ಕರ್ನಾಟಕದ ಏಕೀಕರಣಕ್ಕೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆ

ಶ್ರೀಕಂಠ.ಚೌಕೀಮಠ.

ಅಧ್ಯಕ್ಷ.ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ

ನವದೆಹಲಿ

೧೭೯೯ ರಿಂದ ೧೯೫೬  ರ ಕನ್ನಡಿಗರ ಬದುಕನ್ನು ಇತಿಹಾಸದ ಪುಟಗಳಿಂದ ನೋಡುವಾಗ, ಕನ್ನಡ ಮಾತನಾಡುವವರು ಕನ್ನಡದ ನೆಲದಲ್ಲಿ ಪರಕೀಯರಾಗಿ ಬಾಳಿದ ದುರಂತ ಚರಿತ್ರೆ ಎದ್ದು ಕಾಣುತ್ತದೆ.

ಕನ್ನಡ ರಾಜ್ಯದ ವಿಸ್ತಾರವು ಕವಿರಾಜಮಾರ್ಗದಲ್ಲಿ ವಿವರಿಸಿದಂತೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೆ ಇತ್ತು. ಈ ನೆಲವನ್ನು ಅನೇಕ ಕನ್ನಡ ರಾಜವಂಶಗಳು ಆಳಿದವು. ವಿಜಯನಗರದ ಪತನದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ರಾಜಕೀಯವಾಗಿ ಪರಭಾಷಿಗರ ಕಪಿಮುಷ್ಠಿಯಲ್ಲಿ ಬಳಲತೊಡಗಿದವು

 ಟಿಪ್ಪು ಸುಲ್ತಾನನ ಮರಣದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಭಾಷೆಗಳ ಇಪ್ಪತ್ತು ಆಡಳಿತ ವಿಭಾಗಗಳಲ್ಲಿ ಹಂಚಲ್ಪಟ್ಟವು. ಹೈದರಾಬಾದ್‌ನ ನಿಜಾಮರ ಆಳ್ವಿಕೆಯಲ್ಲಿ ಕನ್ನಡಿಗರು ಪರಕೀಯರಾಗಬೇಕಾಯಿತು.

ಮಾತೃಭಾಷೆಯ ಭಾಷಿಕರು “ಒಂದಾಗುವಿಕೆ”  ಮತ್ತು ಒಂದಾದವರ ರಾಜ್ಯದ ಹುಟ್ಟು  ರೋಚಕ ಹೋರಾಟದ ಫಲಶೃತಿಯಾಯಿತು

ಕನ್ನಡ ವಿದ್ವಜ್ಜನರ ಸಾತ್ವಿಕ ಹೋರಾಟದ ಜೊತೆಗೆ ಬಳ್ಳಾರಿಯ  ಶ್ರೀ ರಂಜಾನ್‌ ಸಾಬ್ ಬಲಿದಾನದ ನೆತ್ತರು ಕಲೆಗಳು ಚರಿತ್ರೆಯಲ್ಲಿ ಚಿರಸ್ಥಾಯಿಯಾಯಿತು..

ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಂಡಿದ್ದನ್ನು ಇತಿಹಾಸಕಾರರು ಮರೆತಿದ್ದು ಆಶ್ಚರ್ಯವೆನಿಸುತ್ತದೆ.

 ೧೯ ನೆಯ ಶತಮಾನದ ಆದಿಭಾಗದ ಛಿದ್ರ  ಕರ್ನಾಟಕದ ಬಹು ಸಂಖ್ಯಾತರಾದ ವೀರಶೈವ-ಲಿಂಗಾಯತರು ಮತ್ತು ಹೊರರಾಜ್ಯ ಗಳಲ್ಲಿ ಹರಿದು ಹಂಚಿಹೋಗಿದ್ದ  ವೀರಶೈವ-ಲಿಂಗಾಯತ ಧರ್ಮದ ೯೯ ಒಳಪಂಗಡಗಳನ್ನು ಪರಮ ಪೂಜ್ಯ ಲಿಂ. ಹಾನಗಲ್ಲ  ಕುಮಾರ ಶಿವಯೋಗಿಗಳವರು ಅಖಿಲ ಭಾರತ ವೀರಶೈವ ಮಹಾಸಭಾ ದ ಮೂಲಕ ಸಂಘಟಿಸಿ ಒಗ್ಗೂಡಿಸಿದ ಕ್ರಾಂತಿ ಕರ್ನಾಟಕದ ನೆಲದಲ್ಲಿ  ಅಭೂತಪೂರ್ವ ಒಗ್ಗಟ್ಟಿನ ಪರಿಸರವನ್ನೇ ಸೃಷ್ಠಿಸಿತು.

