General

ಡಾ.ಸರಜೂ ಕಾಟಕರ

ಮಹಾರಾಷ್ಟ್ರದ ಸಂತ ಪರಂಪರೆಯಲ್ಲಿ ಪ್ರಖ್ಯಾತರಾಗಿರುವ ಜ್ಞಾನೇಶ್ವರ, ಚಕ್ರಧರ, ಸಂತ ತುಕಾರಾಂ ಅವರುಗಳು ಬಸವಣ್ಣನವರ ಕಾಲದ ನಂತರ ಭಾರತದ ಅಧ್ಯಾತ್ಮದ ಕ್ಷೇತ್ರದಲ್ಲಿ ಕಾಣಿಸಿಕೊಂಡ ಮಹಾದಾರ್ಶನಿಕರು. ಸಂತ ಜ್ಞಾನೇಶ್ವರ ೧೨೭೫ ರಲ್ಲಿ ಹುಟ್ಟಿದರೆ ಸಂತ ತುಕಾರಾಮ ೧೫೩೦ ರಲ್ಲಿ ಹುಟ್ಟಿದ. ಈ ಇಬ್ಬರೂ ಮಹಾಪುರುಷರ ಚಿಂತನಶೈಲಿಯ ಮೇಲೆ ೧೨ನೇ ಶತಮಾನದ ವಚನ ಚಳುವಳಿಯ ಪ್ರಭಾವವಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.

ತುಕಾರಾಂ ಮಹಾರಾಷ್ಟ್ರದ ದೇಹುವಿನಲ್ಲಿ ಹುಟ್ಟಿದ. ಆತನ ತಂದೆ ಬೋಲೋಬಾ ಮತ್ತು ತಾಯಿ ಕನಕಾಯಿ, ತುಕಾರಾಂ ಜಾತಿಯಿಂದ ಕುಣಬಿಯಾಗಿದ್ದ ಮತ್ತು ವೃತ್ತಿಯಿಂದ ವಾಣಿ(ವ್ಯಾಪಾರಿ)ಯಾಗಿದ್ದ. ಆತನೇ ತನ್ನ ಜಾತಿ ಬಗ್ಗೆ ‘ಶೂದ್ರಾವಂಸಿ ಜನ್ಮಲೋ’ ಎಂದು ಹೇಳಿದ್ದಾನೆ. ‘ನಾನು ಶೂದ್ರನಾಗಿ ಹುಟ್ಟಿದ್ದರಿಂದಲೇ ನನಗೆ ಭಗವತ್ ದರ್ಶನವಾಯಿತು’ ಎಂದು ತುಕಾರಾಂ ತನ್ನ ಅಭಂಗವೊಂದರಲ್ಲಿ ಹೇಳಿದ್ದಾನೆ.

ಮನೆತನದಿಂದ ವ್ಯಾಪಾರಿಯಾಗಿದ್ದರಿಂದ ತುಕಾರಾಂ ತನ್ನ ತಂದೆಗೆ ಸಹಾಯ ಮಾಡುತ್ತ ಅಂಗಡಿ ನಡೆಸಲಾರಂಭಿಸಿದ. ಆತನ ತಂದೆಯ ಬಡ್ಡಿವ್ಯವಹಾರವೂ ಇತ್ತು. ಇದನ್ನೂ ತುಕಾರಾಂ ನಡೆಸಿದ. ಆತನ ಅನೇಕ ಅಭಂಗಗಳಲ್ಲಿ ಬಡ್ಡಿ ವ್ಯವಹಾರದ ಶಬ್ದಗಳು, ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯವಹಾರಗಳು ಪ್ರತಿಮೆಗಳಾಗಿ ಬರುತ್ತವೆ. ಆದರೆ ಆತ  ಸತ್ಯವ್ಯಾಪಾರಿಯಾಗಿದ್ದ ವ್ಯಾಪಾರದಲ್ಲಿಯ ತಟವಟಗಳು ಅವನಿಗೆ ಸೇರುತ್ತಿರಲಿಲ್ಲ.

ಆತ ೧೭ನೇ ವರ್ಷದವನಾಗಿದ್ದಾಗ ತಂದೆಯನ್ನು ಕಳೆದುಕೊಂಡ ಮನೆತನದ  ಜವಾಬ್ದಾರಿಗಳೆಲ್ಲ ತುಕಾರಾಂ ಮೇಲೆಯೇ ಹೊರಿಸಲ್ಪಟ್ಟವು. ಈ ವೇಳೆಗಾಗಲೇ ಆತ ಎರಡು ಬಾರಿ ಮದುವೆಯಾಗಿದ್ದ. ಆತನ ಮೊದಲನೆಯ ಹೆಂಡತಿಯ ಅನಾರೋಗ್ಯದಿಂದಾಗಿ ಆತ ಇನ್ನೊಂದು ಮದುವೆಯಾಗಬೇಕಾಯಿತು. ೧೬೨೯ರಲ್ಲಿ ಮಹಾರಾಷ್ಟ್ರದಲ್ಲಿ ಬಿದ್ದ ಭೀಕರ ಬರಗಾಲ ಅನೇಕ ಸಾವಿರ ಜನರನ್ನು ಬಲಿ ತೆಗೆದುಕೊಂಡಿತು. ಆತನ ಮೊದಲ ಹೆಂಡತಿ ಹಸಿವೆಯಿಂದ ಸತ್ತಳು; ಆತನ ಹಿರಿಯ ಮಗನೂ ತೀರಿಕೊಂಡ. ಇದೇ ಕಾಲಕ್ಕೆ ಜನರೂ ಸಾಯುತ್ತಿರುವುದನ್ನು ಆತ ನೋಡಿದ. ಈ ಘಟನೆಗಳು ಆತನ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿದವು: ಇದರ ಪರಿಣಾಮವಾಗಿ ಆತ ವಿಠಲನಿಗೆ ಶರಣು ಹೋದ. “ಬೈಲಾ ಮೇಲಿ ಮುಕ್ತ ರಾಲಿ, ದೇವೆ ಮಾಯಾ ಸೋಡವಿಲಿ: ಪೋರಾ ಮೇಲೆ ಬರೆ ಝಾಲೆ, ದೇವೆ ಮಾಯಾ ವಿರಹಿತ ಕೇಲೆ’ ಎಂದು ತನಗೆ ಕಷ್ಟ ನೀಡಿದ ವಿಠಲನನ್ನು ಕೊಂಡಾಡಿದ.

ಆತನ ತಂದೆ ವಿಠಲನ ಭಕ್ತನಾಗಿದ್ದ. ತಂದೆ ಕಟ್ಟಿಸಿದ ವಿಠಲನ ಗುಡಿಯನ್ನು ರಿಪೇರಿ ಮಾಡಿದ ತುಕಾರಾಂ ಕೀರ್ತನೆಗಳಲ್ಲಿ ತಲ್ಲೀನನಾದ. ಉಪವಾಸ (ಏಕಾದಶಿ) ಗಳನ್ನು ಆರಂಭಿಸಿದ. ತನ್ನಲ್ಲಿರುವ ‘ಅಹಂ’ನ್ನು ಕಳೆಯುವುದಕ್ಕೋಸ್ಕರ ಸಂತರ ಪಾದೋದಕವನ್ನು ಸೇವಿಸಿದ. ೧೬೪೦ ರ ಜನವರಿ ೨೩ ರಂದು ಆತನ ಗುರುಗಳಾದ ಬಾಬಾಜಿ ಚೈತನ್ಯ ಕನಸಿನಲ್ಲಿ ಕಾಣಿಸಿಕೊಂಡು ‘ರಾಮಕೃಷ್ಣ ಹರಿ’ ಎಂಬ ಮಂತ್ರವನ್ನು ನೀಡಿದರೆಂದು ಪ್ರತೀತಿ ಇದೆ. ಸಾವಿರಾರು ಅಭಂಗಗಳನ್ನು ಬರೆದ ತುಕಾರಾಂ ಭಕ್ತಿಪಂಥದ ಅಗ್ರಗಣ್ಯ ಸಂತನಾದ.

ಬಸವಣ್ಣನವರು ಚಿಕ್ಕಂದಿನಿಂದಲೇ ಸನಾತನ ಧರ್ಮದ ಆಚರಣೆಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವುದನ್ನು ನೋಡುತ್ತೇವೆ; ಉಪನಯನವನ್ನು ಧಿಕ್ಕರಿಸಿದ ಬಸವಣ್ಣನವರು ಒಂದು ಪರ್ಯಾಯ ಧರ್ಮದ ಉಗಮಕ್ಕೆ ಕಾರಣರಾಗುತ್ತಾರೆ. ಆದರೆ ತುಕಾರಾಂನ ಜೀವನದಲ್ಲಿ ಇಂತಹ ಯಾವ ಘಟನೆಗಳೂ ಜರುಗುವುದಿಲ್ಲ. ಅತ್ಯಂತ ಸುಖದಿಂದಿದ್ದ ತುಕಾರಾಂ ಬರಗಾಲದ ಬವಣೆಗೆ ಸಿಕ್ಕು ಅಧ್ಯಾತ್ಮದ ಕಡೆಗೆ ತಿರುಗುತ್ತಾನೆ. ಆದರೆ ನಂತರದ ಘಟನೆಗಳು ನಾಟಕೀಯವಾಗುತ್ತ ಒಂದು ಹೊಸ ಸಮಾಜ ರಚನೆಗೆ ಕಾರಣವಾಗುತ್ತವೆ.

 ತುಕಾರಾಂನ ಆರಾಧ್ಯ ದೈವ ವಿಠಲ. ಆತ ವಿಷ್ಣು ಭಕ್ತ. ಬಸವಣ್ಣನವರ ಆರಾಧ್ಯ ದೈವ ಕೂಡಲಸಂಗಮ: ಬಸವಣ್ಣನವರು ಶೈವಭಕ್ತರು. ಆದರೆ ಇಬ್ಬರೂ ಭಕ್ತಿಯ ಮಾಧ್ಯಮದಿಂದ ಸಾಮಾನ್ಯ ಜನರನ್ನು ಸಂಘಟಿಸಿದರು. ಬಸವಣ್ಣನವರು ಕಾಯಕವೇ ಕೈಲಾಸವೆಂದು ಹೇಳಿದರು. ತುಕಾರಾಂನ ಮೂಲ ಉದ್ದೇಶ ನಿವೃತ್ತಿಯ ಕಡೆಗಿರುವುದನ್ನು ಕಾಣಬಹುದು.

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದರು. ಆದರೆ ತುಕಾರಾಂ ತನಗೆ ಛತ್ರಪತಿ ಶಿವಾಜಿ ಮಹಾರಾಜರು ಕಳಿಸಿದ ಕಾಣಿಕೆಗಳನ್ನು ತಿರಸ್ಕರಿಸಿದ. ‘ಈ ವಸ್ತುಗಳು ನನ್ನ ಉಪಯೋಗಕ್ಕೆ ಬರುವಂಥವಲ್ಲ’ ಎಂದು ಹೇಳಿ “ಪ್ರಜೆಗಳು ಸುಖದಿಂದ ಇರುವಂತೆ ರಾಜ್ಯವನ್ನಾಳು’ ಎಂದು ಶಿವಾಜಿಗೆ ಸಂದೇಶ ಕಳಿಸಿದ.

ಬಸವಣ್ಣನವರು ‘ಅನುಭವ ಮಂಟಪ’ ಕಟ್ಟಿದರು. ತುಕಾರಾಂ ‘ದಿಂಡಿ’ ಆರಂಭಿಸಿದ. ಈ ದಿಂಡಿಯಲ್ಲಿ ಎಲ್ಲ ಜಾತಿಯ ಜನರಿಗೆ ಮುಕ್ತ ಪ್ರವೇಶವಿತ್ತು. ಸಾಮೂಹಿಕವಾಗಿ ಈ ಜನ ದೇವರನ್ನು ಸ್ಮರಿಸುತ್ತಿದ್ದರು. ಬಸವ ಅನುಯಾಯಿಗಳು ‘ಶರಣ’ರಾದರೆ ತುಕಾರಾಂನ ಅನುಯಾಯಿಗಳು ‘ವಾರಕರಿ’ಗಳಾದರು. ತುಕಾರಾಂನ  ಈ ದಿಂಡಿ ಒಂದು ಚಳವಳಿಯಾಗಿ ಹಬ್ಬಿತು. ದಿಂಡಿಯಲ್ಲಿ ಭಾಗವಹಿಸುವ ವಾರಕರಿಗಳಿಗೆ ಕೆಲವು ಕಟ್ಟುಪಾಡುಗಳಿದ್ದವು.ಅವರೆಲ್ಲರು ಸಚ್ಚಾರಿತ್ರ್ಯವಂತರಾಗಿರಬೇಕು : ಸುಳ್ಳು ಹೇಳುವಂತಿಲ್ಲ, ಕಳುವು, ಕೊಲೆ, ವ್ಯಭಿಚಾರ ಮಾಡುವಂತಿರಲಿಲ್ಲ. ಬಸವಣ್ಣನವರ  ಶರಣರೂ ಇದೇ ತತ್ವಗಳನ್ನು ಪಾಲಿಸುತ್ತಿದ್ದುದನ್ನು ಕಾಣಬಹುದಾಗಿದೆ.

ತುಕಾರಾಂನನ್ನು ಆಗಿನ ಕಾಲದ ವೈದಿಕರು ಅಪರಿಮಿತವಾಗಿ ಕಾಡಿದರು.ಒಬ್ಬ ಶೂದ್ರ, ಧರ್ಮವನ್ನು ಉಪದೇಶಿಸುತ್ತಿರುವುದು ಅವರನ್ನು ಕೆರಳಿಸಿತು. ನಾನಾ ರೀತಿಯ ಹಿಂಸೆಗಳನ್ನು ತುಕಾರಾಂಗೆ ನೀಡಲಾಯಿತು. ಆತ ಬರೆದ ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಒಗೆದರು. ಆದರೆ ತುಕಾರಾಂ ಇದ್ಯಾವುದನ್ನೂ ಲೆಕ್ಕಿಸಲಿಲ್ಲ; ತನ್ನ ಧ್ಯೇಯದಿಂದ ತುಸುವೂ ಹಿಂದೆ ಸರಿಯಲಿಲ್ಲ.

ಬಸವಣ್ಣನವರ ಜೀವನದಲ್ಲಿಯೂ ಇದೇ ತೆರನಾದ ಘಟನೆಗಳು ನಡೆದವು. ವೈದಿಕರಾಗಿ ಹುಟ್ಟಿದ್ದರೂ ವೈದಿಕ ಆಚರಣೆಗಳನ್ನು ವಿರೋಧಿಸಿದ್ದಕ್ಕಾಗಿ, ವೈದಿಕರೆಲ್ಲರೂ ಬಸವಣ್ಣನವರ ವಿರೋಧಿಗಳಾದರು. ದೊರೆಯತನಕ ದೂರು ಹೋಯಿತು. ಬಸವಣ್ಣನವರು ಇದ್ಯಾವುದನ್ನೂ ಲೆಕ್ಕಿಸಲಿಲ್ಲ; ತಮ್ಮ ಧ್ಯೇಯದಿಂದ ಅವರೂ ಹಿಂದೆ ಸರಿಯಲಿಲ್ಲ.

ತುಕಾರಾಂ ಹೇಳಿದ ಅಭಂಗಗಳು ವಚನಗಳ ಸಾರಸರ್ವಸ್ವವನ್ನೇ ಒಳಗೊಂಡಿವೆ. ‘ಬೋಲೆ ಕೈಸಾ ಚಾಲೆ ತ್ಯಾಚಿ ವಂದೀನ ಪಾವಲೆ’ ಎಂದು ತುಕಾರಾಂ ಹೇಳಿದರೆ ಬಸವಣ್ಣನವರು

“ನಡೆದಂತೆ ನುಡಿದರೆ ಇದೇ ಜನ್ಮ ಕಡೆ’ ಎಂದು ಹೇಳಿದ್ದಾರೆ. ಜನರ ಬಾಳು ಸುಗಮಗೊಳಿಸಲು, ಜನರನ್ನು ಸರಿಯಾದ ದಾರಿಗೆ ಹಚ್ಚಲು ಬಸವಣ್ಣ ಮತ್ತು ತುಕಾರಾಂ ಶ್ರಮಿಸಿದ್ದಾರೆ. ಇಬ್ಬರೂ ಏಕದೇವೋಪಾಸನೆಗೆ ಮಹತ್ವ ನೀಡಿದ್ದಾರೆ. ಆಲಸಿಗಳ ಬಗ್ಗೆ ತುಕಾರಾಂ ಕಿಡಿ ಕಾರಿದ್ದಾನೆ. ಬಸವಣ್ಣನವರು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಬಹುದೇವರ ಕಲ್ಪನೆಯನ್ನು ಇಬ್ಬರೂ ಖಂಡಿಸಿದ್ದಾರೆ. ದೇವರು ಮತ್ತು ಭಕ್ತರ ನಡುವಿನ ಪ್ರೀತಿ ‘ಸತಿ ಪತಿ ಭಕ್ತಿ’ಯಂತಿರಬೇಕೆಂದು ವಚನಗಳು ಹೇಳಿದರೆ, ತುಕಾರಾಂ ‘ಸತಿ ಪತಿ ಭಾವ’ ಎಂಬ ರೀತಿಯಲ್ಲಿರಬೇಕೆಂದು ಹೇಳುತ್ತಾನೆ. ಜಾತಿಗಿಂತ ಭಕ್ತಿಯೇ ಶ್ರೇಷ್ಠವೆಂದು ತನ್ನ ಅನೇಕ ಅಭಂಗಗಳಲ್ಲಿ ತುಕಾರಾಂ ಒತ್ತಿ ಹೇಳುತ್ತಾನೆ. ಇದೇ ರೀತಿಯ ಆಶಯವನ್ನು ಬಸವಣ್ಣನವರ ಅನೇಕ ವಚನಗಳಲ್ಲಿಯೂ ಕಾಣಬಹುದಾಗಿದೆ.

“ನೀರಿನಲ್ಲಿ ಮಿಂದರೆ ಅದರಿಂದ ದೇವರು ಪ್ರತ್ಯಕ್ಷನಾಗುತ್ತಾನೆಂಬ ನಂಬುಗೆಯನ್ನು ಇಬ್ಬರೂ ಟೀಕಿಸಿದ್ದಾರೆ. ಪರಸ್ತ್ರೀಯರನ್ನು ಸಹೋದರಿಯೆಂಬಂತೆ. ನೋಡಬೇಕೆಂದು ತುಕಾರಾಂ ಹೇಳಿದರೆ ಬಸವಣ್ಣನವರು ಪರಸ್ತ್ರೀಯರನ್ನು ಮಹಾದೇವಿ ರೂಪದಲ್ಲಿ ನೋಡಿದ್ದಾರೆ

 ʼ ತುಕಾ ಮಣೆ’ ಎನ್ನುವುದು ತುಕಾರಾಂನ ಅಂಕಿತ ನಾಮ. ಬಸವಣ್ಣನವರು ʼʼಕೂಡಲಸಂಗಮ ದೇವಾ’ʼ ಎಂದು ಅಂಕಿತನಾಮವನ್ನು ಬಳಸಿದ್ದಾರೆ. ಇಬ್ಬರೂ ಮನುಷ್ಯತ್ವಕ್ಕೆ ಬೆಲೆ ನೀಡಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ, ಯಾರದೆ ಸಹಾಯವಿಲ್ಲದೆಯೇ ದೇವರನ್ನು ಹೇಗೆ ಮುಟ್ಟಬಹುದೆಂಬುದನ್ನು ಬಸವಣ್ಣ ಮತ್ತು ತುಕಾರಾಂ ಇಬ್ಬರೂ ದಾರಿ ತೋರಿಸಿದ್ದಾರೆ. ಆಡಂಬರದ ಪೂಜೆ ಪುನಸ್ಕಾರಗಳು. ಇಬ್ಬರಿಗೂ ಸಮ್ಮತವಿಲ್ಲ: ದೇವಸ್ಥಾನಕ್ಕೆ ಹೋಗದಯೇ ಭಕ್ತಿಯಿಂದ ದೇವರನ್ನು ಪಡೆಯಬಹುದೆಂದು ತುಕಾರಾಂ ಹೇಳಿದರೆ ಬಸವಣ್ಣನವರು ‘ಎನ್ನ ಕಾಲೇ ಕಂಬ’ ಎಂದು ಹೇಳಿ ಪ್ರತಿಯೊಬ್ಬನ ದೇಹವೇ ದೇವಸ್ಥಾನವೆಂಬ ಅದ್ಭುತ ಕಲ್ಪನೆಯನ್ನು ನೀಡಿದ್ದಾರೆ.

“ಪತಿವ್ರತೆಗೆ ಗಂಡನೊಬ್ಬನೇ. ಅದೇ ರೀತಿ ಭಕ್ತನಿಗೆ ದೇವನೊಬ್ಬನೇ’ ಎಂದು ತುಕಾರಾಂ ಹೇಳಿದರೆ, ಬಸವಣ್ಣನವರು

ನಂಬಬಲ್ಲ ಹೆಂಡತಿಗೆ ಗಂಡನೊಬ್ಬ ಕಾಣಿರೋ!

ನಂಬಬಲ್ಲ ಭಕ್ತರಿಗೆ ದೇವನೊಬ್ಬ ಕಾಣಿರೋ! ಎಂದು ಹೇಳಿದ್ದಾರೆ.

‘ದೇವನೊಬ್ಬ ನಾಮ ಹಲವು’ ಎಂಬ ಅವರ ವಚನ ಸುಪ್ರಸಿದ್ಧವಾದುದು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಅರಣ್ಯದೊಳು ಪಣ್ಯ | ನಾರಿ ಮಾನವ ಮಾರಿ

ದಾರಿಗೊಂಡವರ ಸೂರೆಗೊಂಬಳು ಗುರುವೆ

ಸೇರಿದೆನು ನಿಮ್ಮ ಕೃಪೆಯಾಗು  ||೪೬||

ಗಂಡು ಹೆಣ್ಣುಗಳ ಆಕರ್ಷಣೆಯಲ್ಲಿ ಕಾಮನ ಪ್ರಾದುರ್ಭಾವವಾಗುವಂತೆ,  ಮಾಯೆಯು ಜೀವಿಗಳ ಮೋಹದಲ್ಲಿ ಮೈದೋರುತ್ತಾಳೆ. ೨೮ನೆಯ ತ್ರಿಪದಿಯ ತಿರುಳಿನಲ್ಲಿ ತಿಳಿಸಿದಂತೆ, ಮನದ ಮುಂದಣ ಆಸೆಯೇ ಮಾಯೆಯಾಗಿ ಪರಿವರ್ತನೆ

ಹೊಂದುವದು. ಈ ಮಾಯೆಯು ಮಾನವನಿಗೆ ಮಹಾಮಾರಿಯಾಗಿದ್ದಾಳೆ. ಮಾರಿಯೆಂದರೆ ಮೃತ್ಯುದೇವತೆ. ಇದು ಪ್ರ ಸಿದ್ಧವಾದ ಅರ್ಥ, ವೇದಾಂತಿಗಳು ಮಾಯೆಗೆ ಅವಿದ್ಯೆ, ಅಜ್ಞಾನ ಅಥವಾ ಅಧ್ಯಾಸವೆಂದು ಕರೆದಿರುವರು. ಅಜ್ಞಾನದಿಂದ ಇಲ್ಲದ ಸಂಸಾರದಲ್ಲಿ ಆರೋಪಹೊರಸಿ ಮೋಹಗೊಂಡು ಮರುಳಾಗುವದೇ ಮಾಯೆಯ ಮುಖ್ಯಕಾರ್ಯ. ಸರ್ವಜ್ಞ ಕವಿಯು-

“ಜೊಳ್ಳು ಮನುಜರು ತಾವು ಸುಳ್ಳು ಸಂಸಾರದೊಳು

ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ

ಹೊಳ್ಳಾಡುತಿಹರು ಸರ್ವಜ್ಞ “

ಎಂದು ಮೇಲಿನ ಅಭಿಪ್ರಾಯವನ್ನೇ ಪುಷ್ಟಿಕರಿಸಿದ್ದಾನೆ. ಮಾಯೆಯ ಬಗ್ಗೆ ಶಿವಶರಣರ   ವ್ಯಾಖ್ಯಾನ ಸರಳ ಹಾಗೂ ಸುಸ್ಪಷ್ಟವಾಗಿದೆ. ಅಕ್ಕಮಹಾದೇವಿಯು ಮಾಯೆಯ ಯಥಾರ್ಥ ಸ್ವರೂಪವನ್ನು ತಿಳಿಸಿದ್ದಾಳೆ.

“ಪುರುಷನ ಮುಂದೆ ಸ್ತ್ರೀ ಯೆಂಬ ಅಭಿಮಾನವಾಗಿ ಕಾಡಿಹುದು.

ಸ್ತ್ರೀಯ ಮುಂದೆ ಪುರುಷನೆಂಬ ಅಭಿಮಾನವಾಗಿ ಕಾಡಿಹುದು.

ಲೋಕವೆಂಬ ಮಾಯೆಗೆ ಶಿವಶರಣರ ಪರಿ ಹೊರಗಾಗಿಪ್ಪುದು.

ಚನ್ನಮಲ್ಲಿಕಾರ್ಜುನನೊಲಿದ ಶರಣಂಗ ಮಾಯೆಯೂ ಇಲ್ಲ.

ಮರಹೂ ಇಲ್ಲ. ಅಭಿಮಾನವೂ ಇಲ್ಲ. ಕೇಳಾ ಅಯ್ಯ !”

ಪುರುಷನಿಗೆ ಸ್ತ್ರೀಯು ಮಾಯೆ, ಸ್ತ್ರೀಯಗಳಿಗೆ ಪುರುಷ ಮಾಯೆ. ಇವರೀರ್ವರ ಮನದ ಮುಂದಣಬಯಕೆಯೇ ನಿಜವಾದ ಮಾಯೆ, ಕಾಲನ ಪರಿವೆಯಿಲ್ಲದೆ ಕಾಮನ ಬಾಣದ ಗುರಿಗೆ ಜೀವಿಯು ಮಾಯೆಯ ಬಲೆಯಲ್ಲಿ ಬೀಳುತ್ತಾನೆ.

“ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ.

ಹಿಪ್ಪೆಯ ಮಾಡಿ  ಉಃಫೆಂದು ಊದುತ್ತಿದ್ದಾಳೆ.

ಇಂತೀ ತ್ರಿವಿಧ ಮುಖದಲ್ಲಿ ಕಾಡುವ ನಿಮ್ಮ

ಮಾಯೆಯ ಗೆಲವೊಡೆ

ಆರಳವಲ್ಲವಯ್ಯಾ ಅಖಂಡೇಶ್ವರ ನೀವು ಕರುಣಿಸದನ್ನಕ್ಕರ”. 

ಎಂದು ಷಣ್ಮುಖಶಿವಯೋಗಿಗಳು ಅಪ್ಪಣೆಕೊಡಿಸಿದಂತೆ ಮಾಯೆಯೆಂಬ ರಾಕ್ಷಸಿಯು ಸಕಲ ಪ್ರಾಣಿಗಳನ್ನು   ವಿನಾಶಗೊಳಿಸುತ್ತಿರುವಳು. ಕಾಲ-ಕಾಮ-ಮಾಯೆಂಬ ತ್ರಿವಿಧ ಮುಖದಲ್ಲಿ ಕಾಡುವ ಮಾಯೆಯನ್ನು ಗುರುಕರುಣೆಯಿಂದ ಮಾತ್ರ ಗೆಲ್ಲಬಹುದು. ಗುರುಕೃಪೆಯಾದ ಶರಣಂಗೆ ಮಾಯೆಯ ಉಪದ್ರವವಿಲ್ಲವೆಂಬುದೇ ಅಕ್ಕನ ಅಭಿಪ್ರಾಯ. ಹಡಪದಪ್ಪಣ್ಣನು-

“ಮರೆದರೆ ಮಾಯೆ; ಅರಿದರೆ ಮಾಯೆ ಇಲ್ಲವೆಂದು ತಿಳಿಸಿದ್ದಾನೆ. ಚೆನ್ನಬಸವಣ್ಣ ನವರು- “ಗುರುಕರುಣಿಸೆ ಬಿಟ್ಟಿತ್ತು ಮಾಯೆ’ಯೆಂದು ಸಿದ್ದಾಂತಗೊಳಿಸಿದ್ದಾರೆ.

ಗುರುಕರುಣೆಯಿಲ್ಲದ ದೇವತೆಗಳಿಗೂ ಮಾಯೆಯು ಬಿಟ್ಟಿಲ್ಲ. ಬಿಡುವದೂ

ಇಲ್ಲ, “ಬಿಟ್ಟೆನೆಂದರೆ ಬಿಡದೀಮಾಯೆ, ಬಿಡದಿದ್ದರೆ ಬೆಂಬತ್ತಿತ್ತು ಮಾಯೆ’

ಮತ್ತು : “ಬ್ರಹ್ಮಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ,

ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ,

ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ,

ತಾ ಘನವೆಂದಡ ತನ್ನ ನುಂಗಿತ್ತು ಮಾಯೆ

ಸರ್ವವೂ ನಿನ್ನ ಮಾಯೆ. ಒಬ್ಬರನೊಳಕೊಂಡಿದ್ದ ಹೇಳಾ ಗುಹೇಶ್ವರ ?

ಎಂದು ಮಾಯಾಕೋಲಾಹಲಿಗಳಾದ ಪ್ರಭುಗಳು ಗುಹೇಶ್ವರನಲ್ಲಿ ಮಾಯೆಯ ವ್ಯಾಪಕತೆಯನ್ನು ಹೇಳಿದ್ದಾರೆ. ಮಾಯೆಗೆ ಹೊರತಾದವರು ವಿರಳ.

ಶಿವಕವಿ ಬಸವಲಿಂಗಶರಣರು ಮಾಯೆಯ ಮಾರ್ಮಿಕ ವಿಷಯವನ್ನು

ಮನನೀಯವಾಗಿ ಪ್ರತಿಪಾದಿಸಿದ್ದಾರೆ.

ಅರಣ್ಯ’ವೆಂದರೆ ಸಂಸಾರ. ಶಾಸ್ತ್ರಕಾರರು ಅರಣ್ಯ ಪದಕ್ಕೆ ‘ಭವ’ವೆಂತಲೂ ಅರ್ಥೈಸಿದ್ದಾರೆ. ಪ್ರತಿಯೊಂದು ಭವ (ಜನ್ಮ ) ದಲ್ಲಿಯೂ ಮಾಯೆಯ ಬಲೆ ತಪ್ಪಿದ್ದಲ್ಲ. ಈ ಸಂಸಾರವೆಂಬ ಅರಣ್ಯದಲ್ಲಿ ಮಾಯೆಯು ಮಾನವನಿಗೆ ಮಾರಿಯಾಗಿ

ಕಾಡುತ್ತಿದ್ದಾಳೆ. ಬೆಲೆವೆಣ್ಣು ವೇಶ್ಯಯರೂಪದಲ್ಲಿ ಆಕರ್ಷಣಗೊಂಡು ಮನುಷ್ಯನನ್ನು ಮೂಲೆಗುಂಪನ್ನಾಗಿಸುತ್ತಾಳೆ. ಸೂಳೆಯು ಅಥವಾ ಪಣ್ಯನಾರಿಯು ತನ್ನ ವಿಟನ ಹಿತವನ್ನು ಬಯಸದೆ, ಆತನು ಸರ್ವಸ್ವವನ್ನು ಸೂರೆಮಾಡುವಂತೆ ಮಾಯೆಯು

ಮಾನವನನ್ನು ಮರವೆಯೆಂಬ ಬಲೆಗೆ ಸಿಕ್ಕಿಸಿ ಮುರಿಯುತ್ತಾಳೆ. ಪೂರ್ವಸುಕೃತದಿಂದ ಯಾರಾದರೂ ಪಾರಮಾರ್ಥಿಕ ಜೀವನವನ್ನು ಕಂಡುಕೊಂಡರೆ ಅವರನ್ನೂ ತನ್ನತ್ತ ಬಲಾತ್ಕಾರವಾಗಿ ಎಳೆದುಕೊಳ್ಳುತ್ತಾಳೆ. ಶಿವಭಕ್ತಿಪಥದಲ್ಲಿ ದಾರಿಹಿಡಿದ ಭಕ್ತನಿಗೆ ತನು- ಮನ-ಧನಗಳಿಗೆ ತೊಂದರೆ ಕೊಡುತ್ತಾಳೆ. ಗುರುವೆ ! ಶರಣರು ಉಪದೇಶಿಸಿದಂತೆ ನಿನ್ನ ಕರುಣೆಯಿಂದಲೇ ಇವಳ ಜಾಲದಿಂದ ಪಾರಾಗಬಹುದೆಂದು ನಿಶ್ಚಯಿಸಿ ನಿನ್ನ ಪಾದವನ್ನು ಸೇರಿದೆನು. ಮಾಯೆಗೆ ಅಳುಕದ, ಅಂಜದ ಶರಣ ಮಾರ್ಗದತ್ತ ಮುನ್ನಡೆಸಿ ಮಾಯೆಯ ಜಾಲವನ್ನು ಪರಿಹರಿಸು.

ಚಿಕ್ಕವ್ಯಾಧನ ಬಲೆಗೆ | ಸಿಕ್ಕಿದಣ್ಣಗಳೆಲ್ಲ

ರಕ್ಕಸಿಯ ಮನೆಯ ಮಕ್ಕಳಹರು ಗುರುವೆ

ಚಕ್ಕನೆ ಎನಗೆ ಕೃಪೆಯಾಗು   || ೪೭ ||

ಮಾಯೆ ಜೀವಿಗಳಿಗೆ ರಾಕ್ಷಸಿ ಜೀವಿಗಳನ್ನು ಹಿಡಿಸಿ ನುಂಗುವ ಹಿರಿಯ ಒಡತಿ. ಅವಳಿಗೆ ಸಹಾಯಕ ಚಿಕ್ಕ ಬೇಟೆಗಾರ; ಬೇಡ. ತಾನು ಚಿಕ್ಕವನಾದರೂ ಜೀವಿಗಳನ್ನು ತನ್ನ ಬಲೆಯೊಳಗೆ ಹಿಡಿಯುವಲ್ಲಿ ಬಲು ಜಾಣನಾಗಿದ್ದಾನೆ. ತನ್ನ ಬಲೆಗೆ ಬಿದ್ದ

ಪ್ರಾಣಿಗಳೆಲ್ಲವನ್ನು ಮಾಯಾರಾಕ್ಷಸಿಯ ಬಳಿಗೆ ಕಳುಹಿಸುತ್ತಾನೆ. ಇದೇ ಮಾತನ್ನು ಸ್ವತಂತ್ರ ಸಿದ್ಧಲಿಂಗೇಶ್ವರರು –

‘ಜಗದಗಲದ ಮಾಯಾಜಾಲವ ಹಿಡಿದು

ಕಾಲನೆಂಬ ಜಾಲಗಾರ, ಮಾಯಜಾಲವ ಬೀಸಿದ ನೋಡಯ್ಯ

ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ

ಬಲ್ಲ ಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ

ಆ ಕಾಲನ ಬಲೆಯಗೆ ಸಿಕ್ಕಿ ಬೀಳುತ್ತಿದೆ ಜಗವೆಲ್ಲ”

ಎಂದು ಹೇಳಿ; ಜಗದಗಲವಾದ ಮಾಯಾ ಬಲೆಯಲ್ಲಿ ಬೀಳುತ್ತಿರುವ ಜಗದ ಜೀವಿಗಳನ್ನು ಕಂಡು ಕನಿಕರಪಟ್ಟಿದ್ದಾರೆ.

