಗಿ ಮುಟ್ಟಿ, ಜನಸಾಮಾನ್ಯರಲ್ಲಿಯೂ ವಿಚಾರ ಕ್ರಾಂತಿಯಾಗಬೇಕು, ಧರ್ಮಬುದ್ಧಿ ಜಾಗ್ರತವಾಗಬೇಕು ಎಂಬ ಮಹೋದ್ದೇಶ ಶ್ರೀಗಳವರದಾಗಿತ್ತು.

೪. ಕನ್ನಡ-ಸಂಸ್ಕೃತ ಭಾಷೆಗಳಲ್ಲಿರುವ ಪ್ರಾಚೀನ ವೀರಶೈವ ವಾಙ್ಮಯವನ್ನು ಶೋಧಿಸಿ ಪ್ರಕಟಿಸುವದಕ್ಕಾಗಿ ಮೊಟ್ಟ ಮೊದಲು ಓಲೆಗರಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದವರು ಶ್ರೀಗಳವರೆ ಈ ಸಂಶೋಧನೆಯ ಮಹಾ ಕಾರ್ಯಕ್ಕೆ ಒಂದು ವಿದ್ವನ್ಮಂಡಲಿಯನ್ನು ನಿಯಮಿಸಿ ತನ್ಮೂಲಕ ಅನೇಕ ಮಹತ್ವದ ಪರಿಷ್ಕೃತ ಗ್ರಂಥಗಳು ಪ್ರಕಟವಾಗಿ ಜಿಜ್ಞಾಸುಗಳ ಕೈಗೆ ಸುಲಭವಾಗಿ ದೊರೆಯುವಂತೆ ಮಾಡಿದರು.

೫. ಆಯುರ್ವೇದದ ಔಷಧೋಪಚಾರಗಳಿಂದಲೆ ರೋಗ ನಿವಾರಣೆಯನ್ನು ಮಾಡುವ ಧೈಯವನ್ನು ಇಟ್ಟುಕೊಂಡು ತಜ್ಞ ವೈದ್ಯರ ಸಮ್ಮೇಲನವನ್ನು ಕರೆದು ಅವರಿಗೆ ತಕ್ಕ ಅನುಕೂಲತೆಗಳನ್ನು ಶ್ರೀಗಳು ಮಾಡಿ ಕೊಟ್ಟರು. ಎಷ್ಟೋ ವನಸ್ಪತಿಗಳಿಂದ ವಿವಿಧ ರೋಗಗಳ ನಿವಾರಣೆಗೆ ಸ್ವತಂತ್ರ ಸುಲಭವಾದ ಮತ್ತು ಉತ್ಕೃಷ್ಟವಾದ ಔಷಧಗಳನ್ನು ಮಾಡಿಸುತ್ತಿದ್ದರು. ಎಷ್ಟೋ ಹೊಸ ಅಮೂಲ್ಯ ಔಷಧಗಳನ್ನು ಸಂಶೋಧಿಸಿ ತಯಾರಿಸಿ ಜನರ ಅಸಾಧ್ಯ ರೋಗಗಳನ್ನು ಕಳೆದರು. ಶಿವಯೋಗಮಂದಿರದಲ್ಲಿ ಒಂದು ವೈದ್ಯಾಲಯವನ್ನು ತೆಗೆದು ಅಲ್ಲಿ ಚಾಣಾಕ್ಷ ಸಾಧಕರಿಗೆ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿದ್ದರು, ಕೊಡಿಸುತ್ತಿದ್ದರು.

೬ ಕೈ. ವಾ. ‘ತ್ಯಾಗರಾಜ’ ಶಿರಸಂಗಿ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದ ತಮ್ಮ ಇಡಿ ಸಂಸ್ಥಾನವನ್ನೇ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ದಾನವಾಗಿ ಬರೆದುಕೊಟ್ಟರು. ಅದರ ಬಗ್ಗೆ ನಡೆದ ಸುಪ್ರೀಮ್‌ ಕೋರ್ಟಿನ ವ್ಯಾಜ್ಯದಲ್ಲಿ ಶ್ರೀಗಳವರೆ ಆರ್ಥಿಕ ನೆರವು ನೀಡಿದರು ; ಕೊನೆಯವರೆಗೂ ಹೋರಾಡಿ ಅದರಲ್ಲಿ ವಿಜಯ ಗಳಿಸಿದರು. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರವಾದ ಸಂಪತ್ತಿಯನ್ನು ಉಳಿಸಿ ಕೊಟ್ಟರು.

ಶ್ರೀಗಳವರು ಸಮಾಜ ಪುರುಷನ ಸರ್ವತೋಮುಖ ಉನ್ನತಿಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟ ಮಹಾತ್ಯಾಗಿಗಳು ; ಮೇಲಾದ ಹಠಯೋಗಿಗಳಾಗಿ, ಆದರ್ಶ ಕರ್ಮಯೋಗಿಗಳಾಗಿ, ಮಹಾ ಶಿವಯೋಗಿಗಳಾಗಿ ರಾರಾಜಿಸಿದರು. ಸಮಾಜ ಭೂಮಿಯಲ್ಲಿ ಅವರು ಬಿತ್ತಿದ ಜಾಗೃತಿ ಬೀಜವ ಹೆಮ್ಮರವಾಗಿ ನಾಡಿಗೆ ಸಿಹಿಹಣ್ಣುಗಳನ್ನು ಕೊಡಲೆಂದು ಅವರಡಿಗೆ ಮಣಿಯೋಣ ; ಅವರು ತೋರಿಸಿದೆ. ದಾರಿಯಲ್ಲಿ ನಡೆಯೋಣ. ಸರ್ವರೂ ಸುಖಶಾಂತಿಗಳನ್ನು ಪಡೆಯೋಣ.

ಲೇಖಕರು :ಶ್ರೀ ಕೊಟ್ಟೂರಸ್ವಾಮಿಗಳು ಜಡೆ ( ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು)

                                 ( ಪರಂಜ್ಯೊತಿ ಪತ್ರಿಕೆಯಿಂದ)

ಸಂಗ್ರಹ : ಶ್ರೀ ಕೆ.ಹೆಚ್.ಮಲ್ಲನಗೌಡರು ಗದಗ

“ಯೋಗಶ್ಚಿತ್ ವೃತ್ತಿ ನಿರೋಧಃ”योग श्चित्तवृत्ति निरोधः   ಇದು ಪಾತಂಜಲಿ ಋಷಿಯ ವಾಣಿ.  ಈ ವಾಣಿ ಯೋಗಾಭ್ಯಾಸಗಳಿಗೆ ಧೈರ್ಯ ಹಾಗೂ ಉತ್ಸಾಹವನ್ನುಂಟು ಮಾಡುತ್ತದೆ. ಯೋಗಾಭ್ಯಾಸದಿಂದ (ಯೋಗಾಸನಗಳನ್ನು ಹಾಕುನದರಿಂದ) ನಮಗುಂಟಾಗುವ ಲಾಭವೇನು? ಅದರ ಪ್ರಯೋಜನವೇನು? ಏಕೆ ಹಾಕಬೇಕು? ಹೀಗೆ ಹಲವಾರು ರೀತಿಯಿಂದ ಪ್ರಶ್ನೆಗಳ ಸುರಿಮಳೆಯೇ ಈ ವೈಜ್ಞಾನಿಕ ಯುಗದಲ್ಲಿ ಪ್ರಾರಂಭವಾಗುತ್ತವೆ. ಈ ಪ್ರಶ್ನೆಗಳ ಸುರಿಮಳೆಗೆ ಉತ್ತರವಾಗಿ ಯೋಗಾಸನಗಳಿಂದ ಆರೋಗ್ಯ ಸಂಪತ್ತು ಹೆಚ್ಚುತ್ತದೆ ಈ ಸಂಪತ್ತಿಗಿಂತಲೂ ಹೆಚ್ಚಿನ ಸಂಪತ್ತು ಜಗತ್ತಿನಲ್ಲಿ ಯಾವದೂ ಇಲ್ಲ, ಅಲ್ಲದೇ ಆರೋಗ್ಯದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ ಎಂಬುದಾಗಿ ಹೇಳಿದರೂ ಅದು ಸಮಾಧಾನವಾಗಲಾರದು ಮತ್ತೆ ಶುಷ್ಕವಾದವೇ ವಾಗುತ್ತದೆ. ಕೊನೆಯದಾಗಿ ಉತ್ತರ ಹೇಳಬೇಕೆಂದರೆ ಮೇಲ್ಕಾಣಿಸಿದ ಪಾತಂಜಲಿ ಋಷಿಯ ಸೂತ್ರವೇ ಪ್ರತ್ಯುತ್ತರವಾಗಿ ನನಗೆ ತೋರುತ್ತದೆ.

ಈ ಸೂತ್ರಾಧಾರದಂತೆ ಎಷ್ಟುಜನ ಯೋಗಾಭ್ಯಾಸಿಗಳು ಯೋಗಸಾಧನೆ ಮಾಡಿ ಈ ಕಾಲದಲ್ಲಿ ಚಿತ್‌ ವೃತ್ತಿಯನ್ನು ವಿರೋಧಿಸಿದ್ದಾರೆ? ಬೆರಳಿನಲ್ಲಿ ಎಣಿಸುವಷ್ಟು ಜನರೆಂದರೆ ಮಾತ್ರ ತಪ್ಪಾಗಲಾರದು. ಯೋಗಾಭ್ಯಾಸದಿಂದ ಚಿತ್ (ಮನಸ್ಸಿನ) ವೃತ್ತಿ (ಚಂಚಲತೆ) ನಿರೋಧ (ನಿಲ್ಲುವದು ಹೇಗೆ? ಇದು ಎಷ್ಟೋಜನ ಯೋಗಾಭ್ಯಾಸಿಗಳಿಗೆ ಬಿಡಿಸಲಾರದ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಪರಿಹಾರದ ದಾರಿಯೇ ಕಾಣದಾಗಿದೆ. ಇದರ ಪರಿಹಾರದ ಉಪಾಯ ಕಾಣಬೇಕಾದರೆ ಯೋಗವನ್ನು ಆಳವಾಗಿ ಅಭ್ಯಾಸಿಸಬೇಕು. ವಿಜಯಶಾಲಿ ಯಾಗಬಯಸುವ ಸೈನಿಕರು ಸೈನಿಕ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮರೀತಿಯ ಶಿಕ್ಷಣ ಪಡೆದ ಮಾತ್ರಕ್ಕೆ ಆತ ವಿಜಯಶಾಲಿಯಾಗಲಾರ ವಿಜಯಶಾಲಿಯಾಗಬೇಕಾದರೆ ರಣಾಂಗಣ (ಯುದ್ಧರಂಗ) ಕ್ಕೆ ಹೋಗಿ ಎದುರಾಳಿಯೊಡನೆ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳೆನ್ನದೇ ಹೋರಾಡಿದಾಗ ಮಾತ್ರ ವಿಜಯಶಾಲಿಯಾಗಬಹುದು ಅದರಂತೆ ಅಭ್ಯಾಸಿಸಿದ ಯೋಗದಿಂದ ಚಿತ್ತಚಂಚಲತೆ ದೂರಾಗದು. ಅಭ್ಯಸಿಸಿದುದನ್ನು ಚೆನ್ನಾಗಿ ಅನುಭವಿಸಕೊಳ್ಳಬೇಕು. ಕೆಲವೊಂದು ಆಸನಗಳನ್ನು ಹಾಕುವ ದನ್ನು ಕಲಿತು, ಇಂತಿಂಥ ಆಸನದಿಂದ ಇಂತಿಂಥ ರೋಗಗಳು ಹೋಗುತ್ತವೆಯಂತೆ ಎಂದು ಯಾವಕಾಲದಲ್ಲೋ ಯಾರೋ ಹೇಳಿದ ಮಾತನ್ನೇ ಹೇಳುತ್ತಾ ಹೋಗುವದು ಈಗಿನ ಹಲವಾರುಜನ ಯೋಗಾಭ್ಯಾಸಿಗಳ ಕರ್ತವ್ಯವಾಗಿದೆ. ಉದಾ! ಮಯೂರಾಸನದಿಂದ ಗುಮ್ಮಿಸಂಬಂಧವಾದ ಮತ್ತು ಅಗ್ನಿ ಮಾಂದ್ಯ ಮುಂತಾದ ರೋಗಗಳು ನಿವಾರಣೆಯಾಗುತ್ತದೆಂಬ ಮಾತನ್ನು ಯಾವ ಕಾಲದಿಂದಲೋ ಕೇಳುತ್ತಾ ಬಂದಿದ್ದೇವೆ. ಆದರೆ ಪ್ರತಿನಿತ್ಯ ಯೋಗಾಸನಗಳನ್ನು ಹಾಕುವ ಎಷ್ಟೋಜನ ಯೋಗಾಭ್ಯಾಸಿಗಳು ಬೆಳಗಾದಾಕ್ಷಣ ಹೊಟ್ಟೆ ಹಿಡಿದಿದೆ ಎಂಬ ನರಳುವಿಕೆಯನ್ನು ಕೇಳುತ್ತಲಿದ್ದೇವೆ.

 ಅಂದಮೇಲೆ ಇಷ್ಟಕ್ಕೆ ಹೀಗಾದರೆ ಇನ್ನು ಯೋಗಾಭ್ಯಾಸದಿಂದ ಚಿತ್ರ ಚಾಂಚಲ್ಯತೆ ಎಷ್ಟರಮಟ್ಟಿಗೆ ನಿಲ್ಲುವದೆಂಬ ವಿಷಯ ಜನಸಾಮಾನ್ಯರಿಗೂ ಗೊತ್ತಾಗುತ್ತದೆ. ಪಾತಂಜಲಿ ಋಷಿಯ ಸೂತ್ರ ಕೇವಲ ಬಾಯಾತಾಗಿ ನಿಂತಿದೆಯೇ ವಿನಃ ಅದರ ಅನುಭವ ನಮಗಿಂದು ಇಲ್ಲದಾಗಿದೆ. ಅಭ್ಯಸಿಸಿದುದನ್ನು ಅನುಭವಿಸಬೇಕಾದರೆ ಅವಿರತವಾಗಿ ಅನುಷ್ಠಾನ ಗೈಯಬೇಕು ಆಗ ಅದರ ಅನುಭವ ವುಂಟಾಗುತ್ತದೆ. ಪೂರ್ವಜರು ಹೇಳಿದ ಮಾತುಗಳನ್ನು ಇಂದು ನಾವು ಪುನಃ ವಿಮರ್ಶಿಸಬೇಕಾಗಿದೆ. ಆ ಬುದ್ಧಿ ಆಶಕ್ತಿ ನಮ್ಮಲ್ಲಿದೆ. ಅವುಗಳನ್ನು ಅಲ್ಲಗಳೆಯುವದರಲ್ಲಿಅರ್ಥವಿಲ್ಲ. ಅಲ್ಲಗಳೆದವರು ಅಧ: ಪತನ ವಾಗುವಲ್ಲಿ ಸಂದೇಹವಿಲ್ಲ. ಪೂರ್ವಾಚರಣೆಗಳನ್ನು ಪುನರ್ವಿಮರ್ಶೆ ಮಾಡಿ ಅವುಗಳಿಗೊಂದು ಹೊಸತನವನ್ನು ಕೊಟ್ಟು ಸರಿಯಾದ ರೀತಿ ನೀತಿಯಿಂದ ಕಾಲಕ್ಕೆ ಹೊಂದಾಣಿಕೆ ಮಾಡಿಕೊಂಡಾಗ ಅವುಗಳ ಪರಿಣಾಮ ಆಗ ಆರ್ಯ ಸಂಸ್ಕೃತಿ ಉಳಿಯುತ್ತದೆ, ಬೆಳೆಯುತ್ತದೆ. ಅಲ್ಲದೆ ಆಧುನಿಕ ಕಾಲದಲ್ಲಿ ಯೋಗಾಭ್ಯಾಸಕ್ಕೊಂದು ಹೊಸಕಳೆ ಬರುತ್ತದೆ. ಬೆಲೆ ಬಾಳುತ್ತದೆ. ಯೋಗಾಭ್ಯಾಸ ಸರ್ವಾದರಣೀಯವಾಗುತ್ತವೆ. ಇದು ನಿಸ್ಸಂದೇಹ

“ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ” ಇದು ವೈರಾಗ್ಯ ಶಿಖರದ ತುತ್ತುದಿಯ ಮೇಲೇರಿದ ಮಹಾದೇವಿಯಕ್ಕನ ಮಹಾವಾಣಿ. ಇದು ಸಮಂಜಸವಾದುದು, ಸತ್ಯವಾದುದು. ಜನಸಾಮಾನ್ಯರಿಗೂ ತಿಳಿಯುತ್ತದೆ. ಕಾಯದಲ್ಲಿರುವ ಕರಣಂಗಳ ಚೇಷ್ಟೆಗೆ ಮನವೇ ಮೂಲಕಾರಣ. ಆ ಮನದ ಚೇಷ್ಟೆಗೆ ಪ್ರಾಯೋದಾನವೇ ಕಾರಣ. ಈ ಉದಾನವಾಯು ಮಾನವನ ಶರೀರದಲ್ಲಿ ಉಂಟಾಗುವ ಬಗೆ ಹೇಗೆಂದರೆ ಪ್ರತಿಯೊಬ್ಬ ಮಾನವನ ಶರೀರದಲ್ಲಿ ೭೨ ಕೋಟಿ ೭೨ ಲಕ್ಷ ೧೦ ಸಾವಿರ ೨೦೧ ನಾಡಿಗಳುಂಟು. ಈ ಎಲ್ಲ ನಾಡಿಗಳಲ್ಲಿ ಶ್ರೇಷ್ಠವಾದುದು ಸುಷುಮ್ಮೆ ನಾಡಿ ಈ ನಾಡಿಯಲ್ಲಿ ಹರಿದಾಡುವದು ಉದಾನವಾಯು. ಊರ್ಧ್ವನವಾಗಿ ಹರಿದಾಡುವದರಿಂದ ಉದಾನವಾಯು ಎಂದು ಹೆಸರು.

ತೇಜೋ ರೂಪವೇ ಉದಾನವಾಯು ಆ ತೇಜೋರೂಪ ಉದಾನವು ತಣ್ಣಗಾದಲ್ಲಿಮರಣ ವೊದಗಿ ಮರಣ ಹುಟ್ಟು ಒದಗುವದು. ಇದು ಕಾರಣ ಮೈ ಬಿಸಿಯೇ ಉದಾನ ಪ್ರಾಣ ಕಾಣಾ” ಎಂಬುದಾಗಿ ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುತ್ತದೆ. ಇದಲ್ಲದೆ “ಪ್ರಾಣಾ ಪಾನಾದಿಗಳಿಂದ ವೃತ್ತಿ, ಸಮಾನ ವ್ಯಾನಗಳಿಂದ ಶಾಂತಿ, ಉದಾನೋಪಾಸನೆ ಯಿಂದ ಉತ್ಕಾಂತಿ, ಉದಾನ ಸಾಕ್ಷಾತ್ಕಾರದಿಂದ ಅವಿಚ್ಛತ್ತಿ ಅಮೃತೋತ್ಪತ್ತಿ.”

ಎಂಥ ಸುಂದರವಾಣಿ ಅಭಯವಾಗಿದೆ ಉದಾನವಾಯುವಿನ ಕೇವಲ ಉಪಾಸನೆ ಮಾತ್ರದಿಂದ ಉತ್ಕಾಂತಿಯಂತೆ ಅದರ ಸಾಕ್ಷಾತ್ಕಾರದಿಂದ ಅವಿಚ್ಚೆತ್ತಿ ಅಷ್ಟೆ ಅಲ್ಲ ಅಮೃತದ ಉತ್ಪತ್ತಿಯಂತೆ ಈ ಅಮೃತದ ಉತ್ಪತ್ತಿಗೆ ಕಾರಣವಾದ ಉದಾನ ವಾಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ಸುಷುಮ್ಮೆಯಿಂದ ಕಾರ್ಯ ನಡೆಯಬೇಕು. ಈ ಸುಷುಮ್ಮೆ ಕಾರ್ಯ ನಡೆಯಬೇಕಾದರೆ, ಯೋಗಾಸನಗಳಲ್ಲಿ ಒಂದಾದ ಸರ್ವಾಂಗಾಸನ” ವನ್ನು ಸತತವಾಗಿ ನಿಯಮಿತ ತನದಿಂದ ಶ್ರಮವರಿತು (ಪ್ರತಿನಿತ್ಯ) ಸಾಧಿಸುವದರಿಂದ ಸುಷುಮ್ಮೆ (ಉದಾನವಾಯು) ಕಾರ್ಯ ಪ್ರಾರಂಭವಾಗುತ್ತದೆ ಕ್ರಮೇಣ ಸಾಕ್ಷಾತ್ಕರಿಸಿಕೊಂಡಾಗ ನಿಜವಾಗಿ ಅಮೃತೋತ್ಪತ್ತಿಯಾಗುವಲ್ಲಿ ಸಂದೇಹವಿಲ್ಲ.

ಕನಸಿನಲ್ಲಿ ಕಾಯಕರಣಗಳು ನಿದ್ರಿಸುತ್ತಿದ್ದರೂ, ಮನ ಪ್ರಾಣಗಳು ಎದ್ದಿರುತ್ತವೆ.ಅಂದಿನ ಇಂದಿನ ಹಿಂದಿನ ಜನ್ಮ ಜನ್ಮಾಂತರದ ಸಂಸಾರಗಳು ವಾಸನೆಗಳು ಮನದಮೇಲೆ ಮೂಡುತ್ತವೆ. ಆದರೆ ಸುಷುಮ್ಮೆ ಕಾರ್ಯ ನಡೆದಾಗ ಮನಸ್ಸಿನ ಓಡಾಟಕ್ಕೆ ಎಡೆಯಿಲ್ಲ.ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುವಂತೆ,

“ಸುಷುಪ್ತಿಯಲ್ಲಿ ಮನಸ್ಸು ಮಲಗುತ್ತದೆ. ಪಿತ್ತದ ಪ್ರಭೆಯು ಆತ್ಮನ ಎಲ್ಲಾ ನಾಡಿ ಗಳನ್ನು ಮುಚ್ಚುತ್ತದೆ. ಆಗ ಮನದ ಕಿರಣಗಳು ಕರಣಗಳೊಡನೆ ಹೃದಯದಲ್ಲಿ ಹುದುಗುತ್ತವೆ. ಆಗ ವಿಜ್ಞಾನಾತ್ಮನು ಮಾತ್ರ ತುಂಬಾ ಎಚ್ಚೆತ್ತಿರುತ್ತಾನೆ. ತನು ಮನ ಗಳಿರುವದಿಲ್ಲ. ಕರಣಂಗಳಿರುವದಿಲ್ಲ. ವಾಸನಾದಿಗಳಿರುವದಿಲ್ಲ. ದರ್ಶನಾದಿ ಕಾರ್ಯಗಳಿರುವದಿಲ್ಲ.ಎಲ್ಲೆಲ್ಲಿಯೂ ಸುಪ್ತಸುಖ, ಪ್ರಸನ್ನ ಭಾವಗಳು ಮಾತ್ರ ಇರುತ್ತವೆ. ಹಗಲು ಮುಳಗಲು ಹಕ್ಕಿಗಳು ಹೇಗೆ ಗೂಡು ಸೇರುತ್ತವೆಯೋ ಹಾಗೆ ತನು, ಮನ, ಕರಣ, ಹರಣಾದಿಗಳೆಲ್ಲವೂ ಆ ಆತ್ಮನಲ್ಲಿ ಸೇರಿಕೊಳ್ಳುತ್ತವೆ. ಸುಪ್ತವಾಗುತ್ತವೆ.”

ಅಂದಮೇಲೆ ಯೋಗಾಸನಗಳಲ್ಲಿಯ ಒಂದು ಆಸನವನ್ನು ಸಾಧಿಸುವದರಿಂದ ತನು, ಮನ,ಕರಣಾದಿ ಕ್ರೀಯೆಗಳೆಲ್ಲವೂ ಹೇಳ ಹೆಸರಿಲ್ಲದಂತಾಗಿ, ಅಮೃತೋತ್ಪತ್ತಿ ಯಾಗುತ್ತದೆಂದಮೇಲೆ ಪರಿಪೂರ್ಣವಾದ ಯೋಗಾಭ್ಯಾಸ ಸಾಧನೆಯಿಂದ ಮನಸ್ಸಿನ ಚಂಚಲತೆಯನ್ನು ನಿಲ್ಲಿಸುವದಷ್ಟೇ ಅಲ್ಲ; ಸಾಕ್ಷಾತ್ ಪರಮಾತ್ಮನ ಸ್ವರೂಪರಾಗಲೂ ಕೂಡ ಸಾಧ್ಯವಾಗುತ್ತದೆಂದು ನಿಸ್ಸಂದೇಹವಾಗಿ ಹೇಳಬಹುದು.

ಆದ್ದರಿಂದ ಈಗ ಯೋಗಾಭ್ಯಾಸವೆಂದರೆ ನಿರುದ್ಯೋಗಿಗಳಾದವರು ಮಾಡುವಂಥ ಕೆಲಸ ಉದರ ಪೋಷಣೆಗಾಗಿ ಹಾಕುವಂಥ ವೇಷ ಎಂಬ ದುರ್ಭಾವನೆ ಸಾಮಾನ್ಯ ಜನರಲ್ಲಿಯೂ,ಬೇರೂರಿದೆ. ಕಾರಣ ಯೋಗಾಭ್ಯಾಸಿಗಳು. ಇದನರಿತು ಸತತ ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾದರೆ ಈ ಯೋಗಾಭ್ಯಾಸಕ್ಕಂಟಿರುವ ಕಲಂಕಹೋಗಿ, ಜನತೆಯಲ್ಲಿ ಉಂಟಾಗಿರುವ ದುರ್ಭಾವನೆ ದೂರಾಗಿ ಹೊಸಕಳೆ ಬರುತ್ತದೆ. ಅಲ್ಲಗಳೆಯುವವರ ಮೇಲೂ ಕೂಡ ಹೊಸ ಬೆಳಕನ್ನುಬೀರುವದರಲ್ಲಿ ಸಂದೇಹವಿಲ್ಲ.

ಲೇಖಕರು : ಪೂಜ್ಯಶ್ರೀಮರಿಕೊಟ್ಟೂರುದೇವರು, ಶ್ರೀಜಗದ್ಗುರುಕೊಟ್ಟೂರುಸ್ವಾಮಿಶಾಖಾಮಠ, ಶ್ರೀಧರಗಡ್ಡೆ

 “मनुष्याणां सहस्रेषु कश्चिद्यतति सिद्धये, यततानामपि सिद्धानां कश्चिन् मांम् वेत्ति तत्त्वतः”

                   (ಸಾವಿರಾರು ಜನರಲ್ಲಿ ಎಲ್ಲೋ ಒಬ್ಬರು ಆತ್ಮ ಸಿದ್ಧಿಗಾಗಿ ಶ್ರಮಿಸುತ್ತಾರೆ. ಹೀಗೆ ಆತ್ಮಸಿದ್ಧಿಗಾಗಿ ಶ್ರಮಿಸುವವ ರಲ್ಲಿ ಯಾರೋ ಒಬ್ಬರು ಮಾತ್ರ ತತ್ವತಃ ನನ್ನನ್ನು ತಿಳಿಯುತ್ತಾರೆ ಮತ್ತು ಹೊಂದುತ್ತಾರೆ). = Gita.

                12ನೇ ಶತಮಾನದ ಬದಲಾವಣೆಯು  ಮಾನವ ಇತಿಹಾಸದಲ್ಲಿಯೇ ಮಹತ್ವದ ಘಟ್ಟವಾಗಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು  ತಾತ್ವಿಕವಾಗಿ ಜನಸಾಮಾನ್ಯರಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರಿದೆ. ಶರಣರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳು ಅಗೆದಷ್ಟು ಆಳ, ತರ್ಕಿಸಿದಷ್ಟು ಘಹನ ಮತ್ತು ಉಹೆಗೆ ನಿಲುಕದಷ್ಟು ವಿಶಾಲವಾಗಿವೆ. ಶರಣರೆಲ್ಲರೂ ಶರಣಾಗತಿಯ ಭಾವದಿಂದ ಭಗವಂತನನ್ನು ಆರಾಧಿಸಿ, ಅರ್ಚಿಸಿ ಮಾನವನು ಭಗವಂತನಲ್ಲಿ ಒಂದಾಗುವ ಪ್ರಕ್ರಿಯೆಯನ್ನು ಲೋಕಕ್ಕೆ ಅರುಹಿದರು.

                   ಕಾಯದ ಪರಿಶುದ್ಧತೆಗಾಗಿ ಕಾಯಕವನ್ನು ಕಲಿಸಿ, ಧನದ ಪರಿಶುದ್ಧತೆಗಾಗಿ ದಾಸೋಹವನ್ನು ನೀಡಿ, ಆತ್ಮದ ಪರಿಶುದ್ಧತೆಗಾಗಿ ಶಿವಯೋಗವನ್ನು ಕಲಿಸಿ,  ಜಾತಿ-ಮತ- ಪಂಥ ಗಳೆನ್ನದೆ ಎಲ್ಲರ ಮನೆ-ಮನಗಳಲ್ಲಿ  ಶಿವಯೋಗದ ಜ್ಯೋತಿಯನ್ನು ಬೆಳಗಿದವರು ಬಸವಾದಿ ಪ್ರಮಥರು.

                        ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣಗಳು – ಅರ್ಚನೆ, ಅರ್ಪಣೆ ಮತ್ತು ಅನುಭಾವ. ಈ ಮೂರು ಪ್ರಕ್ರಿಯೆ ಗಳು ಸಾಧಕನಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರುತ್ತವೆ. ಮೊದಲು ಭಗವಂತನನ್ನು ಪರಿಶುದ್ಧ ಭಾವದಿಂದ ಪೂಜಿಸುವುದು. ಆ ಭಗವಂತನಿಂದ ಬಂದ ಪದಾರ್ಥಗಳನ್ನು ಭಗವತ್ ಪ್ರಸಾದವೆಂದು ಸ್ವೀಕರಿಸುವುದು ಮತ್ತು ಭಗವಂತನನ್ನು ಕುರಿತು ಚಿಂತನೆಗೈಯುವದು. ಭೂಟಾಟಿಕೆಗಾಗಿ, ತೋರಿಕೆಯಾಗಿ ಮಾಡುವ ಭಕ್ತಿ ಕಲ್ಮಶಯುಕ್ತ ವಾದದ್ದು, ಇದರಿಂದ ಯಾವ ಪ್ರಯೋಜನವೂ ಇಲ್ಲ ಅಂತರಂಗದಲ್ಲಿ ಆತನನ್ನು ಅರ್ಚಿಸಬೇಕು ಎಂಬುವುದನ್ನು ಮೋಳಿಗೆ ಮಾರಯ್ಯನವರು ತಮ್ಮ ನುಡಿಗಳಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

        ನಿನಗೆ ಮಜ್ಜನವ ಮಾಡುವಲ್ಲಿ ನಾ ಮಲದೇಹಿ

        ನೀ ನಿರ್ಮಲದೇಹಿ.

        ನಿನಗೆ ಪೂಜೆಯ ಮಾಡುವಲ್ಲಿ ನಾ ಕರ್ಮಜೀವಿ

        ನೀ ಪುಣ್ಯಜೀವಿ.

        ನಿನಗೆ ಗಂಧವ ಪೂಸುವಲ್ಲಿ ನಾನು ದುರ್ಗಂಧಜೀವಿ

        ನೀನು ಸುಗಂಧಜೀವಿ.

        ನಿನಗೆ ಅಕ್ಷತೆಯ ನಿಕ್ಕುವಲ್ಲಿ ನಾ ಲಕ್ಷಿತ

        ನೀ ಅಲಕ್ಷಿತ.

        ನಿನಗೆ ಧೂಪವನಿಕ್ಕುವಲ್ಲಿ ನಾ ಭಾವಿತ

        ನೀ ನೀರ್ಭಾವಿತ

        ನಿನಗೆ ದೀಪವನ್ನೆತ್ತುವಲ್ಲಿ ನಾ ಜ್ಯೋತಿ

        ನೀ ಬೆಳಗು

        ಇಂತಿ ಭಾವಂಗಳಲ್ಲಿ ಭಾವಿಸಿ ಕಂಡಿಹೆನೆಂದಡೆ ನೀ

        ಭಾವಕೆ ಅಗೋಚರನಾಗಿಪ್ಪೆ.

 ನಿನ್ನನ್ನರಿವುದಕ್ಕೆ ತೆರನಾವುದೆಂದಡೆ ಗುರುವಿಂಗೆ ತನು,

ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು ದಗ್ದಪಟದಂತೆ ರೂಪಿಂಗೆ ಹೊದ್ದಿಗೆಯಾಗಿದ್ದ ಭಕ್ತನಲ್ಲಿ ತಪ್ಪದೇ ಇಪ್ಪೆಯಯ್ಯಾ ನಿಃಕಳಂಕ ಮಲ್ಲಿಕಾರ್ಜುನ..

          ದೇವರ ಪೂಜೆಯನ್ನು ಮಾಡಲು ಭಕ್ತನು ದೇವರಿಗೆ ಮಜ್ಜನ ಮಾಡಿಸುವುದು ಅವಶ್ಯಕವೇ? ಮಜ್ಜನ ಮಾಡಲು ಅವನೇನು ಮೈಲಿಗೆಯಾಗಿರುವನೇ? ಎಂದು ಕೇಳುತ್ತಾ ಕಲ್ಮಶ ಹೊಂದಿದ ಮನುಷ್ಯನು ಮೊದಲು ತನ್ನ ಮನಸ್ಸನ್ನು ತೊಳೆದುಕೊಳ್ಳಬೇಕು. ದೇವರ ಪೂಜೆಯಿಂದ ತನ್ನ ಕರ್ಮವನ್ನು ಮರೆತು ಬಿಟ್ಟರೆ ಪುಣ್ಯಜೀವಿ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ದುರ್ಗಂಧ ವಾಸನೆ ಹೋಗಿಸಲು ದೇವರ ಹೆಸರಿನಲ್ಲಿ ಧೂಪವನ್ನು ಹಾಕುವದಕ್ಕಿಂತ ತನ್ನಲ್ಲಿರುವ ದುರ್ಗಂಧ ತನುವನ್ನು ತೊಳೆದುಕೊಳ್ಳಬೇಕೆ ವಿನಃ ದೇವರಿಗಾಗಿ ಸುಗಂಧವನ್ನು ಲೇಪಿಸುವುದಲ್ಲ. ಅರ್ಚನೆ ಅಕ್ಷತೆಯನ್ನು ಹಾಕುತ್ತಾ ನೇಮವನ್ನು ಮಾಡುತ್ತಾನೆ ಹೊರತು ತಾನು ನಿಯಮಗಳನ್ನು ಪಾಲಿಸುವುದಿಲ್ಲ. ಜಗತ್ತಿಗೆ ಬೆಳಕನ್ನು ಕೊಡುವ ದೇವರಿಗೆ ದೀಪ ಹಚ್ಚುವ ಮನುಜ ಮೊದಲು ತನ್ನ ಅಂಧಕಾರವನ್ನು ಕಳೆದುಕೊಳ್ಳಬೇಕು. ಇದನ್ನು ಬಿಟ್ಟು ಕೇವಲ  ಭೂಟಾಟಿಕೆಗಾಗಿ ಡಂಬಾಚಾರಗಳಿಂದ ದೇವನನ್ನು ಅರ್ಚಿಸುವುದು ವ್ಯರ್ಥವೇ ಸರಿ. ಅವನನ್ನು ಪಡೆದುಕೊಳ್ಳಬೇಕಾದರೆ ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ಜಂಗಮಕ್ಕೆ ಧನವನ್ನು ಅರ್ಪಿಸುವುದರ ಮೂಲಕ ತನ್ನನ್ನು ತಾನು ಸಮರ್ಪಿಸಿ ಕೊಂಡಾಗ ಮಾತ್ರ ದೇವರ ಇರುವಿಕೆ ಅರಿಯಲು ಸಾಧ್ಯವೆಂಬುದನ್ನು ತಿಳಿಸುತ್ತಾ ಅಂತರಂಗದ ಪೂಜೆಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ.

     “”ಸುಪ್ರಭಾತ ಸಮಯದ ಅರ್ತಿಯಲ್ಲಿ ಲಿಂಗವ ನೆನೆದರ

       ತಪ್ಪುವವಯ್ಯ ಅಪಮೃತ್ಯು ಕಾಲಕರ್ಮಂಗಳು””-

              ಎಂಬ ಬಸವ ವಾಣಿಯಂತೆ ಬಾಳಿ ಬದುಕಿರುವವರು ನಮ್ಮ ನಾಡಿನ ಸಂತರು ಶರಣರು. ಈ ನಾಡಿನಲ್ಲಿ ಆಗಿಹೋದ ಸಿದ್ದರು ಸಾಧಕರು ಬೈರಾಗಿಗಳು ಶರಣರು ತಾಂತ್ರಿಕರು ತಮ್ಮ ತಮ್ಮದೇ ಆದ ವಿಶಿಷ್ಟ ಮಾರ್ಗಗಳಿಂದ ದಿವ್ಯತೆಯನ್ನು ಹೊಂದಿದರು. ಪ್ರಾಣದ ಚಲನೆಯನ್ನು ನಿರ್ದಿಷ್ಟ ಗೊಳಿಸಿ, ಅದರ ಓಡಾಟದಿಂದ ಆತ್ಮನ ನೆಲೆ ಸೇರುವ ಸೂಕ್ಷ್ಮ ದಾರಿಯನ್ನು ಕಂಡುಕೊಂಡರು. ವೇದ ಉಪನಿಷತ್ತುಗಳ ಕಾಲದಲ್ಲಿ ನಮ್ಮ ಋಷಿಮುನಿಗಳಿಗೆ ತಿಳಿದಿದ್ದ ಈ ಉಪಾಸನಾ ಮಾರ್ಗ ಬಹುದಿನಗಳವರೆಗೆ ಮಾಯವಾಗಿ ಈಚೆಗೆ 12ನೇ ಶತಮಾನದಲ್ಲಿ ತನ್ನ ದಿಟ್ಟ ನೆಲೆಯೂರಿತು. ನಂತರದ ಕಾಲದಲ್ಲಿ 15ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗೇಶ್ವರ, ಪ್ರೌಢದೇವರಾಯನ ಕಾಲದಲ್ಲಿ ಮತ್ತು 19ನೇ ಶತಮಾನದಲ್ಲಿ ಅಥಣಿ ಮುರಿಗೇಂದ್ರ ಶಿವಯೋಗಿಗಳ ಹಾನಗಲ್ ಕುಮಾರ ಶಿವಯೋಗಿಗಳ ಕಾಲದಲ್ಲಿ ತನ್ನ ಅಸ್ತಿತ್ವ ಪಡೆಯಿತು. ಎಳಂದೂರು ಬಸವಲಿಂಗ ಶಿವಯೋಗಿಗಳ ತಪೋ ಶಕ್ತಿಯಲ್ಲಿ ಮಿಂದ ಶ್ರೀಕುಮಾರ ಮಹಾಶಿವಯೋಗಿಗಳು ಗುರುಗಳ ಆಣತಿಯಂತೆ ಅನುಷ್ಠಾನವನ್ನು ಕೈಗೊಂಡರು ಆತ್ಮಶಕ್ತಿಯನ್ನು ಸಾಧಿಸಿದರು

        “ಸಮಾಜ ಸೇವೆಗಿಂತ ಅಧಿಕ ತಪವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಯೋಗವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಪುಣ್ಯವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಆನಂದವಿಲ್ಲ” ಇದು ಕಾರಣ “ಜನಸೇವೆಯೇ ಜನಾರ್ದನ ಸೇವೆ” ಎಂದು ನಂಬಿ ಒಂದು ಕೈಯಲ್ಲಿ ಲಿಂಗಪೂಜೆ ಇನ್ನೊಂದು ಕೈಯಲ್ಲಿ ಸಮಾಜ ಸೇವೆ ಯನ್ನು ಕೈಗೊಂಡು ತಮ್ಮ ಜೀವನದುದ್ದಕ್ಕೂ ಅರ್ಚನೆ ಅರ್ಪಣೆ ಮತ್ತು ಅನುಭಾವಗಳ ಸಮ್ಮಿಶ್ರಣವಾದ ಬದುಕನ್ನು ಬಾಳುತ್ತಾ ನಿಜ ಚರಜಂಗಮರಾಗಿ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬ ತತ್ವದಡಿಯಲ್ಲಿ ನಿರಂತರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಶಿವಯೋಗದ ಶಕ್ತಿಯನ್ನು ಧಾರೆ ಎರೆದರು.   ಈ  ಶಿವಯೋಗದ ಶೆಲೆ ನಾಡಿನಲ್ಲಿ ಎಂದೂ ಬತ್ತದ ಶೆಲೆಯಾಗಿ ತನ್ನ ಅಂತಃಸತ್ವವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾ ಶಿವಯೋಗಿಗಳು ಶಿವಯೋಗಮಂದಿರವೆಂಬ ಮಹಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ತಪಃಶಕ್ತಿಯನ್ನು ಸಮಾಜಕ್ಕೆ ನಿರಂತರವಾಗಿ ನೀಡುತ್ತಿದ್ದಾರೆ. ನಾವೆಲ್ಲರೂ ಸಹ ಈ ಪುಣ್ಯಮಯ ಪರಿಸರದಲ್ಲಿ ಒಂದಾಗಿ ಅದರ ಸವಿಯನ್ನು ಸವಿಯೋಣ.

                 ಹೀಗೆ ಎಲ್ಲದಕ್ಕೂ ಮೂಲ ಭಗವದನುಗ್ರಹ. ಇದನ್ನು ಪಡೆಯಲು ಮಾರ್ಗಗಳು ಹಲವಾರು, ಹತ್ತಾರು ಆದರೆ ಆತ್ಯಂತಿಕ ಗುರಿ ಮಾತ್ರ ಒಂದೇ.ಆ ದಿವ್ಯತೆಯನ್ನು ಕಂಡುಕೊಳ್ಳುವ ಶಕ್ತಿಯನ್ನು ಮಹಾಗುರುಗಳು ನಮಗೆಲ್ಲರಿಗೂ ದಯಪಾಲಿಸಲಿ ಎಂಬ ಪ್ರಾರ್ಥನೆಯೊಂದಿಗೆ ನನ್ನ ಅನಿಸಿಕೆಗಳು ಗುರು ಪಾದಂಗಳಿಗೆ ಸಮರ್ಪಣೆ, ತಮಗೆಲ್ಲರಿಗೂ ಶರಣು ಶರಣಾರ್ಥಿಗಳು..

 ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು  ನಿಂದಾತನೆ ಸುಖಿ, ಪಂಚೇಂದ್ರಿಯಗಳಿಚ್ಚೆಯಲ್ಲಿ ಕೀಳು ಮನಂಗೊಟ್ಟು ಸುಳಿವಾತನೆ ದುಃಖಿ, ಮನವು ಬಹಿರ್ಮುಖ ವಾಗಲು ಮಾಯಾ ಪ್ರಪಂಚಿ, ಮನವು ಅಂತರ್ಮುಖವಾದೊಡೆ ಅವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಿರಲಾತ ಮುಕ್ತನು, ಮನೋರ್ಲಯವಾದೊಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು.

ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇವರು ( ವಿಜಯ ಪ್ರಭು ದೇವರು) ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠಬೂದಗುಂಪ

 ಅಂದಣವನೇರಿ ಮೆರೆದ ತನುವಲ್ಲ

  ಕುಂದಣವಗಳಿಸಿ ಗಡಣಿಸಿದ ಕೈಯಲ್ಲ

  ಕೀರ್ತಿಗಾಗಿ ಕಾಯಕವ ಕೈಕೊಳ್ವನಲ್ಲ

  ವಿರತಿಗಾಗಿ ವಿಷಯ ತೊರೆದವನಲ್ಲ

  ಕಾಮಕ್ಕೆ ತಾಣಿಲ್ಲ ,ಕೋಪಕ್ಕೆ ಇಂಬಿಲ್ಲ

  ಲೋಭಕ್ಕೆ ತೆರವು ತಾನಿಲ್ಲ, ಮೋಹದ ಮಾತೇಕೆ ?

  ಮುದದ ಮೊಳಕೆ ತೋರದು ,ಮತ್ಸರಕ್ಕೆಡೆಯಿಲ್ಲ  .

  ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯ ಸಿಂಹಾಸನಾಧೀಶ ವಾಸ ಕುಮಾರೇಶ್ವರ

  ನಿನ್ನ ಗುಣಂಗಳ ಗಣಿಸಲಾರಳವು ಹೇಳಾ

ಪ್ರಿಯ ಸಹೃದಯರೇ ವೀರಶೈವ ಲಿಂಗಾಯತ ಧರ್ಮದಲ್ಲಿ ಬಸವಾದಿ ಶಿವಶರಣರು ತಮ್ಮ ನಿಜಜೀವನದಲ್ಲಿ ಆಚರಿಸಿಕೊಂಡು ಬಂದಂತಹ ಹಾಗೂ ವೀರಶೈವ ಸಾಧಕನು ತನ್ನ ಪ್ರತಿ ನಿತ್ಯ ಜೀವನದಲ್ಲಿ ಆಚರಿಸಿಕೊಂಡು ಹೋಗಲೇಬೇಕಾದ ಮೂರು ಕ್ರಿಯೆಗಳೆಂದರೆ 1 ಅರ್ಚನೆ 2 ಅರ್ಪಣ 3 ಅನುಭಾವ.

ಗುರು ಅನುಗ್ರಹಿಸಿದ ಇಷ್ಟಲಿಂಗವನ್ನ ನಿಷ್ಠೆಯಿಂದ ತ್ರಿಕಾಲ ಪೂಜಿಸುವುದು ಅರ್ಚನೆ.

ಆ ಪೂಜಾ ಫಲದಿಂದ ದೊರೆತ ಪಾದೋದಕ ಮತ್ತು ಪ್ರಸಾದವನ್ನು ಸ್ವೀಕರಿಸುವುದು ಜೊತೆಗೆ ಶಿವನಿಂದ ಬಂದ ಪ್ರಸಾದವನ್ನು ಶಿವನಿಗೆ ಅರ್ಪಿಸುವುದು, ದಾಸೋಹ ಗೈಯುವುದು ಅರ್ಪಣ.

ವೀರಶೈವ ಲಿಂಗಾಯತ ಧರ್ಮದ ತತ್ವತ್ರಯಗಳಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲ,ಹಾಗೂ ಧರ್ಮಗ್ರಂಥಗಳ ಕುರಿತು ಚಿಂತನಾಗೋಷ್ಠಿ,ಶಿವಾನುಭವಕ್ಕೆ ಅನುಭಾವವೆನ್ನುವರು.

ಇಲ್ಲಿ ಅರ್ಪಣ ವಿಷಯ ಕುರಿತು ಚಿಂತಿಸುವುದಾದರೆ ಪ್ರಸಾದ ಪರಿಕಲ್ಪನೆಯಲ್ಲಿ ಅರ್ಪಿಸುವುದು ಮುಖ್ಯವಾದುದೇ? ಹೊರತು ಸ್ವೀಕರಿಸುವುದಿಲ್ಲ.ಸಾಧಕನು ಪ್ರಾಥಮಿಕ ಹಂತದಲ್ಲಿ ಆಹಾರ ಪಾನೀಯಗಳನ್ನು ಅರ್ಪಿಸಿ ,ಅವುಗಳನ್ನು ಸೇವಿಸುತ್ತಾನೆ.ಆನಂತರ ಆಹಾರದಂತ ಸ್ಥೂಲ ವಸ್ತುಗಳನ್ನಷ್ಟೇ ಅಲ್ಲ ,ರೂಪ ರಸ ಗಂಧ ಮುಂತಾದ ವಿಷಯಗಳನ್ನ ಅರ್ಪಿಸಿ ಸೇವಿಸುತ್ತಾನೆ,ಆಮೇಲೆ ಇಂದ್ರಿಯ ಕರಣಗಳನ್ನು ಅರ್ಪಿಸುತ್ತಾನೆ,ಕೊನೆಯಲ್ಲಿ ತನ್ನ ಭಾವ (ಆತ್ಮ)ವನ್ನೆ ಅರ್ಪಿಸುತ್ತಾನೆ.

ವಸ್ತು-ವಿಷಯಗಳನ್ನಾಗಲಿ, ಇಂದ್ರಿಯ ಕರಣಗಳನ್ನಾಗಲಿ ಸೇವಿಸಬೇಕು ಅಥವಾ ಬಳಸಬೇಕು ಎಂದಾದರೆ ಅವುಗಳನ್ನು ಮೊದಲು ಲಿಂಗಕ್ಕೆ ಅಥವಾ ಅದರ ಪ್ರತಿನಿಧಿಗಳಾದ ಗುರು -ಜಂಗಮಕ್ಕೆ ಅರ್ಪಿಸಬೇಕು.

ಇದನ್ನು ಸತತ ಸಾಧನೆಯ ಮೂಲಕ ರೂಢಿಗತ ಮಾಡಿಕೊಳ್ಳಬೇಕು. ಹೀಗೆ ರೂಢಿಗತ ಮಾಡಿಕೊಳ್ಳಬೇಕು ಎಂಬ ನಿರ್ಧಾರವನ್ನು ಶರಣರು ಅವಧಾನ ಭಕ್ತಿ ಎನ್ನುತ್ತಾರೆ.

ಲಿಂಗಾರ್ಪಿತ ವಸ್ತು ಶುದ್ಧವಾಗುತ್ತದೆ, ಲಿಂಗಾರ್ಪಣಾಭಾವ ಭಕ್ತನನ್ನು ಶುದ್ಧ ಮಾಡುತ್ತದೆ.ಪ್ರಪಂಚದ ಪ್ರತಿಯೊಂದು ವಸ್ತುವೂ ಪ್ರಸಾದ ಎಂದು ಭೋಗಿಸಿದರೆ ನಮ್ಮ ಅಹಂಭಾವವು ಕಡಿಮೆಯಾಗಿ “ಸೋಹಂ’ ಎಂಬ ಭಾವ ಬೆಳೆದು ನಾವು ಶುದ್ಧ ರಾಗುತ್ತೇವೆ ಎಂದು ನಂಬಬೇಕು ಇಂಥ ನಂಬಿಕೆಗಳೆ  ನಮ್ಮ ಅಧ್ಯಾತ್ಮಿಕ  ಜೀವನವನ್ನು ರೂಪಿಸುತ್ತವೆ.

  ಶುದ್ಧ,ಸಿದ್ದ,ಪ್ರಸಿದ್ಧ ಪ್ರಸಾದವೆಂತುಂಟೆಂದು ಬೆಸಗೊಂಡೊಡೆ ಹೇಳಿಹೆ. ಕೇಳಿರೆ

  ಶುದ್ಧಪ್ರಸಾದವುಗುರುಮುಖದಿಂದ ಬಂದುದು

  ಸಿದ್ದ ಪ್ರಸಾದವು ಲಿಂಗ ಮುಖದಿಂದ ಬಂದುದು

  ಪ್ರಸಿದ್ಧ ಪ್ರಸಾದವು ಜಂಗಮ ಮುಖದಿಂದ ಬಂದುದು

  ಇದರೊಳಗಾವುದ ಘನವೆಂಬೆ, ಅವುದು ಕಿರಿದೆಂಬೆ

  ಗುರು ಪ್ರಸಾದದಿಂದ ತನು ಶುದ್ಧಿ, ಲಿಂಗ ಪ್ರಸಾದದಿಂದ ಮನ ಶುದ್ದಿ

           ಜಂಗಮ  ಪ್ರಸಾದದಿಂದ ಭಾವಶುದ್ಧಿ

  ಶರಣರ ಸಂಗದಿಂದ ಸಾಧ್ಯವಾಯಿತ್ತು ಕೂಡಲಚೆನ್ನಸಂಗಮದೇವ .

ಶಿವನು ಕರುಣಿಸಿದ ಈ ಮನುಷ್ಯ ಜನ್ಮವು ಸಾರ್ಥಕತೆ ಪಡೆಯಬೇಕು.

ಈ ಜೀವನವೂಕೂಡ  ಶಿವನು ಪ್ರಸಾದರೂಪದಲ್ಲಿ ಕರುಣಿಸಿದ್ದು “ಲಿಂಗ ಮಯ ಜಗತ್ ಸರ್ವಂ ” ಎಂಬಂತೆ ಪ್ರತಿ ಅಣು ಅಣುವೂಕೂಡ ಶಿವಕಾರುಣ್ಯದಿಂದ ತನ್ನ ಅಸ್ತಿತ್ವ ಪಡೆದು ನಡೆಯುತ್ತಿರುತ್ತದೆ.ಈ ಪ್ರಸಾದವನ್ನು ಹಿರಿದು, ಕಿರಿದು ಎನ್ನಲಾದೀತೆ? ಘನವಾದ ಈ ಪ್ರಸಾದವು ಗುರುಮುಖದಿಂದ ಬಂದ ಶುದ್ಧ ಪ್ರಸಾದದಿಂದ ತನು ಶುದ್ದಿ.ಲಿಂಗ ಮುಖದಿಂದ ಬಂದ ಸಿದ್ದ ಪ್ರಸಾದದಿಂದ ಮನಃಶುದ್ಧಿ.ಜಂಗಮ ಮುಖದಿಂದ ಬಂದ ಪ್ರಸಿದ್ಧ ಪ್ರಸಾದದಿಂದ ಭಾವಶುದ್ದಿ ಆಗುತ್ತದೆ.ಇವೆಲ್ಲ ಶುದ್ಧಿಯಾಗಿ ಇರಬೇಕಾದರೆ ಶರಣರ ಸಂಗದಿಂದ ಮಾತ್ರ ಸಾಧ್ಯ ವೆನ್ನುತ್ತಾರೆ ಚೆನ್ನಬಸವಣ್ಣನವರು.ಶರಣರ ಸಂಗ ಭವದುಃಖ-ದುಮ್ಮಾನಗಳನ್ನು ದೂರಸರಿಸಿ ಶಿವ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ ಮಾಡುತ್ತದೆ.

ಶಿವಯೋಗಿಗಳು ಶರಣರು ಈ ಪ್ರಸಾದಕ್ಕೆ ಎಷ್ಟು ಮಹತ್ವ ಕೊಟ್ಟಿದ್ದಾರೆಂದರೇ

ಹೀಗೆ ಒಂದು ದಿನ ಪೂಜ್ಯ ಶ್ರೀ ಕುಮಾರಸ್ವಾಮಿಗಳು ಇಳಕಲ್ಲಿಗೆ ಹೋದ ಸಮಯದಲ್ಲಿ ವಿಜಯ ಮಹಾಂತ ಶಿವಯೋಗಿಗಳು ಶಿವಪೂಜೆಗೆ ಮೂರ್ತ ಮಾಡಿದ್ದರು.ಶ್ರೀಕುಮಾರಸ್ವಾಮಿಗಳು ಮಠಕ್ಕೆ ಬಂದ ವಿಷಯವನ್ನು ಸೇವಾ ಬಳಗದವರು ಶಿವಯೋಗಿಗಳಿಗೆ ತಿಳಿಸಿದಾಗ,ಆಗ ಶಿವಯೋಗಿಗಳು ಶ್ರೀಗಳಿಗೆ ತಕ್ಷಣ ಸ್ನಾನ ಮಾಡಿ ಪೂಜಾ ಕೋಣೆಯೊಳಗೆ ಬರಲು ಅಪ್ಪಣೆ ಮಾಡಿದರು.ಶ್ರೀ ಕುಮಾರ ಸ್ವಾಮಿಗಳು ಸ್ನಾನ ಪೂರೈಸಿ ಶಿವಯೋಗಿಗಳ ಪೂಜಾಗೃಹ ಪ್ರವೇಶಿಸಿ ಗದ್ದುಗೆಯಲ್ಲಿ ಮೂರ್ತ ಮಾಡಿದ್ದ ಶಿವಯೋಗಿಗಳಿಗೆ ಭಕ್ತಿಯಿಂದ ಸಾಷ್ಟಾಂಗ ಪ್ರಣಾಮ ಮಾಡಿ ಪಾದೋದಕ ಸ್ವೀಕರಿಸಿದರು.ಪ್ರಸಾದಕ್ಕೆ ಸಿದ್ಧಗೊಳಿಸಿದ ಪದಾರ್ಥಗಳನ್ನು ಎಡೆ ಬಟ್ಟಲಿಗೆ ಎಡೆಮಾಡಿ,ಕರ್ಪೂರ ಹಚ್ಚಿದ ನಂತರ ಶಿವಯೋಗಿಗಳು ಕುಮಾರಶ್ರೀಗಳಿಗೆ “ತಾವು ನಮ್ಮೊಡನೆ ಇದೇ ಬಟ್ಟಲಲ್ಲಿ ಪ್ರಸಾದ ಸ್ವೀಕರಿಸಬೇಕು ಎಂದಿದ್ದರು ” ಈ ಮಾತನ್ನು ಕೇಳಿದ ಕುಮಾರ ಶ್ರೀಗಳಿಗೆ ಪರಮಾಶ್ಚರ್ಯವಾಗಿ ಹೃದಯ ತುಂಬಿಬಂದಿತ್ತು,ಕನಸಿನಲ್ಲೂ ಸುಳಿಯದಂಥ ಈ  ಪ್ರಸಾದ ಕರುಣೆಯ ಸೌಭಾಗ್ಯ ತಾನಾಗಿ ಅನುಗ್ರಹವಾದ ಆನಂದದಲ್ಲಿ ಶ್ರೀಗಳು ಶಿವಯೋಗಿಗಳೊಂದಿಗೆ  ಸಹಭೋಜನಕ್ಕೆ ಮೂರ್ತ ಮಾಡಿದರು.

ಇಲ್ಲಿ ಒಂದು ವಿಷಯ ಸೂಕ್ಷ್ಮವಾಗಿ ವಿಚಾರಿಸುವದೆಂದರೆ “ಕುಮಾರ ಶ್ರೀಗಳು ಉಪ್ಪು,ಹುಳಿ,ಖಾರ ಬಿಟ್ಟು ಸಾತ್ವಿಕ ಪ್ರಸಾದ ಸೇವಿಸುವ ವ್ರತ ಶ್ರೀಗಳದ್ದಾಗಿತ್ತು ” ಆದರೆ ಇಲ್ಲಿ ತಾವು ಸೇವಿಸುವ ಸಾತ್ವಿಕ ಆಹಾರ ಪದಾರ್ಥಗಳಿಗೆ ಹೊರತಾದ ಜೋಳದ ಕಡುಬು,ಕಾರ ಬೇಳೆ,ಅನ್ನ ಮೊದಲಾದ ಶಿವಯೋಗಿಗಳ ಅಭ್ಯಾಸದ ಪದಾರ್ಥಗಳು ಎಡೆಬಟ್ಟಲಲ್ಲಿ ಇದ್ದರೂ ಆ ಪದಾರ್ಥಗಳತ್ತ ಲಕ್ಷಗೊಡದೆ ಸೇವಿಸುತ್ತಿದ್ದ ಶ್ರೀ ಕುಮಾರಸ್ವಾಮಿಗಳಿಗೆ ಆ ಪ್ರಸಾದ ಅಮೃತ ವಾಗಿತ್ತು.

ಹುಳಿ, ಉಪ್ಪು, ಖಾರ ಎಂಬ ರುಚಿ ಆ ಪ್ರಸಾದದಲ್ಲಿ ಅಳಿದಿತ್ತು. ಹೀಗೆ ಈರ್ವರು  ಶಿವಯೋಗಿಗಳು ಒಂದೇ ಎಡೆಬಟ್ಟಲಲ್ಲಿ ಪ್ರಸಾದ ಸೇವನೆಯೊಂದಿಗೆ ಸಮರಸ ಭಾವದಲ್ಲಿ ಮುಳುಗಿದ್ದರು.

ಮಹಾತ್ಮರು,ಶಿವಯೋಗಿಗಳು, ಸಂತರು, ಶಿವಭಕ್ತರು, ಸ್ವಾಮಿಗಳು ಅನ್ನ ಪ್ರಸಾದಕ್ಕೆ ಬಹಳ ಮಹತ್ವ ಕೊಡುತ್ತಾರೆ. ಇವರು ಪ್ರಸಾದ ಸ್ವೀಕರಿಸುವುದಕ್ಕಿಂತ ಮುಂಚೆ ಅನ್ನಪ್ರಸಾದವನ್ನು ಮೊದಲು ಶಿವನ ರೂಪದಲ್ಲಿದ್ದ ಲಿಂಗಕ್ಕೆ ಅರ್ಪಿಸಿ ಹೇ ದೇವಾ ನೀನು ಕೊಟ್ಟ ಪ್ರಸಾದವನ್ನು ಮೊದಲು ನಿನಗೆ ಅರ್ಪಿಸಿ ಆನಂತರ ನಾನು ಸೇವಿಸುತ್ತೇನೆ, ನಿನ್ನ ಈ ಪ್ರಸಾದದಿಂದ ನನ್ನ ರಕ್ತವು ಪರಿಶುದ್ಧವಾಗಿ ಹರಿಯುವಂತಾಗಲಿ, ಕೆಟ್ಟ ವಿಚಾರಗಳು ನನ್ನ ತಲೆಯಲ್ಲಿ ಸುಳಿಯದಂತಾಗಲಿ, ನನ್ನ ನರನಾಡಿಗಳಲ್ಲಿ ಹೊಸ ಚೈತನ್ಯವು ಹುಟ್ಟುವಂತಾಗಲಿ ಎಂದು ಭಗವಂತನಿಗೆ ಮನಃಪೂರ್ವಕವಾಗಿ ಬೇಡಿಕೊಂಡು ಪ್ರಸಾದ ಸೇವಿಸುತ್ತಾರೆ.

ಕೇವಲ ಶರೀರ ಮೋಹಿಗಳು ಊಟ, ಅನ್ನಕ್ಕೆ ಆಸೆಪಡುವವರು ಆದರೆ ಗುರು-ಲಿಂಗ-ಜಂಗಮ ರಲ್ಲಿ ನಿಷ್ಠೆ ಉಳ್ಳವರು ಪೂಜ್ಯಭಾವದಿಂದ ಪ್ರಸಾದವನ್ನ  ಸೇವಿಸುವರು. ಶರೀರೇಂದ್ರಿಯ ಭಾವ ಅಳಿದು ಸದ್ಭಾವದ ಸತ್ ಕಾಯಕದೊಳಗೆ ಗುರು -ಲಿಂಗ-ಜಂಗಮಕ್ಕೆ ಅರ್ಪಿಸಿ ಸೇವಿಸುವುದೇ ನಿಜ ಪ್ರಸಾದ.

ಹೇಗೆ ಬೆಂಕಿಯಿಂದ ಬೆಣ್ಣೆ ಕರಗಿ ತುಪ್ಪವಾಗುವುದು ಹಾಗೆ ಚಿದ್ಘನಲಿಂಗದ ಮುಖದಿಂದ ಸಂಸ್ಕಾರಗೊಂಡ ಪದಾರ್ಥ ಮಹಾಪ್ರಸಾದ ವಾಗುವುದು.ತುಪ್ಪ ಮತ್ತೆ ಬೆಣ್ಣೆಯಾಗದು,ಪ್ರಸಾದ ಮರಳಿ ಪದಾರ್ಥವಾಗದು.ಶಿವನ ಕರುಣವೆ ಪ್ರಸಾದ ಗುರುಲಿಂಗ ಜಂಗಮದಿಂದ ಶಿವಭಕ್ತರಾದವರಿಗೆ ಪ್ರಸಾದ ಸಲ್ಲಬೇಕೆ ಹೊರತು ಉಳಿದವರಿಗೆ ಪ್ರಸಾದ ಸಂದೀತೆ? ಪ್ರಸಾದವೇ ತಂದೆ, ಇದರೊಳಗನ ಭಕ್ತಿಯೇ ತಾಯಿ,ಪ್ರಸಾದ ಸೇವ್ಯ ಸಂಯೋಗ ಪಡೆದಾಗ ಜನಿಸುವವಳೇ ಪರಮ ಮುಕ್ತಿ ಕನ್ನಿಕೆ .ಇದೇ ಪರಮೇಶ್ವರ ಸಾಕ್ಷಾತ್ಕಾರಕ್ಕೆ ಹಾದಿ.ಪರಶಿವ ಭಕ್ತಿ ಪರಶಿವ ಶಕ್ತಿಯೊಡನೆ ಬೆರೆದಿರುವುದೇ ಪ್ರಸಾದ ಧರ್ಮ.ಪ್ರಸಾದದಿಂದ ಪರಶಿವ ಭಕ್ತಿ  ಸದ್ಭಕ್ತಿಯಾಗಿ ಮಧುರಗೊಳ್ಳುವುದು, ಇದುವೇ ಪ್ರಸಾದ, ಇದುವೇ ಅರ್ಪಣ.

ಲೇಖಕರು: ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಕೆರೆ ಹಳ್ಳ ಭಾವಿಗಳು ಮೈದೆಗೆಡದೆ

ಗುಳ್ಳೆ,ಗೊರಚೆ,ಚಿಪ್ಪು ಕಾಣಬಹುದು

ವಾರಿಧಿಯು ಮೈದೆಗೆದಡೆ

ಮುತ್ತು ರತ್ನಂಗಳ ಕಾಣಬಹುದು.

ಕೂಡಲ ಸಂಗನ ಶರಣರು

ಮನದೆರೆದು ಮಾತನಾಡಿದರೆ ಲಿಂಗವೇ ಕಾಣಬಹುದು.

            ಮಾನವ ವಿಶ್ವಕೋಶದ ಪುಟಗಳನ್ನು ತೆರೆದು ನೋಡಿದಾಗ ಅಲ್ಲಿ ದೊರಕುವ ಜ್ಞಾನ ಅಘಾಧ. ಹಲ ಹಲವು ಮಾರ್ಗಗಳಿಂದ ಹೆಕ್ಕಿ ಹೆಕ್ಕಿ ನೋಡಿದಡೆ ಹಲ ಹಲವು ಜ್ಞಾನ ಸಂಪದ  ನಮ್ಮ ಮಸ್ತಿಷ್ಕಕ್ಕೆ ಸ್ಪರ್ಷವಾಗುತ್ತದೆ.ಷಡ್ ದರ್ಶನಗಳು,ವೇದ ಆಗಮ ಉಪನಿಷತ್ತುಗಳು,ಅಷ್ಟಾದಶ ಪುರಾಣಗಳು,ಗೀತಾ,ಬೈಬಲ್,ಕುರಾನ್,ಗ್ರಂಥ ಸಾಹೇಬ, ಟ್ರಿಪೀಠಕ ಇನ್ನೂ ಹತ್ತು ಹಲವು ಸಾರ ಸಂಗ್ರಹ ನಮ್ಮ ವಿಶ್ವದಲ್ಲಿ ದೊರಕುತ್ತದೆ.ಇವುಗಳೆಲ್ಲ ಸಾರುವ ತತ್ವ ಒಂದೇ ಮಾನವೋಭ್ಯುದಯ. ಯಾವ ಗ್ರಂಥವು ಸಹ ಪ್ರಾಣಿ ಪಕ್ಷಿಗಳಿಗೊಸುಗ, ತರು ಮರಾಗಳಿಗಾಗಿ ರಚನೆ ಆಗಿಲ್ಲ. ಸಕಲ ಚರಾಚರ ಪ್ರಣಿಗಳೆಲ್ಲ ಈ ಸೃಷ್ಠಿಯ ಆಧೀನ.ಇದಕ್ಕೆ ಮಾನವನು ಹೊರತಲ್ಲ.ಇದರ ಪ್ರಜ್ಞೆ ಅವನಿಗಿದ್ದರೂ ಸಹ ‘ಈ ಹೊಗೆಯು ಬೆಂಕಿಗೆ ಆವರಿಸಿದಾಗ ಹೇಗೆ ಬೆಂಕಿ ನಮಗೆ ಅಸ್ಪಷ್ಟ ಗೋಚರವಾಗುತ್ತದೆಯೋ ಹಾಗೆ ಈ ಮಾನವನಿಗೆ ಮಾಯೆ ಎನ್ನುವ ಹೊಗೆ ಆವರಿಸಿ ಇವನ ಅಸ್ತಿತ್ವವನ್ನೇ ನಾಶಮಾಡಿ ಬಿಟ್ಟಿದೆ’. “ಕೋsಹಂ? (ನಾನು ಯಾರು? ),ಕುತ್ರಾತ್ ಆಗತವನ್?(ಎಲ್ಲಿಂದ ಬಂದೆ?), “ಕಿಮ್ ಕರ್ತುಂ ಆಗತಂ? (ಏನು ಮಾಡಲು ಬಂದೆ).ಪುನಃ ಕುತ್ರ ಗಂತವ್ಯಂ?( ಮರಳಿ ಎಲ್ಲಿಗೆ ಹೊರಡಬೇಕಿದೆ?)” ಎನ್ನುವ ಪ್ರಜ್ಞೆಯನ್ನು ಕಳೆದುಕೊಂಡು ಮಾಯಾ ಛಾಯೆಗೆ ಬಲಿಯಾಗಿ, ತ್ರೈ ಮಲಗಳಿಗೆ ಸಿಲುಕಿ,ಸ್ವಾರ್ಥ ಬದುಕನ್ನು ನೆಚ್ಚಿ ಹೊನ್ನು ಹೆಣ್ಣು ಮಣ್ಣಿಗಾಗಿ ಬದುಕನ್ನ ಮೀಸಲಿರಿಸಿದ್ದಾನೆ. ಈ ಕಲುಷಿತವಾದ ಮಾನವನ ಹೃದಯವನ್ನು ತಿಳಿಯಾಗಿಸಲು ಈ ಎಲ್ಲ ವಿಶ್ವಕೋಶಗಳು ರಚನೆಯಾಗಿವೆ.ಒಂದೊಂದು ಕೋಶಗಳು ಒಂದೊಂದು ಅರ್ಥ ಪ್ರಾಧಾನ್ಯತೆಯನ್ನು ಎತ್ತಿ ಹಿಡಿಯುತ್ತವೆ.

 ಒಂದರಲ್ಲಿ “ಅಹಂ ಬ್ರಹ್ಮಾಸ್ಮಿ” ಎಂದು ಹೇಳಿದರೆ, ಒಂದು “ಆಸೆಯೇ ದುಃಖಕ್ಕೆ ಮೂಲ” ಎಂದು ಸಾರುತ್ತದೆ.ಒಂದು “ಪರೋಪಕಾರವೆ ಪುಣ್ಯ, ಪರ ಪೀಡನೆಯೇ ಪಾಪ” ಎಂದರೆ ಒಂದು “ಅಹಿಂಸಾ ಪರಮೋ ಧರ್ಮ:” ಎಂದು ತಿಳಿಸುತ್ತದೆ. ಹೀಗೆ ಒಂದೊಂದು ಹಲವು ಮಾರ್ಗಗಳ ಮೂಲಕ ಮಾನವ ಅಭ್ಯುದಯದ ದಿವ್ಯ ಜ್ಞಾನ ಸಾಗರಗಳಾಗಿವೆ. ಇವುಗಳನ್ನೆಲ್ಲ ಕ್ರೋಢೀಕರಿಸಿ ಒಂದು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ತೆಗೆದ ಸಾರವೇ ನಮ್ಮ ಪುರಾತನ ಶರಣರ “ವಚನ ಸಾಹಿತ್ಯ”.

              ಇದು ಯಾರೋ ಕಟ್ಟೆಗೆ ಕುಳಿತು ಕಾಲ ಹರಣ ಮಾಡಿ ಬರೆದ ರಚನೆಯಲ್ಲ,ಇದು ಯಾರೋ ಗರತಿ ಹಾಡಿದ ಗರತಿ ಪದವಲ್ಲ,ಇದು ಜನಪದರ ಜಾನಪದವು ಅಲ್ಲ,ಇದು ಮನೋರಂಜನೆ ನೀಡುವ ಹಾಸ್ಯ ಲಾಸ್ಯ ಸಾಹಿತ್ಯವಲ್ಲ, ಯಾರಿಗೋ ಎಲ್ಲಿಯೋ ಹೊಳೆದ ಮಸ್ತಿಷ್ಕ ಜನ್ಯ ಜ್ಞಾನವು ಅಲ್ಲ. ಇದು ಏನೆಂದರೆ ಅಂತರಂಗದ ಅರಿವಿನ ಮನೆಯಲ್ಲಿ ಅನುಭವ ಎನ್ನುವ ತಾಯಿ ಬೇರಿನಿಂದ ಸೃಷ್ಟಿಯಾದ ಬೇಡಿದವರಿಗೆ ಬೇಡಿದ್ದನ್ನು ನೀಡುವ ಕಲ್ಪ ವೃಕ್ಷ. ಅರಿವಿನರಮನೆಯ ಅರಿವಿನನುಭಾವಿಗಳ ಅರಿವೇ ಈ ವಚನಗಳು. ಇವುಗಳು ಪ್ರಪಂಚದಾದ್ಯಂತ ಪ್ರಸಾರವಾಗಲು ಎಲ್ಲರೂ ಇವುಗಳನ್ನ ಒಪ್ಪಿ ಅಪ್ಪಳು ಕಾರಣ ಇವುಗಲು “ಅನುಭವ ಜನ್ಯ ಜ್ಞಾನ”ಸಿದ್ಧಾಂತ ಎಂಬುದಕ್ಕಾಗಿ .ಬಸವಾದಿ ಶರಣರು ತಾವು ಬದುಕಿನಲ್ಲಿ ನಡೆದು ಆ ನಡೆಯ ಮೂಲಕ ಅವತರಿಸಿದ ಮಹಾ ಖನಿಜವೆ ಇಂದು ನಮಗೆಲ್ಲ ದಾರಿ ದೀಪವಾಗಿ ಬೆಳಕು ಚೆಲ್ಲುತ್ತಿವೆ. ಇದಕ್ಕೆಲ್ಲ ಮೂಲ ತಳಹದಿ “ಅನುಭವ.”. ಈ ಅನುಭವ  ತಾಯಿಯ ಮೂಲಕ ಜನಿಸಿದ ಮಗುವೇ “ಅನುಭಾವ”. ಅರಿವು ತನ್ನ ಸಾರ್ಥಕತೆಯನ್ನು ಪಡೆಯಬೇಕೆಂದರೆ ಅದಕ್ಕೆ ಅನುಭಾವವೆ ಪ್ರಾಮುಖ್ಯ. ಇದನ್ನೇ ವಚನಕಾರರು “ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ, ಲಿಂಗಾನುಭಾವದಿಂದ ನಿಮ್ಮನ್ನ ಕಂಡು ಎನ್ನ ಮರೆತೇ ಕೂಡಲ ಸಂಗಮ ದೇವಾ” ಎಂದರು.

 ಅವರ ಅಂತರಂಗದ ಅರಿವು ಬಹಿರಂಗಕ್ಕೆ ಬಂದದ್ದು “ಅನುಭಾವ”ಎಂಬ  ರೂಪ ತಾಳಿ.ಇಲ್ಲಿ ಅನುಭವ ಮತ್ತು ಅನುಭಾವಕ್ಕೆ ಬಹಳ ಅನ್ಯುನ್ಯತೆ ಇದೆ.ಇವುಗಳು ಒಂದನ್ನ ಬಿಟ್ಟು ಒಂದು ಇರಲಾರದು.ನಮ್ಮರಿವು ಸಾರ್ಥಕ್ಯವಾಗಲು ನಮ್ಮ ಅನುಭಾವವೇ ಮೂಲ.ಇದನ್ನರಿತು ಆಚರಿಸಿದವರು ಬಸವಾದಿ ಶರಣರು.

       “ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು.”

   ಎಂದರು ಸಿದ್ಧರಾಮೇಶ್ವರರು.

ಶರಣರು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣ ಅನುಭವ ಪಡೆದು ಮಹಾಜ್ಞಾನಿಗಳಾದರು. ಆವೊಂದು ಆಂತರಿಕ ಜ್ಞಾನವೆ ಅವರನ್ನು ಪರಿಪೂರ್ಣತೆಯಡೆಗೆ ಕರೆದುಕೊಂಡು ಹೋಗಲು ಸಾಧ್ಯ ಮಾಡಿಕೊಟ್ಟಿತು ಹಾಗಾಗಿ ಅವರ ಈ ಸಾಧನೆ ಸದಕಾಲ ಜೀವಂತಿಕೆಯಾಗಿ ಉಳಿಯಿತು. ಈವೊಂದು ಅನುಭವದಿಂದ ಸಿದ್ಧರಾಮೇಶ್ವರರು ನಾವು ಮಾಡುವ ಪ್ರತಿಯೊಂದು ಕೆಲಸದಿಂದ ಅನುಭವ ಸಾಧನೆಯಾಗಬೇಕು ಎನ್ನುತ್ತಾರೆ ಇಲ್ಲಿ.

ಹಾಗೆಯೇ ಅವರ ಹಾದಿಯಲ್ಲಿಯೇ 19 ಹಾಗೂ 20 ನೆಯ ಶತಮಾನದಲ್ಲಿ ಜನಿಸಿ ಬಸವಾದಿ ಶರಣರ ಬದುಕನ್ನ ತಮ್ಮ ಬದುಕಿನೊಂದಿಗೆ ಸಮಾಜಕ್ಕೆ ಪುನಃ ತೋರಿಸಿದ ಮಹಾನುಭಾವಿ,ಕಾರಣಿಕ ಪುರುಷರು “ಪೂಜ್ಯ ಶ್ರೀ ಶಿವಯೋಗ ಮಂದಿರದ ಕುಮಾರ ಶಿವಯೋಗಿಗಳು.”

ಇವರು ಬದುಕಿದ ಬದುಕು ಹೇಗಿತ್ತೆಂದರೆ ಬದುಕಿಗೆ ಮರಳಿ ಹೇಗೆ ಬದುಕಬೇಕು ಎನ್ನುವ ಪಾಠ ಕಲಿಸಿದಂತಿತ್ತು.ಇವರು ಕೈಗೊಂಡ ಕಾರ್ಯಗಳು ಕೇವಲ ಕಾರ್ಯಗಳಾಗಿರದೆ ಇಂದಿನ ಪೀಳಿಗೆಗೆ ಬದುಕ ರೂಪಿಸಿದೆ.

*ಧರ್ಮವೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅಳುತ್ತಿರುವಾಗ ಅದಕ್ಕೆ ಒಂದು ಸ್ಥಾನಮಾನವನ್ನು ಪುನಃ ಕಲ್ಪಿಸುವಲ್ಲಿ “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡವೆನ್ನುವ ಸಿದ್ಧಾಂತವನ್ನು ನಡೆದು ತೋರಿಸಿ ಧರ್ಮದ ಉಳಿವಿಗಾಗಿ  ಬಸವನಾಗಿ ಬಾಳಿದವರು.೧೨ನೇ ಶತಮಾನದಲ್ಲಿ ಎಲ್ಲಾ ಧರ್ಮದ ಜ್ಞಾನಿಗಳನ್ನು  ಕವಿಗಳನ್ನು ಮತ್ತು ತತ್ವಜ್ಞಾನಿಗಳನ್ನು  ಎಲ್ಲೆಲ್ಲಿಂದಲೋ ತಂದು ಒಟ್ಟು ಗೂಡಿಸುವಲ್ಲಿ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತನ್ನು ಅನುಭವ ಮಂಟಪವನ್ನು  ನಿರ್ಮಾಣ ಮಾಡುವಲ್ಲಿ ಬಸವಣ್ಣನವರು ಯಶಸ್ವಿಯಾದರೆ

20 ನೆಯ ಶತಮಾನದ ಎಲ್ಲ ಧರ್ಮ ಪ್ರವರ್ತಕರನ್ನು, ಸಾಹಿತಿಗಳನ್ನು, ಸಂಗೀತಗಾರರನ್ನು,ಕಲಾಗಾರರನು,ಕವಿಗಳನ್ನು

ಒಂದೇ ಶಿವಯೋಗ ಮಂದಿರ ಎಂಬ ಸಂಸ್ಥೆಯ ಮೂಲಕ ರಚಿಸಿ ಇಡೀ ವಿಶ್ವಕ್ಕೆ ಬೆಳಕು ನೀಡುವಲ್ಲಿ ಯಶಸ್ವಿಯಾದವರು ಶ್ರೀ ಕುಮಾರ ಶಿವಯೋಗಿಗಳು.

*ದೇಶಗುರಿಯಾಗಿ ಹೋಗದೆ ಕಾಮ ಗುರಿಯಾಗಿ ಬೆಂದು ಹೋಗದೆ, ನೀ ಗುರಿಯಾಗಿ ಹೋಗಬೇಕು ಎನ್ನುವ ಅಲ್ಲಮನ ಅನುಭಾವದಂತೆ ತಾರುಣ್ಯ ಭರಿತರಾಗಿದ್ದ ಹಾಲಯ್ಯನವರು ಹುಬ್ಬಳ್ಳಿಯ ನಗರದಲ್ಲಿ ಭಿಕ್ಷೆಗೆ ಹೋದಾಗ ಒಬ್ಬ ಯೌವ್ವನ ಭರಿತ ಮಹಿಳೆ ಇವರಿಗೆ ಆಕರ್ಶಿತಳಾಗಿ ಭಿಕ್ಷೆಯನ್ನು ನೀಡದೇ ಇವರ ಜೋಳಿಗೆಯನ್ನು ಹಿಡಿದು ಎಳೆದಾಗ ಶಿವಯೋಗ ದ ಶಕ್ತಿ ಪುಂಜವಾದ ಹಾಲಯ್ಯನವರ ದೇಹಕ್ಕೆ ಮುಳ್ಳು ಚುಚ್ಚ್ಚಿದಂತಾಗಿ ತಕ್ಷಣವೇ ಆ ಜೋಳಿಗೆಯನ್ನು ಅಲ್ಲಿಯೇ ಬಿಟ್ಟು ಕೊಸರಿ ಹೋಗುವಲ್ಲಿ ಮಾಯಾ ಕೋಲಾಹಲವನ್ನು ಮೆಟ್ಟಿದ ಅಲ್ಲಮನಾದರು.

*शान्ति की इच्छा होतो पेहेले इच्छा को शन्त करो।

” ಶಾಂತಿ ಬೇಕು ಅನ್ನುವುದಾದರೆ ಮೊದಲು ಬಯಕೆಗಳನ್ನು ಶಂತಮಾಡು” ಎನ್ನುವ ಅನುಭಾವದ ನುಡಿಯಂತೆ ಕುಮಾರ ಶ್ರೀಗಳು ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಎಂದು ವೈಚಾರಿಕವಾಗಿ ನಡೆಯದೇ ಅದನ್ನ ರೂಢಿಸಿಕೊಂಡು ಬದುಕಿದವರು.ಪ್ರಸಾದಕ್ಕೆ ಕುಳಿತಾಗ ರುಚಿಯಾದ ಆಹಾರ ಮುಟ್ಟಲಿಲ್ಲ,ಸೇವಕರು  ರುಚಿಯಾದ ಆಹಾರ ನೀಡಿದರೆ ದೇಹಕ್ಕೆ ಅತಿ ರುಚಿಯಾದ ಆಹಾರ ಸಲ್ಲ ಇದು ಹಾದಿಯನ್ನು ಬಿಟ್ಟು ಹೋಗುತ್ತದೆ ಎನ್ನುವ ತತ್ವ ವರಿತ ಶಿವಯೋಗಿಗಳು ಅದಕ್ಕೆ ಪಾದೊದಕವನ್ನು ಬೆರೆಸಿ ಸ್ವೀಕರಿಸಿದ ಮಹಾ ಸಾತ್ವಿಕ ಸಂತರು.

*”ಜನ ಸೇವೆಯೆ ಜನಾರ್ದನ ಸೇವೆ” ಎನ್ನುವ ತತ್ವ ಅನುಭಾವಿಸಿಕೊಂಡ ಮಹಾನುಭವಿ ಶ್ರೀಗಳು ಕುಮಾರರು.ಹಾನಗಲ್ ಮಠಕ್ಕೆ ಅಧಿಕಾರಿಗಳಾಗಿ ಕೆಲವೇ ವರ್ಷದಲ್ಲಿ ಆ ಭಾಗದಲ್ಲಿ ಬರಗಾಲ ಬಂದು ಎಲ್ಲ ಜನಗಳು ಆಹಾರವಿಲ್ಲದೆ ಪರಿತಪಿಸುವಾಗ ಸ್ವತಃ ತಮ್ಮ ಮಠದ ಮೂಲಕ ದಾಸೋಹ ವ್ಯವಸ್ಥೆ ಕೈಗೊಂಡು ಪ್ರಸಾದ ನೀಡಿದವರು ಅಷ್ಟೇ ಅಲ್ಲದೆ ಮಠದ ಎಲ್ಲ ಧಾನ್ಯಗಳು ಖಾಲಿ ಆಗಿ ಪ್ರಸಾದಕ್ಕೆ ಕೊರತೆ ಬಂದಾಗ “ಹಿಡಿದ ವೃತವ ಬಿಡದಿರಬೇಕು”ಎನ್ನುವಂತೆ ತಮ್ಮ ಮಠದ ಒಂದು ಭಾಗವನ್ನೇ ಮಾರಾಟಮಾಡಿ ಬಂದ ಹಣದಿಂದ ದಾಸೋಹ ಮಾಡಿ “ಬರಗಾಲ ಬಂಟ” ನಾದವರು .

*”ಸಮಾಜವೇ ನಾನು ನಾನೇ ಸಮಾಜ”ಎನ್ನುವ ಸಿದ್ಧಾಂತಕೆ ಸಾಕ್ಷರು ಗುರುಗಳು. ಶ್ರೀಗಳ ಬಟ್ಟೆ ಹರಿದು ಅದಕ್ಕೆ ಅಲ್ಲಲ್ಲಿ ತ್ಯಾಪಿ ಹಾಕಿ ಹೊಲಿದ ಬಹಳ.ಜೀರ್ಣಗೊಂದ ಬಟ್ಟೆಯನ್ನು ನೋಡಿದ ಸೇವಕರು ಗುರುಗಳು ಇರಿಸಿದ ಕಾಣಿಕೆಯಲ್ಲಿ ಹೊಸದೊಂದು ಬಟ್ಟೆಯನ್ನು ತಂದು ಕೊಟ್ಟದ್ದನು ನೋಡಿ ಗುರುಗಳು ಸಂತಸ ವ್ಯಕ್ತಪಡಿಸುವರೆಂದು ಖುಷಿಯಲ್ಲಿ ಬಂದು ಮುಂದೆ ನಿಂತಾಗ ಗುರುಗಳು ಸಮಾಜದ ಹಣದಿಂದ ಇದನ್ನು ಹೋಲಿಸುವ ಅಧಿಕಾರ ನಿಮಗೆ ಯಾರು ನೀಡಿದವರು.ಸಮಾಜದ ಹಣ ಭಕ್ತರು ನನಗಾಗಿ ನನ್ನ ದಿನದ ಬದುಕನ್ನು ಸುಂದರಾಗೊಳಿಸಲು ನೀಡಿರುತ್ತಾರೆ ಏನು? ಅವರು ನೀಡಿದ ಪ್ರತಿ ಹಣವೂ ಸಹ ನ್ಯಾಯಯುತವಾದ ಸಮಾಜ ಸೇವೆಗೆ ಸಲ್ಲಬೇಕು ನಮಗೆ ಅಲ್ಲ ಸಮಾಜವೇ ಬಟ್ಟೆ ಗೆಟ್ಟು ಬೆಂಡಾಗಿದೆ ಅಂತಹದರಲ್ಲಿ ಈ ನನ್ನ  ದೇಹಕ್ಕೆ ಹೊಸಬಟ್ಟೆ ಧರಿಸಿದರೆ ಏನು ಅರ್ಥ ಎಂದು ಸೇವಕರನ್ನು ತೆಗಳಿ ಆ ಬಟ್ಟೆಗೆ ಖರ್ಚಾದ ಹಣವನ್ನು ತಿರುವವರೆಗೆ ನೀವು ಉಚಿತವಾಗಿ ಸೇವೆ ಮಾಡಿ ಎಂದು ಕಠೋರವಾಗಿ ನುಡಿದು ಸರಳತೆಯನ್ನು ಬದುಕಿನುದ್ದಕ್ಕೂ ಅಳವಡಿಸಿದ ಶ್ರೀಗಳು ಮಹಾನುಭಾವರು ಅಲ್ಲವೇ. ಪರರ ಹಿತದಲ್ಲಿ ತನ್ನ ಹಿತವನ್ನು ಕಾಣು ಎನ್ನುವ ಅನುಭಾವದ ನುಡಿಗೆ ಇವರು ಸಾಕ್ಷರಲ್ಲವೆ.?

*ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ

ವಿಶ್ವಾಸವೆಂಬ ಬತ್ತ ಬಲಿದು ಉಂಡು

ಸುಖಿಯಾಗಿರಬೇಕೆಂದ ಕಾಮ ಭೀಮ ಜೀವಧನದೊಡೆಯ.”

ಎನ್ನುವ ವಚನದಂತೆ

ಮತ್ತೊಬ್ಬರ ಅರಸೊತ್ತಿಗೆಯ ಗುಲಾಮರಾಗಿ ಬದುಕವುದಕ್ಕಿಂತಲೂ ಭೂಮಿಗೆ ಆಳಾಗಿ ದುಡಿದು ಬದುಕುವುದು ಶ್ರೇಷ್ಠ’ ಎನ್ನುವ ವಿಚಾರ ಧಾರೆಯನ್ನು ಇಟ್ಟುಕೊಂಡು ಹಾಗೂ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಕೃಷಿಗೆ ಪ್ರಾಧಾನ್ಯತೆಯನ್ನು ಪರಿಚಯಿಸಿ  ಕೊಟ್ಟವರು ಶರಣರಾದರೆ ಅದನ್ನು 20 ನೆ ಶತಮಾನದಲ್ಲಿ ರೂಢಿಗೆ ತರುವಲ್ಲಿ ಯಶಸ್ವಿಯಾದವರು ಕುಮಾರ ಶಿವಯೋಗಿಗಳು.

ಕುಮಾರ ಶ್ರೀಗಳ ಜೀವಿತ ಕಾಲದಲ್ಲಿ, ಶ್ರೀಗಳು ಕೈಗೊಂಡ ಹೊಸ ಹೊಸ ಕೃಷಿ ಕಾರ್ಯಗಳು ಅಚ್ಚರಿ ಮೂಡಿಸುತ್ತವೆ.ಇದೊಂದು ಕೃಷಿ ಕ್ರಾಂತಿ ಎಂದರೆ ತಪ್ಪಾಗಲಾರದು. ಏಕೆಂದರೆ ‘ ಕರ್ಷತೊ ನಾಸ್ತಿ ದುರ್ಭಿಕ್ಷಮ್’ ಎನ್ನುವಂತೆ  ನಾಡು ಸುಭಿಕ್ಷೆ ಇಂದಿರಲು ಕೃಷಿಯನ್ನು ಮಾಡಲೇ ಬೇಕು ಎಂದು ತಿಳಿದ ಶ್ರೀಗಳು, ‘ ಅನ್ನಾತ್ ಪ್ರಜಃ ‘ ಎನ್ನುವಂತೆ ಅನ್ನವೇ ಪ್ರತೀ ಜೀವಿಗಳಿಗೆ ಬದುಕಲು ಮೂಲ ಆಧಾರ,ಅದನ್ನು ಮರೆತರೆ ಮುಂದೊಂದು ದಿನ ನಾಡಲ್ಲಿ ತಿನ್ನಲು ಅನ್ನವಿಲ್ಲದೇ ಸಾಯುವ ಪರಿಸ್ಥಿತಿ ಎದುರಾಗಬಹುದು ಎಂದು ತಮ್ಮ ಸೂಕ್ಷ್ಮ ದೃಷ್ಟಿಯಿಂದ ಅರಿತ ಶ್ರೀಗಳು ವ್ಯವಸಾಯಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು.ನಾಡಲ್ಲಿ ಶಿವಾನುಭವ ಬೋಧೆಯನ್ನು ಮಾಡುತ್ತಾ ಜೊತೆಜೊತೆಗೆ ಸರಿಯಾದ ವ್ಯವಸಾಯ ಕ್ರಮ ತಿಳಿಯದೇ ಬೇಸತ್ತು ಕೃಷಿಯನ್ನು ಕೈ ಬಿಟ್ಟು ನಿರಾಶರಾದ ಜನರಲ್ಲಿ, ಕೃಷಿಯಬಗ್ಗೆ  ಅರಿವನ್ನು ಮೂಡಿಸಿ ಅದರ ಪ್ರಾಮುಖ್ಯತೆಯನ್ನು ತಿಳಿಸಿ,ಋತುಮಾನಕ್ಕೆ ಅನುಗುಣವಾಗಿ ಹೇಗೆ ಕೃಷಿ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದರು. “ಕೋಟಿವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು”ಎಂದರಿತ ಶ್ರೀಗಳು ಪ್ರಥಮವಾಗಿ ಕರ್ನಾಟಕದಲ್ಲಿ

ಕೃಷಿ ವಿಜ್ಞಾನವು ಕಾಲಿಟ್ಟಾಗ ಅದರ ಉಪಯೋಗವನ್ನು ಪಡೆದವರಲ್ಲಿ ಅಗ್ರ ಸ್ಥಾನ ನಮ್ಮ ಶ್ರೀಗಳಿಗೆ ಸಲ್ಲುತ್ತದೆ.

ಕೃಷಿ ವಿಜ್ಞಾನದ ಕಚೇರಿಯಿಂದ ಹೆಚ್ಚಿನ ಹಣವನ್ನು ತೆತ್ತು ಮೊದಲ ಬಾರಿಗೆ  ಟ್ರಾಕ್ಟರ್ ಅನ್ನು ತರಿಸಿ ಶಿವಯೋಗ ಮಂದಿರದಲ್ಲಿ ಊಳಿಸಿದರು.ನೂರಾರು ದನಕರುಗಳನ್ನು ಸಾಕಿ ಗೊಬ್ಬರವನ್ನು ಸಂಗ್ರಹಿಸಿ ಕಾಲ ಕಾಲಕ್ಕೆ ತಕ್ಕಂತೆ ಬೆಳೆಗಳಿಗೆ  ಗೊಬ್ಬರವನ್ನು ಕೊಡಿಸುತ್ತಿದ್ದರು. ಶಾಖಾ ಶಿವಯೋಗ ಮಂದಿರದಲ್ಲಿ ಮೊದಲ ಬಾರಿಗೆ ನೀರೆತ್ತುವ ಯಂತ್ರವನ್ನು ಖರೀದಿಸಿ ಅದರಿಂದ ನೀರೆತ್ತಿ ಕಬ್ಬನ್ನು ಬೆಳೆದರು.ಹಾಗೆ ಕ್ಯಾಸನೂರು ಗ್ರಾಮದಲ್ಲಿ ಶ್ರೀಗಳು 100 ಎಕ್ರೆ ಕ್ಷೇತ್ರದಲ್ಲಿ ಆಧುನಿಕ ಕೃಷಿ ಸಾಧನಗಳನ್ನು ಬಳಸಿ ವ್ಯವಸಾಯ ಮಾಡಿಸಿದರು. ಮಹಾಕೂಟದ ಹೊಲದಲ್ಲಿ ಅಲ್ಲಿಯ ನೀರಿನಿಂದ ಅಂದು ಬಾಳೆಯನ್ನು ಬೆಳೆದು ಸುತ್ತ ಎಲ್ಲ ಗ್ರಾಮದವರಿಗೆ ಕೃಷಿಯಲ್ಲಿ ಉತ್ತೇಜನ ನೀಡುತ್ತಿದ್ದರು.

ವ್ಯವಸಾಯದಲ್ಲಿ ಪರಿಣಿತ ಹೊಂದಿದ ತಜ್ಞರನ್ನು ಕರೆಸಿ ಸುತ್ತಮುತ್ತಲಿನ ಗ್ರಾಮದ ಕೃಷಿಕರಿಗೆ ಮಾಹಿತಿಯನ್ನು ಕೊಡಿಸುತ್ತಿದರು. ಕೃಷಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು.ಹೀಗೆ ಭಾರತೀಯ ಮೂಲ ಕಸುಬಾದ ಕೃಷಿಯನ್ನು ಎತ್ತಿ ಹಿಡಿಯಲು ಜನ ಜಾಗೃತಿ ಮೂಡಿಸಿದರು.ನೋಡಿ ಒಬ್ಬ ಸ್ವಾಮಿಯಾದವರು ಧರ್ಮಜಾಗೃತಿಯೊಂದಿಗೆ,ಸಮಾಜದ ಪ್ರತಿಯೊಬ್ಬರನ್ನೂ ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಹೇಗೆ ಸ್ವತಃ  ಶ್ರಮಿಸಿದರು ಎಂಬುದು ಶ್ರೀಗಳು ಕೇವಲ ಲಿಂಗ ಪೂಜೆಯನ್ನು ಮಾಡುತ್ತಾ ಅಧ್ಯಾತ್ಮವನ್ನು ಮಾತ್ರ ಬೋಧಿಸದೆ ಮಾನವನು ಬದುಕಲು ಬೇಕಾದ ಮಾರ್ಗಗಳನ್ನು ರೂಪಿಸುವಲ್ಲಿ ತಮ್ಮ ಅನುಭಾವವನ್ನು ತೋರಿಸಿಕೊಟ್ಟವರು.

*ದಯವಿಲ್ಲದ ಧರ್ಮ ಯಾವುದು”ಎನ್ನುವ ತತ್ವವನ್ನು ಮೈಗೂಡಿಸಿಕೊಂಡಿದ್ದ ಶ್ರೀಗಳು ಪ್ರಾಣಿ ಬಲಿ ಕೊಡುವಲ್ಲಿ ಸ್ವತಃ ತಾವೇ ಹೋಗಿ ತಿಳಿ ಹೇಳಿ ಧರ್ಮ ಮಾರ್ಗದತ್ತ ನಡೆಸಿದ್ದು.ಹಿಂದೂ ಧರ್ಮದ ದೇವತಾ ಸ್ವರೂಪಿಯಾದಂತಹ ಗೋವುಗಳನ್ನು ಸಾಕಿ ಅವುಗಳ ಸೇವೆಯಲ್ಲಿ ಪಾತ್ರರಾಗಿ,ಅವುಗಳಿಂದ ಬಂದ ಗೋಮಯದಿಂದ ವೀರಶೈವ ಧರ್ಮದ ಲಾಂಛನವಾದ ಭಸ್ಮವನ್ನು ಆಗಮ ವಿಧಿ ಪೂರ್ವಕ ತಯಾರಿಸಿ ವಿತರಿಸಿದ್ದು. ಜಗದಗಲ ಮುಗಿಲಗಳ ಮಿಗೆಯಗಳ  ಆದ ವೀರಶೈವ ಲಿಂಗಾಯತರ ಭವ ಪ್ರಪಂಚವನ್ನು ನೀಗಿ ಶಿವ ಪ್ರಪಂಚವನ್ನು ಕಲ್ಪಿಸುವುದು ಈ ಇಷ್ಟಲಿಂಗವು.ಇದರ ನಿರ್ಮಾಣ ಪದ್ಧತಿಯಂತೆ ಆಗದಿದ್ದಾಗ ಅದನ್ನು ಸೂಕ್ಷ್ಮವಾಗಿ ಅವಲೋಕಿಸಿದ ಶ್ರೀಗಳು ಆಗಮನುಸಾರ  ಪಂಚ ಸೂತ್ರಲಿಂಗಗಳನ್ನು ವಿಧಿ ಪೂರ್ವಕವಾಗಿ ತಯಾರಿಸಿ ಸಮಾಜಕ್ಕೆ ನೀಡಿದವರು. ಹೀಗೆ ಅಸ್ಟಾವರಣಕ್ಕೆ ಅಂಗವಾಗಿ ಪಂಚಾಚರಕ್ಕೆ ಪ್ರಾಣವಾಗಿ ಷಟಸ್ಥಲಕ್ಕೆ ಆತ್ಮವಾಗಿ ಬದುಕಿ ಆ ಅನುಭಾವವನ್ನು ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಗೂ ನಮಗೆ ನೀಡಿದವರು  ಶ್ರೀ ಕುಮಾರ ಶ್ರೀಗಳು.

*ಇವರ ಆಚರಣೆ ಎಂತಹ ಕಠೋರವಾಗಿತ್ತು ಎಂದರೇ ಉಸಿರಿರುವ ಕೊನೆಯವರೆಗೂ  “प्राण जाए पर वचन न जाई” ಎನ್ನುವ ಸಿದ್ಧಾಂತವನ್ನು ಅನುಭವಿಸಿಕೊಂಡು ಬದುಕಿದವರು.

ಅಂತಿಮಾವಸ್ತೆಯಲ್ಲಿ ಸಮಾಜ ಸಮಾಜ ಎಂದು ಉಸಿರು ಬಿಡುವ ಪ್ರಸಂಗದಲ್ಲಿ ಎಲ್ಲರನ್ನೂ ಕರೆದು ‘ ಹೊರಗಿನ ಕ್ರಿಯೆ ಕೆಟ್ಟರೆ ಅದು ನಿಮ್ಮ ದೋಷ.ಒಳಗಿನ ಧ್ಯಾನ ಕೆಟ್ಟರೆ ಅದು ನಮ್ಮ ಲೋಪ ಹಾಗಾಗಕೂಡದು ಎಚ್ಚರದಿಂದ ಮುಂದಿನ ಕಾರ್ಯ ನಡೆಸಿರಿ ಸಮಾಜವೇ ನಮ್ಮ ಉಸಿರು,ಮತ್ತೆ ಸಮಾಜೋದ್ಧರಕ್ಕಾಗಿ ನಾವು ಪುನಃ ಜನಿಸುತ್ತವೆ’ ಎಂದು ಹೇಳಿ ಲಿಂಗದಲ್ಲಿ ಬೆರೆಯುತ್ತಾರೆ.

ಈ ಒಂದು ಪ್ರಸಂಗ ಅವರ ಸಮಗ್ರ ಜೀವನದ ಬದುಕಿನ ಸಾರವನ್ನೆ ಎತ್ತಿ ಹಿಡಿದು ಅವರು ಎಂತಹ ಅನುಭಾವಿಗಳು ಆಗಿದ್ದರು ಎನ್ನುವುದನ್ನು ಅವರನ್ನು ಕಾಣದ,ಅವರ ಬಗ್ಗೆ ತಿಳಿಯದ ಹಲವಾರು ಜನಗಳಿಗೆ ಮಾದರಿ.

ಕೆರೆ ಹಳ್ಳಗಳು ಗುಳ್ಳೆ ಗೋರಚೆ ಚಿಪ್ಪುಗಳನ್ನು ನೀಡಿದರೆ,ಸಮುದ್ರ ಸಾಗರಗಳು ಮುತ್ತು ರತ್ನಗಳನ್ನು ನೀಡಿದರೆ

ಒಬ್ಬ ಶಿವಯೋಗಿ ಸಮಗ್ರ ಮನುಕುಲಕ್ಕೆ ಇತಿಹಾಸವನ್ನೇ ನೀಡುತ್ತಾನೆ ಎನ್ನುವುದಕ್ಕೆ ಸಾಕ್ಷಿ ಭೂತರು, ಅನುಭಾವದ ಕಡಲು ನಮ್ಮ ಕುಮಾರ ಶಿವಯೋಗಿಗಳು.