 ವೀರಶೈವ-ಲಿಂಗಾಯತ  ಧರ್ಮಿಯರಿಗಾಗಿ  ಸೃಷ್ಠಿಸಿದ “ ಸಮಾಜ ಸಂಘಟನೆ “ಮತ್ತು “ಸಮಾಜ ಸಂಸ್ಕರಣೆ” ಪರಮ ಪೂಜ್ಯ ಲಿಂ. ಹಾನಗಲ್ಲ  ಕುಮಾರ ಶಿವಯೋಗಿಗಳವರು ನೀಡಿದ  ಅದ್ಭುತ ಕೊಡುಗೆಗಳು. “ಸಮಾಜದ ಸಂಘಟನೆ” ಗೆ ಸ್ಥಾಪಿಸಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮತ್ತು “ಸಮಾಜ ಸಂಸ್ಕರಣೆ”ಗೆ ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗಮಂದಿರ. ಇವುಗಳ ಹುಟ್ಟು ಮತ್ತು ಕಾರ್ಯ ಸಾಧನೆಗಳು ಕೇವಲ ವೀರಶೈವ-ಲಿಂಗಾಯತರ ಏಕೀಕರಣಕ್ಕಷ್ಠೇ ಸೀಮಿತವಾಗಲಿಲ್ಲ, ಸಮಗ್ರ ಕರ್ನಾಟಕದ ಏಕೀಕರಣಕ್ಕೆ ದಿಕ್ಸೂಚಿಯಾಯಿತು ಮತ್ತು ಸರ್ವಧರ್ಮದವರಿಗೆ ಆಸರೆಯಾದವು.

೧೯೦೪ ರಲ್ಲಿ ಸ್ಥಾಪಿಸಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ೧೯೫೬ ರ ಕರ್ನಾಟಕ ಏಕೀಕರಣದ ವರೆಗೆ ಒಟ್ಟು ೧೬ ಬೃಹತ್‌ ಸಮ್ಮೇಳನಗಳನ್ನು ಕರ್ನಾಟಕದ ವಿವಿಧ ಪ್ರಾಂತಗಳಲ್ಲಿ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಹಾಗು ತಮಿಳುನಾಡಿನ ಕುಂಭಕೋಣಂ ಗಳಲ್ಲಿ ನಡೆಯಸಿತು .ಈ ಕಾಲಘಟ್ಟದಲ್ಲಿ ಜರುಗಿದ ಸಮ್ಮೇಳನಗಳ ಅಧ್ಯಕ್ಷತೆ ,ಸ್ಥಳ ಮತ್ತು ಸಮ್ಮೇಳನದ ವರ್ಷಗಳ ವಿವರ ಈ ಕೆಳಗಿನಂತಿವೆ,

  1. ಶ್ರೀ ಸಿರಸಂಗಿ ಲಿಂಗರಾಜ ಸರದೇಸಾಯಿಯವರು  ಧಾರವಾಡ ೧೯೦೪.
  2. ಶ್ರೀ  ಸಿರಸಂಗಿ ಲಿಂಗರಾಜ ಸರದೇಸಾಯಿಯವರು ಬೆಂಗಳೂರು ೧೯೦೫
  3. ಶ್ರೀ  ಕೆ.ಪಿ.ಪುಟ್ಟಣ್ಣಶೆಟ್ಟರು ಸೊಲ್ಲಾಪುರ ೧೯೦೭
  4. ಶ್ರೀ  ರಾಜಾ ಲಖಮಗೌಡರು ಬಾಗಲಕೋಟೆ ೧೯೦೮
  5. ಶ್ರೀ  ವಾರದ ಮಲ್ಲಪ್ಪನವರು  ಬಳ್ಳಾರಿ ೧೯೦೯
  6. ಶ್ರೀ  ಮಾಮಲೆ ದೇಸಾಯಿಯವರು ಬೆಳಗಾವಿ ೧೯೧೧
  7. ಶ್ರೀ  ಅರಟಾಳ ರುದ್ರಗೌಡರು ನಿಪ್ಪಾಣಿ ೧೯೧೨
  8. ಶ್ರೀ  ಕೆ.ಪಿ.ಪುಟ್ಟಣ್ಣಶೆಟ್ಟರು ದಾವಣಗೆರೆ ೧೯೧೭
  9. ಶ್ರೀ  ಶಾಂತವೀರಪ್ಪ ಮೆಣಸಿನಕಾಯಿಯವರು ಬೀರೂರು ೧೯೨೦
  10. ಶ್ರೀ  ಸಿದ್ಧಪ್ಪ ಕಂಬಳಿಯವರು ಬೆಂಗಳೂರು ೧೯೨೭
  11. ಶ್ರೀ  ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಧಾರವಾಡ ೧೯೩೩
  12. ಶ್ರೀ  ಸಿದ್ಧಪ್ಪ ಕಂಬಳಿಯವರು ರಾಯಚೂರು ೧೯೩೭
  13. ಶ್ರೀ  ಶಿ.ಶಿ.ಬಸವನಾಳರು ಹುಬ್ಬಳ್ಳಿ ೧೯೩೮
  14. ಶ್ರೀ  ಎಂ.ಎಸ್. ಸರದಾರರು ಕುಂಭಕೋಣಂ ೧೯೪೦
  15. ಶ್ರೀ  ಸಿ.ಸಿ.ಹುಲಕೋಟಿಯವರು ತುಮಕೂರು ౧౯౪ ౫
  16. ಶ್ರೀ ಮ.ನಿ.ಪ್ರ. ಸಂಗನಬಸವ ಶಿವಯೋಗಿಗಳು ಬಂಥನಾಳ ಬಸವಕಲ್ಯಾಣ ೧೯೫೫.