ಮಾನವರನ್ನು ಮಾಯಾಬಲೆಯಲ್ಲಿ ಬೀಳಿಸುವ ಬೇಟೆಗಾರನು. ಈ ಬೇಟೆಗಾರನು  ಮಾನವನ ಮೈಯಲ್ಲಿ ಚಿಕ್ಕವನಾಗಿ ವಾಸಮಾಡಿದ್ದರೂ ಅವನ ಕೆಲಸ ಭಯಂಕರವಾಗಿದೆ.ಅರ್ಥಾತ್ ಮನುಷ್ಯನಲ್ಲಿ ಚಿಕ್ಕದಾದ ಆಶೆಯೆಂಬ ಬೇಡನು ಅವನನ್ನು (ಮಾನವನನ್ನು) ಆಶಾಪಾಶದಲ್ಲಿ ಕಟ್ಟಿ ಮೋಹಾಂಗನೆಯರ ಬಲೆಗೆ ಬೀಳಿಸುತ್ತಾನೆ. ಮೋಹಪಾಶದಿಂದ ಹೊರಗೆ ಬಾರದೆ ಮಾರಿಮಾಯೆಯ ಮನೆಗೆ ತಲುಪಬೇಕಾಗುವದು. ಭವಚಕ್ರದಲ್ಲಿ ತಿರುಗಬೇಕಾಗುವದು. ಅಂತೆಯೇ ಶಿವಕವಿಯು ಚಕ್ಕನೆ ಎನಗೆ ಕೃಪೆಯಾಗೆಂದು ಬೇಡಿದ್ದಾನೆ. ಈ ಮಾಯಾಪಾಶದಲ್ಲಿ ಬಂಧಿತನಾಗುವದಕ್ಕಿಂತ ಮುಂಚೆಯೇ ತೀವ್ರವಾಗಿ ನನ್ನನ್ನು ಪಾರುಮಾಡೆಂದು ಪ್ರಾರ್ಥಿಸಿದ್ದಾನೆ. ಓ ಗುರುವೆ ! ಚಿಕ್ಕವ್ಯಾಧನ ಬಲೆಯಲ್ಲಿ ಬೀಳಿಸದೆ ರಕ್ಷಿಸು.

ಹುಲ್ಲು ಮೇಯಲು ಬಂದ | ಹುಲ್ಲೆಯಾ ಕರುವನ್ನು

ಹುಲ್ಲೆ ಹುಲಿಯಾಗಿ ಮೆಲ್ಲುವದ ಬಲ್ಲೆನಾ-

ನೊಲ್ಲೆ ಶ್ರೀ ಗುರುವೆ ಕೃಪೆಯಾಗು         ||೪೮ ||

ಹುಲ್ಲೆ-ಚಿಗರಿ (ಜಿಂಕೆ) ಕರುವೆಂದರೆ ಅದರ ಮರಿ, ಚಿಕ್ಕದಾದ ಚಿಗರಿಯ ಮರಿಯು ಎಳೆಯ ಹುಲ್ಲಿಗಾಗಿ ಜಿಗಿಯುತ ಹೊಗುವದು. ಇದು ಅದರ ಸ್ವಭಾವ. ಅದರಂತೆ (ಜಿಂಕೆಯ ಮರಿಯಂತೆ) ಹಾರುವ (ಚಂಚಲವಾದ) ಜೀವಾತ್ಮನು ಹುಲ್ಲಿನಂತೆ ನಿಸ್ಸಾರವಾದ, ಬೆಲೆಯಿಲ್ಲದ ಸಾಂಸಾರಿಕ ವಿಷಯ ಸುಖವನ್ನು ಮೇಯ (ತಿನ್ನಲು ಬರುತ್ತಾನೆ.) ಆದರೆ ಹುಲ್ಲಿಗಾಗಿ ಹಂಬಲಿಸಿ ಮೇಯುವಲ್ಲಿ ತಲ್ಲೀನವಾದ ಹುಲ್ಲೆಯನ್ನು ಹುಲಿಯು ನೋಡಿ ಆನಂದದಿಂದ ತಿಂದುಹಾಕುತ್ತದೆ. ಹುಲಿಗೆ ಹುಲ್ಲೆಯು ಒಲುವಿನ ಓಗರ. ಅದನ್ನು ತಿನ್ನದೆ ಬಿಡುವದಿಲ್ಲ. ಹುಲ್ಲೆಯ ಕರುವಿನಂತಿದ್ದ ಜೀವಾತ್ಮನ ಕರಣವು ಸಾಂಸಾರಿಕ ವಿಷಯ ಸುಖವನ್ನು ಆಸ್ವಾದಿಸಲು ಬಯಸಿ, ಬಯಸಿ ಅಹಂಕಾರ-ಮಮಕಾರಗಳು ಅತಿಯಾಗಿ ಹೆಬ್ಬುಲಿಯಂತೆ ಅವನನ್ನೇ ನಾಶಮಾಡಿ ಬಿಡುತ್ತವೆ. ಜೀವಿಗೆ ಸಂಸಾರದ ಸುಖ ಸಿಕ್ಕದೆ ಹೋಗುತ್ತದೆ ಮತ್ತು ಅಹಂಕಾರಿಗೆ ಸುಖದ ಅನುಭವ ಆಗುವದಿಲ್ಲವೆಂಬುದು ಅನುಭವದ ನುಡಿ.

ಗುರುವೆ ! ನಾನು ಇದೆಲ್ಲವನ್ನು ನಿನ್ನ ದಯೆಯಿಂದ ತಿಳಿದಿದ್ದೇನೆ. ಅದು ಕಾರಣ

ಈ ಸಾಂಸಾರಿಕ ವಿಷಯವನ್ನು ತ್ಯಜಿಸಿ ನಿನ್ನ ಮೊರೆ ಹೊಕ್ಕಿದ್ದೇನೆ ರಕ್ಷಿಸು ಮತ್ತು ಷಣ್ಮುಖ

ಸ್ವಾಮಿಗಳು –

‘ಹುಲಿಯ ಬಾಯಲ್ಲಿ ಸಿಕ್ಕಿದ ಹುಲ್ಲೆಯಂತೆ

ಸರ್ಪನ ಬಾಯಲ್ಲಿ ಸಿಕ್ಕಿದ ಕಪ್ಪೆಯಂತೆ,

ಸಕಲಲೋಕಾದಿ ಲೋಕಗಳು ಮಾಯೆಯ ಬಲೆಯಲ್ಲಿ ಸಿಕ್ಕಿ

ಸೆರೆ ಹೋಗುವದ ಕಂಡು ನಾನಂಜಿ ನಿಮ್ಮ ಮೊರೆಹೊಕ್ಕೆ

ಕಾಯಯ್ಯ ಕಾರುಣ್ಯವಿಧಿಯೆ | ಅಖಂಡೇಶ್ವರಾ?

ಎಂದು ಶಿವನಲ್ಲಿ ಬೇಡಿಕೊಂಡಂತೆ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಹುಲಿಯ ಬಾಯಲ್ಲಿ ಸಿಕ್ಕ ಹುಲ್ಲೆಯ ರಕ್ಷಕರಿಲ್ಲದೆ  ನಾಶವಾಗುವಂತೆ, ಹಾವಿನ ಬಾಯಲ್ಲಿ ಸಿಕ್ಕ ಕಪ್ಪೆಯಂತೆ ಮಾಯೆಯ ಬಲೆಯಲ್ಲಿ ಬಿದ್ದ ನಾನು ನಿನ್ನಿಂದಲೇ ರಕ್ಷಿಸಲ್ಪಡಬೇಕು. ನೀನಲ್ಲದೆ ಬೇರೆ ರಕ್ಷಕರಿಲ್ಲ. ನೀನೇ ಕಾರುಣ್ಯಮಯನೂ ರಕ್ಷಕನೂ ಇರುವಿ. ನನ್ನ ದುರ್ಗುಣಗಳನ್ನು ದೂರಮಾಡಿ ಸುಗಣಗಳನ್ನು ದಯಪಾಲಿಸುವವನೂ, ಅಹಂಕಾರವನ್ನು ನಿರಸನ ಮಾಡುವವನೂ ನೀನೇ. ಆದ್ದರಿಂದ ಗುರುನಾಥ ! ಹುಲ್ಲಿನಂತೆ ನಿಸ್ಸಾರವಾದ ಸಂಸಾರವನ್ನು ಪ್ರಸಾದವನ್ನಾಗಿಸಿ ಸ್ವೀಕರಿಸುವ ಸುಬುದ್ಧಿಯನ್ನು ಅನುಗ್ರಹಿಸು. ಸಾಂಸಾರಿಕ

ವಿಷಯಗಳು  ಪ್ರಸಾದವಾದರೆ ಪೋಷಕವಾಗುವದು. ಅದರಿಂದ ಮುಕ್ತನಾಗಬಹುದು. ಗುರುವೆ ! ಹುಲ್ಲೆಯ ಕರುವಿನಂತಿದ್ದ ನನ್ನ ಹರಣವು ಹಮ್ಮಿನಂತಿದ್ದ ಹೆಬ್ಬುಲಿಯ ಬಾಯಿಗೆ ಬೀಳದಂತೆ ರಕ್ಷಿಸು ಮತ್ತು ನನ್ನ ಹರಣವು ಹಮ್ಮಿನಂತಿದ್ದ ಹೆಬ್ಬುಲಿಯ

ಬಾಯಿಗೆ ಬೀಳದಂತೆ ರಕ್ಷಿಸು. ಮತ್ತು ನನ್ನ ಜೀವವಾಸನೆಗಳನ್ನು ಹಾಗೂ ಹಮ್ಮು ಬಿಮ್ಮುಗಳನ್ನು ನಿವಾರಿಸಿ ಶಿವಪ್ರಸಾದವನ್ನಾಗಿಸುವ ಸರಳ ಸಾತ್ವಿಕವಾದ ಶರಣ ಸಂಸಾರವನ್ನು ಕರುಣಿಸು.

ಹುಲಿ ಹುಲ್ಲೆಗಳು ತಮ್ಮ | ಕೊಲುವ ವ್ಯಾಧರ ತಲೆಯ

ಸನೆನುಂಗಿ ಮುಂಡ-ಸುಳಿದಾಡುವದ ಕಂಡಾ-

ನಲಸಿದೆನು ಗುರುವೆ ಕೃಪೆಯಾಗು       ||೪೯||

ಜೀವಾತ್ಮನಿಗೆ ಜೀವಭ್ರಾಂತಿಯನ್ನು ಹೋಗಲಾಡಿಸುವಲ್ಲಿ ಶಾಸ್ತ್ರಕಾರರಾಗಲಿ, ವಚನಕಾರರಾಗಲಿ ಸಾಕಷ್ಟು ಬೆಡಗಿನ ವಚನಗಳನ್ನು ಹೇಳಿದ್ದಾರೆ. ಗಹನವಾದ ವಿಷಯವನ್ನು ಸಹಜವಾಗಿ ಹೇಳಿದರೆ ಸಾಧಕರ ಮನಸ್ಸಿಗೆ ನಾಟುವದಿಲ್ಲ. ಅದಕ್ಕಾಗಿ

ಆಳವಾಗಿ, ದೀರ್ಘವಾಗಿ ವಿಚಾರಿಸಲೆಂದು ಇಂಥ ಅನೇಕ ಬೆಡಗಿನ ವಚನಗಳಿಂದ ಶಿವಕವಿಯು ಮಾಯಾ ನಿರಸನವನ್ನು ಪ್ರತಿಪಾದಿಸಿದ್ದಾನೆ.

ಹುಲಿ-ಹುಲ್ಲೆಗಳು ತಮ್ಮನ್ನು ಕೊಲ್ಲುವ ಬೇಟೆಗಾರನ ತಲೆಯನ್ನು ಹೇಗೆ ನುಂಗಬಲ್ಲವು ? ಎಂಬ ಪ್ರಶ್ನೆ ಸಹಜವಾದುದು. ಇಲ್ಲಿ ವಾಚ್ಯಾರ್ಥ ಅಸಂಭವವಾದರೂ ಲಕ್ಷ್ಯತರ್ಥ ಸಂಭವಿಸುತ್ತದೆ. ಬೇಟೆಯಾಡುವ ಬೇಡನು ಹುಲಿ-ಜಿಂಕೆ ಮೊದಲಾದ

ಪ್ರಾಣಿಗಳಿಗಾಗಿ ಗಿಡ ಗಂಟೆಗಳ ಮರೆಯಲ್ಲಿ ಕುಳಿತು ತನ್ನ ಮನದಲ್ಲಿ ವಿಚಾರ ಮಾಡುತ್ತಿರುತ್ತಾನೆ. ದೇವರು ಪ್ರತಿಯೊಂದು ಪ್ರಾಣಿಗೂ ತನ್ನನ್ನು ರಕ್ಷಿಸಿಕೊಳ್ಳುವ  ಜ್ಞಾನವನ್ನು ಬಲವನ್ನು ಕೊಟ್ಟಿರುತ್ತಾನೆ. ಆ ದಿಶೆಯಲ್ಲಿ ಪ್ರಾಣಿಗಳೂ ಸಹ ಬೇಟೆಗಾರನ

ಸುಳಿವನ್ನು ಕಂಡುಹಿಡಿದು ತಮ್ಮನ್ನು ಕೊಲ್ಲಬಂದ ಅವನ ಗುರಿಯಿಂದ ಪಾರಾಗಿ ಹೋಗುತ್ತವೆ. ಆಗ ವಿಚಾರಿಸುತ್ತಿರುವ ವ್ಯಾಧನ ತಲೆಯು ಬರಿದಲೆಯಾಗುತ್ತದೆ. ಜ್ಞಾನಶೂನ್ಯವಾದ ತಲೆಯು ಅದಾಗುತ್ತದೆ. ವಿಚಾರ ಶೂನ್ಯನಾದ ಬೇಟೆಗಾರನ

ಮುಂಡಮಾತ್ರ ಉಳಿಯುತ್ತಿದೆ. ಬೇಟೆಯಾಡುವ ಬಗ್ಗೆ ವಿಚಾರಿಸಿ, ಪ್ರಾಣಿಗಳನ್ನು ನಿರೀಕ್ಷಿಸಿ, ಕೊನೆಗೆ ಯಾವ ಬೇಟೆಯೂ ಸಿಗದಿದ್ದರೆ ಅವನಿಗೆ ಅಲಸಿಕೆ (ಬೇಸರ) ಯಾಗುವಲ್ಲಿ ಸಂದೇಹವಿಲ್ಲ. ಇದು ಶಬ್ದಾರ್ಥಗತವಾದ ಬಾಹ್ಯಚಿತ್ರ.

ಅಂತರಾರ್ಥ ಇಂತಿದೆ. ಹುಲಿ- ಅಹಂಕಾರ; ಹುಲ್ಲೆ ಜೀವ; ಕೊಲ್ಲುವವ್ಯಾಧ ವಿಷಯಗಳಲ್ಲಿಯ ಆಶೆಯೆಂಬ ಬೇಡ. ವಿಷಯಗತವಾದ ಆಶೆಯು ಅಹಂಕಾರಿ ಜೀವನನ್ನು  ನಿಸ್ತೇಜಗೊಳಿಸಿ ನಾಶಮಾಡುತ್ತದೆ. ಅಂದರೆ ಅಹಂಕಾರಿಯ ಆಶೆಯು ಕೈಗೂಡದಿದ್ದರೆ ಕಳೆಗುಂದಿದಂತಾಗುವದು ಸಹಜ, ಶಕ್ತಿ ಹೀನನಾಗಿ ವಿನಾಶೋನ್ಮುಖನಾದ ಜೀವಾತ್ಮನು

ಪೂರ್ವಸುಕೃತದಿಂದ, ಗುರು ಕೃಪೆಯ ಬಲದಿಂದಲೂ ಜ್ಞಾನಿಯಾದರೆ ಆಶೆಯೆಂಬ ಬೇಡನ ತಲೆಯಲ್ಲಿ ಶೂನ್ಯವಾಗಿ ಮುಂಡಮಾತ್ರ ಉಳಿಯುವದು. ಅರ್ಥಾತ್ ಗುರುಕರುಣೆಯಿಂದ ಜೀವನು ಸುಜ್ಞಾನವನ್ನು ಪಡೆದರೆ ಅಹಂಕಾರ ಮತ್ತು ಜೀವಭಾವವು ತೊಲಗಿ ಆಶೆಯು ಇಲ್ಲದಾಗುವದು. ಆಶೆಯೇ ಇಲ್ಲವಾದ ಮೇಲೆ ಅದರ ಉಪಟಳ ಇನ್ನಿಲ್ಲದಾಗುವದು.

ಈ ತ್ರಿಪದಿಯನ್ನು ಇನ್ನೊಂದು ತೆರನಾಗಿ ವಿಚಾರಿಸಬಹುದು. ಬೇಡನು ಅನಿಮಿತ್ತವೈರಿಗಳಾದ ಪ್ರಾಣಿಗಳನ್ನು ಕೊಲ್ಲುತ್ತಿದ್ದರೆ; ಮಾನವರಿಗೆ ನಿಮಿತ್ತವೈರಿಗಳೆನಿಸಿದ ಅಹಂಕಾರ, ಜೀವಭಾವ, ಆಶೆ ಇತ್ಯಾದಿ ದುರ್ಗುಣಗಳನ್ನು ಬೇಟೆಯಾಡುವರು

ಗುರು-ಜಂಗಮರು. ಇವರು ತಮ್ಮ ಉಪದೇಶವೆಂಬ ಬಾಣದಿಂದ ಮಾನವರಲ್ಲಿಯ ದುರ್ಗುಣಗಳನ್ನು ಕಡೆಯುತ್ತಾರೆ. ಅಲ್ಪಜ್ಞನಾದ ಮನುಷ್ಯನು ಗುರೂಪದೇಶವನ್ನು ನುಂಗಿಯೂ (ಪಡೆದೂ) ಪುನಃ ಪುನಃ ಅಧಃಪ್ರವೃತ್ತಿಯಲ್ಲಿ ನಡೆದರೆ ಬೇಟೆಗಾರರೆನಿಸಿದ ಗುರು ಜಂಗಮರಿಗೆ ಬೇಜಾರವಾಗುವದು ಖಂಡಿತ. ಮಾನವನು ಜ್ಞಾನವನ್ನು ಹೊಂದಿಯೂ ಅಜ್ಞಾನಿಯಾದರೆ ನಿಜತಲೆಯಿಲ್ಲದಾಗುವನು. ಅವನ ದಿಂಡ ಮಾತ್ರ ತೋರುವದು. ಗುರುವೆ ! ಎನ್ನ ದುರ್ಗುಣಗಳನ್ನು ದೂರಮಾಡಿ ಸುಗುಣಿಯನ್ನಾಗಿ ಮಾಡು. ಜೀವಭಾವದ ಆಲಸ್ಯವನ್ನು ಕಳೆದು ಸತ್ಕ್ರಿಯೆಗಳಲ್ಲಿ ಉತ್ಸಾಹಿಯನ್ನಾಗಿ ಮಾಡು.

ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ

ನಾರ ಹಂಗಿಲ್ಲದೇರಿದೆ ನಾನಿಳಿಯ

ಲಾರೆನೈ ಗುರುವೆ ಕೃಪ

ಈ ಪದ್ಯದ ಮಾದರಿಯಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸಿದ್ದಾನೆ –

ಉರ್ಧ್ವ ಮೂಲಮಧಃಶಾಖಮ್

ಅಶ್ವತ್ಥಂ ಪ್ರಾಹುರವ್ಯಯಮ್ |

ಛಂದಾಂಸಿ ಯಸ್ಯ ಪರ್ಣಾನಿ

ಯಸ್ತಂ ವೇದ ಸ ವೇದವಿತ್ || ೧೫.೧ ||

ಹಾಲಿನಿಂದ ಉತ್ಪನ್ನವಾಗುವ ಬೆಣ್ಣೆಯು ಮಜ್ಜಿಗೆಯಲ್ಲಿ ಮೇಲೆ ತೇಲುತ್ತಿರುವಂತೆ, ಸಕಲಸಾರತರವಾದ ಆತ್ಮ ತತ್ತ್ವವೂ ಊರ್ಧ್ವವಾಗಿದೆ. ಅದು ಸೂಕ್ಷ್ಮಕ್ಕಿಂತಲೂ ಸೂಕ್ಷ್ಮವೂ, ಸ್ಥೂಲಕ್ಕಿಂತಲೂ ಸ್ಥೂಲವೂ ಆಗಿ, ಎಲ್ಲ ಜಗತ್ತಿಗೆ ಕಾರಣವಾಗಿ, ನಿತ್ಯವಾಗಿ

ಸರ್ವಕ್ಕೂ ಮಿಗಿಲಾಗಿ ತೋರುತ್ತದೆ. ಇದುವೆ ಊರ್ಧ್ವವೆನಿಸುವದು. ಈ ಪರವಸ್ತುವಿ ನಿಂದ ಉತ್ಪನ್ನವಾದ ಸಂಸಾರ ವೃಕ್ಷವೇ ಅಶ್ವತ್ಥವು. ಈ ಮರದ ಮೂಲವು ಮೇಲೆ ಇದ್ದು ಶಾಖೆಗಳು ಕೆಳಮುಖವಾಗಿವೆ. ಇದು ಸನಾತನವಾದುದು. ಇದರ ಎಲೆಗಳು

ಛಂದಸ್ಸುಗಳು. ಅದನ್ನು ಯಾವನು ಚನ್ನಾಗಿ ತಿಳಿದುಕೊಳ್ಳುವನೋ ಅವನು ವೇದವನ್ನು ತಿಳಿದವನಾಗುವನು. ಕಠೋಪನಿಷತ್ತಿನಲ್ಲಿಯೂ –

ಊರ್ಧ್ವಮೂಲೋವಾಕ್ಯಾಖ

ಏಷೋಡಶ್ವತ್ಥ: ಸನಾತನಃ

ತದೇವ ಶುಕ್ರಂ ತದ್ಬ್ರಹ್ಮ

ತದೇವಾಮೃತಮುಚ್ಯತೇ || ೨೩-೧ ||

ಮೇಲೆ (ಬೊಡ್ಡೆ)-ಬೇರು, ಕೆಳಗೆ ಕೊಂಬೆಗಳು ಇರುವ ಅಶ್ವತ್ಥ ವೃಕ್ಷವು ಬಹು ಸನಾತನವಾಗಿದ್ದು, ವಿಶುದ್ಧ ಜ್ಯೋತಿಸ್ವರೂಪವಾಗಿದೆ. ಅದುವೆ ಬ್ರಹ್ಮವಸ್ತು, ಅದಕ್ಕೇನೆ ಅಮೃತವೆಂದು ಕರೆಯಲಾಗುವದು. ಈ ಸ್ವಯಂಜ್ಯೋತಿ, ಅಮೃತಮಯ ಬ್ರಹ್ಮನಿಂದ ಹುಟ್ಟಿದ ಕೆಳಮುಖವಾದ ಸೃಷ್ಟಿಗೆ ಅಧಃಸೃಷ್ಟಿಯೆಂದು ಕರೆಯುತ್ತಾರೆ. ಸಾಂಸಾರಿಕ

ವಿಷಯಭೋಗಗಳೂ ಕೆಳಮುಖವಾಗಿವೆ. ಬ್ರಹ್ಮಸಂಭೂತನಾದ ಜೀವಾತ್ಮನು ವಿಷಯ ಭೋಗಗಳಲ್ಲಿ ತಲ್ಲೀನನಾದರೆ ಪುನಃ ಮೂಲಜ್ಞಾನದ ಅರಿವು ಹಾರಿಹೋಗುತ್ತದೆ. ಅಧೋಮುಖವಾದ ವಿಷಯಗಳನ್ನು ಕೆಳಮುಖವಾದ ಚಿತ್ತವೃತ್ತಿಯಿಂದ ತೀವ್ರವಾಗಿ, ಸಹಜವಾಗಿ ಗ್ರಹಿಸಿದಂತೆ; ಊರ್ಧ್ವಮುಖವಾದ ಮೂಲ ಪರವಸ್ತುವಿನ ಜ್ಞಾನವನ್ನು ಮಾಡಿಕೊಳ್ಳುವದು ಸುಲಭವಾಗುವದಿಲ್ಲ.

ಕಠೋಪನಿಷತ್ತು- ಭಗವದ್ಗೀತೆಗಳಂತೆ ಶಿವಕವಿಯು ಅಶ್ವತ್ಥವೃಕ್ಷದ ಕಲ್ಪನೆಯನ್ನು ಈ ವಿಲಕ್ಷಣವಾದ ತೆಂಗಿನಮರದ ನಿರೂಪದೊಡನೆ ವಾಚಕರಿಗೆ ಸನ್ನಿಹಿತಗೊಳಿಸಿದ್ದಾನೆ. ಇಲ್ಲಿಯೂ ತೆಂಗಿನಮರದ ಬೇರು ಆಕಾಶದಲ್ಲಿ ಬೆಳೆದಿವೆ. ಶಾಖೆಗಳು ಕೆಳಮುಖವಾಗಿವೆ. ಫಲಗಳು ಭೂಮಿಯನ್ನಾಶ್ರಯಿಸಿವೆ. ತೆಂಗು ಭೂಲೋಕದ ಕಲ್ಪವೃಕ್ಷ. ಅಶ್ವತ್ಥ  ಹಾಗಲ್ಲ. ತೆಂಗು ಕಲ್ಪವೃಕ್ಷದಂತೆ ಎಲ್ಲವನ್ನೂ ಕೊಡಬಲ್ಲುದು. ಅಶ್ವತ್ಥದಿಂದ ಹೆಚ್ಚಿನ ಲಾಭ ಸಿಕ್ಕದು. ತೆಂಗಿನ ದೃಷ್ಟಾಂತ ಗೀತೋಪನಿಷತ್ತುಗಳಿಗಿಂತಲೂ ಮಿಗಿಲಾಗಿದೆ. ತೆಂಗಿನ ಮರವು ಎಷ್ಟು ಎತ್ತರವಾಗಿದೆಯೋ ಹಾಗೆ ಶಿವ-ಜೀವರಿಗೂ ಅಷ್ಟು

ಅಂತರವಿದೆ. ಶಿವಾಂಶಿಕನಾದ ಜೀವನು ಫಲವನ್ನಾಶ್ರಯಿಸಿ ನಿಲ್ಲುವದು ಸರಿಯಲ್ಲ. ಮೂಲವನ್ನು ಅರಿಯಲೇಬೇಕು. ನಿವೃತ್ತಿ ಮಾರ್ಗದಿಂದಲೇ ಪ್ರವೃತ್ತಿಯಳಿಯುವದು. ಪ್ರವೃತ್ತಿಪಥಕ್ಕಿಳಿದ ಜೀವನು ನಿವೃತ್ತಿಯನ್ನು ಸಾಧಿಸುವ ರಂಗಭೂಮಿಯು

ಭೂವಲಯವೇ ಆಗಿದೆ. ಭೂಲೋಕದಲ್ಲಿಯೇ ಮಾನವ ಜನ್ಮದ ಸಾರ್ಥಕತೆಯನ್ನು ಸಾಧಿಸಲು ಸಾಧ್ಯವಾಗುವದು. ಸಕಲ ಸೌಭಾಗ್ಯದ ತವರು ಭೂಲೋಕ. ಸಕಲಸಿದ್ಧಿಯ ಆಗರ ಇಹಲೋಕ, ಭೌತಿಕ-ಪಾರಮಾರ್ಥಗಳೆರಡನ್ನು ಸಾಧಿಸುವ ಸ್ಥಾನವೂ ಇದಾಗಿದೆ.

ಪ್ರಭುಲಿಂಗಲೀಲೆಯಲ್ಲಿ ಶಿವನು ಪಾರ್ವತಿಗೆ ಉತ್ತರಿಸಿದ ನಿರೂಪವು ಅತ್ಯಂತ ಸಮೀಚೀನವಾಗಿದೆ- ”ನನ್ನ ಸನ್ನಿಧಿಯಲ್ಲಿದ್ದ ಈ ಪುಣ್ಯ ಜೀವಿಗಳು ಪುಣ್ಯ ತೀರಿದ ಮೇಲೆ ಪುನಃ ಭೂಲೋಕಕ್ಕೆ ತೆರಳಬೇಕಾಗುವದು. ಅಲ್ಲದೆ ಯೋಗ ಬಲ್ಲ ಯೋಗಿಗಳು ಸಹ ಮಾನವ ಶರೀರಿಗಳಾಗಿ ಭೂಮಿಯಲ್ಲಿ ಭಕ್ತಿಮಾರ್ಗದಿಂದ ಅಮೃತ ಫಲವನ್ನು ಪಡೆಯಬಲ್ಲರು. ಅಮರರಾಗಬಲ್ಲರು. ನಿತ್ಯಮುಕ್ತರಾಗುವರು’. ಭೂಮಿ ಯಲ್ಲಿಯೇ ಸಕಲ ಭೋಗಭಾಗ್ಯಗಳುಂಟು. ತೆಂಗಿನಂಥ ಅಮೃತ ಫಲ ಪಡೆಯಲು

ಸಾಧ್ಯವಾಗುವದು. ಈ ಫಲದಲ್ಲಿ ತೀರ್ಥ ಪ್ರಸಾದಗಳೆರಡೂ ಸಮನ್ವಿತವಾಗಿವೆ. ವೀರಶೈವ ಸಿದ್ದಾಂತದ ಮುಖ್ಯ ಫಲಗಳು

ಪಾದೋದಕ ಪ್ರಸಾದಗಳು. ಇವೆರಡರಿಂದಲೇ ಶರಣಜೀವನ, ಶರಣತತ್ವ ತಿರುಳು ಮೆರಗುಗೊಂಡಿದೆ.

ತೆಂಗಿನ ಫಲವು ಸುಲಭವಾಗಿ ಸಿಕ್ಕುವದಿಲ್ಲ. ತೆಂಗಿನಕಾಯಿಯನ್ನು ದೇವರಿಗೆ ಒಡೆಯುವದು ಸಾಮಾನ್ಯವಾದರೂ, ಸಾಂಕೇತಿಕ ಅರ್ಥ ಅಡಗಿದೆ. ಅಂತೆಯೇ ಕವಿಯು ಇಲ್ಲಿ ಇದರಿಂದ ಅನೇಕಾರ್ಥಗಳನ್ನು ಅಭಿವ್ಯಂಜಿಸಿ ತರಂಗಾಯಮಾನ ವಾಗಿಸಿದ್ದಾನೆ. ಅಜ್ಞಾನವೆಂಬ ಕಾಯಿ (ಜೀವಾತ್ಮನ ಶರೀರ ಅಥವಾ ಕಾಯ)ಯ ಮೇಲಿನ ಮಹಾಮಾರಿಯಾದ ಮಾಯೆಯೆಂಬ ಘಟ್ಟಿಯಾದ ಸಿಪ್ಪೆಯನ್ನು ತೆಗೆದು ಮಮಕಾರವೆಂಬ ಜುಬ್ಬರವನ್ನು ಸುಲಿದು ಅಹಂಕಾರವೆಂಬ ಚಿಪ್ಪನ್ನು ಒಡೆದಾಗ, ಮಾಯೆ, ಮಮಕಾರ, ಅಹಂಕಾರಗಳು ಕಳಚಿಹೋಗಿ ಅಮೃತಸದೃಶ್ಯವಾದ ನಿರ್ಮಲವಾದ ಎಳೆನೀರು, ಖೊಬ್ಬರಿಗಳು ಪ್ರಾಪ್ತವಾಗುತ್ತವೆ.  ಗುರುಕೃಪೆಯಿಂದ ಮಮಕಾರ-ಅಹಂಕಾರ ಮಾಯಾ ರಹಿತನಾದ ಶರಣನ ಹೃದಯವು ತೆಂಗಿನ ಹಾಲಿನಂತೆ ನಿರ್ಮಲವೂ ಖೊಬ್ಬರಿಯಂತೆ ಮಧುರವೂ ಆಗಿ ಶಿವನಿಗೆ ಸಮರ್ಪಿತ ವಾಗುತ್ತದೆ. ಇಂಥ ಶರಣನ ಹೃದಯವು ತೆಂಗಿನ ಹಾಲಿನಂತೆ ನಿರ್ಮಲವೂ ಖೊಬ್ಬರಿಯಂತೆ ಮಧುರವೂ ಆಗಿ ಶಿವನಿಗೆ ಸಮರ್ಪಿತವಾಗುತ್ತದೆ. ಇಂಥ ಶರಣನು ಊರ್ಧ್ವಮುಖಿಯಾಗಿ ಮೂಲ ತತ್ತ್ವವನ್ನು ಸೇರುತ್ತಾನೆ. ತ್ರಿಪದಿಯ ಅಂತರಾರ್ಥವು ಇಂತಾದರೆ, ವಾಚ್ಯಧ್ವನಿ ಕೆಳಗಿನಂತಿದೆ.

 ಅಧಃ ಪ್ರವತ್ತಿಯ ಮಾನವನ ಮನಸ್ಸು ಈ ಸಂಸಾರ ವೃಕ್ಷದಲ್ಲಿ ವ್ಯಕ್ತವಾಗಿ ತೋರುವ ಸ್ತ್ರೀಯಳ ಕುಚ-ಫಲವನ್ನು ಕಂಡು, ಆ ಕ್ಷಣದಲ್ಲಿಯೇ ಯಾರ ಹಂಗಿಲ್ಲದೆ ಸುಲಭವಾಗಿ ಅಲ್ಲಿಗೆ ಏರುತ್ತದೆ; ಭೋಗಲಾಲಸೆಯಿಂದ ಮನಸ್ಸು ನಿವೃತ್ತವಾಗು

ವುದಿಲ್ಲ. ಈ ಅಧೋಮುಖವಾದ ಮನಸ್ಸು ಸಾಂಸಾರಿಕ ಭೋಗದಿಂದ ಊರ್ಧ್ವ ಮುಖವಾಗಬೇಕಾದರೆ ಗುರುಕರುಣೆ ಅತ್ಯವಶ್ಯಬೇಕು.

ಗುರು ಕೃಪೆಯಿಂದ ಶುದ್ಧಾಂತಃಕರಣಿಯಾದ ಜೀವನು ಊರ್ಧ್ವ ಸೃಷ್ಟಿಯಲ್ಲಿ ನಡೆಯಬೇಕಾಗುವದು. ಮರದ ಬೇರಿನ ಕೊಂಬೆಗಳಿಗೆ ರಸಿರುವಂತೆ, ದೇಹದ ಮೂಲಬೇರು-ಮೂಲಜ್ಞಾನವು; ಆಗಸವೆಂದರೆ-ಬ್ರಹ್ಮರಂದ್ರ, ಅದರಿಂದಲೇ ಎಲ್ಲ

ಚೇತನಗಳು ಚಲಿಸುತ್ತವೆ. ಸಣ್ಣ ಮೆದುಳಿನಿಂದಲೇ ಶರೀರದ ಎಲ್ಲ ಕ್ರಿಯೆಗಳಿಗೆ ಪ್ರೇರಣೆ ದೊರೆಯುತ್ತದೆ. ಇಲ್ಲಿ   ನಾರಿಕೇಳಫಲವೆಂದರೆ ಇಷ್ಟಲಿಂಗವು. ಇದು ಶ್ರೀಗುರು ಕರುಣೆಯಿಂದ ಸಾಧ್ಯವಾಗುವದು. ಅವನಿಲ್ಲದೆ ಲಿಂಗದ ನೆಲೆಕಲೆಗಳು ತಿಳಿಯಲಾರವು. ಲಿಂಗದ ಉತ್ಪತ್ತಿಯೂ ಆಗುವದಿಲ್ಲ. ಯೋಗಾಭ್ಯಾಸಿಯಾದವನು ಬ್ರಹ್ಮರಂಧ್ರಕ್ಕೆರೆ ಬಹುದು. ಇಳಿದು ಬರುವದು ಕಠಿಣವಾಗುವದು. ಭ್ರಹ್ಮರಂಧ್ರದಿಂದಿಳಿದು ಜಾಗ್ರತಾವಸ್ಥೆಯಲ್ಲಿ ಫಲರೂಪ ಇಷ್ಟಲಿಂಗದ ಪೂಜೆ, ಅನುಸಂಧಾನವನ್ನು ಮಾಡಿ ನಿತ್ಯಮುಕ್ತರಾಗುವದೇ ವೀರಶೈವ ಸಿದ್ದಾಂತ.

ವೀರಶೈವರ ಪರಮ ಗುರುದೇವನು ಶಿಷ್ಯನ ಸಹಸ್ರಾರದಲ್ಲಿಯ ಚಿಚ್ಚ್ಯತನ್ಯವನ್ನು ಯೋಗ ಶಕ್ತಿಯಿಂದ ಶಿವದೀಕ್ಷೆಯಲ್ಲಿ ಇಷ್ಟಲಿಂಗವನ್ನಾಗಿ, ಅರುವಿನ ಕುರುಹನ್ನಾಗಿ ಕರುಣಿಸಬಲ್ಲನು. ಭೌತಿಕ ಮರವಾದ ತೆಂಗಿನ ಫಲದಲ್ಲಿ ತಂಪು, ಸೋಂಪು,

ಕಂಪುಗಳಿರುವಂತೆ, ಈ ಆಧ್ಯಾತ್ಮಿಕ ವೃಕ್ಷವಾದ ದೇಹದಲ್ಲಿ ಫಲರೂಪವಾದ

ಇಷ್ಟಲಿಂಗದಲ್ಲಿ ಶಿವಾತ್ಮವಿದ್ಯೆಯ ಸಾರಸರ್ವಸ್ವವು ಅಡಕವಾಗಿದೆ. ಲಿಂಗ ಸಾಕ್ಷಾತ್ಕಾರ

ದಿಂದಲೇ ಶರಣ ಮಾರ್ಗದ ಭದ್ರ ಬುನಾದಿ. ಅದಕ್ಕಾಗಿಯೇ ಜ.ಚ.ನಿ. ಯವರು

“ವೀರಶೈವ ಸಾಂಸ್ಕಾರಿಕ ಜೀವನ ಕಲೆಯನ್ನು ಬೋಧಿಸುವ ಪರಿಣತ ಪ್ರಜ್ಞೆಯ

ಪದ್ಯವಿದು’ ಎಂದು ಅನುಭವ ಪೂರ್ಣವಾಗಿ ಉಲ್ಲೇಖಿಸಿದ್ದು ಯಥೋಚಿತವಾಗಿದೆ.

ಈ ಚಿಕ್ಕದಾದ ತ್ರಿಪದಿಯಲ್ಲಿ ಅದೆಷ್ಟು ಅರ್ಥಗಳನ್ನು ಅಳವಡಿಸಿದ್ದಾರೆಂಬುದು

ಗಮನೀಯವಾಗಿದೆ. ಇಲ್ಲಿ ಶಿವಕವಿಯ ಅನುಭವ ಮಡುಗಟ್ಟಿದೆ. ಕೆನೆಗಟ್ಟಿದೆ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಬಯಲು, ನಿರ್ವಯಲು, ಬರಿಬಯಲು, ಬಚ್ಚಬರಿಯ ಬಯಲು ಮುಂತಾದ ಪಾರಿಭಾಷಿಕ ಪದಗಳು ವಿಶೇಷ ಗಮನ ಸೆಳೆಯುತ್ತವೆ. ಶೂನ್ಯ, ನಿಶೂನ್ಯ, ಸರ್ವಶೂನ್ಯ ನಿರಾಲಂಬ ಮುಂತಾದ ಪರ್ಯಾಯ ಪದಗಳಿಂದ ಇವು ಗುರುತಿಸಲ್ಪಡುವವು. ಶರಣರು ಪರವಸ್ತುವನ್ನುಬಯಲು ಎಂದು ಹೆಸರಿಸಿದ್ದಾರೆ. ಅವರ ದೃಷ್ಟಿಯಲ್ಲಿ ಪರವಸ್ತು ಕಾರ್ಯರೂಪವಾದ ವಿಶ್ವ ಹಾಗು ಕಾರಣರೂಪವಾದ ಮಹಾಲಿಂಗ ಇವೆರಡಕ್ಕೂ ಮೂಲವಾದುದು. ಅಂದರೆ ಅದು ಕಾರ್ಯವೂ ಅಲ್ಲ,ಕಾರಣವೂ ಅಲ್ಲ. ಅದು ಏನೂ ಅಲ್ಲದ್ದರಿಂದ ಮತ್ತು ಅದರೊಳಗೆ ಏನೂ ಇಲ್ಲದ್ದರಿಂದ ಅದು ಬರಿಬಯಲು. ವ್ಯಕ್ತಿಯು ಅಧ್ಯಾತ್ಮ ಸಾಧನೆಯ ಮೂಲಕ ಇಂತಹ ಬಯಲಿನಲ್ಲಿ (ಪರವಸ್ತು) ತನ್ನನ್ನು ಸಂಪೂರ್ಣವಾಗಿ ಲೀನಗೊಳಿಸಿ ಅದರಲ್ಲಿ ಸಮರಸವಾಗುವುದಕ್ಕೆ ಬಯಲಿನಲ್ಲಿ ಬಯಲಾಗುವುದು ಎನ್ನುವರು.

ಈ ಸ್ಥಿತಿಯನ್ನು ಕುರಿತು ಷಣ್ಮುಖ ಸ್ವಾಮಿಗಳು- ಆದಿ ಇಲ್ಲದ ಬಯಲು, ಅನಾದಿ ಇಲ್ಲದ ಬಯಲು, ಶೂನ್ಯವಿಲ್ಲದ ಬಯಲು,ನಿಶೂನ್ಯವಿಲ್ಲದ ಬಯಲು…. ಮಹಾಘನ ಬಚ್ಚಬರಿಯ ಬಯಲೊಳಗೆ ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆ ಎನ್ನುತ್ತಾರೆ. ಅಂದರೆ ಮಹಾಘನ ಮತ್ತು ಬಚ್ಚಬರಿಯ ಬಯಲು ಎನಿಸಿದ ಪರವಸ್ತುವಿನಲ್ಲಿ ಅಡಗಿ ಎತ್ತ ಹೋದೆನೆಂಬ ಭಾವವೂ ಅಳಿದ ಆನಂದದ ನಿಲವು. ಇದನ್ನೇ ಬಚ್ಚಬರಿಯ ಬಯಲೊಳಗೆ ಎಚ್ಚರವಡಗುವುದು, ಲಿಂಗಾಂಗ ಸಾಮರಸ್ಯವನ್ನು ಹೊಂದುವುದು ಅಥವಾ ಮೋಕ್ಷವನ್ನು ಪಡೆಯುವುದು ಎನ್ನಲಾಗಿದೆ.

ನಿರಾಕಾರ ಸ್ವರೂಪವಾದ, ಬಚ್ಚಬರಿಯ ಬಯಲೆನಿಸಿದ ಪರವಸ್ತುವನ್ನು ಅಧ್ಯಾತ್ಮ ಸಾಧಕನಾದ ಶರಣನು ಸಾಧನೆಯ ಪ್ರಥಮ ಹಂತದಲ್ಲಿ ಇಷ್ಟಲಿಂಗದ ರೂಪದಲ್ಲಿ ಕಾಣುವನು. ಸಾಧನೆಯ ಮುಂದಿನ ಹಂತದಲ್ಲಿ ಇಷ್ಟಲಿಂಗ ರೂಪದ ಪರವಸ್ತುವನ್ನೇ ಪ್ರಾಣಲಿಂಗದ ರೂಪದಲ್ಲಿ ಬಯಲಾಗಿ ಕಾಣುವನು. ಇದು ಭಾವದಲ್ಲಿಭಗವಂತನನ್ನು ಅಭಿವ್ಯಕ್ತಗೊಳಿಸುವ ಮತ್ತು ಆ ಭಾವವನ್ನೇ ಬಯಲುಗೊಳಿಸುವ ಕ್ರಿಯೆಯಾಗಿದೆ. ಪರವಸ್ತುವನ್ನುಭಾವದೃಷ್ಟಿಯಿಂದ ಕಂಡು ಅಭಿನ್ನಭಾವದಿಂದ ಬೆರೆಸಿ ಅನುಭವಿಸಿದಾಗ ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ.ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವೆನಿಸುವ ಸ್ಥಿತಿ ಇದು. ಏನೂ ಏನೂ ಇಲ್ಲದ ಬಚ್ಚಬರಿಯ ಬಯಲು.

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ ಎನ್ನುತ್ತಾರೆ ಅಲ್ಲಮಪ್ರಭು.ಬಚ್ಚಬರಿಯ ಬಯಲೆನಿಸಿದ ಪರವಸ್ತುವನ್ನು ಅರಿತು ಅನುಭವಿಸಿದ ಸದ್ಗುರುವು ಶಿಷ್ಯನಲ್ಲಿ ಬಯಲು ಜ್ಞಾನವೆಂಬ ಬೀಜವನ್ನು ಬಿತ್ತಿದಾಗ ಬೆಳೆವ ಜ್ಞಾನ ವೃಕ್ಷದಲ್ಲಿ ಪರವಸ್ತುವೇ ನಾನೆಂಬ ಫಲ ಪ್ರಾಪ್ತಿಯಾಗುತ್ತದೆ. ಆಗ ಶಿಷ್ಯನ ಭಾವನೆಗಳೆಲ್ಲ ಬಯಲಾಗುತ್ತವೆ.

ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

೧೯೦೩ರ ಫೆಬ್ರವರಿಯಲ್ಲಿ ಸವದತ್ತಿಯ ಕಲ್ಮಠದಲ್ಲಿ ಶ್ರೀ ಬಿದರಿ ಕುಮಾರಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸವಪುರಾಣ ಪ್ರವಚನವನ್ನು ಏರ್ಪಡಿಸಲಾಗಿತ್ತು.

ಎಂಟು ಕಾಂಡಗಳ ಪುರಾಣ ಪ್ರವಚನ; ಪ್ರತಿಕಾಂಡದ ಆರಂಭದ ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹೆಚ್ಚಿನ ಸಂಖ್ಯೆಯ ಶಿವಗಣಾರಾಧನೆ, ದಾಸೋಹದ ವ್ಯವಸ್ಥೆ ಮಾಡುವುದು. ಬಸವಣ್ಣನ ಜನನ ಸಂದರ್ಭವನ್ನು ದೃಶ್ಯ

ಪೂರ್ವಕವಾಗಿ ಮನವರಿಕೆ ಮಾಡುವ ಉದ್ದೇಶದಿಂದ ತೊಟ್ಟಿಲು, ನಾಮಕರಣ, ಲಿಂಗಧಾರಣ, ವಿವಾಹ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳು ಪುರಾಣ ಪ್ರವಚನದ ಅಂಗವಾಗಿದ್ದವು. ಪ್ರವಚನವು ಆರು ತಿಂಗಳವರೆಗೂ ನಡೆದಿತ್ತು. ಈ ಸಮಾರಂಭದ

ಭಾವುಕ ಸಂದರ್ಭವೊಂದನ್ನು ಚಾರಿತ್ರಿಕ ಕಾರಣಕ್ಕಾಗಿ ಇಲ್ಲಿ ಗಮನಿಸಬಹುದು.

“ಮುರಗೋಡದ ಮಹಾನ್ ತಪಸ್ವಿ, ತ್ರಿಕಾಲ ಲಿಂಗಪೂಜಾನಿಷ್ಠೆಯ ಬಲದಿಂದ ಪವಿತ್ರ ಪರುಷಗಳನ್ನು ಹೊಂದಿದ ಶತಾಯುಷಿ, ಜಂಗಮ ಪುಂಗವ, ವೈರಾಗ್ಯವಿಭೂಷಿತ, ಶ್ರೀ ಶ್ರೀ ಮಹಾಂತ ಮಹಾಶಿವಯೋಗಿಗಳವರು (ಹೀಗೆ) ಅಪ್ಪಣೆ ಕೊಡಿಸಿದ್ದರು.

‘ಇದು ಮಹಾತ್ಮ ಬಸವಣ್ಣನವರ ಪುರಾಣ್ರೆಪಾ…. ಇದು ಅಂಥಿಂಥ ಪುರಾಣ ಅಲ್ರೆಪಾ ! ಇದು ಮಹಾಪುರಾಣ್ರೆಪಾ ಮೂರ್ನಾಲ್ಕು ತಿಂಗಳುಗಳ ಕಾಲ ವಿಧಿವತ್ತಾಗಿ ಇದನ್ನು ಪ್ರವಚನ ಮಾಡಬೇಕಾಗತೈತ್ರಪಾ ಕಾಂಡದಿಂದ ಕಾಂಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನ್ನ ದಾಸೋಹ ನಡೆಯಿಸಿಕೊಂಡು ಹೋಗ ಬೇಕಾಗತೈತ್ರಪಾ…. ಒಟ್ಟಿನಲ್ಲಿ ಹೇಳಬೇಕೆಂದರೆ, ಪುರಾಣ ಮಂಗಲ ಕಾರ್ಯಕ್ರಮ ಜರುಗುವ ದಿನದೊಳಗಾಗಿ ಒಂದು ಲಕ್ಷ ತೊಂಭತ್ತಾರು ಸಾವಿರ ಗಣಂಗಳು ಪ್ರಸಾದ ವ್ಯವಸ್ಥೆಯನ್ನು ಭಕ್ತಿಪೂರ್ವಕವಾಗಿ ಮಾಡಬೇಕಾಗತೈತ್ರಪಾ !”- (ಶತಸಂಪದ, ಶಾಂತವೀರಪ್ಪ ಬೆಳ್ಳುಬ್ಬಿಯವರು, ಸ್ಮರಣ ಸಂಚಿಕೆ, ಬೆಳ್ಳುಳ್ಳಿಯವರು, ೧೯೦೭ರಲ್ಲಿ ಲಿಂಗೈಕ್ಯರಾದವರು. ಇವರು ಸ್ವತಃ ಈ ಪ್ರವಚನ ಸಂದರ್ಭದಲ್ಲಿ ಭಾಗವಹಿಸಿದ್ದರು) ಮುರುಗೋಡದ ಮಹಾಂತ ಶಿವಯೋಗಿಗಳ ಈ ಅಪ್ಪಣೆ ಪುರಾಣ ಪ್ರವಚನದ ಆ ಕಾಲದ ಪ್ರಭಾವ ಚಿತ್ರವನ್ನು

ಕೊಡುತ್ತದೆ.

ಈ ಪ್ರವಚನದ ಮತ್ತೊಂದು ವಿಶೇಷವೆಂದರೆ, ಬಸವಣ್ಣನವರ ಲಿಂಗದೀಕ್ಷಾ ಸನ್ನಿವೇಶವು ಪುರಾಣದಲ್ಲಿ ಬಂದಾಗ ಲಿಂಗ ಧರಿಸದೇ ಇರುವ ಲಿಂಗಾಯತರಿಗಾಗಿ ಲಿಂಗದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಮನೆ ಮಂದಿಯೆಲ್ಲಾ ಒಂದೇ

ಲಿಂಗವನ್ನು ಉಪಯೋಗಿಸುವ ಪದ್ಧತಿಹೋಗಿ ಪ್ರತಿಯೊಬ್ಬರೂ ಲಿಂಗಧಾರಣೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆಯನ್ನು ಈ ಮೂಲಕ ತರಲಾಯಿತು. ಅದೇ ರೀತಿಯಾಗಿ ಬಸವಣ್ಣನವರ ವಿವಾಹ ಮಹೋತ್ಸವದ ಸನ್ನಿವೇಶವು ಸಾಮೂಹಿಕ ಉಚಿತವಿವಾಹವನ್ನು

ಏರ್ಪಡಿಸುವುದು ಬಡ, ದೀನದಲಿತ ಸಮುದಾಯಕ್ಕೆ ಈ ಮೂಲಕ ಆರ್ಥಿಕ ನೆರವು ಸಲ್ಲಿಸಿದಂತಾದುದು. ಪುರಾಣ ಪ್ರವಚನ ಶ್ರವಣ ಮಾಡಿದ ಪುಣ್ಯಮಾತ್ರ ದೊರೆಯುವುದಲ್ಲದೆ ಒಂದು ಅತ್ಯುತ್ತಮ ಸಮಾಜ ಕಲ್ಯಾಣಕಾರ್ಯವನ್ನು ಮಾಡಿದ

ಧನ್ಯತಾಭಾವವೂ ಸಂತೋಷವೂ ಇದರಿಂದ ಲಭ್ಯವಾಗುತ್ತಿತ್ತು !

ಸವದತ್ತಿ ಸುತ್ತ ಮುತ್ತಲಿನ ಹತ್ತೆಂಟು ಗ್ರಾಮಗಳ ಜನರು ಪ್ರತಿರಾತ್ರಿ ಮೂರ್ನಾಲ್ಕು ತಿಂಗಳುಗಳ ಕಾಲ ಪ್ರವಚನವನ್ನಾಲಿಸಲು ಬಂಡಿಗಳಲ್ಲಿ ಬರುತ್ತಿದ್ದರು. ದಾಸೋಹಕ್ಕಾಗಿ ತಮ್ಮ ಭಕ್ತಿಸೇವೆಯನ್ನು ಸಲ್ಲಿಸಿ, ಸಂತುಷ್ಟರಾಗಿ ಹೋಗುತ್ತಿದ್ದರು. ಕೊಡುಗೈ ದೊರೆಗಳು ಮಹಾದಾನಿಗಳು, ಧನ ಧಾನ್ಯ ವಸ್ತುಗಳನ್ನು ಭಕ್ತಿಭಾವದಿಂದ ಮಠಕ್ಕೆ ಅರ್ಪಿಸುತ್ತಿದ್ದರು. ಮೂರು ನಾಲ್ಕು ತಿಂಗಳವರೆಗೆ ನಡೆದ ಈ ಮಹಾಪುರಾಣ ಪ್ರವಚನದ ಆರಂಭದಿಂದ ಮಂಗಲ ಮಹೋತ್ಸವದವರೆಗೆ ದಾನ ಶಿಖಾಮಣಿ

ಬೆಳ್ಳುಬ್ಬಿ ಶಾಂತವೀರಪ್ಪನವರು ಪ್ರತಿನಿತ್ಯದ ಪ್ರಸಾದ ವಿತರಣೆಯ ಕಾರ್ಯವನ್ನು ನಿರ್ವಿಘ್ನವಾಗಿ ಸಾಗುವಲ್ಲಿ ವಿಶೇಷ ಲಕ್ಷ್ಯವಹಿಸಿದ್ದರು.

ಪ್ರತಿದಿನ ಭಜನೆ, ಕೀರ್ತನೆ, ವಿದ್ವತ್‌ಪೂರಿತ ಭಾಷಣಗಳು, ಗಾಯನ, ಶಿವಾನುಭವ, ಸಮಾಜ ಸೇವಾ ನಿರತ ಗಣ್ಯರಿಗೆ ಸನ್ಮಾನ ಪ್ರವಚನದ ಮಂಗಲ ಮಹೋತ್ಸವದ ಶುಭ ಸಮಾರಂಭಕ್ಕೆ ಅಥಣಿಯ ಗಚ್ಚಿನಮಠದ ತಪಸ್ವಿ, ವೈರಾಗ್ಯಮೂರ್ತಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸಾನಿಧ್ಯ- ವಹಿಸಿಲೆಂದು ಆಗಮಿಸಿದ್ದರು. ಈ ಸಮಾರಂಭದ ಸಮ್ಮುಖ ವಹಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು, ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಮೊದಲಾದ ಅನೇಕ ದೇಶೀಕೋತ್ತಮರು ಆಗಮಿಸಿದ್ದರು.

ಅಭೂತಪೂರ್ವವಾಗಿದ್ದ ಈ ಕಾರ್ಯಕ್ರಮದ ಮಂಗಲ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಬಹುದೆಂದು ನಂಬಲಾಗಿತ್ತು ಆದ್ದರಿಂದ ಮಹಾಪ್ರಸಾದದ ಸಮಗ್ರ ವೆಚ್ಚವನ್ನು ತಾವೇ ಭರಿಸುವುದಾಗಿ ಶ್ರೀಗಳಿಂದ ಅಪ್ಪಣೆ  ಪಡೆದಿದ್ದ ಶಾಂತವೀರಪ್ಪ ಬೆಳ್ಳುಬ್ಬಿಯವರು ೬೦ ಚೀಲ ಸಕ್ಕರೆ ಬಳಸಿ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಈ ಸಮಾರಂಭ ಎಷ್ಟೊಂದು ಅದ್ದೂರಿಯಾಗಿತ್ತೆಂದರೆ ಕಿತ್ತೂರು ಶಾಲೆಯ ಉಪಶಿಕ್ಷಕರಾದ ಚನ್ನಬಸಪ್ಪನವರ ಮಗ ಬಸವ ಕವಿ ಒಂದು ಖಂಡಕಾವ್ಯವನ್ನೇ ಬರೆದಿದ್ದ. ಈ ಖಂಡಕಾವ್ಯ ಆ ಕಾಲದ ಈ ಘಟನೆಯ ಸ್ಥೂಲ ಚಿತ್ರವನ್ನು ಕೊಡುತ್ತದೆ. ಅದರ ಮುಖ್ಯಾಂಶಗಳು ಇಲ್ಲಿವೆ.

|| ಶ್ರೀ ಗುರು ಪ್ರಸನ್ನ ||

ಶ್ರೀಮತ್ ಸಚ್ಚಿದಾನಂದ ಪರಶಿವ ಮೂರ್ತಿಗಳಾದ ಸವದತ್ತಿ ಕಲ್ಮಠಾಧೀಶ

ಶ್ರೀ ಕುಮಾರ ಸ್ವಾಮಿಗಳವರ ಬೆಳೆಯಿಸಿದ ಶ್ರೀ ಬಸವೇಶ್ವರ ಪುರಾಣ

ಸಂಭ್ರಮಾತಿಶಯದ ವರ್ಣನಾ ಪರ-

ಕಂ |

ರುದ್ರಾಕ್ಷ ಭರಿತ ಕಂಠರ್ |

ಭದ್ರಪದ ಭಸ್ಮ ಭಸಿತ ಫಾಲರ್ ಶೀಲರ್ |

ಚಿದ್ರೂಪಮಿತ್ರ ನೇತ್ರನ |

ತದ್ರೂಪದೊಳೀ ಕುಮಾರ ಸ್ವಾಮಿಗಳೆಸೆವರ್ ||

ಸುಕುಮಾರಸ್ವಾಮಿಗಳವರ್

ಪ್ರಕಟಸಲೀ ಧರ್ಮಪಾಲ ಸಜ್ಜನರೆಲ್ಲರ್ |

ಅಕಳಂಕ ಬಸವ ಸಂಭ್ರಮ |

ವಖಿಲರ್ ತಲೆದೂಗುವಂತೆಗೈದರ್ ತ್ವರೆಯಿಂ ||

ಪಟ್ಟಣದೊಳಗಿನ ಧನಿಕರ

ಸೆಟ್ಟರ ಸಜ್ಜನರ ದೇವ ನಿಷ್ಠಾಪರರಾ

ದಿಟ್ಟರ ಸಹಾಯ ದಿಂದಂ

ನೆಟ್ಟಗೆ ಸತ್ಕಾರ್ಯಗೈದು ಪ್ರಕಟಿತರಾದರ್

ವಸುಧೆಯು ಬೆರಗಾಗುವ ತರ |

ಮೆಸೆವಾ ಸವದತ್ತಿ ಕಲ್ಲಮಠದೊಳು ನಿಜದಿಂ |

ದಸಮ ಸುಕುಮಾರ ಕರುಣದೆ |

ಬಸವೇಶ ಪುರಾಣ ಸಂಭ್ರಮಂ ಬೆಳೆಸಿದಪರ್

ಸವದತ್ತಿಯ ಕಡಲೊಡಲೊಳ್ |

ಭಾ |

ಅಥಣಿಯ ಮುರುಘ್ರೇಂದ್ರ ಸ್ವಾಮಿ ಗ

ಳತಿ ವಿಶಾಲ ಭ್ರೂಲತಾಂತ |

ರ್ಗತ ವಿರಕ್ತ ಸ್ತೋಮದಿಂ ಗುರುಸಿದ್ದ ಸ್ವಾಮಿಗಳೂ

ಪ್ರಥಿತ ಬೀಳೂರರ್ಮಠದ ಸ್ವಾಮಿ

ಳತಿ ಸುಶೀಲಾಭರಣ ನಿಷ್ಟಾ |

ಯುತ ಮಹಾ ಯೋಗೀಂದ್ರರಾ ಹಾನ್ಗಲ್ಲ ಸ್ವಾಮಿಗಳೂ

ವ |

ಇಂತುಮಲ್ಲದೆಯುಂ ಕಂತುಹರ ಸ್ವರೂಪಿಗಳಾದ ಕಲ್ಬುರ್ಗಿ

ಶಿರ್ಶಿಯಾದವಾಡ ಗದಗಾದ್ಯನಂತ ಮಠಾಧ್ಯಕ್ಷ

ರಂ ಗಣನಾತೀತ ಪಟ್ಟಚರ ಮೂರ್ತಿಗಳುಂ ವೇದಶ್ರುತಿ

ಸ್ಮೈತಿ ಶಾಸ್ತ್ರ ಪುರಾಣೇತಿಹಾಸ ನ್ಯಾಯ ತರ್ಕ ಮೀಮಾಂ

ಸಾದ್ಯಸಂಖ್ಯ ವಿಷಯವೇತ್ತ ವಿದ್ವನ್ಮುಕುಟ ಮಣಿಗಳುಂ

ಸಮ್ಮಿಳಿತ ಮಹೋದ್ಯೋಗಿವರ್ಯ ಸಂದರ್ಶಾನುಲಾಭೇಚ್ಛೆ

ಯಿಂ ಏತತ್ಪುರಾಣ ಮಹೋತ್ಸವ ದರ್ಶನಾಪೇಕ್ಷೆಯಿಂ

ಮತ್ತ ಮಾತ್ಮೀಯ ಧರ್ಮ ವಿಷಯೋಪನ್ಯಾಸಮಂಗೆಯ್ಯು

ವಾಕಾಂಕ್ಷಿಯಿಂದ ಮೈತಂದು ಅತಿ ಪ್ರಚಂಡ ಸಭಾಸ್ಥಾ

ನಮಂ ಸೇರಿ ಕೊಂಡಾಗಳ್

ಮ |

ಇದು ಸತ್ತಾಪಸವೃಂದವೋ ಪರಿಕಿಸಲ್ ಸನ್ಯಾಸಮು

ಹೃದೋ | ಇದು ಮಾಹೇಶ್ವರ ಸಂಘಮೋ ಮುನಿಜನಂ ಸಂ

ವರ್ತ ಸುಕ್ಷೇತ್ರಮೋ || ಇದು ಋಷ್ಯಾಶ್ರಮ ಮೋ ಮಹ

ತ್ಪ್ರಮಥಾಧರಾದೇದೀಪ್ಯ ಸಮ್ಮೇಳನವೋ | ಇದು ಕೈಲಾಸವೋ

ಯೋಗಿವರ್ಯ ಮಿಳಿತಂ ಸವದತ್ತಿಯೋ ಮಿತ್ರ ಪೇಳ್ ||

ವ |

ಪ್ರತ್ಯಕ್ಷ ಕೈಲಾಸದೊಲ್ ಸಿಂಗರದಿಂ ಕಂಗೊಳಿಪಯೋ

ಗಿಜನ ಸಾಮುಹ್ಯದೊಳ್

ಕಂ |

ವರ ವೀರಶೈವ ಧರ್ಮೊತ್

ಪರಿಷದ್ಬಹು ಭವ್ಯವಾದ ಹೊಸಮಠದೊಳು ತಾಂ |

ಜರುಗಿದುದು ಪಂಡಿತಾಗ್ರೇ

ಸರರ್ಣೆಯ್ಯುವ ಧರ್ಮ ವಿಷಯ ಚರ್ಚೆಗಳಿಂದಂ   

ರ |                 

ಮುತ್ತಿನ ಗುಚ್ಛಂಗಳು ತೂಗುತಿರಲ್ |

ಚಿತ್ರಿತ ಪಲ್ಲಕ್ಕಿಯು ಹೊಳೆಯುತಿರಲ್

 ಉತ್ತಮ ಹೊತ್ತಿಗೆಯದರೊಳ್ ಬೆಳಗಲ್                    

ಸುತ್ತಲುಯುತ್ಸವಮೆಸೆದುದುಮಿರಳೊಳ್ ||

ಬಂದನಿತು ಜನಕೆ ತಪ್ಪದೆ |

ಕುಂದಿನಿತುಂ ಬಾರದಂತೆ ಮುದವೆರ್ಚುವವೊಲ್ |

ಚಂದಾದ ಪ್ರಸ್ಥಮಾದುದು |

ಸುಂದರ ಸುಕುಮಾರ ಕರುಣದಿಂದಂ ನಿಜದಿಂ ||

ಸನ್ನುತ ವಿದ್ವಜ್ಜನರಿಗೆ |

ಮನ್ನಣೆಯಿಂ ಮೆಚ್ಚುಗೊಡುತ ಮಾದರಿಸಿದರಿಂ

ಉನ್ನತ ಕೀರ್ತಿಯ ಪಡೆದರ್ |

ಚಿನ್ಮಯರೀಧರ್ಮ ಕೃತ್ಯಮೇನತಿಶಯಮೋ ||

ಚಂ  |   

ಪರಹಿತ ಚಿಂತನಾತ್ಮ ತವ ವಂಶಲತಾಂಕುರ ಮೇಳುಂ ಸತ್ವರು |

ಸುರಚರ ಪತ್ರಪುಷ್ಟ ಫಲಬಾರದೆ ತೂಗುತೆ ಪೃಥ್ವಿ ಮಂಟಪಾಂ

ತರದೋಳೆ ಪೂರ್ಣ ಪರ್ಬುಗೆ ಯಶೇರ್ಣವ ಮುರ್ಕುಗೆ ಸರ್ವ

ಸಂಭ್ರಮಂ |

ನಿರುತದಿ ತೊಗೆಯಾಯುವತಿವರ್ಧಿಕೆ ಸಂತತ ಸೌಖ್ಯವೆರ್ಚುಗೆ ||

 ಕಂ |  

ನೀರಕ್ಷೀರ ನ್ಯಾಯದೆ

ಸೂರಿಗಳೇ ಪದ್ಯ ಪಠನವವಧರಿಸುತ್ತಂ !  

ದೂರುವ ಮತಿಯಂದೋರದೆ |

ತೋರುವದೈ ದೋಷಮಂ ನಿಜಾಂತರ್ಮಾನದಿಂ

ಇಂತಿಲ್ಲಿಗೆ ಶ್ರೀ ಬಸವಪುರಾಣ ಸಂಭ್ರಮಾತಿಶಯ ವರ್ಣನಾಪರ

ಪದ್ಯತಾರಾವಳಿಯು ಬಸವೇಶ್ವರ ಕಾರುಣ್ಯದಿ…. ಸಂಪೂರ್ಣಮಕ್ಕುಂ

ಇಂಥ ಅಪರೂಪದ ಸಂಧಿ ಸಂದರ್ಭವನ್ನುಂಟು ಮಾಡಿದ್ದ ಸವದತ್ತಿ ಕಲ್ಮಠದ ಬಸವಪುರಾಣ ಪ್ರವಚನವು ಹಲವು ಚಾರಿತ್ರಿಕ ಘಟನೆಗಳಿಗೆ ಕಾರಣವಾಯಿತು. ಕಾಲ ಇಂಥ ಒಂದು ಘಟನೆಯ ನಿರೀಕ್ಷೆಯಲ್ಲಿತ್ತು; ಅದು ಸವದತ್ತಿಯ ಕಲ್ಮಠದಲ್ಲಿ ಜರುಗಿತು.

ಚಿತ್ರದುರ್ಗದ ಬೃಹನ್ಮಠಕ್ಕೆ ಜಯದೇವ ಮಹಾಸ್ವಾಮಿಗಳು ಪೀಠಾಧಿಕಾರಿಯ ಗಳಾಗಲಿದ್ದಾರೆ ಎಂಬ ಸೂಚನೆಯನ್ನು ಅಥಣಿಯ ಮುರುಘ್ರೇಂದ್ರ ಮಹಸ್ವಾಮಿಗಳು ಭವಿಷ್ಯ ನುಡಿದದ್ದು (ಮುಪ್ಪಿನೇಂದ್ರ ಮಹಾಸ್ವಾಮಿಗಳ ಲಿಂಗೈಕ್ಯದಿಂದ ತೆರವಾಗಿದ್ದ

ಚಿತ್ರದುರ್ಗ ಬೃಹನ್ಮಠದ ಪೀಠಾಧಿಕಾರವು ಶಾಲಿವಾಹನ ಶಕೆ ೧೮೨೫ ನೇ ಶೋಭನಕೃತು ನಾಮ ಸಂವತ್ಸರ ಕಾರ್ತಿಕ ಶುದ್ಧ ತ್ರಯೋದಶಿ- ೩-೧೧-೧೯೦೩ ರಂದು ಜಯದೇವ ಮಹಾಸ್ವಾಮಿಗಳವರಿಗೆ ಒಲಿದು ಬಂದಿತು) ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾವೇರಿಯ ಹುಕ್ಕೇರಿಮಠದ ಪೀಠಾಧಿಕಾರಕ್ಕೆ ನಿಯುಕ್ತಗೊಳಿಸಬೇಕೆಂಬ ಪ್ರಸ್ತಾಪ ಬಂದದ್ದು ಈ ಪುರಾಣ ಪ್ರವಚನ ಸಂದರ್ಭದಲ್ಲಿ, ಮುಖ್ಯವಾಗಿ ಗಿಲಿಗಿಂಚಿ ಗುರುಸಿದ್ದಪ್ಪ ಮತ್ತು ಅರಟಾಳ ರುದ್ರಗೌಡರಿಂದ ಆರಂಭವಾಗಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಫಂಡ್ ಗಮನಾರ್ಹವಾಗಿ ಬೆಳೆಯ ತೊಡಗಿತ್ತು. ಗಿಲಗಂಚಿಯವರ ನಿಧನಾನಂತರ ಅರಟಾಳ ರುದ್ರಗೌಡರು, ಸಿರಸಂಗಿ ಲಿಂಗರಾಜರು, ವಂಟಮುರಿ ದೇಸಾಯಿಯವರು ಫಂಡ್‌ಗೆ ವಿಶೇಷ ಚಾಲನೆ ನೀಡಿದ್ದರು. ಈ ಫಂಡ್ ಅಪ್ರಮಾಣವಾಗಿ ಬೆಳೆಯುತ್ತ ಹೋದಂತೆ, ವೀರಶೈವರಲ್ಲಿ ವಿದ್ಯಾವೈಖರಿಯು ಹೆಚ್ಚಾಗ ತೊಡಗಿತ್ತು.

 ಸಮಾಜದ ಉನ್ನತಿಗೆ ವಿದ್ಯೆಯೇ ಮೊದಲಾಗಬೇಕು ಎಂದು ಸದಾ ಚಿಂತಿಸುತ್ತಿದ್ದ ಹಾನಗಲ್ಲ ಕುಮಾರ ಸ್ವಾಮಿಗಳೂ ಮತ್ತು ಇಂಥ ಅಭಿಪ್ರಾಯವನ್ನೇ ಹೊಂದಿದ್ದ ಸಮಾಜದ ಗಣ್ಯರು ಇಂಥ ಪ್ರಸ್ತಾಪವನ್ನು ಒಂದು ಕ್ಲುಪ್ತ ಸಂದರ್ಭದಲ್ಲಿ ಸಂಧಿಗೆ ಬರಲು ಕಾಲ ಕಾಯುತ್ತಿತ್ತು. ವಿದ್ಯೆಯ ಅನುಕೂಲ ಕನ್ನಡನಾಡಿನ ಒಂದು ಪ್ರಾಂತದ ಸಮಾನಚಿಂತಕರಲ್ಲಿ ತ್ಯಾಗಜೀವಿಗಳಿಂದ ಆಗುತ್ತಿರುವಂತೆಯೇ ಇದು ವಿಸ್ತಾರಗೊಳ್ಳಬೇಕೆಂದು ಅವರ ಮಹದಾಸೆಯಾಗಿತ್ತು. ಹಾನಗಲ್ಲ ಕುಮಾರ ಸ್ವಾಮಿಗಳು ವಿರಕ್ತ ಪಟ್ಟಾಧಿಕಾರ ವಹಿಸಿಕೊಳ್ಳುವವರೆಗಿನ ಅವರ ಬದುಕಿನಲ್ಲಿ ವಿದ್ಯೆಯ ಜೊತೆಗೆ ಸಮಾಜದ ಒಟ್ಟು ಉದ್ದಾರವಾಗುವುದರ ಕಡೆಗೆ ಚಿಂತನೆ ನಡೆಸುತ್ತಿದ್ದರು. ವೀರಶೈವ ಧರ್ಮದ ಉದ್ಧಾರ ದಿಂದ ಸಮಗ್ರ ಸಮಾಜದ ಉದ್ಧಾರವಾಗುವ ವಿಚಾರ ಆಗ ಮೂಡಿದ್ದು ಇಲ್ಲಿ ವಿಶೇಷ.

ಅರಟಾಳ ರುದ್ರಗೌಡರು, ಸಿರಸಂಗಿ ಲಿಂಗರಾಜರು ಈ ಕುರಿತು ಆಲೋಚಿಸಿ, ವಿದ್ಯಾಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ, ಮಾರ್ಗದರ್ಶನ, ಆಶೀರ್ವಾದಕ್ಕಾಗಿ ಹಾನಗಲ್ಲ ಕುಮಾರ ಸ್ವಾಮಿಗಳನ್ನು ಸಂಪರ್ಕಿಸಿದ್ದರು. ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ‘ಭಕ್ತ ಶ್ರೇಷ್ಠರೇ ! ಪರಮಪಾವನಕರವೂ, ಮೋಕ್ಷೈಕ  ಸಾಧನೀಭೂತವೂ ಆದ ನಮ್ಮ ವೀರಶೈವಮತದ ಉತ್ಕರ್ಷವನ್ನು ಚಿಂತಿಸುವ ನಿಮ್ಮ ಆಲೋಚನೆಗಳು ಸರ್ವಜನ ಸಮಂಜಸವಾಗಿರುವವು. ಇದೇ ವಿಚಾರಗಳು ನನ್ನ ಮನೋಬುದ್ಧಿಯಲ್ಲಿಯೂ ತೆರೆಗಳಂತೆ ತೇಲಾಡಹತ್ತಿವೆ. ಮಹನೀಯರ

ಮನಸ್ಸಿನಲ್ಲಿ ತೇಲಾಡುತ್ತಿರುವ ವಿಚಾರ ತರಂಗಗಳನ್ನು ಎತ್ತಿಹಿಡಿಯಲಿಕ್ಕೆ ಮಹೇಶ್ವರನು ತತ್ಪರನಿರುವನು, ನಿಮ್ಮ ಪ್ರಚಂಡ ಸಾಹಸವನ್ನು ಮತ ಸುಧಾರಣಾ ತತ್ಪರತೆಯನ್ನು ಕಂಡು ನನಗೆ ಪರಮಾನಂದ ವಾಗಿರುತ್ತದೆ. ವೈದ್ಯ ಹೇಳಿದ್ದು ಹಾಲೋಗರ ರೋಗಿ ಬಯಸಿದ್ದು ಹಾಲೋಗರ ಎಂಬಂತೆ ಉಭಯತಾಪಿ ವಿಚಾರಗಳು ಒಂದೇ ಆಗಿ, ನಮ್ಮ ಮನೋದಯ ಸಿದ್ದಾರ್ಥಗಳನ್ನೇ ಸೂಚಿಸುತ್ತವೆ. ಪೂರ್ವದಲ್ಲಿ ಅನೇಕ ಮತಗಳು ತೀರ ಮುರಕಳಿಗೆ ಬಂದಿರಲು, ನಿಮ್ಮಂತಹ ಅಸಹಾಯ ಶೂರರಾದ ಕೆಲಮತಾಭಿಮಾನಿಗಳುದಿಸಿ, ರಾಜಾಶ್ರಯವನ್ನು ಸಂಪಾದಿಸಿ ಅಲ್ಲಲ್ಲಿಗೆ ಧರ್ಮ ಸಭೆಗಳನ್ನೇರ್ಪಡಿಸಿ, ತಂತಮ್ಮ ಮತಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳನ್ನು ಪೂರ್ವದ ಸ್ಥಿತಿಗೆ ತಂದು, ಅಥವಾ ಇನ್ನಿಷ್ಟು ಪ್ರಕಾಶಿಸುವಂತೆ ಮಾಡಿ, ಅಕ್ಷಯಕೀರ್ತಿಯನ್ನು ಸಂಪಾದಿಸಿದರು…. ಮತ ಸುಧಾರಣೆಯ ಉತ್ಕಟೇಚ್ಛಗಳೂ, ಕೇವಲ ಮತೋನ್ನತ ಕಾರ್ಯದಲ್ಲಿಯೇ ತನುಮನಧನದಿಂದ ಸಾಹಸವಂತರಾಗಿ, ಇದಕ್ಕಾಗಿಯೇ ಆಯುಷ್ಯವನ್ನು ಬುದ್ಧಿಯನ್ನು

ವ್ಯಯಮಾಡುತ್ತಿರುವ ನಿಮ್ಮಂತಹ ಕಟ್ಟಭಿಮಾನಿಗಳೂ ಮತೋನ್ನತಿಯ ಕಾರ್ಯಭಾಗದಲ್ಲಿ ಭಾಂಡಾರರನ್ನು ಬಿಚ್ಚಿ ಬಿಡುವ ನಿಮ್ಮಂತಹ ವಿತರಣಶಾಲಿಗಳಾದ ಸಂಸ್ಥಾನಿಕರೂ ಇದ್ದ ಮೇಲೆ ಬೇಕಾದ ಕೆಲಸವನ್ನು ಮಾಡಬಹುದು. ಈ ಪುಣ್ಯ ಕಾರ್ಯವು ಸುಲಭವಾಗಿ ನೆರವೇರುವದಾಗಿ ಗುರ್ವಾಶೀರ್ವಾದವುಂಟು” (ಅರಟಾಳ ರುದ್ರಗೌಡರ ಚರಿತ್ರೆ, ಬಸವಯ್ಯ ಹಿರೇಮಠ) ಬ್ರಿಟಿಶ್ ಆಧಿಪತ್ಯದಿಂದ ಶಿಕ್ಷಣದ ಅನುಕೂಲ  ಪ್ರತಿಕೂಲ ಪರಿಣಾಮವಾಗಿ ಸುರಕ್ಷಿತ ಭಾರತೀಯ ವರ್ತನೆಗಳು ಆತಂಕಕಾರಿಯಾಗೇನೋ ಇದ್ದವು. ! ಆದರೆ, ಸ್ವಾವಲಂಬಿ ಚಿಂತನೆ ಮಾಡಿದ ಕೆಲವು ಸಂಘಟನೆಗಳು ಕೆಲವು ಪ್ರಯತ್ನಗಳನ್ನು ಮಾಡಿದ್ದವು. ಆಂಧ್ರರಾಜ್ಯದ ಗಾಜುಲು ಎನ್ನುವವರು ೧೮೮೪ ರಲ್ಲಿ “ಕ್ರೆಸೆಂಟ್’ ಎಂಬ ಆಂಗ್ಲ ಪತ್ರಿಕೆಯನ್ನು ಹೊರ ತರುವುದರ ಮೂಲಕ ದೇಶೀಯತೆ, ರಾಷ್ಟ್ರಾಭಿಮಾನಕ್ಕೆ ಸಂಬಂಧಿಸಿದ ಲೇಖನ ಬರೆದು ಜಾಗೃತಿಯನ್ನು ಪ್ರಚೋದಿಸಿದ್ದರು. ೧೮೫೨ ರಲ್ಲಿ ಮದ್ರಾಸ್ ದೇಶೀಯ ಸಂಘ’ ವೂ ಸ್ಥಾಪಿತವಾಗಿ ಶಾಲೆಗಳಲ್ಲಿ ಬೈಬಲ್‌ನ್ನು ಪಠ್ಯವಾಗಿಡುವುದನ್ನು ತಪ್ಪಿಸಿದ್ದಲ್ಲದೆ, ಕ್ರೈಸ್ತರಾಗಿ ಮತಾಂತರಗೊಂಡವರಿಗೆ ಅವಿಭಕ್ತ ಕುಟುಂಬದಲ್ಲಿ ಪಾಲು ಬೇಕೆಂಬ ಹಕ್ಕನ್ನು ತಿರಸ್ಕರಿಸುವಂತೆ ಮಾಡಿದ್ದರು. ಜನತೆಯ ಒಲವು ನಿಲುವುಗಳನ್ನು ಅರಿತ ಈ ಮುಖಂಡರು ೧೮೮೪ ರಲ್ಲಿ ಮದ್ರಾಸ್ ಮಹಾಜನ ಸಭೆ’ ಸ್ಥಾಪಿಸಿದ್ದರು. ಮೈಸೂರು ಪ್ರಾಂತದಲ್ಲಿ ದಿವಾನ್ ರಂಗಾಚಾರ್ಯ ಅವರು ೧೮೮೧ ರಲ್ಲಿ ಪ್ರಜಾಪ್ರತಿನಿಧಿ ಸಭೆ’ ಸ್ಥಾಪಿಸಿದ್ದರು. ೧೮೧೬ ರಲ್ಲಿ ಸೋಲಾಪುರದಲ್ಲಿ ಸ್ಥಾಪನೆಯಾಗಿದ್ದ ‘ಸಾರ್ವಜನಿಕ ಸಭೆ’ಯ ಅಧ್ಯಕ್ಷರಾಗಿದ್ದವರು ವಾರದ ಮಲ್ಲಪ್ಪವರು. ೧೯೦೨ ರಲ್ಲಿ ರಾಷ್ಟ್ರೀಯ ಮಹಾಸಭೆಯ ಪ್ರಾಂತೀಕ ಸಭೆ ಕರೆದಾಗಲೂ ವಾರದ ಮಲ್ಲಪ್ಪನವರೇ ಮುಂಚೂಣಿಯ ವ್ಯವಸ್ಥೆ ಮಾಡಿದ್ದರು. ಇಂಥ ಹಲವು ಸಭೆಗಳು ಸ್ಥಾಪಿತವಾಗಿ ಸಾರ್ವತ್ರಿಕವಾಗಿ ತೊಡಗಿಸಿಕೊಂಡಿದ್ದವು.

 ಸಕಾಲಿಕವಾದ ಒಂದು ಒತ್ತಾಯಕ್ಕೆ ಆ ಕಾಲದ ವೀರಶೈವರು ಅತ್ಯವಶ್ಯಕ ಸ್ಪಂದಿಸಬೇಕಾದ ಅವಶ್ಯಕತೆಗಳು ಮುಖ್ಯವಾಗಿ, ಲಿಂಗಾಯತರು ಹಿಂದೂಸಮಾಜದ ಒಂದು ಉಚ್ಚವರ್ಗದವರಿರುತ್ತಾರೆ ಎಂಬುದನ್ನು ಸಿದ್ಧ ಪಡಿಸುವುದು, ಲಿಂಗಾಯತರ

ಮುಖ್ಯ ವಿರಕ್ತ ಸ್ವಾಮಿಗಳ ಮಠಗಳ ಅಧಿಕಾರಿಗಳಿಗೆ ಅಡ್ಡಪಾಲಿಕೆಯಲ್ಲಿ ಸಂಚರಿಸುವ ನಷ್ಟವಾದ ಹಕ್ಕನ್ನು ಪುನಃ ದೊರಕಿಸಿಕೊಡುವುದು ಮತ್ತು ಶ್ರೀಮದ್ವೀರಶೈವ ಮಹಾಸಭೆಯ ಸ್ಥಾಪನೆ.

ಇಂಥ ಅಗತ್ಯ , ಅವಶ್ಯಕ ಕಾರ್ಯಗಳು ಧಾರ್ಮಿಕಸಮಾಜದ ಅಭಿವೃದ್ಧಿಗೆ  ಪ್ರಮುಖವಾಗಿದ್ದವು. ಮುಖ್ಯವಾಗಿ ಶಿಕ್ಷಣದ ಅನುಕೂಲ ಒದಗಿಸುವುದರ ಮೂಲಕ ವೀರಶೈವರನ್ನೂ ಅಭಿವೃದ್ಧಿಗೊಳಿಸಬೇಕೆಂಬ ಅರಟಾಳ ರುದ್ರಗೌಡರಂಥವರ

ಯೋಚನೆಗಳು ಒಟ್ಟು ವೀರಶೈವರ ಸ್ಥಿತಿಗತಿಗಳನ್ನು ಸುಧಾರಿಸಿ ಸಮಗ್ರ ಅಭಿವೃದ್ಧಿಯನ್ನುಂಟು ಮಾಡಿ ಅದಕ್ಕೊಂದು ಸಾಂಸ್ಥಿಕ ಸ್ವರೂಪದ ವೇದಿಕೆಯನ್ನು ಕಲ್ಪಿಸಬೇಕೆಂಬ ಹಾನಗಲ್ಲ ಕುಮಾರ ಸ್ವಾಮಿಗಳ ಯೋಚನೆಗಳು ಸಮ್ಮಿಲನಗೊಂಡವು. ಇದು ಸಾಕಾರಗೊಳ್ಳುವ ಅವಕಾಶ ಸವದತ್ತಿ ಪುರಾಣ ಮಂಗಲೋತ್ಸವದಂದು ನೆರವೇರಿತು.

ಇಂಥ ಹಿನ್ನೆಲೆಯಲ್ಲಿ ಮತ್ತು ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಸ್ಥಾಪನೆಯಾಗಿದ್ದ ‘ವೀರಶೈವ ಮತ ಪ್ರಚಾರಕ ಸಂಘ’ವು ಕೆಲವು ಸ್ಥೂಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ವಿವಿಧ ಪ್ರಾಂತಗಳಲ್ಲಿದ್ದ ವೀರಶೈವರು ತಮ್ಮ ಸೀಮಿತ ವಲಯಗಳಲ್ಲಿ

ಸಮಾಜೋನ್ನತಿಯ ಕಾರ್ಯಗಳನ್ನು ಪೂರೈಸಿದ್ದರಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿ ಧಾರ್ಮಿಕ ಮತ್ತು ವ್ಯವಹಾರಿಕ ವಿಷಯಗಳನ್ನು ಕುರಿತು ಪರ್ಯಾಲೋಚಿಸಿ, ಒಮ್ಮನಸ್ಸಿನಿಂದ ವರ್ತಿಸಿದರೆ ಸಮಾಜ ಸುಧಾರಣೆ ಆಗುವುದೆಂದು ಯೋಚಿಸುತ್ತಿದ್ದರು. ಈ ಸಂಬಂಧವಾಗಿ ತುಮಕೂರಿನ ಪಿ. ಮಹಾದೇವಯ್ಯ ಮತ್ತು ಹಾಸನದ ಜಿ. ಶಾಂತವೀರಪ್ಪನವರು ಜನವರಿ ತಿಂಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದರು. ಮೇ ತಿಂಗಳಲ್ಲಿ ಸಕಾಲಿಕವಾಗಿ ನಡೆದ ಸವದತ್ತಿ ಪುರಾಣ ಮಂಗಲ ಮಹೋತ್ಸವಕ್ಕೆ ವೀರಶೈವ ಮತ ಪ್ರಚಾರ ಸಂಘದವರು ಹೋಗಬೇಕಾಯಿತು.

ಅಲ್ಲಿ ಸೇರಿದ್ದ ಹಾನಗಲ್ಲ, ಹುಬ್ಬಳ್ಳಿ, ಅಥಣಿ ಮಠಾಧಿಪತಿಗಳು ಮತ್ತು ಮೊದಲಾದ ದೇಶಿಕೋತ್ತಮರು ಸಹಾ ಅಂಥ ಚರ್ಚೆಗೆ ಅಣಿಯಾಗಿದ್ದು, ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕು” ಎಂದು ಸಹಾ ಯೋಚಿಸುತ್ತಿದ್ದರು.

ಈ ಕೆಲಸಕ್ಕೆ ಹಾನಗಲ್ಲ ಕುಮಾರ ಸ್ವಾಮಿಗಳು ತಮ್ಮ ತಪೋಮಹಿಮೆಯ ಹಸ್ತದಿಂದ ಒಂದು ನೂರು ರೂಪಾಯಿಗಳನ್ನು ಕೊಟ್ಟರು. ಇದರಿಂದ ಪ್ರೇರಿತವಾದ ಉಳಿದ ವೀರಶೈವ ಸಮಾಜದ ಗಣ್ಯರು ಎರಡು ನೂರು ರೂಪಾಯಿಗಳನ್ನು

ವರ್ಗಣಿಯಿಂದ ಕೂಡಿಸಿದರು. ಇದಾದ ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಶ್ರೀಗಳವರ ಅಡ್ಡ ಪಲ್ಲಕ್ಕಿಯ ಉತ್ಸವವೂ ಆಯಿತು. ಈ ಉತ್ಸವಕ್ಕೆ ಬೇರೆ ಬೇರೆ ಪ್ರಾಂತಗಳಿಗೆ ಸೇರಿದ ವೀರಶೈವ ಸದ್ಗೃಹಸ್ಥರೂ ಬಂದಿದ್ದರು.

ಇವರೆಲ್ಲರೂ ಕೂಡಿ ಸಮಾಜ ಸುಧಾರಣೆಯ ಪ್ರಸ್ತಾಪವನ್ನು ಮತ್ತಷ್ಟು ತೀವ್ರವಾಗಿ ಚಿಂತನೆ ನಡೆಸಿದರು.

 ಪ್ರವಚನದಂಥ ಪುಣ್ಯ ಸಂದರ್ಭ’ ಹಾಗೂ ಉತ್ಸಾಹದಿಂದ ಸೇರಿದ್ದು ಸಮಾಜದ ಗಣ್ಯರನೇಕರ ಸಮ್ಮುಖದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದ ವೀರಶೈವ ಸಮಾಜ ಸುಧಾರಣೆಯ ಪ್ರಸ್ತಾಪಕ್ಕೆ ಮುಹೂರ್ತ ಕೂಡಿತು, ಪ್ರತಿವರ್ಷವೂ ಸಮಾಜ ಸುಧಾರಣೆಯ ಪ್ರಸ್ತಾಪವನ್ನು ಮುಂದಿರಿಸಿಕೊಂಡು ‘ವೀರಶೈವ ಮಹಾಸಭೆ’ಯನ್ನು ಕರ್ನಾಟಕದ ವಿವಿಧ ಪ್ರಾಂತಗಳ ಪ್ರಸಿದ್ಧ ಪಟ್ಟಣಗಳಲ್ಲಿ ನೆರವೇರಿಸಬೇಕಂತಲೂ ಸಂಕಲ್ಪ ಮಾಡಿದರು. ಇದು ತ್ವರಿತಗತಿಯಲ್ಲಿ ನಡೆಯಬೇಕಾಗಿದ್ದರಿಂದ ಮೊದಲನೆಯ ಮಹಾಸಭೆಯನ್ನು ೧೯೦೩ನೇ ಇಸವಿಯ ಡಿಸೆಂಬರ್

ಕೂಡಿಸಬೇಕೆಂತಲೂ ತೀರ್ಮಾನಿಸಲಾಯಿತು,

ಹಾನಗಲ್ಲ ಕುಮಾರ ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡು ಅರಟಾಳ ರುದ್ರಗೌಡ, ಸಿರಸಂಗಿ ಲಿಂಗರಾಜ ಅವರು ಮುಂಬಯಿ, ಮೈಸೂರು, ಮದ್ರಾಸ್, ಹೈದರಾಬಾದ್, ವಾಯುವ್ಯ ಪ್ರಾಂತಗಳಲ್ಲಿರುವ ವೀರಶೈವ ಮುಖಂಡರಿಗೂ

ಮತಾಭಿಮಾನಿಗಳಿಗೂ ಪ್ರಸಿದ್ಧ ಪತ್ರಿಕೆಗಳಿಂದಲೂ ಮೈಸೂರ್ ಸ್ಟಾರ್ ಪತ್ರಿಕೆಗಳಿಂದಲೂ ಸ್ವತಂತ್ರ ಲೇಖನಗಳಿಂದಲೂ ತಿಳಿಸಿ ಪಂಚಸಿಂಹಾಸನಾಧಿಪತಿಗಳ ಹಾಗೂ ವಿರಕ್ತ ಪೀಠಾಧಿಪತಿಗಳ ಅನುಮತಿಯನ್ನು ಪಡೆದುಕೊಂಡು ಧರ್ಮಸಭೆಯನ್ನು ಭವ್ಯವಾಗಿ ಸೇರಿಸಬೇಕೆಂದು ಗೊತ್ತು ಮಾಡಿದರು. ಈ ಧರ್ಮಸಭೆಯಲ್ಲಿ ಧಾರ್ಮಿಕ, ಸಾಮಾಜಿಕ, ವ್ಯವಹಾರಿಕ, ಔದ್ಯೋಗಿಕ

ಮೊದಲಾದ ಗಹನ ವಿಷಯಗಳೆಲ್ಲವು ಚರ್ಚಿಸುವ ಮುಖ್ಯ ಉದ್ದೇಶವಿರುವುದರಿಂದ ಈ ಸಭೆಗೆ ‘ಶ್ರೀ ಮದ್ವೀರಶೈವ ಮಹಾಸಭೆ’ ಎಂಬ ಹೆಸರನ್ನಿಡುವಂತೆ ಯುಕ್ತಿಯುಕ್ತವಾಗಿ ನಿರ್ಣಯಿಸಲಾಯಿತು. (ಅರಟಾಳ ರುದ್ರಗೌಡ ಚರಿತ್ರೆ, ಬಸವಯ್ಯ ಹಿರೇಮಠ)

೧೯೦೩ರ ಡಿಸೆಂಬರ್ ತಿಂಗಳು ಮೊದಲ ಮಹಾಸಭೆ ಕೂಡಿಸುವ ನಿಶ್ಚಯವನ್ನು ಹಾನಗಲ್ಲ ಕುಮಾರ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮಾಡಲಾಯಿತು. ಮಹಾಸ್ವಾಮಿಗಳು ಧಾರವಾಡಕ್ಕೆ ಕೂಡಲೆ ಆಗಮಿಸಿ ಭಕ್ತ ಜನರನ್ನು ಕರೆಸಿ, ಅವರಿಗೆ ಉತ್ತೇಜನ ಕೊಟ್ಟು ನಿಧಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದರು. ಇದು ಮೇ ಮತ್ತು ಜೂನ್ ಮೊದಲವಾರಗಳಲ್ಲಿ ವ್ಯವಸ್ಥೆ ನಡೆದು ಆದರೆ ೧೯೦೩ ರ ಜೂನ್ ೨೨ ರಂದು ಪ್ರಕಟಣೆಯ ಪತ್ರಗಳನ್ನು ಹೊರಡಿಸಿ ಸಾರ್ವಜನಿಕರ ಗಮನಕ್ಕೆ  ತರಲಾಯಿತು. ಒಂದೆರಡು ತಿಂಗಳುಗಳ ನಂತರ ಮಹಾಸ್ವಾಮಿಗಳು ಪುನಃ ಬಂದು ಈ ಕಾರ್ಯಕ್ಕೆ ಧನ ಸಹಾಯವು ವಿಶೇಷವಾಗಿ ತೊಡಗಿಸಬೇಕಾಗಿದ್ದರಿಂದ ಬ್ಯಾಡಗಿ, ಹುಬ್ಬಳ್ಳಿ, ಮಹಾರಾಜ ಪೇಟೆ, ಸಂಶಿ, ಗರಗ, ಮುಮ್ಮಿಗಟ್ಟಿ, ಮುಂತಾದ ಗ್ರಾಮಗಳ ವೀರಶೈವರನ್ನು ಧನಸಹಾಯಕ್ಕೆ ಪ್ರೋತ್ಸಾಹಿಸಿದರು. ಸ್ವತಃ ಮಹಾಸ್ವಾಮಿಗಳು ಬ್ಯಾಡಗಿ, ಹಾವೇರಿ,

ದೇವಿಹೊಸೂರು, ಆಲೂರು, ಹಾನಗಲ್ಲು ಮುಂತಾದ ಸ್ಥಳಗಳಿಗೆ ಧನ ಸಂಚಯಾರ್ಥವಾಗಿ ತೆರಳಿದರು.

 ಹಿಂದೂಸ್ಥಾನ ಸರಕಾರದಿಂದ ಜನಾಂಗವರ್ಣನೆಯನ್ನು ಸಂಗ್ರಹಿಸುವ ಕೆಲಸಕ್ಕೆ ನೇಮಿಸಲ್ಪಟ್ಟಿದ್ದ ಎಂಥೋವನ್ ಸಾಹೇಬರನ್ನು ಅವಶ್ಯಕವಾದ ವಿವರಣೆಯನ್ನು ಸಂಗ್ರಹಿಸುವ ಕೆಲಸವು ಸುಸೂತ್ರವಾಗಿ ಸಾಗುವಂತೆ ಸರಾಗಗೊಳಿಸಿದರು. ೧೯೦೩ರ ಡಿಸೆಂಬರ್ ತಿಂಗಳಿನಲ್ಲಿ ಪ್ಲೇಗಿನ ಹಾವಳಿಯಿದ್ದುದರಿಂದ ೧೯೦೪ ಮೇ ತಿಂಗಳಲ್ಲಿ ಶ್ರೀ ಮದ್ವೀರಶೈವ ಮಹಾಸಭೆ ಸೇರಿಸುವ ನಿರ್ಣಯವಾಯಿತು.

“ಆರಂಭಕ್ಕೆ ಧಾರವಾಡದ ವೀರಶೈವ ಮತಾಭಿಮಾನಿಗಳು, ತಮ್ಮಲ್ಲಿ ಸಾವಿರಾರು ರೂಪಾಯಿ ಹಣಕೂಡಿಸಿ ಮೊದಲನೇ ಶ್ರೀ ಮದ್ವೀರಶೈವ ಮಹಾಸಭೆಯು ನಮ್ಮ ಧಾರವಾಡದಲ್ಲಿ ಆಗಬೇಕಂತಲೂ, ಅದಕ್ಕೆ ವ್ಯತೆ ಬಾರದೆ ಸರಿಯಾಗಿ ಸಾಗಿಕೊಂಡು

ಹೋಗುವಂತೆ ನಾವೆಲ್ಲರೂ ತನುಮನಧನದಿಂದ ಸಹಾಯ ಮಾಡುವೆವೆಂತಲೂ ನಮ್ಮ ಬಿನ್ನಹವನ್ನು ಮನ್ನಿಸಿ ನಮಗೆ ಅಪ್ಪಣೆಯನ್ನೀಯ ಬೇಕೆಂತಲೂ ಮಹಾಸಭೆಯ ಮೂಲೋತ್ಪಾದಕರಾದ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರನ್ನೂ ರಾ. ಬ. ರುದ್ರಗೌಡ ಸಾಹೇಬರನ್ನೂ, ಶಿರಸಂಗಿಯ ಶ್ರೀಮಂತ ಸರ ದೇಸಾಯಿಯವರನ್ನು ಕೇಳಿಕೊಳ್ಳಲು ಮೂವರು ಮಹಾನುಭಾವರು ‘ನಿಮ್ಮ ಅಭಿಮಾನವನ್ನು ಆದರವನ್ನು ನೋಡಿ ಆನಂದಿಸುತ್ತೇವೆ’೦ಬುದಾಗಿ ಧಾರವಾಡದ ಮುಖಂಡರನ್ನು ಅಭಿನಂದಿಸಿ, ಅನುಮೋದನೆಯನ್ನು ಕೊಡಲಾಗಿ, ವೀರಶೈವರ ಈ ವೆಚ್ಚವನ್ನುಳಿಸಿ ಸಭಾಕಾರ್ಯಕ್ಕೆ ಸರಕಾರೀ  ಇಮಾರತಿಯನ್ನು ಕೊಟ್ಟು ಮೆಗಿಬ್ ದೊರೆಗಳವರ  ಧನ್ಯವಾದವನ್ನು ಎಷ್ಟು ಮಾಡಿದರೂ ತೀರದು. ರಾ |ಬ | ರುದ್ರಗೌಡ ಸಾಹೇಬರವರ ಆಳ್ವಿಕೆಯಿಂದಿತ್ತ ವೀರಶೈವ ಜನಾಂಗದವರು ವಿದ್ಯೆಯಲ್ಲಿ ಮೆಲ್ಲಮೆಲ್ಲನೆ ಮುಂದೊರೆಯ ಹತ್ತಿದ್ದರಿಂದ, ಸ್ವಾಭಾವಿಕವಾಗಿ ಸಾತ್ವಿಕ ಸ್ವಭಾವದವರಾದ ಲಿಂಗಾಯತರನ್ನು ಸರಕಾರದವರು ಆದರಿಸಹತ್ತಿದರು. ಅದರಿಂದ ವೀರಶೈವರ ಸಮಾಜಹಿತದ ಕೆಲಸಗಳು ಸುಲಭವಾಗಿ ನೆರವೇರಹತ್ತಿದ್ದವು.” (ಅರಟಾಳ ರುದ್ರಗೌಡರ ಚರಿತ್ರೆ, ಬಸವಯ್ಯ ಹಿರೇಮಠ) ಶ್ರೀ ಮದ್ವೀರಶೈವ ಮೊದಲ ಮಹಾಸಭೆಯು ಧಾರವಾಡದ ‘ದರ್ಬಾರ್‌ ಹಾಲ್’ನಲ್ಲಿ ೧೯೦೪, ಮೇ ೧೩. ೧೪,೧೫ ರ ಅದು ಮೂರು ದಿನಗಳ ಕಾಲ ಸಿರಸಂಗಿ ಲಿಂಗರಾಜ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು.

 ಸವದತ್ತಿಯ ಪುರಾಣ ಪ್ರವಚನ ಸಂದರ್ಭದಲ್ಲಿ ಅಭಿಪ್ರಾಯಗಳ ಮಿಳಿತದಿಂದಾಗಿ ಮಹಾಸಭೆಯ ಸ್ಥಾಪನೆಯ ಸೂಚನೆ ಹೊರಬಂದಂತೆಯೇ ವೀರಶೈವಧರ್ಮದ (ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕು’ ಎಂಬ ಹಾನಗಲ್ಲ ಕುಮಾರಸ್ವಾಮಿ

ಗಳಿಂದ ಹೊರಬಂದ ಸ್ಫೂಲವಾದ ಅಭಿಪ್ರಾಯವು ಮುಂದೊಂದುದಿನ ಶಿವಯೋಗ ಮಂದಿರ’ ವೆಂಬ ಸಂಸ್ಥೆಯ ಸ್ಥಾಪನೆಯ ಬೀಜಾಭಿಪ್ರಾಯವೇ ಆಗಿರಬೇಕು !

೧೯೫೧ರಲ್ಲಿ ಸದಾಶಿವ ಹುಕ್ಕೇರಿಯವರು ಸಂಗ್ರಹಿತ ಮಾಹಿತಿಗಳನ್ನಾಧರಿಸಿ “ಬಿದರಿ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯನ್ನು ರಚಿಸಿದ್ದಾರೆ. ಅದರ ೧೨ನೆಯಸಂಧಿಯಲ್ಲಿ,

ಗಾನಮೊಂದೆಡೆಯಲ್ಲಿ ಧರ್ಮ

ಜ್ಞಾನಮೊಂದೆಸೆಯಲ್ಲಿ ಶಾಸ್ತ್ರವಿ

ಧಾನಮೊಂದೊರಳಿಲ್ಲಿಗಲ್ಲಿಗೆ ಶಿವನ ಭಜನೆಗಳು

ಏನು ಹೇಳಲಿ ತಾಳಮೇಳದ

ಗಾನದೊಡನಾ ಕೀರ್ತನದ ಸಂ

ಧಾನಮಿಹುದಾವಾಗಳುಂ ಕಲ್ಮಠದೊಳಗೆ ಬಿಡದೆ || ೭೨ ||

ಆಗ ಹಾನ್ಗಲ್ ಸ್ವಾಮಿಗಳು ಶಿವ

ಲೇಖಕರು

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ

ಪ್ರಿಯ ಸಹೃದಯರೆ ಈ ಹುಟ್ಟು ಸಾವಿನ ಪ್ರಪಂಚದಲ್ಲಿ ನೊಂದು,ಬೆಂದ ಮಾನವರ ಕೂಗು,ಅಜ್ಞಾನ,ಅಂಧಶ್ರದ್ಧೆ,ಆರ್ತನಾದ ಹೀಗೆ ಬಳಲುತ್ತಿರುವ ಮರ್ತ್ಯಲೋಕದ ಮಹಾಮನೆಯ ಪುನರುಜ್ಜೀವನ ಗೊಳಿಸಲು ಪರಮಾತ್ಮ ಮಹಾತ್ಮರನ್ನ ಈ ಭುವಿಗೆ ಕಳಿಸುತ್ತಾನೆ. ಅಂತಹ ಮಹಾತ್ಮರ ಸಾಲಿನಲ್ಲಿ ಯುಗಪುರುಷ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಒಬ್ಬರು.ಇಂತಹ ಮಹಾತ್ಮರ ಪ್ರಭಾವದಿಂದ ಈ ಭೂಮಿಯ ನರ- ಹರನಾದ, ಜೀವ- ಶಿವನಾದ, ಮಾತು- ಮಂತ್ರವಾಯಿತು,ಸಮಾನತೆಯ ಬೆಳಕು ಹರಡಿತು,ನಿರ್ಮಲಭಾವ ಹುಟ್ಟಿತು, ಸ್ವಚ್ಛ ಆಚಾರ- ಉಚ್ಚ ವಿಚಾರ, ಸಕಲಜೀವಾತ್ಮರಿಗೆ ಲೇಸಬಯಸುವ ಮನೋಭಾವ ಹೀಗೆ ಹಲವಾರು ಉಚ್ಚ ವಿಚಾರಗಳ ಸರಮಾಲೆ ಜನ್ಮತಾಳಿತು.

  “ಕಾರ್ತಿಕದ ಕಗ್ಗತ್ತಲೆಯಲ್ಲಿ ಆಕಾಶದ ದೀಪವಾಗಿ ನೀ ಬಂದೆ”ಅನ್ನುವ ಕವಿವಾಣಿ ಪೂಜ್ಯರ ಜೀವನದಲ್ಲಿಯೂಕೂಡಾ ಅನ್ವಯವಾಗಿ ಅಕ್ಷರಶಃ ಸತ್ಯವಾಗಿದೆ.

ಶರಣ ವಾಣಿಯಂತೆ:- ಹೋನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ, ಮಣ್ಣಿಂಗೆ ಬಂದಾತನಲ್ಲ,ಅಶನಕ್ಕೆ ಬಂದಾತನಲ್ಲ,ವ್ಯಸನಕ್ಕೆ ಬಂದಾತನಲ್ಲ,ಕೂಡಲಚನ್ನಸಂಗಯ್ಯ ಭಕ್ತಿಯ ಪಥವ ತೋರ ಬಂದನಯ್ಯ ನಮ್ಮ ಬಸವಣ್ಣ.

ಅವಿರಳಜ್ಞಾನಿ ಚನ್ನಬಸವೇಶ್ವರರು ತಿಳಿಸಿದಹಾಗೆ ಅಲ್ಲಿ ಬಸವಣ್ಣ ಭಕ್ತಿಯ ಪಥವ ತೋರ ಬಂದವನು,ಇಲ್ಲಿ ಕುಮಾರಶಿವಯೋಗಿಗಳು ಸ್ವಾಮಿತ್ವದ ಶಕ್ತಿಯ ಪಥವ ತೋರ ಬಂದವರು.

ಸ್ವಾಮಿತ್ವದ ಘನತೆ ಹೆಚ್ಚಿಸಲು ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಕರಗಿಹೋಗುವ, ಸೊರಗಿ ಹೋಗುವ, ಕಳೆದು ಹೋಗುವ ಭೌತಿಕ ಸಂಪತ್ತನ್ನು ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದಾ, ಕಳೆಗುಂದದ, ಮತ್ತೊಂದು ಬೇಕೆನಿಸದ, ಅಧ್ಯಾತ್ಮಿಕ ಜ್ಞಾನ, ಅರಿವು- ಆಚಾರ, ಯೋಗ- ಶಿವಯೋಗ, ವೇಷ್ಠಿಹಿತಕ್ಕಿಂತ-ಸಮಷ್ಠಿಹಿತ ಮುಖ್ಯ,ಸ್ಥಾನಮಾನಕ್ಕಿಂತ-ಸೇವಾಮನೋಭಾವ ಮುಖ್ಯ,ಜನ ನಾಯಕನಿಗಿಂತ-ಜನಸೇವಕ ಮುಖ್ಯ ಇಂತಹ ಸಂಪತ್ತನ್ನು ಗಳಿಸಿ ಈ ನಾಡಿಗೆ,ನುಡಿಗೆ,ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು. ”      “ಉಣಗಲಿಸಿದ ನಮ್ಮ ಕುಮಾರ,

 ಉಡಗಲಿಸಿದ ನಮ್ಮ ಕುಮಾರ,

 ನುಡಿಗಲಿಸಿದ ನಮ್ಮ ಕುಮಾರ,

  ನಡೆಗಲಿಸಿದ ನಮ್ಮ ಕುಮಾರ “ಹೀಗೆ ಎಲ್ಲವನ್ನ ಕಲಿಸಿ ಅದರ ಅರಿವನ್ನ ಪಡೆದು, ಅನುಭವಿಸಿ, ಆಚರಿಸಿ ಅದರಂತೆ ಬಾಳಿಬದುಕಿ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ, ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನು ನಾಡಿಗೆ ಬಿತ್ತರಿಸಿದ ಮಹಾಂತರು .

ಇಷ್ಟೆಲ್ಲ ವಿಷಯಗಳನ್ನ ಪೂಜ್ಯರ ಕುರಿತು ಹೇಳುವ ಉದ್ದೇಶ, ಪೂಜ್ಯರು ಶಿವಯೋಗಮಂದಿರ ಸ್ಥಾಪಿಸಿ ಇಲ್ಲಿಗೆ ನನ್ನ ಕೆಲಸ ಮುಗಿಯಿತು ಅಂತ ಕೈಚೆಲ್ಲಿ ಕುಳಿತವರಲ್ಲ, ಮಂದಿರಕ್ಕೆ ಬರುವ ಸಾಧಕ ವಟುಗಳಿಗೆ ವ್ಯವಸ್ಥೆ, ಬಂದ ಭಕ್ತರಿಗೆ ಅನ್ನ, ಅರಿವು, ಆನಂದ, ಆಶ್ರಯ, ಅನುಭವವನ್ನ ಕೊಡುವಂತಹ ಹಲವಾರು ಉದ್ದೇಶವನ್ನರಿಸಿಕೊಂಡು ಶಿವಯೋಗಮಂದಿರ ಸ್ಥಾಪನೆಯಾದ ಪ್ರಥಮ ಭಾಗದಲ್ಲಿ ಸಂಸ್ಥೆಯಲ್ಲಿ ಮುಖ್ಯವಾಗಿ 19 ಸದುದ್ದೇಶಗಳನ್ನ, ಉಪಾಯಗಳನ್ನ  ಜಾರಿಗೆ ತಂದರು. ಅವುಗಳು ಈ ಕೆಳಗಿನಂತಿವೆ.

1)ಶಿವಯೋಗ ಮಂದಿರ ಸಂಸ್ಥೆಗೆ ಅಧ್ಯಯನ ಗೈಯಲು ಬಂದು ಉತ್ತಮ ಸಂಸ್ಕಾರಪಡೆದು, ಯೋಗ್ಯ ಮಠಾಧಿಪತಿಗಳಾಗಲು,ಸಮಾಜಸೇವಾ ದೀಕ್ಷೆ ಪಡೆಯಲು ಸಂಸ್ಥೆಗೆ  ಸಂಸ್ಥೆಗೆ ಬಂದ 12 ವರ್ಷದವರಿಗೆ ವಟುಗಳೆಂದು, ಮುಂದೆ ಸಂಸ್ಥೆಯ ಸಂಸ್ಕಾರದಲ್ಲಿ ನುರಿತವರ್ಗೆ ಸಾಧಕರೆಂದು ಕರೆಯುವುದು.

ವಟುಗಳು,ಸಾಧಕರು,ವ್ಯಸ್ಥಾಪಕರು,ಅನುಭಾವಿಗಳು,ಸನ್ನುತ ಅಧ್ಯಾಪಕರು,ಗ್ರಂಥ ಶೋಧಕರು, ಬಹುಮನ್ನಣೆಯನ್ನಪಡೆದ  ಸೇವಕರನ್ನ ಹೀಗೆ ಏಳು ವರ್ಗಗಳನ್ನ ಪೂಜ್ಯರು ಸಂಸ್ಥೆಯಲ್ಲಿ ತೂಡಕಾಗದಂತೆ ನಿಯಮಿಸಿದರು.

2)ಅಲ್ಲಿ ಅಧ್ಯಯನ ಗೈಯುವಂತಹ ಗುರುಚರವರೇಣ್ಯರು ಸದಾಚಾರ,ಸುಜ್ಞಾನ,ನಿರುಪಮ ವಿರಕ್ತಿಗಳಾಗಿರಬೇಕು, ಸದ್ಭಕ್ತಿ ಷಟ್ಸ್ಥಲಶಾಸ್ತ್ರ ಪರಿಣತೆ ಹೊಂದಿರಬೇಕು, ಸುಭಾಷಣ, ದ್ವೈತಾದಿ ಸಿದ್ಧಾಂತ ಸುವಿಚಾರ, ಯೋಗನೀತಿ,ಕರುಣಾದಿ ಸದ್ಗುಣಗಳಿಂದಕೂಡಿ,ಮುಂದೆ ಶಿವಮತವನುದ್ದರಿಸಬೇಕೆಂಬುದೊಂದು ಪೂಜ್ಯರ ಮಹದೊದ್ದೇಶ.

3)ಸಂಸ್ಥೆಗೆ ಬಂದ ವಟುಗಳನ್ನ ಬಿಡದೆ ಇರಿಸಿಕೊಂಡು ಅವರಿಗೆ ಸರಿಯಾಗಿ ನ್ಯಾಯ,ವ್ಯಾಕರಣ,ವೇದಾಂತ ಶಾಸ್ತ್ರಗಳ ಪರಿಚಯಮಾಡಿಕೊಟ್ಟು,ಧರ್ಮ ಗ್ರಂಥಗಳ ಪರಿಕರಗಳಾದ ಆಗಮ, ಆಮ್ನಾಯ,ಉಪನಿಷತ್ತು, ಸ್ಮೃತಿ,ಇತಿಹಾಸ,ಪುರಾಣ, ಶರಣರ ವಚನವನೋದಿಸಿ, ಜೋತೆಗೆ ಲಿಂಗಾಂಗ ಸಾಮರಸ್ಯ ಜ್ಞಾನವನ್ನ ಕೊಟ್ಟು ಹೀಗೆ ಎಲ್ಲ ವಿಷಯವನ್ನ ಅರಿಯುವತನಕ 25ವರ್ಷ ಅಥವಾ 35,45,ವರ್ಷಗಳವರೆಗೆ ಇದ್ದು,ಬ್ರಹ್ಮಚರ್ಯಾದಿ ಸದ್ಗುಣ ವೃತ್ತಿ ಗಳಿಸಿಕೊಂಡು ಶಿವಯೋಗಿಯಾಗಿ,ಗುರುಜಂಗಮರ ಮಂಗಲಪೀಠಕ್ಕೆ  ಅಧಿಕಾರಿಯಾಗಬೇಕೆಂಬುವದೊಂದು ಶ್ರಿಸಂಸ್ಥೆಯ ಉದ್ದೇಶ.

4) ಅಲ್ಲಲ್ಲಿ ಶಿವಯೋಗ ಮಂದಿರದ ಶಾಖೆಗಳು ಸಲ್ಲಲಿತವಾಗಿ, ಶೋಭನಾಶ್ರ ಮವಾಗಿ ನೆಲೆಸಬೇಕು ಅಲ್ಲಿ ಸರ್ವರಿಗೂ ಶಿವಾನುಭವ ಬೋಧೆದೊರೆಯಬೇಕು.

ಮಂದಿರಕ್ಕೆ ಬಂದವರಿಗೆ ಓದಲು ಅನುಕೂಲವಾಗುವ, ಎಲ್ಲ ಧರ್ಮಗ್ರಂಥಗಳುಳ್ಳ

ಸದ್ವಾಚನಾಲಯವನ್ನ ಬಲ್ಲವರು ಮನವಪ್ಪುವಂತೆ ನಿರ್ಮಿಸಬೇಕು .

5)ಮತಾಸುಧಾರಣೆಗೆ ಅವಶ್ಯವೇನಿಸುವ ಸದ್ವಿಷಯಗಳನ್ನೊಳಗೊಂಡ ಕೀರ್ತನೆಗಳನ್ನು ರಚಿಸಿ ಕೇಳುಗರಿಗೆ ಪ್ರಿಯವಾಗಿ ಹೇಳುವ ಪುರಾಣಿಕರನ್ನ, ಪ್ರವಚನಕಾರನ್ನ ಘನವಾಗಿ ಹೆಚ್ಚಿಸುವುದು .

6)ನುತದಾರ್ಮಿಕ,ವ್ಯಾವಹಾರಿಕ,ಮಹಾಶಾಸ್ತ್ರಮತಿಯುಳ್ಳ ಬೋಧಕರನ್ನ ಎಲ್ಲ ಕಡೆಗಳಲ್ಲಿ ಕಳುಹಿಸಿ ಅವರ ಸತತ ಉಪದೇಶದಿಂದ ಜನರನ್ನ,ಸಮಾಜವನ್ನ ಎಚ್ಚರಿಸುವಂತೆ ಮಾಡುವದೊಂದು  ಸದುಪಾಯ.

7)ಮಂದಿರದಲ್ಲಿ ಗೋ ಶಾಲೆ ಸ್ಥಾಪಿಸಿ ಆ ಎಲ್ಲ ಗೋವುಗಳ ಗೋಮಯದಿಂದ ತನ್ಮೂಲಕ ವೀರಶೈವರಿಗೆ ಮುಖ್ಯವಾದ ಅಷ್ಟಾವರಣಗಳಲ್ಲಿ ಒಂದಾದ ಭಸ್ಮವನ್ನ ವಿಧ್ಯುಕ್ತವಾಗಿ ರಚಿಸಿ,ಅಷ್ಟೇ ಅಲ್ಲದೆ ಆ ಭಸ್ಮ ರಚನಾಕ್ರಮವನ್ನ ಬೇರೆ ಸ್ಥಳಗಳಲ್ಲಿಯೂ ಪರಿಶುದ್ಧವಾದ ರೀತಿಯಿಂದ ತಯಾರಿಸುವುದಕ್ಕೆ ಮಾರ್ಗದರ್ಶನ ನೀಡುವುದು .

8)ಶಿವಮತಿಯರಿಗೆ  ಅತ್ಯಂತ ಅವಶ್ಯವಾಗಿರುವ,ಜೀವನರೂಪವಾಗಿರುವ          ಇಷ್ಟಲಿಂಗವನ್ನ ಕ್ರಮತಪ್ಪದೆ ಶಾಸ್ತ್ರೋಕ್ತ ರೀತಿಯಿಂದ ಪಂಚಸೂತ್ರ ಲಿಂಗಗಳನ್ನ ಸುವಿಚಾರವಾಗಿ ಲಿಂಗಗಳನ್ನ ತಯಾರುಮಾಡುವ ಶಾಲೆ ಮಂದಿರದೊಳಗಾಗಬೇಕು  ಆ ಕ್ರಮವನ್ನೇ ಸರ್ವತ್ರ ಪ್ರಚಾರದಲ್ಲಿ ತರುವುದೊಂದು ಉಪಾಯ.

9) ಶಿಕ್ಷಕರು, ಸರ್ಕಾರಿ ಉದ್ಯೋಗಸ್ಥರು ವರ್ಷಕ್ಕೆ ಒಂದು ತಿಂಗಳು ರಜೆಯನ್ನ ಪಡೆದು ಅಥವಾ ಅನುಕೂಲವಿದ್ದ ಕಾಲದಲ್ಲಿ ಮಂದಿರಕ್ಕೆ ಬಂದು ಮತತತ್ವ ವಿಚಾರ ಮಾಡಿಕೊಂಡು ಹೋಗಿ ತಾವು ವಾಸಿಸುವ ಗ್ರಾಮದ ಮತ್ತು ನೆರೆಹೊರೆಯ ಗ್ರಾಮ ಗಳ ಭಕ್ತರಿಗೆ ನಮ್ಮ ವೀರಶೈವ ಧರ್ಮದ ಕುರಿತು ಉಪನ್ಯಾಸವನ್ನ ಪ್ರಾಕೃತ ಭಾಷೆಯಲ್ಲಿ ಸುಲಭ ಶೈಲಿಯಿಂದ ಸರ್ವರಿಗೂ ತಿಳಿಯುವಂತೆ ಹೇಳಿ ಶಿವಾನುಭವ ವಿಷಯ ಕುರಿತು ಚಿಕ್ಕ ಚಿಕ್ಕ ಪುಸ್ತಕಗಳನ್ನ ರಚಿಸಿ ಧರ್ಮ ತತ್ವವನ್ನ ಸರ್ವತ್ರ ವ್ಯಾಪಿಸುವಂತೆ ಮಾಡುವುದು.

10) ವೃದ್ಧರಾದ ಭಕ್ತ ಮಾಹೇಶ್ವರರು, ಹಾಗೂ ಮುಮುಕ್ಷುಗಳು ಮಂದಿರಕ್ಕೆ ಬಂದು ಶಿವಾನುಭವ ಶಾಸ್ತ್ರಗಳನ್ನು ಓದಿ, ಕೇಳಿ ತಿಳಿದುಕೊಂಡು ತಮ್ಮ ಬಂಧುಬಳಗದವರಿಗೆ, ಪರಿಚಿತರಿಗೆ ಜೊತೆಗೆ ಸ್ತ್ರೀಯರಿಗೆ ಮತಧರ್ಮ ಜ್ಞಾನವನ್ನು ಪಸರಿಸುವಂತೆ ಮಾಡುವುದು, ಜೊತೆಗೆ ಶಿವಯೋಗ ಸಾಧನಾಸಕ್ತರಿಗೆ ಮಂದಿರದಲ್ಲಿ ಸ್ಥಿರವಾಗಿರಲಿಕ್ಕೆ ಮಂದಿರದ ನಿಯಮಕ್ಕನುಸರಿಸಿ ಅನುಕೂಲ ಪಡಿಸುವುದು.

11) ಧರ್ಮ ಪ್ರಸಾರವನ್ನು ಮಾಡುವುದಕ್ಕೆ ಮುಖ್ಯವಾದ ಶಿವ ಕೀರ್ತನೆ, ಶಿವ ಭಜನೆ, ಶಿವ ಪುರಾಣ ಮುಂತಾದ ಅನೇಕ ಮಾರ್ಗಗಳಿಂದ ಹೆಚ್ಚುಹೆಚ್ಚಾಗಿ ಶೀಘ್ರವಾಗಿ ಧರ್ಮಬೋಧನೆ ಮಾಡಬಹುದು, ಅವುಗಳಿಗೆಲ್ಲ ಸಾಧನವಾದ ಸಂಗೀತ ವಿದ್ಯೆಯನ್ನು ತಕ್ಕವರಿಗೆ ಕಲಿಸುವಂತೆ ಅನುಕೂಲ ಮಾಡಿಕೊಡುವುದು.

12) ಕೃಷಿ ಕಾದಿ ಕಾಯಕ, ಒಕ್ಕಲುತನ, ವ್ಯಾಪಾರ ಮಾಡುವಂತಹ ಜನರು ಅನುಕೂಲ ಕಾಲದಲ್ಲಿ ಶಿವಯೋಗ ಮಂದಿರಕ್ಕೆ ಬಂದು ಸಾಧ್ಯವಾದ ಮಟ್ಟಿಗೆ ಧರ್ಮಜ್ಞಾನ ಮಾಡಿಕೊಳ್ಳುವಂತೆ ಏರ್ಪಡಿಸುವುದು, ಅನುಕೂಲ ಮಾಡುವುದು.

13) ಅನಾದಿಕಾಲದಿಂದ ಬಂದ ವೀರಶೈವ ಮತ ಬೋಧಕ ಕಾರ್ಯವನ್ನು ಕೈಕೊಂಡ  ಕಾಯಕದ ಗಣಂಗಳು ತಮ್ಮ ಕರ್ತವ್ಯವನ್ನು ಮರೆತು, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಕ್ಕೆ ರೂಪದಾರಿಗಳಾಗಿ ಮಾತ್ರ ಸಂಚರಿಸಿ, ದುಡ್ಡು ಸೆಳೆಯುತ್ತಿರುವರು ಇಂತಹ ದುಸ್ತರಪರಿಸ್ಥಿತಿ ನೋಡಿ ಪೂಜ್ಯರು ನಮ್ಮ ಪುರಾತನರು ಈ ಕಾಯಕ ಸ್ಥಾಪನೆಮಾಡಿದ ಉದ್ದೇಶ ಉದಾತ್ತತತ್ವವನ್ನು ಪ್ರಚಾರದಲ್ಲಿ ತರುವುದಕ್ಕಾಗಿ, ಇಂತಹ ವೇಷಧಾರಿಗಳನ್ನು ಶಿವಯೋಗ ಮಂದಿರಕ್ಕೆ ಬರಮಾಡಿಕೊಂಡು, ಅವರಿಗೆ ತಕ್ಕಶಿಕ್ಷಣವನ್ನು ಕೊಟ್ಟು, ಅವರ ಸ್ಥಿತಿಯನ್ನು ಸುಧಾರಿಸಿ ಬಳಿಕ ಅವರವರ ಕಾಯಕಗಳನ್ನು ಮಾಡಲಿಕ್ಕೆ ಅಪ್ಪಣೆಕೊಟ್ಟು ಶಿವ ಧರ್ಮವನ್ನು ಪ್ರಚಾರ ಪಡಿಸುವಂತೆ ಮಾಡುವುದು.

14) ವೀರಶೈವಧರ್ಮ ಜೀವನದ ರೂಪವಾದ ಅತ್ಯಂತ ಮುಖ್ಯವಾದ ಲಿಂಗಧಾರಣೆ, ಲಿಂಗಪೂಜೆ ಮುಂತಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಯೊಂದು ಗ್ರಾಮದ ಗುರು ಸ್ಥಳದ ಮಹೇಶ್ವರರಿಗೆ (ಅಯ್ಯನವರಿಗೆ) ಅಭ್ಯಾಸ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟು ಅವರಿಂದ ಆ ಎಲ್ಲ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರಚಾರಕ್ಕೆ ತರುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು.

15) ಸಂಸ್ಕೃತ ಭಾಷೆಯಲ್ಲಿರುವ ವೀರಶೈವ ಧರ್ಮಶಾಸ್ತ್ರ ಪ್ರಮಾಣಗ್ರಂಥಗಳನ್ನು, ಎಲ್ಲರೂ ಓದಿ ತಿಳಿದು ನಡೆಯಲಿ ಎಂಬ ದೂರದೃಷ್ಟಿಯಿಂದ ಸಂಸ್ಕೃತ ಪಂಡಿತರಿಂದ ಕನ್ನಡ ಭಾಷೆಗೆ ಪರಿವರ್ತನಗೊಳಿಸಿ, ಮುದ್ರಣವ ಮಾಡಿಸಿ ಆ ಗ್ರಂಥಗಳು ಎಲ್ಲರಿಗೂ ಅಲ್ಪಬೆಲೆಗೆ ಸಿಗುವಂತೆ ಮಾಡುವುದು.

16) ಪೂಜ್ಯರು ಸಂಸ್ಕೃತ ಗ್ರಂಥಗಳನ್ನು ಕೇವಲ ಕನ್ನಡಭಾಷೆಗೆ ಪರಿವರ್ತನೆ ಗೊಳಿಸುವುದು ಅಷ್ಟೇ ಅಲ್ಲ, ಇಂಗ್ಲಿಷ್ ಪಂಡಿತರನ್ನು ಶಿವಯೋಗ ಮಂದಿರಕ್ಕೆ ಕರೆಯಿಸಿಕೊಂಡು, ಮತಶಾಸ್ತ್ರ ಧರ್ಮಗ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಿಸಿ, ಜೊತೆಗೆ ಆ ಇಂಗ್ಲಿಷ ಪಂಡಿತ ರಿಂದಲೇ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತಿಳಿಯುವಂತೆ ಉಪನ್ಯಾಸದ ಮೂಲಕ ಧರ್ಮಸಂಬಂಧದ  ವ್ಯಾಖ್ಯಾನಗಳನ್ನು ಕೊಡಿಸಿ, ಜೊತೆಗೆ ದೇಶದೆಲ್ಲೆಡೆ ನಡೆಯುವ ಧರ್ಮ ಪರಿಷತ್ತುಗಳಿಗೆ ಕಳುಹಿಸಿ ತತ್ವ ಪ್ರಚಾರ ಮಾಡುತ್ತ, ತಕ್ಕ ಪ್ರಸಂಗಗಳನ್ನು ನೋಡಿ ಇಂಗ್ಲಿಷ್ ಭಾಷೆಯಲ್ಲಿ ಸರ್ಕಾರಕ್ಕೆ ಧರ್ಮರಕ್ಷಣೆಯಬಗ್ಗೆ ಬೇಕಾಗುವ ಯಥಾರ್ಥ ಮಾಹಿತಿಯನ್ನ ಪತ್ರಗಳ ಮೂಲಕ ತಿಳಿಸುವುದು, ಜಗತ್ತಿನಲ್ಲಿ ನಡೆಯುವ ಧರ್ಮ ಸಂಸ್ಥೆಗಳ ಪರಿಚಯವನ್ನು ಮಾಡಿಕೊಂಡು, ಅವರ ಜೊತೆಗೆ ಪತ್ರ ವ್ಯವಹಾರ ನಡೆಸುವಂತೆ ಮಂದಿರದಲ್ಲಿ ವ್ಯವಸ್ಥೆ ಮಾಡುವುದು.

17) ವೀರಶೈವಮತ ಪರವಾದ ಭಾಷೆಗಳು, ಆಗಮಗಳು, ಉಪನಿಷತ್ತುಗಳು, ಜೊತೆಗೆ ಈ ಮತದ ಪೂರ್ವಿಕರಿಂದ ಕ್ರೋಡಿಕರಿಸಲ್ಪಟ್ಟ ಅನೇಕ ಸಂಸ್ಕೃತ, ಕನ್ನಡ ಗ್ರಂಥಗಳನ್ನು, ತಾಡೋಲೆಗಳನ್ನು, ಎಲ್ಲೆಡೆ ಶೋಧಿಸಿ ಸರಿಯಾಗಿ ಮುದ್ರಣ ಗೊಳಿಸಿ ತನ್ಮೂಲಕ ಎಲ್ಲೆಡೆ ಧರ್ಮಸಿದ್ಧಾಂತ ಪ್ರಚಾರ ಮಾಡಿಸುವುದು.

18) ಬರೀಸಂಸಾರದಲ್ಲಿ ಇದ್ದರೆ ಏನಾಯ್ತು ಸಾಧ್ಯವಾದ ಭಕ್ತ ಮಾಹೇಶ್ವರರಲ್ಲಿ ಸಂಸಾರಿಗಳಾದರೂ ಬ್ರಹ್ಮಚರ್ಯ ಪಾಲನೆ ಮಾಡಿದ ಭಕ್ತ ಮಹೇಶ್ವರರಿಗೆ ಮಂದಿರದಲ್ಲಿ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನು ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಡುವುದು, ಜೊತೆಗೆ ವೀರಶೈವಮತ ಧರ್ಮವನ್ನ  

ಸೂಕ್ರಮದಿಂದ ಪ್ರಚಾರಕ್ಕೆ ತರಲಿಎಂಬ ಭಾವದಿಂದ, ಧರ್ಮಗ್ರಂಥಗಳ ಅಭ್ಯಾಸದ ಜೊತೆಗೆ ಪರೀಕ್ಷೆಯನ್ನ ಇಟ್ಟು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಂದಿರದಲ್ಲಿ ನಡೆಯುವ ಪ್ರಮುಖ ಸಭೆಯಲ್ಲಿ ತಕ್ಕ ಬಹುಮಾನವನ್ನು ನೀಡಿ, ಧರ್ಮದ ವಿಷಯದಲ್ಲಿ ಅವರಿಗೆ ಉತ್ತೇಜನ ಮಾಡುತ್ತಾ, ಪ್ರೋತ್ಸಾಹಿಸುವುದೊಂದುಪಾಯ.

19) ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಎಲ್ಲ ಜನರನ್ನ ಮಂದಿರಕ್ಕೆ ಬರಮಾಡಿಕೊಂಡು ಧರ್ಮಜ್ಞರಾದ ವಿದ್ಯಾವಂತರಿಂದ, ಪಂಡಿತರಿಂದವ್ಯಾಖ್ಯಾನ, ಕೀರ್ತನ, ಪುರಾಣ, ಶಿವಭಜನೆ, ಪ್ರವಚನ, ಸಂಗೀತಾದಿಗಳಿಂದ  ಹೀಗೆ ಮುಂತಾದ ದ್ವಾರಗಳಿಂದ ಶಿವಯೋಗ ಮಂದಿರದಲ್ಲಿ ಪ್ರತಿವರ್ಷ ಧರ್ಮಬೋಧನೆ ಕಾರ್ಯ ನಡೆಯುತ್ತಿರಬೇಕು.

 ಹೀಗೆ ಕುಮಾರ ಶಿವಯೋಗಿಗಳು ಕೇವಲ ಮಂದಿರವನ್ನ ಸ್ಥಾಪಿಸಿ ಸುಮ್ಮನೆ ಕುಳಿತವರಲ್ಲ.ಅಲ್ಲಿ ಪ್ರತಿದಿನ ಯಾವೆಲ್ಲ ಕಾರ್ಯಗಳು ನಡೆಯುತ್ತಿರಬೇಕು,ಅಲ್ಲಿನ ವ್ಯವಸ್ಥೆ ಹೇಗಿರಬೇಕು ಎಂಬುವದನ್ನು  ಮೊದಲೇ ತಮ್ಮ ಅಂತಃಚಕ್ಷುವಿನಿಂದ ಕಂಡು ಶಿವಯೋಗ ಮಂದಿರದಲ್ಲಿ 19 ಉಪಾಯಗಳನ್ನ, ಧ್ಯೇಯೋದ್ದೇಶಗಳನ್ನ  ನಿರ್ಣಯಮಾಡಿದರು ಇದುವೇ ಕುಮಾರಶಿವಯೋಗಿಗಳ ದೂರದೃಷ್ಟಿ . ಇಂತಹ ದೂರದೃಷ್ಟಿಯನ್ನ ಇಟ್ಟುಕೊಂಡು  ಮಂದಿರವನ್ನ ಸ್ಥಾಪಿಸಿದ್ದರಿಂದಲೇ  ಇಂದಿಗೂ ಒಂದುನೂರಾಹದಿಮೂರು ವಸಂತಗಳನ್ನು ಯಾವುದೇ ವಿಘ್ನವಿಲ್ಲದೆ ಸಾಗಿಬಂದೆದೆ ಅಂದ್ರೆ ಅದು ಕುಮಾರಶಿವಾಯೋಗಿಗಳ ಶಕ್ತಿ,  ಇಚ್ಛಾಶಕ್ತಿ, ಸಂಕಲ್ಪಶಕ್ತಿ,ಕ್ರಿಯಾಶಕ್ತಿ, ಈ ಮೂರು ದಿವ್ಯಶಕ್ತಿಗಳ ಪುಣ್ಯ ಸಂಗಮವೇ ಶಿವಯೋಗಮಂದಿರ ಸಂಸ್ಥೆ..  ಈ ಸಂಸ್ಥೆಯನ್ನ ಸ್ಥಾಪಿಸುವಾಗ ಪೂಜ್ಯರು ಹಲವಾರು ಕಷ್ಟ,ನಷ್ಟ,ನೋವನ್ನ ಅನುಭವಿಸುತ್ತಾ,ಯಾರ ಮನಸ್ಸನ್ನು ನೋಯಿಸದೆ ನಗುನಗುತಾ ಬಾಳಿ ಬದುಕಿದ ಮಹಾಚೇತನ,ಕಾವಿ ಲೋಕದ ತಂದೆ ಕುಮಾರ ಶಿವಯೋಗಿಗಳು.

         ಸಿದ್ದನೆಂದರೆ ಯಾರು ಮನವನೋಯಿಸದಾತ

             ನೂರುನೋವನು ಸಹಿಸಿ ನಗುತಲಿರುವಾತ,

         ಒಂದಾದ ನಡೆ-ನುಡಿಗೆ, ದಿಕ್ಕು-ದಶೆ ತೋರ್ವಾತ

              ಪರಮಗುರು ಆ ಸಾಧು  – ಮುದ್ದುರಾಮ

ಮಾಹಿತಿ ಆಧಾರ:  ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ರೇಣುಕಾಚಾರ್ಯರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಅವರು ಕೈಲಾಸದ ಪ್ರಮಥರಲ್ಲಿ ಒಬ್ಬರು. ಪಾಲ್ಕುರಿಕೆ ಸೋಮನಾಥನ ಗಣಸಹಸ್ರದಲ್ಲಿ ಪ್ರಮಥಗಣರಲ್ಲಿ ಇವರ ಉಲ್ಲೇಖವಿದೆ. ಇವರನ್ನು ಕುರಿತು ಸಂಸ್ಕೃತದಲ್ಲಿ ರೇಣುಕಾಗಸ್ತ್ಯ ಎಂಬ ಗ್ರಂಥವಿದೆ. ಇದರಲ್ಲಿ ವೀರಶೈವ ಏಕೋತ್ತರ ಷಟ್‍ಸ್ಥಲಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ.

ಆಗಮಗಳ ಪ್ರಕಾರ ರೇಣುಕಾಚಾರ್ಯರು ಈಗಿನ ಆಂಧ್ರ ಪ್ರಾಂತ್ಯದಲ್ಲಿನ ಕೊಲ್ಲಿಪಾಕಿ ಎಂಬಲ್ಲಿ ಜನಿಸಿದರು. ಇವರು ಮಲಯಾಚಲದಲ್ಲಿ ಅಗಸ್ತ್ಯರಿಗೆ  ತತ್ತ್ವೋಪದೇಶ ಮಾಡಿದರೆಂಬ ಹೇಳಿಕೆ ಇದೆ. ಅನಂತರ ಲಂಕೆಗೆ ಹೋಗಿ ರಾವಣನ ತಮ್ಮ ವಿಭೀಷಣನ ಇಷ್ಟದಂತೆ ಮೂರುಕೋಟಿ ಲಿಂಗಗಳನ್ನು ಸ್ಥಾಪಿಸಿದರಂತೆ. ಇವರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಚೋಳರೇಣುಕ ಸಂವಾದ ಗ್ರಂಥ ಸಂಸ್ಕೃತದಲ್ಲಿದೆ. ಇದನ್ನು ರೇಣುಕಾಚಾರ್ಯರ ಅವತಾರವೆನಿಸಿದ ರೇವಣಸಿದ್ಧರು (12ನೆಯ ಶತಮಾನ) ಕಂಚಿಯ ರಾಜೇಂದ್ರ ಚೋಳನಿಗೆ ಉಪದೇಶಿಸಿದ ಗ್ರಂಥವೆಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ರೇಣುಕಾಚಾರ್ಯ (ಸಿದ್ಧರೇವಣ)ರನ್ನು ಮಹಾನ್ ಸಿದ್ಧಪುರುಷರೆಂದು  ಉಲ್ಲೇಖಿಸಲಾಗಿದೆ.

ರೇಣುಕಾಚಾರ್ಯರನ್ನು ಪುರಾಣದೊಂದಿಗೆ ಬೆಸೆದಿರುವುದರಿಂದ  ಚಾರಿತ್ರಿಕವಾಗಿ ಇವರ ಬಗ್ಗೆ ಖಚಿತವಾದ ವಿಚಾರಗಳು ಲಭ್ಯವಾಗಿಲ್ಲ. ಅನೇಕ ವೀರಶೈವ ಮಠಗಳಲ್ಲಿ ರೇಣುಕಾಚಾರ್ಯರ ಲಿಂಗೋದ್ಭವಲೀಲೆಯ ಮೂರ್ತಿಪೂಜೆ ನಡೆಯುತ್ತಿದೆ.

ರೇವಣಸಿದ್ಧ

ರೇವಣಸಿದ್ಧ ಸು.10-12ನೆಯ ಶತಮಾನದಲ್ಲಿ ಕಲ್ಯಾಣದ ಪರಿಸರದಲ್ಲಿ ಜನ್ಮವೆತ್ತಿ ವಿಭೂತಿಪುರುಷರಾಗಿ ಮೆರೆದು ಸಮಾಜಸೇವೆ ಸಲ್ಲಿಸಿ ಬಯಲಾದರೆನ್ನಲಾದ ಪ್ರಸಿದ್ಧ ವೀರಶೈವ ಆಚಾರ್ಯರು. ಇವರ ಜೀವನದ ಚಾರಿತ್ರಿಕ ಅಂಶಗಳು ಪೌರಾಣಿಕಾಂಶಗಳೊಂದಿಗೆ ಬೆರೆತು ಮಸುಕಾಗಿವೆ. ಸಂಪ್ರದಾಯದ ಪ್ರಕಾರ ರೇವಣಸಿದ್ಧರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಸು. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ಸಿದ್ಧರೇವಣ, ರೇವಣಾಚಾರ್ಯರನ್ನು (ರೇಣಕಾಚಾರ್ಯ) ಮಹಾನ್ ಸಿದ್ಧಪುರುಷರೆಂದು ಉಲ್ಲೇಖಿಸಲಾಗಿದೆ. ಇವರನ್ನು ಕೈಲಾಸದ ಪ್ರಮಥ ರೇಣುಕನೊಂದಿಗೆ ಹೋಲಿಸಲಾಗಿದೆ. ಬಸವಾದಿಗಳಿಗೆ ಸಮಕಾಲೀನರಾಗಿದ್ದು ಧರ್ಮಗುರು ವೆನಿಸಿದ್ದ ರೇವಣಸಿದ್ಧರೇ ಈ ಸಿದ್ಧರೇವಣ್ಣ. ಆದರೆ ಸಿದ್ಧರಾಮ, ಆದಯ್ಯ ಇವರ ವಚನಗಳಲ್ಲಿ ರೇವಣಸಿದ್ಧರ ಉಲ್ಲೇಖವಿದೆ. ಶಿವತತ್ತ್ವರತ್ನಾಕರದ ಕರ್ತೃ ಬಸವಭೂಪಲನು ರೇವಣಸಿದ್ಧೇಶ್ವರರು ಶೃಂಗೇರಿಯ ಪ್ರಸಿದ್ಧ ಚಂದ್ರಮೌಳೀಶ್ವರ ಲಿಂಗದ ದಾತೃವೆಂದು ಉಲ್ಲೇಖಿಸಿದ್ದಾನೆ.

ಹರಿಹರಾದಿಗಳು ತಿಳಿಸುವಂತೆ ರಾಜೇಂದ್ರ ಚೋಳ ರೇವಣಸಿದ್ಧರ ಸಮಕಾಲೀನ.

ಬಸವಣ್ಣನವರ ಅನಂತರ ವೀರಶೈವಧರ್ಮದ ಪುನರುಜ್ಜೀವನವನ್ನು ಕೈಗೊಳ್ಳಲು ಧಾರ್ಮಿಕ ಕ್ರಾಂತಿಯನ್ನು ಮುಂದುವರಿಸಲು ವೀರಶೈವರು ರುದ್ರಮುನಿಯನ್ನು ನಾಯಕನನ್ನಾಗಿ ಆರಿಸಿದರಂತೆ. ಆ ರುದ್ರಮುನಿ ರೇವಣಸಿದ್ಧರ ಔರಸಪುತ್ರ. ಈ ಸಂಗತಿ ಚಾರಿತ್ರಿಕವಾದ್ದು. ಕಲ್ಯಾಣದ ಬಿಲ್ವವನದ ಮಧ್ಯೆ ಈಗಲೂ ಇರುವ ರುದ್ರಮುನಿ ಗುದ್ದುಗೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಲ್ಯಾಣದ ಸಮೀಪದಲ್ಲಿ ಸಿದ್ಧಗಿರಿಯೆಂದು ಹೆಸರಾದ ತಾಣ ಈ ರೇವಣಸಿದ್ಧರ ತಪೋಭೂಮಿ ಎನ್ನಲಾಗಿದೆ. ಇವಲ್ಲದೆ ರೇವಣಸಿದ್ಧ ಗದ್ದುಗೆ, ರುದ್ರಮುನಿಗದ್ದುಗೆ ಎಂಬ ತೋರು ಗದ್ದುಗೆಗಳು ಕರ್ನಾಟಕದಲ್ಲಿ ಅನೇಕವಿವೆ. ಬೆಂಗಳೂರು ತಾಲ್ಲೂಕಿನ ರಾಮನಗರದ ಬಳಿ ಇರುವ ರೇವಣಸಿದ್ಧೇಶ್ವರ ಬೆಟ್ಟ ಆ ಭಾಗದಲ್ಲಿ ಪವಿತ್ರ ಕ್ಷೇತ್ರವಾಗಿ ಇಂದಿಗೂ ಪ್ರಸಿದ್ಧವಿದೆ. ರೇವಣಸಿದ್ಧರಿಂದ ರಚಿತವಾದ ಗ್ರಂಥಗಳ ಬಗ್ಗೆಯಾಗಲೀ ಅವರ ವೈಯಕ್ತಿಕ ಜೀವನದ ಹೆಚ್ಚಿನ ವಿವರಗಳಾಗಲೀ ತಿಳಿದುಬಂದಿಲ್ಲ.

ಲೇಖಕರು :

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಶ್ರೀ ಗುರುವೇ ಎನಗೆ ಕಾಯವು, ಶ್ರೀ ಗುರುವೇ ಎನಗೆ ಪ್ರಾಣವು ಶ್ರೀ ಗುರುವೇ ಎನಗೆ ಇಹವು,  ಶ್ರೀ ಗುರುವೇ ಎನಗೆ ಪರವು, ಶ್ರೀಗುರುವೇ ಎನಗೆ ಗತಿಯು, ಶ್ರೀ ಗುರುವೇ ಎನಗೆ ಮತಿಯು,  ಶ್ರೀ ಗುರುಪಾದವೇ ಎನಗೆ ಘನತರ ಮುಕ್ತಿಗೆ ಕಾರಣವೂ ಗುಹೇಶ್ವರಾ ಇದು ಸತ್ಯ, ಇದು ಸತ್ಯ.

             19ನೇ ಶತಮಾನದಲ್ಲಿ ಭಾರತದ ಧಾರ್ಮಿಕ ಕ್ಷಿತಿಜದಲ್ಲಿ ನೂರಾರು ನಕ್ಷತ್ರಗಳು ಮೂಡಿ ಅತ್ಯಂತ ಪ್ರಖರವಾದ ತೇಜಸ್ಸನ್ನು ಹೊಂದಿ, ಪ್ರಕಾಶಮಾನವಾಗಿ ಬೆಳಗಿ ನಾಡನ್ನೆಲ್ಲ ಪವಿತ್ರಗೊಳಿಸಿದವು. ಅಂತಹ ದಿವ್ಯ ಪ್ರಭೆಯನ್ನು              ಬೀರಿರುವ ದಿಟ್ಟ ಚೇತನಗಳ ಸಾಲಿನಲ್ಲಿ ಅತ್ಯಂತ ಪ್ರಖರವಾಗಿ ಬೆಳಗಿದ ಮಹಾಜ್ಯೋತಿ ಮತ್ತು ಈ ಲೋಕವು ಕಂಡರಿಯದ ಕೇಳರಿಯದ ಮಹಾಮೇರು ವ್ಯಕ್ತಿತ್ವವನ್ನು ಹೊಂದಿರುವವರು ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು. ಕಲ್ಯಾಣಕ್ರಾಂತಿಯ ನಂತರ ಇಂದಿನವರೆಗೆ (800 ವರ್ಷಗಳವರೆಗೆ) ಮರೆಯಾಗಿ ಹೋಗುತ್ತಿದ್ದ ಬಸವಾದಿ ಶರಣರ ತತ್ವಗಳನ್ನು, ಸಂದೇಶಗಳನ್ನು ಮತ್ತು ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವುದಲ್ಲದೇ ಉಳಿಸಿ-ಬೆಳೆಸಿ ದಂತಹ ಪೂಜ್ಯರಲ್ಲಿ ಅಗ್ರಗಣ್ಯರು.

           ವೀರಶೈವ ಸಮಾಜದ ಇತಿಹಾಸ ಮತ್ತು ಧರ್ಮಗಳು   ವಿಶ್ವಮಾನ್ಯತತ್ವಗಳನ್ನು ಮೌಲ್ಯಗಳನ್ನು ಒಳಗೊಂಡಿದ್ದು ವಿಶ್ವಮಾನ್ಯ ನೆಲೆಗಟ್ಟಿನಲ್ಲಿ ಈ ತತ್ವಗಳನ್ನು ಬಿತ್ತರಿಸುವ ಸಾಧನೆಗಳೇ ಪತ್ರಿಕೆಗಳು ಎಂಬುದನ್ನರಿತ ಶಿವಯೋಗಿಗಳು ಅನೇಕ ಪತ್ರಿಕೆಗಳನ್ನು ಪ್ರಾರಂಭಿಸಿದರು ಪ್ರೋತ್ಸಾಹಿಸಿದರು ಪ್ರೇರೇಪಿಸಿದರು. ಇಷ್ಟೇಅಲ್ಲದೆ ಧಾರ್ಮಿಕವಾಗಿ ಸಾಮಾಜಿಕ ವಾಗಿ ಸಾಂಸ್ಕೃತಿಕವಾಗಿ ವೈಚಾರಿಕವಾಗಿ ನೈತಿಕವಾಗಿ ಸಮಾಜವನ್ನು ಮೇಲೆತ್ತಿದರು.

               ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಪ್ರೋತ್ಸಾಹ ಮತ್ತು ಪ್ರೇರಣೆಯ ಮೂಲಕ ಡಾ|| ಫ ಗು.ಹಳಕಟ್ಟಿ ಯವರು ತಮ್ಮ “ಶಿವಾನುಭವ” ಪತ್ರಿಕೆ, ಶಿರಸಿಯ ಶ್ರೀ ಗುರುಮೂರ್ತಿ ಶಾಸ್ತ್ರಿಯವರು “ಶಿವಪ್ರತಾಪ” ಪತ್ರಿಕೆ ಮತ್ತು ಶ್ರೀ ಶಿವಲಿಂಗ ಶಾಸ್ತ್ರಿಗಳ “ಧರ್ಮತರಂಗಿಣಿ” ಪತ್ರಿಕೆಯಂತೆ ಶ್ರೀ ಚನ್ನಮಲ್ಲಿಕಾರ್ಜುನರು ತಮ್ಮ “ಸದ್ಧರ್ಮ ದೀಪಿಕೆ” ಪತ್ರಿಕೆಯನ್ನು ಮುವತ್ತೊಂದು ವರ್ಷಗಳವರೆಗೆ ನಮ್ಮ ಶರಣ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ವಿಶೇಷವೆಂದರೆ ಈ ಪತ್ರಿಕೆಯು ನೂರು ವರ್ಷಗಳ ಹಿಂದೆ ವಿದೇಶದಲ್ಲಿಯೂ ಸಹಿತ ಮಾನ್ಯತೆಯನ್ನು ಪಡೆದಿತ್ತು.(ಇಷ್ಟೇ ಅಲ್ಲದೆ ಶ್ರೀ ಕುಮಾರ ಶಿವಯೋಗಿಗಳು “ಮೈಸೂರು ಸ್ಟಾರ್” ಮತ್ತು “ಕರ್ನಾಟಕ ಟೈಮ್ಸ್” ಪತ್ರಿಕೆಗಳಿಗೂ ಆರ್ಥಿಕವಾದ ನೆರವನ್ನು ಇತ್ತ ಸಂಗತಿ ತಿಳಿದು ಬರುತ್ತದೆ.)

         ಶ್ರೀ ಚನ್ನಮಲ್ಲಿಕಾರ್ಜುನರು ವಿದ್ರೂಪವಾಗಿದ್ದರೂ  ಅದಮ್ಯ ಚೈತನ್ಯ ಉಳ್ಳವರಾಗಿದ್ದರು, ಆಚಾರ-ವಿಚಾರ ಸಂಪನ್ನರು, ಶರಣ ಸಂಸ್ಕೃತಿಯ ಪರಿಪಾಲಕರಾಗಿದ್ದು ಎಲೆಮರೆಯ ಕಾಯಿಯಂತೆ ಇವರ ಜೀವನವಿತ್ತು.  ಶ್ರೀ ಕುಮಾರ ಮಹಾಶಿವಯೋಗಿಗಳೆಂದರೆ ಇವರಿಗೆ ಪಂಚಪ್ರಾಣ. ಶ್ರೀ ಮಲ್ಲಿಕಾರ್ಜುನರು ಅನೇಕ ವಚನ ಗ್ರಂಥಗಳನ್ನು ಸಂಶೋಧನಾತ್ಮಕ ಗ್ರಂಥಗಳನ್ನು, ಸ್ತೋತ್ರ ಸಾಹಿತ್ಯ ತ್ರಿಪದಿ ಷಟ್ಪದಿ ಕಂದ-ಪದ್ಯ ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಇಂಗ್ಲಿಷ್ ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದ ಮಲ್ಲಿಕಾರ್ಜುನರು ಶ್ರೀ ಕುಮಾರ ಮಹಾಶಿವಯೋಗಿಗಳವರ ಮಾರ್ಗದರ್ಶನದಲ್ಲಿ ಶಿವಾನುಭವ ಶಾಸ್ತ್ರದ ಆಳವಾದ ಜ್ಞಾನವನ್ನು ಪಡೆದರು. ಶಿವಾನುಭವವನ್ನು ಹೇಳಲು ಕುಳಿತರೆ ದೊಡ್ಡ ದೊಡ್ಡ ಪಂಡಿತರಿಗೆ ಅರ್ಥವಾಗದಂತಹ ಗಹನ ತತ್ವಗಳನ್ನು ಸಿದ್ಧಾಂತಗಳನ್ನು ಸರಳವಾಗಿ ತಿಳಿಸುವಂತಹ ಕಲೆಯನ್ನು ಹೊಂದಿದ್ದರು ಮತ್ತು ಕಬ್ಬೂರು ಶರಣರೊಡನೆ, ಗುತ್ತಲದ ಅಗಡಿ ಮಠದ ಶ್ರೀ  ನಿ ಪ್ರ ರುದ್ರಸ್ವಾಮಿಗಳು ಮತ್ತು ಹಾನಗಲ್ಲ ಕುಮಾರ ಶಿವಯೋಗಿಗಳೊಂದಿಗೆ ಶಿವಾನುಭವದ ಗಹನ ತತ್ವಗಳನ್ನು ಮೇಲಿಂದ ಮೇಲೆ ಚರ್ಚಿಸುತ್ತಿದ್ದರು.1904 ರಲ್ಲಿ ಪ್ರಾರಂಭವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಮತ್ತು 1909 ರಲ್ಲಿ ಪ್ರಾರಂಭವಾದ ಶಿವಯೋಗ ಮಂದಿರದ ಸ್ಥಾಪನೆಯ ಸಮಾರಂಭಗಳಿಗೆ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೊಂದಿಗೆ ಹೋಗಿ ಎಲ್ಲೆಡೆ ಅನುಭಾವ, ಪ್ರವಚನಗಳನ್ನು ನೀಡುತ್ತಿದ್ದರು. 1924ರಲ್ಲಿ ಜರುಗಿದ “ಪರಳಿಯ ವ್ಯಾಜ್ಯ”ದಲ್ಲಿ ಕುಮಾರ ಶಿವಯೋಗಿಗಳವರ ಕೋರಿಕೆಯ ಮೇರೆಗೆ ತಾವು ಅಧ್ಯಯನ ಮಾಡಿ ಸಂಗ್ರಹಿಸಿದ ಅನೇಕ ದಾಖಲೆಗಳನ್ನು ಒದಗಿಸಿ ಕೊಟ್ಟರು.

            ಶ್ರೀ ಕುಮಾರ ಶಿವಯೋಗಿಗಳವರ ಅನುಗ್ರಹದಿಂದ ಸದ್ಧರ್ಮ ದೀಪಿಕೆ ಎಂಬ ಪತ್ರಿಕೆಯನ್ನು ಆರಂಭಿಸಿದಂತಹ ಶ್ರೀ ಚನ್ನಮಲ್ಲಿಕಾರ್ಜುನರಿಗೆ ಬಾಲ್ಯದಲ್ಲಿಯೇ ಸಿಡುಬು ರೋಗದಿಂದ ಕಣ್ಣಿನಲ್ಲಿ ಹೂ ಬಿದ್ದು ಅದು  ಬರುಬರುತ್ತಾ ಬಹಳ ಬಾಧೆ ನೀಡಲಾರಂಭಿಸಿತು. ಸಾಲದ್ದಕ್ಕೆ ಜನರು ಇದು ಒಂದು ಕಣ್ಣಿಂದ ಇನ್ನೊಂದು ಕಣ್ಣಿಗೆ ಹಬ್ಬಿ ಎರಡು ಕಣ್ಣುಗಳು ಹೋಗುತ್ತವೆ ಎಂದು ಮಾತನಾಡಲಾರಂಭಿಸಿದರು.

ಇದರಿಂದ ಶ್ರೀ ಚನ್ನಮಲ್ಲಿಕಾರ್ಜುನರು ಚಿಂತೆಗೊಳಗಾದರು.

ಹೀಗೆ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಒಮ್ಮೆ ಶಿರಾಳಕೊಪ್ಪಕ್ಕೆ ದಯಮಾಡಿಸಿದರು. ಆ ಸಂದರ್ಭದಲ್ಲಿ ಶ್ರೀಗಳು ಚೆನ್ನಮಲ್ಲಿಕಾರ್ಜುನರ ಆರೋಗ್ಯವನ್ನು ವಿಚಾರಿಸಿ ದಾಗ ತಮಗಾದ ಕಣ್ಣಿನ ತೊಂದರೆಯನ್ನು ನಿವೇದಿಸಿ ಕೊಂಡರು. ಆಗ ಶ್ರೀಗಳು “ನಿಮ್ಮ ಕಣ್ಣುಗಳಿಗೆ ಏನೂ ಆಗುವುದಿಲ್ಲ ಯೋಚನೆ ಮಾಡಬೇಡಿ, ಶಿವನ ಸೇವೆಯನ್ನು ಮನಮುಟ್ಟಿ ಮಾಡಿ, ಶಿವ ನಿಮಗೆ ಒಳಿತನ್ನು ಮಾಡುತ್ತಾನೆ” ಎಂದು ಶ್ರೀ ಚನ್ನಮಲ್ಲಿಕಾರ್ಜುನರ ಕಣ್ಣಿನತ್ತಲೆ ದೃಷ್ಟಿನೆಟ್ಟು ಒಂದು ಕ್ಷಣ ದೃಷ್ಟಿಸಿದ್ದರು. ಆ ಒಂದು ದಿವ್ಯದೃಷ್ಟಿಗೆ ಶ್ರೀ ಚೆನ್ನಮಲ್ಲಿಕಾರ್ಜುನರ ದೃಷ್ಟಿಬಾಧೆ ನೀಗಿ ತಮ್ಮ ಜೀವಿತದ ಅಂತ್ಯದವರೆಗೂ ಮತ್ತೆ ಯಾವ ಬಾಧೆಯೂ ಉಂಟಾಗಲಿಲ್ಲ.(ಇದು ಶಿವಯೋಗ ಮಂದಿರದ ಬೆಳಗು ಪತ್ರಿಕೆಯಲ್ಲಿ ಉಲ್ಲೇಖವಿದೆ.)

 .               ಧರ್ಮ ಸಾಹಿತ್ಯ ಸಂಸ್ಕೃತಿಗಳ ಸಮುನ್ನತಿಗಾಗಿ  ಶ್ರಮಿಸಿದಂತಹ ಮತ್ತು ಶರಣರ ಬಾಳನ್ನು ಬದುಕಿರುವ ಶ್ರೀ ಚನ್ನಮಲ್ಲಿಕಾರ್ಜುನರು ಒಬ್ಬ ಅಪರೂಪದ ಸಾಹಿತಿ, ಲೇಖಕ, ಸಂಶೋಧಕ, ಶರಣ. ಇಂತಹ ಎಷ್ಟೋ ಮಹನೀಯರು ಧರ್ಮದ ಏಳಿಗೆಗಾಗಿ ಸಂಘಟನೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ ಇಂತಹ ಮಹನೀಯರ ಬದುಕು ನಮಗೂ ನಿಮಗೂ ಆದರ್ಶವಾಗಬೇಕು. ಇತಿಹಾಸದ ಪುಟಗಳಲ್ಲಿ ಮರೆಯಾಗಿರುವ ಇಂತಹ ಅನೇಕ ಮಹನೀಯರಿಂದ ನಮ್ಮ ದೇಶದ, ನಮ್ಮರಾಷ್ಟ್ರದ, ನಮ್ಮ ನಾಡಿನ ಸಂಸ್ಕೃತಿ ಉತ್ಕೃಷ್ಟವಾಗಿದೆ, ಉಜ್ವಲವಾಗಿದೆ ಮತ್ತು ಉತ್ತರೋತ್ತರವಾಗಿ ಬೆಳೆಯಲಿದೆ, ಇಂತಹ ಸಾವಿರಾರು ಮಕ್ಕಳನ್ನು ಹೆತ್ತ ಭೂಮಿ ಹೊತ್ತ ನಾಡು ಪುಣ್ಯದಾಲಯ, ಇಂತಹ ಭೂಮಿಯಲ್ಲಿ ಉದಿಸಿದ ನಾವೆಲ್ಲರೂ ಧನ್ಯರು. ತಮಗೆಲ್ಲರಿಗೂ ಧನ್ಯವಾದಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಪರಮಗುರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು  ಮಹಾಲಿಂಗದಲ್ಲಿ ಲೀನವಾಗಿ ೯೨ ವಸಂತಗಳ ಪುಣ್ಯ ಸಂಸ್ಮರಣೆಯ ಪವಿತ್ರ ಮಾಸದ ಸಂಚಿಕೆ ಸುಕುಮಾರ ಒಂದು ವಿಶಿಷ್ಠವಾಗಿ ತಮ್ಮ ಕೈ ಸೇರುತ್ತಿದೆ.

ಉತ್ತರಭಾರತದ ಜನಪ್ರಿಯ ಸಂಗೀತವಾದ “ಕಬೀರ ವಾಣಿ -ದೊಹೆ” ಗಳ ಆಧಾರವನ್ನಾಗಿಸಿಕೊಂಡು “ಶ್ರೀ ಕುಮಾರ ದೊಹೆ” ಗಳನ್ನ ಸಾಹಿತ್ಯ ಮತ್ತು ಗಾಯನ ರೂಪ ದಲ್ಲಿ  ಅರ್ಪಿಸುತ್ತಿದ್ದೇವೆ.

ಪೂಜ್ಯ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು (ಹಂದಿಗುಂದ ಶ್ರೀ ಮಠ) ಅವರ ಪ್ರಬದ್ಧ ಲೇಖನಿಯಿಂದ ಮೂಡಿಬಂದ ಕನ್ನಡ ದ್ವಿಪದಿಗಳು ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿವೆ.

ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ

ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ……. ಕುಮಾರ  

ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ

ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ….. ಕುಮಾರ 

ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ

ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ……..ಕುಮಾರ 

ಕನ್ನಡನಾಡಿನ ಇಪ್ಪತ್ತ್ತನೆಯ ಶತಮಾನದ ಅವಿಸ್ಮರಣೀಯ ಕಾಲಘಟ್ಟದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಠಿ ಯಿಂದ ಸಮುಷ್ಠಿಯುತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.

ಮಹಾಚೇತನಕ್ಕೆ ಭಕ್ತಿಪೂರ್ವಕ ನಮನಗಳು

ಮಾರ್ಚ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀ ಕುಮಾರೇಶ್ವರ  ದೊಹೆ (ದ್ವಿಪದಿ ಗಳು ) ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ
  4. ಪುರುಷ- ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಇಂಗ್ಲೀಷ ಮೂಲ: ಶ್ರೀಕಂಠ ಚೌಕೀಮಠ ಕನ್ನಡ ಭಾಷಾಂತರ :ಶ್ರೀ ಎಮ್.ಎ.ಹಿರೇವಡೆಯರ
  5. ಸ್ವಧರ್ಮಅನುಯಾಯಿ ಪರಧರ್ಮ ಪ್ರೇಮಿ. ಲೇಖಕರು :ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ
  6. ಯೋಗ”ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ
  7. ಶ್ರೀ ದ್ಯಾoಪುರ ಚೆನ್ನಕವಿ ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ
  1. ವಿಡಿಯೋ ೧ ಶ್ರೀ ಕುಮಾರೇಶ್ವರ ನಾಮಾವಳಿ
  2. ವಿಡಿಯೋ ೨ ಶ್ರೀ ಕುಮಾರೇಶ್ವರ ದೊಹೆ
  • ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ನಿರೂಪಣೆ ಪೂಜ್ಯ ನಾಗನಾಥ ದೇವರು ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಶ್ರೀಗುರುವಿನ ನಗುವಿಗೆ ಕಾರಣವನ್ನು ಮಾನವನು ಮೂಢನಾಗುವ ಪರಿಯನ್ನು ಶಿವಕವಿಯು ಇನ್ನು ಮುಂದೆ ನಿರೂಪಿಸುತ್ತಾನೆ. ಕಾಲ-ಕರ್ಮ ಮಾಯೆಗಳ ಬಲೆಯಲ್ಲಿ ಜೀವಾತ್ಮನು ಹೇಗೆ ತತ್ತರಿಸುತ್ತಾನೆಂಬ ವಿಚಾರವನ್ನು ಕ್ರಮೇಣ ನೋಡಿ.

ನಡುಮಧ್ಯ ಮಾವುತನು | ಎಡಬಲದೆ ಆನೆಗಳು

ಒಡಗೂಡೆ ನೋಡಿ-ಎಡರು ಕಂಟಕ ಲಿಪಿಯ

ತೊಡೆಯಯ್ಯ ಗುರುವೆ ಕೃಪೆಯಾಗು

|| ೪೧ ||

ಸಂಸಾರಹೇಯ ಸ್ಥಲವನ್ನು ನಿರೂಪಿಸುವಾಗ ಹಿಂದಿನ ಅನುಭಾವಿಗಳು ಬೆಡಗಿನ ಮಾತುಗಳಲ್ಲಿ ಬೋಧಿಸುತ್ತ ಬಂದಿರುವರು. ಶರಣರ ವಚನಗಳಲ್ಲಿ ಬೆಡಗಿನ ವಚನಗಳು ಧಾರಾಳವಾಗಿ ಸಿಕ್ಕುತ್ತವೆ. ದಾಸರೂ ಈ ಮಾತನ್ನು ಅನುಸರಿಸದೇ ಬಿಟ್ಟಿಲ್ಲ. ಕನಕದಾಸರ ಮುಂಡಿಗೆಯೆಂದು ಪ್ರಸಿದ್ಧವಾಗಿದೆ. ನಮ್ಮ ಶಿವಕವಿಗಳೂ ಕಾಲ-ಕಾಮ-ಮಾಯೆ ಜಗದುತ್ಪತ್ತಿಯ ಪರಿಯನ್ನು ವಿವರಿಸುವಲ್ಲಿ ಬೆಡಗಿನ ಮಾತನ್ನೇ ಅನುಸರಿಸಿದ್ದಾರೆ. ಬೆಡಗಿನ ವಚನಗಳು ಸಾಧಕನಿಗೆ ಹೆಚ್ಚಿನ ಶ್ರಮವನ್ನು ಹಚ್ಚುತ್ತವೆ. ಅಲ್ಲದೇ ಹೆಚ್ಚು ಶ್ರಮವಹಿಸಿ ಮಾಡಿದ ಅಧ್ಯಯನ ಮನದಟ್ಟಾಗುತ್ತದೆ. ಮತ್ತು ವಿಷಯ ಗ್ರಹಿಕೆಯಾದ ಮೇಲೆ ಮರಹು ಆವರಿಸುವದಿಲ್ಲ. ಮಾಯಾ ಮೋಹಗಳು ಮಾನವನನ್ನು ಅತಿಯಾಗಿ ಆವರಿಸುವದರಿಂದ ಬೆಡಗಿನ ವಚನಗಳ ಪಾತ್ರ ಹಿರಿದಾಗಿ ಕೆಲಸ ಮಾಡುತ್ತದೆ. ಮತ್ತು ಗೌಪ್ಯವಾದ ಆಧ್ಯಾತ್ಮ ಶಾಸ್ತ್ರದ ಘನತೆಯನ್ನು ವ್ಯಕ್ತ ಮಾಡುವಲ್ಲಿಯೂ ಬೆಡಗಿನ ವಚನಗಳು ಬೆರಗುಗೊಳಿಸಿವೆ.

ಮಾನವ ಜೀವನದಲ್ಲಿ ಸಾಂಸಾರಿಕ ವಿಷಯಗಳು ಅನಿತ್ಯವಾಗಬಹುದು. ಆದರೆ ನಿತ್ಯ-ಸತ್ಯವಾಗಿ ಬರುವದು ಮರಣ ಮಾತ್ರ. ಮರಣದ ಭಯ ಬಹಳ. ಅದಕ್ಕಾಗಿ ಶರಣ ಕವಿಗಳು ಮರಣದ ಅಧಿದೇವತೆಯಾದ ಯಮನ ವಿಷಯವನ್ನು ಪ್ರಥಮತಃ ಪ್ರತಿಪಾದಿಸಿದ್ದಾರೆ.

ಆನೆ ನಡೆಸುವ ಮಾವುತನು ಒಂದಾನೆಯನ್ನು ತನ್ನ ವಶವರ್ತಿಯನ್ನಾಗಿ ಇರಿಸ ಬಹುದು. ತಾನೊಬ್ಬನಾಗಿ ಬಹಳ ಆನೆಗಳು ಸುತ್ತುವರಿದಾಗ ಮಾವುತನ ಗತಿ ದೇವರೇ ಬಲ್ಲ. ಸಿಟ್ಟಿಗೆದ್ದ ಮದಗಜವು ಸಿಕ್ಕವನನ್ನು ತುಳಿದು ಸೀಳಿ ಹಾಕುತ್ತದೆ. ಘೀಳಿಡುವ ಆನೆಗಳ ಮಧ್ಯದಲ್ಲಿ ಸಿಕ್ಕ ಮಾವುತನಾದರೂ ಮರಣವನ್ನಪ್ಪಬೇಕಾದೀತು. ಅವನು ತನ್ನ ಎಡಬಲದ ಆನೆಗಳು ಒಡಗೂಡು (ಒಂದುಗೂಡು) ವದನ್ನು ದೂರೀಕರಿಸುತ್ತ ತನ್ನ ಆನೆಯಿಂದಲೇ ಪಾರಾಗಬೇಕು. ಮದವೇರಿದ ಆನೆಗಳನ್ನು ಪಳಗಿಸಬಲ್ಲ ಮಾವುತನೇ ಜಾಣ್ಮೆಯಿಂದ ಎಡರು-ಕಂಟಕಗಳನ್ನು ಪರಿಹರಿಸಿಕೊಳ್ಳಬಲ್ಲನು.

ಒಳಬಾಳಿನಲ್ಲಿ ಹಮ್ಮಿನ ಜೀವಾತ್ಮನೆಂಬ ಮಾವುತನು ಅಷ್ಟಮದಗಜಗಳಿಂದ ಪಾರಾಗುವದು ಸುಲಭ ಸಾಧ್ಯವಲ್ಲ. ಇದು ಗುರುಕೃಪೆಯಿಂದ ಮಾತ್ರ ಪರಿಹಾರ ವಾಗಬಹುದು. ಕುಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ಭಾರ್ಯಾಮದ, ಅಧಿಕಾರಮದ, ಹಾಗೂ ರಾಜ್ಯಮದಗಳೆಂಬ ಎಂಟು ಅಹಂಕಾರಗಳೇ ಅಷ್ಟಗಜಗಳೆನಿಸುವವು. ಆನೆಗೆ ಮದಬಂದರೆ ಹಿಡಿಯಲುಬಾರದು. ಅಹಂಕಾರ ರೂಪ ಆನೆಯು ಮದೋನ್ಮತ್ತವಾದರೆ ಹೇಳುವದೇನು ? ಎಡರು ಕಂಟಕಗಳು ಕೈಯಲ್ಲೇ ಇರುವವು. ಕಾಲ(ಯಮ)ನೆಂಬ ಕಂಟಕ ತೀವ್ರವಾಗಿ ಆವರಿಸುವನು. ಅಹಂಕಾರಿಯು ಯಮಪಾಶದಲ್ಲಿ ಸಿಕ್ಕು ರೌರವ ನರಕದಲ್ಲಿ ಕೊಳೆಯಬೇಕಾಗುವದು. ಈ ಕಾಲ ಕಂಟಕನ ಎಡರು-ಕಂಟಕ ಲಿಪಿಯನ್ನು ಕಳೆಯಬಲ್ಲವನು ಗುರುನಾಥ ನೊಬ್ಬನೇ. ಅವನೇ ಸಮರ್ಥ. ಅಂಥ ಸದ್ಗುರುವಿನಲ್ಲಿ ಶರಣಾಗತನಾಗಬೇಕು.

ನಾರಾಯಣನೆಂಬ ಹಿಂದೀ ಕವಿಯು ಜೀವನದಲ್ಲಿ ಮರೆಯದ ಎರಡು ಮಾತುಗಳನ್ನು ಹೇಳಿದ್ದಾನೆ. ಕೇಳಿ-

“ದೋ ಬಾತನ ಕೊ ಭೂಲ ಮತ, ಜೋ ಚಾಹೈ ಕಲ್ಯಾಣ |

ನಾರಾಯಣ ಇಕ ಮೌತ ದೂಜೇ ಶ್ರೀಭಗವಾನ ||”

ಕಲ್ಯಾಣವನ್ನು ಬಯಸುವ ಮಾನವನು ಈ ಎರಡು ಮಾತುಗಳನ್ನೆಂದೂ ಮರೆಯಕೂಡದು. ಒಂದನೆಯದು ಮರಣ, ಎರಡನೆಯದು ಮಹಾದೇವ. ಹುಟ್ಟಿದವನು ಮರಣವನ್ನಪ್ಪಲೇ ಬೇಕಾಗುವದು. ಜೈಮಿನಿಯು ತನ್ನ ಭಾರತ ಕಾವ್ಯದಲ್ಲಿ- ”ಮನುಜರ್ಗೆ ಮರಣಂ ಎಂದಿರ್ದೊಡಂ ತಪ್ಪದು” ಎಂದಿದ್ದಾನೆ. ಇದು ಕಾಲ ಚಕ್ರದ ನಿಯಮ. ಇದನ್ನು ಅರಿಯಲೇ ಬೇಕಾಗುವದು. ಮಾನವನು ನಾನು ನಿಶ್ಚಿತವಾಗಿ ಸಾಯುತ್ತೇನೆಂಬುದನ್ನು ಮರೆತು, ಇಳೆ-ಬೆಳೆ-ಮಳೆಗಳನ್ನಿತ್ತ ಮಹಾದೇವ ನನ್ನು ಮರೆತು ಎಲ್ಲವೂ ನಾನೇ, ನನ್ನಿಂದಲೇ ಎಲ್ಲ ನಡೆಯಬಲ್ಲುದು. ನಾನೇ ಎಲ್ಲವನ್ನು ಮಾಡುತ್ತೇನೆಂಬ ಅಹಂಕಾರದಿಂದ ಮುಂದುವರೆಯುತ್ತಾನೆ. ಸೊಕ್ಕಿದ ಆನೆಯು ವನಮಧ್ಯದ ಮರವನ್ನು ಕಿತ್ತಿಹಾಕುವಂತೆ, ಈ ಅತಿಯಾದ ಅಹಂಕಾರವು ಮಾನವನನ್ನು ಮುಗಿಸಿಬಿಡುತ್ತದೆ. ಬರುವಾಗ ಏನೂ ತರಲಿಲ್ಲ. ಹೋಗುವಾಗ ಏನೂ ಒಯ್ಯದೇ ಮರಳಬೇಕಾಗುವದು. ಕಾರಣ, ಮರಣ ಸನ್ನಿಹಿತವಾಗಿದೆಯೆಂದು ಸತ್ಕರ್ಮಗಳನ್ನು ತಪ್ಪದೇ ಮಾಡಬೇಕು. ಸದ್ಗುರುನಾಥನನ್ನು ಮೊರೆಹೊಕ್ಕು ಮಹಾ ದೇವನನ್ನು ಅರಿಯಬೇಕು.

ಗುರುವೆ ! ನಿನ್ನ ಕರುಣಾಮೃತ ಸಿಂಚನದಿಂದ ಜೀವಾತ್ಮನಾದ ನನ್ನ ಅಹಂಕಾರ ವನ್ನು ಕಳೆದು ಅದರಿಂದ ಬರುತ್ತಿದ್ದ ಎರಡು-ಕಂಟಕಗಳನ್ನು ತೊಡೆದು ಹಾಕು. ಬಾಗಿದ ಬೆತ್ತ ಪೂಜ್ಯರಿಗೆ ದಂಡಿಗೆಯಾಗುವಂತೆ ಮದವನ್ನು ಕಳೆದು ನಿನ್ನ ಪಾದತೊಡುಗೆಯನ್ನಾಗಿಸು. ಈ ಅಹಂಕಾರ ನಿರ್ಮೂಲವಾದಲ್ಲದೆ ಶರಣ ಮಾರ್ಗವು ಸಿಕ್ಕಲಾರದು. ಕರುಣಿಸು ನಿಮ್ಮ ಧರ್ಮ.

ದಾಕ್ಷಿಣ್ಯ ಪುರವರ್ಗ | ಮೋಕ್ಷಹೀನಾಚಾರ್ಯ

ಶಿಕ್ಷೆಗೊಳಗಾಗಿ ಈ ಕ್ಷಿತಿಗೆ ಬಂದನೈ

ಈ ಕ್ಷಣದಿ ಗುರುವೆ ಕೃಪೆಯಾಗು

|| ೪೨ ||

ತಾರಕಾಕ್ಷ, ಮಕರಾಕ್ಷ, ವಿದ್ಯುನ್ಮಾಲರೆಂಬ ರಾಕ್ಷಸರು; ಲೋಹ, ಬೆಳ್ಳಿ, ಬಂಗಾರದ ಮೂರು ಪಟ್ಟಣಗಳನ್ನು ಕಟ್ಟಿಕೊಂಡಿದ್ದರೂ ಕೊನೆಗೊಮ್ಮೆ ಗುರಿಯನ್ನು ಕಾಣದೆ ನಾಶವಾದರು. ಜೀವಾತ್ಮನು ನಶ್ವರವಾದ ಸ್ಫೂಲ, ಸೂಕ್ಷ್ಮ, ಕಾರಣವೆಂಬ ಮೂರು ತನುಗಳನ್ನು ಹೊಂದಿದ್ದಾನೆ. ಈ ಶರೀರಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ವರ್ಗ ಅರ್ಥಾತ್ ಅನಿಮಿತ್ತ ವೈರಿಗಳೊಡನೆ ಒಡಂಬಡಿಸುವ ದಾಕ್ಷಿಣ್ಯಕ್ಕೆ ಒಳಗಾಗಿ ಅಹಂಕಾರ, ಮಮಕಾರಗಳಿಂದ ಬಂಧಿತವಾಗುತ್ತವೆ. ಆಗ ಬಂಧನದ ಆಚಾರ್ಯನಾದ ಯಮನ ಶಿಕ್ಷೆಗೆ ಒಳಪಟ್ಟು ಮೋಕ್ಷದಿಂದ ವಂಚಿತರಾಗಬೇಕಾಗುವದು. ಕಾಲನ ಕಠಿಣ ಶಿಕ್ಷೆಯನ್ನು ತಾಳಲಾರದೆ ಈ ಇಳೆಗೆ ಇಳಿದು ಬರಬೇಕಾಗುವದು. ಯಮಯಾತನೆಗೆ ಕೊನೆಯಿಲ್ಲ. ಇದರ ಕೊನೆ ಶ್ರೀಗುರು ಸನ್ನಿಧಿಯಿಂದ ಮಾತ್ರ ಸಾಧ್ಯವಾಗಬಹುದು.

ಓ ಗುರುವೆ ! ಕಾಲನ ಕಠಿಣ ಶಿಕ್ಷೆಯಿಂದ ಬಳಲಿರುವೆ. ತಡಮಾಡದೆ ಈ ಕ್ಷಣದಲ್ಲೇ ನನ್ನನ್ನು ರಕ್ಷಿಸು. ಜನಿ ಮೃತಿಗಳಿಗೆ ಒಳಗಾಗದಂತೆ ಮಾಡು. ನೀನು ಪುರಹರನೂ, ಕಾಲಹರನೂ, ಮಾಯಾವಿದೂರನೂ ಆಗಿರುವೆ. ಕಾಲನ ಕಂಟಕವನ್ನು ಕಳೆಯಲು ನಿನ್ನಿಂದ ಮಾತ್ರ ಸಾಧ್ಯ. ನಿನ್ನ ಕೃಪಾಕಟಾಕ್ಷೇಕ್ಷಣವನ್ನು ಈ ಕ್ಷಣದಲ್ಲೇ ಬೀರು. ಈ ಕ್ಷಣದಿಂದ ನನ್ನ ಮೂರು ಶರೀರಗಳ ಜಾಡ್ಯತ್ವವು ಬಯಲಾಗಿ ಮಂತ್ರಮಯವಾಗುತ್ತದೆ. ತಂದೆಯೆ ! ತಳುವದೆ ಪರಶಿವಲಿಂಗವನ್ನು ಒಲಿಸಲು ಯೋಗ್ಯವಾದ ಪ್ರಸಾದ ಕಾಯವನ್ನಾಗಿ ಮಾಡು. ಅದರಿಂದ ಅಷ್ಟ ಮದಗಳ ಹಾಗೂ ಅರಿಷಡ್ ವೈರಿಗಳ ಉಪಟಳ ಇಲ್ಲವಾಗುತ್ತದೆ.

ಇಲ್ಲಿ ‘ಈಕ್ಷಣದಿ’ ಪದನಾಮವಾಗಿಯೂ, ಪ್ರಯೋಗಿಸಲ್ಪಟ್ಟು ಶ್ಲೇಷಾರ್ಥದ ವೈಶಿಷ್ಟ್ಯ ವ್ಯಕ್ತವಾಗಿದೆ. ಈಕ್ಷಣ (ದೃಷ್ಟಿ ಪಾತ)ವು ಈ ಕ್ಷಣದಿ (ತೀವ್ರವಾಗಿ) ಆದರೆ, ನನ್ನ ದೋಷಗಳು ದೂರವಾಗುತ್ತವೆಯೆಂದು ಅರ್ಥೈಸಿದ್ದಾನೆ.

ಧರ್ಮನಾಮವ ತಾಳಿ | ಎಮ್ಮೆ ಮಗನೊಯ್ಯಾಳಿ

ಕರ್ಮದ ಕೇಳಿಯಿಂ- ಮೆರೆವವನ ಉಪಟಳಕೆ

ಅಮ್ಮೆನೈ ಗುರುವೆ ಕೃಪೆಯಾಗು

|| 43 ||

ಶರಣಕವಿಯು ಕಾಲನ ಪೌರಾಣಿಕ ಸ್ವರೂಪ ಚಿತ್ರವನ್ನು ಶಬ್ದಗಳಿಂದ ಚಿತ್ರಿಸಿದ್ದಾನೆ. ಆತನಿಗೆ ಯಮಧರ್ಮ’ನೆಂಬ ನಾಮ. ಅವನ ಸಂಚಾರ ಎಮ್ಮೆಯ ಮಗನಾದ ಕೋಣನಮೇಲೆ, ಅವನ ಕಾರ್ಯ ಜೀವಿಗಳನ್ನು ಸಂಹಾರಮಾಡುವದು. ಈ ಸಂಹಾರ ಕರ್ಮದ ವಿಲಾಸದಿಂದ ಮೆರೆಯುತ್ತಿರುವ ಕಾಲನ ಉಪಟಳವು ಮಿತಿಮೀರಿದೆ. ಆದ್ದರಿಂದ ನಾನೂ ಅವನ ಬಾಧೆಯಿಂದ ಹೊರಗಾಗಿಲ್ಲ. ಈ ಬಾಧೆಯು ಸಹಿಸಲತಿಯಾಗಿದೆ. ಮೃತ್ಯುಂಜಯನಾದ ಸದ್ಗುರುವಿನ ಒಲುಮೆಯಿಂದ ಮೃತ್ಯುವಿನ ಬಾಧೆ ನೀಗಬಲ್ಲದು. ಮಾನವನಿಗೆ ಅತಿಭಯಾನಕವಾದುದದೆಂದರೆ ಸಾವೆ. ಈ ಸಾವಿಗೆ ಸಾವುಕೊಡುವವನು ಶಿವನು. ಶಿವರೂಪಿ ಗುರುವೆ | ಕೈಹಿಡಿದು ಕಾಪಾಡು.

ಯಮನು ಭಯಾನಕವಾಗಿದ್ದರೂ ಯಮಧರ್ಮನೆಂಬ ಹೆಸರನ್ನು ಪಡೆದಿದ್ದಾನೆ. ಅವನ ಕಾರ್ಯದಲ್ಲಿ ಧರ್ಮ ಹುದುಗಿಕೊಂಡಿದೆ. ಅವನು ಧರ್ಮವಂತರನ್ನು ದೇವರತ್ತ ಕಳಿಸುತ್ತಾನೆ. ಧರ್ಮವಂತನು ಜ್ಞಾನಿಯೂ ಆಗಿರಬೇಕು. ಅಜ್ಞಾನಿಗಳು ಧರ್ಮದ ಗುರಿಯನ್ನು ಗುರುತಿಸದೇ ಯಮನ ಭಾಧೆಗೆ ಒಳಗಾಗುವರು. ಅದಕ್ಕಾಗಿ ಕೋಣನ ವೈಹಾಳಿ ಪದವನ್ನು ಪ್ರಯೋಗಿಸಿ ಸಾಂಕೇತಿಕ ಅರ್ಥವನ್ನು ವ್ಯಕ್ತ ಮಾಡಿದ್ದಾನೆ. ಕೋಣ = ದಡ್ಡತನದ ಪ್ರತೀಕ. ಒಣಹೆಮ್ಮೆ ಹೋರಾಟಗಳ ಸಂಕೇತ. ಜ್ಞಾನವಿಲ್ಲದೆ ಹೆಮ್ಮೆಯಿಂದ ಮಾನವನು ಮೈಮರೆತು ಮರಣವನ್ನಪ್ಪುತ್ತಾನೆ. ಇಂಥ ಕೋಣನ ಸವಾರಿ ಮಾಡುವವರ ಮೇಲೆ ಕಾಲನು ಬಲು ಪ್ರೀತಿ, ಶಿವಕವಿ ಕ.ಬ. ಅಂಗಡಿಯವರು ಶ್ರೀಜಗದ್ಗುರು ಅನ್ನದಾನೀಶ್ವರ ಲೀಲಾಮೃತದಲ್ಲಿ –

“ಬುದ್ಧಿಹೀನರೆ ಕೋಣಮರಿಗಳು

ಶ್ರದ್ದೆಯಿಲ್ಲದವರು ಕುರಿಗಳೈ (೧೧-೧೪)

ಬುದ್ಧಿಹೀನರಿಗೆ ಕೋಣನೆಂದು ಅರ್ಥೈಸಿದ್ದು ಸಮಂಜಸವಾಗಿದೆ. ಡಾಂಭಿಕನು ಸುಜ್ಞಾನವಿಲ್ಲದೆ ಒಣಹೆಮ್ಮೆ ಹೋರಾಟಗಳ ಗೊಂದಲದಲ್ಲಿ ಯಮನ ಸನ್ನಿಧಿ ಸೇರುತ್ತಾನೆ. ಶ್ರದ್ದೆಯಿಲ್ಲದವರು ಕುರಿಗಳಂತೆ ಕಾಲನೆಂಬ ಕಟುಕರ ಕೈಯಲ್ಲಿ ಸಿಕ್ಕು ಮಣ್ಣು ಮುಕ್ಕುತ್ತಾರೆ.

ಶಿವಶರಣರು ಸಾವಿಗಂಜದೆ ಧೀರರಾದರು. ಮತ್ತು

“ನಾಳೆಬಪ್ಪುದು ನಮಗಿಂದೇ ಬರಲಿ,

ಇಂದು ಬಪ್ಪುದು ನಮಗೀಗಲೇ ಬರಲಿ.

ಇದಕಾರಂಜುವರು ? ಇದಕಾರಳುಕುವರು ?

‘ಜಾತಸ್ಯ ಮರಣಂ ಧೃವಂ’ ಎಂದುದಾಗಿ

ನಮ್ಮ ಕೂಡಲ ಸಂಗಮ ದೇವರು ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲಾ! ಬರುವ ಮರಣ ನಿಶ್ಚಿತ, ಅಂಜಿದರಾಗದು, ಅಳುಕಿದರಾಗದು. ಮರಣವನ್ನು ತಪ್ಪಿಸಲು ಹರಿಬ್ರಹ್ಮಾದಿಗಳಿಂದಲೂ ಸಾಧ್ಯವಿಲ್ಲವೆಂದರಿದು –

”ಮರಣವೇ ಮಹಾನವಮಿ’ ಎಂದು

ಧೀರೋದಾತ್ತತೆಯಿಂದ ಆತ್ಮಸಾಕ್ಷಾತ್ಕಾರವನ್ನು ಹೊಂದಿದರು. ಲಿಂಗಾಂಗಸಾಮರಸ್ಯವು ಬಲಹೀನನಿಂದ ಸಾಧಿಸಲು ಸಾಧ್ಯವಿಲ್ಲ. ಆತ್ಮಬಲಬೇಕು. ಯಮ ಬಾಧೆಯನ್ನು ಗೆಲ್ಲಬೇಕು, ಸುಜ್ಞಾನವನ್ನು ಸಂಪಾದಿಸಬೇಕು. ಗುರುಕೃಪೆಯನ್ನು ಪಡೆಯಬೇಕು. ಅಂತಾದರೆ ಮಾನವ ಜನ್ಮ ಸಾರ್ಥಕವಾಗುವದು.

ಓ ಗುರುವೆ ! ಮೃತ್ಯುಂಜಯನೆ ! ಕಾಲದ ಉಪಟಳವನ್ನು ನೀಗಿಸಬಲ್ಲ ಧರ್ಮ ಧೀಮಂತನನ್ನಾಗಿಸು, ಧರ್ಮಭೀರುತನವನ್ನು ಹೋಗಲಾಡಿಸು. ಸುಜ್ಞಾನಿಯನ್ನಾಗಿ ರಕ್ಷಿಸು.

ಕರಿಯ ಕಬ್ಬಿನ ಬಿಲ್ಲು | ಅರಳು ಮಲ್ಲಿಗೆ ಬಾಣ

ನುರುವಣಿಗೆ ಲೋಕ-ಉರುಳಲ್ಕೆ ನಾ ನಿಮ್ಮ

ಮೊರೆ ಹೊಕ್ಕೆ ಗುರುವೆ ಕೃಪೆಯಾಗು

11 ೪೪ ||

ಮಾನವನಿಗೆ ಮರಣದ ಭಯವಿದ್ದರೂ ಕಾಮದ ಕೇಳಿಯಲ್ಲಿ ಮೈಮರೆಯುತ್ತಾನೆ. ಇದು ಪ್ರಕೃತಿಯ ನಿಯಮ. ಪ್ರಕೃತಿ ವಿಕೃತಿಯಾದರೆ ಕಾಮನ ಕೈಯಲ್ಲಿ ಉರುಳುವದು ಸಹಜ. ಸಂಸ್ಕೃತಿಯಿಲ್ಲದೆ ವಿಕೃತಿಗೊಂಡವರ ಮೇಲೆ ಕಾಮನ ಉಪಟಳ ಹೇಳತೀರದು. ಶಿವಕವಿಯು ಇದನ್ನೇ ನಿರೂಪಿಸುವವನಾಗಿ ಮೊದಲು ಕಾಲನ ಶಬ್ದ ಚಿತ್ರವನ್ನು ಚಿತ್ರಿಸಿದಂತೆ ಇಲ್ಲಿ ಕಾಮನ ಕಮನೀಯ ರೂಪವನ್ನು ಕಾಣಿಸುತ್ತಾನೆ.

ಕಾಮನು ಅನಂಗ, ಅವನಿಗೆ ಅವಯವಗಳಿಲ್ಲ. ಶಿವನು ಕಾಮನನ್ನು ದಹಿಸಿ ಬಿಟ್ಟಿದ್ದಾನೆ. ಆದರೆ ಮನಸಿಜನಾಗಿ ಮೈದೋರಲು ಹರಸಿದ್ದಾನೆ. ಅದು ಕಾರಣ ಪ್ರಕೃತಿಯ ಸೌಂದರ್ಯದಲ್ಲಿ ಕಾಮನು ಅವತರಿಸಿ ಬರುತ್ತಾನೆ. ಪ್ರೇಮಿಗಳ ಮನಸ್ಸಿನಲ್ಲಿ ಉದ್ಭವಿಸುತ್ತಾನೆ. ಕಾಮನು ಕಬ್ಬಿನ ಬಿಲ್ಲನ್ನು ಹೆದೆಏರಿಸುತ್ತಾನಂತೆ. ಅರಳಿದ ಮಲ್ಲಿಗೆಯ ಬಾಣಗಳನ್ನು ಬಿಡುತ್ತಾನಂತೆ. ಕೈ ಮೈ ಇಲ್ಲದವನಿಂದ ಬಿಟ್ಟ ಬಾಣದ ಉರುವಣಿಗೆಗೆ ಉರುಳದ ಮರುಳರಿಲ್ಲ. ಲೋಕವೆಲ್ಲ ತತ್ತರಿಸುತ್ತದೆ.

ಗಂಡು ಹೆಣ್ಣುಗಳ ನೋಟದಲ್ಲಿ ಕಾಮ ಕಾಣಿಸಿಕೊಳ್ಳುವನು. ತನ್ನ ಚೇಷ್ಟೆಯನ್ನು ಪ್ರಾರಂಭಿಸುವನು. ಸ್ತ್ರೀಯಳ ಹುಬ್ಬೆಂಬ ಕರಿಯ ಬಿಲ್ಲಿನಿಂದ ಅಪಾಂಗ ನೋಟವೆಂಬ ಅರಳು ಮಲ್ಲಿಗೆಯ ಬಾಣವು ಪುರುಷನ ಮನಸ್ಸನ್ನು ತಲ್ಲಣಿಸುತ್ತದೆ. ಕಣ್ಣಿಗೆ ಕಾಣದ ಕಾಮನ ಬಾಣಗಳು ಅರವಿಂದ, ಆಶೋಕ, ಮಾವು, ಅರಳುಮಲ್ಲಿಗೆ ಮತ್ತು ಕನ್ನೈ ದಿಲೆಗಳೆಂದು ಐದಾಗಿವೆ ಎಂದು ಅಮರಕೋಶಕಾರನು ಬರೆದಿದ್ದಾನೆ. ಸ್ತ್ರೀಯಳ ಜೀವನದ ಮುಖವೇ ಅರವಿಂದ. ಹರ್ಷಚಿತ್ತವೇ ಅಶೋಕ, ಕೆಂದುಟಿಯೇ ಮಾವಿನಚಿಗುರು, ನಗೆಯೇ ಅರಳು ಮಲ್ಲಿಗೆ, ವಿಶಾಲ ನೀಲನೇತ್ರಗಳೇ ಕನ್ನೈದಿಲೆಗಳು. ಈ ಪಂಚಬಾಣಗಳು ಎಂಥ ಧೀರನನ್ನೂ ಚಂಚಲ ಗೊಳಿಸದೇ ಇರವು. ವಸಂತಕಾಲವು ಕಾಮನಿಗೆ ಮಂತ್ರಿಯಂತೆ ಸಹಾಯಕನಾದರೆ, ಕೋಗಿಲೆಯು ಅವನ ಜಯಗಾನವನ್ನು ಹಾಡುತ್ತಿದೆ. ವಿರಹಿಗಳ ಮನವನ್ನು ಕಲಕುತ್ತಿದೆ. ಆಗ ಕಾಮನ ಆಟವು ನಡೆಯುವದೆಂದು ಕವಿಗಳು ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ರಾಜನಿಂದ ರಂಕನ ವರೆಗೆ ಎಲ್ಲರಲ್ಲಿಯೂ ಕಾಮನ ಚೇಷ್ಟೆ. ಕೇವಲ ಮಾನವರಲ್ಲಿ ಮಾತ್ರವಲ್ಲ. ಪಶುಪಕ್ಷಿಗಳಲ್ಲಿಯೂ ಕಾಮಚೇಷ್ಟೆ ಕಾಣುತ್ತಿದೆ. ನೀತಿಕಾರರೂ –

“ಆಹಾರ-ನಿದ್ರಾ ಭಯ-ಮೈಥುನಾನಿ

ಸಾಮಾನ್ಯಮೇತತ್ ಪಶುಭಿರ್ನರಾಣಾಮ್” ||

ಆಹಾರ-ನಿದ್ರೆ ಹಾಗೂ ಭಯಗಳಂತೆ ಮೈಥುನವೂ ಪಶು ಮತ್ತು ಮಾನವರಲ್ಲಿ ಸಾಮಾನ್ಯವಾಗಿದೆಯೆಂದು ವಿಶದಪಡಿಸಿದ್ದಾರೆ. ಕಾಮನು ಅನಂಗನಾಗಿ ಇಂಥ ಅದ್ಭುತ ಕಾರ್ಯವನ್ನೆಸಗುತ್ತಿರುವದು ಪ್ರಕೃತಿಯ ಕೊಡುಗೆ. ವಯಸ್ಸಿಗೆ ಬಂದ ಗಂಡು-ಹೆಣ್ಣು

ಜೀವಿಗಳಲ್ಲಿ ಕಾಮನ ಮಧ್ಯಸ್ಥಿಕೆಯಿಲ್ಲದಿದ್ದರೆ, ಜಗತ್ತು ವಿಸ್ತಾರಗೊಳ್ಳುತ್ತಿರಲಿಲ್ಲ. ಇಂದ್ರಿಯಗಳು ಬಹಿರ್ಮುಖವಾಗಿ ಹರಿಯುತ್ತಿರುವದು ಬ್ರಹ್ಮನ ರಚನೆಯಾಗಿದೆ. ಉಪನಿಷತ್ಕಾರರು-

”ಪರಾಂಚಿಖಾನಿ ವ್ಯತೃಣತ್ ಸ್ವಯಂಭೂ: ಪರಾಜ್ ಪಶ್ಯತಿ” | ಪರಮಾತ್ಮನು ಜೀವಾತ್ಮರ ಇಂದ್ರಿಯಗಳನ್ನು ಬಹಿರ್ಮುಖವಾಗಿ ಸೃಷ್ಟಿಸಿದ್ದರಿಂದ ಅವು ಬಹಿರ್ವಿಷಯ ಗಳನ್ನು ಗ್ರಹಿಸಲು ಹಾತೊರೆಯುತ್ತವೆಯೆಂದು ನಿರೂಪಿಸಿದ್ದಾರೆ. ಇಳುಕಲು ಮುಖವಾದ ನೀರು ತೀವ್ರವಾಗಿ ಹರಿಯುವಂತೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಪಂಚ ವಿಷಯಗಳೇ ಲಕ್ಷ್ಯವಾಗಿಯುಳ್ಳ ಕಿವಿ, ತ್ವಕ್ಕು, ನೇತ್ರ, ನಾಲಿಗೆ, ಮೂಗು ಐದಿಂದ್ರಿಯಗಳು ಆ ವಿಷಯ ಸಂಪರ್ಕವಾಗುತ್ತಲೇ ಗ್ರಹಿಸುತ್ತವೆ. ಇಂದ್ರಿಯ ಗ್ರಹಿಕೆ ಬಲವತ್ತರವಾಗಿದೆ.

“ಮಾತ್ರಾ ಶ್ವಸ್ರಾ, ದುಹಿತ್ರಾ ವಾ ನೈಕಶಯ್ಯಾಸನೋ ಭೂತ್ |

ಬಲವಾನಿಂದ್ರಿಯ ಗ್ರಾಮೋ ವಿದ್ವಾಂಸಮಪಿ ಕರ್ಷತಿ ||”

ತಾಯಿ, ಅತ್ತೆ, ಸೊಸೆ, ಮಗಳು ಯಾರೇ ಇರಲಿ, ಏಕಾಂತದಲ್ಲಿ ವಯಸ್ಕರಾದ ಹೆಣ್ಣು ಮಕ್ಕಳೊಡನೆ ಏಕಾಸನನಾಗಿ ಕುಳಿತುಕೊಳ್ಳಬಾರದು. ಯಾಕೆಂದರೆ ಇಂದ್ರಿಯಗಳ ಶಕ್ತಿಯು ಅದ್ಭುತವಾಗಿದೆ. ಪಂಡಿತನನ್ನು ಸಹ ವಿಷಯದತ್ತ ಹರಿಸುವದು. ಈ ಅಭಿಪ್ರಾಯವನ್ನು ಓದಿದ ವ್ಯಾಸರ ಶಿಷ್ಯನಾದ ಜೈಮಿನಿಯು ಶ್ಲೋಕದ ನಾಲ್ಕನೆಯ ಚರಣದಲ್ಲಿ ವಿದ್ವಾಂಸಂ ನಾಪಕರ್ಷತಿ ವಿದ್ಯಾವಂತನನ್ನು ವಿಷಯವು ಎಳಸುವದಿಲ್ಲ ವೆಂದು ತಿದ್ದುವನು. ಅದನ್ನರಿತ ಗುರುಗಳು ನಾರದನನ್ನು ಕರೆಯಿಸಿ ಜೈಮಿನಿಯ

ಸತ್ಯಪರೀಕ್ಷೆಯನ್ನು ಮಾಡಲು ತಿಳಿಸುವರು. ನಾರದನ ಅಪ್ಪಣೆಯಂತೆ ಕಾಮದೇವನು ಕುದುರೆ ಸವಾರನಾಗಿ ಬಂದು ಜೈಮಿನಿಯನ್ನು ಕಂಡು ಕೆಲವು ಕ್ಷಣಗಳ ನಂತರ ಸುಂದರ ಸ್ತ್ರೀಯಾಗುತ್ತಾನೆ. ಅವನ ಆಶ್ರಮದ ಸಮೀಪಕ್ಕೆ ಬರುವನು. ಹೆಣ್ಣಿನ ಕೋಮಲ ಧ್ವನಿಯನ್ನು ಆಲಿಸಿದ ಮುನಿಯು ಹೊರಬಂದು ತೊಯ್ಸಿಸಿಕೊಳ್ಳುತ್ತಿರುವದನ್ನು ಕಾಣುತ್ತಾನೆ. ರಾಜಕುಮಾರಿಯಂತಹ ಸೌಂದರ್ಯ ವನ್ನು ಕಂಡು ಬೆರಗಾಗುತ್ತಾನೆ.

ಆಶ್ರಮದೊಳಗೆ ಕರೆಯುವನು. ಏಕಾಂತದ ವಾತಾವರಣದಲ್ಲಿ ಅವಳ ಮೋಹಕ ರೂಪವು ಮುನಿಯ ಮನವನ್ನು ಚಂಚಲಗೊಳಿಸುವದು. ಕುಮಾರಿಯ ವೃತ್ತಾಂತವನ್ನರಿತು ಲಗ್ನದ ಸಮಾಚಾರಕ್ಕೆ ಬರುವನು. ಅವಳ ಕರಾರಿನಂತೆ ಜೈಮಿನಿಯು ಆಕೆಯನ್ನು ಹೆಗಲಮೇಲೆ ಹೊತ್ತುಕೊಂಡು ಸಮೀಪದ ಅಶ್ವತ್ಥ ವೃಕ್ಷವನ್ನು ಮೂರು ಸುತ್ತು ಸುತ್ತಹೋಗುವನು. ಒಂದೆರಡು ಸುತ್ತಿನಲ್ಲಿ ಭಾರವಾಗಿ ಮೇಲೆ ನೋಡಲು, ಕನೈಯಾಗದೆ ಕುದುರೆ ಸವಾರನ ದೃಶ್ಯಕಾಣುವದು. ಆಗ ಮುನಿಯ ಮನ ನಾಚುತ್ತದೆ. ಕ್ಷಮೆ ಕೇಳಲು ಕಾಮದೇವನು ಮರದ ಮೇಲಿನ ವ್ಯಾಸರನ್ನು ತೋರಿಸುವನು. ಗುರುಗಳು ವಿದ್ವಾಂಸನಾದ ಶಿಷ್ಯನ ಹೀನಸ್ಥಿತಿಗಾಗಿ ನಗುವರು. ಗರ್ವವೆಲ್ಲ ದೂರವಾಯಿತೆಂದು ಕ್ಷಮೆಕೇಳುವನು. ವ್ಯಾಸರು ಜೈಮಿನಿಗೆ ಇಂದ್ರಿಯ ಶಕ್ತಿಯ ಸ್ವರೂಪವನ್ನು ಯಥೋಚಿತವಾಗಿ ತಿಳಿಸುವರು. (ಮಾನವ ಧರ್ಮ ಪುಟ ೬೮೯)

ಕೇವಲ ಗಾಳಿ, ನೀರು, ಒಣಗಿದ ಎಲೆಗಳನ್ನು ತಿಂದು ತಪಗೈದ ವಿಶ್ವಾಮಿತ್ರ ಪರಾಶರ-ಶಾಂಡಿಲ್ಯ ಮೊದಲಾದ ಋಷಿಗಳೂ ಸಹ ಮೇನಕಾ, ರಂಭಾ, ಸತ್ಯವತಿ ಮೊದಲಾದ ದೇವಲೋಕದ ಸುಂದರಿಯರನ್ನು ಕಂಡು ಮೋಹಿತರಾದರು. ಅಂದಮೇಲೆ ಪ್ರತಿನಿತ್ಯ ಹಾಲು-ತುಪ್ಪ ಮೊಸರು ಯುಕ್ತವಾದ ಮೃಷ್ಟಾನ್ನವನ್ನು ಉಣ್ಣುವ ಮಾನವರಿಂದ ಇಂದ್ರಿಯ ನಿಗ್ರಹಮಾಡುವದು ದುಸ್ಸಾಧ್ಯವೇ ಆಗಿದೆ. ವಿಷಯಗಳಲ್ಲಿ ಇಂದ್ರಿಯಗಳನ್ನು ಆಕರ್ಷಿಸುವ ಬಲವಿದೆ. ಅದಕ್ಕಾಗಿ ಆಕರ್ಷಣ ಶಕ್ತಿಯುಳ್ಳ ಇಂದ್ರಿಯಗಳ ಗ್ರಹಿಕೆಯು ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಧಾರ್ಮಿಕವಾಗಿ ಯಥೋಚಿತವಾಗಬೇಕು. ಅಂದರೆ ಯೋಗ್ಯ. ಇಲ್ಲವಾದರೆ ಜೀವಾತ್ಮನು ಭವಭಂಧನಕ್ಕೊಳಗಾಗುವನು. ಕಮಲದ ಎಲೆಯಂತೆ ನೀರಿನ ಲೇಪವಿಲ್ಲದೆ ಇರುವ ಹಾಗೆ, ಜ್ಞಾನಿಯು ಮಾತ್ರ ವಿಷಯವನ್ನು ಭೋಗಿಸಿಯೂ ಆದರಿಂದ ನಿರ್ಲಿಪ್ತನಾಗುತ್ತಾನೆ. ಆದರೆ ವಿಷಯವು ಕೇವಲ ಭೋಗದಿಂದ ಶಾಂತವಾಗಲಾರದು.

ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ ||

ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

ತುಪ್ಪದಿಂದ ಬೆಂಕಿಯು ಪುನಃ ಪುನಃ ಪ್ರಜ್ವಲಿಸುವಂತೆ ವಿಷಯೋಪಭೋಗವೆಂಬ ಕಾಮವನ್ನು ಭೋಗದಿಂದ ತೃಪ್ತಿಗೊಳಿಸುವದು ಎಂದೂ ಸಾಧ್ಯವಿಲ್ಲೆಂದು ಶಾಸ್ತ್ರಕಾರರು ಸಾರಿದ್ದಾರೆ.

ಭಾರತೀಯ ದಾರ್ಶನಿಕರು ಕಾಮವನ್ನು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಸೇರಿಸಿದ್ದಾರೆ. ಕಾಮವೆಂದರೆ, ಬಯಕೆ ಅಪೇಕ್ಷೆ ಅಥವಾ ಮನದ ಮುಂದಣ ಆಶೆ, ಅದು ಧರ್ಮದಿಂದ ಸಂಗ್ರಹಿಸಿದ ಧನದಿಂದ ಪೂರೈಸುವ ಅಪೇಕ್ಷೆಯಾಗಬೇಕು. ಆಗ ಕಾಮವೂ ಒಂದು ಪುರುಷಾರ್ಥವಾಗಬಹುದು. ಕಾಮವು ಕೇವಲ ಸ್ವಾರ್ಥಪರವಾದರೆ ವಾಸನೆಯೆನಿಸುವದು. ವಾಸನೆಯನ್ನು ನಿವಾರಿಸುವದು ಬಲುಕಷ್ಟ, ಧರ್ಮ ಮತ್ತು ಅರ್ಥಗಳನ್ನು ಅನುಸರಿಸಿದ ಕಾಮನೆಯಲ್ಲಿ ಪರಿಶುದ್ಧತೆ ಹಾಗೂ ಪರಿಪಕ್ವತೆಗಳು ಕಾಣುತ್ತವೆ. ಅಪಕ್ವವಾದ ಕಾಮವು ಮೋಹಕವಾಗಿ ಬಂಧನಕಾರಿಯಾಗುವುದು.

ಮನೋವಿಜ್ಞಾನಿಗಳು ಅತೃಪ್ತ ಕಾಮನೆಯಿಂದ ಮನಸ್ಸು ಮಲಿನವಾಗುವದು. ಅದು ವಿಕೃತಗೊಳ್ಳಲು ಅವಕಾಶಹೊಂದುವದು, ಆದ್ದರಿಂದ ಕಾಮನೆಯನ್ನು ಅತೃಪ್ತ (ಮೊಟಕು)ಗೊಳಿಸಬಾರದು. ಅರ್ಥಾತ್ ಇಂದ್ರಿಯಗಳನ್ನು ನಿಗ್ರಹಿಸಬಾರದು. ಎಂದು ಅಭಿಪ್ರಾಯ ಪಡುತ್ತಾರೆ. ಶಿವಶರಣರು –

”ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಗಳು,

ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು’

ಎಂದು ಮನೋವಿಜ್ಞಾನಿಗಳ ಅರ್ಥವನ್ನೇ ಅನುಸರಿಸಿದ್ದರೂ ಇಲ್ಲಿ ಕಾಮನೆಗಳನ್ನು ಪ್ರಸಾದಗೊಳಿಸಿ ಲಿಂಗೋಪಭೋಗಿಯಾಗಿ ಸ್ವೀಕರಿಸುವ ಕಲೆಯನ್ನು ಕಂಡಿದ್ದಾರೆ. ಕಾಮನೆಯಲ್ಲಿ ಭಾವ ಪರಿಶುದ್ಧವಾಗಬೇಕು. ಪರಧನ ಪರಸ್ತ್ರೀಯರಲ್ಲಿ ಕಾಮ ಬೇಡವೆಂದೂ, ಪರಸ್ತ್ರೀಯೆಂಬ ಜೂಬಿಗಂಜುವೆವೆಂದೂ ಶರಣರು ನೈತಿಕ ಹೊಣೆಯನ್ನು ಹೊತ್ತು ನಡೆದರು. ಪರಸ್ತ್ರೀಯನ್ನು ಮಹಾದೇವಿಯನ್ನಾಗಿ ಕಂಡರು. ಏಕಪತ್ನಿ ವ್ರತಸ್ಥರಾಗಿ ಪುರುಷ ಬಾಳಿದರೆ ಪ್ರತಿವೃತೆಯರಾಗಿ ಸ್ತ್ರೀಯರು ಬಾಳುವರು. ಹೀಗೆ ತನ್ನ ವಸ್ತುವಿನಲ್ಲಿ ಕಾಣುವ ಕಾಮನೆ ಪುರುಷಾರ್ಥವಾಗುವದು. ಅದರಿಂದ ಮೋಕ್ಷ ದೊರೆಯುವದು.

ಗುರುವೇ ! ಕಾಮಾರಿಯೇ ! ಇಂಥ ಕಾಮನ ಉರುವಣಿಗೆಯನ್ನು ನಿವಾರಿಸುವ ಶಕ್ತಿ ನಿನ್ನಲಿದೆ. ನಿನ್ನ ಕೃಪೆಯಲ್ಲಿದೆ. ನಾನು ನಿನ್ನ ಮೊರೆಹೊಕ್ಕಿರುವೆ. ಮನವನ್ನು ಸುಮನವನ್ನಾಗಿಸಿ ವಿಷಯಗಳನ್ನು ಶಿವಪ್ರಸಾದವನ್ನಾಗಿ ಕಾಣುವ ಕಂಗಳನ್ನಿತ್ತು ಕಾಮನಕಾಟವನ್ನು ಕಳೆ. ನೀನಲ್ಲದೆ ಎನಗೆ ಇನ್ನಾರು ರಕ್ಷಕರು

ಬೀಸಿರ್ದ ಬಲೆಯೊಳಗೆ | ಕಾಸಿ ಮೀಸೆಯ ಮೃಗವು .

ತಾಸೋತು ಬಿದ್ದು ಘಾಸಿಯಾಗಲು ನಿಮ್ಮ

ನಾಶ್ರೈಸಿದೆ ಗುರುವೆ ಕೃಪೆಯಾಗು

 ||45||       

ಬೇಟೆಗಾರನ ಬಲೆಯೊಳಗೆ ಉದ್ದಮೀಸೆಯುಳ್ಳ ಮೊಲವು ಸಿಕ್ಕು ನಾಶವಾಗು ವಂತೆ; ಮಾನವನ ಮನಸ್ಸನ್ನು ಮಥಿಸುವ ಮನ್ಮಥನು ಬೀಸಿದ ಮಾಯಾಬಲೆಯೊಳಗೆ ಅಹಂಕಾರವುಳ್ಳ ಜೀವನು ಸಿಕ್ಕು ಶರೀರದ ಶಕ್ತಿಯೆಲ್ಲ ಹ್ರಾಸವಾಗಿ ಘಾಸಿಯಾಗುವನು. ಕಾಮನ ಬಲೆ ಭದ್ರವಾದುದು. ಜೀವಾತ್ಮನು ಆ ಬಲೆಯಿಂದ ಬಿಡಿಸಿಕೊಳ್ಳಲಾರದೇ ಬಳಲಬೇಕಾಗುವದು. ಷಣ್ಮುಖಶಿವಯೋಗಿಗಳು –

‘ಕಾಮವೆಂಬ ಬೇಟೆಗಾರನು ಕಂಗಳಲೋಹಿನಿಂದ ನಿಂದು

ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ

ಸಕಲ ಪ್ರಾಣಿಗಳ ಕೆಡಹಿಕೊಂಡು ಕೊಲ್ಲುತ್ತಿದ್ದಾನೆ” ಎಂದು.

ಕಾಮನ ಕಠೋರ ಕರ್ಮವನ್ನು ವರ್ಣಿಸಿದ್ದಾರೆ. ಅಜ್ಞಜೀವಿಯು ವಿಷಯವೆಂಬ ಸುಖಕ್ಕಾಗಿ ಆಶಿಸುತ್ತದೆ. ವಿಷಕ್ಕಿಂತಲೂ ಈ ವಿಷಯವು ಘೋರವಾದುದೆಂದು ಅನುಭವಿಗಳು ಬೋಧಿಸಿದ್ದಾರೆ. ವಿಷವು ಒಂದು ಜನ್ಮವನ್ನು ಹರಣಮಾಡಿದರೆ; ವಿಷಯವಾಸನೆಯು ಜನ್ಮ ಜನ್ಮಾಂತರದಲ್ಲಿಯೂ ಕಾಡುವದು. ವಿಷಯರಹಿತನಾಗ ಬೇಕಾದರೆ ಗುರುಕಾರುಣ್ಯವೇಬೇಕು. ಅದುವೇ ಮುಖ್ಯ ಸಾಧನವಾಗಿದೆ. ಈ ಮಾತನ್ನು ಅಣ್ಣ ಬಸವಣ್ಣನವರು –

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ !

ಪಶುವೇನು ಬಲ್ಲುದು, ಹಸುರೆಂದೆಳಸುವದು.

ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ

ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯಾ

ಕೂಡಲಸಂಗಮದೇವಾ !

ಎಂದು ದೃಷ್ಟಾಂತ ಪೂರ್ವಕವಾಗಿ ತಿಳಿಸಿದ್ದಾರೆ. ಗುರುವಿನಲ್ಲಿ ವಿಷಯರಾಹಿತ್ಯವನ್ನು ಕರುಣಿಸುವ ಸುಬುದ್ಧಿಯನ್ನು ಬೇಡಿದ್ದಾರೆ. ಪಶುವು ಹಸಿಹುಲ್ಲಿಗಾಗಿ ಆಶೆ ಪಡುವಂತೆ ಜೀವಾತ್ಮನು ತನ್ನ ಸುತ್ತ ಹರಡಿದ ವಿಷಯ ಸುಖಕ್ಕಾಗಿ ಹಲುಬುತ್ತಿದ್ದಾನೆ. ಪ್ರಾಣಿಗಳು

ಕೇವಲ ಒಂದೊಂದು ವಿಷಯಕ್ಕಾಗಿ ಆಶಿಸಿ ಸಾಯುತ್ತವೆ. ಘ್ರಾಣೇಂದ್ರಿಯ ವಿಷಯವಾದ (ಸಂಪಿಗೆಯ) ಸುಗಂಧಕ್ಕಾಗಿ ಭ್ರಮರವು ಕೆಟ್ಟರೆ, ರಸನೇಂದ್ರಿಯ ವಿಷಯವಾದ ರಸಪದಾರ್ಥ (ಮೀನದ ಗಾಳಕ್ಕೆ ಹಚ್ಚಿದ್ದು)ದ ಆಶೆಗಾಗಿ ಮೀನವು ಮೀನಗಾರನ ಬಲ್ಲೆಯಲ್ಲಿ ಬಿದ್ದು ಸಾಯುತ್ತದೆ. ನಯನೇಂದ್ರಿಯ ವಿಷಯವಾದ ರೂಪವನ್ನು ಮೋಹಿಸಿ ಪತಂಗವು ದೀಪದ ಜ್ವಾಲೆಯಿಂದ ಸತ್ತರೆ, ತ್ವಗಿಂದ್ರಿಯ ವಿಷಯವಾದ ಸ್ಪರ್ಶಸುಖವನ್ನು ಬಯಸಿ ರಾಜರ ಕೃತಕದಲ್ಲಿ ಆನೆಯು ಕೆಡುವದು ಶ್ರವಣೇಂದ್ರಿಯ ವಿಷಯವಾದ ಸುಶ್ರಾವ್ಯ ಶಬ್ದವನ್ನು ಮೋಹಿಸಿ ಚಿಗುರೆಯು ಬೇಟೆಗಾರನ ಬಾಣಕ್ಕೆ ಬಲಿಯಾಗುವದು. ಆದರೆ ಪಂಚೇಂದ್ರಿಯಗಳಿಂದ ಪಂಚ ವಿಷಯಗಳನ್ನು ಊಹಿಸಲುಬಾರದು. *ವಿನಾಶ ನಿಶ್ಚಿತವೆಂಬುದು ಪ್ರತ್ಯಕ್ಷವಿದೆ.

ಗುರುವೆ ! ಈ ಕಾಮನ ಬಲೆಯಿಂದ ಪಾರಾಗುವ ಸುಬುದ್ಧಿಯನ್ನು ಕರುಣಿಸಿ ಕಾಪಾಡು. ನಿನ್ನನ್ನೇ ಆಶ್ರಯಿಸಿರುವೆ.

ಶಿವಕವಿಯ ಒಂದೊಂದು ಪದಪ್ರಯೋಗದಲ್ಲಿಯೂ ಸಾರ್ಥಕತೆಯಿದೆ, ಅರ್ಥ ಪೂರ್ಣವಾಗಿದೆ. ಕಾಸಿಮೀಸೆಯ ಮೃಗವೆಂದರೆ ಮೊಲ ಮತ್ತು ಹಮ್ಮಿನಜೀವನೆಂದೂ ಅರ್ಥೈಸಿದ್ದೇವೆ. ಮೊಲದಂತೆ ಜೀವಾತ್ಮನ ಶಕ್ತಿಯೂ ಚಿಕ್ಕದು. ಆದರೆ ಅವನಿಗೆ ಅಂಟಿರುವ ಅಜ್ಞಾನ ಮತ್ತು ಅಹಂಕಾರಗಳು ಮೀಸೆಯಂತೆ ದೊಡ್ಡದಾಗಿ ಬೆಳೆದಿವೆ. ಆಜ್ಞಾನ ಹಾಗೂ ಅಹಂಕಾರವುಳ್ಳ ಜೀವಿಯು ಕಾಮನಬಲೆಯಲ್ಲಿ ಸಿಕ್ಕು ಸೋತು ಪಾರಾಗದೆ ಘಾಸಿಯಾಗುವದು. ಕೊನೆಗೆ ಸಾಕುಸಾಕಾಗಿ ಶ್ರೀಗುರುವಿನ ಪಾದಕಮಲ ವನ್ನು ಆಶ್ರಯಿಸದೇ ಶಾಂತಿಯಿಲ್ಲವೆಂಬುದು ಈ ಶರಣನ ಬಯಕೆಯಾಗಿದೆ.

ಇಂಗ್ಲೀಷ ಮೂಲ: ಶ್ರೀಕಂಠ ಚೌಕೀಮಠ

ಕನ್ನಡ ಭಾಷಾಂತರ :ಶ್ರೀ ಎಮ್.ಎ.ಹಿರೇವಡೆಯರ

“ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ತೊರಿಸುತ್ತೇನೆ. ಸಾಧು ಪುರುಷರನ್ನು ಉದ್ಧ್ದರಿಸುವುದಕ್ಕಾಗಿ, ಪಾಪಕರ್ಮ ಮಾಡುವವರನ್ನು ವಿನಾಶಮಾಡಲಿಕ್ಕಾಗಿ ಮತ್ತು ಧರ್ಮವನ್ನು ಸದೃಢವಾಗಿ ಸ್ಥಾಪಿಸುವದಕ್ಕಾಗಿ ಸಾಕಾರ ರೂಪದಿಂದ ನಾನು ಯುಗ-ಯುಗಗಳಲ್ಲಿ ಪ್ರಕಟವಾಗುತ್ತಿರುತ್ತೇನೆ.

ಕನ್ನಡನಾಡಿನ ಇಪ್ಪತ್ತ್ತನೆಯ ಶತಮಾನದ ಅವಿಸ್ಮರಣೀಯ ಕಾಲಘಟ್ಟದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಠಿ ಯಿಂದ ಸಮುಷ್ಠಿಯುತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.

19ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿ, 20ನೇಯ ಶತಮಾನದ ಪೂರ್ವಾರ್ಧಭಾಗದವರೆಗೆ ಜೀವಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಈ ನಾಡಿನ ಯಾವದೇ ಒಂದು ಭಾಗ ಅಥವಾ ಕಾಲಕ್ಕೆ ಸಂಬಂಧ ಪಟ್ಟವರಲ್ಲ ,ಅವರು ಸಮಗ್ರ ಮನುಕುಲಕ್ಕೆ ಸಂಭಂಧ  ಪಟ್ಟವರು. ಶ್ರೀ ಕುಮಾರ ಶಿವಯೋಗಿಗಳ ಜೀವನ ಅವಿಸ್ಮರಣೀಯ, “ಸಮಾಜಸೇವೆಯೇ ಶಿವಪೂಜೆ” ಎಂಬ ಸೂಕ್ತಿ ಇವರಿಗೆ ಸಹಜವೆಂಬಂತೆ ಸಂದಿದೆ.

ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿ  ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬ ಒಂದರಲ್ಲಿ, ಆತ್ಮಬಲ ಆಧ್ಯಾತ್ಮ ಸಾಧನೆಯಲ್ಲಿ ಜೀವಿಸುತ್ತಿದ್ದ ಬಸಯ್ಯ-ನೀಲಮ್ಮ ಎಂಬ ದಂಪತಿಗಳ ಪವಿತ್ರ ಗರ್ಭದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು.

              ಅಂದೊಂದು ದಿನ ರಾತ್ರಿ ಒಬ್ಬ ಜಂಗಮ ಶಿವಯೋಗಿ ತಾಯಿ ನೀಲಮ್ಮನ ಕನಸಿನಲ್ಲಿ ಕಂಡು, ಸುಂದರವಾದ ಸುವಾಸನೆಯ ಹೂವೊಂದನ್ನು  ಕೊಟ್ಟು “ತಾಯಿ ನೀಲಮ್ಮ  ನಿನ್ನ ಗರ್ಭದಲ್ಲಿ ಶಿವನ ಅಪೇಕ್ಷೆಯ ಮೇರೆಗೆ ಕಾರಣಿಕ ಪುರುಷನ ಜನನ ವಾಗುವುದೆಂದು” ಹೇಳಿದ ವಾಣಿ ಹೊಸಯುಗದ ನಾಂದಿ ಹಾಡಿತು.

 ಪ್ರಭನಾಮ ಸಂವತ್ಸರ ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿಯ ಬುಧವಾರ ಬೆಳಗಿನಜಾವದಲ್ಲಿ ಸಪ್ಟಂಬರ 11ರಂದು, ಕ್ರಿ.ಶ, 1867ರಲ್ಲಿ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು. ಹುಟ್ಟಿದ ಮಗುವಿಗೆ ಹಾಲಯ್ಯ ನೆಂದು ನಾಮಕರಣ, ಹುಟ್ಟಿನಿಂದಲೇ ಅದ್ಭುತಗಳನ್ನು ಮೆರೆದ ಮಗು ಹುಣ್ಣಿಮೆಯ ಚಂದ್ರನಂತೆ ಅರಳಿ, ಆರುವರ್ಷಗಳು ತುಂಬಿದಾಗಲೇ ಓದು-ಬರಹಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದ ಹಾಲಯ್ಯನಿಗೆ ಅಕ್ಷರ ದೀಕ್ಷೆ ನೀಡಿದವರು ಮನೆಯನ್ನೆ ಶಾಲೆಯನ್ನಾಗಿ ಮಾಡಿದ ಅಜ್ಜ ಕೊಟ್ಟೂರು ಬಸವಾರ್ಯರು.

              ಹುಟ್ಟಿನಿಂದಲೇ ತ್ಯಾಗ ಮನೋಭಾವನೆಯನ್ನು ಹೊತ್ತು ತಂದ ಹಾಲಯ್ಯ ಸುತ್ತಲಿನ ಪ್ರಪಂಚವನ್ನು ಕರುಣೆÂ ಪ್ರೀತಿಗಳಿಂದಲೇ ಕಾಣುತ್ತ ಬೆಳೆದವರು. ವಿನಯಶೀಲತೆ ಅನುಕಂಪ ಹಾಲಯ್ಯನ ಹುಟ್ಟುಗುಣಗಳು. ಆಗಾಗ ಧ್ಯಾನಾಸಕ್ತನಾಗಿ ಮೌನದಲ್ಲಿಯೇ ಮುಳಗುತ್ತಿದ ಹಾಲಯ್ಯ ಬೆಳೆದಂತೆ ಬೇರೆಯವರೊಡನೆ ಆಡುವ ಆಟಪಾಠಗಳನ್ನು ತ್ಯಜಿಸಿ ಮೌನಿಯಾಗಿ ಜೀವಿಸಹತ್ತಿದ. ಶಾಲಾ ಅಭ್ಯಾಸದಲ್ಲಿ ಅಭಿರುಚಿ ಇದ್ದರೂ, ತ್ಯಾಗ, ಅನುಕಂಪ, ಆತ್ಮಜ್ಞಾನಗಳಕಡೆಗೆ ಬಾಲಕನ ಒಲವು ಇದ್ದಂತೆ ಭಾಸವಾಗುತ್ತಿತ್ತು.

ಹಾಲಯ್ಯ ಹುಟ್ಟಿದ ಕುಟುಂಬ ಬಡತನದಲ್ಲಿಯೇ ಮುಳುಗಿ ಏಳುವ ಆ ಕರುಣಾಜನಕ ಸ್ಥಿತಿಯಲ್ಲಿ  ಮತ್ತೊಂದು ಕರುಣಾಜನಿಕ ಘಟನೆಯನ್ನು ದೈವಿಶಕ್ತಿ ತಂದೊಡ್ಡಿತು. ತಂದೆ ಬಸಯ್ಯನವರ ಅಕಾಲಿಕ ಮರಣ, ತಾಯಿಗೆ ಸಿಡಿಲು ಬಡಿದಂತಾಯಿತು. ಇದನ್ನು ಕಂಡುಂಡ ಬಾಲಕ ಹಾಲಯ್ಯನ ಅಂತರಂಗದ ತುಡಿತ ಒóಂದು Pಡೆಯಾದರೆ ಬಡತನದ ತುಳಿತ ಮತ್ತೊಂದು ಕಡೆ.

              ಕಂತೆ ಭಿಕ್ಷವೇ ಮನೆತನದ ಬಡತನ ಕಳೆಯುವ ಜೀವನಾಧಾರ  ಮತ್ತು ಶಿವನ ಉಂಬಳಿ ಎಂಬಂತೆ, ಮನಸ್ಸ್ಸಿಲ್ಲದಿದ್ದರೂ ಮನೆ ಮನೆಯ  ಕಂತೆ ಭಿಕ್ಷಕ್ಕೆ ಹೊರಟ ಬಾಲಕ ಹಾಲಯ್ಯನಿಗೆ ಒಂದು ಘಟನೆ ಬಯಸದೆ ಬಂದ ಭಾಗ್ಯವಾಗಿ ಬಂದಿತು. ಆ ಘಟನೆ ಬಾಲಕ ಹಾಲಯ್ಯನ ಜೀವನದ ಹೊಸ ಘಟ್ಟಗಳಿಗೆ ನಾಂದಿ ಹಾಡಿತು. ಬಾಗಿಲು ಬಳಿ ನಿಂತ ಹಾಲಯ್ಯನಿಗೆ, ಭರಮಪ್ಪನೆಂಬ ಯಜಮಾನನ ಭಾರವಾದ ಮಾತುಗಳು ಹೊಸ ದಿಕ್ಕನ್ನೆ ತೋರಿಸಿತು.” ಈಗ ನಿನಗೆ 12 ವರ್ಷಗಳು ತುಂಬಿವೆ, ಇನ್ನೂ ಎಷ್ಟುದಿನ ಭಿಕ್ಷೆಬೇಡಿ ಜೋಳಿಗೆ ತುಂಬುವ ಸಾಹಸ ಮಾಡುವೆ? ಹೋಗು ಬದುಕಲು ಶಿಕ್ಷಣದ ಮೊರೆ ಹೋಗು ” ಎಂಬ ಬಿರು ನುಡಿಗಳು  ಬಾಲಕನ ಮೇಲೆ ಪರಿಣಾಮ ಬೀರಿ  ಎಚ್ಚರಗೊಳ್ಳುವಂತೆ ಮಾಡಿದವು. ಹಾಲಯ್ಯನ ಮನದಂಗಳಲ್ಲಿ ಭರಮಪ್ಪನ ಬಿರುನುಡಿಗಳು ಪ್ರತಿಧ್ವನಿಸ ತೊಡಗಿದವು.

              ಮರುದಿನ ಬಟ್ಟೆ ತೊಳೆಯಲೆಂದು ಊರಹೊರಗಿನ ಬಾವಿಗೆ ಹೋದ ಹಾಲಯ್ಯ ಮರಳಿ ಮನೆಗೆ ಬರಲಿಲ್ಲಿ. ಬಟ್ಟೆತೊಳೆಯುವ  ಕೆಲಸ ಮುಗಿಸಿ, ಅವುಗಳನ್ನು ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ಮಿತ್ರರೊಬ್ಬರಿಗೆ ಹೊರಸಿ ಹಾಲಯ್ಯ, ಕಜ್ಜರಿ ಎಂಬ ಊರಿಗೆ ಕಾಲುನಡಿಗೆಯ ಪ್ರಯಾಣ ಬೆಳೆಸಿದ. ಎಲ್ಲಿಗೆ ಹೋಗಲಿ…? ಹಾಲಯ್ಯನ ಅಂತರಂಗದ ಪ್ರಶ್ನೆ ಮೈಮನಗಳೆಲ್ಲ ತತ್ತರಿಸಿದರೂ ತಾಳ್ಮೆಗೆಡದ ಹಾಲಯ್ಯ  ಮಾರ್ಗದ ಬದಿಗಿದ್ದ ಮರದ  ಕಟ್ಟೆಯ ಮೇಲೆ ಕೈಕಟ್ಟಿಕೊಂಡು ಕುಳಿತಾಗ ರಾಚಯ್ಯ ಹಿರೇಮಠರೆಂಬ ಯಜಮಾನರು ಹಾಲಯ್ಯನ ಮೈತಟ್ಟಿ ಮಾತನಾಡಿಸಿದರು. ಆತನ ದಿವ್ಯಮುಖದ ತೇಜಸ್ಸಿಗೆ ಮಾರು ಹೋಗಿ, ಮನಕರಗಿದಂತಾಗಿ ಬಾಲಕ ಹಾಲಯ್ಯನನ್ನು ಮನೆಗೆ ಕರೆದುಕೊಂಡು ಹೋದರು, ಹಸಿದ ಹೊಟ್ಟೆಗೆ ಪ್ರಸಾದ ನೀಡಿದ ನಂತರ, ಮನದ ಹಸಿವೆಯನ್ನು ಅರ್ಥಮಾಡಿಕೊಂಡ ರಾಚಯ್ಯ ಹಾಲಯ್ಯನಿಗೆ ಪ್ರಾಥಮಿಕ ಶಿಕ್ಷಣ ಪೂರೈಸುವ ಸರ್ವಾನುಕೂಲತೆಯನ್ನು ಮಾಡಿದರು, ಹಾಲಯ್ಯನಿಗೆ ಎಂದಿಲ್ಲದ ಸಂಬ್ರಮ, ಸಮಾಧಾನ..

              ಅಂದಿನಕಾಲದಲ್ಲಿ ಕನ್ನಡ ಏಳನೆ ಇಯತ್ತೆಯ ಮೂಲ್ಕಿ ಪರೀಕ್ಷೆಯಲ್ಲಿ ಪಾಸಾದರೆ ಮಾಮಲೇದಾರನಿಗೆ ಸಿಕ್ಕಷ್ಟು ಗೌರವ, ಕಜ್ಜರಿ ಗ್ರಾಮದಿಂದ 123 ಕಿ.ಮಿ. ದೂರ ಇದ್ದ ಧಾರವಾಡ ಪಟ್ಟಣದಲ್ಲಿ ಮೂಲ್ಕಿ ಪರೀಕ್ಷೆ ಪತ್ರಿಕೆ ಬರೆಯಲು ಕಾಲುನಡಿಗೆಯಿಂದ ಸಹಚರರೊಡನೆ ಹಾಲಯ್ಯ£ವರು ಪ್ರಯಾಣಿಸಿದರು, ಬರಿಗಾಲಿನ ಹಾಲಯ್ಯ ಧಾರವಾಡ ವನ್ನು ಮುಟ್ಟಿ ಪರೀಕ್ಷೆ ಬರೆಯುವಾಗ ಹಾಲಯ್ಯನವರಿಗೆ  ಮೈತುಂಬ ಜ್ವರದ ಬಾಧೆ !!s

              ದೈವದಾಟವನ್ನು ಅರಿತವರಾರು? ಹಾಲಯ್ಯ ಮೂಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್uನಾಗಿ ಮೈಮರೆಸಿಕೊಂಡು ಕುಳಿತು ಗಾಡಾಂಧಕಾರದಲ್ಲಿಯೇ ಕಾಲ ಕಳೆಯ ಬೇಕಾಯಿತು. 15 ದಿವಸಗಳವರೆಗೆ ಹಾಲಯ್ಯನಿಗೆ ಎಕಾಂತದ ಆಶ್ರಯ,  ಶಿಕ್ಷಕರೊಬ್ಬರು ಬಂದು ಹಾಲಯ್ಯನನ್ನು ಸಂತೈಸಿ ಮೂಲ್ಕಿ ಮರು ಪರೀಕ್ಷೆಗೆ ಕಟ್ಟಲು ಮಮತೆಯಿಂದ ಮನವಲಿಸುವ ಪ್ರಯತ್ನ ಮಾಡಿದರು. ಮರು ಪರೀಕ್ಷೆಗೆ ಕಟ್ಟಲು ಮನಸ್ಸುಮಾಡದ ಹಾಲಯ್ಯನವರಿಗೆ  ತಾಯಿಯ  ಮನೆಯ  ನೆನಪಾಗಿ, ಎನಾದರೊಂದು ಕಾಯಕಮಾಡಿ ಕಾಯವನ್ನು ಕಾಪಾಡುವ ನಿರ್ಣಯದೊಂದಿಗೆ ತಾಯಿಯ ತೌರುಮನೆ ಲಿಂಗದ ಹಳ್ಳಿಗೆ ತೆರಳಿದರು.

              ಹಾಲಯ್ಯ ಲಿಂಗದ ಹಳ್ಳಿಯಲ್ಲಿ ಸಣ್ಣಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ಕೊಡುವದರ ಜೊತೆಗೆ ಸ್ವ ಅಧ್ಯಯನ ಹಂಬಲದಿಂದ ನಿಜಗುಣ ಶಿವಯೋಗಿಗಳ ತತ್ವಜ್ಞಾನ ಅರಿಯಲು, ಅಲ್ಲಿನ ಹಿರಿಯರಾದ ಬಸಯ್ಯ ನವರ ಸಂಪರ್ಕದಲ್ಲಿ ನಿಜಗುಣರ ತತ್ವ ಶಾಸ್ತ್ರದ ಕವಿತೆಗಳ ಅಧ್ಯಯನ ಪ್ರಾರಂಭಿಸಿದರು.

ಹಾಲಯ್ಯ ಲಿಂಗದ ಹಳ್ಳಿಯಲ್ಲಿರುವೆನೆಂದು ತಿಳಿದ ತಾಯಿ ನೀಲಮ್ಮ ಮಗನನ್ನು ಕಾಣಲು ಅಲ್ಲಿಗೆ ಬರುತ್ತಾರೆ. ಹರೆಯದ ಮಗನನ್ನು ಕಂಡು ಸಂತೋಷಭರಿತಳಾದ ತಾಯಿ ಮಗನ ಮದುವೆಯ  ಪ್ರಸ್ತಾಪ ಮಾಡಿದಾಗ ಮಗ ಹಾಲಯ್ಯನಿಂದ ಅತ್ಯಂತ ಅನಿರೀಕ್ಷಿತ ಉತ್ತರವಾಗಿತ್ತು.

“ಮದುವೆ ಮಾಡಿಕೊಂಡು ನಾನು ಸಂತೋಷಪಡಬೇಕಾಗಿಲ್ಲ ನಾನು ಬ್ರಹ್ಮಚಾರಿಯಾಗಿಯೇ ಜನಿಸಿದ್ದೇನೆ.  ನಿನ್ನ ಜೀವನ ಪೋಷಣೆಗಾಗಿ ಮತ್ತೊಬ್ಬ ಮಗನಿದ್ದಾನೆ ಮನೆಗೆ ಬಂದ ಸೊಸೆ ಮತ್ತು ಮಗ ನಿನ್ನ ವೃದ್ಧಾಪ್ಯ ಜೀವನಕ್ಕೆ ರಕ್ಷಣೆ ಕೊಡುತ್ತಾರೆ”. ಎಂಬ ದೃಢ ನಿರ್ಧಾರದ  ಹಾಲಯ್ಯ ನವರ ಮಾತುಗಳು ತಾಯಿಗೆ ತಡೆಯಲಾರದ ದು:ಖವನ್ನು  ತಂದೊಡ್ಡಿದವು.

ಹಾಲಯ್ಯ ತನ್ನ ಹದಿಹರೆಯದಲ್ಲಿಯೇ,ತಾನು ಇಂದ್ರಿಯ ಸುಖಕ್ಕಾಗಿ ಜನಿಸಿದವನಲ್ಲ ಎಂಬ ಕೊನೆಯ ನಿರ್ಧಾರಕ್ಕೆ ಬಂದಿದ್ದರು. ತನ್ನ ಸ್ವಸಂತೋಷದಲ್ಲಿಯೂ ಅವರ ನಂಬಿಕೆ ಇರಲಿಲ್ಲ. ಹಾಲಯ್ಯ£ವರ ಹುಟ್ಟುಗುಣ ವೆಂದರೆ ತ್ಯಾಗ, ಸುತ್ತಲಿನ ಸಮಾಜದ ಸುಖವೇ  ಅವರ ಅಂತರಂಗದ ಮೂಲಮಂತ್ರವಾಗಿತ್ತು. ಮಾತೆಯ ಮಮತೆಗೆ ಮರುಮಾತನಾಡುವವನೂ ತಾನಲ್ಲವೆಂಬ ತನ್ನ ಮಾತೃಪ್ರೇಮದ ಎಳೆಯನ್ನು ಮಾತೆಯ ಮುಂದೆ ಬಿಚ್ಚಿಟ್ಟರು.  vಮ್ಮ  ಜವಾಬ್ದಾರಿಯ ಅರಿವನ್ನು ತಾಯಿಯ ಅರಿವಿನಲ್ಲಿ ಮಾಡಿಸಿದರು. ಶಿಕ್ಷಕನ ಕಾಯಕದಿಂದ  ತಾವು ಕೂಡಿಟ್ಟ ಮುನ್ನೂರು ರೂಪಾಯಿಗಳನ್ನು ತುಂಬು ಹೃದಯದಿಂದ  ಹಾಲಯ್ಯ ಮಾತೆಯ  ಮಡಿಲಿನ ಕಂದನಾಗಿ ಉಡಿಯನ್ನು ತುಂಬಿದರು.

“ಇಂದಿನಿಂದ ನಾನು ನಿನ್ನ ಮಗನಲ್ಲ. ತಾಯಿಮಗನೆಂಬ ಕರುಳಕುಡಿ ಇಂದಿಗೆ ಹರಿಯಿತು. ಜೀವನದಲ್ಲಿ ನಾನು  ಆರಿಸಿಕೊಂಡ ಶಿವಮಾರ್ಗದಲ್ಲಿ  ಶಾಶ್ವತವಾಗಿ ಮುನ್ನಡೆಯುವಂತೆ ನನ್ನನ್ನು ಬಿಡಬೇಕು, ಇದು ನನ್ನ ಅಂತರಂಗದ ಒಲವು.”  ಎಂದು ನುಡಿದ ಹಾಲಯ್ಯ  ಕ್ಷಣಮಾತ್ರ  ನಿಲ್ಲದೆ ಅಲ್ಲಿಂದ ಹೊರಟು ಹೋದರು. ಮಗನ ನುಡಿಗಳನ್ನು ಕೇಳಿದ  ನೀಲಮ್ಮನ ಮಾತುಗಳು  ಮೌನವಾದವು,

ನಿಜಗುಣ ಶಿವಯೋಗಿಗಳ ತತ್ವ ಜ್ಞಾನದ ಸವಿಯನ್ನು  ಸವಿಯಬೇಕೆಂಬ ಉತ್ಕಟ  ಇಚ್ಛೆಯಿಂದ ಹಾಲಯ್ಯ£ವರ ಹೆಜ್ಜೆಗಳು ಹುಬ್ಬಳ್ಳಿಯ ಕಡೆಗೆ ನಡೆದವು.   ನಿಜಗುಣರ ಮಾರ್ಗದರ್ಶನ ಪಡೆಯುವುದು  ಹಾಲಯ್ಯ£ವರ  ಮನದಾಳದ ಬಯಕೆಯಾಗಿತ್ತು,  ಇದೇ ನಿನಗೆ ಮುಕ್ತಿಮಾರ್ಗವೆಂದು ಅಂತರಂಗ ಒತ್ತಿ ಒತ್ತಿ ಹೇಳುತ್ತಿತ್ತು. ಚಿಕ್ಕ ವಯಸ್ಸಿನಲ್ಲಿಯೇ  ಹಾಲಯ್ಯ£ವರ ಹೃದಯ  ಪರಿಪೂರ್ಣತೆಯನ್ನು ಹೊಂದಿ, ಭೋಗವನ್ನು ಬೀಸಾಡಿ ತ್ಯಾಗ ಮಾರ್ಗದತ್ತ ಮುನ್ನಡೆಯಲು ,  ಆರೂಢಾವಸ್ಥೆಯನ್ನು ಪಡೆದು ಭಕ್ತರಿಗೆ  ನಿಜಗುಣ ಶಿವಯೋಗಿಗಳ ಶಾಸ್ತ್ರಾಧ್ಯಯನವನ್ನು ಉಣಬಡಿಸುತ್ತಿದ್ದ ಸಿದ್ಧಾರೂಢರ ಮಠದತ್ತ ಹಾಲಯ್ಯ£ವರು  ತೆರಳಿದರು

ಸಿದ್ಧಾರೂಢರು   ಅಂದಿನಕಾಲದ  ಅತಿ ದೊಡ್ಡ ಸಿದ್ಧಿಪುರುಷರಾಗಿದ್ದರು,  ಗುರುಸಿದ್ಧಾರೂಢರ ಮಾರ್ಗದರ್ಶನದಲ್ಲಿ ಹಾಲಯ್ಯ  ಷಟ್‍ಸ್ಥಲ ಸಿದ್ಧಾಂತವನ್ನು ಅಧ್ಯಯನ ಪ್ರಾರಂಭಿಸಿ ಸಿದ್ಧಾರೂಢರ ಅಂತರಂಗವನ್ನು ಗೆದ್ದುಕೊಂಡು, ಗುರುವಿನ ಪಾದಕಮಲಗಳಡಿಯಲ್ಲಿ  ಅಧ್ಯಯನ ಮಾಡುತ್ತಿದ್ದರೂ  ಆ ಗುರು ಮಠದ   ಪರಿಸರz ಅನಾನುಕೂಲತೆಗಳಿಂದ,  ತನ್ನ  ಲಿಂಗಪೂಜೆ ಪ್ರಸಾದಕ್ಕಾಗಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಅನುಕೂಲಮಾಡಿಕೊಂಡು, ಪಾಠ ಪ್ರವಚನಕ್ಕೆ  ಮಾತ್ರ   ಸಿದ್ದಾರೂಢರ ಮoಕ್ಕೆ ಹಾಲಯ್ಯನವರು  ಹೋಗುತ್ತಿದ್ದರು.

ಧರ್ಮಗ್ರಂಥಗಳ ಅಧ್ಯಯನದಲ್ಲಿ ಮುಳುಗಿದ್ದರೂ, ಲಿಂಗಪೂಜಾ  ನಿಷ್ಥೆಗೆ ಸಂಭಂಧಪಟ್ಟಂತೆ  ಕೆಲವು ಪ್ರಶ್ನೆಗಳು ಹಾಲಯ್ಯನನ್ನು ಕಾಡುತಿದ್ದವು. ಈ ಕಳವಳದ ನಿವಾರಣೆಗಾಗಿ ಎಮ್ಮೀಗನೂರ ಜಡೇಸಿದ್ಧರನ್ನು ಸಂದರ್ಶಿಸುವ ಮಹಾಘಟನೆಯೊಂದು  ಹಾಲಯ್ಯನ ಜೀವನದಲ್ಲಿ ನಡೆಯಿತು. ಜಡೇಸಿದ್ಧರು .ಅಂದಿನ ಕಾಲದ ವಿಶಿಷ್ಟಗುಣಗಳ ಹಠಯೋಗಿಗಳೆಂದು ಹೊರಹೊಮ್ಮಿ ಸರ್ವರ ಪ್ರೀತ್ಯಾಧರಗಳಿಗೆ ಪಾತ್ರರಾಗಿದ್ದರು.ಹಾಲಯ್ಯ£ವರುÀ ಬರುವ ಮುನ್ಸೂಚನೆಯನ್ನು ಅಂತರಂಗದಲ್ಲಿ ಅನುಭವಿಸಿದ ಎಮ್ಮೀಗನೂರ ಜಡೇಸಿದ್ಧರು ಹಾಲಯ್ಯ£ವರ ಬರುವಿಕೆಗಾಗಿ ಕಾಯುತ್ತಿದ್ದರು. ಹಾಲಯ್ಯ£ವರು ಜಡೇಸಿದ್ಧರ   ಸಂದರ್ಶನದ ಸ್ಥಳ  ಮುಟ್ಟಿದಾಗ ಸಿದ್ಧರು ತಮ್ಮ ಕೊರಳಲ್ಲಿ ಲಿಂಗವನ್ನೊಳಗೊಂಡ ಲಿಂಗವಸ್ತ್ರವಂದನ್ನು ಕಟ್ಟಿಕೊಂಡು ಓಂಕಾರ ಪಠಿಸುತ್ತ ಕುಳಿತುಕೊಂಡಿದ್ದರು. ಸಿದ್ಧಿಪುರುಷರ ದಿವ್ಯದರ್ಶನ ಪಡೆದುಕೊಂಡ ಹಾಲಯ್ಯನವರಿಗೆ ಮನದ  ಸಂಧಿಗ್ಧತೆ ಮಾಯವಾಗಿ ಲಿಂಗಪೂಜೆಯ ಹಂಬಲ ಸ್ಥಿರಗೊಂಡಿತು. ಮನಸ್ಸು ಹಗುರಾಯಿತು.

              ಹಾಲಯ್ಯ£ವರ ಅಂತರಂಗ, ಯೋಗ್ಯಗುರುವಿನ ದರ್ಶನಾರ್ಶೀವಾದಕ್ಕಾಗಿ ಸದಾವಕಾಲ ಮಿಡಿಯುತ್ತಿತ್ತು. ತನ್ನರಿವೆ ತನಗೆ ಗುರುವೆಂಬಂತೆ ಕೊಳ್ಳೆಗಾಲ ತಾಲೂಕಿನ ವಿರಕ್ತಮಠದ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳ ದರ್ಶನ ಹುಬ್ಬಳ್ಳಿಯ ಸಿದ್ಧಾರೂಢರ ಮಠದದಲ್ಲಿ ಆದದ್ದು ಹಾಲಯ್ಯನ ಜೀವನಕ್ಕೆ ಹೊಸ ತಿರುವು ನೀಡಿತು. ಆರೂಢರಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ಬಂದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಹಾಲಯ್ಯನನ್ನು ಕಂಡು ಅರಸುವ ಬಳ್ಳಿ ಕಾಲ್ತೊಡಕಿದಂತಾಗಿ ತಮ್ಮ ಅಂತರಂಗದಲ್ಲಿ ಹಾಲಯ್ಯನಿಗೆ ಹಿರಿದಾದ ಸ್ಥಾನಕೊಟ್ಟರು. ಪೂರ್ವಜನ್ಮದ ಪುಣ್ಯವೆಂಬಂತೆ ಎರಡು ಆತ್ಮಗಳು ಒಂದಾಗಿ ಗುರು-ಶಿಷ್ಯರ ರೂಪದಲ್ಲಿ ಒಬ್ಬರನೊಬ್ಬರು ಕಂಡಂತಾಯಿತು. ನಿಬ್ಬೆರಗೊಂಡ ಹಾಲಯ್ಯನವರು  ಗುರುವಿನ ಪಾದಗಳಿಗೆ ತಮ್ಮನ್ನೆ ತಾವು  ಅರ್ಪಿಸಿಕೊಂಡರು.

              ಹಾಲಯ್ಯನವರು ಹಾಗೂ ಗುರುಗಳಾದ ಎಳಂದೂರ ಬಸವಲಿಂಗಸ್ವಾಮಿಗಳವರು ಹುಬ್ಬಳ್ಳಿಯ ಸಿದ್ಧಾರೂಢಮಠದಿಂದ ತಮ್ಮ ಆಧ್ಯಾತ್ಮ ಜೀವನದ ಯಾತ್ರೆಯನ್ನಾರಂಭಿಸಿ ಆತ್ಮಸಾಕ್ಷಾತ್ಕಾರದ ಹಸಿವು ಹಿಂಗಿಸಿಕೊಳ್ಳಲು ಶಪಥಮಾಡಿ ