General

                                                     – ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು, ಚಿಕ್ಕೋಡಿ

ಬದಾಮಿಯಿಂದ ೭ ಮೈಲಿನ ಅಂತರದಲ್ಲಿ ಶಿವಯೋಗಮಂದಿರವು ಮಲಪ್ರಭೆಯ ಎಡದಂಡೆಯಲ್ಲಿ ಪುಣ್ಯ ಭೂಮಿಯಾಗಿ ತೋರುತ್ತಿರುವದು. ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ನೂರಾರು ಎಕರೆ ಭೂಮಿ ಭಕ್ತರಿಂದ ದಾತೃಗಳಿಂದ ಸಂಸ್ಥೆಗೆ ದಾನವಾಗಿ ಬಂದಿದೆ. ವಿಶಾಲ ನಿರ್ಜನಾರಣ್ಯವಿಂದು ಪ್ರಶಾಂತ ಮಂಗಲಮಯ ಭೂಕೈಲಾಸವಾಗಿ ಪರಿಣಮಿಸಿದೆ. ಸಮಾಜ ನೌಕೆಯನ್ನು ನಡೆಯಿಸುವ ಸಮರ್ಥ ಧರ್ಮಗುರುಗಳ ಜನ್ಮಭೂಮಿಯೆಂದು ಸುಪ್ರಸಿದ್ಧವಾಗಿದೆ.

ನಾನಾ ದಿಗ್ಗೇಶಗಳಿಂದ ಅತಿಥಿ-ಅಭ್ಯಾಗತರು ಶಿವಯೋಗಮಂದಿರವನ್ನು ನಿರೀಕ್ಷಿಸಲು ಕುತೂಹಲದಿಂದ ಆಗಮಿಸುತ್ತಾರೆ. ಇಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳನ್ನು ಕಂಡು ಮನವಾರೆ ಹಾಡಿ ಹರಸುತ್ತಿರುವರು.

ಗೋರಕ್ಷಣೆ ಶಾಲೆಯತ್ತ ಗಮನಿಸಿದರೆ ಸುಮಾರು ೨೦೦ ಆಕಳುಗಳು ಇರುವವು, ಒಕ್ಕಲುತನವಿದ್ದು ಅವುಗಳ ಉಪಯೋಗ ಬಹುವಿಧವಾಗಿ ಆಗುತ್ತಿರುವದು. ಇಲ್ಲಿ ಶುದ್ಧ ವಿಭೂತಿಗಳನ್ನು ಮಾಡುವ ಕಾರ್ಯಾಲಯವು ಇದೆ. ಅದರ ಮುಖಾಂತರ ನಾಡಿನಲ್ಲಿ ಶಾಸ್ತ್ರೋಕ್ತ ವಿಭೂತಿಗಟ್ಟಿಗಳೂ ಪ್ರಚಾರದಲ್ಲಿ ಬಂದಿವೆ. ಪಂಚಸೂತ್ರಕ್ಕೆ ಸರಿಯಾದ ಲಿಂಗಗಳನ್ನು ಇಲ್ಲಿ ತಯಾರಿಸುತ್ತಾರೆ. ಈ ತೆರನಾಗಿ ಸ್ವಾತಿಕ ಕಲೆಗಳಿಗೆ ಉತ್ತೇಜನವನ್ನು ಈ ಸಂಸ್ಥೆಯು ಕೊಡುತ್ತಿರುವದು ತುಂಬಾ ಸ್ತುತ್ಯವಾದುದು.

ಶೈಕ್ಷಣಿಕ ದೃಷ್ಟಿಯಿಂದಲೂ ಈ ಸಂಸ್ಥೆಯು ಮುಂದುವರಿಯುತ್ತಿದೆ. ಇಲ್ಲಿ ರೇವಣಸಿದ್ದೇಶ್ವರ ವಾಚನಾಲಯವೂ ಇದೆ. ಅದರೊಂದಿಗೆ ಒಂದು ದೊಡ್ಡ ಗ್ರಂಥಾಲಯವೂ ಇದೆ. ಅದರಲ್ಲಿ ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲೀಷ ಭಾಷೆಯ ಪ್ರೌಢಸಾಹಿತ್ಯ ಗ್ರಂಥಗಳ ಅಪೂರ್ವ ಮತ್ತು ಅಮೂಲ್ಯ ಸಂಗ್ರಹವು ಇದೆ. ಅಲ್ಲಿರುವ ಸಾವಿರಾರು ತಾಡವೋಲೆ ಮತ್ತು ಕೈಬರಹದ ಗ್ರಂಥ  ಭಾಂಡಾರವು ಕರ್ನಾಟಕದಲ್ಲಿಯೇ ಅದ್ವಿತೀಯವಾಗಿದೆ. ಅವುಗಳನ್ನು ಪರಿಶೋಧಿಸಿ ಅಚ್ಚುಗೊಳಿಸಲು ‘ಸುಕುಮಾರ’ವೆಂಬ ಮಾಸ ಪತ್ರಿಕೆಯು ಪ್ರಕಟವಾಗುತ್ತಿದೆ. ಅದು ನಾಡಿನ ಪ್ರಗತಿಪರ ಪತ್ರಿಕೆಯಾಗಿ ಪ್ರಚಾರ ಹೊಂದುತ್ತಿದೆ. ‘ಸುಕುಮಾರ’ ಪತ್ರಿಕೆ ಮತ್ತು ಗ್ರಂಥಮಾಲೆಯ ಪ್ರಕಟನೆಗಾಗಿ ಉದಾರ ಹೃದಯರಾದ ಮಹಾಸ್ವಾಮಿಗಳವರೂ ಮತ್ತು ಭಕ್ತಾದಿಗಳೂ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ್ದಾರೆ. ಗ್ರಂಥ ಸಂಶೋಧನಾಕಾರ್ಯವು ಚಿರಸ್ಥಾಯಿ ಯಾಗಿ ನಡೆಯುವಂತೆ ಒಂದು ಭಾವೀ ಯೋಜನೆಯು ಕ್ಷಿಪ್ರದಲ್ಲಿಯೇ ಕಾರ್ಯಗತವಾಗಲಿರುವದೆಂದು ತಿಳಿಯುತ್ತದೆ.

ದರ್ಶನಾರ್ಥವಾಗಿ ಬಂದ ಭಕ್ತಾದಿಗಳಿಗೆ ದಾಸೋಹಮಠವಿದೆ. ಅಲ್ಲಿ ಅರ್ಚನ ಮತ್ತು ಅರ್ಪಿತಕ್ಕೆ ಅನುಕೂಲತೆಯಿದೆ. ಸಂಸ್ಥೆಯ ಅನುಕೂಲತೆಗಾಗಿ ಸರಕಾರದವರು ಒಂದು ಬ್ರಾಂಚ್ ಪೋಷ್ಟ ಆಫೀಸನ್ನು ಚಿರಸ್ಥಾಯಿಯಾಗಿ ಮಾಡಿದ್ದಾರೆ.

ಅಲ್ಲಿ ಮುಖ್ಯವಾಗಿ ವಟುಗಳು ಶಿವಯೋಗಿಗಳು ಧಾರ್ಮಿಕ ಶಿಕ್ಷಣವನ್ನು ಹೊಂದುತ್ತಲಿರುವರು. ಸಾಧಕರು ಪ್ರತಿನಿತ್ಯವೂ ಮುಂಜಾನೆ ಯೋಗಾಸನಗಳ ಸಾಧನೆಯನ್ನು ಮಾಡುತ್ತಾರೆ. ಯೋಗದಲ್ಲಿ ತಜ್ಞತೆಯನ್ನು  ಪಡೆಯುತ್ತಾರೆ. ಪ್ರತಿನಿತ್ಯದ ಕಾಠ್ಯಕ್ರಮದಲ್ಲಿ ಅದಕ್ಕೆ ಪ್ರಾಧಾನ್ಯವನ್ನು ಕೊಟ್ಟಿದ್ದಾರೆ. ತ್ರಿಕಾಲದಲ್ಲಿಯೂ ಲಿಂಗಾರ್ಚನೆ, ಪುರಾಣ, ಪ್ರವಚನ, ಭಾಷಣ,  ಸಂಗೀತಕಲೆ ಮುಂತಾದ ಸಮಾಜ ಸುಧಾರಣೆಯ ಶಿಕ್ಷಣವು ಕೊಡಲಾಗುತ್ತಿದೆ. ಮಂದಿರದಲ್ಲಿಯೇ ಶಿಕ್ಷಣ ಪಡೆದ ಸ್ವಾಮಿಗಳು ಮತ್ತು ಶಾಸ್ತ್ರಿಗಳು ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ದುಡಿಯುತ್ತಾರೆ. ಈಗಾಗಲೇ ಇಲ್ಲಿಂದ ಶಿಕ್ಷಣ ಪಡೆದ ಶಿವಯೋಗಿಗಳು ಕರ್ನಾಟಕ, ಮಹಾರಾಷ್ಟ್ರ ಹೈದರಾಬಾದ ಮತ್ತು ಮೈಸೂರು ಪ್ರಾಂತಗಳಲ್ಲಿಯ ಸುಪ್ರಸಿದ್ಧ ಮಠಗಳ ಅಧಿಪತಿಗಳಾಗಿ ಸಮಾಜ ಕಾರ್ಯ ಧುರಂಧರರಾಗಿದ್ದಾರೆ. ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು ಕಾಲೇಜುಗಳನ್ನು ಅಲ್ಲದೆ ಫ್ರೀ ಬೋರ್ಡಿಂಗು ಗಳನ್ನೂ, ದಾಸೋಹ ಮಂದಿರಗಳನ್ನೂ, ಅನುಭವಮಂಟಪಗಳನ್ನು ಮಾಡಿಯೂ ಮಾಡುತ್ತಲೂ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಸ್ವಯಂಸೇವಕರಾಗಿ ಸಮಾಜ ಸುಧಾರಣೆಯ ಮುಖದಿಂದ ರಾಷ್ಟ್ರೋದ್ದಾರ ಕಾರ್ಯದಲ್ಲಿ ಹೇಗೆ ಇಂದಿಗೂ  ನೆರವಾಗುತ್ತಾರೆಂಬುದು ನಿರ್ವಿಕಾರ ಮನಸ್ಸಿನಿಂದ ವಿಚಾರಿಸಿದರೆ ಹೊಳೆಯದಿರದು.

ಧರ್ಮ-ನೀತಿಗಳ ಜೀವಾಳಗಳನ್ನಿಟ್ಟುಕೊಂಡು ಕೊನೆಯ ರಾಜಕಾರಣವನ್ನು ಯಾವ ರೀತಿಯಿಂದ ನಡೆಸುತ್ತಾರೆಂಬುದು ವಿಚಕ್ಷಣಮತಿಗಳಿಗೆ ತಿಳಿಯದಿರದು. ಇಂದು ರಾಷ್ಟ್ರೀಯ ಕಾರ್ಯಗಳು ಧರ್ಮದಿಂದಲೇ ನಡೆಯಬೇಕಾಗಿದೆ. ಧರ್ಮವಿಲ್ಲದಿದ್ದರೆ ಮೃತದೇಹದಂತೆ ನಾಡು ನಿರ್ವೀರ್ಯವಾಗುವಲ್ಲಿ ಯಾವ ಸಂದೇಹವೂ ಇಲ್ಲ

ಮಠಾಧಿಪತಿಗಳು ಶಿಕ್ಷಣದ ಸತ್ರವನ್ನು ಪ್ರಾರಂಭಮಾಡದಿದ್ದರೆ ಸಮಾಜವು ಇಷ್ಟೊಂದು ಉನ್ನತಾವಸ್ಥೆಗೆ ಬರುತ್ತಿರಲಿಲ್ಲ. ಈ ಎಲ್ಲ ಮುಂದಿನ ಹೊಣೆಗಾರಿಕೆಯನ್ನರಿತು ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಶಿವಯೋಗಮಂದಿರವನ್ನು ಸ್ಥಾಪಿಸಿ  ಸಮಾಜಕ್ಕೆ ಹೇಳ ತೀರದಷ್ಟು ಉಪಕಾರ ಮಾಡಿದ್ದಾರೆ.

ಇಂಥ ಪವಿತ್ರ ಸಂಸ್ಥೆಗೆ ಸಹಾಯ ಸಹಕಾರ ಮತ್ತು ಸಹಾನುಭೂತಿಗಳನ್ನು ನೀಡುವದು ಸಕಲರ ಆದ್ಯ ಕರ್ತವ್ಯವಾಗಿದೆ. ನಿಮ್ಮ ಇರುವನ್ನು ಅರಿವನ್ನು ತಂದುಕೊಟ್ಟ ಸಂಸ್ಥೆಯ ಬಗ್ಗೆ ಆದರ ಅನುತಾಪಗಳು ಬೇಡವೇ ?

ಶಿವಯೋಗಮಂದಿರವು ಇಂದು ವಿಶ್ವವಿದ್ಯಾಲಯವಾಗಬೇಕಾಗಿದೆ. ಕರ್ನಾಟಕದ ಕತ್ತಲೆಯು ಬಯಲಾಗಿ ಪ್ರಚಂಡ ಪ್ರಕಾಶಮಯ ರವಿ ಶಿವಯೋಗಿ ಪುಂಗವರು ಉದಯಿಸಬೇಕಾಗಿದೆ. ಜ್ಞಾನಭಂಡಾರದ ಸೂರೆಯಾಗಲಿ, ಸಮಾಜಗಳು ವಿಕಾಸ ಹೊಂದಲಿ, ರಾಷ್ಟ್ರೋದ್ದಾರ ವಾಗಲಿ, ಅಖಿಲರಿಗೂ ಸುಖವಾಗಿ ಇದಕ್ಕಾಗಿಯೆ ಶಿವಯೋಗ ಮಂದಿರದ ನಿರೀಕ್ಷಣೆಯನ್ನು ಮಾಡಿರಿ.

ಜಾತೀಯತೆಯ ಭಾವನೆಯಿಂದ ಪ್ರೇರಿತವಾಗಿ ನೋಡಕೂಡದು. ಜಾತ್ಯಾತೀತ ತತ್ತ್ವವನ್ನವಲಂಬಿಸಿ ದವರಿಗೂ ಸಹ  ಜಾತಿಯನ್ನು ಬಿಟ್ಟರೆ ಗತಿಯಿಲ್ಲ, ಜಾತಿ ಮತ ಪಂಥಗಳ ಬುರುಕೆಗೆ ಯಾರೂ ಹೆದರಬೇಕಾಗಿಲ್ಲ, ಆದರೂ ಜಾತ್ಯಾಂಧರಾಗಬಾರದು. ವಿಶ್ವವ್ಯಾಪಿ ತತ್ತ್ವಗಳು ಎಲ್ಲಿದ್ದರೇನು ? ಅವೆಲ್ಲವೂ ಸ್ವಾಗತಾರ್ಹವೆಂದು ಭಾವಿಸಿ ಒಳಗಣ್ಣ ತೆರೆದು ನೋಡಬೇಕೆಂದು ಬೇಡಿಕೊಳ್ಳುತ್ತೇನೆ.

ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ನಮ್ಮ ಭರತ ಭೂಮಿಯು ಅಧ್ಯಾತ್ಮದ ತವರೂರೆಂಬುದು ಎಲ್ಲರಿಗೂ ತಿಳಿದ ವಿಷಯ.ಬೇರೆ ದೇಶದಲ್ಲಿ ಎಲ್ಲವು ಇದೆ.ಅದರೆ  ಅಧ್ಯಾತ್ಮದ ಸುಳಿವು ಅಲ್ಲಿ ಕಾಣಸಿಗುವುದಿಲ್ಲ.ಎಲ್ಲಿ ಅಧ್ಯಾತ್ಮವಿರುವದಿಲ್ಲವೋ ಅಲ್ಲಿ ಏನೇಲ್ಲವಿದ್ದರು ಏನು ಎಲ್ಲದಂತೆ.ಏನೇಲ್ಲ ಸಾಧಿಸಿದರೂ ಜೀವನದೊಳಗೆ ಅದನ್ನು ಅನುಭವಿಸುವ ಸ್ವಭಾವ ಮತ್ತು ಶಾಂತಿ ,ನೆಮ್ಮದಿಯ ಬದುಕು ಸಾಗಿಸಲು ಅಧ್ಯಾತ್ಮ ಬೇಕು.

ಅಧ್ಯಾತ್ಮವೆಂದಾಕ್ಷಣ ಪ್ರತಿಯೊಬ್ಬರ ಮನದಲ್ಲುಂಟಾಗುವುದು ಧರ್ಮ-ಮತಗಳ ವಿಚಾರವಲ್ಲವೆ? ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ ,ಜೈನ, ಸಿಖ್‌, ಧರ್ಮಗಳನ್ನು ಆಚರಿಸಿದರೆ ಮಾತ್ರ ಅದು ಅಧ್ಯಾತ್ಮವೆಂದು ತಿಳಿಯಬಾರದು . ಧರ್ಮ-ಅಧ್ಯಾತ್ಮ ಕೂಡಿಕೊಂಡಿವೆ. ಆದರೆ ಅಧ್ಯಾತ್ಮ  ಧರ್ಮದಿಂದಲ್ಲ. ಅಧ್ಯಾತ್ಮ ಅದ್ಬುತವಾದ ಒಂದು ತತ್ತ್ವ, ಅದು ಪ್ರತಿಯೊಬ್ಬರ ಜೀವನಕ್ಕೂ ಅವಶ್ಯವಾಗಿರುವಂತಹದು.ನಾವುಗಳು ಜೀವನದಲ್ಲಿ ಏನನ್ನೇ ಸಾದಿಸಿದರೂ ಸಹ ಆ ಸಾಧನೆಯು ಸಾರ್ಥಕವಾಗಬೇಕಾದರೆ ನಮ್ಮಲ್ಲಿ  ಅಧ್ಯಾತ್ಮದ ಅನುಭೂತಿಯಿದ್ದಾಗ ಮಾತ್ರ ಸಾಧನೆಯನ್ನ ಸರಿಯಾಗಿ ಅನುಭವಿಸಲು ಸಾಧ್ಯ.

ಜನರಿಲ್ಲದೂರು ರಣಹದ್ದುಗಳ

ತಾಣವಾಗುವುದು|                                                           

ವಿದ್ಯೆಯಿಲ್ಲದ ಬುದ್ಧಿ

ಲದ್ದಿಯಾಗರವಾಗುವುದು|

ಭಾವನೆಯಿರದ ಮನವು

ಭೂತದಾಗರವಾಗುವಂತೆ

ಆಧ್ಯಾತ್ಮವಿರದ ಬದುಕು

ಬಂಜರ ಭೂಮಿಯಂತೆಂದ ನಮ್ಮ ಚೆನ್ನ.||

ಅಧ್ಯಾತ್ಮವಿಲ್ಲದ ಬದುಕು ಬೆಳೆಯದೆ ಬಂಜರ ಭೂಮಿಯಂತೆ. ಏನೂ ಬೆಳೆಯಲು ಯೋಗ್ಯವಾಗಿರುವುದಿಲ್ಲ. ಅಧ್ಯಾತ್ಮದಿಂದ ಕೂಡಿದ ಬದುಕು ಏನನ್ನಾದರೂ ಸಾಧಿಸಲು ಸಮರ್ಥವಾಗಿರುತ್ತದೆ ಮತ್ತು ಶಾಂತಿ ನೆಮ್ಮದಿಯನ್ನು ಗಳಿಸುವ ಸಾಮರ್ಥ್ಯ  ಹೊಂದಿರುತ್ತದೆ. ಜಗತ್ತಿನಲ್ಲಿ  ಪಾಶ್ಚಾತ್ಯ ದೇಶದವರು ಏನೆಲ್ಲಾ ಸಾಧಿಸಿದ್ಧಾರೆ,ಯಾವುದು  ಅಸಾಧ್ಯವೆನ್ನುತ್ತೇವೆಯೋ ಅದನ್ನೆಲ್ಲಾ ಸಾಧಿಸಿ ತೋರಿಸಿದ್ದಾರೆ ಅದರೂ ಸಹ ನಮ್ಮ ದೇಶದ ಕಡೆ ಒಲವನ್ನು ತೋರಿ ,ಅಧ್ಯಾತ್ಮವನ್ನು ಹುಡುಕಿಕೊಂಡು ಭಾರತದತ್ತ ಹೆಚ್ಚು ಜನ ಆಕರ್ಷಣೆಯನ್ನು ಪಡೆಯುತ್ತಿರುವರು. ಬೇರೆಯವರು ನಮ್ಮಲ್ಲಿರುವ ಅಗಾಧವಾದ ಶಕ್ತಿಗೆ ಆಕರ್ಷಣೆಯಾಗುತ್ತಿರುವಾಗ,ಇಲ್ಲಿಯೇ ಹುಟ್ಟಿ ಬೆಳೆದು ನಮಗೆ ಅದರ ಬಗ್ಗೆ ಅಸಡ್ಡೆ ಭಾವನೆಯನ್ನು ತಾಳುವುದು ಉಚಿತವೆ? ಬದುಕಿನಲ್ಲಿ  ಶಾಂತಿ ನೆಮ್ಮದಿಯನ್ನು ಅನುಭವಿಸಲು ಅಧ್ಯಾತ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.| ಮತ್ತೊಮ್ಮೆ ಸ್ಪಷ್ಟಪಡಿಸುವೆ ಅಧ್ಯಾತ್ಮವನ್ನು ಅಳವಡಿಸಿಕೊಳ್ಳೋಣವೆಂದರೆ ಧರ್ಮವನ್ನು ಆಚರಿಸೋಣ ಎಂದು ಅರ್ಥವಲ್ಲ. ಮೇಲೆ ಹೇಳಿರುವಂತೆ ಧರ್ಮ ಮತ್ತು ಅಧ್ಯಾತ್ಮ ಭಿನ್ನವಾದುವುಗಳು.ಆದ್ದರಿಂದ ಜಂಜಾಟದಿಂದ  ಕೂಡಿದ ಬದುಕಿನಲ್ಲಿ ಶಾಂತಿ ನೆಮ್ಮದಿಗೆ ಅಧ್ಯಾತ್ಮ ಅವಶ್ಯವಾಗಿರುವಂತಹದು.ಜೀವನದಲ್ಲಿ ಅಧ್ಯಾತ್ಮವನ್ನಳವಡಿಸಿಕೊಂಡು ಅರಿವಿನ ಮೆಟ್ಟಲನ್ನೇರೋಣ.

ಡಿ. ಎಸ್. ಕರ್ಕಿ

ಇದೋ ಮಂದಿರ ಶಿವಮಂದಿರ

ಶಿವಯೋಗದ ಮಂದಿರ

ಪ್ರಕೃತಿಯ ಪರಮಾನಂದದ

ಸುಧೆ ಸೂಸುವ ಚಂದಿರ

ಹೊಳೆಗೆ ತನ್ನದೇ ಆದ ಚೆಲವು ಉಂಟು. ಗುಡ್ಡಕ್ಕೆ ಅದರದೇ ಆದ ಚೆಲವು ಇರುತ್ತದೆ. ಹೊಳೆಯ ಚೆಲುವೂ ಗುಡ್ಡದ ಚೆಲುವೂ ಕೂಡಿದ ಸ್ಥಳದಲ್ಲಂತೂ ಚೆಲುವು ಚೆಲ್ಲವರಿಯದಿರದು. ಜಲಶ್ರೀ ವನಶ್ರೀಗೆ ಸನ್ನಿಹಿತವಾದಾಗ ಸೌಂದರ್ಯಕ್ಕೆ ಸಾಕಾರದ ರೂಪ ಪ್ರಾಪ್ತವಾಗದಿದ್ದೀತೇ ? ಅವೆರಡರ ಯೋಗ ನಿಜವಾಗಿಯೂ ಸೌಂದರ್ಯ ಯೋಗ ಶಿವಯೋಗಮಂದಿರವು ಇಂಥ ಸೌಂದರ್ಯ ಯೋಗದ ಒಂದು ಸ್ಥಳ; ಉತ್ತರ ಕನ್ನಡ ನಾಡಿನ ನದಿಗಳಲ್ಲಿ ಮಲಪ್ರಭೆ ಹಿರಿಹೊಳೆಯೇನೂ ಅಲ್ಲ. ಆದರೂ ಅದರ ತೀರದಲ್ಲಿ ಸೌಂದರ್ಯಸ್ಥಾನಗಳು ಪ್ರವಾಸಿಯ ಕಣ್ಣನ್ನು ಅಲ್ಲಲ್ಲಿ ಕುಣಿಸುತ್ತವೆ. ಆದುದರಿಂದಲೇ ಅದರ ತೀರದಲ್ಲಿ ಕನ್ನಡಿಗರು ಅನೇಕ ಕ್ಷೇತ್ರಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬಾದಾಮಿಯ ಬನಶಂಕರಿ, ಮಹಾಕೂಟ ಮೊದಲಾದವುಗಳು ಮಲಪ್ರಭೆಯ ತೀರದ ಸಮೀಪದಲ್ಲಿ ನೆಲಸಿವೆ. ಕನ್ನಡ ನಾಡಿನ ಅತ್ಯಂತ ಮಹತ್ವದ ಪುರಾತನ ಐತಿಹಾಸಿಕ ಪಟ್ಟಣಗಳಲ್ಲಿ ಕೆಲವು ಮ ಲಪ್ರಭೆಯ ತೀರದಲ್ಲಿ ನೆಲಸಿವೆ. ಅವುಗಳಲ್ಲಿ ಐಹೊಳಿ, ಪಟ್ಟದಕಲ್ಲು ಮೊದಲಾದವುಗಳನ್ನು ಹೆಸರಿಸಬಹುದು. ಅಂತೂ ಕನ್ನಡ ನಾಡಿನ ಕ್ಷೇತ್ರಗಳ ದೃಷ್ಟಿಯಿಂದ ಹಾಗು ಪ್ರಕೃತಿ ಸೌಂದರ್ಯದ ದೃಷ್ಟಿಯಿಂದ ಮಲಾಪಹಾರಿಗೆ ಒಂದು ವೈಶಿಷ್ಟ್ಯವಿದೆ. ಸೌಂದರ್ಯವೆಂಬ ಅಂಜನದಿಂದ ಕಣ್ಣಿನ ಮಲವನ್ನು ತೊಳೆಯುವ ಗಣ್ಯತೆ ಮಲಪ್ರಭೆಗೆ ಇರುವುದರಿಂದಲೇ ಮಲಾಪಹಾರಿ ಎಂಬ ಅನ್ವರ್ಥಕ ನಾಮ ಅದಕ್ಕೆ ರೂಢವಾಗಿರಬಹುದೇನೋ ! ಈಚೆಗೆ ಮಲಪ್ರಭೆಯ ತೀರದಲ್ಲಿ ಶಿವಯೋಗಮಂದಿರವು ಈ ಊಹೆಯನ್ನು  ಸಮರ್ಥವಾದ ರೀತಿಯಲ್ಲಿ ಮನಗಾಣಿಸುವಂತಿದೆ.

ಶಿವಯೋಗಮಂದಿರ ! ಸುಂದರವಾದ ಸ್ಥಳಕ್ಕೆ ತುಂಬಾ ಸಮಂಜಸವಾದ ಹೆಸರು, ಶಿವ, ಯೋಗ, ಮಂದಿರ- ಈ ಮೂರರಲ್ಲಿ ನಮಗೆ ಮೂರೂ ಬೇಕು. ಮಹೇಶ್ವರನ ಹೆಸರುಗಳಲ್ಲಿ ‘ಶಿವ’ ಎಂಬ ಹೆಸರು ಎಷ್ಟು ಚಿಕ್ಕದೋ ಅಷ್ಟೇ ಅರ್ಥಪೂರ್ಣವಾದುದು. ಸತ್ಯಂ, ಶಿವಂ ಸುಂದರಂ-ಎಂಬ ಜೀವನದ ಸರ್ವೋತ್ಕೃಷ್ಟ ತತ್ವಗಳಲ್ಲಿ ‘ಶಿವ’ ಶಬ್ದವು ಮಧ್ಯವರ್ತಿಯಾಗಿ, ಎಂದರೆ ಸತ್ಯವನ್ನು ಸೌಂದರ್ಯವನ್ನು ಸಮರಸಗೊಳಿಸುವ ಶುಭ ಸತ್ವವಾಗಿ ಸಮಾವೇಶವಾಗಿದೆಯೆಂಬುದನ್ನು ನೆನೆಯಬೇಕು. ಮಹಾದೇವನ ಮಂಗಲಮಯವಾದ, ಕರುಣಾ ಪೂರ್ಣವಾದ ಮಹೋನ್ನತವಾದ ಸ್ವರೂಪವನ್ನು ‘ಶಿವ’ ಶಬ್ದವು ಎರಡೆಂದರೆ ಎರಡೇ ಅಕ್ಷರಗಳಲ್ಲಿ ನಿರೂಪಿಸುತ್ತದೆ. ‘ಶಿವ’ ಶಬ್ದಕ್ಕೆ ‘ಶುಭ’ ಎಂಬ ಅರ್ಥವೂ ಉಂಟು. ಹೀಗೆ ಶುಭದಿಂದ ಪ್ರಾರಂಭವಾಗುತ್ತದೆ ‘ಶಿವಯೋಗಮಂದಿರದ ಹೆಸರು ಶುಭಕ್ಕೆ ‘ಯೋಗ’ದ ಯೋಗ ದೊರೆತು ಆನಂದದ ಆಗರವಾದಂತಿದೆ ಶಿವಯೋಗಮಂದಿರ.

ಶಿವಯೋಗಮಂದಿರದ ರಚನೆಗಾಗಿ ಸುಂದರವಾದ ಸನ್ನಿವೇಶವನ್ನು ಆಯ್ದ ಪ್ರತಿಭೆ ಸಾಮಾನ್ಯವಾದುದಲ್ಲ. 

ಸೌಂದರ್ಯರ್ಯಾನುಭವವನ್ನು ಶಿವಾನುಭವವನ್ನು ತನ್ನಲ್ಲಿ ಸಮರಸಗೊಳಿಸಿಕೊಂಡ ಪ್ರತಿಭೆಯದು. ಅದು  ಹಾನಗಲ್ಲ ಕುಮಾರ ಸ್ವಾಮಿಗಳಮಹಾ ವ್ಯಕ್ತಿತ್ವವನ್ನು ಬೆಳಗಿದ ಪ್ರತಿಭೆ.ಲಿಂಗೈಕ್ಯ ಹಾನಗಲ್ಲ ಕುಮಾರ ಶ್ರೀಗಳವರು ತಾವು ತಮ್ಮ ಚಿತ್ತದಲ್ಲಿ ಕಲ್ಪಿಸಿದ ಶಿವಯೋಗಮಂದಿರಕ್ಕಾಗಿ ಒಂದು ಅಂದವಾದ ಸ್ಥಳವನ್ನು ಅರಸುವ ಹೊಣೆಯನ್ನು ಲಿಂಗೈಕ್ಯ ಇಲಕಲ್ಲ ಮಹಾಂತ ಶಿವಯೋಗಿಗಳಿಗೆ ಒಪ್ಪಿಸಿದರು.ಇಲಕಲ್ಲ ಶ್ರೀಗಳವರ ಆಕಳು ಅಲೆಯುತ್ತ,ಅಲೆಯುತ್ತ ಈಗ ರಚಿತವಾಗಿರುವ ಶಿವಯೋಗಮಂದಿರದ ಸ್ಥಳದಲ್ಲಿ  ಒಮ್ಮಲೇ ಬಂದು ನಿಂತಿತಂತೆ ಆಗ ಆ ಸ್ಥಳ ಜನರ ಸಂಪರ್ಕ ದಿಂದ ಅತೀ ದೂರವಾಗಿ ಕಾಡಿನಲ್ಲಿ ಅಡಗಿಹೋದ ಸ್ಥಳ .ಶ್ರೀಗಳವರ ಘನವ್ಯಕ್ತಿತ್ವದ ಪ್ರಭಾವದಲ್ಲಿ  ಅದು ಶಿವಯೋಗಮಂದಿರವಾಗಿ ರಚನೆಗೊಂಡಿತು. ಪರಮಾತ್ಮನ ಕೃಪೆಯಿಂದಾಗಿ ಪ್ರಕೃತಿಗೆ ಪುಳಕವೇರಿದಂತಾಯ್ತು

ಮಂದಿರದ ಸ್ಥಳವು ಸೌಂದರ್ಯ ಯೋಗಕ್ಕೂ, ಶಿವಯೋಗಕ್ಕೂ. ತುಂಬಾ ಯೋಗ್ಯವಾದುದು, ಮಲಪ್ರಭೆಯ ತಟದಲ್ಲಿ ಮಂದಿರ ಮೂಡಿ ನಂದಾದೀಪವನ್ನು ಬೆಳಗುತ್ತಲಿದೆ. ಒಂದು ಬದಿಯಲ್ಲಿ ಮಲಪ್ರಭೆ ಪ್ರವಹಿಸುತ್ತಿದ್ದರೆ ಇನ್ನೊಂದು ಬದಿಗೆ ಎತ್ತರವಲ್ಲದ ಗುಡ್ಡಗಳು ತಮ್ಮ ತೋಳುಗಳನ್ನು ಚಾಚಿವೆ. ಗುಡ್ಡದ ಗಿಡಗಳು ಎತ್ತರವಾದವುಗಳಲ್ಲ ಪ್ರಕೃತಿ ಇಲ್ಲಿ ನಿಂತು ರಮಣೀಯ ದೃಶ್ಯ ಕಾವ್ಯವನ್ನು ರಚಿಸಿದುದಲ್ಲದೆ ಶ್ರಾವ್ಯಕಾವ್ಯವನ್ನೂ ರಚಿಸಿದ್ದಾಳೆ. ಎತ್ತರ ಎತ್ತರ ಬಂಡೆಗಲ್ಲುಗಳಿಂದ ಪ್ರಕೃತಿ ರಚಿಸಿದ  ಸೋಪಾನಗಳನ್ನು ಮಲಪ್ರಭೆ ಉತ್ಸಾಹದಿಂದ  ಇಳಿದು ಮುಂದುವರಿಯುವಾಗ ಅವಳ ಉತ್ಸಾಹದ ನಡೆ ನಾದವಾಗಿ ಪರಿಣಮಿಸಿದೆ, ಅದುವೆ ಇಲ್ಲಿ ನಿನದಿಸುವ ದಿಗುಡು.

ನಾದಯೋಗ : ಜೋಗವನ್ನು ನೆನೆದಾಗ ನನಗೆ ಯೋಗದ ನೆನಪು ಬರುತ್ತದೆ. ಅಲ್ಲಿ ನಾಟ್ಯವಾಡುವ ಶರಾವತಿ ಯೋಗದಲ್ಲಿ ತೊಡಗಿದಂತೆ ಭಾಸವಾಗುತ್ತದೆ. ಈ ಯೋಗದಿಂದಾಗಿಯೇ ಜೋಗಕ್ಕೆ ಜೋಗವೆಂಬ ಹೆಸರು ಬಂದಿರಬಹುದೇ ? ಅದೇನೇ ಇರಲಿ ಶಿವಯೋಗಮಂದಿರದ ಸ್ಮರಣೆ ಬಂದಾಗ ನನಗೆ ಮಲಪ್ರಭೆಯ ನಾದಯೋಗದ ನೆನಪು ಬರುತ್ತದೆ. ಒಂದೇ ಸವನೆ ನಿನದಿಸುವ ಮಲಾಪಹಾರಿಯ ದನಿ ಚಿತ್ತವನ್ನು ಒಂದಿಷ್ಟೂ ಕದಡದೆ ಅದರ ಏಕಾಗ್ರತೆಗೆ ಸಹಾಯಕವಾಗುವುದೆಂಬುದನ್ನು ಶಿವಯೋಗಮಂದಿರಕ್ಕೆ ಹೋಗಿ ಮನಗಾಣಬೇಕು. ನಾದ ಅಲ್ಲಿ ಧ್ಯಾನದ ಕಲ್ಪನೆಯನ್ನು ದೃಢೀಕರಿಸುತ್ತದೆ. ಪ್ರಶಾಂತವಾದ ಆ ಸ್ಥಳದಲ್ಲಿ ಪವಿತ್ರವಾದ ಆ ಎಡೆಯಲ್ಲಿ ತಾಳಲಯದೊಡನೆ ಹೊಮ್ಮುವ ಆ ನಾದವು ಅಲ್ಲಿ ನಾದಬ್ರಹ್ಮವಾಗಿದೆ.