೧೯೨೭ ಬೆಂಗಳೂರಿನಲ್ಲಿ ಜರುಗಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮಹಾಸಮ್ಮೇಳನದಲ್ಲಿ ,ಸಮ್ಮೇಳನಾಧ್ಯಕ್ಷ  ಶ್ರೀ  ಸಿದ್ಧಪ್ಪ ಕಂಬಳಿಯವರು‌ ಕರ್ನಾಟಕ ಏಕೀಕರಣದ  ಬೆಂಬಲ ವಿಷಯದಮೇಲೆ ಮಂಡಿಸಿದ ೯ನೇ ನಿರ್ಣಯದ ಕರೆ ಸಮಸ್ತ ವೀರಶೈವ ಲಿಂಗಾಯತರಲ್ಲಿ ಸಂಚಲನವನ್ನು ಸೃಷ್ಠಿಮಾಡಿಬಿಟ್ಟಿತು. ೧೯೩೩ ರಲ್ಲಿ ಧಾರವಾಡದಲ್ಲಿ ಜರುಗಿದ ಸಮ್ಮೇಳನದಲ್ಲಿ ,ಸಮ್ಮೇಳನಾಧ್ಯಕ್ಷರಾದ ಶ್ರೀ ಫ.ಗು.ಹಳಕಟ್ಟಿಯವರು ಮಂಡಿಸಿದ  ಮೂರನೆಯ ನಿರ್ಣಯ ಕರ್ನಾಟಕ ಏಕೀಕರಣದ  ಬೆಂಬಲದ ನಿರ್ಣಯ ವಾಗಿತ್ತು. ಇದೇ ಸಮ್ಮೇಳನದಲ್ಲಿ  “ತರುಣರ ಸಮಾವೇಷದ ಸ್ವಾಗತಾಧ್ಯಕ್ಷರಾದ ಶ್ರೀ  ವ್ಹಿ.ಎಸ್.ಬಸವನಾಳ ಅವರು ಮಾತನಾಡುತ್ತ ತರುಣರಿಗೆ ಕರ್ನಾಟಕ ಏಕೀಕರಣದ ಹೋರಾಟದಲ್ಲೂ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯ ಹೋರಾಟದಲ್ಲಿಯೂ ಭಾಗಿಯಾಗಲು ಕರೆ ನೀಡಿದರು.ನಂತರ ೧೯೫೫ ರವರೆಗೆ   ಜರುಗಿದ ಎಲ್ಲ ವೀರಶೈವ ಸಮ್ಮೇಳನ ಗಳು ಕರ್ನಾಟಕ ಏಕೀಕರಣದ ಬೆಂಬಲದ ನಿರ್ಣಯಗಳನ್ನು ಮಂಡಿಸುತ್ತ ವೀರಶೈವ-ಲಿಂಗಾಯತರಲ್ಲಿ ಜಾಗೃತಿಯನ್ನುಂಟು ಮಾಡಿದವು.

ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮಹಾಸಮ್ಮೇಳನದಲ್ಲಿ ಮಹಿಳಾ ಪರಿಷತ್ತಿನ ಅಧ್ಯಕ್ಷರಾದ ಸೊಲ್ಲಾಪುರದ ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರು ರಕ್ತದಲ್ಲಿ ಪತ್ರ ಬರೆದು ಕರ್ನಾಟಕದ ಏಕೀಕರಣದಲ್ಲಿ ಹೋರಾಡಿದವರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದವರು ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರು.

“ಸಮಾಜ ಸಂಸ್ಕರಣೆ”ಗೆ  ೧೯೦೯ ರಲ್ಲಿ ಸ್ಥಾಪನೆಗೊಂಡ  ಶ್ರೀ ಮದ್ವೀರಶೈವ ಶಿವಯೋಗಮಂದಿರದಿಂದ ಶಿಕ್ಷಣ ಪಡೆದ ಸಮಾಜಕ್ಕೆ ಅರ್ಪಿತರಾದ ಶಿವಯೋಗಮಂದಿರದ ಸಾಧಕರು ಅನ್ನ ಆಶ್ರಯ ಅಕ್ಷರಗಳ  ತ್ರಿವಿಧ ದಾಸೋಹಗಳ ಮೂಲಕ  ವೀರಶೈವ-ಲಿಂಗಾಯತರ ಜೊತೆಗೆ ಸರ್ವ ಧರ್ಮದವರನ್ನು  ಕರ್ನಾಟಕ ಏಕೀಕರಣಕ್ಕೆ ಸದೃಡವಾಗಿ ಸಜ್ಜುಗೊಳಿಸಿದರು.