ಸಮಾಜಕ್ಕಾಗಿ ಸೇವೆ ಸಲ್ಲಿಸಿದ ತನ್ನ ತನುವ

ಶಿವಯೋಗಕ್ಕ ಮೀಸಲಿಟ್ಟ ತನ್ನ ಮನವ

ಧರ್ಮ ಸಂಸ್ಕೃತಿಗೆ ಮೀಸಲಿರಿಸಿದವ ತನ್ನ ಧನವ

ಇವನೇ ನಮ್ಮ ಯುಗಪುರುಷ ಕುಮಾರ ಶಿವಯೋಗಿ ಎಂಬ ಮಹಾನುಭಾವ.

ಅನುಭಾವದಿಂದ ಹುಟ್ಟಿತ್ತು ಲಿಂಗ

ಅನುಭಾವದಿಂದ ಹುಟ್ಟಿತು ಜಂಗಮ

ಅನುಭಾವದಿಂದ ಹುಟ್ಟಿತ್ತು ಪ್ರಸಾದ

ಅನುಭಾವದನುವಿನಲ್ಲಿ ಗುಹೇಶ್ವರ

ನಿಮ್ಮ ಶರಣ ಅನುಪಮಾಸುಖಿ..

ಡಾ|| ಬಿ. ನಂಜುಂಡಸ್ವಾಮಿ

ಪಂಡಿತ ತಾರಾನಾಥ್ ಆಯುರ್ವೇದ ಚಿಕಿತ್ಸಾಲಯ

ತುಮಕೂರು ಷಾಪಿಂಗ್ ಕಾಂಪ್ಲೆಕ್ಸ್

ಬಿ.ಹೆಚ್. ರಸ್ತೆ, ತುಮಕೂರು-572102.

ವಚನ ಸಾಹಿತ್ಯದ ಪ್ರಕಟಣೆ : ಪ್ರಥಮ ಘಟ್ಟ

            ವಚನ ಸಾಹಿತ್ಯ ಪ್ರಕಟಣೆ ಇತಿಹಾÀಸದ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕು. ನಮಗೆ ಗೊತ್ತಿರುವಂತ  ವಚನ ಸಾಹಿತ್ಯದ ಪ್ರಥಮ ಪ್ರಕಟಣೆ 1882ರಲ್ಲಿ `ಅಖಂಡೇಶ್ವರ ವಚನ’ ಪ್ರಕಟಿಸಿದವರು ಧಾರವಾಡದ ಬಸಪ್ಪ ಅಣ್ಣಾ ಜವಳಿ. ಬಸವಣ್ಣನವರ ಷಟ್‍ಸ್ಥಲ ವಚನದ ಪ್ರಥಮ ಪ್ರಕಟಣೆ 1886 ಮಾರ್ಚಿ ತಿಂಗಳು ಸಂಪಾದಕರು ಮರಿಶಂಕರದೇವರು ಬಳ್ಳಾರಿ ಪುಸ್ತಕ ವ್ಯಾಪಾರಿ ಮ.ರಾ.ಎನ್. ಕೋನೇರು ಶೆಟ್ಟರು. ಈ ಕಾಲಮಾನದಲ್ಲಿ ಇನ್ನು ಕೆಲವು ಪುಸ್ತಕಗಳು ಮುದ್ರಣವಾಗಿವೆ. ಈ ಆರಂಭ ಕಾಲದ ವಚನ ಸಾಹಿತ್ಯದ ಬಗ್ಗೆ ವಿವರವಾಗಿ ಅಧ್ಯಯನ ಮಾಡಬೇಕು.

            1.          ಅಖಂಡೇಶ್ವರ ವಚನ 1882

            2.          ಶಿಖಾರತ್ನ ಪ್ರಕಾಶವು 1883

            3.          ಸಿದ್ಧೇಶ್ವರ ವಚನವು 1885

                        ತೋಂಟದ ಸಿದ್ಧಲಿಂಗೇಶ್ವರ ವಚನಗಳ ಸಂಕಲನ 697 ವಚನ ಇದೆ

                        701 ವಚನ ಇರಬೇಕು

            4.         ನಿಃಕಲರ ವಚನವು 1885

            5.          ಬಸವಣ್ಣನವರ ವಚನಗಳು (1886)

            6.          ಅಖಂಡೇಶ್ವರ ವಚನವು (ಸಟೀಕಾ – 1887)

            7.          ಅಖಂಡೇಶ್ವರ ವಚನಶಾಸ್ತ್ರವು 1890

            8.          ಅಂಬಿಗರ ಚೌಡಯ್ಯನೆಂಬ ಶಿವಯೋಗಿಯಿಂದ ವಿರಚಿಸಲ್ಪಟ್ಟ

                        ಅಂಬಿಗರ ಚೌಡಯ್ಯನ ವಚನ ಶಾಸ್ತ್ರವು 1905

            9.          ಘನಲಿಂಗಿದೇವರು ನಿರೂಪಿಸಿದ ಕನ್ನಡ ವೀರಶೈವ ಸಿದ್ಧಾಂತ ವಚನವು (1907)

            10.        ಸಟೀಕಾ ಗಣಭಾಷ್ಯ ರತ್ನಮಾಲೆ (1909) ನಂ. ಶಿವಪ್ಪಶಾಸ್ತ್ರಿಗಳು

            11.         ಅಖಂಡೇಶ್ವರ ವಚನಶಾಸ್ತ್ರವು (ನಾಲ್ಕನೇ ಮುದ್ರಣ) 1911

            12.         ಚೆನ್ನಬಸವಣ್ಣನವರ ವಚನಗಳು-1914

            13.         ಅಂಬಿಗರ ಚೌಡಯ್ಯನಿಂದ ವಿರಚಿತವಾದ ಅಂಬಿಗರ ಚೌಡಯ್ಯನ ವಚನಶಾಸ್ತ್ರವು      1924

            14.        ಅಖಂಡೇಶ್ವರ ವಚನಶಾಸ್ತ್ರವು 1917

            15.         ಬಸವಣ್ಣನವರ ವಚನವು 1923

ರಾ. ನರಸಿಂಹಾಚಾರ್ಯ

            ಕರ್ನಾಟಕ ಕವಿಚರಿತೆ ಭಾಗ-1 1907, ದ್ವಿತೀಯ ಮುದ್ರಣ 1924 ಭಾಗ-2, 1919 ಭಾಗ-3 1929 ಈ ಮೂರು ಪುಸ್ತಕಗಳ ರಚನೆಯಲ್ಲಿ ಅನೇಕ ವಚನಗಾರರ ಪರಿಚಯ ಅವರು ರಚಿಸಿದ ವಚನಗಳ ಉಲ್ಲೇಖದಿಂದ ವಚನ ಸಾಹಿತ್ಯದ ವಿಸ್ತಾರ ವಿಪುಲ ವಚನಗಾರರ ಮತ್ತು ವಚನಕಾರ್ತಿಯರ ಪರಿಚಯವಾಯಿತು.

            ಬೆಂಗಳೂರು ಗುಬ್ಬಿ ತೋಟದಪ್ಪನವರ ಛತ್ರದಲ್ಲಿ ಚಿತ್ರದುರ್ಗ ಶ್ರೀ ಜಯದೇವ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಚನ ಸಾಹಿತ್ಯದ ಸೇವೆ ಸುಮಾರು 1910ರಲ್ಲಿ ಉಪನ್ಯಾಸ ಮಾಡಿದ್ದನ್ನು ಡಿ.ವಿ.ಜಿ ದಾಖಲಿಸಿದ್ದಾರೆ. ವಚನ ಸಾಹಿತ್ಯ ಸಂಪಾದನೆಗೆ ಕವಿಚರಿತೆಗಾರರ ಕೊಡುಗೆ ಕುರಿತು ವಿಶೇಷವಾದ ಅಧ್ಯಯನವಾಗಬೇಕು.

ವಚನ ಸಾಹಿತ್ಯ ಸಂಪಾದನೆಯಲ್ಲಿ

ಡಾ. ಫ.ಗು. ಹಳಕಟ್ಟಿ

            ಡಾ. ಫ.ಗು. ಹಳಕಟ್ಟಿಯವರ ಸಂಸ್ಮರಣ ಗ್ರಂಥದಲ್ಲಿ ಹಳಕಟ್ಟಿಯವರ ಕೃತಿಸೂಚಿ ಲೇಖಕಸೂಚಿ ಪ್ರಕಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ 1967ರಲ್ಲಿ ಪ್ರಕಟವಾದ ಲೇಖಸೂಚಿ (ಜೀವನ, ಜಯಕರ್ನಾಟಕ ಮತ್ತು ಶಿವಾನುಭವ) ಪ್ರಕಟವಾಗಿದ್ದು ಇದನ್ನು ಸಿದ್ಧಪಡಿಸಿದವರು ಎಂ.ಆರ್. ಸಣ್ಣರಾಮೇಗೌಡರವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ 1973ರಲ್ಲಿ ಟಿ.ವಿ. ವೆಂಕಟರಮಣಯ್ಯನವರಿಂದ ಸಂಕಲನಗೊಂಡ ಕನ್ನಡ ಭಾಷಾ ಸಾಹಿತ್ಯ ಲೇಖನ ಸೂಚಿ ಪ್ರಕಟವಾಗಿದ್ದು ಇವರಲ್ಲಿ ಶಿವಾನುಭವ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಸೂಚಿಯನ್ನು ಒಳಗೊಂಡಿದೆ. ಬೆಂಗಳೂರಿನ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದಿಂದ ಪ್ರಕಟವಾದ ಮಣಿಹ (1982) ವಿಶೇಷ ಸ್ಮರಣ ಸಂಪುಟ ದಿ|| ಪೂಜ್ಯ ಡಾ.ಫ.ಗು. ಹಳಕಟ್ಟಿ ಜನ್ಮಶತಮಾನೋತ್ಸವದ ಸಂಸ್ಮರಣ ಸಂಪುಟದಲ್ಲಿ ಡಾ. ಫ.ಗು. ಹಳಕಟ್ಟಿಯವರ ವಾಙ್ಮಯ ಸೂಚಿ ಪ್ರಕಟವಾಗಿದ್ದು ಇದನ್ನು ಸಿದ್ಧಪಡಿಸಿದವರು ಡಾ. ಎಸ್.ಆರ್. ಗುಂಜಾಳ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ಬರೆದ `ವಚನ ಗುಮ್ಮಟ’ ಫ.ಗು. ಹಳಕಟ್ಟಿ ಪುಸ್ತಕ 1998 ರಲ್ಲಿ ಪ್ರಕಟವಾಗಿದ್ದು ಪುಸ್ತಕದ ಅನುಬಂಧದಲ್ಲಿ ಹಿರಿಯ ಹಸ್ತಪ್ರತಿ ವಿದ್ವಾಂಸರು, ಆಕರ ವಿಜ್ಞಾನಿಗಳು ಆದ ಎಸ್. ಶಿವಣ್ಣನವರು ಹಳಕಟ್ಟಿ ಅವರ ಜೀವನದ ಕೆಲವು ಮುಖ್ಯ ಘಟ್ಟಗಳು ಕುಟುಂಬ ವರ್ಗ, ಶಿವಾನುಭವದಲ್ಲಿ ಹಳಕಟ್ಟಿಯವರ ಪ್ರಕಟಿತ ಲೇಖನಗಳು ಶಿವಾನುಭವದಲ್ಲಿ ಪ್ರಕಟವಾದ ಕೃತಿಸೂಚಿ, ಹಳಕಟ್ಟಿಯವರ ಅಧ್ಯಕ್ಷ ಭಾಷಣಗಳು ಹಳಕಟ್ಟಿಯವರ ಬಾನುಲಿ ಭಾಷಣ. ಹಳಕಟ್ಟಿಯವರಿಗೆ ಅರ್ಪಿಸಿದ ಮಾನಪತ್ರಗಳು ಡಾ. ಫ.ಗು. ಹಳಕಟ್ಟಿಯವರನ್ನು ಕುರಿತ ಪುಸ್ತಕಗಳು, ಡಾ. ಫ.ಗು. ಹಳಕಟ್ಟಿ ಕುರಿತ ಲೇಖನಗಳು ಸೂಚಿ ಪ್ರಕಟಿಸಿ, ಮುಂದಿನ ಯುವ ಸಂಶೋಧಕರಿಗೆ ಬಹಳ ಉಪಕಾರ ಮಾಡಿದ್ದಾರೆ. ಲಿಂ|| ಡಾ. ಫ.ಗು. ಹಳಕಟ್ಟಿಯವರು ಸಂಪಾದಿಸಿದ ವಚನ ಸಾಹಿತ್ಯ ಬಹಳ ವಿಸ್ತಾರವಾದದ್ದು.

ಬಸವೇಶ್ವರರ ವಚನಗಳು

            ಡಾ. ಫ.ಗು. ಹಳಕಟ್ಟಿಯವರು ತಮ್ಮ ಶಿವಾನುಭವ ಮೊದಲ ಸಂಚಿಕೆಯಲ್ಲಿ ಮತ್ತು ದ್ವಿತೀಯ ಸಂಚಿಕೆಯಲ್ಲಿ ಬಸವೇಶ್ವರರ ಷಟ್ಥ ್ಸಲ ವಚನವನ್ನು ಪ್ರಕಟಿಸಿ 1926ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಎರಡನೇ ಆವೃತ್ತಿ 1930ರಲ್ಲಿ ಮೂರು ಹಸ್ತಪ್ರತಿಗಳ ಸಹಾಯದಿಂದ ಮುದ್ರಿಸಿದ್ದಾರೆ. ಮೂರನೇ ಆವೃತ್ತಿ 1934ರಲ್ಲಿ ಬಂದಿದೆ. 1940ರಲ್ಲಿ ನಾಲ್ಕನೇ ಆವೃತ್ತಿ ಹೊರತಂದಿದ್ದಾರೆ. ಈ ಪ್ರಕಟಣೆಗೆ ಇನ್ನು ಎರಡು ಹಸ್ತಪ್ರತಿಗಳನ್ನು ಬಳಸಿದ್ದಾರೆ. ಸಂಸ್ಕøತ ಶ್ಲೋಕಗಳನ್ನು ಈ ಆವೃತ್ತಿಯಲ್ಲಿ ತಿದ್ದಿದವರು ಬಾಗಲಕೋಟೆ ಸಂಸ್ಕøತ ಪಾಠಶಾಲೆಯ ಕಲಿಗಣನಾಥಶಾಸ್ತ್ರಿಗಳು. ಈ ಆವೃತ್ತಿಯಲ್ಲಿ ಬಾಗೇವಾಡಿ ಬಸವೇಶ್ವರ ದೇವಾಲಯದ ಎರಡು ಚಿತ್ರಗಳು, ಟಿಪ್ಪಣಿಗಳು ಅರ್ಜುನವಾಡದ ಶಿಲಾಲೇಖ, ಶಿಲಾಶಾಸನದ ಭಾಷಾಂತರ ಕಠಿಣ ಶಬ್ದಗಳ ಅರ್ಥವನ್ನು ಕೊಟ್ಟಿದ್ದಾರೆ. ಡಾ. ಫ.ಗು. ಹಳಕಟ್ಟಿಯವರ ಆವೃತ್ತಿಯೇ ಮುಂದೆ ಪ್ರೊ. ಶಿ.ಶಿ. ಬಸವನಾಳರಿಗೆ ಹೆಚ್ಚಿನ ಸಂಸ್ಮರಣೆ ಮಾಡಲು ಪ್ರೇರಣೆಯನ್ನಿತ್ತಿದೆ ಎಂದು ಡಾ. ಎಸ್.ಆರ್. ಗುಂಜಾಳರವರು ಅಭಿಪ್ರಾಯಪಟ್ಟಿದ್ದಾರೆ.

ಸಟೀಕ ಬಸವೇಶ್ವರನ ವಚನಗಳು

            ಹಳಕಟ್ಟಿಯವರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಶಿವಾನುಭವ ಸಂಪುಟ 27 ಸಂಚಿಕೆ 3, 5, 7, 9, 10ರಲ್ಲಿ 92 ವಚನಗಳ ಟೀಕೆಯನ್ನು ಪ್ರಕಟಿಸಿದ್ದಾರೆ. ಬಸವಣ್ಣನವರ ವಚನ ಸಟೀಕವಾದ ಹಸ್ತಪ್ರತಿ ದೊರೆತ ಬಗ್ಗೆ ಬಸವೇಶ್ವರನ ವಚನಗಳು ಮುನ್ನುಡಿಯಲ್ಲಿ ಈ ಮಾಹಿತಿ ನೀಡಿದ್ದಾರೆ.  “ಈ ಎರಡನೇ ಆವೃತ್ತಿಯು ಮೂರು ಕೈಬರಹದ ಗ್ರಂಥಗಳ ಸಹಾಯದಿಂದ ಸಿದ್ಧಗೊಳಿಸಿಲ್ಪಟ್ಟಿದೆ. ಇವುಗಳಲ್ಲಿ ಎರಡು ಗ್ರಂಥಗಳು ಶ್ರೀ ಶಿವಯೋಗಮಂದಿರದಿಂದ ದೊರಕಿದವುಗಳು. ಮೂರನೆಯ ಪ್ರತಿಯು ಶ್ರೀ ಶಿವಬಸವ ಸ್ವಾಮಿಗಳು ಹುಕ್ಕೇರಿಮಠ ಮುಕ್ಕಾಮ ಹಾವೇರಿ ಇವರದು ಇರುತ್ತದೆ. ಈ ಪ್ರತಿಯು ಟೀಕೆಯುಳ್ಳದಿದ್ದು ಇದರಿಂದ ಶುದ್ಧಪಾಠಗಳನ್ನು  ಕಂಡುಹಿಡಿಯಲು ನಮಗೆ ಬಹಳ ಅನುಕೂಲವಾಯಿತು ಎಂದಿದ್ದಾರೆ. ದೊರೆತ ಟೀಕಾಪ್ರತಿಯಿಂದ ಈ ಟೀಕೆ ಸಿದ್ಧಪಡಿಸಿರಬೇಕು. ಮೂಲಹಸ್ತಪ್ರತಿ ದೊರೆತರೆ ನಿರ್ಧರಿಸುವುದು ಸುಲಭ. ದೊರೆತ ಪ್ರಾಚೀನ ಟೀಕೆಯನ್ನು ಸ್ವಲ್ಪ ಹೊಸಗನ್ನಡ ಭಾಷೆಯಿಂದ ಸರಿಪಡಿಸಿರಬಹುದು. ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ಹೊಸಪದ್ಧತಿಯ ಬಸವಣ್ಣನವರ ವಚನಗಳು

            ಬಸವಣ್ಣನವರ ವಚನಗಳನ್ನು `ಷಟ್ಸ್ ್ಥಲವಚನಗಳನ್ನಾಗಿ’ ಸಂಕಲಿಸಿದವನು ಕನಕಪುರವರಾಧೀಶ್ವರ ಎಂಬ ಸುಳುಹು ಚಿತ್ರದುರ್ಗ ಬೃಹನ್‍ಮಠದ ಸರಸ್ವತಿ ಭಂಡಾರದಲ್ಲಿ ಇರುವ 693/1 ರ ಹಸ್ತಪ್ರತಿಯಲ್ಲಿ ಬಸವಣ್ಣನವರ ವಚನಗಳ್ನು ಸಂಕಲಿಸಿದ್ದು ಆ ಬಗ್ಗೆ ಸ್ಪಷ್ಟವಾದ ಮಾಹಿತಿ ಈ ಹಸ್ತಪ್ರತಿಯಲ್ಲಿ ಇದೆ. ಹಳಕಟ್ಟಿಯವರು ಹೊಸಪದ್ಧತಿ ವಚನವನ್ನು ಎಲ್ಲಾ ಧರ್ಮೀಯರಿಗೂ ಆಕರ್ಷಣೆಯಾಗುವಂತೆ ಹೊಸ ದೃಷ್ಟಿಕೋನದಿಂದ ವಿಭಾಗಿಸಿ `ಹೊಸ ಪದ್ಧತಿಯ ಬಸವೇಶ್ವರನ ವಚನಗಳು ಎಂಬ ಗ್ರಂಥವನ್ನ 1942ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಿಸಿದರು. ವಚನಗಳ ಆಯ್ಕೆ ಮತ್ತು ಜೋಡಣೆಯಲ್ಲಿ ವ್ಯತ್ಯಾಸಗೊಳಿಸಿದರು. 1950 ರಲ್ಲಿ ಒಂದು ಆವೃತ್ತಿ ಬಂದಿದೆ. 1999ರಲ್ಲಿ ಗದಗಿನ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪೀಠಾರೋಹಣ ರಜತ ಸಂಪುಟದ 15ನೇ ಕುಸುಮವಾಗಿ ಮುದ್ರಣವಾಗಿದೆ. 2008 ರಲ್ಲಿ ಪ್ರಕಟವಾದ ಫ.ಗು. ಹಳಕಟ್ಟಿಯವರ ಸಮಗ್ರ ಸಂಪುಟ-1 ರಲ್ಲಿ ಪ್ರಕಟವಾಗಿದೆ.

ಪ್ರಭುದೇವರ ವಚನಗಳು

            ಮಹಾಲಿಂಗದೇವರು ಪ್ರಭುದೇವರ ಷಟ್‍ಸ್ಥಲ ವಚನಗಳನ್ನು ಸಂಕಲಿಸಿ ಅವಕ್ಕೆ ವ್ಯಾಖ್ಯಾನ ಬರೆದವರು. ಈ ಸಂಕಲನ ಆರಂಭಿಕ ಗದ್ಯದಿಂದ ಗುರು ಶಿಷ್ಯ ಸಂಬಂಧವನ್ನು ಈ ರೀತಿ ಗುರುತಿಸಬಹುದು. ಮಹಾಲಿಂಗದೇವ-ಕುಮಾರ ಬಂಕನಾಥದೇವರು-ಭಕ್ತಿಭಂಡಾರಿ ಜಕ್ಕಣ್ಣ ಕೃತಿಯ ಪ್ರಾರಂಭದಲ್ಲಿ ಪ್ರಭುದೇವರ ತಿಂಡಿ ಸಂಭವ ಗದ್ಯವಿದೆ. ಹಳಕಟ್ಟಿಯವರು ನಾಲ್ಕು ಹಸ್ತಪ್ರತಿಗಳಿಂದ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯ ಮುದ್ರಣ ಸಮಯದಲ್ಲಿ ಡಾ. ಎಸ್.ಸಿ. ನಂದೀಮಠ ಬಿಜಾಪುರದಲ್ಲಿ ಕೆಲವು ದಿವಸ ನಿಂತು ಗ್ರಂಥದ ಬಹುಭಾಗವನ್ನು ಬರೆಯಿಸಿ ತಿದ್ದಿ ಅಚ್ಚಿಗೆ ಸಿದ್ಧಗೊಳಿಸಿದರು. ಈ ಗ್ರಂಥದ ಮುದ್ರಣಕ್ಕೆ ಹುಬ್ಬಳ್ಳಿಯ ಮೂರುಸಾವಿರಮಠದ ಅಂದಿನ ಮಠಾಧೀಶರಾಗಿದ್ದ ಶ್ರೀಮಜ್ಜಗದ್ಗುರು ಶ್ರೀಗುರುಸಿದ್ಧರಾಜ ದೇಶಿಕೇಂದ್ರ ಮಹಾಸ್ವಾಮಿಗಳು 500 ರೂ ಧನಸಹಾಯ ಮಾಡಿದ್ದಾರೆ. 1931ರಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ 694 ವಚನಗಳು ಟೀಕಾ ಸಮೇತ ಮುದ್ರಣವಾಗಿವೆ.

ಚನ್ನಬಸವೇಶ್ವರ ವಚನಗಳು

            ಶಿವಾನುಭವ ಗ್ರಂಥಮಾಲೆಯ 32ನೆಯ ಪುಷ್ಪವಾಗಿ 1932ರಲ್ಲಿ ಪ್ರಕಟವಾದ ಚನ್ನಬಸವೇಶ್ವರನ ವಚನಗಳು ಗ್ರಂಥದ ಕಡೆಯಲ್ಲಿ “ಇಂತು ಷಟ್‍ಸ್ಥಲಕ್ಕೆ ಸೇರಿದ ವಚನ 319 ಕ್ಕೂ ಗ್ರಂಥ 90ಕ್ಕಂ ಮಂಗಳ ಮಹಾಶ್ರೀ” ಇಂತಿ ಚನ್ನಬಸವೇಶ್ವರ ದೇವರು ನಿರೂಪಿಸಿದ ಅನುಭಾವದ ವಚನ. ಈ ಸಮಾಪ್ತಿ ವಾಖ್ಯದ ನಂತರ ಚನ್ನಬಸವೇಶ್ವರ ದೇವರು ನಿರೂಪಿಸಿದ ಅನುಭಾವದ ವಚನವಿದೆ. ಕಡೆಯಲ್ಲಿ ಸ್ವರವಚನ ಇದ್ದು, ಈ ಸ್ವರವಚನದಲ್ಲಿ ಸಂಕಲನಗಾರ ಅನುಭಾವಿ ರಚಿಸಿರಬಹುದು. ಈ ಕೃತಿ ಧಾರವಾಡ ಸಮಾಜ ಪುಸ್ತಕಾಲಯದಿಂದ 1966ರಲ್ಲಿ ಮರುಮುದ್ರಣವಾಗಿದೆ. ಗದಗಿನ ವೀರಶೈವ ಅಧ್ಯಯನ ಸಂಸ್ಥೆಯಿಂದ 1990ರಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಂದ ಸಂಪಾದನೆಗೊಂಡ ಚನ್ನಬಸವಣ್ಣನವರ ಷಟ್ಸ್ ್ಥಲವಚನ ಮಹಾಸಂಪುಟದಲ್ಲಿ (266-414) ಮುದ್ರಣವಾಗಿದೆ. ಇಲ್ಲಿ 322 ವಚನಗಳಿವೆ. ಹಳಕಟ್ಟಿಯವರಿಗೆ ಈ ಪುಸ್ತಕ ವಿಜಾಪುರದ ಶಿ.ಮೂ. ಸೊಪ್ಪಯ್ಯನವರ ಮಠದಲ್ಲಿ ದೊರೆತದ್ದು ಮತ್ತೊಂದು ಗೋಕಾನಿಯಿಂದ ಡಾ. ಎಸ್.ಸಿ. ನಂದೀಮಠ ಅವರು ಕಳುಹಿಸಿ ಕೊಟ್ಟಿದ್ದು. ಈ ಪುಸ್ತಕಕ್ಕೆ ದ್ರವ್ಯ ಸಹಾಯ ಮಾಡಿದವರು ಹುಬ್ಬಳ್ಳಿಯ ರಾ.ರಾ. ವಿರೂಪಾಕ್ಷಪ್ಪ ಶಿವಲಿಂಗಪ್ಪ ಪಾವಟೆ.

ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ

            1930ರಲ್ಲಿ ಶಿವಾನುಭವ ಮಾಲೆಯ 22ನೇ ಪುಷ್ಪವಾಗಿ ಪ್ರಕಟಿಸಿದರು. ಈ ಗ್ರಂಥ ಮುದ್ರಣಕ್ಕೆ ಆರ್ಥಿಕ ಸಹಾಯಹಸ್ತ ನೀಡಿದವರು ರಾ.ರಾ. ವೀರಭದ್ರಪ್ಪ ಬಸಪ್ಪ ಹಾಲಭಾವಿಯವರು. ಇವರ ಸೂಚನೆ  ಮೇರೆಗೆ ಮಹಾಶಿವಾನುಭವಿಗಳಾದ ಶಿವಶರಣರ ಮಾರ್ಗವನ್ನು ಕೈಕೊಂಡು ಅವರಂತೆ ನಿತ್ಯ ಆಚರಿಸಿ ಸೊಲ್ಲಾಪುರದಲ್ಲಿ ವಾಸಿಸಿ, ಅಲ್ಲಿಯೇ ಕೆಲವು ವರ್ಷಗಳ ಹಿಂದೆ ಶಿವೈಕ್ಯರಾಗಿ ಹೋದ ನಾಲವತ್ತವಾಡದ ಶಿ.ಮೂ. ವೀರಯ್ಯನವರು ಶಿವಶರಣ ಇವರಿಗೆ ಸಮರ್ಪಿಸಲ್ಪಟ್ಟಿದೆ. ಶೂನ್ಯಸಂಪಾದನೆ ಇತಿಹಾಸ ಬಹಳ ದೊಡ್ಡದು. ಹಳಕಟ್ಟಿಯವರು ಮುದ್ರಣ ಮಾಡುವ ಮುಂಚೆ ಅಲ್ಲಲ್ಲಿ ಕೆಲವೇ ಜನ ಅನುಭಾವಿಗಳು ಈ ಗ್ರಂಥವನ್ನು ಅಧ್ಯಯನ ಮಾಡುತ್ತಾ ಇದ್ದರು. ಧಾರವಾಡ ಮುರುಘಾಮಠದಲ್ಲಿ 1925ನೆಯ ಜೂನ್ ತಿಂಗಳಲ್ಲಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಮೃತ್ಯುಂಜಯಸ್ವಾಮಿಗಳು ಕೈಲಾಸವಾಸಿ ಕಿಣಗಿ ಬಸವಲಿಂಗಪ್ಪನವರಿಂದ ವಚನ ಪ್ರವಚನ ಏರ್ಪಡಿಸಿದ್ದು ಆ ಸಂದರ್ಭದಲ್ಲಿ ಶೂನ್ಯಸಂಪಾದನೆಯ ಒಂದೆರಡು ಸಂಪಾದನಗಳ ಅರ್ಥವನ್ನು ಅವರಿಂದ ತಿಳಿದುಕೊಂಡಿದ್ದೆನು ಎಂದು ಹರ್ಡೇಕರ ಮಂಜಪ್ಪನವರು ನನ್ನ ಕಳೆದ ಮೂವತ್ತು ವರುಷಗಳ ಕಾಣಿಕೆ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

            ಸಾಂಗಲಿ ಸಂಸ್ಥಾನಕ್ಕೆ ಸೇರಿದ ರಬಕವಿ ಗ್ರಾಮದ ಕಾಗದದ ಹಸ್ತಪ್ರತಿ, ಮೈಸೂರು ಸಂಸ್ಥಾನದ ಕೋಲಾರ ಜಿಲ್ಲೆ ಮೃಗಮಲೆಯ ಶ್ರೀ ಬಸವರಾಜ ಮರಿದೇವರಲ್ಲಿ ದೊರೆತ ತಾಡೋಲೆ. ಈ ಎರಡು ಹಸ್ತಪ್ರತಿಗಳನ್ನು ಉಪಯೋಗಿಸಿಕೊಂಡು ಗೂಳೂರ ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಪ್ರಪ್ರಥಮವಾಗಿ ಸಂಪಾದಿಸಿ ಲೋಕಾರ್ಪಣೆ ಮಾಡಿದ ಕೀರ್ತಿ ಹಳಕಟ್ಟಿಯವರದು. ಈ ಮುದ್ರಿತ ಪ್ರತಿ ವಚನಸಾಹಿತ್ಯಾಸಕ್ತರಲ್ಲಿ ಬಹುದೊಡ್ಡ ಸಂಚಲನವನ್ನು ಉಂಟು ಮಾಡಿತು.

ಸಟೀಕ ಶೂನ್ಯಸಂಪಾದನೆ (ಸಿದ್ಧರಾಮಯ್ಯದೇವರ ಗುರುಕರುಣ) (ದಶಮೋಪದೇಶ)

            ಈ ಟೀಕಾಕೃತಿ ಶಿವಾನುಭವ ಗ್ರಂಥಮಾಲಾ 78ನೇ ಕುಸುವiವಾಗಿ 1954ರಲ್ಲಿ ಮುದ್ರಣವಾಗಿದೆ. 8+37 ಪುಟದ ಈ ಪುಸ್ತಕದ ಅಂದಿನ ಬೆಲೆ 1 ರೂ 4 ಆಣೆ. ಕೃತಿಯನ್ನು ಅಥಣಿ ಶಿವಯೋಗಿಗಳಿಗೆ ಅರ್ಪಿಸಲಾಗಿದೆ. ಪೂಜ್ಯರ ಫೋಟೋ ಕೆಳಗೆ “ಬಸವಣ್ಣನವರ ಶಿವಧರ್ಮದಂತೆ ನಡೆದು ನುಡಿದು ಸಿದ್ಧಿಯನ್ನು ಪಡೆದ ಮಹಾಮಹಿಮರಾದ ಶ್ರೀ ಶ್ರೀ ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ಬರೆಯಲಾಗಿದೆ. ಕೃತಿ ಪ್ರಕಟಣೆಗೆ ಬೇಕಾದ ಹಸ್ತಪ್ರತಿ ಲಭ್ಯವಾದದ್ದು ಶಿವಯೋಗ ಮಂದಿರದಲ್ಲಿ ಗ್ರಂಥದ ಮುದ್ರಣಕ್ಕೆ ಬೇಕಾದ ದ್ರವ್ಯ ಸಹಾಯವನ್ನು ಮಾಡಿದವರು ಶ್ರೀಯುತ ಕುರುವತ್ತೆಪ್ಪ ಕುರವತ್ತಿ ಮುಕ್ಕಾಮ ರಾಣಿಬೆನ್ನೂರು ಇವರು.

            ಗೂಳೂರು ಸಿದ್ಧವೀರಣ್ಣೊಡೆಯರ ಹತ್ತನೇ ಅಧ್ಯಾಯವನ್ನು ಸಂಪೂರ್ಣವಾಗಿ ಮುದ್ರಿಸಿ ಆ ನಂತರ ಭಾವಾರ್ಥ ಎಂದು ಬರೆಯಲಾಗಿದೆ. ಹಸ್ತಪ್ರತಿಯಲ್ಲಿ ಇದೇ ರೀತಿ ಇತ್ತೆ? ಅಥವಾ ಹಳಕಟ್ಟಿ ಅವರು ಟೀಕೆಯನ್ನು ಅಧ್ಯಯನ ಮಾಡಿ ಅವರ ಭಾವಾರ್ಥವನ್ನು ತಮ್ಮದೇ ಆದ ದಾಟಿಯಲ್ಲಿ ಬರೆದರೆ ಮೂಲ ಹಸ್ತಪ್ರತಿಯ ಜೊತೆ ತುಲನೆ ಮಾಡಿದರೆ ಮಾತ್ರ ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತದೆ. ವೀರಶೈವ ಸಿದ್ಧಾಂತವನ್ನು ಅಧ್ಯಯನ ಮಾಡುವವರಿಗೆ ಈ ಭಾವಾರ್ಥ ಒಂದು ದೊಡ್ಡ ನಿಧಿ ಅಂಗದ ಮೇಲೆ ಲಿಂಗ ಧರಿಸಲೆಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸುವ ಅಪರೂಪದ ಪುಸ್ತಕ. ಎಲ್ಲಾ ಪುರಾತನರಲ್ಲಿ ಅಲ್ಲಮಪ್ರಭುವು ಮಹಾನುಭಾವ ಸದ್‍ಗೋಷ್ಠಿಯನ್ನು ಮಾಡಿದ್ದನ್ನು ಶೂನ್ಯಸಂಪಾದನೆಯಲ್ಲಿ ಸಿದ್ಧರಾಮಯ್ಯದೇವರ ಗುರುಕಾರುಣ್ಯದ 10ನೇ ಉಪದೇಶವು ಇಲ್ಲಿಗೆ ಸಮಾಪ್ತವಾಯಿತು.

ಶೂನ್ಯ ಸಂಪಾದನೆ (ಭಕ್ತ ಜಂಗಮದ ಸ್ಥಲ) (ಪಂಚಮೋಪದೇಶ)

            ಹಳಕಟ್ಟಿಯವರಿಂದ ಸಂಪಾದನೆಗೊಂಡು ಶಿವಾನುಭವ ಗ್ರಂಥಮಾಲಾ 79ನೇ ಗ್ರಂಥ 1954ರಲ್ಲಿ ಮುದ್ರಣವಾಗಿದ್ದು. ಅಂದಿನ ಬೆಲೆ 7 ಆಣಿ. ಇಲ್ಲಿ ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ ಗ್ರಂಥದ ಪಂಚಮೋಪದೇಶ ಅಧ್ಯಾಯ ಯಥಾವತ್ತಾಗಿ ಮುದ್ರಣವಾಗಿದ್ದು ಬಿಟ್ಟರೆ ಯಾವ ವಿಧವಾದ ಟೀಕೆಯು ಮುದ್ರಣವಾಗಿಲ್ಲ. ಯಾವುದೋ ಸಂದರ್ಭಕ್ಕೆ ಒಂದು ಅಧ್ಯಾಯವನ್ನು ಪುಸ್ತಕ ರೂಪದಲ್ಲಿ ಅಚ್ಚು ಮಾಡಿದ್ದಾರೆ. ಅಂದಿನ ಕಾರಣ ತಿಳಿದು ಬಂದಿಲ್ಲ. ಈ ಪುಸ್ತಕ ಮುದ್ರಣಕ್ಕೆ ಶ್ರೀ ಮ.ನಿ.ಪ್ರ ಹಾಲಕೆರೆ ಅನ್ನದಾನ ಸ್ವಾಮಿಗಳು ಮುದ್ರಣ ವೆಚ್ಚವನ್ನು ಆಶೀರ್ವದಿಸಿದ್ದಾರೆ. ಅವರ ಭಾವಚಿತ್ರವನ್ನು ಕೃತಿಯ ಆರಂಭದಲ್ಲಿ  ಮುದ್ರಿಸಲಾಗಿದೆ.

ಸಟೀಕ ಶೂನ್ಯಸಂಪಾದನೆ (ಸಿದ್ಧರಾಮಯ್ಯದೇವರ ಸಂಪಾದನೆ) (ತೃತಿಯೋಪದೇಶ)

            ಹಳಕಟ್ಟಿಯವರಿಂದ ಸಂಪಾದನೆಗೊಂಡು ಶಿವಾನುಭವ ಗ್ರಂಥಮಾಲೆಯ 77ನೆಯ ಗ್ರಂಥವಾಗಿ 1954ರಲ್ಲಿ ಮುದ್ರಣಗೊಂಡಿದೆ. ಅಂದಿನ ದಿನಮಾನದ ಈ ಕಿರುಪುಸ್ತಕದ ಬೆಲೆ 1ರೂ. ನಾವು ಈ ಗ್ರಂಥವನ್ನು ಈ ಮೊದಲಿಗೆ ಪ್ರಸಿದ್ಧಿಸಿದ ಶೂನ್ಯಸಂಪಾದನೆ ಗ್ರಂಥ ಮತ್ತು ಶಿವಯೋಗ ಮಂದಿರದಲ್ಲಿ ದೊರೆತ ಕೈಬರಹದ ಪ್ರತಿ ಒಂದರ ಸಹಾಯದಿಂದ ಅಚ್ಚಿಗಾಗಿ ಸಿದ್ಧಪಡಿಸಿದ್ದೇನೆ.

            ಗೊಳೂರು ಸಿದ್ಧವೀರಣ್ಣಡೆಯನ `ಸಿದ್ಧರಾಮಯ್ಯಗಳ ಸಂಪಾದನೆ’ ತೃತಿಯೋಪದೇಶವನ್ನು ಸಂಪೂರ್ಣವಾಗಿ ಮುದ್ರಿಸಿ ನಂತರ ಸಿದ್ಧರಾಮಯ್ಯದೇವರ ಸಂಪಾದನೆ ಭಾವಾರ್ಥ ಬರೆದಿದ್ದು `ದೇವಾಲಯಗಳ ನಿರಾಕರಣಿ’, `ಲಿಂಗತನುವಿನ ಸ್ವರೂಪ’ `ಪರಮಾತ್ಮನು ಸ್ತುತಿಪ್ರಿಯನಲ್ಲ’ – ಭಕ್ತಪ್ರಿಯನು ಮುಂತಾದ ವಿಷಯಗಳನ್ನು ವಿವರವಾಗಿ ಚರ್ಚಿಸಲಾಗಿದೆ.

ಸಿದ್ಧಲಿಂಗೇಶ್ವರನ ಏಕೋತ್ತರ ಶತಸ್ಥಲ

            ಶಿವಾನುಭವ ಗ್ರಂಥಮಾಲಾ 14ನೇ ಪುಸ್ತಕವಾಗಿ ಪ್ರಕಟವಾದ ಈ ಪುಸ್ತಕದ ಮುದ್ರಣವರ್ಷ ನಮೂದಾಗಿಲ್ಲ. ಈ ಪುಸ್ತಕದ ಬೆಲೆ 1-4-0 ಹಳಕಟ್ಟಿಯವರಿಗೆ ಹಸ್ತಪ್ರತಿ ದೊರೆತದ್ದು ಆದವಾನಿಯ ರಾ.ರಾ. ಈಶ್ವರಪ್ಪ ಸೌದ್ರಿ ಎಂಬ ಮಹನೀಯರಿಂದ ಮಹಾಲಿಂಗದೇವರು (ಸು. 1430) ಏಕೋತ್ತರ ಶತಸ್ಥಲ ಕೃತಿಯನ್ನು ರಚಿಸಿದವರು. ಅವರ ಶಿಷ್ಯ ಜಕ್ಕಣ್ಣ ಅಥವಾ ಜಕ್ಕಣಾರ್ಯ (ಸು. 1430) ಸ್ವರ ಏಕೋತ್ತರ ಶತಸ್ಥಲದ ವಚನವನ್ನು ರಚಿಸಿದವನು. ಕೃತಿಯ ಅಂತ್ಯದಲ್ಲಿ ಸಿದ್ಧಲಿಂಗೇಶ್ವರ ಶತಕದ 1 ಒಂದೊಂದು ವೃತ್ತವನ್ನು ಸೇರಿಸಿದ್ದರಿಂದ ಕೃತಿಗೆ ಸಿದ್ಧಲಿಂಗೇಶ್ವರ ಏಕೋತ್ತರ ಶತಸ್ಥಲ ಎಂದು ಕರೆದರು. ಈ ಬಗ್ಗೆ ಇನ್ನು ನಿಖರವಾದ ಅಧ್ಯಯನವಾಗಿಲ್ಲ. ಈ ಹಿಂದೆ ಈ ವೃತ್ತಗಳು ವಿರಕ್ತ ತೋಂಟದಾರ್ಯ ರಚಿಸಿದ್ದು ಎಂದುಕೊಂಡಿದ್ದು ಆದರೆ ವಿರಕ್ತ ತೋಂಟದಾರ್ಯನ ಸಿದ್ಧಲಿಂಗೇಶ್ವರ ಶತಕದಲ್ಲಿ ನಿರಂಜನಲಿಂಗ ಅಂಕಿತವಿದೆ. ಸಿದ್ಧಲಿಂಗೇಶ್ವರ ಅಂಕಿತದ 101 ವೃತ್ತಗಳಲ್ಲಿ ನಿರಂಜನಲಿಂಗದ ಅಂಕಿತವಿಲ್ಲ.

ಅಂಬಿಗರ ಚೌಡಯ್ಯನ ವಚನಗಳು

            ಶಿವಾನುಭವ ಗ್ರಂಥಮಾಲಾ ನಂ 40 ರ ಪುಸ್ತಕವಾಗಿ 1934ರಲ್ಲಿ ಪ್ರಕಟವಾಗಿದೆ. ಹಲವು ಹಸ್ತಪ್ರತಿಗಳ ಸಹಾಯದಿಂದ ವಚನಗಳನ್ನು ಒಂದೆಡೆ ಸಂಗ್ರಹಿಸಿ ವಿಷಯಾನುಸಾರ ಜೋಡಿಸಿ ಪ್ರತಿಯೊಂದು ವಚನಗಳಿಗೆ ಅದರ ಭಾವವನ್ನು ಬರೆಯಲಾಗಿದೆ. ಹಳಕಟ್ಟಿಯವರು ಈ ಕೃತಿ ಸಂಪಾದಿಸುವಾಗ ಮುದ್ರಿತ “ಅಂಬಿಗರ ಚೌಡಯ್ಯನ ವಚನವು ಪುಸ್ತಕ ಲಭ್ಯವಿತ್ತು. 1905ರಲ್ಲಿ ಮುದ್ರಣವಾದ ಈ ಪುಸ್ತಕದ ಸಂಪಾದಕರು “ಗಣೀಶೋಪಾಸಕ’’ ಈ ಕಾವ್ಯನಾಮದ ಕವಿಯ ಹೆಸರು ಗುಂಡಭಟ್ಟ ಬೆಳಗುಪ್ಪಿ.

            ಬಸವಪಥ ಸಂಪುಟ 27 ಸಂಚಿಕೆ 8 2005 ನವೆಂಬರ್‍ನಲ್ಲಿ “ಅಂಬಿಗರ ಚೌಡಯ್ಯನ ವಚನವು’’ ವಚನ ಸಂಕಲನ ಗ್ರಂಥ ಶೋಧಿಸಿದ ಗಣೀಶೋಪಾಸಕನು ಯಾರು? ಎಂಬ ಲೇಖನದಲ್ಲಿ ವಿವರವಾಗಿ ಬರೆಯಲಾಗಿದೆ. 1924ರಲ್ಲಿ ಇದೇ ಪುಸ್ತಕದ ದ್ವಿತೀಯ ಮುದ್ರಣವಾಗಿದ್ದು ಪುಸ್ತಕದ ಹೆಸರು “ಅಂಬಿಗರ  ಚೌಡಯ್ಯನ ವಚನಶಾಸ್ತ್ರವು” ಎಂದು ಬದಲಾಯಿಸಲಾಗಿದೆ.

ಆತುರವೈರಿ ಮಾರೇಶ್ವರ ವಚನಗಳು

            ಮಾರಿತಂದೆಯ ಪರಿಚಯ ಲೇಖನವನ್ನು ಮತ್ತು ಏಳು ವಚನಗಳನ್ನು ಶಿವಾನುಭವ ಪತ್ರಿಕೆಯ ಸಂಪುಟ 18 ಜೂನ್ ಸಂಚಿಕೆಯಲ್ಲಿ 1944ರಲ್ಲಿ ಅಚ್ಚು ಮಾಡಲಾಗಿದೆ. ಹಳಕಟ್ಟಿಯವರಿಗೆ ಅಂದಿನ ದಿನಮಾನಕ್ಕೆ ಇಪ್ಪತ್ತೈದು ವಚನಗಳು ಲಭ್ಯವಿದ್ದು ಆದರೆ ಏಳು ವಚನಗಳನ್ನು ಮಾತ್ರ ಮುದ್ರಿಸಿದ್ದರು.

ಆದಯ್ಯನ ವಚನವು

            ಶಿವಾನುಭವ ಗ್ರಂಥಮಾಲೆಯ 23ನೇ ಪುಸ್ತಕವಾಗಿ 1931ರಲ್ಲಿ ಮುದ್ರಣವಾಗಿದೆ. ಹಲವು ಹಸ್ತಪ್ರತಿಗಳ ಸಂಗ್ರಹದಿಂದ 151 ವಚನಗಳನ್ನು ಒಂದೆಡೆ ಸಂಗ್ರಹಿಸಲಾಗಿದೆ. ಹತ್ತು ವಚನಗಳ ಪ್ರಾಚೀನ ಟೀಕೆಯನ್ನು ಯಥಾವತ್ತಾಗಿ ಮುದ್ರಿಸಲಾಗಿದೆ.

ಉರಿಲಿಂಗ ಪೆದ್ದಿಯ ವಚನಗಳು

            ಶಿವಾನುಭವ ಗ್ರಂಥಮಾಲಾ 43ನೇ ಪುಸ್ತಕವಾಗಿ 1935ರಲ್ಲಿ ಉರಿಲಿಂಗ ಪೆದ್ದಿಯ ವಚನಗಳು ಮುದ್ರಣವಾಗಿದೆ. ಅಂದಿನ ಪುಸ್ತಕದ ಬೆಲೆ 1 ರೂಪಾಯಿ, ಉರಿಲಿಂಗ ಪೆದ್ದಿಯ ವಚನಗಳು ಒಂದೇ ಕಡೆ ದೊರೆಯುವುದಿಲ್ಲ, ಹಲವು ಹಸ್ತಪ್ರತಿಗಳ ಸಹಾಯದಿಂದ ಸಂಗ್ರಹಿಸಲಾಗಿದೆ. ಈ ವಚನಗಳಲ್ಲಿ ಸಂಸ್ಕøತ ಆಧಾರ ಶ್ಲೋಕಗಳು ಬಹಳವಾಗಿ ಬಂದಿರುತ್ತದೆ. ಅವು ಲಿಪಿಗಾರ ದೋಷದಿಂದ ಬಹಳ ಅಶುದ್ಧವಾಗಿವೆ. ಅವುಗಳನ್ನು ಶುದ್ಧಪಡಿಸುವುದು ಬಹಳ ಕಷ್ಟಕರವಾದದ್ದು ಎಂದಿದ್ದಾರೆ. ಪ್ರತಿಯೊಂದು ವಚನಕ್ಕೂ ವಚನಾರ್ಥವನ್ನು ವಚನದ ಭಾವ ಎಂದು ಹಳಕಟ್ಟಿಯವರೇ ಬರೆದಿದ್ದಾರೆ.

ಗಣದಾಸಿ ವೀರಣ್ಣನವರ ವಚನಗಳು

            ಶಿವಾನುಭವ ಗ್ರಂಥಮಾಲಾ 7ನೇ ಪುಸ್ತಕವಾಗಿ 1926ರಲ್ಲಿ ಪ್ರಕಟವಾಯಿತು. ಅಂದಿನ ಪುಸ್ತಕದ ಬೆಲೆ ನಾಲ್ಕಾಣೆ ಮೂರು ಹಸ್ತಪ್ರತಿಗಳ ಸಹಾಯದಿಂದ ಈ ಗ್ರಂಥವನ್ನು ಸಂಪಾದಿಸಲಾಗಿದೆ. ಮೂವತ್ತೇಳು ವಚನಗಳ ಈ ಕೃತಿಯಲ್ಲಿ ಅಷ್ಟಾವರಣದ ಬಗ್ಗೆ ವಿಶೇಷವಾದ ವಚನಗಳಿವೆ.

ದೇವರ ದಾಸಿಮಯ್ಯನ ವಚನಗಳು = ಜೇಡರ ದಾಸಿಮಯ್ಯನ ವಚನಗಳು

            ಶಿವಾನುಭವ ಗ್ರಂಥಮಾಲಾ 15ನೇ ಪುಸ್ತಕವಾಗಿ 1931ರಲ್ಲಿ ಮುದ್ರಣವಾಗಿದೆ. ಬಸವಣ್ಣನವರಿಗಿಂತ ಹಿಂದಿನವರು ಎಂದು ಹಳಕಟ್ಟಿಯವರು ತಮ್ಮ ಅಧ್ಯಯನದಿಂದ ನಿರ್ಧರಿಸಿದ್ದಾರೆ.  ಜೇಡರ ದಾಸಿಮಯ್ಯನ ವಚನವನ್ನು ಸಂಗ್ರಹಿಸಲು ಹಳಕಟ್ಟಿಯವರು ಹತ್ತಾರು ಹಸ್ತಪ್ರತಿಗಳನ್ನು ಉಪಯೋಗಿಸಿಕೊಂಡಿದ್ದಾರೆ. ದೇವರ ದಾಸಿಮಯ್ಯನ ಜೀವನ ವೃತ್ತಾಂತವನ್ನು ತಿಳಿಸುವ ಉಪಯುಕ್ತ ಗ್ರಂಥಗಳ ಒಂದು ಪಟ್ಟಿಯನ್ನು ನೀಡಿದ್ದಾರೆ. ಜೇಡರ ದಾಸಿಮಯ್ಯನ ವಚನಗಳಿಗೆ ಉಪಶೀರ್ಷಿಕೆಗಳನ್ನು ಕೊಟ್ಟು ಅವುಗಳ ಕೆಳಗೆ ವಚನಗಳನ್ನು ಮುದ್ರಣ ಮಾಡಿದ್ದಾರೆ. ಪ್ರತಿಯೊಂದು ವಚನದ ಭಾವಾರ್ಥವನ್ನು ಹೊಸಗನ್ನಡದಲ್ಲಿ ಕೊಟ್ಟಿದ್ದಾರೆ. ವಚನದ ಕೆಳಗೆ ಕಠಿಣಪದದ ಅರ್ಥಗಳನ್ನು ಕೊಟ್ಟಿದ್ದಾರೆ.

ಮಡಿವಾಳ ಮಾಚಿದೇವನ ವಚನಗಳು

            ಶಿವಾನುಭವ ಗ್ರಂಥಮಾಲೆಯ 50ನೇ ಪುಸ್ತಕವಾಗಿ 1929ರಲ್ಲಿ ಹಳಕಟ್ಟಿಯವರು ಪ್ರಕಟಿಸಿದ್ದಾರೆ.  ಪುಸ್ತಕದ ಬೆಲೆ ಆರು ಆಣಿ. ಹಲವು ಹಸ್ತಪ್ರತಿಗಳಿಂದ ಸಂಗ್ರಹಿಸಿ ವಿಷಯಾನುಸಾರ ಹೊಂದಿಸಿ ಈ ಗ್ರಂಥವನ್ನು ರಚಿಸಿರುತ್ತಾರೆ. ಹಳಕಟ್ಟಿಯವರು ಮಡಿವಾಳ ಮಾಚಿದೇವನ ವಚನಗಳ ಬಗ್ಗೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಪುರಾತನ ವಚನಗಳಂತೆಯೇ ಅವನ ಓಜಸ್ಸು ಇದೆ, ಒಲವು ಇದೆ. ಅವು ಈಚಿನ ವಚನಗಳಂತೆ ಉದ್ದವಾದವುಗಳಲ್ಲ. ಅವುಗಳ ಭಾವಪೂರಿತವೂ ಅರ್ಥ ಬೋಧಕವೂ ಇರುತ್ತವೆ.    

            ಅವನ ವಚನಗಳಲ್ಲಿ ಅಲ್ಲಲ್ಲಿ ಸಂಸ್ಕøತ ಅವತರಣಗಳೂ ಕಂಡುಬರುತ್ತವೆ. ಇದರ ಮೇಲಿಂದ ಅವನು ಬಹುಶ್ರುತನೂ ವಿದ್ವಾಂಸನು ಆಗಿದ್ದನೆಂದು ತೋರುತ್ತವೆ.

ಮಹಾದೇವಿಯಕ್ಕನ ವಚನಗಳು

            ಶಿವಾನುಭವ ಗ್ರಂಥಮಾಲಾ ಮೂರನೇ ಪುಸ್ತಕವಾಗಿ 1926ರಲ್ಲಿ ಮಹಾದೇವಿಯಕ್ಕನ ವಚನಗಳು ಪ್ರಕಟವಾಯಿತು. ಅಂದಿನ ಪುಸ್ತಕದ ಬೆಲೆ ಆರು ಆಣಿ. ಹಳಕಟ್ಟಿಯವರು ವಿವಿಧ ವಚನ ಸಂಕಲನಗಳಲ್ಲಿ ಇದ್ದ ಮಹಾದೇವಿಯಕ್ಕನ ವಚನಗಳನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹಕ್ಕೆ ಹನ್ನೆರಡು ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಮಹಾದೇವಿಯಕ್ಕನ ಚರಿತ್ರೆ ತಿಳಿಯಲು ಪ್ರಭುಲಿಂಗ ಲೀಲೆಯನ್ನು ಬಳಸಿ ಕೊಂಡಿದ್ದಾರೆ. ಈ ವಚನ ಸಂಕಲನ ಶರಣ ಸಾಹಿತ್ಯ ಅಭ್ಯಾಸಿಗಳಲ್ಲಿ ಒಂದು ಸಂಚಲನವನ್ನೆ ಉಂಟು ಮಾಡಿತು. 1950ನೇ ಇಸವಿಯಲ್ಲಿ ಇದೇ ಪುಸ್ತಕದ ಆರನೇ ಆವೃತ್ತಿಯ ಮುದ್ರಣವಾಗಿದೆ.

ಮೆರಮಿಂಡದೇವನ ವಚನಗಳು

            ಶಿವಾನುಭವ ಗ್ರಂಥಮಾಲಾ 68ನೇ ಪುಸ್ತಕವಾಗಿ ಪ್ರಕಟವಾಗಿವೆ. ವಿವಿಧ ಹಸ್ತಪ್ರತಿಗಳಲ್ಲಿ ಸಂಗ್ರಹಿಸಿ 101 ವಚನಗಳನ್ನು ಸಂಪಾದಿಸಿದ್ದಾರೆ.

ಮೋಳಿಗೆ ಮಾರಯ್ಯನ ವಚನಗಳು

            ಶಿವಾನುಭವ ಪತ್ರಿಕೆ ಸಂಪುಟ 11 ಸಂಚಿಕೆ 1 ಮತ್ತು 2 ರಲ್ಲಿ ಮೋಳಿಗೆ ಮಾರಯ್ಯನ ವಚನಗಳನ್ನು ಪ್ರಕಟಿಸಿದರು. ಈ ವಚನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಲಿಲ್ಲ. ಆದ್ದರಿಂದ ಮೋಳಿಗೆ ಮಾರಯ್ಯನ ಪರಿಚಯಾತ್ಮಕ ಲೇಖನ ಪ್ರಕಟವಾಗಲಿಲ್ಲ. “ಲಿಂಗಾಂಗ ಸಾಮರಸ್ಯ ಮತ್ತು ಲಿಂಗದ ಅರಿವು” ಎಂಬ ಉಪಶೀರ್ಷಿಕೆ ಕೊಟ್ಟು ವಚನಗಳನ್ನು ಮುದ್ರಣ ಮಾಡಲಾಗಿದೆ. 43 ವಚನಗಳಿಗೆ ಟೀಕೆ ಇಲ್ಲ.

            44ನೇ ವಚನದಿಂದ 63ನೇ ವಚನದವರೆಗೆ ಪ್ರಾಚೀನ ಟೀಕೆ ಇದೆ.

ಲಿಂಗಮ್ಮನ ವಚನಗಳು

            ಶಿವಾನುಭವ ಗ್ರಂಥಮಾಲೆಯ 17ನೇ ಪುಸ್ತಕವಾಗಿ ಲಿಂಗಮ್ಮನ ವಚನಗಳು ಮುದ್ರಣವಾಗಿವೆ. ಪುಸ್ತಕದ ಬೆಲೆ ಮೂರು ಆಣೆ. ಲಿಂಗಮ್ಮ ವಚನಕಾರ ಹಡಪದಪ್ಪಣ್ಣನ ಭಾರ್ಯೆ. ಈಕೆ ಬಸವೇಶ್ವರ, ಚೆನ್ನಬಸವೇಶ್ವರ ಮತ್ತು ಅಲ್ಲಮಪ್ರಭು ಮೊದಲಾದವರ ಬಗ್ಗೆ ಅತ್ಯಂತ ಭಕ್ತಿಭಾವವುಳ್ಳವಳಾಗಿದ್ದಾಳೆ. ಈ ಪ್ರಸ್ತಾವನೆ ಬರೆದಿದ್ದು 30.6.1929 ಪುಸ್ತಕ ಮುದ್ರಣವಾದ ವರ್ಷ 1929 ಎಂದು ಇಟ್ಟುಕೊಳ್ಳಬಹುದು.

ಸಕಲೇಶ ಮಾದರಸನ ವಚನಗಳು

            ಶಿವಾನುಭವ ಗ್ರಂಥಮಾಲಾ ಇಪ್ಪತ್ತನೆಯ ಪುಸ್ತಕವಾಗಿ 1930ರಲ್ಲಿ ಮುದ್ರಣವಾಗಿದೆ. ಪುಸ್ತಕದ ಬೆಲೆ ಮೂರು ಆಣೆ. ಹಲವು ಹಸ್ತಪ್ರತಿಗಳ ಸಹಾಯದಿಂದ ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ. ಸಕಲೇಶ ಮಾದರಸನ ಚರಿತ್ರೆಯನ್ನು ಅಧ್ಯಯನ ಪೂರ್ಣವಾಗಿ ಕೊಟ್ಟ ಕೀರ್ತಿ ಹಳಕಟ್ಟಿಯವರದು. ಹಳಕಟ್ಟಿಯವರಿಗೆ ದೊರೆತ 44 ವಚನಗಳನ್ನು ಉಪಶೀರ್ಷಿಕೆ ಅಡಿಯಲ್ಲಿ ಕೊಟ್ಟಿದ್ದಾರೆ.

ಸಿದ್ಧರಾಮೇಶ್ವರರ ವಚನಗಳು

            ಶಿವಾನುಭವ ಗ್ರಂಥಮಾಲಾ 30ನೇ ಪುಸ್ತಕವಾಗಿ ಸಿದ್ಧರಾಮೇಶ್ವರನ ವಚನಗಳು ಪ್ರಕಟವಾಗಿದೆ. ಅಂದಿನ ಪುಸ್ತಕದ ಬೆಲೆ 1-0-0 ಎರಡು ಹಸ್ತಪ್ರತಿಗಳ ಸಹಾಯದಿಂದ ಈ ವಚನ ಗ್ರಂಥವನ್ನು ಸಂಪಾದಿಸಿದ್ದಾರೆ. ಸಿದ್ಧರಾಮೇಶ್ವರ ದೇವರು ನಿರೂಪಿಸಿದ ಷಟ್‍ಸ್ಥಲದ ವಚನಗಳು ಮುಖ್ಯ ಶೀರ್ಷಿಕೆ ಅಡಿಯಲ್ಲಿ ವಚನಗಳು ಮುದ್ರಣವಾಗಿವೆ.

ಹಡಪದಪ್ಪಣ್ಣನ ವಚನಗಳು

            ಶಿವಾನುಭವ ಗ್ರಂಥಮಾಲಾ ಹದಿನಾರನೇ ಪುಸ್ತಕವಾಗಿ ಪ್ರಕಟವಾಗಿದೆ. ಹಳಕಟ್ಟಿಯವರು ಎರಡು ಹಸ್ತಪ್ರತಿಗಳ ಸಹಾಯದಿಂದ ಈ ವಚನ ಸಂಕಲನವನ್ನು ಮುದ್ರಿಸಿದ್ದಾರೆ. ಈ ಪುಸ್ತಕ ಮುದ್ರಣವಾದಾಗ ಹಡಪದಪ್ಪಣ್ಣನ ವೃತ್ತಾಂತವು ತಿಳಿದಿರಲಿಲ್ಲ. ಈತನ ಹೆಂಡತಿ ಲಿಂಗಮ್ಮನೂ ಒಳ್ಳೇ ಪಂಡಿತಳಾಗಿದ್ದಳು ಆಕೆಯ ಒಂದು ವಚನ ಉಪಲಬ್ಧವಿದೆ ಎಂದಿದ್ದಾರೆ. ಈ ಸಂಕಲನ ಮುದ್ರಣವಾದದ್ದು 1927ರಲ್ಲಿ

ಶಿವಶರಣರ ಸಂಕೀರ್ಣ ವಚನಗಳು ಭಾಗ-1

            ಶಿವಾನುಭವ ಗ್ರಂಥಮಾಲಾ 47ನೇ ಪುಸ್ತಕವಾಗಿ 1938ರಲ್ಲಿ ಪ್ರಕಟವಾಗಿರುವ ಈ ಗ್ರಂಥದ ಬೆಲೆ 9 ಆಣಿ. ಈ ಸಂಕಲನದಲ್ಲಿ

1) ಗಜೇಶ ಮಸಣಯ್ಯ ವಚನಗಳು

            ಈತನ ವಚನಗಳೂ ಲಿಂಗಾಂಗ ಸಾಮರಸ್ಯ ಬೋಧಕವಾಗಿರುತ್ತವೆ. ಈತನ ವಚನಗಳು ಶಿವಶರಣರ ವಚನಗಳಲ್ಲಿ ಬಹು ಸುಂದರವಾದವು.

2) ಚಂದಿಮರಸನ ವಚನಗಳು

            ಹಲವು ಹಸ್ತಪ್ರತಗಳಿಂದ ವಚನಗಳನ್ನು ಸಂಗ್ರಹಿಸಿದ್ದಾರೆ. ಚಂದಿಮರಸನು ವಚನಕಾರರಲ್ಲಿ ಬಹುಪ್ರಸಿದ್ಧನಾದವನು. ಆದುದರಿಂದ ಅವನ ಉಕ್ತಿಗಳು ವಚನಗಳ ಪ್ರತಿಯೊಂದು ಸಂಗ್ರಹದಲ್ಲಿ ಬಹುಶಃ ದೊರೆಯುತ್ತವೆ ಎಂದಿದ್ದಾರೆ. ಈತನು ಬಸವನ ಬಾಗೇವಾಡಿ ಹತ್ತಿರ ಇರುವ ಸಿಮ್ಮಲಿಗೆ ಗ್ರಾಮದವನು. ಈ ಗ್ರಾಮ ಕೃಷ್ಣಾನದಿ ದಡದಲ್ಲಿದೆ. ಈತನ ಗುರುವಿನ ಹೆಸರು “ನಿಜಗುಣ ಶಿವಯೋಗಿ” ಘನಲಿಂಗ ಶಿವಯೋಗಿಗಳು ತಮ್ಮ ವಚನಗಳಲ್ಲಿ ಗುರುಶಿಷ್ಯರಿಬ್ಬರನ್ನು ಸ್ಮರಿಸಿರುವರು.

3) ಅರಿವಿನ ಮಾರಿತಂದೆಗಳ ವಚನಗಳು

            ಗುಬ್ಬಿ ಮಲ್ಲಣ್ಣನ ಸಂಕಲಿಸಿದ “ಗಣಭಾಷ್ಯ ರತ್ನಮಾಲೆ” ಕೃತಿಯಲ್ಲಿ ಅರಿವಿನ ಮಾರಿತಂದೆ ವಚನಗಳು ಇವೆ. ಈತನ ಅನೇಕ ಬೆಡಗಿನ ವಚನಗಳಗೆ ಟೀಕೆ ಇದೆ. ಈ ಟೀಕೆಗಳು ಸಿಂಗಳದ ಸಿದ್ಧಬಸವ ವಿರಚಿತ “ಬೆಡಗಿನ ವಚನಗಳು” ಗ್ರಂಥದಿಂದ ಸ್ವೀಕರಿಸಿದ್ದು.

ಶಿವಶರಣರ ಸಂಕೀರ್ಣ ವಚನಗಳು ಭಾಗ 2

            ಈ ಪುಸ್ತಕ 1940ರಲ್ಲಿ ಮುದ್ರಣವಾಗಿದೆ. ಅಂದು ಈ ಪುಸ್ತಕದ ಬೆಲೆ ಹನ್ನೆರಡಾಣೆ. ಈ ಪುಸ್ತಕದಲ್ಲಿ :

1) ಹಾವಿನಾಳ ಕಲ್ಲಿದೇವರ ವಚನಗಳು ಅನೇಕ ವಚನ ಸಂಕಲನದಿಂದ 60 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ. ಅವುಗಳನ್ನು ವಿಷಯಾನುಗುಣವಾಗಿ ಹೊಂದಿಸಿ ಈ ಗ್ರಂಥದಲ್ಲಿ ಮುದ್ರಿಸಲಾಗಿದೆ. ವೇದಗಳು ವಿಶಿಷ್ಟ ವರ್ಣದವರಿಗೋಸ್ಕರ ಇರದೆ, ಬೇಕಾದ ಪಂಗಡದವರು ಅವುಗಳ ಪಠಣ ಮಾಡಬಹುದೆಂಬುದನ್ನು ತೋರಿಸುವದಕ್ಕೋಸ್ಕರ ಹಾವಿನಾಳ ಕಲ್ಲಯ್ಯನ ಚರಿತ್ರೆಯನ್ನು ಅನೇಕ ವೀರಶೈವ ಗ್ರಂಥಕಾರರು ತಮ್ಮ ಗ್ರಂಥದಲ್ಲಿ ಉದಾಹರಿಸುವದುಂಟು. ಒಂದು ನಾಯಿಯ ಕಡೆಯಿಂದ ಹಾವಿನಹಾಳ ಕಲ್ಲಯ್ಯನು ವೇದಗಳನ್ನು ಉದ್ಘೋಷಿಸಿದನೆಂದೂ ಅವನ ಚರಿತ್ರೆಯಲ್ಲಿ ಬರುವ ಮುಖ್ಯ ವಿಷಯ. ಹಾವಿನಾಳ ವಿಜಾಪುರ ಜಿಲ್ಲೆ ಮಂಗಳವೇಡೆ ಗ್ರಾಮದ ಹತ್ತಿರವಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರ ಪ್ರಭಾವಕ್ಕೆ ಒಳಗಾಗಿ ಅಲ್ಲಿಯೆ ವಿವಾಹವಾಗಿ `ಕಲ್ಲವ್ವೆ’ ಎಂಬ ಮಗಳನ್ನು ಪಡೆದನು. ಇವನ ಗದ್ದುಗೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರ ಗದ್ದುಗೆ ಸಮೀಪ ಇದೆ.

ಮಧುವರಸನ ವಚನಗಳು

            ಮಧುವರಸನು ಬಿಜ್ಜಳ ಸೈನ್ಯದಲ್ಲಿ ಒಬ್ಬ ದಂಡಾಧೀಶನಾಗಿದ್ದು ಅವನ ಕೈಕೆಳಗೆ ಅನೇಕ ವರ್ಷ ಸೇವೆ ಮಾಡುತ್ತ ಬಂದವನೆಂದು ಆತನ ಬಗ್ಗೆ ದಂತಕಥೆಗಳಿವೆ. ಇವನ ಮೂಲ ಗ್ರಾಮವು ಮಂಗಳವಾಡವು ಇದು ಸಾಂಗಲಿ ಸಂಸ್ಥಾನದ ಮುಖ್ಯ ಗ್ರಾಮ. ಬಸವಣ್ಣನ ಶರಣ ಧರ್ಮವನ್ನು ಒಪ್ಪಿಗೊಂಡ ಮಧುವರಸ ಮುಂದೆ ತನ್ನ ಮಗಳನ್ನು ಹರಳಯ್ಯನ ಮಗನಿಗೆ ವಿವಾಹ ಮಾಡಿಕೊಟ್ಟ ನಂತರ ಕಲ್ಯಾಣಕ್ರಾಂತಿಯಾಯಿತು. ಮಧುವರಸನ ವಚನಗಳಿಗೆ ಸಿಂಗಳದ ಸಿದ್ಧಬಸವ ಟೀಕೆಗಳನ್ನು ಬರೆದಿದ್ದಾನೆ. ಫ.ಗು. ಹಳಕಟ್ಟಿಯವರು 35 ವಚನಗಳಿಗೆ ಟೀಕೆಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಕೃತಿಯಲ್ಲಿ 33 ವಚನಗಳ ಟೀಕೆ ಮಾತ್ರ ಇವೆ.

ಸತ್ಯಕ್ಕನ ವಚನಗಳು

            ಜಂಬೂರೆಯ ಪುರದಲ್ಲಿ ಸತ್ಯಕ್ಕವೆಂಬ ಶಿವಶರಣೆ ಇರುತಿರ್ದು ಶಿವಭಕ್ತಿ ಶಿವಭಕ್ತಿ ನಿಷ್ಠೆಯಿಂದ ಶಿವನ ಶಬ್ದವಲ್ಲದೆ ಅನ್ಯ ಶಬ್ದ ಕೇಳಲೊಲ್ಲೆನೆಂಬ ಭಾಷೆಯಂ ಮಾಡಿಕೊಂಡಿರುವ ಶಿವಭಕ್ತರ ಮನೆಯ ಅಂಗಳನುಡುಗಿ ಮನೆಯ ಸಮ್ಮಾರ್ಜನೆಯಂ ಮಾಡಿ ಅವರು ಕೊಟ್ಟ ಧಾನ್ಯದಿಂದ ಜಂಗಮಾರ್ಚನೆ ಮಾಡುತ್ತ ಇದ್ದಳು. ಈಕೆ ವಾಸವಿದ್ದ ಜಂಬೂರು ಗ್ರಾಮ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಹತ್ತಿರವಿದೆ. ಜಂಬೂರು ಗ್ರಾಮದಲ್ಲಿ ಸತ್ಯಕ್ಕನ ದೇವಾಲಯವೂ ಇದೆ ಎಂದು ಹಳಕಟ್ಟಿಯವರು ತಿಳಿಸಿದ್ದಾರೆ. ವಿವಿಧ ಹಸ್ತಪ್ರತಿಗಳ ಸಹಾಯದಿಂದ ಇಪ್ಪತ್ತು ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಶಿವಲೆಂಕ ಮಂಚಣ್ಣಗಳ ವಚನಗಳು

            ಪಂಡಿತತ್ರಯರೆಂದು ಪ್ರಸಿದ್ಧಿಯಾದವರು 1. ಮಲ್ಲಿಕಾರ್ಜುನ ಪಂಡಿತಾರಾಧ್ಯ 2. ಶ್ರೀಪತಿ ಪಂಡಿತಾರಾಧ್ಯ 3. ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯ ಈ ಮೂವರನ್ನು ಆರಾಧ್ಯತ್ರಯರೆಂದು ಅಥವಾ ಪಂಡಿತತ್ರಯರೆಂದು ಕರೆಯಲಾಗುತ್ತದೆ. ಶಿವಲೆಂಕ ಮಂಚಣ್ಣ ಪಂಡಿತರು ಉತ್ತರ ಹಿಂದೂಸ್ಥಾನದವರು. ಇವರ ಚರಿತ್ರೆಯು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಶಿವಕಥಾಸಾಗರ, ಸಿಂಗಿರಾಜ ಪುರಾಣ ಈ ಮೊದಲಾದ ಗ್ರಂಥಗಳಲ್ಲಿ ದೊರೆಯುತ್ತದೆ. ವಾರಣಾಸಿಯ ಜಂಬುಭಟ್ಟನಿಗೆ ಮಗನಾಗಿ ಜನಿಸಿ ವೀರಶೈವ ದೀಕ್ಷೆಯನ್ನು ಹೊಂದಿ ಶಿವನೇ ಸರ್ವೋತ್ತಮನೆಂದು ಭಾವಿಸಿ ವಿಶ್ವನಾಥನನ್ನು ಭಕ್ತಿಯಿಂದ ಅರ್ಚಿಸುತ್ತ ಇರುತ್ತಿದ್ದನು. ಶಿವನು ಸರ್ವೋತ್ತಮನೆಂದು ಬ್ರಾಹ್ಮಣರಿಗೆ ತೋರಿಸಲು ಮಂಚಣ್ಣ ನಾರಾಯಣನನ್ನು ಆಹ್ವಾನಿಸಿ ವಿಶ್ವೇಶ್ವರನ ಪಾದಕ್ಕೆ ನಮಸ್ಕರಿಸುವಂತೆ ಮಾಡಿದನಂತೆ.

            ಹಳಕಟ್ಟಿಯವರು 53 ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಎಂಟು ವಚನಗಳು ಟೀಕಾ ಸಮೇತ ಮುದ್ರಣವಾಗಿವೆ. ಈ ಟೀಕೆ ತಿಂಗಳದ ಸಿದ್ಧಬಸವರಾಜ ದೇವರು ವ್ಯಾಖ್ಯಾನಿಸಲಾಗಿದೆ.

ಉರಿಲಿಂಗದೇವರ ವಚನಗಳು

            ಹಳಕಟ್ಟಿಯವರು ತಮಗೆ ದೊರೆತ ಉರಿಲಿಂಗದೇವರ ವಚನಗಳನ್ನು ಹಲವು ಹಸ್ತಪ್ರತಿಗಳಿಂದ ಸಂಪಾದಿಸಿ ಸ್ಥಲಾನುಸಾರವಾಗಿ ಜೋಡಿಸಿದ್ದಾರೆ. ಇವನ ಗುರು ಉರುಲಿಂಗಪೆದ್ದಿ ಇವನು ಪ್ರಸಿದ್ಧ ವಚನಕಾರ ಹೀಗೆ ಗುರುಶಿಷ್ಯರಿಬ್ಬರು ಮೇಲುಮಟ್ಟದ ವಚನಗಳನ್ನು ರಚನೆ ಮಾಡಿದ್ದಾರೆ. ಹಳಕಟ್ಟಿಯವರು ವಿವಿಧ ಹಸ್ತಪ್ರತಿಗಳಿಂದ 49 ವಚನಗಳನ್ನು ಸಂಗ್ರಹಿಸಿದ್ದಾರೆ.

ಬಾಹೂರ ಬೊಮ್ಮಯ್ಯಗಳ ವಚನ

            ಬಾಹೂರ ಬೊಮ್ಮಯ್ಯನ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲವೆಂದು ತೋರುತ್ತವೆ. ಅದಕ್ಕೆ ಹಳಕಟ್ಟಿಯವರು ವಚನಕಾರನ ಪರಿಚಯ ಲೇಖನ ಬರೆದಿಲ್ಲ. ಬಾಹೂರ ಬೊಮ್ಮಯ್ಯನ 44 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ.

ಶಿವಶರಣರ ಸಂಕೀರ್ಣ ವಚನಗಳು ಭಾಗ-3

            ಈ ಸಂಪುಟ ಪುಸ್ತಕ ರೂಪದಲ್ಲಿ ಬರಲಿಲ್ಲ ಶಿವಾನುಭವ ಸಂಪುಟ 15, 16, 17, 18 ನೇ ಸಂಪುಟದಲ್ಲಿ ಈ ಕೆಳಕಂಡ ವಚನಕಾರರ ವಚನಗಳು ಪ್ರಕಟಗೊಂಡವು.

ಭಂಡಾರಿ ಶಾಂತಯ್ಯನ ವಚನ

            ಹಲವು ಹಸ್ತಪ್ರತಿಗಳಿಂದ ಸಂಗ್ರಹಿಸಿ 32  ವಚನಗಳನ್ನು ಸಂಕಲಿಸಿದ್ದಾರೆ. ಈ ಸಂಕಲನಕ್ಕೆ ಎರಡು ಹಸ್ತಪ್ರತಿಗಳನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ. ಕಲ್ಲುಮಠದ ಪ್ರಭುದೇವರ `ಲಿಂಗಲೀಲಾ ವಿಳಾಸ’ ಸಿಂಗಳದ ಸಿದ್ಧಬಸವರಾಜದೇವರು ವ್ಯಾಖ್ಯಾನಿಸಿದ `ಸಕಲ ಪುರಾತನರ’ ಬೆಡಗಿನ ವಚನಗಳು.

            ಪ್ರಕಟಿತ `ಲಿಂಗಲೀಲಾ ವಿಲಾಸ’ ಪುಸ್ತಕದಲ್ಲಿ ಭಂಡಾರಿ ಶಾಂತಯ್ಯನ ವಚನಗಳು ಇಲ್ಲ ಅವರೆ ಹಳಕಟ್ಟಿಯವರು ನೋಡಿದ ಹಸ್ತಪ್ರತಿಯನ್ನು ಭಂಡಾರಿ ಶಾಂತಯ್ಯನ ವಚನಗಳ ಟೀಕೆ ಇದ್ದಿರಬೇಕು ಈ ಬಗ್ಗೆ ಸೂಕ್ಷ್ಮವಾದ ಅಧ್ಯಯನವನ್ನು ಯುವ ವಿದ್ವಾಂಸರು ಮಾಡಬೇಕು ಭಂಡಾರಿ ಶಾಂತಯ್ಯನ 32 ವಚನಗಳನ್ನು ಸಂಗ್ರಹಿಸಿದ ಹಳಕಟ್ಟಿಯವರು 21 ವಚನಗಳನ್ನು ಟೀಕಾ ಸಮೇತ ಮುದ್ರಿಸಿದ್ದಾರೆ.

ರೆಮ್ಮವ್ವೆಯ ವಚನಗಳು

            ವೀರಶೈವರು ಅಂಧತೆಯಿಂದ ತಮ್ಮ ಕ್ರಿಯಾದಿಗಳನ್ನು ನೆರವೇರಿಸಿದಲ್ಲಿ ಅವರಲ್ಲಿ ಪ್ರಗತಿಯಾಗಲಾರದೆಂದು ವಚನಕಾರರು ಭಾವಿಸುತ್ತಾರೆ. ರೆಮ್ಮವ್ವೆಯ 64 ವಚನಗಳನ್ನು ಹಲವು ಹಸ್ತಪ್ರತಿಯಿಂದ ಸಂಗ್ರಹಿಸಿದ್ದಾರೆ.

ಏಲೇಶ ಕೇತಯ್ಯಗಳ ವಚನ

            ಹಲವು ಹಸ್ತಪ್ರತಿಗಳಿಂದ 23 ವಚನಗಳನ್ನು ಸಂಗ್ರಹಿಸಿದ್ದಾರೆ. ಏಲೇಶ ಕೇತಯ್ಯ 63 ಶೀಲಾಚರಣೆಗೆ ಬಹಳ ಮಹತ್ವ ಕೊಟ್ಟವನು. ರೆಮವ್ವೆಯ ವಚನಗಳಿಗೆ ಈತನ ವಚನಗಳಿಗೂ ಬಹಳ ಸಾಮ್ಯವಿದೆ. ಈತನ ಗ್ರಾಮ ಯಾದಗಿರಿ ಹತ್ತಿರನ ಏಳೇರಿ ಇರಬೇಕು ಎಂದು ಹಳಕಟ್ಟಿಯವರು ಊಹಿಸಿದ್ದಾರೆ. ಷಟ್‍ಸ್ಥಲಗಳಲ್ಲಿ ಕೇತಯ್ಯನ ವಚನಗಳನ್ನು ವಿಂಗಡಿಸಿದಲ್ಲದೆ ಪ್ರತಿಯೊಂದು ವಚನಗಳಿಗೆ ಸರಳ ಗದ್ಯಾನುವಾದವನ್ನು `ಭಾವ’ ಎಂದು ಪ್ರತಿಯೊಂದು ವಚನದ ಕೆಳಗೆ ಕೊಟ್ಟಿದ್ದಾರೆ.

ಸೊಡ್ಡಳ ಬಾಚರಸನ ವಚನಗಳು

            ಬಾಚರಸನು ಮೂಲತಃ ಗುಜರಾತದೇಶದವನು ಬಿಜ್ಜಳನಲ್ಲಿಗೆ ಬಂದು ನೌಕರಿಯನ್ನು ಸಂಪಾದಿಸಿಕೊಂಡು ಉಪಜೀವಿಸುತ್ತ ಬಂದವನು. ಬಾಚರಸನು ಸೌರಾಷ್ಟ್ರ ಸೋಮೇಶ್ವರನ ಪೂರ್ಣಭಕ್ತನು. ಬಸವೇಶ್ವರನು ಬಲದೇವ ಮಂತ್ರಿ ಮಗಳು ಗಂಗಾಂಬಿಕೆಯನ್ನು ವಿವಾಹವಾಗಲು ಕಲ್ಯಾಣಕ್ಕೆ ಬಂದಾಗ ಬಸವೇಶ್ವರನನ್ನು ಬಾಚರಸನ ಮನೆಯಲ್ಲಿಯೇ ಇಳಿಸಿದ್ದನು. ಶಿವಾನುಭವ ಗೋಷ್ಠಿಯಲ್ಲಿ ಬಾಚರಸನು ಭಾಗವಹಿಸುತ್ತಾ ಇದ್ದನು. 56 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿ ಷಟ್‍ಸ್ಥಲ ರೂಪದಲ್ಲಿ ವಿಂಗಡಿಸಿ ಪ್ರತಿಯೊಂದು ವಚನಗಳಿಗೆ ಭಾವ ಎಂದು ಸರಳ ಗದ್ಯಾನುವಾದ ಕೊಟ್ಟಿದ್ದಾರೆ.

ಗುಮ್ಮಳಾಪುರದ ಸಿದ್ಧಲಿಂಗದೇವರ ವಚನಗಳು

            `ಷಟ್‍ಸ್ಥಲ ಲಿಂಗಾಂಗ ಸಂಬಂಧದ ನಿರ್ವಚನ’ ಎಂಬ ವಚನ ಕಟ್ಟಿನ ಕರ್ತೃ ಗುಮ್ಮಳಾಪುರದ ಸಿದ್ಧಲಿಂಗದೇವ. ಶೂನ್ಯಸಂಪಾದನೆಯ ಕರ್ತೃ. ತೋಂಟದ ಸಿದ್ಧಲಿಂಗೇಶ್ವರ ಮತ್ತು ಬೋಳಬಸವೇಶ್ವರನ ಶಿಷ್ಯ ಪರಂಪರೆಯವನು. ಈತ ಶೂನ್ಯಸಿಂಹಾಸನದ ಅಧಿಪತಿಯೂ ಆಗಿದ್ದ. ಎಡೆಯೂರಿನ ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗೇಶ್ವರನ ಜೊತೆ ಇದ್ದ ವಿರಕ್ತರೊಡನೆ ಗುಮ್ಮಳಾಪುರದ ಸಿದ್ಧಲಿಂಗದೇವನ ಹೆಸರು ಇದೆ. ಇವನ ಅಂಕಿತ “ಪರಂಜ್ಯೋತಿ ಮಹಾಲಿಂಗ ಗುರುಸಿದ್ಧಲಿಂಗ ಪ್ರಭುವಿನಲ್ಲಿ ಬಸವಣ್ಣನವರು ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗವಾಗಿರ್ದೆನಯ್ಯ ಬೋಳಬಸವೇಶ್ವರಾ ನಿಮ್ಮ ಧರ್ಮ ನಿಮ್ಮ ಧರ್ಮ.’’ ಈತನ 18 ವಚನಗಳನ್ನು ಶಿವಾನುಭವ ಪತ್ರಿಕೆ ಸಂಪುಟ 17 ಮತ್ತು 18ರಲ್ಲಿ 1943-44ರ ಕಾಲಮಾನದಲ್ಲಿ ಸಂಪಾದಿಸಿ ಪ್ರಕಟಿಸಿದ್ದರು.

ಕಾಲಜ್ಞಾನದ ವಚನಗಳು

            1)          ಚೆನ್ನಬಸವರಾಜ ದೇವರು ಉಳಿವಿಗೆ ಚಿತ್ತೈಸಿದ ಪ್ರಸ್ತಾವದ ವಚನ

            2)          ಪ್ರಭುದೇವರು ನಿರೂಪಿಸಿದ ಕಾಲಜ್ಞಾನದ ವಚನ

            3)          ಎಲ್ಲಾ ಪುರಾತನರು ನಿರೂಪಿಸಿದ ಕಾಲಜ್ಞಾನದ ವಚನ

            4)         ಬಸವರಾಜ ದೇವರು ನಿರೂಪಿಸಿದ ಕಾಲಜ್ಞಾನದ ವಚನ

            5)          ಕಲ್ಯಾಣಿಯಮ್ಮನವರ ಕಾಲಜ್ಞಾನದ ವಚನ

            6)          ಕೂಗಿನ ಮಾರಯ್ಯಗಳ ಕಾಲಜ್ಞಾನದ ವಚನ

            7)          ಚನ್ನಬಸವೇಶ್ವರ ದೇವರು ನಿರೂಪಿಸಿದ ಕಾಲಜ್ಞಾನ ವಚನ

            8)          ಸರ್ವಜ್ಞಸ್ವಾಮಿ ನಿರೂಪಿಸಿದ ಕಾಲಜ್ಞಾನ ವಚನ

            9)          ಘಟಿವಾಳಯ್ಯನವರ ಕಾಲಜ್ಞಾನದ ವಚನ

ಘನಲಿಂಗನ ವಚನಗಳು

            ಶಿವಾನುಭವ ಗ್ರಂಥಮಾಲೆಯ ಹದಿಮೂರನೇ ಪುಸ್ತಕವಾಗಿ ಘನಲಿಂಗನ ವಚನಗಳ ಪುಸ್ತಕ 1927ರಲ್ಲಿ ಪ್ರಕಟವಾಗಿವೆ. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ವಚನಗಳ ಸಂಖ್ಯೆ 60, 1907ರಲ್ಲಿ ಮೈಸೂರು ವೀರಶೈವಮತ ಸಂವರ್ಧಿನೀ ಸಭಾ ವತಿಯಿಂದ ಎಂ. ಬಸವಲಿಂಗಶಾಸ್ತ್ರೀಯಿಂದ ಸಂಪಾದನೆಗೊಂಡು ಪ್ರಕಟವಾದ ಗ್ರಂಥದಲ್ಲಿ 63 ವಚನಗಳು ಇವೆ. ಇತ್ತೀಚೆಗೆ ಎಸ್. ಶಿವಣ್ಣನವರು ಈತನ ಒಂದು ಹೊಸವಚನ ಸಂಶೋಧಿಸಿದ್ದಾರೆ. ಈತನ ಸಮಾಧಿ ಕುಣಿಗಲ್ ತಾಲ್ಲೂಕು ಕಗ್ಗೇರೆಯಲ್ಲಿದೆ.

ಶಿವಾನುಭವ ಸೃಷ್ಟಿಯ ವಚನಗಳು

            ಶಿವಾನುಭವ ಗ್ರಂಥಮಾಲಾ 56ನೇ ಪುಸ್ತಕವಾಗಿ 1941ರಲ್ಲಿ ಪ್ರಕಟವಾಗಿದೆ. ಈ ಗ್ರಂಥದಲ್ಲಿ 1 ಮುಕ್ತ್ಯಾಂಗನಾ ಕಂಠಮಾಲೆ, ಸ್ವತಂತ್ರ ಸಿದ್ಧಲಿಂಗೇಶ್ವರನ 21 ವಚನಗಳನ್ನು ಸಂಕಲಿಸಿ ಅವುಗಳಿಗೆ ಟೀಕೆ ಬರೆದವನು ಚೆನ್ನದೇವನೆಂಬುವನು. ಇದರಲ್ಲಿ ಸೃಷ್ಟಿಯ ಉಗಮವು ಹೇಗೆ ಉಂಟಾಯಿತು. ಪರಮಾತ್ಮನ ಮೂಲ ಚೈತನ್ಯ ರೂಪು ಜಗತ್ ಸೃಷ್ಟಿಗೆ ಹೇಗೆ ಕಾರಣವಾಯಿತು. ಇವೇ ಮೊದಲಾದ ವಿಷಯಗಳನ್ನು ವಿವರಿಸಿ ಆಮೇಲೆ ಮುಕ್ತಿಗೆ ಸಾಧನವಾದ ಲಿಂಗಧಾರಣ ವಿಷಯವನ್ನು ಹೇಳಿದ್ದಾನೆ.

            “ಜ್ಯೋತಿರ್ಮಯ ಶಾಂಭವೀ ದೀಕ್ಷೆ” ಪ್ರಭುದೇವರ 37 ವಚನಗಳನ್ನು ಪಾಲ್ಕುರಿಕೆ ಸೋಮಾರಾಧ್ಯರು ಪ್ರಭುದೇವರ ವಚನಗಳನ್ನು ಸಂಕಲಿಸಿ ಈ ಸಂಕಲನವನ್ನು ಸಿದ್ಧಮಾಡಿದವರು. ಈ ಎರಡು ಗ್ರಂಥಗಳು ಈ ಮೊದಲೇ ಮುದ್ರಣವಾದದ್ದನ್ನು ಹಳಕಟ್ಟಿಯವರು ಗಮನಿಸಿದ್ದಾರೆ. ಮೊದಲನೇ ಗ್ರಂಥವನ್ನು ಡಿ.ಆರ್. ತಿಪ್ಪಯ್ಯಶಾಸ್ತ್ರಿ, ಎರಡನೇ ಗ್ರಂಥವನ್ನು ಶ್ರೀ ಚೆನ್ನಮಲ್ಲಪ್ಪನವರು ಅಥವಾ ಸದ್ಧರ್ಮದೀಪಿಕೆ ಚೆನ್ನಮಲ್ಲಿಕಾರ್ಜುನರು ಸಂಪಾದಿಸಿ ಪ್ರಕಟಿಸಿದ್ದಾರೆ.

ಸಕಲಾಗಮ ಶಿಖಾಮಣಿ ವಚನ

            ಈ ವಚನ ಗ್ರಂಥ ಪುಸ್ತಕ ರೂಪದಲ್ಲಿ ಪ್ರಕಟವಾಗಿಲ್ಲ. ಶಿವಾನುಭವ ಪತ್ರಿಕೆ ಸಂಪುಟ 28, 29, 30 ನೇ ಸಂಪುಟಗಳಲ್ಲಿ ವಚನಗಳು ಮುದ್ರಣವಾಗಿವೆ 518 ವಚನಗಳು ಇವೆ.

ಸಂಗನ ಬಸವೇಶ್ವರ ವಚನಗಳು

            ಶಿವಾನುಭವ ಗ್ರಂಥಮಾಲೆಯ 12 ಪುಸ್ತಕವಾಗಿ 1927ರಲ್ಲಿ ಪ್ರಕಟವಾದ ಈ ಕೃತಿಯನ್ನು 70ನೇ ಹಸ್ತಪ್ರತಿಯಿಂದ ಸಂಪಾದಿಸಲಾಗಿದೆ. ಇನ್ನು ಹೆಚ್ಚಿನ ವಿಷಯಕ್ಕೆ ಸಮಗ್ರ ವಚನ ಸಂಪುಟ ಹತ್ತು ಸಂಪಾದಕ ಡಾ. ವೀರಣ್ಣ ರಾಜೂರವರು ಸಂಪಾದಿಸಿದ ಪುಸ್ತಕವನ್ನು ಅವಲೋಕಿಸಬೇಕಾಗಿ ವಿನಂತಿ.

ವೇಮಣ್ಣಯೋಗಿಯ ವಚನಗಳು

            ಶಿವಾನುಭವ ಗ್ರಂಥಮಾಲೆಯ 72ನೇ ಪುಸ್ತಕವಾಗಿ 1951ರಲ್ಲಿ ಪ್ರಕಟವಾಗಿದೆ. ಪ್ರಕಟಿತ ಪುಸ್ತಕದಲ್ಲಿ 507 ವಚನಗಳಿವೆ.

ವಚನಶಾಸ್ತ್ರಸಾರ ಭಾಗ-1

            ವಚನಶಾಸ್ತ್ರಸಾರ ಭಾಗ-1 ಮೊದಲ ಆವೃತ್ತಿ ಬಂದಿದ್ದು 1923 ಬೆಳಗಾವಿಯ ಶ್ರೀಯುತ ದೇವೇಂದ್ರಪ್ಪ ಫಡೆಪ್ಪಾ ಚೌಗುಲೆ ಇವರು ಶ್ರೀ ಮಹಾವೀರ ಪ್ರಿಂಟಿಂಗ್ ವಕ್ರ್ಸ್‍ನಲ್ಲಿ ಮುದ್ರಣವಾಗಿದ್ದು ಈ ಪುಸ್ತಕ ಮುಂದೆ ಪೂರ್ವಾರ್ಧ 10-8-1931 ಉತ್ತರಾರ್ಥ 26-9-1933ರಲ್ಲಿ ಪ್ರಕಟಗೊಂಡಿತು. ಹೀಗೆ ಹಳಕಟ್ಟಿಯವರಿಂದ ಎರಡು ಸಾರಿ ಮುದ್ರಣವಾಯಿತು. ಡಾ. ಎಂ.ಎಂ. ಕಲಬುರ್ಗಿ ಮತ್ತು ಡಾ. ವೀರಣ್ಣ ರಾಜೂರರವರಿಂದ ಪರಿಷ್ಕರಣಗೊಂಡು 1982ರಲ್ಲಿ ಗದಗಿನ ತೋಂಟದಾರ್ಯ ಮಠದಿಂದ ಪ್ರಕಟವಾಯಿತು. ಗದಗಿನ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಗಳ ರಜತಮಹೋತ್ಸವದಲ್ಲಿ 1999ರಲ್ಲಿ ಮುದ್ರಣವಾಯಿತು. 2005ರಲ್ಲಿ ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಂದ ಮತ್ತೆ ಪರಿಷ್ಕರಣೆಗೆ ಒಳಗಾಗಿ ಮುದ್ರಣವಾಯಿತು.

ವಚನಶಾಸ್ತ್ರಸಾರ ಭಾಗ-2

            1938ರಲ್ಲಿ ಸಂಕಲನಗೊಂಡು ಶಿವಾನುಭವ ಗ್ರಂಥಮಾಲೆ 27ನೇ ಪುಷ್ಪವಾಗಿ ವಚನಶಾಸ್ತ್ರಸಾರ ಭಾಗ-2 ಮುದ್ರಣವಾಗಿತ್ತು. ಆರನೂರ ಐದು ಪುಟಗಳ ಸಂಪುಟ ಪ್ರಕಟವಾಗಿತ್ತು.

            2004ರಲ್ಲಿ ಗದಗಿನ ತೋಂಟದಾರ್ಯ ಮಠದಿಂದ ಡಾ ವೀರಣ್ಣ ರಾಜೂರರವರಿಂದ ಮತ್ತು ಇತರ ವಿದ್ವಾಂಸರಿಂದ ಮರು ಪರಿಷ್ಕರಣಗೊಂಡು ಪ್ರಕಟವಾಯಿತು.

            ವಚನಶಾಸ್ತ್ರಸಾರ ಭಾಗ-3 (ಪೂರ್ವಾರ್ಧ) 1939ರಲ್ಲಿ ಮುದ್ರಣವಾಗಿದೆ.

ವಚನಶಾಸ್ತ್ರ ಸಾರ ಭಾಗ-3 (ಉತ್ತರಾರ್ಧ)

            ಶಿವಾನುಭವ ಗ್ರಂಥಮಾಲಾ ನಂ 52 ಪುಸ್ತಕವಾಗಿ 1953ರಲ್ಲಿ ಪ್ರಕಟವಾಗಿದೆ.

ಶಿವಾನುಭವ ಶಬ್ದಕೋಶ

            1943ರಲ್ಲಿ ಶಿವಾನುಭವ ಗ್ರಂಥಮಾಲೆಯ 28ನೇ ಪುಷ್ಪವಾಗಿ ಪ್ರಕಟಗೊಂಡಿದೆ.

ಭಕ್ತಿಯ ವಚನಗಳು

            1943 ರಲ್ಲಿ ಶಿವಾನುಭವ ಗ್ರಂಥಮಾಲೆಯ ಹತ್ತನೇ ಪುಷ್ಪವಾಗಿ ಪ್ರಕಟವಾದ ಈ ಕೃತಿಯ ಬೆಲೆ ಹತ್ತಾಣೆ. ಬಸವೇಶ್ವರನ ನೂರು ವಚನಗಳನ್ನು ಆಯ್ದು ಈ ಗ್ರಂಥದಲ್ಲಿ ಕೊಟ್ಟಿದ್ದಾರೆ.

ನೈತಿಕ ಮತ್ತು ಭಕ್ತಿಯ ವಚನಗಳು

            1927ರಲ್ಲಿ ಮುದ್ರಣವಾದ ಈ ಕೃತಿಯ ಎರಡನೇ ಆವೃತ್ತಿ 1931ರಲ್ಲಿ ಪ್ರಕಟವಾಗಿದೆ. ವೀರಶೈವ ಶಿವಶರಣರು ತಮ್ಮ ಗ್ರಂಥಗಳಲ್ಲಿ ನೈತಿಕಾಚರಣೆಗೂ ಭಕ್ತಿಗೂ ಅತ್ಯಂತ, ಶ್ರೇಷ್ಠ ಸ್ಥಾನವನ್ನು ಕೊಟ್ಟಿರುತ್ತಾರೆ. ಈ ವಿಷಯಗಳ ಬಗ್ಗೆ ಇರುವ ಅವರ ವಾಕ್ಯಗಳು ಬಹಳ ಉದಾತ್ತವಾಗಿರುತ್ತವೆ.

ಭಕ್ತಿಯ ವಚನಗಳು ಭಾಗ-2

            ಇಪ್ಪತ್ತನೆಯ ಶತಮಾನದ ಬಹಳ ಮುಖ್ಯವಾದ ಸಂಕಲನ ಎಂದರೆ ತಪ್ಪಾಗಲಾರದು. ಸಹಸ್ರಾರು ವಚನಗಳನ್ನು ಓಲೆಯಿಂದ ಪ್ರತಿ ಮಾಡುವಾಗಲೇ ಓದಿದ ಹಳಕಟ್ಟಿಯವರು ಅವುಗಳ ವಿಶಾಲಾರ್ಥವನ್ನು ಗ್ರಹಿಸಿ ವಚನಶಾಸ್ತ್ರಸಾರ ಭಾಗ-1 ರ ನಂತರ ಇಂತಹ ಮಹತ್ತ ್ವವಾದ ಕೃತಿಗಳನ್ನು ಹೊರತರಲು ಸಾಧ್ಯವಾಯಿತು.

ಪರಮಾತ್ಮನ ಸ್ವರೂಪದ ವಚನಗಳು

            1948ರಲ್ಲಿ ಶಿವಾನುಭವ ಗ್ರಂಥಮಾಲೆಯ 11ನೇ ಪುಷ್ಪವಾಗಿ ಪ್ರಕಟವಾಗಿದೆ.

            ಲಿಂಗ ಪರಮಾತ್ಮ (1927) ಪರಮಾತ್ಮನ ಸ್ವರೂಪ ಭಾಗ-1 ಲಿಂಗಸ್ವರೂಪ ಭಾಗ-2 ಸಾಮರಸ್ಯ ಭಾಗ-3, ಶಿವಾನುಭವ ಸತ್ಯಮಾರ್ಗ ಈ ಪುಸ್ತಕಗಳು ವಚನ ಸಾಹಿತ್ಯದ ಅಧ್ಯಯನದ ಫಲ.

ಸದ್ಧರ್ಮ ದೀಪಿಕೆ ಚೆನ್ನಮಲ್ಲಿಕಾರ್ಜುನರು ಅಥವಾ

ಚೆನ್ನಮಲ್ಲಪ್ಪನವರು

            ನಿವೃತ್ತ ಕನ್ನಡ ಶಾಲೆಯ ಅಧ್ಯಾಪಕರಾಗಿ ಅಪರಿಮಿತವಾದ ಸೇವೆಯನ್ನು ವಚನ ಸಾಹಿತ್ಯಕ್ಕೆ ಸಲ್ಲಿಸಿದರು. ಇವರು ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ ವಿವರ ಇಂದಿನವರೆಗೂ ಸರಿಯಾಗಿ ದಾಖಲಾಗಿಲ್ಲ. ಯುವ ವಿದ್ವಾಂಸರು ಈ ನಿಟ್ಟಿನಲ್ಲಿ ಸಂಶೋಧನೆ ಮಾಡಬೇಕು.

            1.          ಅಕ್ಕಗಳ ಸೃಷ್ಟಿವಚನ 1959

            2.          ಅಕ್ಕಮಹಾದೇವಿಯ ವಚನಾರ್ಥ ಪ್ರಥಮ ಭಾಗ

            3.          ಉಡುತಡಿಯ ಮಹಾದೇವಿಯಕ್ಕನ ವಚನಾರ್ಥ-ಎರಡನೇ ಭಾಗ

            4.         ಕೊರವಂಜಿ ವಚನ – ಅಕ್ಕಮಹಾದೇವಿ

            5.          ಗುರುವರ್ಗದ ವಚನಗಳು

            6.          ದೇವರ ದಾಸಿಮಯ್ಯಗಳು = ಜೇಡರ ದಾಸಿಮಯ್ಯಗಳ ಮುಂಡಿಗೆಯ ವಚನ

            7.          ಶಿವಲೆಂಕ ಮಂಚಣ್ಣಗಳ ವಚನ

            8.          ಸರ್ವ ಪುರಾತನರ ವಚನ 1000 ವಚನದ ಸಂಕಲನ

            9.          ಮೂರು ಸಾವಿರ ವಚನಗಳು, ಸದ್ಧರ್ಮ ದೀಪಿಕೆಯಲ್ಲಿ ಪ್ರಕಟವಾಗುತ್ತಾ ಬಂದಿದೆ. ಪುಸ್ತಕದ ರೂಪದಲ್ಲಿ ಹೊರಬಂದಿಲ್ಲ.

            10.        ಸಿದ್ಧೇಶ್ವರನ ವಚನಗಳು

                        ಪ್ರಕಟಿತ ಸಾಹಿತ್ಯವನ್ನು ಮುಂದೆ ಇಟ್ಟುಕೊಂಡು ಪರಿಶೀಲನೆ ಮಾಡಿ ಪುಸ್ತಕಗಳನ್ನು ವಿಂಗಡಿಸಬೇಕು.

ಪ್ರೊ|| ಸಂ.ಶಿ. ಭೂಸನೂರಮಠ

            ಹಿರಿಯ ಕನ್ನಡ ವಿದ್ವಾಂಸರಾದ ಪ್ರೊ. ಸಂ.ಶಿ. ಭೂಸನೂರಮಠರು ಅಪರಿಮಿತವಾದ ಸೇವೆಯನ್ನು ವಚನ ಸಾಹಿತ್ಯಕ್ಕೆ ಸಲ್ಲಿಸಿದ್ದಾರೆ.

            1.          ಲಿಂಗಲೀಲಾ ವಿಲಾಸ – ಕಲ್ಲುಮಠದ ಪ್ರಭುದೇವ

            2.          ಏಕೋತ್ತರ ಶತಸ್ಥಲ – ಮಹಾಲಿಂಗದೇವ

            3.          ಶೂನ್ಯಸಂಪಾದನೆ – ಗೂಳೂರು ಸಿದ್ಧವೀರಣ್ಣೊಡೆಯ

            4.         ಮೋಳಿಗೆ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನ ವಚನಗಳು (ಉತ್ತಂಗಿ ಅವರ ಜೊತೆ)

            5.          ವಚನ ಸಾಹಿತ್ಯ ಸಂಗ್ರಹ

ಉತ್ತಂಗಿ ಚೆನ್ನಪ್ಪನವರು

            ಹುಟ್ಟುಕನ್ನಡಿಗರಾದ ಉತ್ತಂಗಿ ಚೆನ್ನಪ್ಪನವರು ರೆವರೆಂಡ್‍ರಾಗಿ ಬೈಬಲ್ ಜೊತೆಗೆ ವಚನ ಸಾಹಿತ್ಯವನ್ನು  ಅಧ್ಯಯನ ಮಾಡಿದವರು. ಅವರ ಸೇವೆ ಸದಾ ಸ್ಮರಣೀಯ.

            1.          ಸರ್ವಜ್ಞ ವಚನಗಳು

            2.          ಆದಯ್ಯನ ವಚನಗಳು – ಮುರುಘಾಮಠ 1957

            3.          ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಮ್ಮನ ವಚನಗಳು

                        (ಪ್ರೊ. ಸಂ.ಶಿ. ಭೂಸನೂರಮಠರವರ ಜೊತೆ)

                        ವೀರಭದ್ರಪ್ಪ ಹಾಲಬಾವಿ ಧಾರವಾಡ ಪ್ರಕಾಶಕರು 1950

            4.         ಸಿದ್ಧರಾಮ ಸಾಹಿತ್ಯ ಸಂಗ್ರಹ – 1955, ಪ್ರಕಾಶಕರು ಜಯದೇವಿ ತಾಯಿ ಲಿಗಾಡೆಯವರು ಕನ್ನಡ ಕೋಟೆ

            5.          ಕುಷ್ಟಗಿ ಕರಿಬಸವೇಶ್ವರರ ವಚನಗಳು

ಪ್ರೊ. ಶಿ.ಶಿ. ಬಸವನಾಳ

            ಪ್ರೊ|| ಶಿ.ಶಿ. ಬಸವನಾಳರು ವಚನ ಸಾಹಿತ್ಯ ಸಂಪಾದನೆ ಪ್ರಕಟಣೆ ಇಂಗ್ಲೀಷ್ ಅನುವಾದಕ್ಕೆ ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದ್ದಾರೆ.

            1.          ಬಸವಣ್ಣನವರ ಷಟ್‍ಸ್ಥಲದ ವಚನಗಳು

            2.          ಬಸವಣ್ಣನವರ ಷಟ್‍ಸ್ಥಲದ ವಚನಗಳು ಗ್ರಂಥಾಲಯ ಆವೃತ್ತಿ 1962

            3.          ಬಸವಣ್ಣನವರ ಹೆಚ್ಚಿನ ವಚನಗಳು

ಡಾ. ಎಲ್. ಬಸವರಾಜು

            ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು ತಮ್ಮ ಜೀವಿತಾವಧಿಯಲ್ಲಿ ವಚನ ಸಂಪಾದನೆಗೆ ಅಪರಿಮಿತವಾದ ಸೇವೆಯನ್ನು ಸಲ್ಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಬಗ್ಗೆ ಅಖಿಲ ಭಾರತ ಮಟ್ಟದಲ್ಲಿ ಚರ್ಚೆಯಾಗಬೇಕು.

            1.          ಬಸವಣ್ಣನವರ ವಚನಗಳು (ಬಸವೇಶ್ವರ ವಚನ ಸಂಗ್ರಹ) 1952

            2.          ಅಲ್ಲಮನ ವಚನ ಚಂದ್ರಿಕೆ (ಪ್ರಭುದೇವರ ವಚನಗಳು ಮತ್ತು ಸ್ವರವಚನಗಳು) 1960

            3.          ಬಸವ ವಚನಾಮೃತ ಭಾಗ-1 1966 ಭಾಗ-2 1989

            4.         ಅಕ್ಕನ ವಚನಗಳು 1966

            5.          ಶಿವಗಣಪ್ರಸಾದಿ ಮಹಾದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ – 1969

            6.          ದೇವರ ದಾಸಿಮಯ್ಯನ ವಚನಗಳು – 1970

            7.          ಅಲ್ಲಮನ ವಚನಗಳು – 1969

            8.          ಸರ್ವಜ್ಞನ ವಚನಗಳು – 1970

            9.          ಸರ್ವಜ್ಞನ ವಚನಗಳು (ಸಂಗ್ರಹ) 1975

            10.        ವಚನ ಚಿಂತನ (1982)

            11.         ಅಲ್ಲಮನ ಲಿಂಗಾಂಗ ಸಂವಾದ (ಪ್ರಭುಲಿಂಗಲೀಲೆಯ ಆಧಾರದಿಂದ) 1986

            12.         ಬಸವಣ್ಣನ ಷಟ್ಸ್ ್ಥಲದ ವಚನಗಳು (ಸಹ ವ್ಯಾಖ್ಯಾನ ಸಹಿತ) 1990

            13.         ಶೂನ್ಯಸಂಪಾದನೆ – 1996 (ಸಂಗ್ರಹ ಕರ್ನಾಟಕ ಸಾಹಿತ್ಯ ಅಕಾಡೆಮಿ)

            14.        ಶೂನ್ಯಸಂಪಾದನೆ (ಗೂಳೂರು ಸಿದ್ಧವೀರಣ್ಣೊಡೆಯ ಮೌಲಿಕ ಕೃತಿಯ

                        ಸರಳ ನಿರೂಪಣೆ) 1997, 2016

            15.         ಬೆಡಗಿನ ವಚನಗಳು – 1998

            16.         [ಅಲ್ಲಮನು ಮೈಮೇಲೆ ಬಂದಾಗ 2004]

            17.         ಪ್ರಭುದೇವರ ಷಟ್ಸ್ ್ಥಲದ ವಚನಗಳು 2005 ಸಹಸ್ಪಂದನ ಸಹಿತ

            18.         ಶ್ರೀಘನಲಿಂಗದೇವರ ವಚನಗಳು 2005 ವ್ಯಾಖ್ಯಾನ ಸಹಿತ

            19.         ಸೊನ್ನಲಾಪುರದ ಸಂತ ಸಿದ್ಧರಾಮರ ನಿಜವಚನಗಳು 2007

            20.        ನೂರಾರು ಶರಣರ ಸಾವಿರ ವಚನಗಳು 2008

            21.         [ಕವನ ಕೂಡಲಸಂಗ 2009]

            22.        ಬಸವಪೂರ್ವ ವಚನಕಾರರು 2009

            23.        ಕಡಕೋಳ ಮಡಿವಾಳಪ್ಪನವರ ಮಹಾಂತ ನಿಜಲೀಲಾನುಭವ ವಚನ ಮತ್ತು ಪದಗಳೂ 2011

ಡಾ. ಆರ್.ಸಿ. ಹಿರೇಮಠ

            ವಚನ ಸಾಹಿತ್ಯ ಪ್ರಕಟಣ ಇತಿಹಾಸದಲ್ಲಿ ಡಾ. ಆರ್.ಸಿ. ಹಿರೇಮಠರಿಗೆ ಅಗ್ರಸ್ಥಾನ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಚನ ಸಾಹಿತ್ಯದ ಬೃಹತ್ ಹಸ್ತಪ್ರತಿ ಭಂಡಾರವನ್ನು ಸ್ಥಾಪಿಸಿದ್ದು, ವಚನ ಸಾಹಿತ್ಯ ಪ್ರಕಟಣೆಗೆ ದುಡಿಯುವಂತಹ ವಿದ್ವಾಂಸರನ್ನು ತಯಾರು ಮಾಡಿದ್ದು ಇವರ ಜೀವಮಾನದ ಕೊಡುಗೆ.

            1.          ಅಖಂಡೇಶ್ವರ ವಚನ (ಸಂಪಾದನೆ) 1956

            2.          ಷಟ್‍ಸ್ಥಲ ಜ್ಞಾನಸಾರಾಮೃತ ಮುರುಘಾಮಠ ಧಾರವಾಡ 1964

            3.          ಷಟ್‍ಸ್ಥಲಪ್ರಭೆ (ಸಂಶೋಧನೆ) 1965

            4.         ಇಪ್ಪತ್ತೇಳು ಶಿವಶರಣೆಯರ ವಚನಗಳು (ಸಂಪಾದನೆ) 1968

            5.          ಅಮುಗೆ ರಾಯಮ್ಮನ ಮತ್ತು ಅಕ್ಕಮ್ಮನ ವಚನಗಳು 1968

            6.          ಸಿದ್ಧರಾಮೇಶ್ವರ ವಚನಗಳು 1968

            6ಎ.      ಬಸವಣ್ಣನವರ ವಚನಗಳು 1968

            7.          ವೀರಶೈವ ಚಿಂತಾಮಣಿ 1971

            8.          ಮುಕ್ತಿಕಂಠಾಭರಣ 1971

            9.          ನೀಲಮ್ಮನ ವಚನಗಳು ಮತ್ತು ಲಿಂಗಮ್ಮನ ವಚನಗಳು 1971

            10.        ಶೂನ್ಯಸಂಪಾದನೆ – ಶಿವಗಣಪ್ರಸಾದಿ ಮಹಾದೇವಯ್ಯ 1971

            11.         ವಿಶೇಷಾನುಭವ ಷಟ್ಸ್ ್ಥಲ – 1971

            12.         ಶೂನ್ಯಸಂಪಾದನೆ – ಗುಮ್ಮಳಾಪುರದ ಸಿದ್ಧಲಿಂಗ ದೇವರ 1972

            13.         ಸಕಲ ಪುರಾತನರ ವಚನಗಳು-1 1973

            14.        ಬ್ರಹ್ಮಾದ್ವೈತ ಸಿದ್ಧಾಂತ ಷಟ್‍ಸ್ಥಲಾಭರಣ – 1973

            15.         ಮಹಾದೇವಿಯಕ್ಕನ ವಚನಗಳು – 1973

            16.         ಅಲ್ಲಮಪ್ರಭುದೇವರ ವಚನಗಳು – 1976

 

ಡಾ. ಎಂ.ಎಂ. ಕಲಬುರ್ಗಿ ವಚನ ಸಂಪಾದನೆ

            ವಚನ ಸಾಹಿತ್ಯದ ಪ್ರಕಟಣೆಯಲ್ಲಿ ಅಪರಿಮಿತವಾದ ಸೇವೆಯನ್ನು ಸಲ್ಲಿಸಿದರು. ಸಮಗ್ರ ವಚನ ಸಂಪುಟದ ಪ್ರಧಾನ ಸಂಪಾದಕರಾಗಿ ತಮ್ಮ ಜೀವಿತಾವಧಿಯಲ್ಲಿ ಮೂರು ಸಾರಿ ಸಂಪಾದಿಸಿ ಪ್ರಕಟಿಸಿದ್ದು, ಫಗು. ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಪ್ರಕಟಣೆ, ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆ, ಬಸವ ಸಮಿತಿಯ ಬಹುಭಾಷಾ ಯೋಜನೆಯಲ್ಲಿ ವಚನ ಸಾಹಿತ್ಯ ಪ್ರಕಟಣೆ ಹೀಗೆ ವಚನ ಸಾಹಿತ್ಯಕ್ಕೆ ಸಂದ ಇವರ ಸೇವೆ ಬಗ್ಗೆ ಯುವ ವಿದ್ವಾಂಸರು ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು.

            1.          ಬಸವಸ್ತೋತ್ರದ ವಚನಗಳು ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1976

            2.          ಬಸವಣ್ಣನವರ ಟೀಕಿನ ವಚನಗಳು-1 ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1970

            3.          ಬಸವಣ್ಣನವರ ಟೀಕಿನ ವಚನಗಳು-2 ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1982

            4.         ವಚನಶಾಸ್ತ್ರಸಾರ ಭಾಗ-1, (ಫ.ಗು. ಹಳಕಟ್ಟಿ) ಇತರರೊಂದಿಗೆ ತೋಂಟದಾರ್ಯಮಠ ಗದಗ 1982, 1999 ವಿಜಾಪುರ 2007

            5.          ಚೆನ್ನಬಸವಣ್ಣನವರ ಷಟ್‍ಸ್ಥಲ ವಚನ ಮಹಾಸಂಪುಟ ತೋಂಟದಾರ್ಯಮಠ ಗದಗ 1992

            6.          ವಚನಸಂಕಲನ ಸಂಪುಟ – ನಾಲ್ಕು (ಇತರರೊಂದಿಗೆ) ತೋಂಟದಾರ್ಯಮಠ ಗದಗ 1992

            7.          ಬಸವಣ್ಣನವರ ವಚನಗಳು ಕರ್ನಾಟಕ ಸರ್ಕಾರ ಕನ್ನಡ ಸಂಸ್ಕøತಿ ಇಲಾಖೆ, ಪುಸ್ತಕ ಪ್ರಾಧಿಕಾರ 1993, 2002, 2016

            8.          ಸಂಕೀರ್ಣ ವಚನ ಸಂಪುಟ-1 ಕನ್ನಡ ಸಂಸ್ಕøತಿ ಇಲಾಖೆ, ಪುಸ್ತಕ ಪ್ರಾಧಿಕಾರ 1993, 2002

            9.          ಸಿದ್ಧರಾಮಯ್ಯದೇವರ ವಚನಗಳು (ಡಾ. ಸಾ.ಶಿ ಮರುಳಯ್ಯನವರೊಂದಿಗೆ)

            10.        ಷಟ್ಸ್ ್ಥಲ ಶಿವಾಯಣ (ಡಾ. ಸಿ.ಸಿ ಕೃಷ್ಣಕುಮಾರ್‍ರೊಂದಿಗೆ) ತೋಂಟದಾರ್ಯಮಠ ಗದಗ 1999

            11.         ವಚನ ಸಂಕಲನ ಸಂಪುಟ-6 (ಇತರರೊಂದಿಗೆ) ತೋಂಟದಾರ್ಯಮಠ ಗದಗ 2002

            12.         ಪರಮಾನಂದ ಸುಧೆ (ಡಾ. ವೀರಣ್ಣ ರಾಜೂರ ಜೊತೆ)

            13.         ವಚನ : 2 ಬಸವ ಸಮಿತಿ ಬೆಂಗಳೂರು 2012 23 ಭಾಷೆಗೆ ಭಾಷಾಂತರ

            14.        ಏಕೋತ್ತರಶತಸ್ಥಲ (ಡಾ. ವೀರಣ್ಣ ರಾಜೂರ) ರವರೊಂದಿಗೆ ತೋಂಟದಾರ್ಯ ಮಠ ಗದಗ 2014

            15.         ಶೂನ್ಯಸಂಪಾದನೆ (ಡಾ. ವೀರಣ್ಣ ರಾಜೂರ) ರವರೊಂದಿಗೆ ತೋಂಟದಾರ್ಯ ಮಠ 2015

ಎಸ್. ಶಿವಣ್ಣ

            ಹಸ್ತಪ್ರತಿ ತಜ್ಞ, ಆಕರ ವಿಜ್ಞಾನಿ ಎಸ್. ಶಿವಣ್ಣನವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಬಗ್ಗೆ ವಿವರವಾದ ಅಧ್ಯಯನ ನಡೆಯಬೇಕು. ಅಪ್ರಕಟಿತ ವಚನ ಸಾಹಿತ್ಯದ ಬಗ್ಗೆ ವಿವರವಾದ ಮಾಹಿತಿ ನೀಡುತ್ತಾ ಇದ್ದ ಏಕಮೇವ ವ್ಯಕ್ತಿ ಎಂದರೆ ಅತಿಶಯೋಕ್ತಿ ಅಲ್ಲ. ಹಲವು ಅಪ್ರಕಟಿತ ಬಿಡಿ ಬಿಡಿ ವಚನಗಳು ಪಾತಾಳಗರುಡಿ ಹಾಕಿ ಹುಡುಕಿ ವಿಶೇಷ ಸಂಚಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿರುವ “ಬಿಡುಮುತ್ತು” (2004) ಸಂಪುಟವನ್ನು ಪರಿಶೀಲಿಸಿದರೆ ವಚನ ಸಂಪಾದನೆಗೆ ಅವರ ಸೇವೆಯ ವಿಸ್ತಾರದ ಅರಿವು ಉಂಟಾಗುತ್ತವೆ.

            1.          ಕುಷ್ಟಗಿ ಕರಿಬಸವೇಶ್ವರನ ವಚನಗಳು ತೋಂಟದಾರ್ಯಮಠ ಗದಗ 1990

            2.          ಸಮಗ್ರ ವಚನ ಸಂಪುಟ-11 ಕನ್ನಡ ಸಂಸ್ಕøತಿ ಇಲಾಖೆ 1993, 2002

            3.          ಚೆನ್ನಬಸವಣ್ಣನವರ ವಚನಗಳು ಬಡಗಿ ಪ್ರಕಾಶನ ತುಮಕೂರು 1995

            4.         ಹೊಸ ವಚನಗಳು ಕರ್ಣಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು 1998

            5.          ವಚನ ಸಂಕಲನ ಸಂಪುಟ-4

            6.          ನೀಲಮ್ಮನ ವಚನಗಳು ಬಸವ ಸಮಿತಿ 1993

            7.          ಅಕ್ಕಮಹಾದೇವಿ ವಚನಗಳು ಬೆಂಗಳೂರು 1993

            8.          ಏಕೋತ್ತರ ಶತಸ್ಥಲ 2014 ಇತರರೊಂದಿಗೆ ಎಳಂದೂರು ಪರ್ವತ ಶಿವಯೋಗಿ ಕೃತಿ (ಅಪೂರ್ಣ)

ಪ್ರೊ. ಎಸ್. ಉಮಾಪತಿ

                        ನಿವೃತ್ತ ಕನ್ನಡ ಪ್ರಾಧ್ಯಾಪಕರು ದಾವಣಗೆರೆ ಪರಿಸರದಲ್ಲಿ ಹಸ್ತಪ್ರತಿ ಸಂಗ್ರಹ ಸಂಪಾದನೆಗೆ ವಿಶೇಷವಾದ ಸೇವೆಯನ್ನು ಸಲ್ಲಿಸಿದರು. ತಮ್ಮ 88ನೇ ವಯಸ್ಸಿನಲ್ಲಿ ನವೆಂಬರ್ 2020ರಲ್ಲಿ ಮಹಾಲಿಂಗದಲ್ಲಿ ಲೀನವಾದರು.

            1.          ಸಕಲೇಶ ಮಾದರಸನ ವಚನಗಳು

            2.          ಮಡಿವಾಳ ಮಾಚಿದೇವ ವಚನಗಳು

            3.          ಜೇಡರ ದಾಸಿಮಯ್ಯನ ವಚನಗಳು

            4.         ಷಟ್‍ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು 1984

            5.          ಏಕೋತ್ತರ ಶತಸ್ಥಲ ಏಳಂದೂರು (ಪರ್ವತ ಶಿವಯೋಗಿಯ ವಚನಗಳು) ಎಸ್. ಶಿವಣ್ಣ ಮತ್ತು ಡಾ|| ಬಿ. ನಂಜುಂಡಸ್ವಾಮಿ

ಡಾ. ಎಸ್. ವಿದ್ಯಾಶಂಕರ ಸಂಪಾದಿತ ವಚನ ಸಾಹಿತ್ಯ

            ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿ ವಚನಾಭ್ಯಾಸಿಗಳಾಗಿ ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾ ವಚನಗಳ ಸಂಪಾದನೆ, ಪ್ರಕಟಣೆಯಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದರು. ಸಮಗ್ರ ವಚನ ಸಂಪಾದನೆ ಪ್ರಕಟಣೆಯಲ್ಲಿ ಇವರ ಸೇವೆ ಸಂದಿದೆ. ಅಪ್ರಕಟಿತ ಹಲಗೆಯಾರ್ಯನ ಶೂನ್ಯ ಸಂಪಾದನೆ ಪ್ರಕಟಣೆ ಅವರು ವಚನ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಕೊಡುಗೆ.

            1.          ಗುಬ್ಬಿಯ ಮಲ್ಲಣ್ಣನ ಗಣಭಾಷ್ಯ ರತ್ನಮಾಲೆ ಪ್ರಕಾಶನ ತೊರೆಮಠ ಗುಬ್ಬಿ ತುಮಕೂರು ಜಿಲ್ಲೆ 2006, ಸ್ನೇಹ ಪ್ರಕಾಶನ 2021

            2.          ವಚನ ಪರಿಭಾಷಾ ಕೋಶ – 1993 ಕನ್ನಡ ಸಂಸ್ಕøತಿ ಇಲಾಖೆ, ಬೆಂಗಳೂರು

            3.          ಹಲಗೆದೇವರ ಶೂನ್ಯಸಂಪಾದನೆ (ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರೊಡನೆ) 2000, 2010

            4.         ಅಂಬಿಗರ ಚೌಡಯ್ಯನ ವಚನಗಳು ಡಾ. ಸಿದ್ಧಾಶ್ರಮ ಇವರೊಡನೆ 1980

            5.          ಶ್ರೀ ಸಿದ್ಧರಾಮೇಶ್ವರ ವಚನಗಳು ಸಂಪಾದಿತ 1993 ಕನ್ನಡ ಮತ್ತು ಸಂಸ್ಕøತಿ ಇಲಾಖೆ, 2002, 2016

            6.          ಸಂಕೀರ್ಣ ವಚನ ಸಂಪುಟ-2 ಕನ್ನಡ ಮತ್ತು ಸಂಸ್ಕøತಿ ಇಲಾಖೆ 1993, 2002, 2016

            7.          ವಚನಗಳು (ವಚನಗಳ ಪ್ರಾತಿನಿಧಿಕ ಸಂಗ್ರಹ) ಕರ್ನಾಟಕ ಸಾಹಿತ್ಯ ಅಕಾಡೆಮಿ 1998

            8.          ಸಿದ್ಧಲಿಂಗೇಶ್ವರರ ವಚನಗಳ ಟೀಕೆ ಅಜ್ಞಾತ ಕವಿಕೃತ ಸಮೇತ 2011

            9.          ಎನ್ನ ನಾ ಹಾಡಿಕೊಂಬೆ ಟೀಕಾ ಸಮೇತ ಬಸವಣ್ಣನವರ ವಚನಗಳ ಸಾಂಸ್ಕøತಿಕ ಅಧ್ಯಯನ ಪ್ರಿಯದರ್ಶಿನಿ ಪ್ರಕಾಶನ 2012

            10.        ಅಲಕ್ಷಿತ ವಚನಕಾರರು 2013 ಪ್ರಿಯದರ್ಶಿನಿ ಪ್ರಕಾಶನ

            11.         ಕಲ್ಲುಮಠದ ಪ್ರಭದೇವರ ಕೃತಿಗಳು 2013

ಜಿ.ಎ. ಶಿವಲಿಂಗಯ್ಯ

            ಮಂಡ್ಯದ ಗುತ್ತಲು ಗ್ರಾಮದ ಗ್ರಾಮಾಂತರ ಪ್ರತಿಭೆ ಜಿ.ಎ. ಶಿವಲಿಂಗಯ್ಯನವರು ಮೈಸೂರು ಮರಿಮಲ್ಲಪ್ಪ ಜೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ.

            1.          ಮುತ್ತಿನಕಂತೆಯ ದೇವರ ವಚನಗಳು

            2.          ಚೆನ್ನಬಸವಣ್ಣನವರ ಮಿಶ್ರಷಟ್ಸ್ ್ಥಲದ ವಚನಗಳು, ತೋಂಟದಾರ್ಯ ಮಠ, ಗದಗ

            3.          ಷಟ್‍ಪ್ರಕಾರ ಸಂಗ್ರಹ – 1987 ತೋಂಟದಾರ್ಯ ಮಠ ಗದಗ

            4.         `ವಚನೈಕೋತ್ತರ ಶತಸ್ಥಲ’ ಚೆನ್ನಬಸವಣ್ಣನವರು (ಕ್ರಿ.ಶ. 1160) 108 ವಚನಗಳ ಸಂಕಲನರೂಪದ ಗ್ರಂಥ

            5.          ಮೋಕ್ಷದರ್ಶನ ಸಂಗ್ರಹ (ಅಪೂರ್ಣ ವಚನ ಸಂಕಲನ)

            6.          ಚೆನ್ನಬಸವೇಶ್ವರದೇವರ ಸ್ತೋತ್ರದ ವಚನಗಳು 1991 ತೋಂಟದಾರ್ಯಮಠ

            7.          ಎಲ್ಲ ಪುರಾತರ ವಚನ  ಕುಂತೂರು ಮಹಾಂತ ದೇವರು, ವಚನ ಸಂಕಲನ ಸಂಪುಟ II

            8.          ಚೆನ್ನಬಸವೇಶ್ವರದೇವರ ರಾಜಯೋಗದ ವಚನ, ವಚನ ಸಂಕಲನ ಸಂಪುಟ II 1990 ತೋಂಟದಾರ್ಯ ಮಠ ಗದಗ

ಪಿ.ಎಂ. ಗಿರಿರಾಜು

            ಮೈಸೂರು ವ್ಯಾಪಾರಸ್ಥರ ಮನೆ ಮಗನಾಗಿ ವಚನ ಸಾಹಿತ್ಯ ಪ್ರಕಟಣೆಗೋಸ್ಕರ ತಮ್ಮ ಜೀವನವನ್ನು ಮುಡಿಪಿಟ್ಟು ಹೋರಾಟ ಮಾಡಿದವರು. ವಚನ ಸಾಹಿತ್ಯ ಸಂಪಾದನೆ, ಪ್ರಕಟಣೆಗೆ ಅಪರಿಮಿತವಾದ ಸೇವೆ ಸಂದಿದೆ.

            1.          ಆಚರಣೆ ಸಂಬಂಧದ ವಚನಗಳು – ಸಂಪಾದನೆ ಹರತಾಳ ಚನ್ನಂಜಯದೇವರು

            2.          ಸಂಬಂಧಾಚರಣೆ ವಚನಗಳು                   3.          ಷಟ್‍ಪ್ರಕಾರ ಸಂಗ್ರಹ

            4.         ಚಿದೈಶ್ವರ್ಯ ಚಿದಾಭರಣ                        5.          ಸಿದ್ಧರಾಮೇಶ್ವರ ವಚನಗಳು

            6.          ಬಸವಣ್ಣನವರ 101 ವಚನಗಳು      7.             ಜೇಡರ ದಾಸಿಮಯ್ಯಗಳ ವಚನ

            8.          ವಿರತಾಚರಣೆಯ ವಚನಗಳು ಸಂಪಾದನೆ ಸಿದ್ಧವೀರೇಶ್ವರದೇವರು

ಬಿ.ಎಸ್. ಸಣ್ಣಯ್ಯ

            ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥ ಸಂಪಾದನೆ ವಿಭಾಗದಲ್ಲಿ ಸಂಪಾದಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಬಿ.ಎಸ್. ಸಣ್ಣಯ್ಯನವರು ಅಖಿಲ ಭಾರತ ಮಟ್ಟದಲ್ಲಿ ಹಸ್ತಪ್ರತಿ ಸಂಗ್ರಹಕ್ಕೆ ತಿರುಗಾಡಿದ್ದರು. ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಗೆ ವಿಶೇಷ ಕ್ರಮವನ್ನು ಹಾಕಿದ ಹಿರಿಯ ವಿದ್ವಾಂಸರು.

            1.          ಮೆರೆಮಿಂಡಯ್ಯನ ವಚನಗಳು

            2.          ದೇವರ ದಾಸಿಮಯ್ಯನ = ಜೇಡರ ದಾಸಿಮಯ್ಯನ ವಚನಗಳು

            3.          ಅರಿವಿನ ಮಾರಿತಂದೆಗಳ ವಚನ   4.             ಕೋಲಶಾಂತಯ್ಯನ ವಚನ

            5.          ಗಜೇಶಮಸಣಯ್ಯಗಳ ವಚನ       6.             ಡಕ್ಕೆಯ ಬೊಮ್ಮಣ್ಣಗಳ ವಚನ

            7.          ಬಿಬ್ಬಿಬಾಚಯ್ಯನ ವಚನಗಳು       8.             ಮಧುವಯ್ಯಗಳ ವಚನ

            9.          ಮೋಳಿಗೆ ಮಾರಯ್ಯನ ವಚನ       10.             ಉರಿಲಿಂಗದೇವನ ವಚನಗಳು

ಡಾ. ವೈ.ಸಿ. ಭಾನುಮತಿ

            ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥ ಸಂಪಾದನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸುತ್ತಾ ನಿವೃತ್ತರಾಗಿದ್ದಾರೆ. ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು

            1.          ವಚನ ಸಂಕಲನ ಸಂಪುಟ – ಗಿ – 1992 ಗದುಗಿನ ತೋಂಟದಾರ್ಯ ಮಠ, ಈ ಸಂಪುಟದಲ್ಲಿ ಅವಿಧಿತ ಸಂಕಲನಕಾರನ ವಚನಗಳು, ಸಿದ್ಧಲಿಂಗ ಸೂತ್ರ ಶಿಖಾ ಚಕ್ರ ದೀಕ್ಷಾ ವಿಧಾನದ ವಚನಗಳನ್ನು ಈ ಸಂಪುಟದಲ್ಲಿ ಸಂಕಲಿಸಲಾಗಿದೆ.

            2.          ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ ಗಿIII, 2021

            3.          ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ Iಘಿ,  2021

            4.         ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ ಘಿI, 2021 ಸಂಪುಟಗಳನ್ನು ಸಂಪಾದಿಸಿದ್ದಾರೆ.

            ಮೈಸೂರು ನಗರದಲ್ಲಿ ವಚನ ಸಾಹಿತ್ಯಕ್ಕೆ ದುಡಿದವರು.ಎಂ. ಬಸವಲಿಂಗಶಾಸ್ತ್ರಿಗಳು, ತಿಪ್ಪಯ್ಯ ಶಾಸ್ತ್ರಿಗಳು, ಅರಮನೆ ಪಂಚಗವಿಮಠದ ಗೌರೀಶಂಕರಸ್ವಾಮಿಗಳು, ಹೆಚ್. ದೇವೀರಪ್ಪ, ಡಾ. ಎಲ್. ಬಸವರಾಜು ಬಿ.ಎಸ್. ಸಣ್ಣಯ್ಯ, ಪಿ.ಎಂ. ಗಿರಿರಾಜು, ಸದ್ಧರ್ಮ ದೀಪಿಕೆ, ಚೆನ್ನಮಲ್ಲಿಕಾರ್ಜುನರು, ಜಿ.ಎ. ಶಿವಲಿಂಗಯ್ಯ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು, ಡಾ. ವೈ.ಸಿ. ಭಾನುಮತಿ, ಡಾ. ಇಮ್ಮಡಿ ಶಿವಬಸವಸ್ವಾಮಿಗಳು, ವಿದ್ವಾನ್ ಡಿ. ಸಿದ್ಧಗಂಗಯ್ಯ, ಎಸ್. ಶಿವಣ್ಣ ಇನ್ನು ಮುಂತಾದವರು. ಹಿರಿಯ ವಿದ್ವಾಂಸರಾದ ಪ್ರೊ. ಡಿ.ಎಲ್. ನರಸಿಂಹಾಚಾರ್, ಪ್ರೊ. ತೀ.ನಂ. ಶ್ರೀಕಂಠಯ್ಯ, ವಚನ ಸಾಹಿತ್ಯ ಸಂಪಾದನೆಗೆ ಮಾರ್ಗದರ್ಶನ ಮಾಡಿದ್ದಾರೆ. ಡಾ. ಚಿದಾನಂದಮೂರ್ತಿ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಡಾ. ದೇಜಗೌ ವಚನ ಸಾಹಿತ್ಯ ಪ್ರಕಟಣೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

ಡಾ. ಬಿ.ಆರ್. ಹಿರೇಮಠ

            ಕರ್ನಾಟಕ ಧಾರವಾಡ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅಪ್ರಕಟಿತ ವಚನ ಸಾಹಿತ್ಯ ಸಂಪಾದನೆಯಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದರು.

            1.          ಅದ್ವೈತಾನಂದದ ವಚನಗಳು – 1983 ತೋಂಟದಾರ್ಯಮಠ ಗದಗ

            2.          ಕಂಡಿತದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ

            3.          ಕುಸ್ತಿ ಆಗಮದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ

            4.         ಗೊಹೇಶ್ವರಯ್ಯನ ವಚನ ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ

            5.          ಚಿದ್ಭಸ್ಮಮಣಿಮಂತ್ರ ಮಹಾತ್ಮೆಯ ಸ್ಥಲದ ವಚನ, ಜಟಾಶಂಕರದೇವರು-ವಚನ ಸಂಕಲನ

                        ಸಂಪುಟ-I 1990 ತೋಂಟದಾರ್ಯ ಮಠ

            6.          `ನಂಜುಂಡ ಶಿವಾ’ ಅಂಕಿತದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯಮಠ ಗದಗ

            7.          ನಿರಾಲಂಬ ಪ್ರಭುದೇವನ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ

            8.          ಪರಂಜ್ಯೋತಿಯರ ವಚನ ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ

            9.          ಬಸವಸ್ತೋತ್ರದ ವಚನಗಳು : 2 ಸಂಪಾದನೆ ಬೋಳಬಸವೇಶ್ವರದೇವರು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ

            10.        ಲಿಂಗಸಾವಧಾನದ ವಚನಗಳು ಸಣ್ಣ ಬರೆಹದ ಗುರುಬಸವರಾಜದೇವರು ವಚನ ಸಂಕಲನ ಸಂಪುಟ -I 1990 ತೋಂಟದಾರ್ಯಮಠ ಗದಗ

            11.         ಸಂಪಾದನೆಯ ಸಾರಾಮೃತ-ಕಟ್ಟಿಗೆಹಳ್ಳಿ ಸಿದ್ಧಲಿಂಗಸ್ವಾಮಿ-1988 ತೋಂಟದಾರ್ಯಮಠ ಗದಗ

ಡಾ. ವೀರಣ್ಣ ರಾಜೂರವರ ವಚನ ಸಾಹಿತ್ಯ ಸಂಪಾದನೆ

            ವಚನ ಸಾಹಿತ್ಯ ಸಂಪಾದನೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿ ಇಂದಿಗೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಡಾ. ಎಂ.ಎಂ. ಕಲಬುರ್ಗಿರವರ ಮಹಾಲಿಂಗದಲ್ಲಿ ಲೀನರಾದ ನಂತರ ಸಮಗ್ರ ವಚನ ಸಂಪುಟದ ಪ್ರದಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.

            1.          ಉರಿಲಿಂಗದೇವರ ವಚನಗಳು (ಎಸ್.ಎನ್. ಭೂಸರೆಡ್ಡಿ ಅವರೊಂದಿಗೆ) ಮಂಗಳ ಪ್ರಕಾಶನ ಧಾರವಾಡ 1978

            2.          ವಚನಾಮೃತಸಾರ (ಕಾಶಿ ಪುಟ್ಟಸೋಮಾರಾಧ್ಯರೊಂದಿಗೆ) 1979 ಮಂಗಳ ಪ್ರಕಾಶನ, ಧಾರವಾಡ

            3.          ಗಜೇಶ ಮಸಣಯ್ಯನ ವಚನಗಳು (ಕಾಶಿ ಪುಟ್ಟಸೋಮಾರಾಧ್ಯರೊಂದಿಗೆ) 1980 ಮಂಗಳ ಪ್ರಕಾಶನ ಧಾರವಾಡ

            4.         ವಚನ ಶಾಸ್ತ್ರಸಾರ ಭಾಗ-1 (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) ವೀರಶೈವ ಅಧ್ಯಯನ ಸಂಸ್ಥೆ, ಗದಗ 1981

            5.          ಸರ್ವಜ್ಞನ ವೀರಗಣಸ್ತೋತ್ರದ ವಚನಗಳು (ಎಚ್.ಎಸ್. ಭೂಸರೆಡ್ಡಿ ಅವರೊಂದಿಗೆ) 1981 ಮೂರುಸಾವಿರಮಠ, ಹುಬ್ಬಳ್ಳಿ

            6.          ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ವೀರಶೈವ ಅಧ್ಯಯನ ಸಂಸ್ಥೆ – 1983

            7.          ಶೀಲಸಂಪಾದನೆ ವೀರಶೈವ ಅಧ್ಯಯನ ಸಂಸ್ಥೆ ಗದಗ 1984

            8.          ಪ್ರಭುದೇವರ ಮಂತ್ರಗೋಪ್ಯ (ವ್ಯಾಖ್ಯಾನ ಸಹಿತ) 1984 ಸಿದ್ಧರಾಮೇಶ್ವರ ಪ್ರಕಾಶನ, ಯಲಬುರ್ಗಾ

            9.          ಭಕ್ತ್ಯಾನಂದ ಸುಧಾರ್ಣವ ವೀರಶೈವ ಅಧ್ಯಯನ ಸಂಸ್ಥೆ 1985

            10.        ಅರಿವಿನ ಮಾರಿತಂದೆಯ ನೂರೊಂದು ವಚನಗಳು 1986 ಮೂರುಸಾವಿರ ಮಠ, ಹುಬ್ಬಳ್ಳಿ

            11.         ಸೂಕ್ಷ್ಮಮಿಶ್ರ ಷಟ್‍ಸ್ಥಲ 1987 ವೀರಶೈವ ಅಧ್ಯಯನ ಸಂಸ್ಥೆ, ಗದಗ

            12.         ಎಲ್ಲಾ ಪುರಾತನರ ಸ್ತೋತ್ರದ ವಚನಗಳು 1988 ವೀರಶೈವ ಅಧ್ಯಯನ ಸಂಸ್ಥೆ ಗದಗ

            13.         ಪ್ರಭುದೇವ ಷಟ್‍ಸ್ಥಲ ಜಂಗಮಸ್ಥಲ ನಿರ್ದೇಶ 1989 ವೀರಶೈವ ಅಧ್ಯಯನ ಸಂಸ್ಥೆ, ಗದಗ

            14.        ವಚನಸಾರ, ವೀರಶೈವ ಅಧ್ಯಯನ ಸಂಸ್ಥೆ, ಗದಗ

            15.         ಜ್ಞಾನಷಟ್‍ಸ್ಥಲಸಾರ 1991 ವೀರಶೈವ ಅಧ್ಯಯನ ಸಂಸ್ಥೆ, ಗದಗ

            16.         ಶಿವಶರಣೆಯರ ವಚನ ಸಂಪುಟ ಕನ್ನಡ ಸಂಸ್ಕøತಿ ಇಲಾಖೆ 1993, 2001, 2015, 2021

            17.         ಸಂಕೀರ್ಣ ವಚನ ಸಂಪುಟ-ಐದು 1993, 2001, 2015, 2021

            18.         ಸಂಕೀರ್ಣ ವಚನ ಸಂಪುಟ-ಏಳು 1993, 2001, 2015, 2021

            19.         ಸಂಕೀರ್ಣ ವಚನ ಸಂಪುಟ-ಎಂಟು 1993, 2001, 2015, 2021

            20.        ಸಂಕೀರ್ಣ ವಚನ ಸಂಪುಟ-ಒಂಭತ್ತು 1993, 2001, 2015, 2021

            21.         ಬಸವಣ್ಣ (ಆಯ್ದ ವಚನಗಳು) ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಪ್ರ.ಮು. 1996, ದ್ವಿ.ಮು. 2000

            22.        ವಚನಶಾಸ್ತ್ರಸಾರ – ಸಂಪುಟ ಎರಡು (ಇತರರೊಂದಿಗೆ) 1997

                        ವೀರಶೈವ ಅಧ್ಯಯನ ಸಂಸ್ಥೆ, ಗದಗ

            23.        ವಚನ ಶಾಸ್ತ್ರಸಾರ ಸಂಪುಟ-3 2004 ವೀರಶೈವ ಅಧ್ಯಯನ ಸಂಸ್ಥೆ, ಗದಗ

            24.        ಷಟ್‍ಸ್ಥಲ ಜ್ಞಾನಸಾರಾಮೃತ ಟೀಕೆಗಳು 2005 ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ, ಎಡೆಯೂರು

            25.        ಎಲ್ಲ ಪುರಾತನರ ವಚನಗಳು ಭಾಗ-1 2006 (ಮೂರುಸಾವಿರ ವಚನಗಳು) ಶ್ರೀ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು

            26.        ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ (ಸಂಪುಟ-6) 2007 ವಚನಶಾಸ್ತ್ರಸಾರ ಭಾಗ 2 ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಬಿ.ಎಲ್.ಡಿ.ಇ., ಸಂಸ್ಥೆ ವಿಜಾಪುರ

            27.        ವಚನ ಸಂಕಲನ (ಸಂಪುಟ ಏಳು) 2009 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ

            28.        ಪರಮಾನಂದ ಸುಧೆ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2010 ಲಿಂಗಾಯತ ಅಧ್ಯಯನ ಸಂಸ್ಥೆ ಗದಗ

            30.        ಬಸವ ವಚನ ಸಾರಾಮೃತ 2011 ಲಿಂಗಾಯತ ಅಧ್ಯಯನ ಸಂಸ್ಥೆ

            31.         ವಚನಸಾರ (ಸಂಪುಟ ಎರಡು) 2014 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ

            32.        ಏಕೋತ್ತರ ಶತಸ್ಥಲ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2014

            33.        ಶರಣಸತಿ – ಲಿಂಗಪತಿ 2015 ಮಂಗಳ ಪ್ರಕಾಶನ ಧಾರವಾಡ

            34.        ಗಣಭಾಷಿತ ರತ್ನಮಾಲೆ (ಗುಬ್ಬಿ ಮಲ್ಲಣ್ಣ 2016 ಮುರುಘಾಮಠ, ಧಾರವಾಡ)

            35.        ಬಸವಣ್ಣನವರ ಷಟ್ಸ್ ್ಥಲ ವಚನಗಳು (ಪ್ರೊ. ಎಸ್.ಎಸ್. ಬಸವನಾಳ) ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ 2016

            36.        ಶೂನ್ಯಸಂಪಾದನೆ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2016 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ

            37.        ಶಿವಶರಣೆಯರ ವಚನಗಳು ಮುರುಘಾಮಠ, ಧಾರವಾಡ

            38.        ತೋಂಟದ ಸಿದ್ಧಲಿಂಗೇಶ್ವರರ ಷಟ್ಸ್ ್ಥಲ ಜ್ಞಾನಸಾರಾಮೃತ 2017 ಮುರುಘಾಮಠ, ಧಾರವಾಡ

            39.        ಸ್ವತಂತ್ರ ಸಿದ್ಧಲಿಂಗೇಶ್ವರ ಷಟ್ಸ್ ್ಥಲ ವಚನಗಳು 2017 ಮುರುಘಾಮಠ, ಧಾರವಾಡ

            40.        ಷಣ್ಮುಖ ಶಿವಯೋಗಿಗಳ ಷಟ್ಸ್ ್ಥಲ ವಚನಗಳು2017 ಮುರುಘಾಮಠ, ಧಾರವಾಡ

            41.        ದೇಶೀಕೇಂದ್ರ ಸಂಗನಬಸವಯ್ಯಗಳ ಷಟ್ಸ್ ್ಥಲ ವಚನಗಳು – 2017 ಮುರುಘಾಮಠ, ಧಾರವಾಡ

ಡಾ. ಬಿ.ವ್ಹಿ. ಶಿರೂರ

                        ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಶ್ರೀಯುತರು ಕನ್ನಡ ವಿಭಾಗದಲ್ಲಿ ಸಂಶೋಧಕರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹಲವು ಕನ್ನಡ ಕಾವ್ಯ ಮತ್ತು ಕೃತಿಗಳನ್ನು ಸಂಪಾದನೆ ಮಾಡಿ ನಿವೃತ್ತ ಜೀವನವನ್ನು ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದಾರೆ.

            1.          ಷಟ್‍ಸ್ಥಲ ಜ್ಞಾನಾಮೃತದ ಬೆಡಗಿನ ವಚನದ ಟೀಕೆ – ಸೋಮಶೇಖರ ಶಿವಯೋಗಿಕೃತ

            2.          ನಿರಾಳಮಂತ್ರಗೋಪ್ಯ – ಜಕ್ಕಣ್ಣಯ್ಯ ಕೃತ

            3.          ಶರಣಚಾರಿತ್ರದ ವಚನಗಳು – ಸಣ್ಣಬರಹದ ಗುರುಬಸವರಾದೇವರು ಸಂಕಲಿಸಿದ್ದು

            4.         ಉರಿಲಿಂಗಿಪೆದ್ದಿಯ ನೂರೊಂದು ವಚನಗಳು

            5.          ಶರಣ ಮುಖಮಂಡಲ

            6.          ಸರ್ವಾಚಾರ ಸಾರಾಮೃತ ಸುಧೆ – ಮೂರುಸಾವಿರ ಮುಕ್ತಿಮುನಿ ವಿರಚಿತ

            7.          ಎಲ್ಲ ಪುರಾತನರ ವಚನಗಳು – 2000 ವಚನಗಳ ಕಟ್ಟು ಜೆ.ಎಸ್.ಎಸ್ ಮೈಸೂರು ಪ್ರಕಟಣೆ.

ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟಣಾ ಯೋಜನೆ,

ಕನ್ನಡ ಮತ್ತು ಸಂಸ್ಕøತಿ ಇಲಾಖೆ – 1993

            1.          ಬಸವಣ್ಣನವರ ವಚನ ಸಂಪುಟ – ಡಾ. ಎಂ.ಎಂ. ಕಲಬುರ್ಗಿ

            2.          ಅಲ್ಲಮಪ್ರಭುದೇವರ ವಚನ ಸಂಪುಟ – ಡಾ. ಬಿ.ವ್ಹಿ. ಮಲ್ಲಾಪುರ

            3.          ಚನ್ನಬಸವಣ್ಣನವರ ವಚನ ಸಂಪುಟ ಡಾ. ಬಿ.ವ್ಹಿ. ಮಲ್ಲಾಪುರ

            4.         ಸಿದ್ಧರಾಮೇಶ್ವರ ವಚನ ಸಂಪುಟ ಡಾ. ಎಸ್. ವಿದ್ಯಾಶಂಕರ್

            5.          ಶಿವಶರಣೆಯ ವಚನ ಸಂಪುಟ ಡಾ. ವೀರಣ್ಣ ರಾಜೂರ

            6.          ಸಂಕೀರ್ಣ ವಚನ ಸಂಪುಟ-I ಡಾ. ಎಂ.ಎಂ. ಕಲಬುರ್ಗಿ

            7.          ಸಂಕೀರ್ಣ ವಚನ ಸಂಪುಟ-II ಡಾ ಎಸ್. ವಿದ್ಯಾಶಂಕರ್

            8.          ಸಂಕೀರ್ಣ ವಚನ ಸಂಪಟ-III ಡಾ. ಬಿ.ಆರ್. ಹಿರೇಮಠ

            9.          ಸಂಕೀರ್ಣ ವಚನ ಸಂಪುಟ-Iಗಿ ಡಾ. ಬಿ.ಆರ್. ಹಿರೇಮಠ

            10.        ಸಂಕೀರ್ಣ ವಚನ ಸಂಪುಟ-ಗಿ ಡಾ. ವೀರಣ್ಣ ರಾಜೂರ

            11.         ಸಂಕೀರ್ಣ ವಚನ ಸಂಪುಟ-ಗಿI ಎಸ್. ಶಿವಣ್ಣ

            12.         ಸಂಕೀರ್ಣ ವಚನ ಸಂಪುಟ-ಗಿII ಡಾ. ವೀರಣ್ಣ ರಾಜೂರ

            13.         ಸಂಕೀರ್ಣ ವಚನ ಸಂಪುಟ-ಗಿIII ಡಾ. ವೀರಣ್ಣ ರಾಜೂರ

            14.        ಸಂಕೀರ್ಣ ವಚನ ಸಂಪುಟ-Iಘಿ ಡಾ. ವೀರಣ್ಣ ರಾಜೂರ

            15.         ವಚನ ಪರಿಭಾಷಾ ಕೋಶ : ಡಾ. ವಿದ್ಯಾಶಂಕರ

ಸಮಗ್ರ ವಚನ ಸಂಪುಟ 2021 ಕನ್ನಡ ಪುಸ್ತಕ ಪ್ರಾಧಿಕಾರ

            1.          ಬಸವಣ್ಣನವರ ಸಂಪುಟವನ್ನು ಡಾ. ವೀರಣ್ಣ ರಾಜೂರ

            2.          ಅಲ್ಲಮಪ್ರಭುದೇವರ ಸಂಪುಟ ಶ್ರೀ ಸಿದ್ಧರಾಮ ಶರಣರು, ಬೆಲ್ದಾಳ

            3.          ಚನ್ನಬಸವಣ್ಣನವರ ಸಂಪುಟ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು, ಬೆಲ್ದಾಳ

            4.         ಸಿದ್ಧರಾಮೇಶ್ವರ ವಚನ ಸಂಪುಟ ಪ್ರೊ|| ಮಲೆಯೂರು ಗುರುಸ್ವಾಮಿ

            5.          ಶಿವಶರಣೆಯರ ಸಂಪುಟ ಐದು ಡಾ. ವೀರಣ್ಣ ರಾಜೂರ

            6.          ಸಂಕೀರ್ಣ ವಚನ ಸಂಪುಟ ಆರು ಡಾ. ಕೆ. ರವೀಂದ್ರನಾಥ್

            7.          ಸಂಕೀರ್ಣ ವಚನ ಸಂಪುಟ ಏಳು ಡಾ. ಕೆ. ರವೀಂದ್ರನಾಥ್

            8.          ಸಂಕೀರ್ಣ ವಚನ ಸಂಪುಟ ಎಂಟು ಡಾ. ವೈ.ಸಿ. ಭಾನುಮತಿ

            9.          ಸಂಕೀರ್ಣ ವಚನ ಸಂಪುಟ ಒಂಭತ್ತು ಡಾ. ವೈ.ಸಿ. ಭಾನುಮತಿ

            10.        ಸಂಕೀರ್ಣ ವಚನ ಸಂಪುಟ ಹತ್ತು ಡಾ. ವೀರಣ್ಣ ರಾಜೂರ

            11.         ಸಂಕೀರ್ಣ ವಚನ ಸಂಪುಟ ಹನ್ನೊಂದು ಡಾ. ವೈ.ಸಿ. ಭಾನುಮತಿ

            12.         ಸಂಕೀರ್ಣ ವಚನ ಸಂಪುಟ ಹನ್ನೆರಡು ಡಾ. ವೀರಣ್ಣ ರಾಜೂರ

            13.         ಸಂಕೀರ್ಣ ವಚನ ಸಂಪುಟ ಹದಿಮೂರು ಡಾ. ವೀರಣ್ಣ ರಾಜೂರ

            14.        ಸಂಕೀರ್ಣ ವಚನ ಸಂಪುಟ ಹದಿನಾಲ್ಕು ಡಾ. ವೀರಣ್ಣ ರಾಜೂರ

            15.         ಸಂಕೀರ್ಣ ವಚನ ಸಂಪುಟ ಹದಿನೈದು ಡಾ. ಬಸವಲಿಂಗ ಸೊಪ್ಪಿಮಠ

ಗದಗಿನ ತೋಂಟದಾರ್ಯ ಮಠದಿಂದ ಪ್ರಕಟವಾದ ವಚನ ಸಾಹಿತ್ಯ

ಏಕವ್ಯಕ್ತಿ ವಚನ ಸಂಕಲನಗಳು

            ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿದ ಕೀರ್ತಿ ಗದಗಿನ ತೋಂಟದಾರ್ಯ ಮಠಕ್ಕೆ ಸಲ್ಲುತ್ತದೆ. ಈ ಪ್ರಕಟಣೆ ಹಿಂದೆ ಡಾ. ಎಂ.ಎಂ. ಕಲಬುರ್ಗಿ ಅವರು ಗದಗಿನ ಲಿಂಗೈಕ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ತೋಂಟದ ಸಿದ್ಧಲಿಂಗಸ್ವಾಮಿಗಳ ಒತ್ತಾಸೆ ಇದ್ದುದರಿಂದ ಅಪ್ರಕಟಿತ ಕೃತಿಗಳ ರಾಶಿ ಪ್ರಕಟ ಮಾಡಲು ಸಾಧ್ಯವಾಯಿತು. ಪ್ರಸ್ತುತ ಗದಗಿನ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ತೋಂಟದ ಸಿದ್ಧರಾಮಸ್ವಾಮಿಗಳು ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಗೆ ಪ್ರೋತ್ಸಾಹ ನೀಡುತ್ತಾ ಇದ್ದಾರೆ.

            1.          ಷಟ್‍ಸ್ಥಲ ಜ್ಞಾನಸಾರಾಮೃತ – ಆರ್.ಸಿ. ಹಿರೇಮಠ

            2.          ಬಸವ ಬೋಧಾಮೃತ – ಹರ್ಡೇಕರ ಮಂಜಪ್ಪ

            3.          ಷಟ್‍ಸ್ಥಲ ಜ್ಞಾನಸಾರಾಮೃತದ ಬೆಡಗಿನ ವಚನದ ಟೀಕೆ – ಬಿ.ವಿ. ಶಿರೂರ

            4.         ಜಕ್ಕಣ್ಣಯ್ಯನ ನಿರಾಳ ಮಂತ್ರಗೋಪ್ಯ ಬಿ.ವಿ. ಶಿರೂರ

            5.          ಸರ್ವಾಚಾರ ಸಾರಾಮೃತ ಸುಧೆ – ಬಿ.ವಿ. ಶಿರೂರ

            6.          ಪ್ರಭುದೇವರ ಷಟ್‍ಸ್ಥಲ ಜಂಗಮಸ್ಥಳ ನಿರ್ದೇಶ – ವೀರಣ್ಣ ರಾಜೂರ

            7.          ಚನ್ನಬಸವಣ್ಣನವರ ಷಟ್ಸ್ ್ಥಲ ಮಹಾಸಂಪುಟ ಎಂ.ಎಂ. ಕಲಬುರ್ಗಿ

            8.          ಕುಷ್ಟಗಿ ಕರಿಬಸವೇಶ್ವರನ ವಚನಗಳು – ಎಸ್. ಶಿವಣ್ಣ

            9.          ಮಡಿವಾಳ ಮಾಚಿದೇವರ ವಚನಗಳು – ಚನ್ನಕ್ಕ ಪಾವಟೆ

ಅನೇಕ ವ್ಯಕ್ತಿ ವಚನಗಳಿಂದ ಕೂಡಿದ ಸ್ಥಳಕಟ್ಟಿನ ಕೃತಿಗಳು

            1.          ವಚನಶಾಸ್ತ್ರಸಾರ – ಫ.ಗು. ಹಳಕಟ್ಟಿ ಭಾಗ-1-2-3

            2.          ಅದ್ವೈತಾನಂದದ ವಚನಗಳು ಬಿ.ಆರ್. ಹಿರೇಮಠ

            3.          ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ವೀರಣ್ಣ ರಾಜೂರ

            4.         ಚನ್ನಬಸವಣ್ಣನವರ ವಚನೈಕೋತ್ತರ ಶತಸ್ಥಲ – ಜಿ.ಎ. ಶಿವಲಿಂಗಯ್ಯ

            5.          ಶೀಲಸಂಪಾದನೆ – ವೀರಣ್ಣ ರಾಜೂರ

            6.          ಶರಣ ಚಾರಿತ್ರದ ವಚನಗಳು – ಬಿ.ವಿ. ಶಿರೂರ

            7.          ಷಟ್‍ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು ಎಸ್. ಉಮಾಪತಿ

            8.          ಭಕ್ತ್ಯಾನಂದ ಸುಧಾರ್ಣವ – ವೀರಣ್ಣ ರಾಜೂರ

            9.          ಷಟ್ಪ್ರಕಾರ ಸಂಗ್ರಹ – ಜಿ.ಎ. ಶಿವಲಿಂಗಯ್ಯ

            10.        ಸೂಕ್ಷ್ಮಮಿಶ್ರ ಷಟ್‍ಸ್ಥಲ – ವೀರಣ್ಣ ರಾಜೂರ

            11.         ಸುಖ ಸಂಪಾದನೆಯ ವಚನಗಳು – ಬಿ.ಆರ್. ಹಿರೇಮಠ

            12.         ಶಿವಯೋಗ ಚಿಂತಾಮಣಿ – ಉಮಾದೇವಿ

            13.         ಶರಣ ಮುಖಮಂಟನ – ಬಿ.ವಿ. ಶಿರೂರ, ಬಿ.ಆರ್. ಹೂಗಾರ

            14.        ಎಲ್ಲ ಪುರಾತನರ ಸ್ತೋತ್ರದ ವಚನಗಳು – ವೀರಣ್ಣ ರಾಜೂರ

            15.         ಸಂಪಾದನೆಯ ಸಾರಾಮೃತ – ಬಿ.ಆರ್. ಹಿರೇಮಠ

            16.         ಅನುಭವಜ್ಞಾನ ಸಾರಾಮೃತ ಸಂಪಾದನೆಯ ಸ್ತೋತ್ರ ಬಿ.ಆರ್. ಹೂಗಾರ, ವೀರಣ್ಣ ರಾಜೂರ

            17.         ವಚನಸಾರ – ವೀರಣ್ಣ ರಾಜೂರ

            18.         ವಚನ ಸಂಕಲನ ಸಂಪುಟ-1 ಬಿ.ಆರ್. ಹಿರೇಮಠ

            19.         ವಚನ ಸಂಕಲನ ಸಂಪುಟ-2 ಜಿ.ಎ. ಶಿವಲಿಂಗಯ್ಯ

            20.        ವಚನ ಸಂಕಲನ ಸಂಪುಟ-3 ಎಸ್. ಶಿವಣ್ಣ

            21.         ವಚನ ಸಂಕಲನ ಸಂಪುಟ-4 ಡಾ. ಎಂ.ಎಂ. ಕಲಬುರ್ಗಿ, ಬಿ.ಆರ್. ಹಿರೇಮಠ, ಎಸ್. ಶಿವಣ್ಣ

            22.        ವಚನ ಸಂಕಲನ ಸಂಪುಟ-5 ವೈ.ಸಿ. ಭಾನುಮತಿ

            23.        ವಚನ ಸಂಕಲನ ಸಂಪುಟ-6 ಎಂ.ಎಂ. ಕಲಬುರ್ಗಿ

            24.        ವಚನ ಸಂಕಲನ ಸಂಪುಟ-7 – ವೀರಣ್ಣ ರಾಜೂರ

            25.        ಚೆನ್ನಬಸವೇಶ್ವರದೇವರ ಸ್ತೋತ್ರದ ವಚನಗಳು – ಜಿ.ಎ. ಶಿವಲಿಂಗಯ್ಯ

            26.        ಜ್ಞಾನ ಷಟ್ಸ್ ್ಥಲಸಾರ – ವೀರಣ್ಣ ರಾಜೂರ

            27.        ವೀರಶೈವ ಕಾವ್ಯೋಕ್ತ ವಚನ ಸಂಪುಟ ಬಿ.ಆರ್. ಹೂಗಾರ

            28.        ಮೋಕ್ಷದರ್ಶನ ಸಂಗ್ರಹ – ಜಿ.ಎ. ಶಿವಲಿಂಗಯ್ಯ

            29.        ಪರಮಾನಂದ ಸುಧೆ – ಎಂ.ಎಂ. ಕಲಬುರ್ಗಿ, ವೀರಣ್ಣ ರಾಜೂರ

            30.        ಬಸವ ವಚನ ಸಾರಾಮೃತ – ವೀರಣ್ಣ ರಾಜೂರ

            31.         ಲಿಂಗಲೀಲಾ ವಿಲಾಸ ಚಾರಿತ್ರ್ಯ ಸಂಗ್ರಹ – ಜಯಾ ರಾಜಶೇಖರ

            32.        ಶೂನ್ಯಸಂಪಾದನೆ : ಡಾ. ಎಂ.ಎಂ. ಕಲಬುರ್ಗಿ ಮತ್ತು ವೀರಣ್ಣ ರಾಜೂರ

            33.        ಬೆಡಗಿನ ವಚನ ಸಾಹಿತ್ಯ – ವೀರಣ್ಣ ರಾಜೂರ

            ವಚನ ಸಾಹಿತ್ಯ ಸಂಪಾದನೆಯಲ್ಲಿ ದುಡಿದ ಎಲ್ಲಾ ಮಹನೀಯರ ಬಗ್ಗೆ ಮಾಹಿತಿ ಸಂಗ್ರಹ ಮಾಡಬೇಕು. ಆ ನಿಟ್ಟಿನಲ್ಲಿ ನಿವೃತ್ತರಾದ ನಂತರ ಬೆಂಗಳೂರಿನಲ್ಲಿ ನೆಲೆಸಿದ ಹೆಚ್. ದೇವೀರಪ್ಪನವರು, ಪ್ರೊ. ಆರ್. ರಾಚಪ್ಪನವರು, ಇಬ್ಬರು ಜಂಟಿಯಾಗಿ ಜೇಡರ ದಾಸಿಮಯ್ಯನ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಮೈಸೂರಿನ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ಪ್ರಭುದೇವರ ಷಟ್‍ಸ್ಥಲ ವಚನಗಳನ್ನು ಮಹಾಲಿಂಗದೇವರ ವ್ಯಾಖ್ಯಾನದೊಂದಿಗೆ ಸಂಪಾದಿಸಿ ಪ್ರಕಟಿಸಿದರು. ಡಾ. ಟಿ.ಜಿ. ಸಿದ್ಧಪ್ಪಾರಾಧ್ಯರು ಮೂಲ ವಚನಗಳನ್ನು ಸಂಪಾದಿಸಿದವರ ಬಗ್ಗೆ ಮಾಹಿತಿ ಇಲ್ಲ ಆದರೆ ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗೆ ಬಸವಣ್ಣ, ಅಲ್ಲಮ ಪ್ರಭುದೇವ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರ ವಚನಗಳನ್ನು ಭಾಷಾಂತರಿಸಿದರು. ಅಲ್ಲಮ ಪ್ರಭುದೇವರ ವಚನಗಳು ಸುಮಾರು 1430 ರಲ್ಲಿ ಮೊಗ್ಗೆಮಾಯಿದೇವರು ಸಂಸ್ಕøತಕ್ಕೆ ಭಾಷಾಂತರಿಸಿದ ಹಸ್ತಪ್ರತಿ ಪ್ರೊ. ಸಿ. ಮಹಾದೇವಪ್ಪನವರ ಹತ್ತಿರ ಇದ್ದು ಅವರು ಅದನ್ನು ಸಮರ್ಥವಾಗಿ ಸಂಪಾದಿಸಿ ಮೂಲ ವಚನಗಳನ್ನು ದೇವನಾಗರಿ ಲಿಪಿಯಲ್ಲಿ ಅನುವಾದವನ್ನು ಇಂಗ್ಲಿಷಿನಲ್ಲಿ ಕೊಟ್ಟಿರುವುದರಿಂದ ವಿಶ್ವದ ಜನತೆ ಅಲ್ಲಮ ಪ್ರಭುವಿನ ವಚನಗಳನ್ನು ಅಧ್ಯಯನ ಮಾಡುವ ಅವಕಾಶ. ಕನ್ನಡ ಭಾಷೆಯಲ್ಲಿ ಅಲ್ಲಮನ ಮೂಲ ವಚನ ಅದರ ಸಂಸ್ಕøತಾನುವಾದವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಡಾ. ಜ.ಚ.ನಿ ಸನ್ನಿಧಿಯವರು, ಡಾ. ಹುಣಸಿನಾಳರು, ಡಾ. ಸಾ.ಶಿ. ಮರುಳಪ್ಪನವರು, ಪ್ರೊ. ಚ. ಸುಂದರೇಶನ್ ಅ.ನ.ಕೃರವರು ಇನ್ನು ಅನೇಕ ವಿರಕ್ತ ಮೂರ್ತಿಗಳು, ಪಟ್ಟದಸ್ವಾಮಿಗಳು, ಕಾವ್ಯಾಸಕ್ತರು, ಶಾಲಾಧ್ಯಾಪಕರು, ಪ್ರಾಧ್ಯಾಪಕರುಗಳು ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಮಹನೀಯರು ಸಲ್ಲಿಸಿದ ಸೇವೆ ಬಗ್ಗೆ ವಿವರವಾದ ಅಧ್ಯಯನವನ್ನು ಯುವ ವಿದ್ವಾಂಸರು ಮಾಡಬೇಕು. ಅಖಿಲ ಭಾರತ ಮಟ್ಟದಲ್ಲಿ ವಚನ ಸಾಹಿತ್ಯ ಪ್ರಕಟಣೆ ನಡೆದಿದೆ ಆ ಎಲ್ಲಾ ವಿವರವನ್ನು ಸಂಗ್ರಹಿಸಬೇಕು.

ಡಾ. ಕಿರಣ ಪೇಟಕರ

MBBS, MS – General Surgery, MCh – Plastic & Reconstructive Surgery, DNB – Plastic Surgery Plastic Surgeon. Bengaluru

ಅರುವಿನ  ಕಣ್ಣನು ತೆರೆದು ತೋರಲು

ನೂರು ದೇವರೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಕರುಣೆಯ ಕೃಪೆಯೊಂದಿರೆ ಸಾಕು

ಗ್ಲಾನಿಯೆ ತುಂಬಿದ-ಅಜ್ಞಾನಿಯು ನಾನು

ದಾರಿಯ ಕಾಣದೆ ತಡವರಿಸಿರುವೆ

ಭುವಿಯೊಳು ಬಂದು ಮಾಯೆಯಲಿಂದು

ಸಿಲುಕಿ ಬಲು ತೊಳಲಾಡಿರುವೆ

ಭವಸಾಗರದ ಬಂಧ ಹರಿಸಲು

ಯಾಗಯಜ್ಞವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಆಶೀರ್ವಚನವೊಂದಿರೆ ಸಾಕು

ಕತ್ತಲೆಯಲಿ ತಡಕಾಡುತ ನಡೆದೆ

ಎತ್ತ ಪಯಣವೊ ನಾನರಿಯೆ

ಸುತ್ತಿ ಬಳಲಿಹೆ ಗೊತ್ತುಗುರಿಯಿಲ್ಲದೆ

ಎತ್ತಿ ಪೊರೆವ ತಾಯೆ ಗುರುವೆ

ಜ್ಞಾನದ ಮಾರ್ಗದ ಸತ್ವವ ಅರುಹಲು

ಕೇಳದ ತತ್ವವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಸನ್ಮಾರ್ಗದರ್ಶನವಿರೆ ಸಾಕು

ಶಾಸ್ತ್ರಗಳೋದದ ಸಾಮಾನ್ಯ ನಾನು

ವೇದಪುರಾಣಗಳೆಂತರಿಯೆ

ಮುಕ್ತಿಯ ಪಡೆಯುವ ಆಸೆಯಲಿ ನಿಮ್ಮ

ಭಕ್ತಿಯಲ್ಲಿ ಶರಣೆಂದಿರುವೆ

ದೇವರ ಉಕ್ತಿಯ ಅರ್ಥ ತಿಳಿಯಲು

ಯಂತ್ರ ತಂತ್ರವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಬೀಜಮಂತ್ರವೊಂದಿರೆ  ಸಾಕು