ಸಲಿಲಯೋಗ : ಈ ಸ್ಥಳದ ಸೌಂದರ್ಯಕ್ಕೆ ಕಾರಣವಾದ ಇನ್ನೊಂದು ಮಹತ್ವದ ಸಂಗತಿಯೆಂದರೆ  ಅದಕ್ಕೆ ಒದಗಿದ  ಸಲಿಲಯೋಗ, ಹಳ್ಳವಾಗಿ, ಹೊಳೆಯಾಗಿ, ಕೊಳವಾಗಿ, ಕಾಲುವೆಯಾಗಿ ಸಲಿಲವು ಶಿವಯೋಗ ಮಂದಿರವನ್ನು  ಸಮೀಪವರ್ತಿಯಾಗಿ ಬಳಸಿದೆ. ಮಲಪ್ರಭೆಯ ಮಾತನ್ನಂತೂ ಈ ಮೊದಲೆ ಹೇಳಲಾಗಿದೆ. ಶಿವಯೋಗ ಮಂದಿರದಿಂದ ಎರಡು ಮೈಲು ಗುಡ್ಡದ ಓರೆಯ ಚೆಲುವನ್ನು ನೋಡುತ್ತ ಸಾಗುವುದರೊಳಗಾಗಿ “ಮಹಾಕೂಟ’ವು ನೋಟವನ್ನು ಸೆಳೆಯುತ್ತದೆ. ಅದನ್ನು ಸುತ್ತುವರಿದ ಜಲ ಅಲ್ಲಿ ಚೆಲುವನ್ನು ಚಿಗುರಿಸಿದೆ. ಶಿವಯೋಗ ಮಂದಿರದಿಂದ ಬಾದಾಮಿಯ ದಿಕ್ಕಿನಲ್ಲಿ ಸಾಗಿದರೆ ಮಧ್ಯದಲ್ಲಿ ಬನಶಂಕರಿಯ ಬನ ನಮ್ಮ ಕಣ್ಮನಗಳನ್ನು ಸೆಳೆಯುತ್ತದೆ. ಸುತ್ತಲಿನ ಪ್ರಶಸ್ತ ಸನ್ನಿವೇಶದಲ್ಲಿ ಸರಸ್ವತೀ ಹಳ್ಳದ

ಪಕ್ಕದಲ್ಲಿ ಹಳ್ಳದ ಜಲ ಕಾಲುವೆಗಳಲ್ಲಿ ಹರಿದು ತೆಂಗು, ಬಾಳೆಗಳ ಬನಗಳಿಗೆ ನೀರು ನೀಡಿ ತಂಪು ಮಾಡಿದೆ. ಸೊಗಸಾದ ತಾಣದಲ್ಲಿ ಸುವಿಶಾಲ ಕೊಳ್ಳವೊಂದರ ತಡಿಯಲ್ಲಿ ಬನಶಂಕರಿ ತಣಿದ ಮನಶಂಕರಿಯಾಗಿ ಅಲ್ಲಿ ನೆಲೆಸಿದ್ದಾಳೆ. ಸೊಗಸಾಗಿ ಹರಿಯುವ ಸರಸ್ವತಿಯ ಹಳ್ಳ ಶಂಕರಿಯ ಬನಕ್ಕೆ ನೀರ ನೀಡಿ ಕೃತಾರ್ಥವಾಗಿದ್ದಂತೆ ಅದರ ಸಮೀಪದಲ್ಲಿಯೇ ಮಲಪ್ರಭಾ ನದಿ ಶಿವನಯೋಗಕ್ಕೆ ಯೋಗ್ಯ ಸನ್ನಿವೇಶವನ್ನು ಶಿವಯೋಗಮಂದಿರದ ರೂಪದಲ್ಲಿ ಕಲ್ಪಿಸಿದೆ. ಅಂತೂ ಶಿವ  ಸರ್ವಮಂಗಳೆಯರಿಬ್ಬರೂ ಸಲಿಲ ಸೌಂದರ್ಯದ ಮಧ್ಯದಲ್ಲಿ ಮನೆ ಮಾಡಿದ ರಸಿಕರು ! ಶಿವಯೋಗ ಮಂದಿರದಲ್ಲಿ ಒಂದೆಡೆಗೆ ಜಲ ಸೋಪಾನಗಳನ್ನಿಳಿಯುವಂತೆ – ಜಲ ಜಲನೆ ಇಳಿದು ಹರಿಯುತ್ತಿದ್ದರೆ ಇನ್ನೊಂದೆಡೆಗೆ ಲತಾಮಂಟಪದ ಹತ್ತಿರ  ಮಡುಗಟ್ಟಿ ಗಂಭೀರವಾಗಿರುವುದು ಕಂಡು  ಬರುತ್ತದೆ. ಒಂದೊಂದು ಚೆಲುವಿನ ಒಂದು ಬಗೆ. ಶಿವಯೋಗ ಮಂದಿರಕ್ಕೆ ವ್ಯಾಸಂಗಕ್ಕಾಗಿ ಬರುವ, ಬಂದ ವಟುಗಳ ಸಲುವಾಗಿ ಏರ್ಪಡಿಸಿದ ನಿವಾಸ ಸ್ಥಾನದ ಮುಂದುಗಡೆಯಲ್ಲಿ ಲತಾಮಂಟಪ ತನ್ನ ನೆಳಲ ಬಲೆಯನ್ನು ಹರಡಿದೆ; ಬಳಿಲು ಬಳಿಲಿನ ಚೆಲುವನ್ನು ಹೆಣೆದಿದೆ. ಬೇಸಗೆಯಲ್ಲಿ ಲತಾ ಮಂಟಪದಲ್ಲಿ ಕುಳಿತು  ನೋಡಬೇಕು; ತೃಪ್ತಿಯಾಗದಿದ್ದರೆ ಒರಗಿ ನೋಡಬೇಕು. ಆಗ ಅದರ ಸೊಂಪಿನ ಕಲ್ಪನೆಯಾಗುವುದು. ಅದರ ಅಡಿಯಲ್ಲಿ ಹರಿಯುವ ಹೊಳೆಯ ತಂಪು ತೇಲಿ ತೇಲಿ ಬರುತ್ತಿರುವಾಗ ಅದಕ್ಕೆ ಮೈಯೊಡ್ಡಿ ಆನಂದದ ಅನುಭವವನ್ನು ಪಡೆಯಬೇಕು. ಬೆಳುದಿಂಗಳಲ್ಲಿ ಅಲ್ಲಿ ಎಡೆಯಾಗುವ ಭಾಗ್ಯ ದೊರೆತರಂತೂ ಆಗುವ ಆನಂದವನ್ನು ಏನೆಂದು ಹೇಳಬೇಕು ?

ಜಲ ಮಡುಗಟ್ಟಿದ ಈ ದಡ

ದಲಿ ನೆಲಸಿದ ಸೌಂಧರ

ಲತ ಲತೆ ಜತೆಗೂಡಿ ನೆಳಲ

ನೆಯ್ದಕ್ಕಿದೆ ಹಂದರ

ಕುಳ್ಳಿರು ಈ ತಂಪಿನಲ್ಲಿ

ಒಂದಾಗುವ ಸೋಂಪಿನಲ್ಲಿ

ತೇಲಲಿ ಎದೆ ತಂಪಿನಲ್ಲಿ

ನೈರ್ಮಲ್ಯದ ಸಂಗಕೆ

ಕರ್ಕಶ ಕಾರ್ಶ್ಯವೆಲ್ಲ

ಕರಗುವ ರಸರಂಗಕ್ಕೆ

ಸಂಸ್ಕೃತಿಯೋಗ : ಪ್ರಕೃತಿ ಸೌಂದರ್ಯಕ್ಕೂ ಶಾಂತಿಗೂ ಒಂದು ನಿಕಟ ಸಂಬಂಧವುಂಟೆಂದು ಹೇಳಬಹುದು. ಪ್ರಕೃತಿಯ ಲೀಲಾ ವಿಲಾಸ ಜನದಟ್ಟಣೆಯಿಂದ ದೂರವಾದಷ್ಟೂ ಅದರ ಶಾಂತಿಯ ಸ್ವರೂಪ ನಿಚ್ಚಳವಾಗುತ್ತದೆ. ಆದುದರಿಂದಲೇ ಪ್ರಕೃತಿಯ ಆವರಣದಲ್ಲಿ ತೆರೆದ ತಮ್ಮ ಸಂಸ್ಕೃತಿ ಶಿಕ್ಷಣ ಕೇಂದ್ರವನ್ನು ರವೀಂದ್ರರು ಶಾಂತಿನಿಕೇತನ’ವೆಂದು ಕರೆದುದು. ಪ್ರಕೃತಿ ಶಾಂತ ರೀತಿಯಲ್ಲಿ ಸಂಸ್ಕೃತಿ ಶಿಕ್ಷಣವನ್ನು ಒದಗಿಸುತ್ತದೆ. ಪ್ರಕೃತಿಯ ಯೋಗ ಚಿತ್ತಕ್ಕೆ ಒದಗಿದಾಗ ಅದು  ಶಾಂತಿಯಲ್ಲಿ ಹಾಗೂ ಸಂಸ್ಕೃತಿಯಲ್ಲಿ ಪರಿಣಮಿಸುತ್ತದೆ. ಪ್ರಕೃತಿಯ ಪ್ರಭಾವಕ್ಕೆ ಪಡಿನುಡಿಯುವ ಚಿತ್ತವಿದ್ದರಂತೂ ಅದು ಉಂಟು ಮಾಡುವ ಪರಿಣಾಮವನ್ನು ಏನೆಂದು ಉಪಮಿಸಬೇಕು.?

ಶಿವಯೋಗ ಮಂದಿರದ ಪ್ರಶಾಂತ ವಾತಾವರಣದಲ್ಲಿ ಸುಳಿದು ಕಣ್ಣನ್ನು ತಣಿಸುವ ಇನ್ನೊಂದು ನೋಟವೆಂದರೆ ಅಲ್ಲಿಯ ಶಾಂತಿಯೊಡನೆ ಸಮರಸವಾಗಿ ಮೇಯುವ ಗೋವುಗಳು, ಶಿವಯೋಗಮಂದಿರಕ್ಕೆ ಹಾಲಿನ ಪೂರೈಕೆಯಾಗುವುದು ಆ ಗೋವುಗಳಿಂದ, ಶಿವಯೋಗಮಂದಿರ ಶಾಂತಿಯನ್ನು ಮೌನವನ್ನು ಮಲಪ್ರಭೆಯ ದಿಡುಗು ಹೆಚ್ಚಿಸಿ ಧ್ಯಾನಾಸಕ್ತವಾಗಬಲ್ಲ ಮನಕ್ಕೆ ಅದೊಂದು ಸಂಗೀತದ ಹಿನ್ನೆಲೆಯಾಗಿ ಪರಿಣಮಿಸುತ್ತದೆ.

ಇದೋ ಹಗಲಿನ ಮಾತಾಯಿತು. ಸಂಜೆಯಾಗಿ ಧರೆಯ ಮೇಲೆ ಇರುಳಿಸಿ ನೆರಳು ಕವಿಯುತ್ತ ಹೋದಂತೆ ಶಿವಯೋಗಮಂದಿರದ ಮೌನ ಇನ್ನು ಗಂಭೀರವಾಗುತ್ತದೆ. ಆಕಾಶದ ನೀಲದಲ್ಲಿ ಆ ಮೌನ ವ್ಯಾಪಿಸಿ ಚಿಕ್ಕೆ ಚಂದ್ರರನೆಲ್ಲ ಮೌನ ಧ್ಯಾನದಲ್ಲಿ ಲೀನಗೊಳಿಸುತ್ತದೆ. ಇಂಥ ವಾಗ್ವಿಲಾಸಮಯ ಮೌನದ ತಾಣದಲ್ಲಿ ಇರುಳನ್ನು ಕಳೆದು ನೋಡಬೇಕು ಚಿಕ್ಕೆ ಚಂದ್ರರೊಡನೆ ಶಿವಯೋಗದ ಹಾಗು ಸೌಂದರ್ಯ ಯೋಗದ ಕಲ್ಪನೆಯಾಗಬೇಕಾದರೆ, ಸರಿ, ಲಿಂಗೈಕ್ಯ ಹಾನಗಲ್ಲ ಶ್ರೀಗಳವರ ಸೌಂದರ್ಯದೃಷ್ಟಿಗೆ ಶಿವಯೋಗ ಭಾವಕ್ಕೆ, ಸಕಲರಿಗೆ ಲೇಸನೆ ಬಯಸುವ ಸಮಾಜೋದ್ದಾರ ಬುದ್ದಿಗೆ ಅವರಿಂದ ನಿರ್ಮಿತವಾದ ಶಿವಯೋಗಮಂದಿರದ ಸುಂದರ ಸನ್ನಿವೇಶ ಸಾಕ್ಷಿಯಾಗಿ ನಿಂತಿದೆ.

ಒಂದು ಬದಿಗೆ ಹೊಳೆ; ಇನ್ನೊಂದು ಬದಿಗೆ ಎತ್ತರವಲ್ಲದ ಗುಡ್ಡದ ಸಾಲು, ನಡುವೆ ಸೊಗಸಾದ ಪ್ರಾಂಗಣ; ಪ್ರಕೃತಿಯ ಲೀಲಾರಂಗವಾಗಿದೆ ಶಿವಯೋಗಮಂದಿರ, “ಬನ್ನಿ, ಮೈಯೊಡ್ಡಿ ದಣಿವನ್ನು ಪರಿಹಾರ ಮಾಡಿಕೊಳ್ಳಿ.?” ಎಂದು ಕರೆಯುತ್ತಿದೆ ಚಿಕ್ಕ ಚಿಕ್ಕ ಜಲಪಾತದೊಡನೆ ನಕ್ಕು ನಲಿಯುವ ಹೊಳೆ;

ನಿರಿ ನೂಂಕಿ ಮಲಾಪಹಾರಿ ಶತಹಾಸದ ಗತಿಯಲ್ಲಿ;

ಹಾಡುವಳು ವಿಲಾಸ ಬೀರಿ ಮಾಧುರ್ಯದ ಮಿತಿಯಲ್ಲಿ.

ಶ್ರೀ ಬುದ್ಧಯ್ಯನವರು, ಪುರಾಣಿಕ

ಪುರಾಣಗಳಲ್ಲಿಯ ಸದಾಶಿವನು ತನ್ನ ವಿನೋದಕ್ಕೆಂದು ಚರಾಚರ ಸೃಷ್ಟಿಯನ್ನು ನಿರ್ಮಿಸಿದರೆ ಹಾನಗಲ್ಲ ಸದಾಶಿವ ಯೋಗಿಯು ಲೋಕದ ಜನರು ಸುಖಿಗಳಾಗಲೆಂದು ಹೊಸಯುಗವನ್ನೇ ನಿರ್ಮಿಸಿದನು. ಆ ಸದಾಶಿವನದು ಸ್ವಾರ್ಥ ಸೃಷ್ಟಿ, ಈ ಸದಾಶಿವಯತಿಯದು ಪರಾರ್ಥ ಸೃಷ್ಟಿ, ಈ ಯತಿವರನ ಜೀವನವೇ ಒಂದು ಪರಾರ್ಥ ಲೀಲೆಯಾಗಿ ಪರಿಣಮಿಸಿತು.

ಸದಾಶಿವಯತಿಯು ಅನಿಮಿತ್ತ ಬಂಧು ಶಂಭುಲಿಂಗನ ಸನ್ನಿಧಿಯಲ್ಲಿ ತಪವ ಮಾಡಿ ಲೋಕದ ಕಷ್ಟವನ್ನು ನಿರೀಕ್ಷಿಸಿದನು. ಆ ನಿರೀಕ್ಷಣೆ ಕಾರಣಿಕ ಇಚ್ಛೆಗೆ ಪ್ರೇರಣೆಯನ್ನು ನೀಡಿತು. ಆ ಇಚ್ಚೆಯೆ ಹೊಸ ಸೃಷ್ಟಿಗೆ ಚೈತನ್ಯ ಕೊಟ್ಟಿತು. ಹಾನಗಲ್ಲ ಶ್ರೀ ಸದಾಶಿವಯೋಗಿಗಳ ಪವಿತ್ರ ಇಚ್ಛಾಶಕ್ತಿಯ ಶಿವಯೋಗಮಂದಿರ ಮಹಾಸಭೆಗಳ ರೂಪದಲ್ಲಿ ಮೈದಾಳಿ ಬಂದಿತು. ದಿವ್ಯ ದೃಷ್ಟಿಯಿಂದ ದಿವ್ಯ ಸೃಷ್ಟಿಯಾಯಿತು.

ಮಾನವ ಜೀವನ ದೃಷ್ಟಿ ಲೌಕಿಕ ಪಾರಮಾರ್ಥವೆಂದು ಎರಡು ವಿಧ. ಅವೆರಡನ್ನು ಶ್ರೀಗಳವರು ಎರಡು ಸಂಸ್ಥೆಗಳಿಂದ ಸಾಧಿಸಿದರು. ಶ್ರೀಗಳ ಅಂತಃಶಕ್ತಿಯೆ ಐದು ದೃಷ್ಟಿಗಳಲ್ಲಿ ಒಡಮೂಡಿತು. ಶಿಕ್ಷಣ ,ಮುದ್ರಣ, ರಕ್ಷಣ, ಉದ್ಯಮ, ವಾಣಿಜ್ಯ, ಇವು ಶ್ರೀಗಳವರ ಐದು ದೃಷ್ಟಿಗಳು. ಅವುಗಳಿಂದ ಐದು ಸೃಷ್ಟಿಗಳಾದವು.

೧, ಶಿಕ್ಷಣ ಸೃಷ್ಟಿ

ಲೌಕಿಕ ಪಾರಮಾರ್ಥವೆಂದು ಶ್ರೀಗಳವರ ಶಿಕ್ಷಣ ಎರಡು ತೆರನಾಗಿತ್ತು. ಶಿವಯೋಗಮಂದಿರದಲ್ಲಿ ಅವೆರಡೂ ಶಿಕ್ಷಣಗಳ ಸಮನ್ವಯ ಸುಂದರವಾಗಿತ್ತು, ಮಾನವನ ವ್ಯವಹಾರವೆಲ್ಲ ಭಾಷೆಗಳ ಪರಿಜ್ಞಾನದಿಂದ ನಡೆಯಬೇಕು. ಸಮಾಜದ ಮಕ್ಕಳು ಮೊದಲು ಮಾತೃಭಾಷೆಯಾದ ಕನ್ನಡ ಕಲಿಯಲೆಂದು ಅನೇಕ ಪ್ರಾಥಮಿಕ ಶಾಲೆಗಳನ್ನು ಶ್ರೀಗಳವರು ಸ್ಥಾಪಿಸಿದರು,

ಧರ್ಮ ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷೆಯ ಶಿಕ್ಷಣ ಅವಶ್ಯಕ, ಅದನ್ನು ಕಲಿಸುವ ಪಾಠಶಾಲೆಗಳನ್ನು ನಾಡಿನಲ್ಲಿ ಮೊದಲು ಸ್ಥಾಪಿಸಿದವರು ಶ್ರೀಗಳವರೆ; ಕಾಶಿಯಲ್ಲಿ ಪ್ರೌಢ ಶಿಕ್ಷಣ ಪಡೆಯಲು ಅರ್ಥಿಕ ಸಹಾಯ ನೀಡಿ ಪಂಡಿತ ಮತ್ತು ಶಾಸ್ತ್ರಿ ವರ್ಗವನ್ನು ಮುಂದೆ ತಂದರು, ಸಮಾಜದಲ್ಲಿ ಸಂಸ್ಕೃತ ಪಂಡಿತ ವರ್ಗ ಇಲ್ಲದಿದ್ದರೆ ಪರಳಿಯ ಪ್ರಕರಣದಲ್ಲಿ ಸಮಾಜಕ್ಕೆ ವಿಜಯ ಸಿಕ್ಕುವದು ಸಾಧ್ಯವಿರಲಿಲ್ಲ, ಸಂಸ್ಕೃತ ಶಿಕ್ಷಣ ಪ್ರಸಾರಕ್ಕೆ ಶ್ರೀಗಳವರು ಕೊಟ್ಟ ಪ್ರೋತ್ಸಾಹ   ಪರಿಮಿತವಾದುದು, ಶ್ರೀಗಳವರು ‘ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ವಿಚಾರ ಮಾಡಿದರು .ಶಿವಯೋಗಮಂದಿರದಲ್ಲಿ ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರಗಳ ಕ್ರಮವಾದ ಶಿಕ್ಷಣ ನಿರಂತರವಾಗಿ ಸಾಧಕರಿಗೆ ಸಿಗುವ ವ್ಯವಸ್ಥೆಯನ್ನು ಮಾಡಿದರು. 

ಧರ್ಮಪ್ರಸಾರವನ್ನು ಜನಮನರಂಜನೆಯಾಗುವಂತೆ ನಡೆಸಬೇಕೆಂದು ಅವರು ಗಾಯನ ವಿದ್ಯೆಗೆ ಉತ್ತೇಜನಕೊಟ್ಟರು. ಅವರ ಕೃಪೆಯಿಂದಲೇ ಇಂದು ನಾಡಿನಲ್ಲಿ ಸಂಗೀತ ಕಲೆ ಉಳಿದಿರುವದು, ಪಂ. ಪಂಚಾಕ್ಷರ ಗವಾಯಿಗಳವರ ಶಿಷ್ಯಕೋಟಿ ಹೆಚ್ಚಿ ಜನತೆಯಲ್ಲಿ ಸಂಗೀತ ಕಲೆಯ ಕಡೆಗೆ ಅಭಿರುಚಿ ಹುಟ್ಟುವಂತಾಯಿತು,

ಶ್ರೀಗಳವರು ಆಂಗ್ಲಭಾಷೆಯನ್ನು ಅಲಕ್ಷಿಸಲಿಲ್ಲ. ಅವರದು ಸಂಕುಚಿತ ದೃಷ್ಟಿಯಾಗಿರಲಿಲ್ಲ. ಧರ್ಮ ನಿಷ್ಠರಾದ ಆಂಗ್ಲ ವಿದ್ಯಾವಂತರು ಪರದೇಶಗಳಿಗೆ ಹೋಗಿ ವೀರಶೈವ ಧರ್ಮದರ್ಶನಗಳ ಪ್ರಚಾರ ಮಾಡಬೇಕೆಂಬ ಅವರ ಉದ್ದೇಶ ಸಣ್ಣದಾಗಿರಲಿಲ್ಲ. ಮಂದಿರದಲ್ಲಿ ಯೋಗಸಾಧಕರಿಗೆ ಕನ್ನಡ ಮರಾಠಿ ಭಾಷೆಗಳ ಶಿಕ್ಷಣದೊಂದಿಗೆ ಇಂಗ್ಲೀಷ ಶಿಕ್ಷಣಕ್ಕೂ ಉತ್ತೇಜನ ಕೊಟ್ಟಿದ್ದರು. ಶಿವಯೋಗಮಂದಿರವನ್ನು ಒಂದು ವಿಶಾಲ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸುವಷ್ಟು ಅನುಕೂಲತೆಗಳನ್ನು ಶ್ರೀಗಳವರು ದೂರದೃಷ್ಟಿಯಿಂದ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಒಂದೊಂದೇ ವಿದ್ಯಾಲಯ ಸ್ಥಾಪಿತವಾಗಿ ಪ್ರಗತಿ ಹೊಂದುತ್ತ ಹೋದರೆ ಒಂದಿಲ್ಲ ಒಂದು ದಿನ ಅದು ಆದರ್ಶ ವಿಶ್ವವಿದ್ಯಾನಿಲಯ’ವಾಗುವಲ್ಲಿ ಸಂದೇಹವಿಲ್ಲ.

‘ತ್ಯಾಗರಾಜ’ ಶಿರಸಂಗಿಯ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದಲೇ ತಮ್ಮ ಆಸ್ತಿಯನ್ನೆಲ್ಲ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸದ ಅನುಕೂಲತೆಗಾಗಿ ಧಾರೆಯೆರೆದರು. ಅವರ ಮೃತ್ಯುಪತ್ರದ ಬಗ್ಗೆ ಸುಪ್ರೀಮ್ ಕೋರ್ಟಿನಲ್ಲಿ ನ್ಯಾಯ ನಡೆದಾಗ ಶ್ರೀಗಳವರೇ ಅದಕಾಗಿ ಆರ್ಥಿಕ ಸಹಾಯವನ್ನು ದಯಪಾಲಿಸಿದರಲ್ಲದೆ ಅಭಿಮಾನಿ ಭಕ್ತರಿಂದ ಕೊಡಿಸಿದರು ಮತ್ತು ಶಿವಯೋಗಮಂದಿರ ಸಂಸ್ಥೆಯಿಂದ ಎರಡು ಸಾವಿರ ರೂಪಾಯಿಗಳನ್ನು ಕೊಡಮಾಡಿದರು. ಕೊನೆಗೆ, ಶ್ರೀಗಳವರ ಪರಿಶ್ರಮ ಮತ್ತು ಸದಿಚ್ಛೆಯ ಫಲವಾಗಿ ಸಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ ಫಂಡಿ’ಗೆ ಅನುಕೂಲವಾಗುವಂತೆ ಆಯಿತು. ಈ ಧರ್ಮ ಕಾರ್ಯದ ಗೆಲುವಿಗೆ ಶ್ರೀಗಳವರ ಶ್ರಮ ಸಾಹಸ ಮತ್ತು ನಿರ್ಮಲವಾದ ಹೃದಯವೂ ಕಾರಣವಾಗಿವೆ. ಈಗ ‘ಸಿರಸಂಗಿ ಫಂಡಿ’ ನಿಂದ ಪ್ರತಿವರ್ಷ ನೂರಾರು ಜನ ಪದವೀಧರರು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವರು. ಈ ರೀತಿಯಾಗಿ ಶ್ರೀಗಳವರು ಆಂಗ್ಲ ವಿದ್ಯೆಯ ಪ್ರಗತಿಗೆ ಪ್ರೋತ್ಸಾಹವನ್ನೇ ನೀಡುತ್ತ ಬಂದರು ; ದಯಮಾಡಿಸಿದಲೆಲ್ಲ ಸಣ್ಣ ಪುಟ್ಟ ಇಂಗ್ಲಿಷ ಶಾಲೆ (ಎ.ವ್ಹಿ ಸ್ಕೂಲು) ಗಳಿಗೆ ಧನಸಹಾಯವನ್ನು ಒದಗಿಸುತ್ತಲೆ ಇದ್ದರು. ಶ್ರೀಗಳವರು ಅವಿಶ್ರಾಂತವಾಗಿ ಶ್ರಮಿಸಿ ಸಮಾಜದಲ್ಲಿಯ ಶಿಕ್ಷಣ ಸೃಷ್ಟಿಯ ಪೂರ್ಣ ವಿಕಾಸಕ್ಕೆ ಕಾರಣ ಕರ್ತರಾದರು. ಈ ಶಿಕ್ಷಣ ಕ್ಷೇತ್ರದಲ್ಲಿ ಶ್ರೀಗಳವರು ಮಾತೆಯರನ್ನು ಮರೆತಿರಲಿಲ್ಲ,

೨. ಮುದ್ರಣ ಸೃಷ್ಟಿ

ವೀರಶೈವ ಸಾಹಿತ್ಯ ಧರ್ಮ ಸಂಸ್ಕೃತಿಗಳ ಪ್ರಸಾರವಾಗಬೇಕೆಂದು ಶ್ರೀಗಳು ಹಗಲು ರಾತ್ರಿ ಚಿಂತಿಸುತ್ತಿದ್ದರು. ಪ್ರಸಾರ ಕಾರ್ಯಕ್ಕೆ ಪತ್ರಿಕೆಗಳು ಬೇಕು. ಅಲ್ಪಬೆಲೆಯಲ್ಲಿ ಸಣ್ಣ ಸಣ್ಣ ಅಂದವಾದ ಪುಸ್ತಕಗಳು ಅಚ್ಚಾಗಿ ಜನರ ಕೈಸೇರಬೇಕು. ಪ್ರಕಟವಾಗದಿರುವ ವೀರಶೈವ ವಾಗ್ಮಯವನ್ನು ಪ್ರಕಟಿಸಿ ಪ್ರಚುರಪಡಿಸಬೇಕು. ಇವೆಲ್ಲ ‘ಬೇಕು’ಗಳ ಪರಿಪೂರ್ಣತೆಗಾಗಿ ಶ್ರೀಗಳವರು ಮುದ್ರಣ ಮಂದಿರಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಮನಸ್ಸು ಹಾಕಿದರು. ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದಲ್ಲಿದ್ದ ಮುದ್ರಣ ಯಂತ್ರವು ಧಾರವಾಡದ ಶ್ರೀ ಶಿವಲಿಂಗ ಶಾಸ್ತ್ರಿಗಳವರಿಗೆ ಶ್ರೀಗಳವರಿಂದಲೇ ದೊರೆಯಿತು. ಶ್ರೀಗಳವರ ಕೃಪಾಬಲದಿಂದ ಶಿವಲಿಂಗಶಾಸ್ತ್ರಿಗಳು ‘ಧರ್ಮತರಂಗಿಣಿ’ ಎಂಬ ಧಾರ್ಮಿಕ ಮಾಸ ಪತ್ರಿಕೆಯನ್ನು ಸಂಪಾದಿಸಿ ಸೇವೆ  ಸಲ್ಲಿಸಿದರು. ಗದುಗಿನಲ್ಲಿ ‘ಶ್ರೀಸಿದ್ಧಲಿಂಗ ವಿಜಯ ಮುದ್ರಣಾಲಯ’ವು ಶ್ರೀಗಳವರ ಸಾಹಸದಿಂದ ನೆಲೆಗೊಂಡಿತು, ಈ ಮುದ್ರಣಯಂತ್ರಕ್ಕೆ ಶಿವಯೋಗಮಂದಿರದ ಎರಡು ಸಾವಿರ ರೂಪಾಯಿಗಳು ವೆಚ್ಛವಾಗಿರುವವು. ಈ ಮುದ್ರಣಾಲಯವು ಈಗ ಧಾರವಾಡದ ಲಿಂಗಾಯತ ಹೈಸ್ಕೂಲಿನಲ್ಲಿದ್ದು ಸಮಾಜ ಸೇವೆಯ ಕಾರ್ಯಕ್ಕೆ ಅನುವಾಗಿರುವದು. ಶ್ರೀಗಳವರ  ಧ್ಯೇಯಪೂರ್ತಿಗಾಗಿ ಮಂದಿರದಲ್ಲಿರುವ ಮುದ್ರಣಾಲಯವು ಸುವ್ಯವಸ್ಥಿತವಾಗಿ ನಡೆದು, ಅದರ ಮುಖಾಂತರ ಪತ್ರಿಕೆಗಳು, ಗ್ರಂಥಗಳು ಪ್ರಕಟವಾಗಿ, ಶ್ರೀಗಳವರ ಈ ಮುದ್ರಣ ಸೃಷ್ಟಿಯ ಕಾರ್ಯವನ್ನು ಮುಂದೊಯ್ಯಬೇಕಾಗಿದೆ.

೩. ರಕ್ಷಣ ಸೃಷ್ಟಿ

ಸಾಹಿತ್ಯ ಸಂಸ್ಕೃತಿಗಳ ಜೀವಾಳವಾದ ಪ್ರಾಚೀನ ಓಲೆಗರಿ ಕೋರಿಕಾಗದದ ಹೊತ್ತಿಗೆಗಳು ಸಮಾಜದ ಮನೆ ಮಠಗಳಲ್ಲಿ ಮೂಲೆಗುಂಪಾಗಿದ್ದವು, ಅವೆಚಿ, ಹುಳುಗಳ ಆಹಾರವಾಗಿ ನಿರ್ನಾಮವಾಗಿದ್ದವು. ಶ್ರೀಗಳವರು ದಯಮಾಡಿಸಿದಲ್ಲೆಲ್ಲ ಈ ಸಂಪತ್ತನ್ನು ಹುಡುಕಿ ತೆಗೆದು ಅದನ್ನು ಮಂದಿರದಲ್ಲಿ ಸಂಗ್ರಹಿಸಿಟ್ಟರು; ಶಿವಯೋಗ ಮಂದಿರದ ಗ್ರಂಥಾಲಯದಲ್ಲಿರುವ ಈ ಗ್ರಂಥರಾಶಿಯು ಅಮೂಲ್ಯವಾಗಿದೆ. ಅದನ್ನು ಒಂದು ಮಾದರಿಯ ಸಂಶೋಧನ ಕೇಂದ್ರವ ನ್ನಾಗಿ ಬೆಳೆಯಿಸಬಹುದಾಗಿದೆ. ಅಲ್ಲಿ ಪಂಡಿತರನ್ನು ಆಂಗ್ಲವಿದ್ವಾಂಸರನ್ನೂ ನೇಮಿಸಿ ಶ್ರೀಗಳವರ ಈ ಕಾಯಕವನ್ನು ಪೂರ್ಣಗೊಳಿಸುವ ಭಾರ ಮಂದಿರದ ಸ್ವಾಮಿಗಳನ್ನ ಕೂಡಿದೆ.

ಶ್ರೀಗಳವರು ಭೂರಕ್ಷಣ ಮತ್ತು ಗೋಮಾತೆಯ ಚಾಲನೆಯಲ್ಲಿಯೂ ಲಕ್ಷ ಹಾಕಿದರು, ಒಕ್ಕಲುತನ ಮತ್ತು ದನಗಳ ಪ್ರದರ್ಶನಗಳನ್ನು ಪ್ರತಿ ವರ್ಷ ಶಿವಯೋಗಮಂದಿರದ ಜಾತ್ರೆಯಲ್ಲಿ ನಡೆಸುವ ಪ್ರೇರಣೆಯನ್ನಿತ್ತಿದ್ದರು; ನಮ್ಮ ಭಾರತದ ಯೋಜನೆಗಳು ಕೈಗೂಡಬೇಕಾದರೆ ಭೂಮಿ ಮತ್ತು ಪಶುಗಳ ಸರಿಯಾದ ರಕ್ಷಣೆಯ ಕಾರ್ಯ ನಡೆಯಬೇಕೆಂಬುದನ್ನು ತಮ್ಮ ದಿವ್ಯ ದೃಷ್ಟಿಯಿಂದ ಕಂಡು ಅದನ್ನು ಪ್ರಯೋಗಕ್ಕೆ ತಂದವರಲ್ಲಿ ಅವರೆ ಮೊದಲಿಗರು. ಬರಿಯ ಸ್ನಾನ ಪೂಜೆಗಳಲ್ಲಿಯ ಗುರುಗಳು ಹೊತ್ತು ಕಳೆಯದೆ ಸಮಾಜದ ಕಾರ್ಯಗಳಲ್ಲಿಯೂ ಸಹಕಾರ ನೀಡಿ ಸಮಾಜದ ಪ್ರಗತಿಗೆ ಮುಂದಾಗಬೇಕೆಂಬ ಆದರ್ಶವನ್ನು ಹಾಕಿಕೊಟ್ಟ ಶ್ರೀಗಳವರ ದೃಷ್ಟಿ ಎಷ್ಟು ವಿಶಾಲವಾಗಿದ್ದಿತು !

೪. ಉದ್ಯಮ ಸೃಷ್ಟಿ

ಶ್ರೀಗಳವರು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಯಾಂತ್ರಿಕ ಉದ್ಯೋಗಗಳ ಸ್ಥಾಪನೆಗೆ ಹೆಚ್ಚು ಶ್ರಮಪಟ್ಟವರು. ಶಿವಯೋಗಮಂದಿರದ ಆರ್ಥಿಕ ಭದ್ರತೆಯನ್ನು ಲಕ್ಷಿಸಿ ಶ್ರೀಗಳವರು ಬಾಗಲಕೋಟೆಯಲ್ಲಿ ‘ಶಿವಾನಂದ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ ಫ್ಯಾಕ್ಟರಿ’ಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು. ಅದು  ಶಿವಯೋಗಮಂದಿರ ಸಂಸ್ಥೆಯ ಬೆನ್ನೆಲುವಿನಂತಿದೆ. ಅದರಿಂದ ಪ್ರತಿ ವರ್ಷ’ ಇಪ್ಪತ್ತು ಮೂವತ್ತು ಸಾವಿರ ರೂಪಾಯಿಗಳ ಉತ್ಪನ್ನ ಮಂದಿರಕ್ಕೆ ತನ್ಮೂಲಕವಾಗಿ ಸಮಾಜಕ್ಕೆ ಸಲ್ಲುತ್ತಿದೆ, ಬಾಗಲಕೋಟೆಗೆ ಬಂದ ಸ್ವಾಮಿಗಳಿಗೆ ಶಿವಾನಂದ ಜಿನ್ನು ಒಂದು ಅನುಕೂಲವಾದ ಪ್ರವಾಸಿ ಮಂದಿರ’ವಾಗಿದೆ. ಒಂದು ಚಿತ್ರ ಮಂದಿರವೂ ಇದರ ಅಂಗವಾಗಿ ನಡೆದಿರುವದು, ಈ ಪ್ರೆಸ್ಸಿನಿಂದ ೨೫೦ ಬಡ ಕುಟುಂಬಗಳ ಉಪಜೀವನವಾಗುತ್ತಿರುವದು. ವಿರಕ್ತಸ್ವಾಮಿಗಳೋಬ್ಬರ ಉದ್ಯಮ ಸೃಷ್ಟಿಯ ಈ ಮಹದ್ಯೋಜನೆ ಎಂತಹ ಚಾಣಾಕ್ಷ ಸಿರಿವಂತನ ಉದ್ಯೋಗ ಪ್ರಗತಿಯ ಕಾರ್ಯದಕ್ಷತೆಯನ್ನೂ ಮೀರಿ ನಿಲ್ಲುತ್ತದೆ. ಶ್ರೀಗಳವರಲ್ಲಿಯ ಬುದ್ಧಿವೈಭವ, ದೂರದೃಷ್ಟಿ, ಅಪರಿಮಿತವಾಗಿದ್ದವು, ಅಸಾಧಾರಣ ವಾಗಿದ್ದವು. ಅವರ ದೂರದೃಷ್ಟಿಯಿಂದಾಗಿ ಅಂದಿನ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯ ನಿರ್ಮಿತವಾಗಿ ಅದು ಉಳಿದ ಉದ್ಯಮ ಪ್ರೇಮಿಗಳಿಗೂ ಕೈದೋರಿಕೆಯಾಯಿತು.