ಶಿವಯೋಗಮಂದಿರದ ಪ್ರಪ್ರಥಮ ಸಪ್ತ ಸಾಧಕರಲ್ಲಿ ಒಬ್ಬರಾದ ಪೂಜ್ಯ ನವಲಗುಂದ ಬಸವಲಿಂಗ ಮಹಾಸ್ವಾಮಿಗಳು  ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದವರು.ಕರ್ನಾಟಕ ಏಕೀಕರಣಕ್ಕಂತೇ ಹುಟ್ಟಿಕೊಂಡ  ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷರಾಗಿ ,ಉತ್ತರಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿಯ ಅಧ್ಯಕ್ಷರಾಗಿ ಮತ್ತು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕರ್ನಾಟಕದ ಏಕೀಕರಣಕ್ಕೆ ಅನುಪಮ ಸೇವೆ ಸಲ್ಲಿಸಿರುವರು. ಉಳಿದೆಲ್ಲ ಸಾಧಕರು ಅತ್ಯುತ್ತಮ ವಾಗ್ಮಿಗಳಾಗಿ,ಯೋಗ ಪಟುಗಳಾಗಿ ,ಸಂಚಾರಿಗಳಾಗಿ ಊರೂರು ಸುತ್ತಿ ಧರ್ಮ ಜಾಗೃತಿ ಮಾಡುತ್ತ ಸಮಾಜದ ಬಾಂಧವರನ್ನು ಒಂದುಗೂಡಿಸಿದರು.

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಮ ಶಿಷ್ಯರಾದ ಹಾಲಕೆರೆಯ ಶ್ರೀ ಮ.ನಿ.ಪ್ರ. ಅನ್ನದಾನೇಶ್ವರ ಮಹಾಸ್ವಾಮಿಗಳು (ಬೆತ್ತದ ಅಜ್ಜನವರು) ಜಕ್ಕಲಿಯ ಕರ್ನಾಟಕ ಏಕೀಕರಣದ ಪ್ರಮುಖ ಹೋರಾಟಗಾರ ಶ್ರೀ ಅಂದಾನಪ್ಪ ದೊಡ್ಡಮೇಟಿಯವರ ಹೋರಾಟಕ್ಕೆಬೆಂಬಲ ನೀಡಿ ಅವರ ಉಪವಾಸ ಸತ್ಯಾಗ್ರಹಕ್ಕೆ ಜಕ್ಕಲಿಯ ಶ್ರೀ ಅನ್ನದಾನೇಶ್ವರ ಮಠದ ಆವರಣ ನೀಡಿ ಉಳಿದ ಹೋರಾಟಗಾರರಿಗೆ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಿದ್ದು ಚರಿತ್ರಾರ್ಹವಾದುದು. ಶ್ರೀ ಅಂದಾನಪ್ಪ ದೊಡ್ಡಮೇಟಿಯವರು ಕನ್ನಡ ತಾಯಿ ಭುವನೇಶ್ವರಿಯ ತೈಲ ವರ್ಣದ ಚಿತ್ರ ಬರೆಯಿಸಿ ಪ್ರಸಿಧ್ಧಿ ಪಡಿಸಿದ ಮಹಾನುಭಾವರು

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೨ ವರ್ಷ ಸೇವೆ ಮಾಡಿದ ಬೆಳಗಾವಿಯ ನಾಗನೂರಿನ ರುದ್ರಾಕ್ಷಿಮಠದ ಪೂಜ್ಯ ಮ.ನಿ.ಪ್ರ. ಶಿವಬಸವ ಸ್ವಾಮಿಗಳು ಗಡಿನಾಡ ಬೆಳಗಾವಿಯಲ್ಲಿ ಪೂಜ್ಯ ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪೂಜ್ಯ ಶಿವಬಸವ ಸ್ವಾಮಿಗಳವರು ಸೇವೆ ಅನನ್ಯವಾದುದ್ದು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನಿರಂತರ ಅನ್ನ ಆಶ್ರಯಗಳನ್ನು ನೀಡಿದರು. ಶ್ರೀಗಳು  ಕೆಲವು ಕಾಲ ಭೂಗತರಾಗಿ ಹೋರಾಟಗಳಿಗೆ ಬೆಂಬಲ ನೀಡಿದರು.

ಬೆಳಗಾವಿ ಗಡಿ ಸಮಸ್ಯೆ ಕುರಿತು ಸಮೀಕ್ಷೆಗಾಗಿ ಬಂದ ಫಜಲಿ ಆಯೋಗ, ಮಹಾಜನ ಆಯೋಗಗಳ ಮುಂದೆ ಶ್ರೀಗಳು ಬೆಳಗಾವಿ ಕರ್ನಾಟಕದ್ದು ಎಂದು ಖಚಿತವಾಗಿ ಪ್ರತಿಪಾದಿಸಿದರು. ಅವರ ಕನ್ನಡ ಕಟ್ಟುವ ಕಾರ್ಯಗಳಿಂದಾಗಿ ಇಂದು ಬೆಳಗಾವಿ ಕರ್ನಾಟಕ ರಾಜ್ಯದಲ್ಲಿದೆ.

ಬೀದರ ಜಿಲ್ಲೆಯ ಭಾಲ್ಕಿ ಶ್ರೀ ಘ.ಚ .ಚನ್ನಬಸವ ಪಟ್ಟಾಧ್ಯಕ್ಷರು ,ರಜಕಾರ ಹಾವಳಿಯ ಸಂಧರ್ಭದಲ್ಲಿ ಹೊರಗೆ ಉರ್ದು ಬೋರ್ಡ ಹಾಕಿ ಒಳಗೆ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿ, ಪೂಜ್ಯ ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಮೂಲಕ ಜನ ರನ್ನು ವಿದ್ಯಾವಂತರನ್ನಾಗಿಸಿ ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರಿಂದ ಬೀದರ ಕರ್ನಾಟಕದಲ್ಲಿ ವಿಲೀನ ವಾಯಿತು.

ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು, ಅಂಧರಾದ  ಪಂಡಿತ ಪಂಚಾಕ್ಷರಿಗವಾಯಿಗಳಿಗೆ ದೇಶದ ಖ್ಯಾತ ಸಂಗೀತಗಾರರಿಂದ ಸಂಗೀತ ಶಿಕ್ಷಣವನ್ನು ನೀಡಿ ಅವರನ್ನು ಪ್ರಸಿದ್ಧ ಸಂಗೀತಗಾರರನ್ನಾಗಿ ರೂಪಿಸಿ ಅವರಿಂದ ಆರಂಭಿಸಿದ  ಗದುಗಿನ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮತ್ತು ಹೊರ ರಾಜ್ಯದ ದ ವಿವಿಧ ಸರ್ವಧರ್ಮದವರ ಮತ್ತು  ದಿವ್ಯಾಂಗದವರಿಗೆ ಉಚಿತ ವಸತಿ,ಪ್ರಸಾದ ಮತ್ತು ಶಿಕ್ಷಣದ ಕ್ರಾಂತಿ ಏಕೀಕರಣಕ್ಕೆ ಸಂಗೀತ ಮತ್ತು ಕಲೆಯ ಸಂಸೃತಿಯ ರಕ್ಷಣೆಯ ಮೂಲಕ  ಬಲವನ್ನು ನೀಡಿತು.

ಶ್ರೀ ಮನ್ಮಹರಾಜ ನಿರಂಜನ ಜಗದ್ಗುರು ಲಿಂ.ಗುರುಸಿದ್ಧ ರಾಜಯೋಗೀಂದ್ರ  ಮಹಾಸ್ವಾಮಿಗಳು ಉಚಿತ ಪ್ರಸಾದ ನಿಲಯಗಳು ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು. ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು 1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಹುಬ್ಬಳ್ಳಿ ಮೂರುಸಾವಿರದ ಮಠದಿಂದ ಬೆಂಬಲಿಗರಿಗೆ ಪ್ರಸಾದ ವ್ಯವಸ್ಥೆಮಾಡಿ ಹಲವು ಸತ್ಯಾಗ್ರಹಿಗಳಿಗೆ ಆಶ್ರಯ ನೀಡಿ ಸಲುಹಿದ್ದು ಪೂಜ್ಯ ಜಗದ್ಗುರುಗಳ ಮಾತೃಹೃದಯಕ್ಕೆ ಸಾಕ್ಷಿಯಾಗುತ್ತದೆ.

ಶಿವಯೋಗಮಂದಿರ ದಿಂದ ಮೊದಲ ಸಾಧಕರಾದ ಬಾಗಲಕೋಟೆಯ ಶ್ರೀ ಮ.ನಿ.ಪ್ರ. ಶಿವಮೂರ್ತಿ ಸ್ವಾಮಿಗಳು  ಚರಂತಿಮಠ ಮಠದ ಆಸ್ತಿಗಳನ್ನು ಬಾಗಲಕೋಟೆಯ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಗೆ ದಾನವಾಗಿ ದಯಪಾಲಿಸಿ ಆ ಭಾಗದ ಶಿಕ಼್ಣಣ ಕ್ರಾಂತಿಗೆ  ಅಮೂಲ್ಯ ಕಾಣಿಕೆಯನ್ನು ಕೊಟ್ಟರು.

 ಚಿಕ್ಕಮಗಳೂರ ಜಿಲ್ಲೆಯ ಕಡೂರು ತಾಲೂಕಿನ ಕಂಚುಕಲ್ಲ ಬಿದರೆಯ ದೊಡ್ಡಮಠದ ಶ್ರೀ ಪ್ರಭುಕುಮಾರ  ಪಟ್ಟಾಧ್ಯಕ್ಷರು ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರಿಂದ ಯೋಗ ಶಿಕ್ಷಣ ಪಡೆದು  ಮಹಾರಾಷ್ಟ್ರದ ನಾಸಿಕದ ಕುಂಭಮೇಳದಲ್ಲಿ ಯೋಗರಾಜ ಎಂದು ಬಿರುದು ಪಡೆದುಯೋಗದ ಮೂಲಕ ಶಿವಯೋಗಮಂದಿರಕ್ಕೆ ಮೆರಗು ತಂದರು.

ವೀರಶೈವ-ಲಿಂಗಾಯತ ಧರ್ಮದ ವೈದಿಕ ಆಚರಣೆಗಳ ರಕ಼್ಣೆಗೆ ಆರಂಭಿಸಿದ ಶ್ರೀ ಕುಮಾರೇಶ್ವರ ವೈದಿಕ ಪಾಠಶಾಲೆ ಹಾವೇರಿ , ಸಾವಿರಾರು ವಿದ್ಯಾರ್ಥಿಗಳನ್ನು ತನ್ನೆಡಗೆ ಆಕರ್ಷಿಸಿತು ಅದರ ಸಂಸ್ಥಾಪಕರಾದ ಶ್ರೀ ಸಿಂದಗಿಯ ಶ್ರೀ ಘ.ಚ ಶಾಂತವೀರ ಶಿವಾಚಾರ್ಯರು ಯೋಗ ಮತ್ತು ಆಯುರ್ವೇದದಲ್ಲಿ ಪಾರಂಗತರಾಗಿ ಪ್ರಾಥಸ್ಮರಣೀಯರಾಗಿರುವರು

ಶ್ರೀ ಮ.ನಿ.ಪ್ರ ಮಹಾಂತ ಸ್ವಾಮಿಗಳು ಚಿತ್ತರಗಿ -ಇಲಕಲ್ಲ  ಶಿವಯೋಗಮಂದಿರದಲ್ಲಿ ತರಬೇತಿ ಪಡೆದು ಅದ್ವೀತಿಯ ಪ್ರವಚನಕಾರರಾಗಿ ಪ್ರಸಿದ್ಧಿ ಹೊಂದಿ  ಗಡಿ ಪ್ರದೇಶವಾದ ಮಹಾರಾಷ್ಟ್ರದ ಗಡಹಿಂಗ್ಲಜ ಪ್ರಾಂತದಲ್ಲಿ  ದ್ಯಾವಾಪೂರದ ಬಸವಲಿಂಗ ಶಾಸ್ತ್ರಿಗಳವರೊಡನೆ ಸಂಚರಿಸಿ ಧರ್ಮ ಪ್ರಚಾರ ಮಾಡಿದ್ದು ಮಹತ್ವಪೂರ್ಣ ಬೆಳವಣಿಗೆಯಾಯಿತು.ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಇಂದಿಗೂ ಪ್ರಸಿದ್ಧಿಯಾಗಿವೆ.

ಶಿವಯೋಗಮಂದಿರದ ಕೈಬರಹದ “ಸುಕುಮಾರ “ಪತ್ರಿಕೆಯ ಬರಹಗಾರರಾಗಿ ಸಾಹಿತ್ಯ ಕೃಷಿ ಆರಂಭಿಸಿದ ಶ್ರೀ ಜ.ಚ.ನಿ ಯವರು ೬೦೦ ಕ್ಕೂ ಹೆಚ್ಚು ಕೃತಿಗಳನ್ನು ಬರೆದು “ಶಬ್ಧ ಬ್ರಹ್ಮ” ಎಂಬ ಸನ್ಮಾನಕ್ಕೆ ಭಾಜನರಾಗಿ ಜನಜಾಗೃತಿಯನ್ನುಂಟುಮಾಡಿದರು

ಇವರೆಲ್ಲ ಯತಿಗಳ ಜೊತೆಗೆ ಹಲವಾರು ಯತಿಗಳು  ಪ್ರವಚನ-ವ್ಯಾಖ್ಯಾನ ಗಳಿಂದ  ನಾಡಿನ ತುಂಬೆಲ್ಲ ಸಂಚರಿಸಿ ಧರ್ಮ ಜಾಗೃತಿಯನ್ನು ಮಾಡಿ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರಲ್ಲಿ ಪ್ರಮುಖರು,

  1. ಸಂಪಗಾವಿ  ಶ್ರೀ ನೀಲಕಂಠ ಶಿವಾಚಾರ್ಯ ಚರಮೂರ್ತಿಗಳು ಯರಗಂಬಳಿಮಠ
  2. ಹಾನಗಲ್ಲ ಶ್ರೀ ಮ.ನಿ.ಪ್ರ. ಮಹೇಶ್ವರ ಸ್ವಾಮಿಗಳು
  3. ಜಡೆಯ  ಶ್ರೀ ಮ.ನಿ.ಪ್ರ. ಸಿದ್ಧಬಸವ ಸ್ವಾಮಿಗಳು ಸೊರಬ ಶಿವಮೊಗ್ಗ.
  4. ಕಲ್ಯಾಣದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು ಪ್ರಭುಸ್ವಾಮಿಮಠ
  5. ಕಲಬುರ್ಗಿಯ ಶ್ರೀ.ಮ.ನಿ.ಪ್ರ. ಶಿವಮೂರ್ತಿ ಸ್ವಾಮಿಗಳು ಗದ್ದುಗೆಮಠ
  6. ಬನವಾಸಿಯ ಶ್ರೀ ಮ.ನಿ.ಪ್ರ. ಸಿದ್ದವೀರ ಸ್ವಾಮಿಗಳು ಶಿರ್ಸಿ ಉತ್ತರಕನ್ನಡ.
  7. ಕಲಬುರ್ಗಿಯ ಶ್ರೀ .ಘ.ಚ.ಕೆಂಚಬಸವ ಪಟ್ಟಾಧ್ಯಕ್ಷರು ರೋಜಾ ಹಿರೇಮಠ.
  8. ಚಿತ್ತಾಪೂರದ ಶ್ರೀ ಘ.ಚ.ಚಂದ್ರಶೇಖರ ಪಟ್ಟಾಧ್ಯಕ್ಷರು ಹಿರಿಯಮಠ
  9. ಕುಷ್ಠಗಿಯ ಶ್ರೀ ಘ.ಚ. ಪಟ್ಟದ ಕರಿಬಸವ ಶಿವಾಚಾರ್ಯರು ಹಿರಿಯಮಠ.
  10. ಸಖಿರಾಯಪಟ್ಟಣದ ಶ್ರೀ ಘ.ಚ, ಸದಾಶಿವ ಪಟ್ಟಾಧ್ಯಕ್ಷರು ಹಾಲುಸ್ವಾಮಿಮಠ.
  11. ಕಪನಿಹಳ್ಳಿಯ ಶ್ರೀ.ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳು  ಶಿಕಾರಿಪುರ ಶಿವಮೊಗ್ಗೆ
  12. ಅನಂತಪುರದ ಶ್ರೀ.ಮ.ನಿ.ಪ್ರ. ಜಗದ್ಗುರು ಸಚ್ಚಿದಾನಂದ ಮುರುಘರಾಜೇಂದ್ರ ಸ್ವಾಮಿಗಳು ಆನಂದಪುರ ಶಿವಮೊಗ್ಗ
  13. ಹಾನಗಲ್ಲ ಶ್ರೀ ಮ.ನಿ.ಪ್ರ.ಸದಾಶಿವ ಸ್ವಾಮಿಗಳು ವಿರಕ್ತಮಠ.
  14. ಉಸ್ಮಾನಾಬಾದ ಮೊರಬ ದ ಶ್ರೀ ಘ.ಚ. ಶಂಭುಲಿಂಗ ಪಟ್ಟಾಧ್ಯಕ್ಷರು
  15. ಖೇಳಗಿ (ಹುಮ್ನಾಬಾದ) ಶ್ರೀ.ಮ.ನಿ.ಪ್ರ. ಆದಿನಾಥ(ಶಿವಲಿಂಗ) ಸ್ವಾಮಿಗಳು ವಿರಕ್ತಮಠ
  16. ನಿಡಗುಂದಿಕೊಪ್ಪದ ಶ್ರೀ ಮ.ನಿ.ಪ್ರ. ಚನ್ನಬಸವಸ್ವಾಮಿಗಳು ಶಾಖಾ ಶಿವಯೋಗಮಂದಿರ
  17. ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು (೧೯೨೬) ಮುಂಡರಗಿ ಸಂಸ್ಥಾನಮಠ.
  18. ಅಂಕಲಗಿಯ ಶ್ರೀ ಮ.ನಿ.ಪ್ರ. ಸಿದ್ಧರಾಮ ಸ್ವಾಮಿಗಳು ಅಡವೀಸ್ವಾಮಿ ಮಠ.
  19. ತೆಲಸಂಗದ ಶ್ರೀ.ಘ.ಚ.ಬಸವಲಿಂಗ ಪಟ್ಟಾಧ್ಯಕ್ಷರು ಹಿರಿಯಮಠ
  20. ಚಿಕ್ಕಮಗಳೂರು ಜಿಲ್ಲೆಯ ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ.ಚ.ಸಿದ್ಧಲಿಂಗ ಶಿವಾಚಾರ್ಯ ಗಿರಿಯಾಪುರಹಾರ್ನಹಳ್ಳಿಯ ಶ್ರೀ.ಮ.ನಿ.ಪ್ರ. ನೀಲಲೋಚನ ಸ್ವಾಮಿಗಳು ಕೋಡಿಮಠ.
  21. ಹುಬ್ಬಳ್ಳಿ ಹೊಸಮಠದ ಶ್ರೀ.ಮ.ನಿಪ್ರ. ಶಿವಬಸವ ಸ್ವಾಮಿಗಳು .
  22. ಆದವಾನಿ ಮತ್ತು ರಾವೂರು ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು.
  23. ಸಾಲೂರು ಶ್ರೀ.ಘ.ಚ.ಚನ್ನವೀರ ಶಿವಾಚಾರ್ಯರು.
  24. ಬಾರಂಗಿ ಕೂಡ್ಲಿಯ ಶ್ರೀ ಮ.ನಿ.ಪ್ರ. ಸದಾನಂದ ಸ್ವಾಮಿಗಳು ಪುರದಮಠ ಸಿದ್ದಾಪೂರ ಕಾರವಾರ
  25. ನೀರಡಗುಂಭದ ಶ್ರೀ.ಮ.ನಿ.ಪ್ರ.ಸಿದ್ಧಲಿಂಗ ಸ್ವಾಮಿಗಳು ಪಶ್ಚಿಮಾದ್ರಿ ಸಂಸ್ಥಾನಮಠ
  26. ಕಡಕೋಳ ಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳು ಚೌಕೀಮಠ.
  27. ಹೊಸಳ್ಳಿಯ ಶ್ರೀ.ಮ.ನಿ.ಪ್ರ. ಪ್ರಭು ಸ್ವಾಮಿಗಳು ಬೂದಿಸ್ವಾಮಿಮಠ ಸಂಸ್ಥಾನಮಠ.
  28. ಹಾವೇರಿಯ ಶ್ರೀ.ಮ.ನಿ.ಪ್ರ.ಶಿವಲಿಂಗ ಸ್ವಾಮಿಗಳು ಹುಕ್ಕೇರಿಮಠ

ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಕರ್ನಾಟಕ ಏಕೀಕರಣ ಎಂಬ ವಿಷಯದ ಮೇಲೆ ಹೋರಾಟ ಮಾಡದೇ ಇರಬಹದು .ಆದರೆ ಒಂದು ಕರ್ನಾಟಕದ ಬಹುಸಂಖ್ಯಾತ  ಸಮುದಾಯದ ಏಕಿಕರಣಕ್ಕೆ ಮಾಡಿದ ಹೋರಾಟ ಮತ್ತು ಅದರ ಫಲಶೃತಿಯ ಪರಿಣಾಮಗಳು ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಗೆ ಅಂತರ್ಗಾಮಿಯಾಗಿ ಚೈತನ್ಯವನ್ನು ತುಂಬಿತು ಎನ್ನುವದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಏಕೀಕರಣಕ್ಕೆ  ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರ ಕೊಡುಗೆಗಳನ್ನು ಇತಿಹಾಸಕಾರರು ಮರೆತಿರಬಹುದು ಆದರೆ

ವಾರ್ತಾ ಭಾರತಿ ೨೦೧೭ ರ ಪತ್ರಿಕೆಯಲ್ಲಿ  “Unification Of Karnatak”  ಎಂಬ ತಲೆಬರಹದ ಅಡಿಯಲ್ಲಿ ಶ್ರೀ ಬಿ.ಎಮ್‌ ಚಂದ್ರಶೇಖರ್‌ ಅವರು ಈ ಕೆಳಗಿನಂತೆ ದಾಖಲಿಸಿರುವರು

……………………

Cultural Renaissance

The impact of the British rule was the cultural awakening in the different regions of India. Karnataka, like other states of India, witnessed the cultural Renaissance. European scholars particularly missionaries as well as Kannada stalwarts promoted the Kannada Renaissance. Kannada newspapers also accelerated the cultural awakening. One may recall the services of those now no more with us, Prof. B. M. Sreekantaiah, Sri Hanagal Kumaraswamy, Hardekar Manjappa, Aluru Venkata Rao and many other literary and social leaders who worked with devotion and zeal for the cause of Kannada. Men of letters thus provided the necessary emotional and philosophical background of the agitation for the ‘Karnataka Ekikarana’, which was taken up and was organized by politicians like S. Nijalingappa and Kengal. Hanumantaiah and many others………….”

Related Posts