೫. ವಾಣಿಜ್ಯ ಸೃಷ್ಟಿ

ವ್ಯಾಪಾರದಲ್ಲಿಯೇ ಲಕ್ಷ್ಮಿ ಯ ವಾಸವೆಂಬುದು ಎಲ್ಲರ ಅನುಭವದ ಮಾತಾಗಿದೆ. ಶ್ರೀಗಳವರ ಪವಿತ್ರ ದೃಷ್ಟಿಯಲ್ಲಿ ವ್ಯಾಪಾರವು ದ್ರೋಹ ಚಿಂತನವಾಗಿರಲಿಲ್ಲ. ಬಾಗಲಕೋಟೆಯಲ್ಲಿ ಶಿವಯೋಗಮಂದಿರ ಸಂಸ್ಥೆಯ ವತಿಯಿಂದ ಶಿವಾನಂದ ಜಿನ್ನಿಂಗ್ ಫ್ಯಾಕ್ಟರಿಗೆ ಅಂಗವಾಗಿ ಒಂದು ಕಬ್ಬಿಣದ ಅಂಗಡಿಯನ್ನಿಕ್ಕಿಸಿದ್ದರು. ಅದರಿಂದ ಲಾಭ ಪಡೆಯಲೆಂದಲ್ಲ: ವ್ಯಾಪಾರದಿಂದ ಸ್ವಾರ್ಥ  ಪರಾರ್ಥವೆರಡನ್ನು ಪ್ರಾಮಾಣಿಕವಾಗಿ ಸಾಧಿಸಬಹುದೆಂಬುದನ್ನು ಸಮಾಜದ ವ್ಯಾಪಾರಿಗಳಿಗೆ ತೋರಲೆಂದು. ವ್ಯಾಪಾರವೂ ಒಂದು ಕಾಯಕವೆ. ಆದರೆ ಅದು ಸತ್ಯ ಶುದ್ಧವಾಗಿರಬೇಕು’ ಎಂದು ಶ್ರೀಗಳವರು ಭಕ್ತರಿಗೆ ಅಪ್ಪಣೆ ಕೊಡಿಸುತ್ತಿದ್ದರು.

ನಿರುಪಮವಾದ ವಿರಕ್ತಿ ಅಸದೃಶವಾದ ಸ್ವಾರ್ಥತ್ಯಾಗ ಬುದ್ದಿ, ಅದ್ವಿತೀಯವಾದ ಭೂತದಯೆ, ಅಚಲವಾದ ಧೈರ್ಯ, ಅಖಂಡವಾದ ಸಾಹಸ, ವಿಲಕ್ಷಣವಾದ ದೂರದರ್ಶಿತ್ವ, ಅತಿಶಯವಾದ ಶ್ರಮಸಹಿಷ್ಣುತೆ, ಕಠಿಣತರವಾದ ಮನೋನಿಗ್ರಹ, ಉಪಮಾತೀತವಾದ ಶಾಂತಿ ದಾಂತಿ ಮೊದಲಾದ ಸದ್ಗುಣಗಳು ಶ್ರೀಗಳವರಲ್ಲಿ ಮೂರ್ತಿಮಂತಾಗಿದ್ದವು, ಅದರಿಂದ ಅವರು ಹೊಸ ದೃಷ್ಟಿಯಿಂದ ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾದರು. ಆಧುನಿಕ ನವನಾಗರಿಕತೆಯ ವೀರಶೈವರನೇಕರಿಗೆ ಶ್ರೀಗಳವರ ಪ್ರಭಾವವು ಗೋಚರಿಸದೆ ಹೋದುದು ದುರ್ದೈವದ ಮಾತು. ಕೋಲ್ಮಿಂಚು ಮಿಂಚಿ ಅನಂತದಲ್ಲಿ ಅಡಗಿ ಹೋಯಿತು ! ಕಳೆದುಕೊಂಡು ಹುಡುಕಿದರೆ ಆಗುವದೇನು

ಸಮಾಜದ ಅಜ್ಞಾನವನ್ನು ಹೋಗಲಾಡಿಸುವದಕ್ಕಾಗಿ ಹಗಲಿರುಳು ನಿರುಪಾಧಿಯಿಂದ ಪ್ರಯತ್ನಿಸಿದ ನಿಜವಾದ ಸದ್ಗುರುವು; ಹೊನ್ನು ಹೆಣ್ಣು ಮಣ್ಣುಗಳೆಂಬ ತ್ರಿವಿಧ ಮೋಹಜಾಲಗಳನ್ನು ಮೆಟ್ಟಿ ಮೆರೆದ ವಿಚಿತ್ರ ವೈರಾಗ್ಯಮೂರ್ತಿಯು .ಇಂದ್ರಿಯ ವ್ಯಾಪಾರಗಳನ್ನು ವಶದಲ್ಲಿಟ್ಟುಕೊಂಡು ಬಾಹ್ಯಾಡಂಬರಗಳನ್ನೆಲ್ಲ ಬದಿಗೊತ್ತಿದ ಸತ್ಯಸ್ವಾಮಿಯು; ಕೇವಲ ಶಿವಾರ್ಪಣ ಸದ್ಭುದ್ಧಿಯಿಂದ ಸಮಾಜ ಸೇವಾಕಾರ್ಯವನ್ನು ಕೊನೆಯವರೆಗೂ ಸಾಗಿಸಿದ ನಿಸ್ಸಿಮ ಸದಾಶಿವ’ ಶಿವಯೋಗಿಯು; ಇಂಥ ಶ್ರೀಗಳವರ ದಿವ್ಯ ಪಾದಗಳಿಗೆ ನನ್ನ ಅನಂತ ಪ್ರಣಾಮಗಳನ್ನು ತದೇಕ ಧ್ಯಾನದಿಂದ ಅರ್ಪಿಸುವೆನು.

ಲೇಖಕರು : ಪೂಜ್ಯ ಸದಾಶಿವ ದೇವರು ವಳಬಳ್ಳಾರಿ

ಭಾರತಾಂಬೆಯು ತನ್ನ ಮಡಿಲಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಇಟ್ಟು ತೂಗುತ್ತಿರುವಳು‌. ಈ ಮೂರುಗಳನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಭಾರತವನ್ನು ಮೆರೆಸುತ್ತಿದ್ದೇವೆ. ಭಾರತದ ಕಲೆ ವಿಶ್ವದಲ್ಲಿಯೇ ತನ್ನದೇ ಒಂದು ಅಪ್ರತಿಮ ಸ್ಥಾನವನ್ನು ಪಡೆದಿದೆ. ಬೇಲೂರು, ಹಳೆಬೀಡು, ಎಲ್ಲೋರಾ, ಅಜಂತಾ, ಪಟ್ಟದಕಲ್ಲು, ಬಾದಾಮಿ, ಐಹೊಳೆ ಹೀಗೆ ದೇಶದ ಮೂಲೆ ಮೂಲೆಯಲ್ಲಿ ಹಬ್ಬಿದೆ, ಆ ಕಲೆ ಶಿವಯೋಗಮಂದಿರದಲ್ಲಿಯೂ ಹರಡಿದೆ. ಇಲ್ಲಿರುವ ಮಹಾ ಗುರುಗಳಾದ ಶ್ರೀ ಕುಮಾರೇಶ್ವರ ಕರ್ತೃ ಗದ್ದುಗೆ ಹಾಗೂ ಕಾಷ್ಟದಿಂದ ನಿರ್ಮಿಸಿದ ರಥ ಇದು ವಿಶ್ವದಲ್ಲಿಯೇ ಅತೀ ಎತ್ತರದ ಕಲಾಕೃತಿಯ ರಥವೆನಿಸಿದೆ.

ದ್ರೋಣಾಚಾರ್ಯರ ಶಿಷ್ಯೋತ್ತಮನಾದ ಏಕಲವ್ಯನಿಂದ ಹೆಬ್ಬೆರಳು ಪಡೆದುಕೊಂಡರೆ. ವೀರಶೈವ ಧರ್ಮಕ್ಕೆ ಅಪಾರವಾದ ಸೇವೆ ಸಲ್ಲಿಸಿ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರದಂಥ ಮಹಾಸಂಸ್ಥೆಯನ್ನು ಸ್ಥಾಪಿಸಿ ವೀರಶೈವದಲ್ಲಿಯೇ ವೀರಶೈವ ಜ್ಞಾನದ ಬೃಹತ್ ಬೆಳಕನ್ನು ಸದಾಕಾಲ ನಡೆಯುವಂತೆ ಮಾಡಿದ ವೀರಶೈವಧರ್ಮ ಎಂದೆಂದೂ ಅದಃಪತನ ವಾಗದಂತೆ ಮಂದಿರದಿಂದ ಮಹಾ ಪೂಜ್ಯರನ್ನು ತಯಾರುಮಾಡುವ ಕಮ್ಮಟ ಶಾಲೆಯನ್ನಾಗಿ ಪರಿವರ್ತಿಸಿದವರು  ಪರಮಪೂಜ್ಯ ದಿವ್ಯಜ್ಯೋತಿ ಲಿಂ. ಹಾನಗಲ್ಲ ಗುರು ಕುಮಾರ ಶಿವಯೋಗಿಗಳು.

‘ಕಲ್ಲರಳಿ ಹೂವಾಗಿ ಕುಮಾರೇಶನ ಗೋಪುರಕ್ಕೆ ಬೆಳಕಾಗಿ’ ಬೆಳಗುವಂತೆ ಅವರ ಶಿಷ್ಯೋತ್ತಮ ರಲ್ಲಿ ಅಗ್ರಗಣ್ಯ ಅವತಾರಿ, ಸದಾಕಾಲ ಸಮಾಜ ಸೇವೆ, ಕ್ರಾಂತಿಯ ಹರಿಕಾರ, ಶಿಕ್ಷಣ ಪ್ರೇಮಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಶಿವಯೋಗ ಮಂದಿರದ ಪ್ರಭೆಯನ್ನು ಭೂಮಿಯ ನಾನಾ ಮೂಲೆಯಲ್ಲಿ ಪಸರಿಸಿ ಪ್ರವಾಸಿ ತಾಣಗಳ ಮಾದರಿಯಲ್ಲಿ ಶಿವಯೋಗ ಮಂದಿರವನ್ನು ಪರಿವರ್ತಿಸಿದರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ-ಬಳ್ಳಾರಿ-ಹಾಲಕೆರೆ.

ಶ್ರೀಗಳು ಏನೇ ಮಾಡಿದರು ಅದ್ಭುತ. ಅಮೂಲ್ಯ ಕಾರ್ಯಗಳನ್ನೇ ಕೈಗೊಳ್ಳುವರು ಅಂಥ ಅದ್ಭುತಗಳಲ್ಲಿ ಜಗತ್ತಿಗೆ ಮಾದರಿಯಾದ ಎತ್ತರವಾದ ಮಹಾರಥವನ್ನು ತಮ್ಮ ಮಠದ ಸ್ವಂತ ಖರ್ಚಿನಿಂದ ಶಿವಯೋಗ ಮಂದಿರಕ್ಕೆ ಅರ್ಪಣೆ ಮಾಡಿರುವ ಮಹಾ ಸಾಧಕರಿವರು, ಅಲ್ಲದೆ ಸಾಹಿತ್ಯ ಅಭಿಮಾನಿಗಳಾದ ಇವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಪೂಜ್ಯರು ಆಧುನಿಕ ವಿಜ್ಞಾನಕ್ಕೆ ಸವಾಲಾದವರು. ಇವರು ಅರ್ಪಿಸಿದ ಬೃಹತ್ ರಥದ ವಿವರಣೆಯನ್ನು ಈ ಕೆಳಗೆ ನೀಡಿದ್ದೇನೆ.

ರಥದ ಶೈಲಿ = ಕರ್ನಾಟಕ ಚಾಲುಕ್ಯ,ಕಲ್ಯಾಣ ಚಾಲುಕ್ಯ,ಹೊಯ್ಸಳ ಶೈಲಿ.

ರಥದ ತಾಳಿಕೆ = ಸುಮಾರು 500 ವರ್ಷಗಳ ಕಾಲ ತಾಳಿಕೆ ಬರಬಹುದು.

ರಥಕ್ಕೆ ಬಳಸಿದ ಕಟ್ಟಿಗೆಗಳು = ಭೋಗಿ, ಸಾಗವಾನಿ,ಮತ್ತಿ, ರಂಜಾ.

ರಥ ನಿರ್ಮಾಣದ ಅವಧಿ = ಸತತ ಐದು ತಿಂಗಳಲ್ಲಿ ಪೂರ್ಣಗೊಂಡಿತು.

  ಶ್ರೀ ಕುಮಾರೇಶ್ವರ  ರಥದ ಎತ್ತರ

  1. ಶ್ರೀ  ಕಳಸ = 5 ಅಡಿ.
  2. ಗೋಲಾಕಾರದ ಶಿಖರ 1 = 4ಅಡಿ.
  3. ಗೋಲಾಕಾರದ ಶಿಖರ 2 = 9 ಅಡಿ.
  4. ಶರಣರ ಮಂಟಪ = 14 ಅಡಿ.
  5. ದೇವರ ಮಂಟಪ = 9 ಅಡಿ.
  6. ಗಡ್ಡೆ = 23 ಅಡಿ.
  7. ಗಾಲಿ = 9* ಅಡಿ.

           ರಥದ ಒಟ್ಟು ಎತ್ತರ = 73 ಅಡಿಗಳು

[* ಗಾಲಿಯ ಅರ್ಧ ಭಾಗಕ್ಕೆ ರಥ ಬರುವುದರಿಂದ ಗಾಲಿಯನ್ನು 4 – 1/2 ಅಡಿ ಗಣನೆಮಾಡಲಾಗಿದೆ.]

       ಭಾವಚಿತ್ರ – ರಥದ ಸುತ್ತಲೂ 12 ಶಿವಶರಣರ ಭಾವಚಿತ್ರ ರಚಿಸಲಾಗಿದೆ.

ದೇವರ ಮಂಟಪದ ಸುತ್ತಲೂ =

1) ಶ್ರೀ ಬಸವೇಶ್ವರರು. 2) ರೇಣುಕಾಚಾರ್ಯರು.

3) ಅಲ್ಲಮಪ್ರಭುದೇವರು. 4) ಸಿದ್ಧಲಿಂಗೇಶ್ವರರು.

ಮೊದಲನೇ ಶರಣ ಮಂಟಪದಲ್ಲಿ=

1) ಸಿದ್ದರಾಮೇಶ್ವರರು. 2) ಅಕ್ಕಮಹಾದೇವಿ.

3) ಮಡಿವಾಳ ಮಾಚಯ್ಯ. 4)ಮೋಳಿಗೆ ಮಾರಯ್ಯಾ.

ಎರಡನೇ ಶರಣ ಮಂಟಪದಲ್ಲಿ=

1) ಎಳಂದೂರು ಬಸವಲಿಂಗ ಸ್ವಾಮಿಗಳು. 2) ಶ್ರೀವಿಜಯ ಮಹಾಂತ ಸ್ವಾಮಿಗಳು.3) ಬಿದರಿ ಕುಮಾರಸ್ವಾಮಿಗಳು. 4) ವೈರಾಗ್ಯದ ಮಲ್ಲಣ್ಣಾರ್ಯರು.

ಕಂಬಗಳು = ರಥದಲ್ಲಿ 24 ಕಂಬಗಳಿವೆ ಇವು ದಿನದ 24 ಗಂಟೆಗಳ ಸಂಕೇತಗಳಾಗಿವೆ. ದಿನದ ಗಂಟೆಗಳು ಮನುಷ್ಯನ ಜೀವನ ಉತ್ತಮವಾಗಿರಲಿ ಎಂದು, ಪ್ರತಿಯೊಂದು ಕಂಬಕ್ಕೆ ಹಿತ್ತಾಳೆ ಕಳಸವಿದೆ.

ಗಂಟೆಗಳು – ಗಡ್ಡೆಯ ಮೇಲ್ಭಾಗದಲ್ಲಿ 365 ಗಂಟೆಗಳಿವೆ ಒಂದು ವರ್ಷದ ದಿನಗಳು ಸಂಕೇತವಾಗಿವೆ.  ವರ್ಷ ಪೂರ್ಣವೂ ಗಂಟೆಯ ಸುಮಧುರ ನಾದದಂತೆ ಜೀವನವು ಮಧುರವಾಗಿರಲಿ.

ಲಿಂಗ ಪೂಜಾ ವಸ್ತುಗಳು =  ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯ ಚಿತ್ರ, ಜೀವನದಲ್ಲಿ ಈ ಮೂರು ವಸ್ತುಗಳು ಮನಸ್ಸಿಗೆ, ದೇಹಕ್ಕೆ ಮತ್ತು ಆತ್ಮಕ್ಕೆ ಶಾಂತಿ ದೊರೆಯಲೆಂದು ಈ ಶಾಂತವಸ್ತುಗಳನ್ನು ಚಿತ್ರಿಸಲಾಗಿದೆ.

ಗಡ್ಡೆಯ ಮಧ್ಯಭಾಗ – ವೀರಶೈವ ಧರ್ಮದ ಪ್ರಮುಖ 24 ಯತಿಗಳ ಭಾವಚಿತ್ರ ಅಳವಡಿಸಿದೆ.

1) ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು.

2) ಎಮ್ಮಿಗನೂರು ಶ್ರೀ ಜಡೆಯಸಿದ್ದರು.

3) ಕಪ್ಪನಹಳ್ಳಿ ಶ್ರೀ ರುದ್ರಮುನಿ ಶಿವಯೋಗಿಗಳು.

4) ಗೋಣಿಬೀಡು ಶ್ರೀ ಸಿದ್ಧವೀರ ಸ್ವಾಮಿಗಳು.

5) ಹಾಲಕೇರಿಯ ಶ್ರೀ ಹಿರಿಯ ಅನ್ನದಾನ ಮಹಾಸ್ವಾಮಿಗಳು. (ಗಡ್ಡದ ಅಜ್ಜನವರು)

6) ಒಳಬಳ್ಳಾರಿ ಶ್ರೀ ಚನ್ನಬಸವ ತಾತನವರು.

7) ಬಳ್ಳಾರಿಯ ಶ್ರೀ ಜ. ಕೊಟ್ಟೂರು ಸ್ವಾಮಿಗಳು.

8) ಹಾವೇರಿಯ ಶಿವಬಸವ ಸ್ವಾಮಿಗಳು.

9) ಶ್ರೀ ಡಾ‌.  ಜಚನಿಯವರು.

10) ಅನಂತಪುರದ ಶ್ರೀ ಲಿಂಗ ಮಹಾಸ್ವಾಮಿಗಳು.

11) ಬಾಗಲಕೋಟೆ ಕರವೀರಮಠದ ಶ್ರೀ ಶಾಂತವೀರ ಸ್ವಾಮಿಗಳು.

12) ರೋಣದ ಶ್ರೀ ಗುರುಪಾದ ಸ್ವಾಮಿಗಳು.

13) ಸವದತ್ತಿ ಶ್ರೀಅಪ್ಪಯ್ಯಸ್ವಾಮಿಗಳು.

14) ಕಂಚುಗಲ್ ಬಿದರಿ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

15) ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು.

16) ಹಾನಗಲ್ಲ ಶ್ರೀ ಸದಾಶಿವ ಸ್ವಾಮಿಗಳು.

16) ಹುಬ್ಬಳ್ಳಿಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು.

17) ನಾಲ್ವತವಾಡ ಶ್ರೀವೀರೇಶ್ವರ ಶರಣರು.

18) ನಾಗನೂರು ಶ್ರೀ ಡಾ. ಶಿವಬಸವ ಸ್ವಾಮಿಗಳು.

19) ಹಾವೇರಿ ಶ್ರೀ ಶಿವಲಿಂಗ ಸ್ವಾಮಿಗಳು.

20) ಹುಬ್ಬಳ್ಳಿಯ ಜ. ಶ್ರೀ ಗಂಗಾಧರ ಸ್ವಾಮಿಗಳು.

22) ಪಂಚಾಕ್ಷರಿ ಶ್ರೀ ಗವಾಯಿಗಳು.

23) ಹಾಲಕೇರಿಯ ಶ್ರೀ ಅನ್ನದಾನ ಸ್ವಾಮಿಗಳು. (ಬೆತ್ತಜ್ಜನವರು)

24) ಹೊಸಪೇಟೆಯ ಶ್ರೀ ಜಗದ್ಗುರು ಡಾ.ಸಂಗನಬಸವ ಸ್ವಾಮಿಗಳು.

ಶಿವಾವತಾರಿಗಳು = ಶಿವನು ಭಕ್ತೋದ್ದಾರಕ್ಕಾಗಿ ಅವತರಿಸಿದ ಎಂಟು ಅವತಾರಗಳ ಚಿತ್ರಗಳು ರಚಿತ ಗೊಂಡಿದೆ.

ದಿಕ್ಪಾಲಕರು = ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಆಗ್ನೇಯ, ನೈಋತ್ಯ, ವಾಯುವ್ಯ, ಈಶಾನ್ಯ ಕ್ರಮವಾಗಿ ಇಂದ್ರ, ಅಗ್ನಿ, ಯಮ, ನಿರುತ, ವರುಣ, ವಾಯು, ಕುಬೇರ, ಈಶ.

ನಂದಿ ಮೂರ್ತಿ =  4 ನಂದಿಮೂರ್ತಿಗಳು.

ಚತುರ್ವಿಧ ಸಾಂಕೇತವಾಗಿವೆ ಇವು ಮಾನವನು ಧರ್ಮ, ಅರ್ಥ,  ಕಾಮ, ಮೋಕ್ಷವೆಂಬ ಪುರುಷಾರ್ಥಗಳನ್ನು ಸಾಧಿಸಿ ಮುಕ್ತನಾದಬೇಕೆಂಬುದು ಇದರ ಸಂಕೇತ.

ಗಣಪತಿ – ಮಹಾದ್ವಾರದ ಕೆಳಗೆ ವಿಗ್ನ ವಿನಾಶಕನಾದ ಪ್ರಸನ್ನ ಗಣಪತಿಯ ಮೂರ್ತಿ ಇದೆ.

ರಥದ ದ್ವಾರಪಾಲಕರು – ದೇವಲೋಕದ ದ್ವಾರಪಾಲಕರಾದ ಜಯ – ವಿಜಯರ ಭಾವಚಿತ್ರ.

 “ರಥ ನಿರ್ಮಾಣ ಮಾಡುವ ನಿಯಮಗಳಲ್ಲಿ ರಥದಲ್ಲಿ ಸಿಂಹ, ಸರ್ಪ ಮತ್ತು ಮೊಸಳೆಯ ಚಿತ್ರಣವಿರುವ ಬೇಕು” ಆದರೆ ಅವು ಕ್ರೂರ ಪ್ರಾಣಿಗಳು. ರಥವು ಶಾಂತಿಸ್ವರೂಪ ಇರಲೆಂದು ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯನ್ನು ಕೆತ್ತಲಾಗಿದೆ.

ರಾಶಿಗಳು =  ವರ್ಷದ 12 ತಿಂಗಳುಗಳ ಸಾಂಕೇತವಾಗಿ ಮೇಷದಿಂದ ಮೀನದವರಿಗೆ -12 ರಾಶಿಗಳಿವೆ.

ರಥದ ಅಶ್ವಗಳು =  ದಶದಿಕ್ಕುಗಳು ಸಾಂಕೇತವಾಗಿ 10 ಕುದುರೆಗಳಿವೆ.

ಆನೆಗಳು  = ರಥದ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟು 14 ಆನೆಗಳಿವೆ ಚತುರ್ದಶ ಭುವನಗಳ ಸಾಂಕೇತಿಕವಾಗಿ.

ಗಾಲಿಗಳು =  6 ರಥದ ಗಾಲಿಗಳು ಇರುವವು.

ನಾಲ್ಕು ಯುಗ ಹಾಗೂ ಎರಡು ಆಯನಗಳ ಸಾಂಕೇತವಾಗಿ.

ಮುಂದಿನ ಎರಡು ಗಾಲಿಗಳು – ಕೃತಯುಗ, ತ್ರೇತಾಯುಗ.

ಹಿಂದಿನ ಎರಡು ಗಾಲಿಗಳು – ದ್ವಾಪರಯುಗ, ಕಲಿಯುಗ.

ಮಧ್ಯದ ಎರಡು ಗಾಲಿಗಳು – ಉತ್ತರಾಯಣ, ದಕ್ಷಿಣಾಯಣ.

ರಥದ ತೂಕ = 63 ಟನ್; ಶ್ರೀ ಕುಮಾರೇಶ್ವರ ಜೀವಿತ ಕಾಲ ಹಾಗೂ 63 ಪುರಾತನರ ಸಾಂಕೇತವಾಗಿ.

ರಥದ ಬೀದಿ = 600 ಫೂಟ್ ಉದ್ದ.

ರಥದ ಹಗ್ಗ = 108 ಅಡಿ ಉದ್ದವಿದೆ.

ರಥದ ಮಂಟಪ = 75 ಅಡಿ ಎತ್ತರವಿದೆ.

            ರಥ ನಿರ್ಮಾಣದ ಸಂಪೂರ್ಣ ವೆಚ್ಚದ ವಿವರ.

  1. ಕಟ್ಟಿಗೆಗೆ =                            1,00,00,000
  2. ಕಬ್ಬಿಣಕ್ಕೆ =                                 6,00,000
  3. ಹಿತ್ತಾಳೆಗೆ =                               1,50,000
  4. ವೇತನಕ್ಕೆ =                            30,00,000
  5. ರಥವು ಮಂದಿರಕ್ಕೆ ತಲುಪಿಸಲು = 6,00,000
  6. ಇತರೆ =                                30,00,000
  • ರಥದ ನಿರ್ಮಾಣದ ವೆಚ್ಚ  =     1,73,50,000
  • ರಥಬೀದಿ =                2,17,450
  • ರಥದ ಹಗ್ಗ =                57,050
  • ರಥದ ಮಂಟಪ =    22,00,000
  1. ಒಟ್ಟು ವೆಚ್ಚ  =           24,74,450

                                             =        1,73,50,000

                                             =           25,74,000

ರಥ ನಿರ್ಮಾಣ,ಹಗ್ಗ,ಬೀದಿ,

ಮಂಟಪ ಸಂಪೂರ್ಣ ವೆಚ್ಚದ ವಿವರ =     1,98,24,4540

– ರಥ ನಿರ್ಮಾಣ ಸ್ಥಳ =  ಉಡುಪಿಯ ಹೊಸನಗರದಲ್ಲಿ  – -ಪೆರ್ಡೂರಿಯ ಬುಕ್ಕಿಗುಡಿಯಂಬಲ್ಲಿ ನಿರ್ಮಾಣಗೊಂಡಿದೆ.

– ನಿರ್ಮಾಣ ಸಂಸ್ಥೆ =  ಶ್ರೀ ಡಿಸೈನರ್ಸ ಸಂಸ್ಥೆ.

 – ರಥದ ಹಗ್ಗ ನಿರ್ಮಾಣ ಸ್ಥಳ = ಚೆನ್ನೈಯಲ್ಲಿ ನಿರ್ಮಾಣಗೊಂಡಿದೆ.

– ಕುಶಲ ಶಿಲ್ಪಿಗಳು = 53 ಜನ ಸತತ ಕಾರ್ಯ ನಿರ್ವಹಿಸಿದ್ದಾರೆ.

– ನಿರ್ದೇಶಕರು = ಶ್ರೀ ರಾಜಶೇಖರ ಹೆಬ್ಬಾರ್.

– ನಿರ್ಮಾಪಕರು

 ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು.

ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ. ಹೊಸಪೇಟೆ-ಬಳ್ಳಾರಿ.

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ. ಹಾಲಕೆರೆ.

ನಮ್ಮ ದೇಶದ ಸಂಸ್ಕೃತಿಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ತೋರಿಸಲು ರಥಗಳ ಪಾತ್ರ ಪ್ರಮುಖವಾಗಿವೆ. ಅದರಂತೆ ನಮ್ಮ ಶಿವಯೋಗ ಮಂದಿರದ 69 ಅಡಿ ಎತ್ತರದ ಮಹಾರಥ ವೀರಶೈವ ಧರ್ಮದ ತತ್ವಾಚರಣೆ ಹಾಗೂ ವೀರಶೈವ ದಾರ್ಶನಿಕರ ಚರಿತ್ರೆಯನ್ನು ಸಾರುವಂತಿದೆ, ಶ್ರೀ ಗುರು ಕುಮಾರೇಶ್ವರನ ಕೀರ್ತಿ ಗಗನಚುಂಬಿತವಾಗಿದೆ. ಪ್ರಪಂಚದ ಅತಿ ಎತ್ತರದ ಅಖಂಡ ರಥವಾಗಿದೆ. ರಥದ ನಿರ್ಮಾಣದ ವೆಚ್ಚ 1,73,50,000 ₹ಗಳ ವೆಚ್ಚವಾಗಿದೆ. ಶಿವರಾತ್ರಿಯ ಪುರಾಣದ ಮಂಗಲೋತ್ಸವದಂದು ರಥವನ್ನು ಮಹಾಗುರುಗಳ ಪಾದಕ್ಕೆ ಅರ್ಪಣೆ ಮಾಡಿ ರಥವನ್ನು 8-4-2010 ರಂದು ಎಳೆಯಲಾಯಿತು. ಈ ಭವ್ಯವಾದ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರು ರಾಜಕೀಯದಲ್ಲಿ ಬಾನೆತ್ತರ ಬೆಳೆದ ಶ್ರೀ ಸೋನಿಯಾ ಗಾಂಧಿಯವರು. ಮಾನ್ಯಶ್ರೀ ಎಲ್.ಕೆ. ಅಡ್ವಾಣಿಯವರು. ಕನ್ನಡ ನಾಡಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು‌‌.  ಪದ್ಮಭೂಷಣ ಶ್ರೀ ಪುಟ್ಟರಾಜ ಕವಿ ಗವಾಯಿಗಳು.ನಾಡಿನ ಎಲ್ಲಾ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಗಣ್ಯ ಮಾನ್ಯರು ಆಗಮಿಸಿ ಶ್ರೀ ಗುರು ಕುಮಾರೇಶ್ವರರ ಚಿತ್ದರ್ಶನ, ಪ್ರಸಾದ ಸ್ವೀಕರಿಸಿ ಪುನೀತರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಮಹಾಶಿವರಾತ್ರಿಯ ಮರುದಿನದಿಂದು ನೂರಾರು ಶಿವಯೋಗಿಗಳ ಸಮ್ಮುಖದಲ್ಲಿ, ಸಾವಿರಾರು ಭಕ್ತರ ನಡುವೆ ಶ್ರೀ ಕುಮಾರೇಶ್ವರ ಮಹಾರಥವನ್ನು ಎಳೆಯುವರು.

ಭಾರತಾಂಬೆಯು ತನ್ನ ಮಡಿಲಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಇಟ್ಟು ತೂಗುತ್ತಿರುವಳು‌. ಈ ಮೂರುಗಳನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಭಾರತವನ್ನು ಮೆರೆಸುತ್ತಿದ್ದೇವೆ. ಭಾರತದ ಕಲೆ ವಿಶ್ವದಲ್ಲಿಯೇ ತನ್ನದೇ ಒಂದು ಅಪ್ರತಿಮ ಸ್ಥಾನವನ್ನು ಪಡೆದಿದೆ. ಬೇಲೂರು, ಹಳೆಬೀಡು, ಎಲ್ಲೋರಾ, ಅಜಂತಾ, ಪಟ್ಟದಕಲ್ಲು, ಬಾದಾಮಿ, ಐಹೊಳೆ ಹೀಗೆ ದೇಶದ ಮೂಲೆ ಮೂಲೆಯಲ್ಲಿ ಹಬ್ಬಿದೆ, ಆ ಕಲೆ ಶಿವಯೋಗಮಂದಿರದಲ್ಲಿಯೂ ಹರಡಿದೆ. ಇಲ್ಲಿರುವ ಮಹಾ ಗುರುಗಳಾದ ಶ್ರೀ ಕುಮಾರೇಶ್ವರ ಕರ್ತೃ ಗದ್ದುಗೆ ಹಾಗೂ ಕಾಷ್ಟದಿಂದ ನಿರ್ಮಿಸಿದ ರಥ ಇದು ವಿಶ್ವದಲ್ಲಿಯೇ ಅತೀ ಎತ್ತರದ ಕಲಾಕೃತಿಯ ರಥವೆನಿಸಿದೆ.

ದ್ರೋಣಾಚಾರ್ಯರ ಶಿಷ್ಯೋತ್ತಮನಾದ ಏಕಲವ್ಯನಿಂದ ಹೆಬ್ಬೆರಳು ಪಡೆದುಕೊಂಡರೆ. ವೀರಶೈವ ಧರ್ಮಕ್ಕೆ ಅಪಾರವಾದ ಸೇವೆ ಸಲ್ಲಿಸಿ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರದಂಥ ಮಹಾಸಂಸ್ಥೆಯನ್ನು ಸ್ಥಾಪಿಸಿ ವೀರಶೈವದಲ್ಲಿಯೇ ವೀರಶೈವ ಜ್ಞಾನದ ಬೃಹತ್ ಬೆಳಕನ್ನು ಸದಾಕಾಲ ನಡೆಯುವಂತೆ ಮಾಡಿದ ವೀರಶೈವಧರ್ಮ ಎಂದೆಂದೂ ಅದಃಪತನ ವಾಗದಂತೆ ಮಂದಿರದಿಂದ ಮಹಾ ಪೂಜ್ಯರನ್ನು ತಯಾರುಮಾಡುವ ಕಮ್ಮಟ ಶಾಲೆಯನ್ನಾಗಿ ಪರಿವರ್ತಿಸಿದವರು  ಪರಮಪೂಜ್ಯ ದಿವ್ಯಜ್ಯೋತಿ ಲಿಂ. ಹಾನಗಲ್ಲ ಗುರು ಕುಮಾರ ಶಿವಯೋಗಿಗಳು.

‘ಕಲ್ಲರಳಿ ಹೂವಾಗಿ ಕುಮಾರೇಶನ ಗೋಪುರಕ್ಕೆ ಬೆಳಕಾಗಿ’ ಬೆಳಗುವಂತೆ ಅವರ ಶಿಷ್ಯೋತ್ತಮ ರಲ್ಲಿ ಅಗ್ರಗಣ್ಯ ಅವತಾರಿ, ಸದಾಕಾಲ ಸಮಾಜ ಸೇವೆ, ಕ್ರಾಂತಿಯ ಹರಿಕಾರ, ಶಿಕ್ಷಣ ಪ್ರೇಮಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಶಿವಯೋಗ ಮಂದಿರದ ಪ್ರಭೆಯನ್ನು ಭೂಮಿಯ ನಾನಾ ಮೂಲೆಯಲ್ಲಿ ಪಸರಿಸಿ ಪ್ರವಾಸಿ ತಾಣಗಳ ಮಾದರಿಯಲ್ಲಿ ಶಿವಯೋಗ ಮಂದಿರವನ್ನು ಪರಿವರ್ತಿಸಿದರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ-ಬಳ್ಳಾರಿ-ಹಾಲಕೆರೆ.

ಶ್ರೀಗಳು ಏನೇ ಮಾಡಿದರು ಅದ್ಭುತ. ಅಮೂಲ್ಯ ಕಾರ್ಯಗಳನ್ನೇ ಕೈಗೊಳ್ಳುವರು ಅಂಥ ಅದ್ಭುತಗಳಲ್ಲಿ ಜಗತ್ತಿಗೆ ಮಾದರಿಯಾದ ಎತ್ತರವಾದ ಮಹಾರಥವನ್ನು ತಮ್ಮ ಮಠದ ಸ್ವಂತ ಖರ್ಚಿನಿಂದ ಶಿವಯೋಗ ಮಂದಿರಕ್ಕೆ ಅರ್ಪಣೆ ಮಾಡಿರುವ ಮಹಾ ಸಾಧಕರಿವರು, ಅಲ್ಲದೆ ಸಾಹಿತ್ಯ ಅಭಿಮಾನಿಗಳಾದ ಇವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಪೂಜ್ಯರು ಆಧುನಿಕ ವಿಜ್ಞಾನಕ್ಕೆ ಸವಾಲಾದವರು. ಇವರು ಅರ್ಪಿಸಿದ ಬೃಹತ್ ರಥದ ವಿವರಣೆಯನ್ನು ಈ ಕೆಳಗೆ ನೀಡಿದ್ದೇನೆ.

ರಥದ ಶೈಲಿ = ಕರ್ನಾಟಕ ಚಾಲುಕ್ಯ,ಕಲ್ಯಾಣ ಚಾಲುಕ್ಯ,ಹೊಯ್ಸಳ ಶೈಲಿ.

ರಥದ ತಾಳಿಕೆ = ಸುಮಾರು 500 ವರ್ಷಗಳ ಕಾಲ ತಾಳಿಕೆ ಬರಬಹುದು.

ರಥಕ್ಕೆ ಬಳಸಿದ ಕಟ್ಟಿಗೆಗಳು = ಭೋಗಿ, ಸಾಗವಾನಿ,ಮತ್ತಿ, ರಂಜಾ.

ರಥ ನಿರ್ಮಾಣದ ಅವಧಿ = ಸತತ ಐದು ತಿಂಗಳಲ್ಲಿ ಪೂರ್ಣಗೊಂಡಿತು.

  ಶ್ರೀ ಕುಮಾರೇಶ್ವರ  ರಥದ ಎತ್ತರ

  1. ಶ್ರೀ  ಕಳಸ = 5 ಅಡಿ.
  2. ಗೋಲಾಕಾರದ ಶಿಖರ 1 = 4ಅಡಿ.
  3. ಗೋಲಾಕಾರದ ಶಿಖರ 2 = 9 ಅಡಿ.
  4. ಶರಣರ ಮಂಟಪ = 14 ಅಡಿ.
  5. ದೇವರ ಮಂಟಪ = 9 ಅಡಿ.
  6. ಗಡ್ಡೆ = 23 ಅಡಿ.
  7. ಗಾಲಿ = 9* ಅಡಿ.

           ರಥದ ಒಟ್ಟು ಎತ್ತರ = 73 ಅಡಿಗಳು

[* ಗಾಲಿಯ ಅರ್ಧ ಭಾಗಕ್ಕೆ ರಥ ಬರುವುದರಿಂದ ಗಾಲಿಯನ್ನು 4 – 1/2 ಅಡಿ ಗಣನೆಮಾಡಲಾಗಿದೆ.]

       ಭಾವಚಿತ್ರ – ರಥದ ಸುತ್ತಲೂ 12 ಶಿವಶರಣರ ಭಾವಚಿತ್ರ ರಚಿಸಲಾಗಿದೆ.

ದೇವರ ಮಂಟಪದ ಸುತ್ತಲೂ =

1) ಶ್ರೀ ಬಸವೇಶ್ವರರು. 2) ರೇಣುಕಾಚಾರ್ಯರು.

3) ಅಲ್ಲಮಪ್ರಭುದೇವರು. 4) ಸಿದ್ಧಲಿಂಗೇಶ್ವರರು.

ಮೊದಲನೇ ಶರಣ ಮಂಟಪದಲ್ಲಿ=

1) ಸಿದ್ದರಾಮೇಶ್ವರರು. 2) ಅಕ್ಕಮಹಾದೇವಿ.

3) ಮಡಿವಾಳ ಮಾಚಯ್ಯ. 4)ಮೋಳಿಗೆ ಮಾರಯ್ಯಾ.

ಎರಡನೇ ಶರಣ ಮಂಟಪದಲ್ಲಿ=

1) ಎಳಂದೂರು ಬಸವಲಿಂಗ ಸ್ವಾಮಿಗಳು. 2) ಶ್ರೀವಿಜಯ ಮಹಾಂತ ಸ್ವಾಮಿಗಳು.3) ಬಿದರಿ ಕುಮಾರಸ್ವಾಮಿಗಳು. 4) ವೈರಾಗ್ಯದ ಮಲ್ಲಣ್ಣಾರ್ಯರು.

ಕಂಬಗಳು = ರಥದಲ್ಲಿ 24 ಕಂಬಗಳಿವೆ ಇವು ದಿನದ 24 ಗಂಟೆಗಳ ಸಂಕೇತಗಳಾಗಿವೆ. ದಿನದ ಗಂಟೆಗಳು ಮನುಷ್ಯನ ಜೀವನ ಉತ್ತಮವಾಗಿರಲಿ ಎಂದು, ಪ್ರತಿಯೊಂದು ಕಂಬಕ್ಕೆ ಹಿತ್ತಾಳೆ ಕಳಸವಿದೆ.

ಗಂಟೆಗಳು – ಗಡ್ಡೆಯ ಮೇಲ್ಭಾಗದಲ್ಲಿ 365 ಗಂಟೆಗಳಿವೆ ಒಂದು ವರ್ಷದ ದಿನಗಳು ಸಂಕೇತವಾಗಿವೆ.  ವರ್ಷ ಪೂರ್ಣವೂ ಗಂಟೆಯ ಸುಮಧುರ ನಾದದಂತೆ ಜೀವನವು ಮಧುರವಾಗಿರಲಿ.

ಲಿಂಗ ಪೂಜಾ ವಸ್ತುಗಳು =  ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯ ಚಿತ್ರ, ಜೀವನದಲ್ಲಿ ಈ ಮೂರು ವಸ್ತುಗಳು ಮನಸ್ಸಿಗೆ, ದೇಹಕ್ಕೆ ಮತ್ತು ಆತ್ಮಕ್ಕೆ ಶಾಂತಿ ದೊರೆಯಲೆಂದು ಈ ಶಾಂತವಸ್ತುಗಳನ್ನು ಚಿತ್ರಿಸಲಾಗಿದೆ.

ಗಡ್ಡೆಯ ಮಧ್ಯಭಾಗ – ವೀರಶೈವ ಧರ್ಮದ ಪ್ರಮುಖ 24 ಯತಿಗಳ ಭಾವಚಿತ್ರ ಅಳವಡಿಸಿದೆ.

1) ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು.

2) ಎಮ್ಮಿಗನೂರು ಶ್ರೀ ಜಡೆಯಸಿದ್ದರು.

3) ಕಪ್ಪನಹಳ್ಳಿ ಶ್ರೀ ರುದ್ರಮುನಿ ಶಿವಯೋಗಿಗಳು.

4) ಗೋಣಿಬೀಡು ಶ್ರೀ ಸಿದ್ಧವೀರ ಸ್ವಾಮಿಗಳು.

5) ಹಾಲಕೇರಿಯ ಶ್ರೀ ಹಿರಿಯ ಅನ್ನದಾನ ಮಹಾಸ್ವಾಮಿಗಳು. (ಗಡ್ಡದ ಅಜ್ಜನವರು)

6) ಒಳಬಳ್ಳಾರಿ ಶ್ರೀ ಚನ್ನಬಸವ ತಾತನವರು.

7) ಬಳ್ಳಾರಿಯ ಶ್ರೀ ಜ. ಕೊಟ್ಟೂರು ಸ್ವಾಮಿಗಳು.

8) ಹಾವೇರಿಯ ಶಿವಬಸವ ಸ್ವಾಮಿಗಳು.

9) ಶ್ರೀ ಡಾ‌.  ಜಚನಿಯವರು.

10) ಅನಂತಪುರದ ಶ್ರೀ ಲಿಂಗ ಮಹಾಸ್ವಾಮಿಗಳು.

11) ಬಾಗಲಕೋಟೆ ಕರವೀರಮಠದ ಶ್ರೀ ಶಾಂತವೀರ ಸ್ವಾಮಿಗಳು.

12) ರೋಣದ ಶ್ರೀ ಗುರುಪಾದ ಸ್ವಾಮಿಗಳು.

13) ಸವದತ್ತಿ ಶ್ರೀಅಪ್ಪಯ್ಯಸ್ವಾಮಿಗಳು.

14) ಕಂಚುಗಲ್ ಬಿದರಿ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

15) ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು.

16) ಹಾನಗಲ್ಲ ಶ್ರೀ ಸದಾಶಿವ ಸ್ವಾಮಿಗಳು.

16) ಹುಬ್ಬಳ್ಳಿಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು.

17) ನಾಲ್ವತವಾಡ ಶ್ರೀವೀರೇಶ್ವರ ಶರಣರು.

18) ನಾಗನೂರು ಶ್ರೀ ಡಾ. ಶಿವಬಸವ ಸ್ವಾಮಿಗಳು.

19) ಹಾವೇರಿ ಶ್ರೀ ಶಿವಲಿಂಗ ಸ್ವಾಮಿಗಳು.

20) ಹುಬ್ಬಳ್ಳಿಯ ಜ. ಶ್ರೀ ಗಂಗಾಧರ ಸ್ವಾಮಿಗಳು.

22) ಪಂಚಾಕ್ಷರಿ ಶ್ರೀ ಗವಾಯಿಗಳು.

23) ಹಾಲಕೇರಿಯ ಶ್ರೀ ಅನ್ನದಾನ ಸ್ವಾಮಿಗಳು. (ಬೆತ್ತಜ್ಜನವರು)

24) ಹೊಸಪೇಟೆಯ ಶ್ರೀ ಜಗದ್ಗುರು ಡಾ.ಸಂಗನಬಸವ ಸ್ವಾಮಿಗಳು.

ಗಾಲಿಗಳು =  6 ರಥದ ಗಾಲಿಗಳು ಇರುವವು.

ನಾಲ್ಕು ಯುಗ ಹಾಗೂ ಎರಡು ಆಯನಗಳ ಸಾಂಕೇತವಾಗಿ.

ಮುಂದಿನ ಎರಡು ಗಾಲಿಗಳು – ಕೃತಯುಗ, ತ್ರೇತಾಯುಗ.

ಹಿಂದಿನ ಎರಡು ಗಾಲಿಗಳು – ದ್ವಾಪರಯುಗ, ಕಲಿಯುಗ.

ಮಧ್ಯದ ಎರಡು ಗಾಲಿಗಳು – ಉತ್ತರಾಯಣ, ದಕ್ಷಿಣಾಯಣ.

ರಥದ ತೂಕ = 63 ಟನ್; ಶ್ರೀ ಕುಮಾರೇಶ್ವರ ಜೀವಿತ ಕಾಲ ಹಾಗೂ 63 ಪುರಾತನರ ಸಾಂಕೇತವಾಗಿ.

ರಥದ ಬೀದಿ = 600 ಫೂಟ್ ಉದ್ದ.

ರಥದ ಹಗ್ಗ = 108 ಅಡಿ ಉದ್ದವಿದೆ.

ರಥದ ಮಂಟಪ = 75 ಅಡಿ ಎತ್ತರವಿದೆ.

            ರಥ ನಿರ್ಮಾಣದ ಸಂಪೂರ್ಣ ವೆಚ್ಚದ ವಿವರ.

  1. ಕಟ್ಟಿಗೆಗೆ =                            1,00,00,000
  2. ಕಬ್ಬಿಣಕ್ಕೆ =                                 6,00,000
  3. ಹಿತ್ತಾಳೆಗೆ =                               1,50,000
  4. ವೇತನಕ್ಕೆ =                            30,00,000
  5. ರಥವು ಮಂದಿರಕ್ಕೆ ತಲುಪಿಸಲು = 6,00,000
  6. ಇತರೆ =                                30,00,000
  • ರಥದ ನಿರ್ಮಾಣದ ವೆಚ್ಚ  =     1,73,50,000
  • ರಥಬೀದಿ =                2,17,450
  • ರಥದ ಹಗ್ಗ =                57,050
  • ರಥದ ಮಂಟಪ =    22,00,000
  1. ಒಟ್ಟು ವೆಚ್ಚ  =           24,74,450

                                             =        1,73,50,000

                                             =           25,74,000

ರಥ ನಿರ್ಮಾಣ,ಹಗ್ಗ,ಬೀದಿ,

ಮಂಟಪ ಸಂಪೂರ್ಣ ವೆಚ್ಚದ ವಿವರ =     1,98,24,4540

 ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು.

ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ. ಹೊಸಪೇಟೆ-ಬಳ್ಳಾರಿ.

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ. ಹಾಲಕೆರೆ.

ನಮ್ಮ ದೇಶದ ಸಂಸ್ಕೃತಿಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ತೋರಿಸಲು ರಥಗಳ ಪಾತ್ರ ಪ್ರಮುಖವಾಗಿವೆ. ಅದರಂತೆ ನಮ್ಮ ಶಿವಯೋಗ ಮಂದಿರದ 69 ಅಡಿ ಎತ್ತರದ ಮಹಾರಥ ವೀರಶೈವ ಧರ್ಮದ ತತ್ವಾಚರಣೆ ಹಾಗೂ ವೀರಶೈವ ದಾರ್ಶನಿಕರ ಚರಿತ್ರೆಯನ್ನು ಸಾರುವಂತಿದೆ, ಶ್ರೀ ಗುರು ಕುಮಾರೇಶ್ವರನ ಕೀರ್ತಿ ಗಗನಚುಂಬಿತವಾಗಿದೆ. ಪ್ರಪಂಚದ ಅತಿ ಎತ್ತರದ ಅಖಂಡ ರಥವಾಗಿದೆ. ರಥದ ನಿರ್ಮಾಣದ ವೆಚ್ಚ 1,73,50,000 ₹ಗಳ ವೆಚ್ಚವಾಗಿದೆ. ಶಿವರಾತ್ರಿಯ ಪುರಾಣದ ಮಂಗಲೋತ್ಸವದಂದು ರಥವನ್ನು ಮಹಾಗುರುಗಳ ಪಾದಕ್ಕೆ ಅರ್ಪಣೆ ಮಾಡಿ ರಥವನ್ನು 8-4-2010 ರಂದು ಎಳೆಯಲಾಯಿತು. ಈ ಭವ್ಯವಾದ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರು ರಾಜಕೀಯದಲ್ಲಿ ಬಾನೆತ್ತರ ಬೆಳೆದ ಶ್ರೀ ಸೋನಿಯಾ ಗಾಂಧಿಯವರು. ಮಾನ್ಯಶ್ರೀ ಎಲ್.ಕೆ. ಅಡ್ವಾಣಿಯವರು. ಕನ್ನಡ ನಾಡಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು‌‌.  ಪದ್ಮಭೂಷಣ ಶ್ರೀ ಪುಟ್ಟರಾಜ ಕವಿ ಗವಾಯಿಗಳು.ನಾಡಿನ ಎಲ್ಲಾ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಗಣ್ಯ ಮಾನ್ಯರು ಆಗಮಿಸಿ ಶ್ರೀ ಗುರು ಕುಮಾರೇಶ್ವರರ ಚಿತ್ದರ್ಶನ, ಪ್ರಸಾದ ಸ್ವೀಕರಿಸಿ ಪುನೀತರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಮಹಾಶಿವರಾತ್ರಿಯ ಮರುದಿನದಿಂದು ನೂರಾರು ಶಿವಯೋಗಿಗಳ ಸಮ್ಮುಖದಲ್ಲಿ, ಸಾವಿರಾರು ಭಕ್ತರ ನಡುವೆ ಶ್ರೀ ಕುಮಾರೇಶ್ವರ ಮಹಾರಥವನ್ನು ಎಳೆಯುವರು.

ಪ್ರಸ್ತುತ ಕೃತಿಯನ್ನು ಸೀಮಿತ ಪುಟಗಳಲ್ಲಿ ರಚಿಸಬೇಕಾದ ಪ್ರಯುಕ್ತ ಶಿವಯೋಗ ಮಂದಿರ ಸಂಸ್ಥಾಪಕರ ದಿವ್ಯವ್ಯಕ್ತಿತ್ವವನ್ನು ಸಮಗ್ರವಾಗಿ ಬಿಂಬಿಸದೇ  ಸಾರವತ್ತಾಗಿ ಸಂಗ್ರಹಿಸಲಾಗಿದೆ. ಪೂಜ್ಯರನ್ನು ದರ್ಶನ ಮಾಡಿ ಅವರು ಕೈಗೊಂಡ ಮಣಿಹವನ್ನು

ಅವಲೋಕಿಸಿದ ಅನೇಕ ಗಣ್ಯರ ಅನಿಸಿಕೆಗಳನ್ನು ನಿರೂಪಿಸಲಾಗಿದೆ.

ಚಿತ್ರದುರ್ಗ ಬೃಹನ್ಮಠದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು

“ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರ ಪರಿಚಯವು ನಾವು ಕಾಶಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಕಾಲದಿಂದಲೂ ಉಂಟು. ಇವರು ದೂರದರ್ಶಿಗಳು. ಶಿವಾನುಭವಿಗಳು. ಅಧ್ಯಾತ್ಮಿಕ ವಿಚಾರದಲ್ಲಿ ಸುಜ್ಞರು ಮತ್ತು ಸಮಾಜದ ಹಿತಕ್ಕೋಸ್ಕರ ಅವಿಶ್ರಾಂತ ಶ್ರಮವನ್ನು ವಹಿಸಿ ಕಾರ್ಯನಿರ್ವಹಿಸುವುದರಲ್ಲಿ ಮೊದಲನೆಯವರು ಎಂದು ಶ್ಲಾಘಿಸಿಕೊಳ್ಳಲು ಅರ್ಹರಾಗಿದ್ದರು.

ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ, ಇನ್ನಿತರರಿಗೂ ಸಹಾಯ ಮಾಡಿದುದೇ ನಿದರ್ಶನವಾಗಿದೆ. ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು. ಹಾನಗಲ್ಲ ಶ್ರೀ ಕುಮಾರಸ್ವಾಮಿಗಳೇ ವೀರಶೈವ ಮಹಾಸಭೆಯನ್ನು ಕೂಡಿಸಬೇಕೆಂದು ಸಂಕಲ್ಪಿಸಿ ಮಹಾಸಭೆಯನ್ನು ಮಾಡಬೇಕೆಂದು ನಿರ್ಣಯ ಮಾಡಿಸಿದವರಾದುದರಿಂದ ಇವರೇ ವೀರಶೈವ ಮಹಾಸಭಾ ಸ್ಥಾಪಕರಾಗಿರುತ್ತಾರೆ. ‘ ತಮ್ಮ ಹೃದಯವಾಣಿಯನ್ನು ಸ್ಮಾರಕ ಚಂದ್ರಿಕೆ ಕೃತಿಗಾಗಿ ಹರಸಿದ್ದಾರೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಲಿಂ. ಶ್ರೀಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಮಹಾಸ್ವಾಮಿಗಳು ಹೀಗೆ ಸ್ಮರಿಸುತ್ತಾರೆ. ‘ಶಿವಯೋಗ ಮಂದಿರವೆಂಬ ಮಾತೃ ಮಂದಿರವು ನಮ್ಮ ತಂದೆ ತಾಯಿಗಳಿಗಿಂತ ಹೆಚ್ಚಿನದು. ಲೋಕದ ತಂದೆ ತಾಯಿಗಳು

ನಮ್ಮನ್ನು ಸಂಸಾರದಲ್ಲಿ ನೂಕುತ್ತಾರೆ. ಆದರೆ ಶಿವಯೋಗ ಮಂದಿರ ಸಂಸ್ಥೆಯೆಂಬ ಮಹಾತಾಯಿಯು ನಮಗೆ ಮುಕ್ತಿಯ ಮಾರ್ಗವನ್ನು ತೋರಿಸುತ್ತದೆ.

ಲಿಂ. ಪರಮಪೂಜ್ಯ ಹಾನಗಲ್ಲ ಕುಮಾರಮಹಾಸ್ವಾಮಿಗಳವರು ನಮ್ಮ ನಾಡಿನ ಮಹಾತ್ಮರಲ್ಲಿ ಅಗ್ರಗಣ್ಯರಾಗಿ ಬಾಳಿದರು. ಅವರು ಸ್ಥಾಪಿಸಿದ ಈ ಮಹಾಸಂಸ್ಥೆಯು ಈ ಅರ್ಧ ಶತಮಾನದಲ್ಲಿ ನಾಡಿಗೆ ನಾನಾ ಮುಖವಾಗಿ ಬೆಳಕು ನೀಡಿದೆ. ಅದು ಸಂಸ್ಥಾಪಕರ ಮೂಲಭೂತ ಮಹೋದ್ದೇಶಗಳನ್ನು ಪೂರ್ಣಗೊಳಿಸಲು ಕಾರ್ಯಮುಖವಾಗಿದೆ. ಇನ್ನೂ ಬಹಳ ಕಾರ್ಯಗಳು ಜರುಗಬೇಕಾಗಿದೆ. ಈ ಸಂಸ್ಥೆ ಎಷ್ಟೋ ಕಾರ್ಯಗಳನ್ನು ಮಾಡಿದೆ. ಮಾಡುತ್ತಲಿದೆ. ನಾವು ಇಷ್ಟಕ್ಕೆ ಸಂತೋಷಪಡಬೇಕಾಗಿಲ್ಲ. ಉಳಿದ ಉದ್ದೇಶಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಬೇಕು, (‘ಬೆಳಕು’ ಸಂದೇಶದಿಂದ) ಎಂದು ನಿರೂಪಿಸುವರು.

ಶ್ರೀ ಜ.ಚ.ನಿಯವರು ತಮ್ಮ ಕರುಳಕರೆಯನ್ನು ಹೀಗೆ ವ್ಯಕ್ತ ಮಾಡಿದ್ದಾರೆ : ಓ ಕಾರಣಿಕ ಕುಮಾರ! ನೀನು ಅಂದು ಕೈಮುಟ್ಟಿ ಮನಮುಟ್ಟಿ ಕಟ್ಟಿದ ಹೆಂಪಿನ ಹೆಸರಿಟ್ಟ ಶಿವಯೋಗ ಮಂದಿರ ಇಂದು ಕನಕೋತ್ಸವವನ್ನು ಕಂಡಿದೆ. ಕಷ್ಟ ಕಾಲದಲ್ಲಿ ನಷ್ಟ  ದಿನಗಳಲ್ಲಿ ನೀನು ಇದನ್ನು ಕೈಬಿಡದೆ ಹಿಡಿದೆತ್ತಿದೆ. ನೀನು ಕಾಯದಿಂದ ಕಣ್ಮರೆಯಾಗಿದ್ದರೂ ಆತ್ಮ ಮಹಿಮೆಯಿಂದ  ಅಮರನಾಗಿರುವೆ. ಅನುದಿನ ನಿನ್ನ ಅನುರಾಗದ ಈ ಸಂಸ್ಥೆಯನ್ನು ಕೈ ಬಿಡದೆ ಕಾಪಾಡಿರುವೆ. ಸಾಧಕರಾದ ನಮ್ಮನ್ನು  ಸಲುಹಿರುವ ಈ ಸುವರ್ಣ ಉತ್ಸವದ ಸುದಿನದಲ್ಲಿ ನಿನ್ನ ನೆನೆದಿರುವುದೆಂತು ತಂದೆ ನಿನ್ನನ್ನು ಕರುಳಿನಿಂದ ಕರೆಯದಿರುವುದೆಂತು ಸ್ವಾಮಿ? ಸಮಾಜೋದ್ಧಾರಕನಾದ ನಿನ್ನನ್ನು ಸಮಾಜ ಇಂದು ಕರೆಯುತ್ತಿದೆ ದೇವ! ನಾಡಿನ

ಅಧ್ಯಾತ್ಮ ಭೂಮಿಕೆಯ ಹದಗೊಳಿಸಿದ ಪುಣ್ಯನೆ ಗಣ್ಯನೆ ನಾಡೇ ನಿನ್ನನು ನೆನೆಯುತಿದೆ ದೇವ!ನಾವೆಲ್ಲರೂ ನೆರೆದಿಂದು ನಿನ್ನ ನೆನೆವೆವು. ನುತಿಸುವೆವು ನಮಿಸುವೆವು” (ಅದೇ, ಬೆಳಗು ಸ್ಮಾರಕ ಸಂದೇಶದಿಂದ)

ಶ್ರೀ ಶಿವಯೋಗಮಂದಿರ ಸಂಸ್ಥೆಯು ಸ್ಥಾಪನೆಗೊಂಡು ಬಹುಮುಖ ಕಾರ್ಯಗಳನ್ನು ಕೈಗೊಂಡಿತು. ನಾಡಿನ ಜನತೆಯನ್ನು ಆಕರ್ಷಿಸಿತು. ದೇಶ-ವಿದೇಶಗಳ ಪ್ರವಾಸಿಗರು, ಸಾಹಿತಿಗಳು, ಸಚಿವರು, ಅಧಿಕಾರಿಗಳು, ಕಲಾವಿದರು, ಸದ್ಭಕ್ತರು ಸಂಸ್ಥೆಗೆ ಆಗಮಿಸಿ ಪ್ರಶಾಂತ ವಾತಾವರಣವನ್ನು, ಪ್ರಕೃತಿ ಸೌಂದರ್ಯವನ್ನು ಕಂಡು ಆನಂದಿತರಾಗಿ ವಟು ಸಾಧಕರ ಸಾಧನೆಯ ಚಟುವಟಿಕೆಗಳನ್ನು ನಿರೀಕ್ಷಿಸಿ ಹೃದಯ ತುಂಬಿದ ಹಾರೈಕೆಗಳನ್ನು ಬರೆದಿರುವರು. ಪ್ರಗತಿಗಾಗಿ ಸೂಚನೆಗಳನ್ನು ಸಹ ನೀಡಿರುವರು. ಕೆಲವನ್ನು ಮಾತ್ರ ನೀಡಲಾಗಿದೆ. ದಿ. ೧೨-೯-೧೯೫೧ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಒಡೆಯರು ಇಲ್ಲಿಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಸಂತಸದಿಂದ ನಾಡಿನಲ್ಲಿ ಧರ್ಮಗ್ಲಾನಿಯ ಕಾಲದಲ್ಲಿ ಶ್ರೀ ಕುಮಾರಮಹಾಸ್ವಾಮಿಗಳವರಿಂದ ಈ ಗುರುಕುಲದ ಸ್ಥಾಪನೆಯಾಯಿತು. ಇದರ ಅಭಿವೃದ್ಧಿಗಾಗಿ ಇಲ್ಲಿಯ ಶ್ರೀ ಸ್ವಾಮಿಗಳವರು ದುಡಿಯುತ್ತಿರುವುದು ಶ್ಲಾಘನೀಯವಾದ ವಿಷಯ. ಇಂತಹ ಪ್ರಶಾಂತ ಗುರುಕುಲಗಳ ಅವಶ್ಯಕತೆಯು ಇಂದು ನಮಗೆ ಬಹಳವಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೂ ಮೊದಲು ಶ್ರೀ ಕೃಷ್ಣರಾಜೇಂದ್ರ ಒಡೆಯರ ಇವರೂ ಸಂದರ್ಶನ ಮಾಡಿದ್ದರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಡಿ. ಜತ್ತಿ, ಶ್ರೀ ನಿಜಲಿಂಗಪ್ಪನವರು, ಶ್ರೀ ದೇವರಾಜ್ ಅರಸು, ಶ್ರೀ ಎಸ್.ಆರ್. ಕಂಠಿ ಇತ್ತೀಚೆಗೆ  ಶ್ರೀ ಎಚ್.ಡಿ. ಕುಮಾರಸ್ವಾಮಿ, ಶ್ರೀ ಯಡಿಯೂರಪ್ಪನವರು ಮೊದಲಾದವರು ಇತರ ಸಚಿವರೂ ಆಗಾಗ್ಗೆ ಆಗಮಿಸಿ ಶ್ರೀ ಮಹಾಸ್ವಾಮಿಯ ಗದ್ದುಗೆ ದರ್ಶನ ಪಡೆದಿರುವರು.

೧. ಈ ಹೊತ್ತಿನ ದಿವಸ ಶ್ರೀಗಳ ಹಾಗೂ ಯೋಗಿಗಳ ದರ್ಶನಾರ್ಥವಾಗಿ ಬಂದು ನೋಡಲು ಬಹು ಸಂತೋಷವಾಯಿತು. ಈ ಸಂಸ್ಥೆಗೆ ದ್ರವ್ಯ ಸಹಾಯವು ಬಹಳ ಬೇಕು. ನಮ್ಮ ದೇಶ ಬಾಂಧವರು ವಿಶೇಷವಾಗಿ ಸಹಾಯ ಮಾಡತಕ್ಕದ್ದು. ಇಸ್ವಿ  ೧೯೧೨-

ಅಣ್ಣಾಜಿ ಕೇಶವರಾವ್ ಕುಲಕರ್ಣಿ ಬೆಳವಗಿ

೨. ಆರ್ಯ ಸಂಸ್ಕೃತಿಗೂ ಕರ್ನಾಟಕಕ್ಕೂ ಲಿಂಗಾಯಿತ ಧರ್ಮಕ್ಕೂ ಈ ಸಂಸ್ಥೆಯು ಅಮೂಲ್ಯ ಸಹಾಯವನ್ನು ಮಾಡಿತು. ಕರ್ನಾಟಕಕ್ಕೆ ಈಗ ಇದರ ಬೆಲೆ ತಿಳಿದು ಬರದಿದ್ದರೂ ಕೆಲ ಕಾಲದ ಮೇಲೆಯೂ ಭವಿಷ್ಯತ್ಕಾಲದಲ್ಲಿ ಇದರ ಅಪೂರ್ವ ಸೇವೆಯನ್ನು ನೆನಸಿ ಹಾಡಿ ಹರಸೀತು.

೨೫ನೇ ಡಿಸೆಂಬರ್ ೧೯೨೦- ದ.ರಾ.ಬೇಂದ್ರೆ -ಧಾರವಾಡ

೩. ಶಿವಯೋಗ ಮಂದಿರವು -ಪರಧರ್ಮ ಸಹಿಷ್ಣುತೆ ಮೊದಲಾದ ಅತ್ಯುಚ್ಚ ಕಲ್ಪನೆಗಳ ಮೂರ್ತ ಸ್ವರೂಪವಾಗಲು ಹವಣಿಸುತ್ತದೆ. ಅತ್ಯುತ್ತಮವಾದ ಸಾತ್ವಿಕ ಜ್ಞಾನಿಗಳನ್ನು ಹುಟ್ಟಿಸುವ ಕಾರ್ಖಾನೆಯು ವೀರಶೈವ ಧರ್ಮವನ್ನುದ್ಧರಿಸುವ ಮಹತ್ವಾಕಾಂಕ್ಷೆಯುಳ್ಳ ಸನ್ಯಾಸಿಗಳು ಮುಂದುವರಿಯಬೇಕೆಂದು ಅದರ ಉತ್ಪಾದಕರ ಆಕಾಂಕ್ಷೆ.

ಶಾಂತಿನಿಕೇತನದಲ್ಲಿ ಸೃಷ್ಟಿ ಸೌಂದರ್ಯ, ಲಲಿತಕಲೆ, ಏಕಾಂತ ಸ್ಥಳ ಇವುಗಳ ಯೋಗದಿಂದ ಮನುಷ್ಯನ ಅಧ್ಯಾತ್ಮ ಉನ್ನತಿಯನ್ನು ಬೆಳೆಸುವ ಪ್ರಯತ್ನ ನಡೆದಿದೆ. ಆದರೆ ಶಿವಯೋಗ ಮಂದಿರವು ವೀರಶೈವ ಧರ್ಮವನ್ನು ರಕ್ಷಿಸುವ ರಕ್ಷಾ ಭಂಡಾರವು.

ಈ ಪುಣ್ಯಪ್ರಭಾವರು (ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು) ಶಿವಯೋಗಮಂದಿರದ ಉತ್ಕರ್ಷವೇ ತಮ್ಮ ಜೀವಿತದ ಇತಿಕರ್ತವ್ಯವೆಂದು ಭಾವಿಸಿ, ನಿದ್ದೆ ನೀರಡಿಕೆಯಿಲ್ಲದೆ ಕನಸು ಮನಸಿನಲ್ಲಿ ಸಹ ಶಿವಯೋಗ ಮಂದಿರವನ್ನು ಧ್ಯಾನಿಸಿ ಅದನ್ನು ಈಗಿನ ಉಚ್ಛ ಸ್ಥಿತಿಗೆ ತಂದು ಮುಟ್ಟಿಸಿದ್ದಾರೆ. ಶಿಷ್ಯರನ್ನು ಕಲೆಹಾಕಿ ಜ್ಞಾನಾಮೃತಪಾನ ಮಾಡಿಸಹತ್ತಿದ್ದಾರೆ. ಈ ಸಂಸ್ಥೆಯಲ್ಲಿ ಸುಸಂಸ್ಕೃತರಾದ ಬಾಲಕರನ್ನು ಬೇರೆ ಬೇರೆ ಸ್ಥಳಗಳಲ್ಲಿರುವ ಲಿಂಗಾಯತ ಮಠಗಳ ಗುರುಗಳು ತಮ್ಮ ಮರಿಗಳನ್ನಾಗಿ ಒಯ್ಯಲಿಕ್ಕೆ ಹಂಬಲಿಸುತ್ತಾರೆ.

ಶ್ರೀ ವೆಂಕಟರಾವ್ ಆಲೂರ ಕ. ವಿದ್ಯಾವರ್ಧಕ ಸಂಘ ಧಾರವಾಡ

೪. ಈ ಮಂದಿರದ ಗ್ರಂಥ ಭಂಡಾರವನ್ನು ಆನರ್ಸ ಮತ್ತು ಎಂ. ಎ ತರಗತಿಗಳ ವಿದ್ಯಾರ್ಥಿಗೋಷ್ಠಿಯೊಡನೆ ಬಂದು ನೋಡಿ ಬಹಳ ಸಂತೋಷಪಟ್ಟಿದ್ದೇನೆ.

ಕ-ವೆಂ-ರಾಘವಾಚಾರ್,

(೨೫-೧೨-೧೯೪೯ )    ಮಹಾರಾಜಾ ಕಾಲೇಜು ಮೈಸೂರು

೫. ಶ್ರೀ ಶಿವಯೋಗ ಮಂದಿರವನ್ನು ನೋಡಿ ಶ್ರೀಗಳವರ ಸಂದರ್ಶನ ಮಾಡಿ ಬಹಳ ಸಂತೋಷವಾಯಿತು. ಇಲ್ಲಿ ಸಮಾಜದ ಉದ್ಧಾರಕ್ಕಾಗಿ ಸಮಾಜ ಸೇವಕರನ್ನು ಸುಸಜ್ಜಿತಗೊಳಿಸುವ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿರುವುದು ಅತ್ಯಂತ ತೃಪ್ತಿಯ ವಿಚಾರ.

(೧೮-೧-೧೯೪೮ )    – ಎಸ್. ನಿಜಲಿಂಗಪ್ಪ

,

೬, ಸಮಾಜದಲ್ಲಿ ಕ್ರಾಂತಿ ಹುಟ್ಟಿಸುವ ಯೋಗ್ಯತೆಯುಳ್ಳವರು ಈ ಸಂಸ್ಥೆಯ ಚಾಲಕರಾಗಬೇಕು. ಈ ಸಂಸ್ಥೆಯು ಹಾನಗಲ್ಲ ಮಹಾಸ್ವಾಮಿಗಳ ಕನಸನ್ನು ನನಸು ಮಾಡಲಿ. ಇದೇ ನನ್ನ ಬಯಕೆ ಮತ್ತು ಹಾರೈಕೆ.

(೪-೪-೧೯೪೯)- ಗುದ್ಲೆಪ್ಪ ಹಳ್ಳಿಕೇರಿ

೭. ಪುಣ್ಯಭೂಮಿಯಾದ ನಮ್ಮ ಆರ್ಯವರ್ತ ತನ್ನ ಅನೂಚಾನವಾದ ಅಧ್ಯಾತ್ಮ ಸಂಪತ್ತನ್ನು ಕಳೆದುಕೊಳ್ಳದೆ, ಅದನ್ನು ಉಳಿಸಿ ಬೆಳಸಿ ಜಗತ್ತಿಗೆ ಮತ್ತೆ ಮಾರ್ಗದರ್ಶಕವಾಗುತ್ತದೆ ಎಂಬ ಭರವಸೆಯನ್ನು ಎಲ್ಲರಿಗೂ ಈ ಸಂಸ್ಥೆ ಕೊಡುತ್ತದೆ. ಇದನ್ನು ನಡೆಸುತ್ತಿರುವ ಶ್ರೀಶ್ರೀಗಳವರು ನಿಜಕ್ಕೂ ನಮ್ಮ ನಾಡಿನ ನಿರ್ಮಾಪಕರು. ಅವರ ಈ ಮಹತ್ವದ ಕೆಲಸದಿಂದ ನನಗೂ ನನ್ನ ಮಿತ್ರರಿಗೂ ಮಹದಾನಂದವಾಗಿದೆ.

(೧೨-೧೦-೧೯೫೧) – ನಾ. ಕಸ್ತೂರಿ  .

೮. ಉತ್ತರ ಪ್ರದೇಶದ ಒಬ್ಬ ಸಂನ್ಯಾಸಿಗಳೊಡನೆ ನಾನು ಶಿವಯೋಗಮಂದಿರದ ಗುರುಕುಲಕ್ಕೆ ಭೇಟಿಕೊಟ್ಟಿದ್ದೆ. ನನ್ನ ಸಹಚಾರಿಯಾಗಿದ್ದವರು ಮಂದಿರದ ಬಗ್ಗೆ ಉತ್ತಮ ಭವಿಷ್ಯವನ್ನು ಪ್ರತೀಕ್ಷಿಸಿದರು. ನನಗಂತೂ ಅಲ್ಲಿಯ ನಿತ್ಯ  ಕಾರ್ಯಕ್ರಮಗಳನ್ನು ನಿರೀಕ್ಷಿಸಿ ಬಹಳ ಆನಂದವಾಯಿತು. ಇದಕ್ಕೆ ಅಮರವಾದ ಯಶಸ್ಸನ್ನು ಕೋರುವ ಯೋಗ್ಯತೆ

ನಮಗೆಲ್ಲಿಯದು ಎನ್ನಿಸಿದರೂ ಅದನ್ನು ನಿರೀಕ್ಷಿಸುವ ಭಾಗ್ಯ ನಮಗೆ ಆ ಶಿವಯೋಗಿಯು ಕರುಣಿಸಲೆಂದು ಬೇಡುತ್ತೇನೆ 

– ಎಂ. ಶಿವಕುಮಾರಸ್ವಾಮಿ (೨೯-೧೨-೧೯೫೯)

ಸಂಸ್ಕೃತ ಉಪನ್ಯಾಸಕ, ಬಸವೇಶ್ವರ ಕಾಲೇಜು-ಬಾಗಲಕೋಟೆ

೯. ಶ್ರೀಮದ್ವೀರಶೈವ ಶಿವಯೋಗ ಮಂದಿರವನ್ನು ಈ ಹೊತ್ತು ಕಣ್ಣಾರೆಯೊಬ್ಬ ವೀರಶೈವನಿಗೆ ಕೈವಲ್ಯಧಾಮವೂ ಇಲ್ಲಿಯ ದಾಸೋಹ, ಗೋಶಾಲೆ, ಪಾಠಶಾಲೆ, ವಟುಗಳ ಯೋಗಾಭ್ಯಾಸ ಇವೆಲ್ಲವೂ ಎಂತಹರನ್ನು ಮುಗ್ಧರನ್ನಾಗಿ ಮಾಡದಿರಲಾರವು.

– ಡಾ. ಶಿ. ಚ ನಂದಿಮರ( ೧-೧೯೪೫)   –

ಈ ಸಂದೇಶಗಳು ಶಿವಯೋಗ ಮಂದಿರ’ಬೆಳಗು’ ಸ್ಮಾರಕ ಗ್ರಂಥದಿಂದ ಆಯ್ಕೆ ಮಾಡಿದೆ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ತಾತಾ ಎಂದರೆ ಕೊಡುವ | ದಾತ್ರೈ ಭುವನ ಪ್ರ-

ಖ್ಯಾತ ಸದ್ಭಕ್ತಿ-ಪ್ರೀತನಾದಿಯೊಳೆನ್ನ

ತಾತ ಶ್ರೀಗುರುವೆ ಕೃಪೆಯಾಗು II ೩೬ ||

‘ತಾತ’ ‘ಪದವೂ ಅಜ್ಜನ ಪರ್ಯಾಯವೇ, ಕೆಲವೊಂದು ಭಾಗದಲ್ಲಿ ಅಜ್ಜನಿಗೆ ತಾತನೆನ್ನುವದು ರೂಢಿಯಾಗಿದೆ. ಮತ್ತು ಅಜ್ಜನ ಪಿತನಿಗೆ ತಾತನೆನ್ನುವ ವಾಡಿಕೆಯೂ ಉಂಟು. ಇಲ್ಲಿ ಕವಿಯು ಶಬ್ದ ಚಮತ್ಕಾರದಿಂದ ಅರ್ಥವಿಸ್ತಾರವನ್ನು ವಿಶದಗೊಳಿಸಿ ದ್ದಾನೆ. ತಾ ಯೆಂದರೆ ಕೊಡುವುದೆಂದರ್ಥ. ತಾತಾಯೆಂದರೆ ಅಜ್ಜ ಒಮ್ಮೆ ಕ್ರಿಯಾ ಪದವಾಗಿ ಇನ್ನೊಮ್ಮೆ ನಾಮಪದವಾಗಿ ಪ್ರಯೋಗವಾಗಿದೆ. ಗುರುದೇವನೂ ತಾತನಾಗಿದ್ದಾನೆ. ಶಿಷ್ಯನ ಬೇಡಿದ ಬಯಕೆಗಳನ್ನು ಪೂರೈಸುವಲ್ಲಿ ಸಮರ್ಥನು. ‘ತಾತಾ’ ಎಂದು ಪ್ರಾರ್ಥಿಸಿದರೆ ಪ್ರಾರ್ಥಿಸಿದ ಕೊಡುಗೆಯನ್ನು ಕೊಡುವಲ್ಲಿ ದಾತೃವಾಗಿದ್ದಾನೆ. ಈ ದಾತೃತ್ವದಿಂದ ಗುರುವರನು ಮೂರುಲೋಕದಲ್ಲಿಯೂ ಪ್ರಖ್ಯಾತನಾಗಿದ್ದಾನೆ. ದಾತೃತ್ವದ ಸೆಲೆಯು ಸದ್ಭಕ್ತಿಯಿಂದ ಮಾತ್ರ ಹೊರಸೂಸುವದು. ಸದ್ಭಕ್ತಿಯಿಂದಲೇ ಗುರುನಾಥನು ಪ್ರೀತಿಯುಳ್ಳವನಾಗುವನು. ತಾತನು ತನ್ನ ಸೇವೆ ಮಾಡುವ ಮೊಮ್ಮಕ್ಕಳಿಗೆ ತನ್ನ ಸೊತ್ತನ್ನು ಕೊಡುವಂತೆ ಗುರುವು ಸದ್ಭಕ್ತಿಯುಳ್ಳ ಶಿಷ್ಯರಿಗೆ ಕೃಪೆ ಮಾಡುವನು. ಈ ತಾತನು ಆದಿಯಿಂದ ಆದವನಲ್ಲ. ಅನಾದಿ ನಿರಂಜನನಾಗಿದ್ದಾನೆ. ನಿರಂಜನ ವಸ್ತುವಿಗೆ ಆದಿಯೆಂಬುದಿಲ್ಲ. ಆದರಿಂದ ಗುರುವು ಅನಾದಿ ತಾತನು.

ಶ್ರೀ ಜ.ಚ.ನಿ. ಯವರು ತಮ್ಮ ‘ಗುರುಕರುಣತ್ರಿವಿಧಿಯ ಭಾವ ವಿವರಣೆ’ ಯಲ್ಲಿ ‘ತ್ರೈಭುವನ’ ಎಂದರೆ ತ್ರಿವಿಧಾಂಗವೆಂದು ಅರ್ಥೈಸಿದ್ದಾರೆ. ಶ್ರೀಗುರುವು ತ್ಯಾಗಾಂಗಭುವನಕ್ಕೆ ಕ್ರಿಯಾಕಾರುಣ್ಯವನ್ನು, ಭೋಗಾಂಗಭುವನಕ್ಕೆ ಮಂತ್ರ ಕಾರುಣ್ಯವನ್ನು, ಯೋಗಾಂಗಭುವನಕ್ಕೆ ವೇಧಾಕಾರುಣ್ಯವನ್ನು ಕರುಣಿಸುವನು. ಶಿವದೀಕ್ಷೆಯಕಾಲಕ್ಕೆ ಕ್ರಿಯೆಯಿಂದ ಸೂಕ್ಷ್ಮತನುವನ್ನು ಶುದ್ಧಗೊಳಿಸಿ, ಸೂಕ್ಷ್ಮ ತನುವಿಗೆ ಮಂತ್ರಜಪವನ್ನು ಬೋಧಿಸುವನು. ಕಾರಣತನುವಿಗೆ ಮಂತ್ರಾನುಸಂಧಾನದ ವಿಧಾನವನ್ನು ಕಲಿಸುವನು. ಆದ್ದರಿಂದ ಕಾಣದ ಸ್ವರ್ಗ ಮತ್ತು ಪಾತಾಳದ ಕಲ್ಪನೆಗಿಂತ ತ್ರಿವಿಧಾಂಗಗಳಲ್ಲಿ ತ್ರೈಭುವನದ ಸಾರ್ಥಕತೆಯನ್ನು ತಿಳಿದು ಗುರುವಿನ ದಾತೃತ್ವದ ವಿಶಾಲತೆಯನ್ನು ಅರಿಯುವದು ಅವಶ್ಯವಾಗಿದೆ.

ಸುಳಿವ ಸೋದರಮಾವ | ನಳಿಯನಗ್ರಜಭಾವ

ಗೆಳೆಯ ನೀನೆನಗೆ ಹಳೆನೆಂಟ ಕುಲಕೋಟಿ

ಬಳಗವೈ ಗುರುವೆ ಕೃಪೆಯಾಗು || ೩೭ ||

ಈ ತ್ರಿಪದಿಯಲ್ಲಿ ಶಿವಕವಿಯು ಕೊನೆಯದಾಗಿ ಸಕಲ ಬಳಗವನ್ನೇ ಸರಗೊಳಿಸಿದ್ದಾನೆ. ಮಾನವನು ಶಿವನ ಸೃಷ್ಟಿಯಲ್ಲಿ ಹುಟ್ಟಿದ್ದರೆ, ತಂದೆ, ತಾತ, ತಮ್ಮ ಅಣ್ಣ, ಕಕ್ಕ, ಅಕ್ಕ, ತಾಯಿ, ತಂಗಿ, ಅತ್ತೆ, ಸೊಸೆ, ಮಾವ, ಅಳಿಯ ಗೆಳೆಯ ಇತ್ಯಾದಿ ಬಳಗವೆಲ್ಲ ಮಾನವನ ಸೃಷ್ಟಿಯಿಂದಾಗಿದೆ. ಸಾಮಾಜಿಕ ಜೀವನದಲ್ಲಿ ಸಮಾಜ ವ್ಯವಸ್ಥೆಗೆ ತಕ್ಕಂತೆ ಒಬ್ಬ ವ್ಯಕ್ತಿಯು ತಾಯಿ-ತಂದೆಗೆ ಮಗನಾಗುತ್ತಾನೆ. ತಾಯಿ- ತಂದೆಯ ತಂದೆ ಅಜ್ಜ, ಅಣ್ಣನಿಗೆ ತಮ್ಮ, ಅಜ್ಜನಿಗೆ ಮೊಮ್ಮಗ, ಮಾವನಿಗೆ ಅಳಿಯ, ಹೆಂಡತಿಗೆ ಗಂಡ, ಆತ್ಮೀಯ ಪರಿಚಯದ ಮತ್ತು ಹಿತಬಯಸುವವನು ಗೆಳೆಯ ನಾಗುವನು. ಹೀಗೆ ಕೆಲವರು ಸಮೀಪದ ಬಂಧುಗಳಾದರೆ ಮತ್ತೆ ಹಲವರು ಹಳೆಯ ನೆಂಟರಾಗುವರು. ಈ ರೀತಿ ಮಾನವ ನಿರ್ಮಿತ ಬಳಗವೆಲ್ಲ ಶ್ರೀಗುರುವಿನಲ್ಲಿದೆ  ಅಣ್ಣನವರೂ

“ತಂದೆ ನೀನು, ತಾಯಿ ನೀನು, ಬಂಧು ನೀನು

ಬಳಗ ನೀನು ನೀನಲ್ಲದೆ ಎನಗೆ ಮತ್ತಾರೂ ಇಲ್ಲವಯ್ಯಾ”

ಎಂದು ಸಂಗಮನಾಥನಲ್ಲಿ ಎಲ್ಲ ಬಳಗವನ್ನು ಕಂಡಿರುವರು. ಗುರುದೇವನನ್ನು ಅನನ್ಯ ಭಕ್ತಿಯಿಂದ ಭಜಿಸಿದರೆ, ಅವನು ಸಕಲಬಳಗಸ್ಥನಾಗಿ ಸುಜ್ಞಾನ ಸುಧೆಯನ್ನು ಕರುಣಿಸಿ ಮುಕ್ತನನ್ನಾಗಿ ಮಾಡುತ್ತಾನೆ. ಅಂತೆಯೇ ಅನುಭವಿಯಾದ ಸರ್ವಜ್ಞ ಕವಿಯು ಗುರುಬಂಧುತ್ವದ ಅಧಿಕ್ಯತೆಯನ್ನು, ಸಾಂಸಾರಿಕ ಬಳಗದ ಕನಿಷ್ಠತೆಯನ್ನು ಬಣ್ಣಿಸಿರುವನು.

ಬಂಧುಗಳಾದವರು ಬಂದುಂಡು ಹೋಗುವರು.

ಬಂಧನವ ಕಳೆಯಲರಿಯರು.

ಸಾಂಸಾರಿಕ ಬಂಧುಗಳು ಧನ ಇದ್ದಾಗ ಬಂದುಂಡು, ಹರಣಮಾಡಿಕೊಂಡು ಹೋಗುವರು. ಆದರೆ ಈ ಗುರುಬಂಧು ಜೀವನ ಭವಬಂಧನವನ್ನೇ ಕಳೆಯುವನು.

ಬಂದೆಡರಿಗಂಜಬೇ | ಡೆಂದು ಧೈರ್ಯವನಿತ್ತು

ಹಿಂದು ಮುಂದೆನ್ನ ಕಾಯ್ದಿರ್ಪ ಭಕ್ತಜನ

ಬಂಧು ಶ್ರೀಗುರುವೆ ಕೃಪೆಯಾಗು ||೩೮ ||

“ಆಪತ್ಕಾಲದಲ್ಲಾದವನೇ ನಿಜವಾದ ಬಂಧು” ಎಂದು ಅನುಭವಿಗಳು ಹೇಳುತ್ತಾರೆ. ಹಣ್ಣಾದ ಮರಕ್ಕೆ ಪಕ್ಷಿಗಳು ಮುತ್ತಿ ಹಣ್ಣು ತೀರಿದ ಮೇಲೆ ಹೋಗುವಂತೆ ಬಂಧುಗಳು ಹಣವಿರುವವರೆಗೆ ಹೆಚ್ಚುವರು. ಹಣ ತೀರಿ ಬಡವನಾದರೆ ಯಾರೂ ಮಾತನಾಡಿಸುವದಿಲ್ಲ. ಧನವಂತನ ತೊಂದರೆಗಳನ್ನು, ಕೇಳುವವರು ಹಲವರು. ದರಿದ್ರನ ದುಃಖವನ್ನು ಆಲಿಸುವವರು ವಿರಳ. ಲೋಕದಲ್ಲಿ ಹಣದಿಂದ ಬಂಧುಗಳಲ್ಲದೆ ಗುಣದಿಂದ ಬಂಧುಗಳಿಲ್ಲ.

ಗುರುನಾಥನು ತನುತೊಂದರೆ, ಮನ ತೊಂದರೆ, ಧನತೊಂದರೆ ಹಾಗೂ ಇತರ ತೊಂದರೆಗಳು ಬಂದರೂ ಅಂಜದಿರೆಂದು ಶಿಷ್ಯನಿಗೆ ಧೈರ್ಯವನ್ನು ಕೊಡುತ್ತಾನೆ ಗುರುದೇವನು ನಿಜವಾದ ಭಕ್ತಜನಬಂಧುವಾಗಿದ್ದಾನೆ. ಅವನು ಶಿಷ್ಯನ ತನುತಾಪ, ಹೃತ್ತಾಪ, ವಿತ್ತಾಪಗಳನ್ನು ಕಳೆಯುತ್ತಾನೆ. ಗುರುವರನು ನಂಬಿದ ಭಕ್ತರಿಗೆ ಇಂಬುಗೊಟ್ಟು ಹಿಂದೆ ಮಂದೆ (ಭೂತ-ಭವಿಷ್ಯತ್ತು ಮತ್ತು ವರ್ತಮಾನಕಾಲದಲ್ಲಿಯೂ ರಕ್ಷಿಸುವನು. ಸದಾ ಸದ್ಭಕ್ತರ ಹಿತಚಿಂತನೆಗೈಯುವ ಗುರುಸ್ವಾಮಿಯು ಭಕ್ತಜನಬಂಧುವಲ್ಲದೆ ಮತ್ತೇನು ?

ಭಕ್ತಿದಾಸೋಹವು ವಿ | ರಕ್ತಿ ದೃಢ ಛಲ ನೇಮ

ಭಕ್ತಿಯನೆ ನಡೆಸಿಕೊಡುವಲ್ಲಿ ಗುರುವೆ ನೀ

ಭಕ್ತವತ್ಸಲನೆ ಕೃಪೆಯಾಗು ||39 ||

‘ಪೂಜೈಷು ಅನುರಾಗೋ ಭಕ್ತಿಃ” ಪೂಜ್ಯರಲ್ಲಿ ಇಟ್ಟ ಪ್ರೇಮವೇ ಭಕ್ತಿಯಾಗುವುದು  ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನಗಳನ್ನು ಸಮರ್ಪಿಸುವ ಕೈಂಕರ್ಯವೇ ದಾಸೋಹ. ಶಿವಪ್ರಸಾದವಲ್ಲದುದನ್ನು ತ್ಯಜಿಸುವದೇ ವಿರಕ್ತಿ. ಶಿವಾಚಾರವಲ್ಲದುದನ್ನು ನಿರೋಧಿಸುವದೇ ಛಲ. ಆ ನಿರೋಧ ಗಟ್ಟಿಮುಟ್ಟಾದರೆ ದೃಢ ಛಲವೆನಿಸುವದು. ಶಿವನ ಅನುಭಾವದಲ್ಲಿ ತಪ್ಪದೇ ನಡೆಯುವದೇ ನಿಯಮ. ವಿರಕ್ತಿ ಛಲನೇಮಗಳಿಂದೊಡಗೂಡಿದ ದಾಸೋಹಂಭಾವವು ಸ್ಥಿರವಾಗಿ ನಿಂತರೆ ಭಕ್ತಿಯ ಪರಿಪೂರ್ಣತೆಯು ಅಳವಡುವದು. ಇಂಥ ಭಕ್ತಿಯೇ ಮುಕ್ತಿಯ ಸಾಧನವು. “ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’ನೆಂದು ಅಣ್ಣ ಬಸವಣ್ಣನವರು ಭಕ್ತಿಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಶಿವನ ಪ್ರತಿರೂಪನಾದ ಗುರುವಿನ ಕೃಪೆಗೆ ಭಕ್ತಿಯೇ ಮೂಲ. ಭಕ್ತಿಯುಳ್ಳ ಭಕ್ತನಿಗೆ ಗುರುವು ಭಕ್ತವತ್ಸಲನಾಗುವನು. ಭಕ್ತವತ್ಸಲನೇ ! ಭಕ್ತರಲ್ಲಿ ಭಕ್ತಿಯ ಬೀಜವನ್ನು ಬಿತ್ತಿ ಶಿವಯೋಗ ಫಲವನ್ನು ಬೆಳೆ, ಅಂದರೆ ಮಾತ್ರ ಭಕ್ತವತ್ಸಲನೆನ್ನುವ ನಾಮ ಸಾರ್ಥಕವಾಗಬಲ್ಲುದು.

ಮೊದಲಿನ ತ್ರಿಪದಿಯಲ್ಲಿ ಅಭಯವನ್ನಿತ್ತು ಧೈರ್ಯವನ್ನು ಬೋಧಿಸಿದ ಶ್ರೀಗುರುವು ಇಲ್ಲಿ ಭಕ್ತಿದಾಸೋಹ-ವಿರಕ್ತಿ ದೃಡಛಲ ನೇಮಗಳನ್ನು ಕಲಿಸಿ ಕೊಡುತ್ತಾನೆ. ಭಕ್ತವತ್ಸಲನಾದ ಗುರುವು ತನ್ನ ಶಿಷ್ಯನ ಮೇಲಿನ ಅಂತಃಕರಣದಿಂದ ಶರಣ ಮಾರ್ಗದ ಮುಖ್ಯ ಸಿದ್ಧಾಂತವಾದ, ಪಂಚಪ್ರಾಣಗಳಂತಿರುವ ಪಂಚಸೂತ್ರಗಳನ್ನು ಅರ್ಥಾತ್ ಪಂಚಾಚಾರಗಳನ್ನು ಕಲಿಸಿಕೊಡುವನು ! ನುಡಿ ಮತ್ತು ನಡೆಯನ್ನು ಏಕರೂಪಗೊಳಿಸುವ ಶಿಕ್ಷಣವನ್ನಿತ್ತು ಮುಕ್ತನನ್ನಾಗಿಸುವನು. ಇಂಥವನೇ ಸಕಲಬಂಧು ಬಳಗ, ಭಕ್ತಜನ ವತ್ಸಲನೂ ಹೌದು.

ಯುಗನಾಲ್ಕು ವೊಂದಾದ | ಜಗದೊಳಗೆ ತಾನಿರ್ಪ

ಬಗೆಯನಾ ಜಗದೊಳೊಗೆದ ಕಣ್ಣಲಿ  ನೋಡಿ ನಗುವ

ಶ್ರೀಗುರುವೆ ಕೃಪೆಯಾಗು ||40||

ಕವಿಯಾದವನು ಯುಗ ಧರ್ಮವನ್ನು ಯಾವಾಗಲೂ ಜಾಗ್ರತಗೊಳಿಸುತ್ತಾನೆ. ಅದು ಅವನ ಕರ್ತವ್ಯ ಕರ್ಮ. ಕವಿಯು ಸಮಾಜದ ಸಂವೇದನೆಯನ್ನು ತನ್ನ ಕೃತಿಯಿಂದ ಚಿತ್ರಿಸಬೇಕು. ಸಮಾಜದಲ್ಲಿ ಜಾಗ್ರತೆಯನ್ನು ತುಂಬುವಂತಾಗಬೇಕು. ತ್ರಿವಿಧಿಯ ಶಿವಕವಿಯೂ ಸಮಾಜದಲ್ಲಿ ಬಾಳಿ ಬೆಳೆದು ಕಾಯಕ ಜೀವಿಯಾಗಿ, ಇತರ ಜೀವಿಗಳ ತೊಳಲಾಟವನ್ನು ಕಂಡು ಕನಿಕರ ಪಡುತ್ತಾನೆ. ಗುರುಕೃಪೆಯನ್ನು ಪಡೆದು ಮುಕ್ತರಾಗಲು ಸೂಚಿಸಿದ್ದಾನೆ. ಜಗದ ನೆಂಟರು ನಿಜವಾದವರಲ್ಲ. ಸದ್ಗುರುವಿನನ್ನೇ ನಂಬಿರಿ. ಅವನೇ ನಿತ್ಯ-ಸತ್ಯನಾದ ಭಕ್ತವತ್ಸಲನೆಂಬುದನ್ನು ಹಿಂದಿನ ಪದ್ಯಗಳಿಂದ ಮನವರಿಕೆ ಮಾಡಿಕೊಟ್ಟಿದ್ದಾನೆ. ಅಲ್ಲದೆ ಗುರುವಾದವನಲ್ಲಿಯೂ ಭಕ್ತಿ-ಪ್ರೇಮ, ಯಥಾರ್ಥತೆ, ಕರ್ತವ್ಯ ಕರ್ಮಗಳು, ಇರಬೇಕೆಂಬುದನ್ನು ಈ ಮೂಲಕ ಸೂಚಿಸಿದ್ದಾನೆ.

ಕೃತಯುಗ, ತ್ರೇತಾಯುಗ, ದ್ವಾಪಾರಯುಗ ಮತ್ತು ಕಲಿಯುಗಗಳೆಂಬ ನಾಲ್ಕು ಯುಗಗಳಿಂದ ಕೂಡಿದ ಈ ಜಗತ್ತು ಕಾಲಚಕ್ರ ತಿರುಗುತ್ತಿದ್ದರೂ, ಜಗದ ಇರುವಿಕೆ ನಿಂತಿಲ್ಲ. ಜಗತ್ತಿನ ವ್ಯವಹಾರವೆಲ್ಲ ನಡೆದೇ ಇದೆ. ಇದು ಜಗದೀಶನ ಲೀಲೆ. ಜಗವನ್ನು ನಿರ್ಮಿಸುವದು ಸೃಷ್ಟಿಯೆನಿಸಿದರೆ. ವ್ಯವಸ್ಥಿತವಾಗಿ ಇರಿಸುವದೇ ಸ್ಥಿತಿಯೆನಿಸುವದು. ನಿಯಮ ಬದ್ಧವಾದ ಜಗದ ಇರುವಿಕೆಯನ್ನು ಅರಿಯುವದೇ ನಿಜ ಸ್ಥಿತಿ. ಮಾನವನು ಈ ನಿಜಸ್ಥಿತಿಯನ್ನರಿಯದೇ ಅಜ್ಞಾನದಿಂದ, ಮಾಯಮೋಹಗಳಿಂದ ಬುದ್ಧಿ ಶೂನ್ಯನಾಗಿ ಕಣ್ಣು ಬಿಟ್ಟು ಬಯಸಿ ಬಳಲುತ್ತಾನೆ. ತನ್ನದಲ್ಲದುದನ್ನು ಆಶಿಸಿ ಮರಗುತ್ತಾನೆ. ಕರ್ತವ್ಯಕರ್ಮವನ್ನು ಮಾಡದೇ ತನಗಾಗಿ ಬೇಡುತ್ತಾನೆ. ಇದು ಮಾನವನ ಅಜ್ಞಾನ. ಶ್ರೀಗುರುವು ಇದೆಲ್ಲವನ್ನು ತನ್ನ ಜ್ಞಾನ ಕಣ್ಣಿನಿಂದ ನೋಡಿ ನಗುತ್ತಾನೆ. ಈ ನಗುವಿನಲ್ಲಿ ಆನಂದವಿಲ್ಲ. ಇದು ಆಶ್ಚರ್ಯದ ನಗು, ಸಂವೇದನೆಯ ನಗು, ಕನಿಕರದ ನಗು. ಕಳಕಳಿಯ ಕೊರಗು.

ಮನುಷ್ಯನು ತಿಳಿದೂ ತಪ್ಪು ಮಾಡುತ್ತಾನೆ. ಲಿಂಗೈಕ್ಯ ಜಗದ್ಗುರು ಅನ್ನ ದಾನಿ ಮಹಾಸ್ವಾಮಿಗಳು ಅಪ್ಪಣೆಕೊಡಿಸುತ್ತಿದ್ದಂತೆ – ‘ರಾತ್ರಿ ಕಂಡ ಭಾವಿಯಲ್ಲಿ ಹಗಲು ಬೀಳಬಾರದು.” ಜೀವಾತ್ಮನು ಅರಿತರೂ ಅಜ್ಞಾನದಿಂದ, ಮಾಯಾಪಾಶದಿಂದ ಮರೆತು ಮರಣವನ್ನಪ್ಪುತ್ತಾನೆ. ಭವಚಕ್ರದಲ್ಲಿ ತಾನೇ ತಿರುಗುತ್ತಾನೆ. ಮಾನವ ಜನ್ಮದ ಸಾಫಲ್ಯತೆಯನ್ನು ಪಡೆಯದೇ ಹೋಗುವನಲ್ಲವೆಂದು ಗುರುವಿಗೆ ವೇದನೆಯಾಗುತ್ತದೆ. ವೇದನೆ ಆಗಬೇಕು. ಅದುವೆ ಸದ್ಗುರುವಿನ ಪರಿಪೂರ್ಣ ಹೃದಯ. ಭಕ್ತವಾತ್ಸಲ್ಯದ ಪ್ರತೀಕ.

ಪ್ರತಿಯೊಬ್ಬ ಮಾನವನು ಮಾನವ ತನುವನ್ನು ಪಡೆದ ಮೇಲೆ ಮಹಾಲಿಂಗ ರಂಗ ಕವಿಯು ಹೇಳಿದ-

“ಹುಟ್ಟಿದರೆ ಸಾವಿಲ್ಲದಿಹ ಬಲು ಬಟ್ಟೆಯನ್ನು ಸಾಧಿಸಬೇಕದು |

ನೆಟ್ಟನಳವಡದಿರ್ದೊಡೀ ತನುವಿದ್ದ ಬಳಿಕೇನು”

ಎಂಬ ಮಾತನ್ನು ಅರಿತು ಆಚರಿಸಬೇಕು. ಜಡಕರ್ಮಗಳ ಜಾಲದಲ್ಲಿ ಸಿಕ್ಕು ನುಚ್ಚು ನೂರಾಗುವದನ್ನು ತಪ್ಪಿಸಿಕೊಂಡು ಮಾಯಾ ಪಾಶವನ್ನು ಹರಿದುಕೊಳ್ಳಬೇಕು. ಅಂದರೆ ಗುರುವಿಗೆ ಸಂತಸ, ಇಲ್ಲದಿದ್ದರೆ ನೋವು, ಶಿಷ್ಯನ ಸದಿಚ್ಛೆ, ಗುರುವಿನ ಸಂವೇದನೆ ಭವಸಾಗರದಿಂದ ದಾಟಿಸಬಲ್ಲುದು.

ಅದಕ್ಕಾಗಿ ಶಿಷ್ಯನು ಸದ್ಗುರುವಿನ ಅಪಾರ ಮಹಿಮಾತಿಶಯವನ್ನು ಅರಿತು ಶರಣಾಗತನಾಗಬೇಕು. ಬೇಡಬೇಕು. ಗುರುವಾದರೂ ವಿಶ್ವಕುಟುಂಬಿಯೂ ಭಕ್ತ ವತ್ಸಲನೂ ಆಗಬೇಕು. ಅಂಥವನು ಮಾನವನ ಮೂರ್ಖತನಕ್ಕೆ ನಗುತ್ತಾನೆ. ಕರುಣೆ ಯಿಂದ ಕನವರಿಸಿ ಉದ್ಧರಿಸುತ್ತಾನೆ. ಓ ಗುರುವೆ, ನಿನ್ನ ಅಂತಃಕರಣದ ಸಂವೇದನೆಯು ನಮ್ಮನ್ನು ಉದ್ಧರಿಸಲಿ.

ಲೇಖಕರು  :ಶ್ರೀಪ್ರಭುಚನ್ನಬಸವಸ್ವಾಮೀಜಿ ಮೋಟಗಿಮಠ, ಅಥಣಿ

ನವಸಮಾಜ ನಿರ್ಮಾಣಕ್ಕಾಗಿ ೧೯೦೪ರಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ ಸ್ಥಾಪಿಸಿದವರು, ನಾಡಿಗಾಗಿ ಶ್ರೀಗಳನ್ನು ನಿರ್ಮಿಸಲು ೧೯೦೯ರಂದು ‘ಶಿವಯೋಗಮಂದಿರ’ವನ್ನು ಕಟ್ಟಿದವರು, ಪರಳಿ ವ್ಯಾಜ್ಯದಲ್ಲಿ ಜಯಿಸಿದವರು, ಯೋಗಕ್ಕೆ ಸುಯೋಗವಿತ್ತವರು, ಸಂಸ್ಕೃತಿಸಂವರ್ಧನೆಗಾಗಿ ಶ್ರಮಿಸಿದವರು ಅವರೇ; ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳವರು. ಇಂತಹ ಕಾರಣಿಕ ಯುಗಪುರುಷನನ್ನು ನಿರ್ಮಿಸಿದ ನಿರ್ಮಾತೃಗಳು, ಯೋಗಸಿದ್ಧಿಯ ಶಿವಯೋಗಸಿದ್ಧರು, ಮಮತೆಯ ಮಂದಾರ ಯಳಂದೂರಿನ ಶ್ರೀ ಬಸವಲಿಂಗ ಸ್ವಾಮಿಗಳವರು.

           ನಿರಂಜನ ಪೀಠವನ್ನು ಅಲಂಕರಿಸಿದ್ದು ದಕ್ಷಿಣ ಕರ್ನಾಟಕ ಮೈಸೂರು ಪ್ರಾಂತದ ಕೊಳ್ಳೆಗಾಲ ಸಮೀಪವಿರುವ ಯಳಂದೂರಿನಲ್ಲಿ. ಈ ಊರಿನ ವಿರಕ್ತಮಠದ ಮಹಾಸ್ವಾಮಿ ಗಳಾಗಿ, ನಿಜಮುಕ್ತನಾದರೆ, ಕ್ರಿ.ಶ. ೧೮೧೦ ರ ಸುಮಾರಿಗೆ ಜನಿಸಿದ್ದು ಉತ್ತರ ಕರ್ನಾಟಕದ ವಾತಾಪಿ ಪರಿಸರದಲ್ಲಿ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ಆಕಾರವಿಲ್ಲದ ಧ್ವನಿಗಳು ಸೇವೆಯ ಮೂಲಕ ಸತ್ಕೀರ್ತಿಯ ಬದುಕನ್ನು ಸಾಕಾರಗೊಳಿಸಿದರು’ ಎನ್ನುವಂತೆ, ತಂದೆ, ತಾಯಿ, ಬಂಧು-ಬಳಗ, ಊರು ಕೇರಿ, ಎಲ್ಲ ಲೌಕಿಕ ಸಂಬಂಧಗಳ ಹಂಗು ಹರಿದ ಅಲಕ್ ನಿರಂಜನ ಪ್ರಭುಗಳು ಶ್ರೀ ಬಸವಲಿಂಗ ಸ್ವಾಮಿಗಳು.

           ಶ್ರೀಮದ್ ಗುರುವಿನ ಹಸ್ತದಲ್ಲಿ ಹುಟ್ಟಿ ಸಾಧನೆಯನ್ನು ಅರಸಿ ಬಂದದ್ದು ಡಂಬಳದ ಜಗದ್ಗುರು ತೋಂಟದಾರ್ಯಮಠಕ್ಕೆ ಅರ್ಧನಾರೀಶ್ವರ ಗದ್ದುಗೆಯ ಸಾನ್ನಿಧ್ಯ ಸಾಧನೆಯ ತಲ್ಪವಾಯಿತು. ಶ್ರೀಮಠದ ಪುಣ್ಯಪರಿಸರವೇ ಬದುಕಿನ ಕಲ್ಪವಾಯಿತು. ಬಸವಲಿಂಗರು ಅಷ್ಟಾಂಗಯೋಗದ ಪರಿಣತರಾದರು. ಯಮ, ನಿಮಯ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಸ್ಥಳಗಳು ಸಿದ್ಧಿಯಾದವು. ಆ ಕುರಿತು ಅಥಣೀಶರ ಕಾವ್ಯವಾಣಿ ಹೀಗಿದೆ-

ಅಹಿಂಸೆ ಸತ್ಯಮಸ್ತೇಯ ಬ್ರಹ್ಮರ‍್ಯ ಅಪರಿಗ್ರಹ

ಯಮ ಆಸನ ಸಂವ್ಯಮದ ಆತ್ಮಸೂರ್ಯ

ಶೌಚ ತಪ ಸಂತೋಷ ಸ್ವಾಧ್ಯಾಯ ನಿಯಮಂ

ಅರಿತು ಮಾಡೊ ಒಮ್ಮೆ ಸ್ಥಿರಂ ಸುಖಂ ಆಸನಂ||

ಸವಿಕಲ್ಪ ನಿರ್ವಿಕಲ್ಪ ಸಿದ್ಧಿಯೆ ಶಿವಸಮಾಧಿ

ಸಾಧನೆಯಿಂದ ಸಿದ್ಧಿಗೆರೋ ಓ ನಿರುಪಾಧಿ

ಸೂರ್ಯನಮಸ್ಕಾರ ತಿಳಿಯುತ ಬೆಳಕಾಗೊ ಸಾಧಕ

ಅರಿವಿನ ಗುರು ಅಥಣೀಶನ ಅಂತರಂಗದ ಹೊಂಬೆಳಕ||

ಸತ್‌ಪ್ರೇರಣೆ

           ಶುಭೋದಯದಿಂದ ಶುಭರಾತ್ರಿಯ ವರೆಗೆ ಸಾಧನೆ-ಸಾಧನೆ ಮಾಡುವುದೇ ಅಂತರಂಗದ ಅನ್ವೇಷಣೆ ಆರಂಭವಾಯಿತು. ಒಂದು ದಿನ ಓರ್ವ ಯೋಗಸಿದ್ಧರು ಕನಸಿನಲ್ಲಿ ಬಂದು ‘ಏಳು ಸಾಧಕ ಎದ್ದೆಳು. ನೀನು ಕೇವಲ ಮಠೀಯ ವ್ಯವಸ್ಥೆಯ ಕೂಸಾಗಿ ಬಾಳಲು ಬಂದಿಲ್ಲ. ನೀನು ಇನ್ನೂ ಉನ್ನತವಾದದ್ದನ್ನು ಸಾಧಿಸಲು ಬಂದಿದ್ದೀಯಾ ಪ್ರಯಾಣ ಬೆಳೆಸು’ ಎಂದು ವಾಣಿಯಾಯಿತು. ಆ ಪ್ರೇರಣೆಯ ಮಾತುಗಳು ಬಸವಲಿಂಗರಲ್ಲಿ ಬದಲಾವಣೆ ಬೀರಿತು. ಅದೇ ದಿನ ಬೆಳಗಿನ ಜಾವ ಬೇಗ ಎದ್ದು ಡಂಬಳದ ಅರ್ಧನಾರೀಶ್ವರರ ಸನ್ನಿಧಿಗೆ ಶರಣಾರ್ಥಿ ಸಲ್ಲಿಸಿ, ಅಲ್ಲಿಂದ ನೇರವಾಗಿ ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ಪಾದ ಬೆಳೆಸಿದರು.

ಶಂಭುಲಿಂಗನ ತಟದಲ್ಲಿ…

           ಬಸವಲಿಂಗರಲ್ಲಿ ಸಾಧನೆಯ ಹಸಿವಿನ ಹಂಬಲ ಮನದ ತುಂಬೆಲ್ಲ ಮನೆ ಮಾಡಿತ್ತು. ಶಂಭುಲಿಂಗನ ಬೆಟ್ಟ ನೋಡತ್ತಿದ್ದಂತೆ ರೋಮಾಂಚನಗೊಂಡರು. ಇದೇ ನನ್ನ ಉಳವಿಯ ಓಂಕಾರ! ಇದೇ ನನ್ನ ಸಾಧನೆಯ ಶ್ರೀಕಾರ! ಇದೇ ನನ್ನ ಬದುಕಿನ ಆಕಾರ!! ಎಂದು ಪರಿಭಾವಿಸಿ, ಎತ್ತರದ ಬೆಟ್ಟದ ತುಟ್ಟತುದಿಯಲ್ಲಿ ಏಕಾಂಗಿಯಾಗಿ, ಮೌನಿಯಾಗಿ ಕುಳಿತುಬಿಟ್ಟರು. ಇದೇ ಸ್ಥಳದಲ್ಲಿ ಶ್ರೀಮನ್ನಿಜಗುಣರು ತಪೋಗೈದ ತಲ್ಪ ಎಂದು ಭಾವಪರವಶರಾದರು. ನಿಜಗುಣರೆಂದರೆ ಬಸವಲಿಂಗರಿಗೆ ಆರಾಧ್ಯದೈವ. ಅವರು ಬರೆದ ಕೈವಲ್ಯಗಳು ಜೀವದ ಜೀವ. ಹೀಗಿರುವಾಗ ಚಿಲಕವಾಡಿಯ ಓರ್ವ ಶರಣ ಬಂಧು ತಮ್ಮ ಮನೆಯಲ್ಲಿರುವ ತಾಳೆಗರಿಗಳ ಕಟ್ಟನ್ನು ಬಸವಲಿಂಗ ಶ್ರೀಗಳ ಸನ್ನಿಧಿಗೆ ತಂದು ಅರ್ಪಿಸಿದನು. ಅದನ್ನು ತೆರೆದು ನೋಡಿ ಕುಣಿದಾಡಿದರು. ಅದು ನಿಜಗುಣರ ಕೈವಲ್ಯದ ಕಂಪಾಗಿತ್ತು.

ಏಳು ಸುನಿಯಾಮದಿಂದೇಳು ಕುಟಿಲದ ಭಜಗ

ನೇಳು ತೋರುವ ಪ್ರಣವದೇಳು ಭೇದವನು ಕಂ

ಡೇಳು ಸುಜ್ಞಾನ ಭೂಮಿಕೆ ಸಿದ್ಧಿಯಾಗಿ ಪದಿನೇಳು ತತ್ವದ ತನುವನು

ಏಳು ಜನ್ಮದ ಕಲುಷವನು ಜಯಿಪ ಯೋಗಿವರ

ರೇಳು ತಾರಾಗ್ರಹದೊಳು ಕೇಳುವ ಸುನಾದಾತ್ಮಾ

ಏಳು ಮಲಪಾಶ ದೂರನೆ ಶಂಭುಲಿಂಗ ನೀನೇಳು ಮುನಿಕುಲವಂದ್ಯನೆ.

           ನಿಜಗುಣ ಶಿವಯೋಗಿಗಳ ಶಿವಕಾರುಣ್ಯದ ಸ್ಥಲದ ಈ ಏಳು ಎನ್ನುವ ತಾದ್ಯಾತ್ಮ ಸಿದ್ಧಿ ಬಡಿದೆಬ್ಬಿಸಿತು. ಸತತ ೧೨ ವರ್ಷಗಳ ಕಾಲ ಕಠೋರ ಸಿದ್ಧಿಯನ್ನು ಬಸವಲಿಂಗರು ಸಾಧಿಸಿದರು. ಇವರ ಸಾಧನೆಯನ್ನು ಕಂಡ ಕೊಳ್ಳೆಗಾಲದ ಪರಿಸರದ ಬಾಂಧವರೆಲ್ಲ ಸೇರಿ ಸುಕ್ಷೇತ್ರ ಯಳಂದೂರು ಶ್ರೀಮಠಕ್ಕೆ ಅಧಿಕಾರಿಗಳಾಗಲು ಬಿನ್ನವಿಸಿಕೊಂಡರು. ಎಲ್ಲ ಮಠ-ಪೀಠಗಳ ಹಂಗು ತೊರೆದ ನನಗೆ ಯಾವ ಮಠಗಳ ಸಹವಾಸ ಬೇಡ ಎಂದು ಏನೆಲ್ಲ ಮಾತನಾಡಿದರು. ಆದರೆ ದೈವಪ್ರೇರಣೆ ಬೇರೆಯಿತ್ತು. ಗುರುಹಿರಿಯರ ಒತ್ತಾಯಕ್ಕೆ ಮಣಿದು ಯಳಂದೂರು ವಿರಕ್ತಮಠದ ಅಧಿಪತಿಗಳಾದರು. ದಿನದಿಂದ ದಿನಕ್ಕೆ ಪೂಜ್ಯಶ್ರೀಗಳ ತಪಃ ಪ್ರಭಾವ ಪಸರಿಸತೊಡಗಿತು. ಅಲ್ಲಿಂದ ನಿಜಗುಣರ ಸಾಹಿತ್ಯದ ಮರ್ಮವನ್ನು ಅರಿಯಲು ಹುಬ್ಬಳ್ಳಿಗೆ ಆಗಮಿಸಿದರು.

ಹುಬ್ಬಳ್ಳಿಯಲ್ಲಿ ಹೃದಯವಂತ

           ಅದಾಗಲೇ ನಿಜಗುಣರ ಕೈವಲ್ಯ ಸಾಹಿತ್ಯವನ್ನು ಒಂದು ಶಾಸ್ತ್ರ ಆಚರಿಸಿಕೊಂಡು ಬಂದಿದ್ದರು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳವರು. ನಾಡಿನ ಅನೇಕ ಯತಿಗಳು, ಸಾಧಕರು, ಶರಣರು ಚಿಂತಕರು ನಿತ್ಯವೂ ಸಿದ್ಧಾರೂಢ ಅಪ್ಪಂಗಳು ಕೈಲಾಸ ಮಂಟಪದಲ್ಲಿ ಭಾಗಿಯಾಗುತ್ತಿದ್ದರು. ಹುಬ್ಬಳ್ಳಿಯ ಸಿದ್ಧಾರೂಢರ ಹತ್ತಿರ ಬಂದು ಪರಸ್ಪರ ಭೇಟಿ ಮಾಡಿ, ಗಹನವಾಗಿ ಬಸವಲಿಂಗರು ಚಿಂತನದಲ್ಲಿ ತೊಡಗಿದರು. ಚರ್ಚೆಗಳು ಆರಂಭವಾದವು. ಎರಡು ಮಹಾಚೇತನಗಳು ಪರಸ್ಪರ ಸತ್‌ಚಿಂತನೆಯಲ್ಲಿ ತೊಡಗಿದ್ದನ್ನೇ ಆಲಿಸುತ್ತ ಕುಳಿತಿದ್ದ ಓರ್ವ ಶ್ರೇಷ್ಠ ಸಾಧಕ. ಶಾಸ್ತ್ರ ಚಿಂತನಗಳನ್ನು ಪೂರೈಸಿ ಬಸವಲಿಂಗ ಸ್ವಾಮಿಗಳು ಹೊರಗೆ ಬಂದು ನಿಂತರು. ಬೆನ್ನ ಹಿಂದೆಯೇ ಓಡಿ ಬಂದ ಈ ಸಾಧಕ ಸಾಷ್ಟಾಂಗವೆರಗಿದ.

ಹಾಲಯ್ಯ ದೇವರಿಗೆ ಹರಕೆ!

           ಅಷ್ಟರಲ್ಲಿಯೇ ಗುರುಗಳು ನಾವು ಸಂಚಾರಕ್ಕೆ ಹೋಗಬೇಕು ಎಂದರು. ನೀರು ತುಂಬಿದ ಚರಿಗೆಯನ್ನು ತುಂಬಿ ಬಸವಲಿಂಗರ ಬೆನ್ನು ಹತ್ತಿದ. ಸೂಕ್ಷ್ಮತೆಯಿಂದ ಗ್ರಹಿಸಿದ ಶ್ರೀಗಳು ‘ತಮ್ಮಾ ಯಾರು ನೀನು’ ಅಂದರು. ‘ಅಜ್ಜಾರ ನಾನು ‘ಹಾಲಯ್ಯ ದೇವರು. ಹಾನಗಲ್ಲ ತಾಲೂಕು ಜೋಯಿಸರ ಹಳ್ಳಿಯಿಂದ ಬಂದಿದ್ದೀನ್ರಿ. ನಿತ್ಯ ಶಾಸ್ತç ಕೇಳಾಕ ಸಿದ್ಧಾರೂಢರ ಮಠಕ್ಕೆ ಬರತೀನ್ರಿ. ವಾಸ್ತವ್ಯ ಇದೇ ಊರಿನ ರುದ್ರಾಕ್ಷಿಮಠದಲ್ಲಿ ಇರತೀನಿ’ ಎಂದ. ಹೀಗೆ ತನ್ನ ಜೀವನದ ಬಾಲ್ಯದ ವಿವರಗಳನ್ನು ನೀಡಿದವರೇ ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ಅವರ ಬಾಲ್ಯದಲ್ಲಿ ಸಾಧಕರಾಗಿದ್ದಾಗ ಕರೆಯುತ್ತಿದ್ದ ಮೂಲ ಹೆಸರು ಹಾಲಯ್ಯ. ಹಾಲಯ್ಯದೇವರು. ದೇವರ ವಿನಯ, ಭಕ್ತಿ ಸೌಜನ್ಯ ಕಂಡು ಬಸವಲಿಂಗರು ಸಂತಸಪಟ್ಟರು. ನಿರ್ಜನ ಪ್ರದೇಶದಲ್ಲಿ ಸಂಚಾರ ಮುಗಿಸಿ, ಒಂದು ಬಾವಿಯ ತಟದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದಾರೆ.

           ಹಾಲಯ್ಯದೇವರು ಮನ ಬಿಚ್ಚಿ ಮಾತನಾಡಿದರು. ಅಜ್ಜಾ ಅವರ ಸಿದ್ಧಾರೂಢರ ಮುಂದ ತಾವು ಲಿಂಗಾಂಗಸಾಮರಸ್ಯದ ಕುರಿತು ಮಾತನಾಡಿದ ಮಾತು ಕೇಳಿ ನನಗ ಬಹಳ ಸಂತೋಷ ಆತರೀ ಎಂದರು. ಆಗ ಮುಗುಳ್ನಕ್ಕ ಬಸವಲಿಂಗರು ಹೇಳುತ್ತಾರೆ. ‘ಏ ಮರೀ ನೀನು ಆರೂಢಮಠದ ಶಿಥಿಲಾಚರಣೆಯಲ್ಲಿ ಸಿಲುಕಿಕೊಂಡಿ ರುವೆ. ಇಲ್ಲಿ ಲಿಂಗ ಲಿಂಗಾಂಗ ಸಾಮರಸ್ಯ ಶಿವಯೋಗ ಸಾಧನೆ ಸಾಧ್ಯವಾಗೋದಿಲ್ಲೋ ತಮ್ಮಾ’ ಎಂದರು. ‘ಯಪ್ಪಾ ನೀವ ನನ್ನ ಉದ್ಧರಿಸಬೇಕು’ ಎಂದು ಪ್ರಾರ್ಥಿಸಿದರು. ಹಾಲಯ್ಯನ ಹಸಿವು ಕಂಡ ಸಿದ್ಧಿಪುರುಷ ಬಸವಲಿಂಗರು ‘ಆಗಲಿ ತಮ್ಮಾ ನಿನಗ ಲಿಂಗಾಂಗಯೋಗದ ಸಕೀಲ-ಸಾಧನೆಯ ಸಮಗ್ರತೆ ತಿಳಿಸುತ್ತೇನೆ, ಬಾ ನನ್ನೊಂದಿಗೆ ಅಂದರು. ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು. ಹಾಲಯ್ಯದೇವರು ಬಸವಲಿಂಗರ ಬೆನ್ನು ಹತ್ತಿದರು.

ಹಾಲಯ್ಯ-ಕುಮಾರ ಸ್ವಾಮಿಗಳಾದರು

           ಸಂಚಾರ ಮಾಡುತ್ತ ನೇರವಾಗಿ ತೋಂಟದಾರ್ಯ ಸಂಸ್ಥಾನಮಠ ಅಣ್ಣಿಗೇರಿಗೆ ದಯಮಾಡಿಸಿದರು. ಹಾಲಯ್ಯದೇವರು ಕಜ್ಜಾಯ ಭಿಕ್ಷೆ ಮಾಡಿಕೊಂಡು ಬರುತ್ತಿದ್ದರು. ಬಸವಲಿಂಗ ಸ್ವಾಮಿಗಳೊಂದಿಗೆ ಸೇರಿ ಪೂಜಾ ಪ್ರಸಾದ ನೆರವೇರಿಸುತ್ತಿದ್ದರು.

           ಗದುಗಿನ ತೋಂಟದಾರ್ಯಮಠದ ಪೀಠವೇರಬೇಕಿದ್ದ ಬಸವಲಿಂಗರು ಕೆಲವೊಂದು ಘಟನೆಗಳಿಂದ ಅಣ್ಣಿಗೆರಿಯಲ್ಲಿ ನೆಲೆಸಿದ್ದರು. ಜನರ ಬಾಯಿಂದ ಬಾಯಿಗೆ ಹರಿದಾಡಿತು. ಹಾಲಯ್ಯ ದೇವರಿಗೆ ಯೌಗಿಕ ಮಾರ್ಗವನ್ನು ತಿಳಿಹೇಳುತ್ತಿದ್ದರು. ಅಲ್ಲಿಂದ ಶಂಭುಲಿಂಗ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕೆಲವು ವರ್ಷ ಅನುಷ್ಠಾನ ಮಾಡಿಸಿದರು. ಅಲ್ಲಿಂದ ತಾವು ಪೀಠವೇರಿದ್ದ ಯಳಂದೂರು ವಿರಕ್ತಮಠಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಯವರೆಗೂ ದೇವರಾಗಿದ್ದ ಹಾಲಯ್ಯ ದೇವರಿಗೆ ಬಸವಲಿಂಗ ಮಹಾಸ್ವಾಮಿಗಳು ೧೮೯೨ರಲ್ಲಿ ಹಸ್ತಮಸ್ತಕ ಸಂಯೋಗ ಮಾಡಿ ಚಿನ್ಮಯಾನುಗ್ರಹ ದೀಕ್ಷೆಯನ್ನು ಯಳಂದೂರು ಮಠದಲ್ಲಿ ದಯಪಾಲಿಸುತ್ತಾರೆ. ಅಂದಿನಿಂದ ಹಾಲಯ್ಯ ದೇಶಿಕರಾಗಿ ನೂತನ ನಾಮದೊಂದಿಗೆ ಮನ್ನಡೆಯುತ್ತಾರೆ. ಸಾಧನೆಯ ಅನುಗ್ರಹ ದಯಪಾಲಿಸಿದರು. ಇದಾದ ನಂತರ ನೇರವಾಗಿ ಅಣ್ಣಿಗೇರಿಗೆ ಬಂದು ನೆಲೆಸಿದರು ವೈರಾಗ್ಯನಿಧಿ ಬಸವಲಿಂಗ ಸ್ವಾಮಿಗಳು. ಬಸವಲಿಂಗ ಗುರುಗಳು ಸಾನಿಧ್ಯದಿಂದ ಹಾಲಯ್ಯ ದೇವರಲ್ಲಿದ್ದ ಅಧ್ಯಾತ್ಮ ಬೆಳಗು ಬೆಳಗತೊಡಗಿತು.

           ಅವಿಶ್ರಾಂತ ಅರವಿಂದರಾಗಿ ನಾಡಿನ ಹಾಗು ಸಾಧಕರ ಅಭ್ಯುದಯಕ್ಕಾಗಿ ಶ್ರಮಿಸಿದ ಬಸವಲಿಂಗ ಮಹಾಸ್ವಾಮಿಗಳು ವಯೋಸಹಜ ಒಂದಿಷ್ಟು ಆರೋಗ್ಯ ತೊಂದರೆಯಿಂದಾಗಿ ಕ್ರಿ.ಶ. ೧೮೯೪ರಂದು ಅಣ್ಣಿಗೇರಿ ಶ್ರೀ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯರಾದರು. ಅಂದು ಗದುಗಿನ ತೋಂಟದಾರ್ಯಮಠದ ಜಗದ್ಗುರುಗಳಾಗಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕ್ರಿಯಾಸಮಾಧಿ ನೆರವೇರಿತು.

           ಯೋಗಸಿದ್ಧಿಯ ಶಿವಪುರುಷ ಯಳಂದೂರು ಬಸವಲಿಂಗಪ್ರಭುಗಳು ಬಯಲಿನಲ್ಲಿ ಬಯಲಾದರು.

ಗ್ರಂಥಋಣ:

೧.       ಎಳಂದೂರು ಬಸವಲಿಂಗ ಸ್ವಾಮಿಗಳು

           ಪ್ರ: ತೋಂಟದಾರ್ಯಮಠ, ಗದಗ, ೧೯೯೦

೨.       ಹಾನಗಲ್ಲ ಗುರುಕುಮಾರ ಸ್ವಾಮಿಗಳು : ಗುರುಕಂದ

           ಪ್ರ: ಶಿವಯೋಗಮಂದಿರ ಸಂಸ್ಥೆ, ಶಿವಯೋಗಮಂದಿರ, ೨೦೧೦

ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

ಇಬ್ಬರೂ ಕುಮಾರ ಸ್ವಾಮಿಗಳೇ. ಆದರೆ ಒಬ್ಬರು ಗುರು ; ಇನ್ನೊಬ್ಬರು ಶಿಷ್ಯರು.ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಲಿಂಗೈಕ್ಯ ಬಿದರಿ ಕುಮಾರ ಶಿವಯೋಗಿಗಳೇ ಗುರುಗಳೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾನಗಲ್ಲಿನ ಫಕೀರ ಸ್ವಾಮಿಗಳು ಅಂತಿಮ ದಿನಗಳನ್ನು ಲಿಂಗ ಪೂಜೆಯಲ್ಲಿ ಕಳೆಯುತ್ತಾ ಬಿದರಿಯ ಕುಮಾರ ಶಿವಯೋಗಿಗಳನ್ನು ಕರೆಯಿಸಿ ತಮ್ಮ ಪೀಠಕ್ಕೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ನಿಯಮಿಸಬೇಕೆಂದು ಅವರಿಂದ ಸಮ್ಮತಿ ಪಡೆದು ಕೆಲವೇ ದಿನಗಳಲ್ಲಿ ಲಿಂಗೈಕ್ಯವಾದರು.

ಪೂಜ್ಯರ ದೃಷ್ಟಿಗೆ, ಹಾಲಯ್ಯ ದೇಶಿಕೋತ್ತಮರೆ ಆಗ ಹೃದ್ಗೋಚರವಾದರು. ತಪಸ್ಸು, ಸಮಾಜಸೇವೆ ಎಂಬ ದೈತದಲ್ಲಿ ಅದ್ವೈತ ಸಾಧಿಸಲು, ಅಲ್ಲಲ್ಲಿ ಅನುಷ್ಠಾನ ಗಳನ್ನು ಕೈಗೊಳ್ಳುವಲ್ಲಿ ತತ್ಪರರಾಗಿದ್ದ ಅವರನ್ನು ಹಾನಗಲ್ಲಿನ ಮಠಾಧಿಕಾರದಂತಹ ಉಪಾಧಿಗೆ ಹಚ್ಚುವುದು ಸರಳವಾದ ಮಾತಾಗಿರಲಿಲ್ಲ!

ಪೀಠ ಒಂದು ಉಪಾದಿಯಾದರೂ ಅದಕ್ಕೆ ತಮ್ಮ ಅಗತ್ಯವಿದೆ, ತಮ್ಮಿಂದಾಗಿ ಅದು ಒಂದು ಘನತೆಯನ್ನು ; ತಮ್ಮಂತಹ ಸಾಧಕರಿಗೆ ಬೇಡವೆಂಬುದು ಭವಕ್ಕೆ ಬೀಜ ಎನ್ನುವುದನ್ನು ; ಷಟ್ ಶಾಸ್ತ್ರ ಬಲ್ಲವರಿಗೆ ನಾನು ವಿವರಿಸುವುದು ಅಷ್ಟು

ಉಚಿತವಾಗುವುದಿಲ್ಲ! ಎಂದೆಲ್ಲ ; ನುಡಿದು ಅವರ ಮನವಲಿಸಲು ಯಶಸ್ವಿಗಳಾದ ಅಂದು ಕುಮಾರಶ್ರೀಗಳು.

ವೈರಾಗ್ಯದ ಮಲ್ಲಣಾರ್ಯರು ಬಂದು ಒರಟು ಮಾತುಗಳನ್ನಾಡಿದರೂ ನಗುನಗುತ್ತಾ ಆಗಿಂದಾಗಲೆ ಮಠವನ್ನು ತೊರೆದು, ಅವರ ಸದಾಪೇಕ್ಷೆಯನ್ನು ಎರಡು ಬೃಹತ್ತ ಸಂಸ್ಥೆಗಳನ್ನು ಕಟ್ಟುವದರ ಮೂಲಕ ಈಡೇರಿಸಿದುದು ಈಗ ಇತಿಹಾಸ ಸೇರಿಹೋದ ಮಾತು, ಸಮಾಜ ಉಳಿಸಬಲ್ಲಂತಹ ಯೋಗ್ಯತೆಯನ್ನು ಶ್ರೀಗಳು ಆಗಲೆ ಅವರಲ್ಲಿ ಕಂಡುಕೊಂಡಿದ್ದರು.

ಅಂದಿನ ಅವರ ವಯಕ್ತಿಕ ತ್ಯಾಗವು ಸಾಮೂಹಿಕವಾಗಲು ಹಂಬಲಿಸಿದುದರ ಫಲವಾಗಿಯೇ ಇಂದು ಸಮಾಜವು, ಮೇಲೆ ನಿರೂಪಿಸಿದ ಆ ಎರಡು ಸಂಸ್ಥೆಗಳ ಬೆಳವಣಿಗೆಯ ಪರಿಣಾಮವನ್ನು ಹಲವಾರು ರೀತಿಯಲ್ಲಿ ಬಳಸಿಕೊಂಡಿದೆ. ಈ ಎರಡು ಸಂಸ್ಥೆಗಳು ಲಿಂಗಾಯತವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿವೆಯನ್ನುವ ಅನುಭವ ಎಲ್ಲರಿಗೂ ಅವಗತವಾದ ವಿಷಯ.

ಬಸವಣ್ಣ ಎಲ್ಲರಿಗೂ ಒಂದೊಂದು ಕಾಯಕವನ್ನು, ವ್ಯಕ್ತಿ ಗೌರವವನ್ನು ಪ್ರತಿಪಾದಿಸಿದರು. ತನ್ಮೂಲಕ ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆಲ್ಲ ಸರಿ ! “ಕುರುಡರಿಗೆ ಕಾಗತಿ ?” ಎಂದು ಕೇಳಿದರೆ ! ?

“ಮೌನವೇ ಉತ್ತರ’ವಾಗಬಾರದೆಂದು ಉದ್ದೇಶದಿಂದಲೋ ಏನೋ ! ಗದುಗಿನಲ್ಲಿ “ವೀರೇಶ್ವರ ಪುಣ್ಯಾಶ್ರಮ’ವು ಅಸ್ತಿತ್ವಕ್ಕೆ ಬಂದಿತು.

“ನೀನೊಲಿದರೆ ಕೊರಡು ಕೊನರುವುದಯ್ಯ ;

ನೀನೊಲಿದರೆ ಬರಡು ಹಯನಹುದಯ್ಯ’

ಎಂಬುದು ಆಶ್ರಮದ ಉಗಮದಿಂದ ಬಸವನಂಬಿಕೆಗೊಂದು ಬಲ ಬಂದಂತಾಯಿತು. “ಹಣಮುಟ್ಟದವರೆ ಇಂದು ಮಹಾತ್ಮಾ’ ಎಂದು ಜನರ ಮನದಲ್ಲಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಹಾಗಾಗಿ ನಿಂತವರು ಹಣದ ಸಂದರ್ಭದಲ್ಲಿ, ಚರ್ಚೆಗೂ ಗ್ರಾಸವಾಗಬಾರದು. ಏಕೆಂದರೆ ನಿಜವಾದ ಆಧ್ಯಾತ್ಮಿಕ : ಬೇಡವೆಂಬುದು ಭವಕ್ಕೆ ಬೀಜ“ ಬಿಡಬೇಕು ಬಲುಹಿಂದೆ ಬರಿದೆ ತನ್ನಿರವನು” ಎನ್ನುತ್ತಾರೆ ನಿಜಗುಣರು ಈ ಮೇಲಿನ ಭೂಮಿಕೆಯು ಲಿಂಗೈಕ್ಯ ಹಾನಗಲ್ಲ ಶ್ರೀಗಳಿಗೆ ಸಂಬಂಧಿಸುದುದರಿಂದ ಅವರ ಘನವಾದವ್ಯಕ್ತಿತ್ವವು ಹಣವೆಂಬುದನ್ನು ಹೇಗೆ ? ಅದನ್ನು ಮುಟ್ಟದ ಸದ್ವಿನ ಯೋಗಿಸಬೇಕೆಂಬುದರಲ್ಲಿ ವ್ಯಕ್ತವಾಗುತ್ತದೆ. ಶ್ರೀಗಳ ದೂರದೃಷ್ಟಿಕೋನಕ್ಕೆ ಅವರಿಂದ ಸ್ಥಾಪಿತವಾದ ಹಿಂದೆ ವಿವರಿಸಿದ ಸಂಸ್ಥೆಗಳು ; ನಿಸ್ಪೃಹತ್ವದ ಬಿಕ್ಷೆಯ ಅಲೆದಾಟಗಳು ವಿವೇಚಕರಿಗೆ  ಗೌರವಪಡುವಂತಹ ಸಂಗತಿಗಳಾಗಿದ್ದವು ; ಈಗಲೂ ಅವು ಯತಿಗಳಾದವರಿಗೆಲ್ಲ ಮಾದರಿಯಾದವುಗಳೆಂಬುದನ್ನು ಯಾರೂ ಮರೆಯಬಾರದು

. ಕೇವಲ ಧರ್ಮದ, ಶಾಸ್ತ್ರದ ಭೀಕರ ಪ್ರವಚನಗಳನ್ನು ಉದುರಿಸಿ, ಕಪ್ಪು ಕಾಣಿಕೆ ಯನ್ನು ಪಡೆದು ಮಾಯವಾಗಿಬಿಡುವ ಸ್ವಾಮಿಗಳವರಾಗಿರಲಿಲ್ಲಾ.

 ಕರ್ನಾಟಕ ಯಾವ ಮೂಲೆಯಲ್ಲೂ ಅವರಿಗೆ ಜನ ತೊಂದರೆ ಪಡುವುದನ್ನು ಕೇಳಲಾಗುತ್ತಿರಲಿಲ್ಲ. ಕಾಲ್ನಡಿಗೆಯಿಂದಲೂ ತಮ್ಮ ಮಡಿಗೆಬಾಧ್ಯವಾಗದ ಚಕ್ಕಡಿ ಏರಿಯೊ, ಅಂಥಲ್ಲಿಗೆ ಹೋಗಿ ಜನರಲ್ಲಿ ಸಾಮರಸ್ಯ ಬರುವವರೆಗೆ, ಆ ಊರನ್ನು ಬಿಟ್ಟು ಕದಲುತ್ತಿರಲಿಲ್ಲವೆಂದು ಹಳಕಟ್ಟಿಯವರು ಶಿವಯೋಗಮಂದಿರದ ಬೆಳಗೆನಲ್ಲಿ ಸ್ಮರಿಸುತ್ತಾರೆ. ಜನತೆ, ಶ್ರೀಗಳು ವಿಶಾಲಮನೋಭಾವವರಿತು ಊರಲ್ಲಿ ಮತ್ತೆಂದೂ ಜಗಳ ಕಾಯಲು ಹೋಗುತ್ತಿರಲಿಲ್ಲ,

ಹೀಗೆ ಶ್ರೀಗಳ ಬಗೆಗೆ ಬರೆಯುತ್ತ ಹೋದರೆ, ಅವರದು ಮುಗಿಯದ ಚರಿತ್ರೆ. ನಾವಾಗಿಯೇ ಅವರ ಚರಿತ್ರೆಯ ಬರಹಕ್ಕೆ ಅನಿವಾರ್ಯವಾಗಿ ಒಂದು ಸೀಮೆಯನ್ನು ಕೊರೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ ವಿಷಯಕ್ಕೆ ಬರುತ್ತೇನೆ : ಶ್ರೀಗಳು ಹಲವಾರು ಸುಂದರ-ತಾತ್ವಿಕ ಪದಪದ್ಯ ಮಂಗಳಾರುತಿ ಪದಗಳನ್ನು ರಚಿಸಿದುದು ಧರ್ಮ ಜಿಜ್ಞಾಸುಗಳಿಗೆಲ್ಲ ಗೊತ್ತಿರುವ ಸಂಗತಿ. ಲಿ೦. ಬಿದರಿ ಕುಮಾರಶಿವಯೋಗಿಗಳನ್ನು ಕೊಂಡಾಡುತ್ತ ರಚಿಸಿದ ಮಂಗಲಗೀತೆಗಳು ಬಹಳ ಯೋಗಿಕ ಅನುಭಾವದ ಮೌಲ್ಯವನ್ನು ಹೊಂದಿವೆ. ನಮ್ಮ ಜಮಖಂಡಿಯ ಬೇರೊಬ್ಬ ದಾರ್ಶನಿಕನ ಅವುಭವದ ನಿಲಸುವಿಗೆ ಸಮದಂಡಿಯಾಗಿ ನಿಂತು, ನಮ್ಮ ಸಮಕಾಲೀನ ಒಬ್ಬ ಮಹಾಶಿವಯೋಗಿಯ ಅನುಭಾವಸಂಪತ್ತನ್ನು ಕೂಡಿಸಿ ಓದುವ ಸೌಭಾಗ್ಯದ ಆನಂದ ಬೇರೆಯೇ ಆಗಿರುತ್ತಿತ್ತು ಎಂದು, ರಾನಡೆ ಸಾಹಿತ್ಯ ಓದಿದವರಿಗೆಲ್ಲ ಅನ್ನಿಸುವುದು ಸಹಜ. ಒಂದು ವೇಳೆ ಡಿ.ಸಿ. ಪಾವಟೆಯ

ವರಂತಹವರು ಶ್ರೀಯುತರ ಕೈಗೆ ಇಂತಹ ಪದ್ಯವೊಂದನ್ನು ತಲುಪಿಸಿದ್ದರೆ, ಅಲ್ಲವೆ !ಇದೆಲ್ಲ ಸಾಧ್ಯವಾಗಬಹುದಿತ್ತು.

ಇದು ಆ ಮಂಗಲ ಪದ್ಯ

ಯೋಗಿರಾಡ್ಜಯ ಮಂಗಲಂ|| ಪರತರಶಿವ||

ಯೋಗಿರಾಡ್ಜಯ ಯ ಮಂಗಲಂ

ಲಿಂಗಾಂಗೊಭಯಸಂಗ ಶರಣರಪುಂಗಾ||

ಅಂಗಜಭವಭಂಗ!!

ಮಂಗಲಾತ್ಮಕ ಭಕ್ತ ಜನ ಜನ ಹೃದ್ವಾಸನೇ? ಶ್ರೇಷನೇ!!

ಜಂಗಮಾರ್ಪಿತ ಸತ್ಕ್ರಿಯಂಗಳ ದಕ್ಷನೇ ನಿರ್ಪೆಕ್ಷನೇ!!

ಯೋಗಿರಾಡ್ಜಯ ಮಂಗಲಂ ||ಪರತಿರತಿವ!!

ಯೋಗಿರಾಡ್ಜಯ ಮಂಗಲಂ

ಈಡಪಿಂಗಳ ಜೋಡಿಸಿ ಹರಿದಾಡುವ 11

ಜೋಡಕ್ಕರವ ಕೂಡಿಸಿ

ಕೂಡಿನಡುನಾಡಿಯೊಳಡರ್ದತಿ ಶಾಂತನೇ! ಕಾಂತನೇ!!

ನಾಡದಶವಿಧ ನಾದದೊಳಗತಿ! ಗುಪ್ತನೇ! ಪರಮುಕ್ತನೇ!!

ಯೋಗಿರಾಡ್ಜಯ ಮಂಗಲಂ 11ಪರತರಶಿವ||

ಯೋಗಿರಾಡ್ಜಯ ಮಂಗಲಂ

ಮಂಡಲತ್ರಯದಗ್ರದಗ್ರದಿ ದೀಪಿಸುತಿಹ| ಅಖಂಡ ಜ್ಯೋತೆಯ ತೆರದಿ||

ಮಂಡಿಸಿಹಕುಮಾರಗುರು ಶಿವಯೋಗಿಯೇ। ತ್ಯಾಗಿಯೆ!ಅ

ಖಂಡ ವಿಷಯವನೈಕ್ಯಗೊಂಡಿಹು ದಾನಿಯೇ! ಸುಯ್ಡಾನಿಯೇ!!

ಯೋಗಿರಾಡ್ಜಯ ಮಂಗಲಂ ||ಪರತರಪಶಿವ||

ಯೋಗಿರಾಡ್ಜಯ ಮಂಗಲಂ

ಈ ಮಂಗಲಪದ್ಯ ಬಿದರಿ ಕುಮಾರ ಶಿವಯೋಗಿಗಳ ಅಮೋಘ ವ್ಯಕ್ತಿತ್ವವನ್ನು ಪ್ರತಿಪಾದಿಸಿದೆ. ಹಾನಗಲ್ಲ ಲಿಂll ಕುಮಾರಶಿವಯೋಗಿಗಳು ಶ್ರೀಗಳ ಆಪ್ತ ಶಿಷ್ಯರಲ್ಲಿ ಒಬ್ಬರು, ಅವರಲಿಂಗೈಕ್ಯದ ಸಂದರ್ಭದಲ್ಲಿ ತಾವೇ ರಚಿಸಿ ಹಾಡಿದುದಾಗಿ ಹಿರಿಯ ಸ್ವಾಮಿಗಳೊಬ್ಬರು ಹೇಳಿದ ನೆನಪು. ಈ ಪದ್ಯವನ್ನು ಈಗಲೂ ಶಿವಯೋಗ ಮಂದಿರದಲ್ಲಿ, ತುಂಬ ಚನ್ನಾಗಿ ವಟುಸಾಧಕರು ದಿನನಿತ್ಯ ಹಾಡುತ್ತಾರೆ. ಕರ್ನಾಟಕ ಸಂಗೀತದಲ್ಲಿ ಹಾಡಲಾಗುವ ಈ ಮಂಗಲಕ್ಕೆ ವಿಶಿಷ್ಟವಾದ ಏರು ಇಳುವುಗಳಿವೆ  ಕೇಳುತ್ತ ಹೋದಂತೆ ಹಾಡುತ್ತಾ ಹೋದಂತೆ, ಹಾಡುವವರನ್ನು ಕೇಳುವವರನ್ನು ತೂರ್ಯಾವಸ್ಥೆಗೆ ಒಯ್ಯುವ ಮಾಂತ್ರಿಕತೆಯು, ಈ ಮಂಗಲ ಪದ್ಯಕ್ಕಿದೆ.

“ಶಿವಮಂಗಲವನ್ನು ಕೊಡುಬೇಗ ಭವದುಃಖದಿ ಬಳಲುವೆವೀಗ” ಎಂಬ ಮಂಗಲಪದ್ಯವೂ ತುಂಬ ಪ್ರಾಖ್ಯಾತ. ಜನಸಾಮಾನ್ಯರ ತುದಿ ನಾಲಗೆಯಲ್ಲಿ ಈ ಪದ್ಯ ರಾರಾಜಿಸುತ್ತಿರುತ್ತದೆ. ಈ ಪದ್ಯವು ಹಾನಗಲ್ಲ ಕಮಾರಶಿವಯೋಗಿಗಳದ್ದೆಂದು ನನಗೆ  ತಡವಾಗಿ ತಿಳಿಯಿತು. ಇರಲಿ ! ತಮಗೆ ಚಿನ್ಮಯಾನುಗ್ರಹದೀಕ್ಷೆನೀಡಿದ ಗುರುಗಳ ಯೋಗಿಕ ಸಾಮರ್ಥ್ಯವು ಈ ಪದ್ಯದತುಂಬೆಲ್ಲ ಚೆಲ್ಲುವರೆದಿದೆ. ಇವರಿಂದ ರಚಿತವಾದ ಎಲ್ಲ ಪದ್ಯಗಳಿಗಿಂತ, ಈ ಪದ್ಯ ಕಾರಣದಿಂದಾಗಿ ಇರಬಹುದು ಇದಕ್ಕೆ ಇದರದೆ ಆದ.,ವೈಶಿಷ್ಟ್ಯವಿದೆ. ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ’ ಎಂಬ ತಾತ್ವಿಕ ಮಂಗಲವು ವೇದಾಂತಿಗಳಿಗೂ, ವೀರಶೈವ-ಲಿಂಗಾಯತರಿಗೂ, ತುಂಬ ಪರಿಚಯದ ಮಂಗಲಪದ್ಯವದು. ದರ್ಶನದ ಹಿನ್ನೆಲೆ ಆ ಮಂಗಲಕ್ಕಿದೆ. ‘ಜಯಮಂಗಲಂ ನಿತ್ಯಶುಭಮಂಗಲಂ’ ಎಂಬ ಬಾಲಲೀಲಾ ಮಹಾಂತ ಶಿವಯೋಗಿಗಳು, ತಮ್ಮನ್ನು ಬಸವಾದಿಪ್ರಮಥರ ಮಗು, ಎಂದು ವೀರಶೈವ- ಲಿಂಗಾಯತದ ಶುದ್ಧಮಾರ್ಗಾವಲಂಬಿಗಳಾಗಿ ತಾವೇ ರಚಿಸಿ ಹಾಡಿದ ಮಂಗಲಪದ್ಯ ಅದಾಗಿದೆ.

ಆದರೆ ಈ “ಯೋಗಿರಾಡ್ಜಯ ” ಎಂಬ ಮಂಗಲಪದ್ಯವು ಒಬ್ಬ ಜಂಗಮ ಮೂರುತಿ ಗೈದ ಸಾಧನೆ, ಸಿದ್ದಿ-ಎಲ್ಲ ಜಂಗಮರೂ ಸಾಧಿಸಲೇಬೇಕಾದ ಸಾಧ್ಯತೆಯ ದಿಗ್ದರ್ಶನವನ್ನು ಏಕಕಾಲಕ್ಕೆ ಮಾಡಿಸುತ್ತದೆ.

‘ಲಿಂಗಾಂಗಗಳ ಸಂಗದಲ್ಲಿ, ಅಂಗಗುಣಗಳನ್ನು ಅತಿಗಳೆಂದು, ಶರಣರಿಗೆ ಪುಂಗಜಂಗಮನೆನಿಸಿ, ಅಂಗದಿಂದ ಹುಟ್ಟುವ ಕಾಯವಿಕಾರ ಮನೋ ವಿಕಾರಗಳೆಂಬ ಭವತಾಪಗಳನ್ನು ಲಿಂಗ ನೆನಹಿನಿಂದ ಭಂಗಗೊಳಿಸಿ,ಮಂಗಲಾತ್ಮಕನಾಗಿ ಭಕ್ತ ಜನರ  ಹೃದಯದಲ್ಲಿ ವಾಸವಾಗಿರುವಂತಹ, ಶ್ರೇಷ್ಠ ಮಹಾಯೋಗಿಯೇ !  ಪರತರ ಶಿವಯೋಗಿಯೇ! ಎಂದು ಮಹಾಗುರವರ್ಯರನ್ನು ಹೃದಯದುಂಬಿ ಬಣ್ಣಿಸುತ್ತಾರಿಲ್ಲಿ ಪಲ್ಲವೀ ಹಾಗೂ ಪದ್ಯದ, ಒಂದನೆಯ ಭಾಗದಲ್ಲಿ ಇದು ಬಾಲಲೀಲಾ ಮಹಾಂತ ಶಿವಯೋಗಿಗಳು

“ಜಯಮಂಗಲಡಿ” ಎಂಬ ಮಂಗಲದ  ದಾರ್ಶನಿಕ  ನಿಲುವನ್ನು ಒಳಗೊಂಡಂತಹ ಮಂಗಲಪದ್ಯಇದಾಗಿರುವುದು ಮನವರಿಕೆ ಆಗಲಿರುವುದು,

ಅಂದಹಾಗೆ, ಬಾಲಲೀಲಾಮಹಾಂತ ಶಿವಯೋಗಿಗಳು, ತಮ್ಮನ್ನು ತಾವು :

“ಧರೆಯ ಭಕ್ತರು ಮಾಹೇಶ್ವರರಗಳ ಪುತ್ರನಿಗೆ |

ಶರಣ ಬಸವಾದಿ ಪ್ರಮಥರ ಕಂದಗೆ ||’

ಎಂಬುದಾಗಿ ಕರೆದುಕೊಳ್ಳುತ್ತಾರೆ .ಈ ಮಂಗಲಪದ್ಯದಲ್ಲಿಯೂ, “ಶರಣರಪುಂಗಾ”ಎಂಬಲ್ಲಿ ಅದು ಧ್ವನಿತವಾಗಿದೆ. ‘ಪೂರ್ವಾಶ್ರಮ ನಿರಸನಸ್ಥಲದಲ್ಲಿ ಎಲ್ಲ ಲಿಂಗಧಾರಿಗಳು ಬಸವಾದಿ ಶಿವಶರಣರ ಮಕ್ಕಳೆ, ಲಿಂಗ ಹಾಗೂ ಅಂಗ-ಇವೆರಡು, ಇಲ್ಲಿ ವಿಶ್ಲೇಷಣಾರ್ಹ ಪದಗಳಾಗಿ ನನಗೆ ಕಂಡಿವೆ. (ಈ ವಿಷಯದ ವಿವೇಚನೆಯು ಟಿ.ಎನ್. ಮಲ್ಲಪ್ಪನವರು ಬರೆದ ವಚನೋಪನಿಷತ್ತಿನಲ್ಲಿ ವಿಸ್ತಾರವಾಗಿರುವದನ್ನು ಗಮನಿಸಬಹುದು.) ಉಭಯಸಂಗ ಎಂಬಲ್ಲಿ ಇದು ವ್ಯಕ್ತವಾಗಲಿದೆ. ಅವುಗಳಲ್ಲಿ, ಕಾಣದ ಯಾವುದೋ ಜಂಗಮ ವ್ಯಕ್ತಿತ್ವವನ್ನು ಕೊಂಡಾಡುತ್ತಿಲ್ಲ. ಅವರ ಒಡನಾಡಿಗಳಾದ ಓರ್ವ ಸಾಕ್ಷಾತ್ ತಮ್ಮ ಗುರುವರರನ್ನು ಈ ಸಂದರ್ಭದಲ್ಲಿ ಕೊಂಡಾಡುತ್ತಿದ್ದಾರೆಂಬುದನ್ನು ಮರೆಯುವಂತಿಲ್ಲ.

ಅಂಗವೇ + ಲಿಂಗವಾಯಿತು ಲಿಂಗವೇ + ನಡೆಲಿಂಗವಾಗಿ = ಜಂಗಮ ವೆನ್ನಿಸುವುದು. ಇದು ಮುಂದಿನ ಯೋಗಿಕ ಸತ್ಕ್ರಿಯೆಗಳಿಂದ  ಪ್ರಾಪ್ತವಾಗುವಂತಹದು.

“ಇಡಾಪಿಂಗಳಜೋಡಿಸಿ” ಎಂಬ ಈ ಪದ್ಯದಲ್ಲಿ ಅಂಗ ಹಾಗೂ ಲಿಂಗ ಎರಡೂ ಜಂಗಮನಲ್ಲಿ ಹೇಗೆ ಕೆಲಸಮಾಡಬಲ್ಲವು ಎಂಬುದಕ್ಕೆ ವಿವರಣೆಯಾಗಿವೆ. ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಗತಿಗೆ ಆರು ನಿಲ್ದಾಣಗಳುಂಟು. ಅವು ಷಟ್ ಚಕ್ರಗಳೆಂದು ಕರೆಯಲಾಗಿದೆ. ಈ ಬಗೆಗೆ ಗುರುದೇವ ರಾನಡೆ ಅವರ, ‘ಕನ್ನಡ ಸಂತರ ಪಾರಮಾರ್ಥ ಪಥ’ದಲ್ಲಿಯ ಮಾತುಗಳನ್ನು ಓದಬೇಕು : “ನೀವು ಆ ಚಕ್ರಗಳನ್ನು ಸೇರಿ ಅವುಗಳೊಳಗಿಂದ ಮೇಲಕ್ಕೇರಬೇಕು. ಅಂದರೆ ನೀವು ಮಿದುಳಿನ ಶಿಖರವನ್ನು ಮುಟ್ಟುವಿರಿ. ಅಲ್ಲಿ ನಾಲ್ಕು ದಾರಿಗಳುಂಟು ; ಒಂದು ಮುಂಭಾಗದ ಕುಹರ, ಒಂದು ಹಿಂಭಾಗದ ಕುಹರ, ಎರಡು ಪಾರ್ಶ್ವದ ಕುಹರಗಳು. ನೀವು ಸುಷುಮ್ಮೆಯೊಳಗಿಂದ ಹಾದು, ಈ ನಾಲ್ಕು ದಾರಿಗಳು ಕೂಡುವಸ್ಥಳಕ್ಕೆ ಹೋಗಬೇಕು. ಈ ಸ್ಥಳವು ಬೇರೆಡೆ ಶೃಂಗಾಟಕವೆಂದು ಹೆಸರಿಸಲಾಗಿದೆ. ಈ ರೀತಿ ನೀವು ಸುಷುಮ್ಮಯೊಳಗಿಂದ ಏರಿ, ಮಿದುಳಿನಲ್ಲಿಯ ಈ ನಾಲ್ಕು ದಾರಿಗಳನ್ನು ಸೇರಿದರೆಂದರೆ, ನಿಮಗೆ ಭಗವಂತನ ದರ್ಶನವು ಲಭಿಸುವುದು” ಎಂಬುದಾಗಿ ವಿವರಿಸುತ್ತಾರೆ. (ಪು, ೨೩೦).

ಇಲ್ಲಿ, ಇಡಾ ಹಾಗೂ ಪಿಂಗಳ ಎಂಬನಾಡಿಗಳೇ, ಎರಡು ಕೈಗಳು, ಅವುಗಳನ್ನು ಕೂಡಿಸುವದು ಹರಿದಾಡುವ ಕೈಗಳನ್ನು ಕೂಡಿಸಿದಷ್ಟೇ ಸರಳವಾದುದು ಯೋಗಿಗಳಿಗೆ, ನಡುನಾಡಿಯೋಳು, ಕೂಡಿ ಅಡರಿದ ಅತೀ ಶಾಂತಯುತವಾದ ಕಾಂತಿಯು,

ನಿಜಗುಣರ,-“ಜ್ಯೋತಿ ಬೆಳಗುತಿದೆ” ಎಂಬ ಪದ್ಯದ ಗುಣ ಲಕ್ಷಣಗಳೆನ್ನೆಲ್ಲ ಪ್ರಕಾಶಿಸುತ್ತದೆ. ಜ್ಞಾನೇಶ್ವರರು ಕುಂಡಲಿನಿಯ ಬಗೆಗೆ ಹೇಳುತ್ತಾ ಅದರ ಬಣ್ಣವು ಕುಂಕುಮ ಬಣ್ಣದಂತಿರುತ್ತದೆ ಎನ್ನುತ್ತಾರೆ. ನಾಭಿಯ ಕೆಳಭಾಗದಲ್ಲಿ ಅದು ದುಂಡಾದ ಸಣ್ಣ ಹಾವಿನಂತೆ ಇರುವುದಾಗಿ ಹೇಳುತ್ತಾರೆ. ಡಾ. ರಾಯರವರ ಪ್ರಕಾರ ಅದು ಮೆದುಳುಬಳ್ಳಿಯಲ್ಲಿರದೆ, ಮಿದುಳಿನಲ್ಲಿಯೆ ಚಕ್ರದಂತಿರುತ್ತದೆ. ಅದು ಮಿದುಳು ಕೋಶದ ಹತ್ತನೆಯ ನರದಂತಿರುತ್ತದೆ ಎಂದು ಡಾ. ರೇಳೆ ಅವರು ವಾದಿಸುತ್ತಾರೆ. ಇದೇನೇ ಇರಲಿ ! ಕುಮಾರ ಶ್ರೀಗಳು ಅನಾಹತನಾದದಲ್ಲಿ ಗುಪ್ತವಾಗಿ ಇರುವ ಪರದಿಂದಲೂ ಮುಕ್ತರಾಗಿರುವರಾಗಿ ಕವಿಗಳಾದ ಕುಮಾರಪ್ರಭುಗಳು ತಮ್ಮ ಗುರುಗುಣ ಸಾಮರ್ಥ್ಯವನ್ನು ಬಣ್ಣಿಸುತ್ತಾರೆ.

“ಮಂಡಲತ್ರಯದಗ್ರದಿ’ ಎಂಬ ಕೊನೆಯ ಸಾಲುಗಳಲ್ಲಿ,

“ಗಂಗೆ-ಯಮುನೆಗಳ ಸಂಗಮದೊಳುಮಿಂದು |

ಶೃಂಗಾಟದುಪರಿಯ ರಂಗಮಂಟಪದೊಳು ||

ಲಿಂಗಪೂಜೆಯಮಾಡಿರೋ ನಿಮ್ಮೊಳಿ ಪ್ರಾಣ ||

ಲಿಂಗಪೂಜೆಯಮಾಡಿರೋ ||”

ಎಂಬ ಹೋಲಿಕೆಯು ಕೊಂಚಭಿನ್ನವಾಗಿ, ಮೂರುಮಂಡಲಗಳ ಮದ್ಯದಲ್ಲಿ, ದೀಪಿಸುತ್ತಿರುವ ಅಖಂಡ ಜ್ಯೋತಿ ಸ್ವರೂಪರು, ಬಿದರಿ ಕುಮಾರಶಿವಯೋಗಿಗಳು ; ಅಖಂಡ ವಿಷಯಗಳನ್ನು ಲಿಂಗಮುಖವಾಗಿಸಿಕೊಂಡು, ಐಕ್ಯತ್ವದ ಆನಂದದಲ್ಲಿ ಮೂಹೂರ್ತ ಮಾಡಿದ ಭಾವ ಭಂಗಿಯನ್ನು ನೆನಪಿಗೆ ತಂದುಕೊಂಡು, ಭಾವದುಂಬಿ, ಭಕ್ತಿಪರವಶರಾಗಿ, ಹಾಡಿದ ಹಾಡಿನ ಹಿನ್ನೆಲೆಗೆ, ಹಿರಿಯಸ್ವಾಮಿಗಳೊಬ್ಬರು, ಬಹಳ ಮಹತ್ವದ ಸನ್ನಿವೇಶವನ್ನು ನಿರೂಪಿಸಿದ ನೆನಪು. “ಅಪಗೋಳ ಬಿದರಿ ಕುಮಾರ ಸ್ವಾಮಿಗಳು ಲಿಂಗೈಕ್ಯರಾದಾಗ ಆಶು ಕವಿಗಳಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ದುಃಖ ತಡಿಯಲಾಗದೆ ಬಿಕ್ಕಿ ಬಿಕ್ಕಿ ಕಳೆಬರಹದ ಮುಂದೆ ಅಳುತ್ತ ಹಾಡಿದ ಹಾಡಿದು’, ಎಂದಿದ್ದರು.

ಮೇನೇದ ಕೋಲಿಯಲ್ಲಿ ಬಿದರಿಕುಮಾರಶ್ರೀಗಳು ಅಂತಿಮ ಕ್ಷಣಗಳನ್ನು ಇಷ್ಟಲಿಂಗದಲ್ಲಿ ಅರ್ಪಿಸುತ್ತಿದ್ದ ಸಂದರ್ಭವದು : ಯಾರೋ “ಕುಮಾರಸ್ವಾಮಿಗೋಳ ನೀವು ಎರಡು ಸಾರೆ ಗುರುಗಳ ಪುಣ್ಯತಿಥಿ ಅಚರಿಸಬೇಕಾಗುವುದು’ ಎಂದರಂತೆ ಇದು ಬಿದರಿ ಕುಮಾರಶ್ರೀಗಳಿಗೆ ಕೇಳಿಸಿ, ಕೊಲಿಯಮುಂದೆ ಕುಳಿತವರಲ್ಲಿ ಒಬ್ಬರನ್ನು ಕರೆಯಿಸಿ : ‘ತಮ್ಮಾ ಯಳಂದೂರಿನ ಬಸವಲಿಂಗಸ್ವಾಮಿಗಳು ಲಿಂಗೈಕ್ಯ ದಿನವೆ ಬಿದರಿ ಕುಮಾರಶ್ರೀಗಳು ಲಿಂಗೈಕ್ಯವಾದರೆಂದು ಅಪ್ಪಣೆಕೊಡಿಸುತ್ತಿರುತ್ತಿದ್ದರು.  ಈಗಲೂ ಶಿವಯೋಗ ಮಂದಿರದಲ್ಲಿ ಲಿಂ, ಬಿದರಿ ಕುಮಾರ ಶ್ರೀ ಗಳ ಹಾಗೂ ಯಳಂದೂರ ಲಿಂ, ಬಸವಲಿಂಗ ಶ್ರೀಗಳ ಸ್ಮರಣೋತ್ಸವವನ್ನು ಪುಷ್ಯ ಶುದ್ಧ ಪಂಚಮಿಯಂದೇ ಏಕಕಾಲದಲ್ಲಿ ಆಚರಿಸಲಾಗುತ್ತಿದೆ. ಈ ಆಚರಣೆಗೆಂದೇ ಶಿವಯೋಗ ಮಂದಿರಕ್ಕೆ ಸವದತ್ತಿಯ, ಶ್ರೀಮಾನ್, ನಾರಾಯಣಪ್ಪ, ಮೊರಬದ ದಂಪತಿಗಳ ವತಿಯಿಂದ ೫೦,೦೦೦ ರೂಪಾಯಿಗಳನ್ನು ಈ ಲೇಖಕನ ಸಲಹೆ ಸದಾಶಯದಮೇರೆಗೆ ಫಿಕ್ಸ್ ಡಿಪಾಸಿಟ ಇರಿಸಲಾಗಿದೆ. ಇಂತಹ ಮಹಿಮಾಶಾಲಿಗಳಗಿದ್ದರು ಉಭಯ ಯತೀಂದ್ರರು  ಇವರಿಬ್ಬರ ವ್ಯಕ್ತಿತ್ವವನ್ನು ಎಷ್ಟು ಬಣ್ಣಿಸಿಯೇನು ? ಇದೆಲ್ಲ, ನಮ್ಮ ನೆಮ್ಮದಿಗಷ್ಟೆ !

ಲೇಖಕರು : ಪೂಜ್ಯ ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

ಶ್ರೀಗಳು ಸ್ವಾವಲಂಬಿಗಳಾಗಿದ್ದರು. “ತನ್ನ ನಿತ್ಯ ನೇಮವೆಲ್ಲವ ತಾ ಮಾಡ ಬೇಕಲ್ಲದೆ, ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?” ಎನ್ನುತ್ತಿದ್ದರು. ಅಥಣಿ ಅಪ್ಪಂಗಳವರಂತೆ ಅವರು ತಮ್ಮ ಪೂಜೆಗೆ ಕೈ ಜೋಳಿಗೆಯಲ್ಲಿ ಪತ್ರೆ ಪುಷ್ಪಗಳನ್ನು ತಾವೇ  ಎತ್ತಿ ತರುತ್ತಿದ್ದರು. ಅವರು ಬಹಿರ್ದೇಸಿಗೆ ಮೂಲಿಮಠದ ತೋಟದಾಚೆಗೆ ಹೋಗುತ್ತಿದ್ದರು, ತೋಟದ ಬಾವಿಯಲ್ಲಿ ಕೈ ಕಾಲು ತೊಳೆದು ಕೊಂಡು, ತಮ್ಮ ಕೌಪೀನಾದಿಗಳನ್ನು ತಾವೇ ತೊಳೆದು ಒಂದೆಡೆ ಹಾಕುತ್ತಿದ್ದರು. ಹೂ ಪತ್ರೆ ಎತ್ತಿಕೊಂಡ ಮೇಲೆ ಸ್ವಲ್ಪ ವೇಳೆ ವಿಶ್ರಮಿಸುತ್ತಿದ್ದರು.

ಶ್ರೀಗಳು ಪಾದದಲ್ಲಿ ಬಹಳ ತ್ರಾಣವುಳ್ಳವರಾಗಿದ್ದರು. ಅವರಿಗೆ ಕಂತೆ ಕಂಬಳಿ ಕೊಪ್ಪಿ ಬೇಕೇಬೇಕಾಗುತ್ತಿದ್ದಿತ್ತು. ಸವದತ್ತಿಯಿಂದ ಪಾದಚಾರಿಗಳಾಗಿ ಮುಂಜಾನೆ ಹೋರಟ ಸಂಜೆಯೊಳಗೆ ಬಿದಿರೆಗೆ ತಲುಪುವರು; ಮತ್ತೆ ಮರುದಿನ ನಡೆಯುತ್ತಲೇ ಹೊತ್ತು ಮುಳುಗುವಷ್ಟರಲ್ಲಿ ಸವದತ್ತಿಗೆ ಮರಳುವರು. ಅಷ್ಟು ಅವಸರವಾಗಿದ್ದಿತ್ತು .ಅವಿಶ್ರಾಂತವಾಗಿದ್ದಿತ್ತು  ಅವರ ನಡಿಗೆ ಅವರ ಪ್ರೇರಣಾ ಬಲದಿಂದ ಬಿದರಿ ತುಪ್ಪದ ಸಿದ್ಧ ಗಿರಿಯಪ್ಪನೂ ಕಾಲಲ್ಲಿ  ಬಲುಸತ್ವವುಳ್ಳವನಾಗಿದ್ದನು. ಒಂದು ಸಲ, ಆತ ಗುರುಗಳ ಆದೇಶದಂತೆ, ಬಿದರಿಯಿಂದ ಮುಂಜಾವ ನಸುಕಿನಲ್ಲಿ ಹೊರಟವನು ಸೂರ್ಯಾಸ್ತದೊಳಗೆ ಮಿರಜಿಗೆ ಹೋಗಿ ಬಂದಿದ್ದನು.

ಆಥಣಿಯಪ್ಪ, ಬಿಳ್ಳೂರಪ್ಪ, ಬಿದರಿಯಪ್ಪಂಗಳವರು ದೇಹದಿಂದ ಮೂವರಾಗಿದ್ದರೂ, ಆತ್ಮದಿಂದ ಒಂದೇ ಎಂಬಂತಿದ್ದರು. ತಂತಮ್ಮ ಭಾಗದಲ್ಲಿ ಎಲ್ಲಿಯಾದರು ಏನಾದರೂ ವಿಶಿಷ್ಟ ಮಂಗಲಕಾರ್ಯವಿದ್ದಲ್ಲಿ ಮೂವರೂ ಅನ್ನೋನ್ಯ ವಾಗಿ ಕೂಡಿರಬೇಕು; ಲಿಂಗಲೀಲಾ ವಿಲಾಸದಲಲ್ಲಿ ಪರಸ್ಪರರು ಜೋಡಿರಬೇಕು. ಅವರು  ಶಿವಯೋಗಿ ತ್ರಿಮೂರ್ತಿಗಳಾಗಿದ್ದರು; ಶಿವಯೋಗದಲ್ಲಿ ಹಣ್ಣಾಗಿದ್ದರು. ಆ ಭಾಗದ ಕಣ್ಣಾಗಿದ್ದರು.

ಬಿದರಿಯಪ್ಪಂಬಿಗಳವರು ತಮ್ಮಲ್ಲಿಗೆ ಜಂಗಮರಾರಾದರೂ ಬರುವಂತಿದ್ದರೆ, ಅದನ್ನು ಮೊದಲೇ ಸೂಚಿಸುತ್ತಿದ್ದರು; ಅವರಿಗಾಗಿ ಪೂಜಾ – ಪ್ರಸಾದದ ವ್ಯವಸ್ಥೆಯನ್ನು ಮಾಡಿಸಿಡುತ್ತಿದ್ದರು. ಶರಣೆ ಸಾಹುಕಾರ ತಾಯವ್ವ ಶ್ರೀಗಳಿಗೆ ಅರಿಯದಂತೆ ಮಠಕ್ಕೆ ಬಂದಿದ್ದ ಗಣಂಗಳಿಗೆ ಬೇಕಾದುದೆಲ್ಲವನ್ನೂ ತಂದಿಟ್ಟು ಹೋಗುತ್ತಿದ್ದಳು. ಜಂಗಮರಿಗೆ ಎಷ್ಟು ಉಣಿಸಿ ತಣಿಸಿದರೂ ಶ್ರೀಗಳಿಗೆ ಬೇಸರವಿದ್ದಿಲ್ಲ. ತಾವು ಜಂಗಮ ಜ್ಯೋತಿ ಯಾಗಿದ್ದರೂ, ಅವರಿಗೆ ಜಂಗಮರೆಂದರೆ ಪಂಚಪ್ರಾಣ, ಒಮ್ಮೊಮ್ಮೆ ಹಿರೇಹೊಳೆಗೆ ದಯಮಾಡಿಸಿದ್ದಾಗ, ಅವರು ಜಂಗಮರ ಮಂಡೆಯ ಮೇಲೆ ಚವಲಿಪಾವಲಿಗಳನ್ನು ಸುರಿದುದುಂಟು; ಬಹಳಷ್ಟು ಉಣ್ಣುತ್ತಿದ್ದ ಗಣಂಗಳಿಗೆ ಬಹಳಷ್ಟು ದಕ್ಷಣೆ ನೀಡಿದು ದುಂಟು. ಅವರು ಮೇಲಿಂದ ಮೇಲೆ ಗಣಾರಾಧನೆಗಳನ್ನು ಇಡಿಸಿದುದುಂಟು.

ಶ್ರೀಗಳಲ್ಲಿ ತಮ್ಮ ಮಠದ ಆಸ್ತಿ ಬೆಳಸಬೇಕೆಂಬ ಹವ್ಯಾಸ ಎಳ್ಳಷ್ಟು ಇದ್ದಿಲ್ಲ. ಎಷ್ಟೋ ಸಾರೆ, ತ್ಯಾಗವೀರ ಶಿರಸಂಗಿ ಲಿಂಗರಾಜರು ಸವದತ್ತಿಯಲ್ಲಿ ಶ್ರೀಗಳ ಪಾದದರ್ಶನ ತೆಗೆದುಕೊಂಡ ಮೇಲೆ ತಾವು ಮಠಕ್ಕೆ ಕೆಲವೊಂದು ಭೂಮಿಯನ್ನು ದತ್ತಿ ಹಾಕಿ ಕೊಡಬೇಕೆಂದು ಮಾಡಿದ್ದರು. ಶ್ರೀಗಳಾದರೋ ಅದಕ್ಕೆ ಸರ್ವಥಾ ಒಪ್ಪಲಿಲ್ಲ. ಆ ದೊರೆಗಳ ಭಕ್ತಿಯ ಸೆಳತಕ್ಕೆ ಸಿಲುಕಿ, ಅವರು ಸೊಡ ಬಲಿಯ ಮಸಣ ಚೌಕಿಗೆ ಸ್ವಲ್ಪ ಜಾಗೆ ಕೊಡಬಹುದೆಂದರು.

ಶ್ರೀಗಳು ಬಿಳ್ಳೂರಪ್ಪಗಳಂತೆ ಜಟ್ಟಿಗಳೆಂದರೆ, ಯೋಗಾಸನ ಪಟುಗಳೆಂದರೆ ಬಲು ಪ್ರೀತಿ : ಒಳ್ಳೆಯ ರೀತಿಯಲ್ಲಿ ಯಾವುದೊಂದು ಶಕ್ತಿ ಪ್ರದರ್ಶನ ಮಾಡಿ ತೋರಿಸಿದವರಿಗೆ ಅವರು ವೆಗ್ಗಳವಾಗಿ ಬಹುಮಾನವಿತ್ತು ಕಳಿಸುತ್ತಿದ್ದರು; ಹುಡುಗರನ್ನು ಕರೆದು ಒಬ್ಬರಿಗೊಬ್ಬರು ಕುಸ್ತಿ ಹಿಡಿಯುವಂತೆ ಹುರಿದುಂಬಿಸುತ್ತಿದ್ದರು; ಗೆದ್ದವರಿಗೂ – ಬಿದ್ದವರಿಗೂ ಕೂಡಿಯೇ ಹುರಿಡಗಲೆ, ಚುರಮರಿ ಕೊಟ್ಟು ‘ಲೇಸಾಗಲಿ!’ ಎಂದು ಆಶೀರ್ವದಿಸುತ್ತಿದ್ದರು. ಹೀಗೆ ಶ್ರೀಗಳ ಆಚಾರ-ವಿಚಾರಗಳ ವಿಕಾಸವಾಗಿದ್ದಿತು; ಅವರು ವ್ಯಕ್ತಿತ್ವ-ಬಹುಮುಖವಾಗಿ ಬೆಳೆದು ಬಂದಿತ್ತು.

ಶ್ರೀಗಳು ಲೋಕಸಂಗ್ರಹದ ಅನೇಕ ಕಾರ್ಯಗಳನ್ನು ಪೂರೈಸಿದರು ಅವುಗಳಲ್ಲಿ ಕೆಲವನ್ನು ಉದಾಹರಿಸಬೇಕೆಂದರೆ –

1.  ಶರಣ -ಬಂದರದ ರುದ್ರಪ್ಪನವರೊಂದಿಗೆ ಅನೇಕ ಸದ್ಭಕ್ತರನ್ನು  ಕರೆದುಕೊಂಡು ಉತ್ತೂರು ಮಹಾಲಿಂಗ ಶರಣರ ದರ್ಶನಕ್ಕೆ ದಯಮಾಡಿಸಿ, ಅಲ್ಲಿ ಶಿವಾನುಭವ ಗೋಷ್ಠಿ ಸಾಗುವಂತೆ ಪ್ರೇರೇಪಿಸಿದರು;  ಬಸವಾದಿ ಪ್ರಮಥರ ತತ್ವಗಳನ್ನು ಪ್ರಸಾರಪಡಿಸಿದರು. ತಮ್ಮ ಕರುಣೆಯ ಕಂದ-ಅಪ್ಪಯ್ಯ ದೇವರನ್ನು ತಮ್ಮ ಉತ್ತರಾಧಿಕಾರಿಯೆಂದು ನೇಮಿಸಿಕೊಂಡು ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಒಪ್ಪಿಸಿ ಶಿವಯೋಗಮಂದಿರದಲ್ಲಿ ಇಡಿಸಿದರು.

೨. ಸವದತ್ತಿ ಕಲ್ಮಠದಲ್ಲಿ ಒಮ್ಮೆ ಚೋರಬಸವ ಪುರಾಣವನ್ನೂ, ಕ್ರಿ.ಶ. ೧೯೦೨ರಲ್ಲಿ ಭೀಮಕವಿಯ ಬಸವಪುರಾಣವನ್ನು ಹಚ್ಚಿಸಿ, ಜನತೆಯಲ್ಲಿ ದಾಸೋಹಂ ಭಾವದ ಬೀಜವನ್ನು ಬಿತ್ತಿದರು. ಸವದತ್ತಿ ಪುರಾಣಮಂಗಲೋತ್ಸವ ನಿಜಕ್ಕೂ ಸಮಾಜದಲ್ಲಿ ನವ ಮನ್ವಂತರ ಮೂಡಿಬರುವಲ್ಲಿ ಶುಭನಾಂದಿ ಹಾಕಿತೆನ್ನಬಹುದು.

೩. ಕಲ್ಯಾಣದಪ್ಪ – ಬಸವಣ್ಣವರಂತೆ, ಬಿದಿರಿ ಶಿವಯೋಗಿಗಳು ಗುಣ ಸಂತೃಪ್ತಿಯ ನೇಮವನ್ನು ಕೈಗೊಂಡು, ತಾವಿರುವ ಪರ್ಯಂತರ – ಕೈಯಲ್ಲಿ ಕಾಸಿಲ್ಲದಾಗಲೂ ಇಚ್ಛಾ ಭೋಜನ ಮಾಡಿಸುತ್ತ ಪ್ರಸಾದ ಮಹಿಮೆಯನ್ನು ಬಸವ ಭಕ್ತಿಯನ್ನು ಎತ್ತಿ ತೋರಿಸಿದರು.

೪, ಒಮ್ಮೆ ಶಿವಯೋಗಿಗಳು ಬಿದರಿ, ಚಿಚಡಿ, ಗೊರವನ ಕೊಳ್ಳಗಳ ಭಕ್ತರನ್ನೊಡಗೊಂಡು – ಐವತ್ತು ಬಂಡಿಗಳನ್ನು ಕೂಡಿಸಿಕೊಂಡು, ಹಳೆಗಾಲದ ಶರಣ ‘ಹರಳಯ್ಯನ, ಗುಂಡ’ ಎಂಬ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಅಲ್ಲಿ ಬಬಲೇಶ್ವರ ಬೃಹನ್ಮಠಾಧ್ಯಕ್ಷ – ಶ್ರೀ ಷ. ಬ್ರ. ಶಾಂತವೀರ ಶಿವಾಚಾರ್ಯರ ಶಿವ ಯೋಗಾಶ್ರಮಕ್ಕೆ ಸಮದರ್ಶನ ನೀಡಿದರು; ಶರಣ ಹರಳಯ್ಯನ ಆದರ್ಶ ಜೀವನವನ್ನು ಮಾರ್ಮಿಕವಾಗಿ ಬೋಧಿಸಿದರು.

೫. ಮತ್ತೊಮ್ಮೆ ಶಿವಯೋಗಿಗಳು ಭಕ್ತರೊಂದಿಗೆ ಮಾಘ ಮಾಸದಲ್ಲಿ ಕೃಷ್ಣ (ಹಿರೇಹೊಳೆಗೆ) ಗೆ ಬಿಜಯಂಗೈದು, ಅಲ್ಲಿ ಅಸಂಖ್ಯ ಗಣಂಗಳನ್ನು ಧಾರಾಳವಾಗಿ ಪ್ರಸಾದ- ದಕ್ಷಿಣೆಗಳಿಂದ ತಣಿಸಿ ಗುರು-ಲಿಂಗ ಜಂಗಮ ಭಕ್ತಿಯನ್ನು ವ್ಯಕ್ತಪಡಿಸಿದರು.

೬. ಅಥಣಿ ನೇಸರಗಿಗಳಲ್ಲಿ ಚರ್ಚಿಸಿದ ಬಸವ ಪುರಾಣ ಮಂಗಲೋತ್ಸವಗಳಲ್ಲಿ ಶಿವಯೋಗಿಗಳು ತಮ್ಮ ಇನ್ನಿಬ್ಬರು ಆತ್ಮೀಯರೊಂದಿಗೆ ಉಪಸ್ಥಿತರಾಗಿದ್ದರು. ಅವರು ಅಥಣಿಯಿಂದ ತಿರುಗಿ ಬರುತ್ತಿದ್ದಾಗ ದಾರಿಯಲ್ಲಿ ಪತ್ರೆಯ ಮಹಿಮೆಯನ್ನು ಲೋಕಕ್ಕೆ ಮನಗಾಣಿಸಿಕೊಟ್ಟರು.

೭. ಶಿವಯೋಗಿಗಳು ಬಬಲೇಶ್ವರ ಶ್ರೀ ಫ. ಚ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯ ಶ್ರೀ ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಗಂಗಾಧರ ರಾಜ ಯೋಗೀಂದ್ರ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರು ಲಿಂಗೈಕ್ಯ ಶ್ರೀ ಹಾವೇರಿ ಶಿವಬಸವ ಮಹಾಸ್ವಾಮಿಗಳು- ಇವರೇ ಮೊದಲಾದ ಗುರು – ವಿರಕ್ತರಿಗೆ ಅನುಗ್ರಹವಿತ್ತು ಅವರವರಿಂದ ಲೋಕಕಲ್ಯಾಣ ಕೃತಿಗಳಾಗುವಂತೆ ಪ್ರೇರೇಪಿಸಿದರು.

ಲಿಂಗೈಕ್ಯ ಲೀಲೆ

ಸಂವತ್ಸರ ತಿರುಗಿತ್ತು ಶರಣರಿಗೆ – ಶಿವಯೋಗಿಗಳಿಗೆ ಮರಣವೇ ಮಹಾ ನವಮಿ’, ಬಿದರಿ ಕುಮಾರ ಶಿವಯೋಗಿಗಳಿಗೆ ಒಮ್ಮಿಂದೊಮ್ಮೆ ತಮ್ಮ ಲಿಂಗೈಕೈ ಮಿತಿ ಭಾವದಲ್ಲಿ ಸ್ಪುರಿಸಿದ್ದಿರಬೇಕು; ಅವರು ಯಳಂದೂರು ಬಸವಲಿಂಗ ಶಿವಯೋಗಿಶ್ವರರ ಲಿಂಗೈಕ್ಯ ಮಿತಿಯನ್ನು ಮನದಲ್ಲಿ ಇರಿಸಿದ್ದಿರಬೇಕು; ಅಂತೆಯೇ, ಅವರು ಒಂದೆರಡು ದಿನ ಮುಂಚೆ ಬಿಳೂರು, ಹಾನಗಲ್ಲು ಹಾವೇರಿ ಚರಮೂರ್ತಿಗಳನ್ನು; ಮಂಟೂರು, ಬಬಲೇಶ್ವರ, ಕೋಹಳ್ಳಿ ಗುರುಮೂರ್ತಿಗಳನ್ನು ಸವದತ್ತಿಗೆ ಕರೆಸಿದ್ದಿರಬೇಕು. ತಮ್ಮ ಅಪ್ಪಯ್ಯ ದೇಶಿಕರ ಮುಖಾಂತರ ಅಥಣಿ ಶಿವಯೋಗಿಗಳ ಪಾದಕ್ಕೆ ೨೫ ರೂ, ಕಾಣಿಕೆ ಮುಟ್ಟಿಸುವ ಏರ್ಪಾಡು ಮಾಡಿದುದಾಯಿತು; ಮೇಲುಕಟ್ಟಿ ಸಂಗಪ್ಪ, ಅಥಣಿ ಮಾಕೊಂಡಪ್ಪ, ಎಡಹಳ್ಳಿ ದೇಸಾಯಿ ಮಲ್ಲಪ್ಪ, ದೇವಿ ಹೊಸೂರು ಶೆಟ್ಟಿ ಚೆನ್ನಬಸವಪ್ಪ – ಇವೆಲ್ಲರ ಸಮಕ್ಷಮ ಹಾನಗಲ್ಲ – ಹಾವೇರಿ ಶ್ರೀಗಳವರಿಗೆ ಏನೇನು ಅಪ್ಪಣೆ ಮಾಡಬೇಕೋ ಮಾಡಿದುದಾಯಿತು  ಕಲ್ಮಠದ ಮುಂದಿನ ಹರವಾದ ಹಂದರದಲ್ಲಿ ಒಂದು ದಿನ ಶಿವಭಜನೆ, ಶಿವ ಕೀರ್ತನೆಗಳೂ – ಮತ್ತೊಂದು ದಿನ ಶಿವಗಣಾರಾಧನೆ, ಶಿವಾನುಭವ ಬೋಧನೆಗಳೂ ಎಡೆಬಿಡದೆ ಸಾಗಿದ್ದವು. ಶಾಲಿವಾಹನ ಶಕ ೧೮೩೩. (ಕ್ರಿ.ಶ. ೧೯೧೧, ಡಿಸೆಂಬರ್ ಕಡೇವಾರ) ಪುಷ್ಯ ಶುದ್ಧ ಪಂಚಮಿ ಸೋಮವಾರ ಬೆಳಗಿನ ಲಿಂಗಪೂಜೆಗೆ ಶಿವಯೋಗಿಗಳು ಎದ್ದರು, ಅವರ ಸ್ನಾನವಾಯಿತು. ಆದರೆ ಅವರೊಬ್ಬರಿಗೇ ಪೂಜಾ ಮಂದಿರಕ್ಕೆ ಹೋಗಲು ಆಗಲಿಲ್ಲವೇನೋ ಮಡಿಯಲ್ಲಿದ್ದ ಸದ್ಭಕ್ತರೊಬ್ಬಿಬ್ಬರು ಅವರನ್ನು ಅತ್ತ ಕರೆದೊಯ್ಯುತ್ತಿದ್ದಾಗಲೇ, ಶಿವಯೋಗಿಗಳಿಗೆ ನಿಂತು ನಿಂತಲ್ಲೇ ಬಾಹ್ಯ ಸ್ಮೃತಿ ಹಾರಿತು; ನಿಂತು ನಿಂತಲ್ಲೇ ಅವರ ಕಿವಿಯಲ್ಲಿ ಮಹಾಮಂತ್ರ ಪಠಿಸಿದುದಾಯಿತು ಅವರ ಬಾಯಲ್ಲಿ ಜಂಗಮ ಪಾದೋದಕ ಹಾಕಿದುದಾಯಿತು. ಪ್ರಾಣ ಪಕ್ಷಿ ಹಾರಿಹೋಗುತ್ತಿದ್ದಾಗಲೆ, ಅವರ ಲಿಂಗ ದೇಹ ತಾನೆ ಕುಸಿಯಿತು. ಹೀಗೆ ಶಿವಯೋಗಿಗಳು ಎದ್ದು ನಿಂತಿದ್ದಾಗಲೇ ಲಿಂಗದಲ್ಲಿ ಬೆರೆದರೆಂದು ದಟ್ಟವದಂತಿ ಹಾನಗಲ್ಲ ಶಿವಯೋಗಿಗಳು ಪೂಜೆಗೆ ಕುಳಿತ್ತಿದ್ದಾಗಲೇ ಲಿಂಗ ನಿರೀಕ್ಷಣೆಯಲ್ಲಿದ್ದಾಗಲೆ ಕೊನೆಯುಸಿರೆಳೆದು ಲಿಂಗೈಕ್ಯರಾದರೆಂತಲೂ ಐತಿಹ್ಯವುಂಟು. ಅವರು ಲಿಂಗದೊಳಗಾದಾಗ ಪ್ರಾತಃಕಾಲ ಸರಿಯಾಗಿ ಎಂಟು ಗಂಟೆಯಾಗಿದ್ದಿತು. ಅಲ್ಲಿಯ ಶಿಲಾಮಠದಲ್ಲಿ ಶಿವಯೋಗಿಗಳ ಕ್ರಿಯಾ ಸಮಾಧಿಯಾಯಿತು, ಆ ಭಾಗದಲ್ಲಿ ಅದೊಂದು ಜಾಗ್ರತ ಸಮಾಧಿಯಾಗಿದೆ.

ಸಂಸ್ಮರಣೀಯ ಸಂಗತಿಗಳು

  1. ಪರಮ ತಪಸ್ವಿ ಶ್ರೀ ಘ.ಚ. ಬಬಲೇಶ್ವರದ ಶಾಂತವೀರ ಮಹಾಸ್ವಾಮಿಗಳು ತಾವಿರುವ ಶ್ರೀ ಹರಳಯ್ಯನ ಗುಂಡ ಕ್ಷೇತ್ರದಲ್ಲಿಯ ಗುಂಡಕ್ಕೆ ಶ್ರೀ ಬಿದರಿ ಕುಮಾರೇಶ್ವರ ತೀರ್ಥ’ವೆಂದು ಹೆಸರಿಟ್ಟಿರುವರು; ಪ್ರತಿವರ್ಷ ಪುಷ್ಯ ಶುದ್ಧ ಪಂಚಮಿಯಂದು ಬಿದರಿ ಅಪ್ಪಂಗಳವರ ಪುಣ್ಯ ತಿಥಿಯನ್ನು ಆಚರಿಸುತ್ತಿರುವರು.
  2. ಅಪ್ಪಂಗಳವರು ನವಿಲು ತೀರ್ಥದಲ್ಲಿ ಅನುಷ್ಠಾನಕ್ಕೆ ಕುಳಿತಿದ್ದಾಗಿನ ರೂಪಚಿತ್ರ  ವೊಂದು ಅವರ ಸಾಮಾನ್ಯ ರೂಪ ಚಿತ್ರದೊಂದಿಗೆ ಪ್ರಚಾರದಲ್ಲಿರುತ್ತದೆ.
  3. ಚಿಕ್ಕಲಿಗೆಯ ಊರ ಹೊರಗಿರುವ ಪತ್ರೆ ಮರಕ್ಕೆ ಅಪ್ಪಂಗಳವರ ವಾಕ್ಪುರುಷ ಬಲದಿಂದ ತ್ರಿದಳಗಳು ಪಂಚದಳವಾಗಿ ಪರಿವರ್ತನೆಗೊಂಡುದರ ಕುರುಹಿಗಾಗಿ ಆ ಮಠಕ್ಕೆ ಶ್ರೀ ಬಿದರಿ ಕುಮಾರೇಶ್ವರ ಪತ್ರಿಮರ’ವೆಂದು ಕರೆಯಲಾಯಿತು. ಭಕ್ತರು ಪ್ರತಿ ಶ್ರಾವಣದಲ್ಲಿ ಆ ಗಿಡವನ್ನು ಪೂಜಿಸುವರು. ಗಣರಾಧನೆ ಮಾಡುವರು.
  4. ಪ್ರಿಯ ಭಕ್ತರಲ್ಲೊಬ್ಬರಾಗಿದ್ದ ಲಿಂಗೈಕ್ಯ ಶ್ರೀ ಎಡಹಳ್ಳಿ ಮಲ್ಲಪ್ಪ ದೇಸಾಯಿಯವರಿಗೆ ಅಪ್ಪಂಗಳವರು ಒಮ್ಮೆ ಐದು ಬಿಲ್ವ ಸಸಿಗಳನ್ನು ದಯಪಾಲಿಸಿದ್ದರು. ಅವು ಬೆಳೆ ಬೆಳೆದಂತೆ ದೇಸಾಯಿಯವರ ಮನೆತನ ಇನ್ನಷ್ಟು ಬೆಳೆಯಿತೆಂದೂ, ಅವುಗಳಲ್ಲಿ ಈಗ ಮೂರು ಮಾತ್ರ ಉಳಿದಿವೆಯೆಂದೂ ಕಂಡು ಬಂದಿದೆ.
  5. ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ಅಪ್ಪನವರು ಅನುಷ್ಠಾನಿಸಿದ ನವಿಲು ತೀರ್ಥದಲಿ ತೆಪ್ಪೋತ್ಸವ ನಡೆಯುತ್ತಿದೆ.
  6. ಅಪ್ಪಂಗಳವರ ಮೇಲೆ ಪದ- ಪದ್ಯಗಳನ್ನು ಕಟ್ಟಿ ಆ ಕಡೆ ಭಜನಾದಿಗಳಲ್ಲಿ ಭಕ್ತರು ಹಾಡಿ ನಲಿಯುತ್ತಿರುವರು. ಅವರ ಮೇಲೊಂದು ‘ನಾಮಾವಳಿ’ಯೂ ಇದೆ. ಮೂರು ಧ್ವನಿ ಮುದ್ರಣಗಳಿವೆ.
  7.  ನಾಡಿನಲ್ಲಿ ಕೆಲವೆಡೆ ಅಪ್ಪಂಗಳವರ ಪುರಾಣ ಪ್ರವಚನಗಳು ಸಾಗುತ್ತಿದ್ದು ಅಲ್ಲಲ್ಲಿ ಅವರ ಪುಣ್ಯ ದಿನಾಚರಣೆ ರೂಢಿಗತವಾಗಿದೆ. ಹೆಚ್ಚು ಹೆಚ್ಚು ಪುರಾಣಗಳನ್ನು ನೆರವೇರಿಸಿದ ಶ್ರೇಯಸ್ಸು ಜಗದ್ಗುರು ಸಂಗನಬಸವ ಮಹಾಸ್ವಾಮಿಗಳು,  ಹಂಪಿ-ಹಾಲಕೆರೆ ಅವರಿಗೆ ಸಲ್ಲುವುದು.
  8.  ಚಚಡಿ ಊರ ಹೊರಗಿರುವ ಬಾವಿಯ ಮೇಲ್ಗಡೆ ಬಂಡೆಯ ಮೇಲೆ ಒಂದು ಸಾರೆ ಮೂರು ದಿನ ಅಚ್ಚಳಿಯದೆ ಮೂಡಿ ಮಿನುಗಿದ್ದ ಅಪ್ಪಂಗಳವರ ನಸುಕಾವಿ ಬಣ್ಣದ ಹಸಿ ಹೆಜ್ಜೆಯ ನೆನೆಪೆಂದು ಆ ಬಂಡೆಗಲ್ಲನ್ನು ಇಂದಿಗೂ ತೋರಿಸುತ್ತಿದ್ದಾರೆ.
  9.  ಅಪ್ಪಂಗಳವರ ಸಾನ್ನಿಧ್ಯದಿಂದ ಮತ್ತಷ್ಟು ಶೋಭಿಗೊಂಡಿದ್ದ ಅಥಣಿ ಶೆಟ್ಟರ ಮಠಕ್ಕೆ ‘ಕುಮಾರ ಮಠ’ವೆಂತಲೂ ಕರೆಯುವುದಂಟು.
  10.  ಬಿದರಿ ಮಠದಲ್ಲಿ ೧೯೮೩ರಲ್ಲಿ ಹುಲಿ ಹೆಜ್ಜೆ ಮೂಡಿದುದಾಗಿ ತಿಳಿದು ಗಣಾರಾಧನೆಯನ್ನು ಮಾಡಲಾಯಿತು.ಜನರು ಜಾತ್ರೆಯಂತೆ ನೆರೆದು  ಶ್ರೀ ಕುಮಾರೇಶ್ವರರು ಹುಲಿಏರಿ ಶ್ರೀಮಠದಲ್ಲಿ ತಿರುಗುತ್ತಾರೆ ಎಂಬುದು ನಂಬಿಕೆ.
  11. ಮುಪ್ಪಿನ ಕಾಲದಲ್ಲಿ ದೇಸಾಯಿಯವರು ಮಾಡಿಸಿಕೊಟ್ಟ ‘ಮೇನೆ’ ಬಿದರಿ ಮಠದಲ್ಲಿ ಇನ್ನೂ ಕಾಯ್ದಿರಿಸಲಾಗಿದೆ.

ಪವಾಡದ ಪಥದಲ್ಲಿ

1. ಹುಲಸಿನ ಹುಗ್ಗಿ : ಸವದತ್ತಿಮಠದ ಹಿತ್ತಲಲ್ಲಿಯ ಕುಂಬಳ ಕಾಯಿಗಳನ್ನು ಹರಿಸಿಟ್ಟಿದ್ದರು. ಬಸವ ಪುರಾಣ ಮಂಗಲೋತ್ಸವದ ಮರುದಿನ ಶಿವಯೋಗಿಗಳು ಪ್ರತ್ಯೇಕವಾಗಿ ಜಂಗಮಾರಾಧನೆಯಿಟ್ಟು ಕೊಂಡಿದ್ದರು. ಬೆಲ್ಲ, ಶುಂಠಿ, ಯಾಲಕ್ಕಿ, ಪತ್ರೆ, ಲವಂಗ, ಜಾಜಿಕಾಯಿ ಹಾಕಿ; ಕುಂಬಳ ಪಾಯಸವನ್ನು ಸಿದ್ಧಪಡಿಸಲಾಗಿದ್ದಿತು; ಅದಕ್ಕೆ ಶಿವಯೋಗಿಗಳ ಹಸ್ತ ಸ್ಪರ್ಶವಾಗಿದ್ದಿತು. ಆ ಹುಗ್ಗಿ ನೂರಾರು ಗಣಂಗಳಿಗೆ ಸಾಕಾಗಿ, ಊರ ಬಡಬಗ್ಗರು ಉಂಡರೂ ಉಳಿಯಿತು. ಅದು ಅಷ್ಟು ಹುಲುಸಾಗಿದ್ದಿತು.

2. ಸಾಯುವವ ಬದುಕಿದ : ಸವದತ್ತಿಯಲ್ಲಿ ಗಡೇಕಾರ ನಾಗಪ್ಪನಿಗೆ ದೊಡ್ಡ ಬೇನೆ ಅಂಟಿಕೊಂಡು, ಆತ ಈಗ ಆಗ ಸಾಯುವ ಸ್ಥಿತಿಯಲ್ಲಿದ್ದನು, ನೆಲಪಟ್ಟಾಗಿ ಬಿದ್ದಿದ್ದನು. ಆತನಾದರೋ ಶ್ರೀಗಳ ಪ್ರೀತಿಯ ಶಿಷ್ಯ. ಶ್ರೀಗಳೇ ಆತನ ಮನೆತನಕ ದಯಮಾಡಿಸಿ, ಆತನ ಮೈಮೇಲೆ, ತಲೆಯ ಮೇಲೆ ಕೈಯಾಡಿಸಿ, “ನಾಗಣ್ಣಾ ಅಪ್ಪ-ಬಸವ ನಿನ್ನ ಕಂಟಕ-ಕಳೆಯುವನು!” ಎಂದು ನುಡಿದರು. ಆತ ವಾರೆಂದು ಕಳೆಯುವುದರೊಳಗೆ ಪೂರಾ ಗುಣಮುಖವಾದವು. ಆತ ತಾನು ಎಂದೆ ಸಂಕಲ್ಪಿಸಿದ್ದಂತೆ, ಮಠದಲ್ಲಿ ನಗಾರಿಖಾನೆ’ ಯನ್ನು ಕಟ್ಟಿಸಿ ಕೊಟ್ಟನು. ಹರಕೆ ಹನ್ನೆರಡು ವರುಷ   

3. ಬಾವು ಇಳಿಯಿತು : ಚಚಡಿ ಅಣ್ಣಾ ಸಾಹೇಬ ದೇಸಾಯಿಯವರ ಆಮಂತ್ರಣದಂತೆ, ಶಿವಯೋಗಿಗಳು ಅಲ್ಲಿಗೆ ಬಿಜಯಂಗೈಸಿ, ಅರಮನೆಯಲ್ಲಿ ಪೂಜಾ ಪ್ರಸಾದ ತೀರಿಸಿಕೊಂಡು, ತಿರುಗಿ ಸವದತ್ತಿಗೆ ಬಂಡಿಯಲ್ಲಿ ಬರುತ್ತಿದ್ದರು. ಅಕಸ್ಮಾತ್ತಾಗಿ, ಒಂದು ಎತ್ತಿನ ಹೊಟ್ಟೆಗೆ ಬುರುಬುರು ಬಾವು ಬಂದಿತು. ಶಿವಯೋಗಿಗಳು  ಚಕ್ಕಡಿಯಿಂದಿಳಿದು, ಆ ಎತ್ತಿನ ಬೆನ್ನ ಮೇಲೆ ‘ಬಸವಾ ಬಸವಾ!” ಎಂದು ಕೈಯಾಡಿಸಿದೊಡನೆ, ಆ ಬಾವು ಜರ್ರನೆ ಇಳಿಯಿತು.

4. ಕಂಬಳಿ ನಡುಗಿತು : ಶ್ರೀಗಳು ಒಮ್ಮೆ ಸವದತ್ತಿ ಮಠದಲ್ಲಿ ಉರಿಚಲ್ಲಿ ಬಂದು ಪವಡಿಸಿದ್ದರು; ಬಿಳಿ ಕಂಬಳಿ ಹೊತ್ತಿದ್ದರು. ಸಲುಗೆಯ ಭಕ್ತನೊಬ್ಬನು ‘ಬುದ್ದಿ ತಮ್ಮಂತಹವರಿಗೂ ಇಂತಹ ಬೇನೆಯೇ ?” ಎಂದು ಸಹಜವಾಗಿ ಕೇಳಿಕೊಂಡನು. ಶ್ರೀಗಳಾದರೋ “ಯಾಕೆ ಬರಬಾರದು ? “ಘಟ ಹೊತ್ತಿರುವವರೆಲ್ಲರಿಗೂ ಸುಖ-ದುಃಖಗಳು ಬಿಟ್ಟುವಲ್ಲ!” ಎನ್ನುತ್ತಾ ತಾವು ಹೊತ್ತಿದ್ದ ಕಂಬಳಿಯನ್ನು ತೆಗೆದು ಆತನ ಮುಂದಿರಿಸಿದರು. ಆ ಕಂಬಳಿ ಗದಗದನೆ ನಡುಗಿ ಮೇಲಕ್ಕೆ ಹಾರಹತ್ತಿತು! “ಸಾಕು ಬುದ್ಧಿ, ನನ್ನದು ತಪ್ಪಾಯಿತು” ಎಂದು ಆತ ಬಿದ್ದು ಬೇಡಿಕೊಂಡನು. ಅವನ ಒಡಲೂ ನಡುಗಿತು’ ಮುಂಚಿನಂತೆ ಶ್ರೀಗಳ ದೇಹವೂ ಕಂಪಿಸಿತು. ಸಮತೆಗಿದು ಸಾಕ್ಷ್ಯವಲ್ಲವೆ ?

5. ಇಬ್ಬರಿಗೂ ತೃಪ್ತಿ : ಚಚಡಿ ದೇಶಮುಖರು ಒಂದು ಸಲ ತಮ್ಮೂರ ನರಸಿಂಗಪ್ಪ ಎಂಬ ವಿಜಾತೀಯ ಸದ್ಗೃಹಸ್ಥನೊಂದಿಗೆ ಶ್ರೀಗಳ ಪಾದದರ್ಶನಕ್ಕಾಗಿ ಸವದತ್ತಿಗೆ ಹೋಗಿದ್ದರು. ಮಠದಲ್ಲಿ ಆಗಲೇ ಮಹಾಲಿಂಗ ತೃಪ್ತಿಯಾಗಿತ್ತು. ಮಿಕ್ಕ ಪ್ರಸಾದವಿದ್ದಿಲ್ಲ. ಶ್ರೀಗಳಾದರೋ ಅವರಿಬ್ಬರನ್ನು ಊಟಕ್ಕೆ ಎಬ್ಬಿಸಿದರು. ಮಠದಲ್ಲಿದ್ದವರು ಅವರಿಗೆ ಸ್ನಾನ ಪೂಜೆಗೊಸ್ಕರ ತಕ್ಕ ವ್ಯವಸ್ಥೆ ಮಾಡಿದರು. ಮಠದ ಭಕ್ತನೊಬ್ಬನು ಅನಿರೀಕ್ಷಿತವಾಗಿ ಅದೇ ಸಮಯಕ್ಕೆ ಪಕ್ಷಾನ್ನ ತುಂಬಿದ ಬುಟ್ಟಿಯನ್ನು ಹೊತ್ತು ತಂದನು. ಅದರಲ್ಲಿ ಫಲಾಹಾರವೂ ಇತ್ತು. ಇಬ್ಬರೂ ಆಯಾ ಪದಾರ್ಥದಿಂದ ಸಂತೃಪ್ತರಾಗಿ, ಶ್ರೀಗಳವರನ್ನು ಹಾಡಿ ಹರಿಸಿದರು.

6. .ನಾಲ್ಕು ಉತ್ತತ್ತಿ; ನಾಲ್ವರು ಮಕ್ಕಳು : ಶ್ರೀಗಳು ಒಂದು ವರ್ಷ ಶ್ರೀಗಳು ಸೋಮೇಶ್ವರ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಪಾದಸೇವಕ ಮಠಪತಿ ಮಹಾರುದ್ರಯ್ಯ ಅವರ ಪರಿವಾರದಲ್ಲಿದ್ದನು. ಅಲ್ಲಿ ಶ್ರೀಗಳದೇ ಗಣಾರಾಧನೆ ನಡೆಯಿತು. ಆ ಕಾಲಕ್ಕೆ ಶ್ರೀಗಳ ಮುಂದೆ ಮಹಾರುದ್ರಯ್ಯ ತನಗೆ ಬಹುದಿನದಿಂದ ಮಕ್ಕಳಾಗದಿದ್ದುದನ್ನು ಬಾಯಿಬಿಚ್ಚಿ ಹೇಳಿಕೊಂಡನು. ಶ್ರೀಗಳು ಆತನಿಗೆ ನಾಲ್ಕು ಉತ್ತತ್ತಿಗಳನ್ನು ಆಶೀರ್ವದಿಸುತ್ತ “ಕಲ್ಯಾಣ ಬಸವ ನಿನಗೆ ಕಲ್ಯಾಣ ಮಾಡುವನು” ಎಂದಿಷ್ಟೆ ಆಡಿದರು. ಅದರಂತೆ, ಆತನಿಗೆ ಮುಂದೆ ನಾಲ್ವರು ಮಕ್ಕಳಾದರು.

7. ಮೂರು ದಳ ಐದು ದಳಗಳಾದವು : ಅಥಣಿ ಬಸವಪುರಾಣ ಮಂಗಲೋತ್ಸವ ತೀರಿಸಿಕೊಂಡು, ಶಿವಯೋಗಿಗಳು ತಿರುಗಿ ಬಿದರಿಗೆ ಪಯಣ ಬೆಳೆಸಿದ್ದಾಗ; ಹಾದಿಯಲ್ಲಿ ಚಿಕ್ಕಲಿಗೆಯ ಬಂದರದವರ ತೋಟದಲ್ಲಿ ಶಿವಾರ್ಚನೆಗೋಸ್ಕರ ಇಳಿದುಕೊಂಡರು. ಸೇವಕನು ಪದ್ಧತಿಯಂತೆ ತ್ರಿದಳದ ಪತ್ರೆಯನ್ನು ತಂದನು. ಶ್ರೀಗಳು ಆತನಿಗೆ ಪಂಚದಳದ ಪತ್ರೆಯನ್ನು ತರಲಿಕ್ಕೆ ಪುನಃ ಅಪ್ಪಣೆ  ಗೈದರು. ಅಲ್ಲಿ ಒಂದೇ ಒಂದು ಪತ್ರೆಯ ಗಿಡವಿದ್ದಿತು. ಅದರಲ್ಲಿ ಮೂರು ದಳದ ಪತ್ರೆಯಿದ್ದವು. ಇದು ಊರಿಗೇ ಗೊತ್ತಿದ್ದಿತು. “ಅದೇ ಮರದಲ್ಲಿ ಐದು ದಳದವೇ ಇರುತ್ತವೆ, ಹೋಗಿ ನೋಡು” ಎಂದು ಶ್ರೀಗಳು ನುಡಿದಿದ್ದರು. ಆ ಸೇವಕ ಮರಳಿ ಹೋಗಿ ನೋಡುತ್ತಾನೆ ಆ ಮರದ ತುಂಬ ಐದು ದಳದ ಪತ್ರೆಗಳೇ ಕಾಣುತ್ತಿದ್ದವು. ಆತ ಅವನನ್ನು ಎತ್ತಿ ತಂದುಕೊಟ್ಟನು. ಶ್ರೀಗಳ ಪೂಜೆ ಎಂದಿಗಿಂತ ಹೆಚ್ಚು ಆನಂದದಿಂದ ಪೂರ್ತಿಗೊಂಡಿತು.

8.. ಹುಡಿಯಲ್ಲ, ಭಸ್ಮದ ಪುಡಿ : : ಬಿದರಿಯಲ್ಲಿ ಅಕ್ಕಸಾಲಿಗ ಮನೆತನದ ಹದಿನೈದು ವಯಸ್ಸಿನ ಗೋವಿಂದನಿಗೆ ಬಂದ ವಿಷಮ ಜ್ವರ ಆರಿದ್ದಿಲ್ಲ. ಆತ ಸಾವಳಿಗಿಗೆ ತೋರಿಸಲಿಕ್ಕೆ ಹೋದವನು ತನ್ನ ಸೋದರಮಾವನ ಮನೆಯಲ್ಲೇ ಇದ್ದನು. ಆತನ ಜಡ್ಡು ವೈದ್ಯರಿಗೂ ಮಿಕ್ಕಿತು. ತಾಯಿಗೆ ಆತನೊಬ್ಬನೇ ಮಗ ‘ ಗೋವಿಂದ ಉಳಿಯುವುದಿಲ್ಲ ಎಂಬ ಸುದ್ದಿ ಬಿದರಿಯಲ್ಲಿದ್ದ ಆತನ ಅಕ್ಕನಿಗೆ ಮುಟ್ಟಿತು. ಆಕೆ ತಮ್ಮೂರಿಗೆ ತಮ್ಮನನ್ನು ಕರೆಸಿಕೊಂಡಳು. ಬಂದರದ ಚನ್ನಪ್ಪನವರ ಸಂಗಡ ಶ್ರೀಗಳ ಸನ್ನಿಧಿಗೆ ಬಂದಳು; ಇದ್ದುದನ್ನೆಲ್ಲಾ ಶ್ರೀಗಳಿಗೆ ಅರಿಕೆ ಮಾಡಿಕೊಂಡಳು. ಶ್ರೀಗಳಿಗೆ ಕರುಣೆ ಹುಟ್ಟಿತು. ಆಕೆಗೆ ಒಂದಿಷ್ಟು ಭಸ್ಮದ ಪುಡಿಯನ್ನು ಕರುಣಿಸಿದರು. ಅಕ್ಕ ತಮ್ಮನ ಮೈಗೆ ಅದನ್ನಷ್ಟು ಸವರಿದಳು. ಒಂದಿಷ್ಟನ್ನು ಆತನ ಬಾಯಲ್ಲಿ ಉದುರಿಸಿದಳು. ಮೂರೇ ದಿವಸಗಳಲ್ಲಿ ಗೋವಿಂದನ ಜಡ್ಡು ಹೇಳಹೆಸರಿಲ್ಲದಾಯಿತು.

9. ಪ್ರಸಾದ ಮಹಿಮೆ : ಒಂದು ವರ್ಷ ಹರಶರಣ ಹರಳಯ್ಯನ ಗುಂಡದಲ್ಲಿ ಗಣಪ್ರಸ್ಥಕ್ಕೆ ಆಯತ ವೇಳೆಯಲ್ಲಿ ಪ್ರಸಾದ ಬೆಳೆದುಬಿಟ್ಟಿತು. ಇನ್ನೂ ಬಹಳ ಗಣಂಗಳು ಉಣ್ಣುವವರಿದ್ದರು. ““ಬಸವ ಬಡವನಲ್ಲ ಪಂಕ್ತಿ ಸಾಗಲಿ” ಎಂದು ಶ್ರೀಗಳ ಅಪ್ಪಣೆಯಾಯಿತು. ಬಬಲೇಶ್ವರ ಪಟ್ಟದದೇವರಿಂದ ಒಂದು ಉದ್ದನ್ನ ಪಾವಡ ತರಿಸಿಕೊಂಡು, ಶ್ರೀಗಳು ಮಾಡಿಟ್ಟ ಅಡಿಗೆಯ ಮೇಲೆ ಅದನ್ನು ಹಾಸಿ, ತಾವೇ ತಮ್ಮ ಹಸ್ತದಿಂದ ಪ್ರಸಾದ ತೆಗೆದು ಕೊಡಹತ್ತಿದರು. ಅನ್ನಕ್ಕೆ ಕೊರತೆಯಲ್ಲದೆ, ಪ್ರಸಾದಕ್ಕೆ ಕೊರತೆಯೆಂಬುದುಂಟೆ ? ತುಪ್ಪವೂ ಬೆಳೆದಿದ್ದಿತೇನೋ ಶ್ರೀಗಳು ‘ಗುಂಡ’ ದಲ್ಲಿಯ ತೀರ್ಥವನ್ನೇ ತರಿಸಿ, ತುಪ್ಪದಂತೆ ನೀಡಿದರು; ಹಿಂದಿನಿಂದ ಬಂದ ಕೊಡ ತುಪ್ಪವನ್ನು ಗುಂಡದಲ್ಲಿ ಸುರಿಸಿ, ಗಂಗಮ್ಮನ ಕಡ ತೀರಿಸಿದರು.

10. ಮೂವರ ಮಾತೂ ನಿಜವಾಯಿತು : ಬಿದರಿ ಅಪ್ಪಂಗಳವರು ಒಮ್ಮೆ ಬಿಳಿಜೋಳದ ಬೆಳೆಸಿಯ ಸೇವನೆಗಾಗಿ ಅಥಣಿ ಅಪ್ಪಂಗಳವರನ್ನೂ, ಬಿಳೂರು ಅಪ್ಪಂಗಳವರನ್ನೂ ನವಿಲುತೀರ್ಥಕ್ಕೆ ಕರೆಯಿಸಿಕೊಂಡಿದ್ದರು. ಬೆಳಸಿಯ ಕಾರ್ಯಕ್ರಮ ಮುಗಿದ ಮೇಲೆ, ಸದ್ಭಕ್ತನೊಬ್ಬನ ಮನೆಯಲ್ಲಿ ಆಕಳು ಬೇನೆ ತಿನ್ನುತ್ತಿದ್ದ ವಾರ್ತೆ ಆಗ ತಾನೆ ಊರಿಂದ ಬಂದಿತು. ಆ ಸಲುಗೆಯ ಭಕ್ತ ಸಹಜವಾಗಿ ಬಿದರಿ ಅಪ್ಪನವರಲ್ಲಿ “ಬುದ್ಧಿ, ಆಕಳು ಏನು ಈಯುತ್ತದೆ ?” ಎಂದು ಕೇಳಿಕೊಂಡನು. “ಹೆಣ್ಣು ಕರ ಈಯುತ್ತದಪ್ಪಾ” ಎಂದರು ಬಿದರಿ ಶ್ರೀಗಳು ಆತ ಅಷ್ಟಕ್ಕೆ ಸುಮ್ಮನಾಗದೆ, ಅಥಣಿಯಪ್ಪಂಗಳವರಿಗೂ ಅದೇ ಪ್ರಶ್ನದಿಂದ ಅರಿಕೆ ಮಾಡಿಕೊಂಡನು. ‘ಹೋರಿಕರ ಈಯುತ್ತದೆ’ ಎಂದರು ಅಥಣಿ ಶ್ರೀಗಳು ಆತ ಅಷ್ಟಕ್ಕೂ ಬಿಡದೆ, ಕೊನೆಯದಾಗಿ ಬಿಳೂರು ಅಪ್ಪಂಗಳವರನ್ನೂ ಅದೇ ತೆರನಾದ ಪ್ರಶ್ನೆಯಿಂದ ವಿಜ್ಞಾಪಿಸಿಕೊಂಡನು. “ಏನು ಕೇಳುವಿಯಪ್ಪಾ, ನಮ್ಮವರಿಬ್ಬರೂ ಹೇಳಿದುದು ಸಾಲುದೇ ? ಅದರಂತೆಯೇ ಈಯುತ್ತದೆ!” ಎಂದರು ಬೀಳೂರು ಶ್ರೀಗಳು.

ಅದೇ ಪ್ರಕಾರ, ಆಕಳು ಮೊದಲು ಹೆಣ್ಣು ಕುರುವನ್ನೂ, ಆಮೇಲೆ ಮತ್ತೊಂದು ಹೋರಿ ಕರುವನ್ನೂ ಈಯ್ದಿತು. ಮೂವರ ಮಾತೂ ನಿಜವಾಯಿತು,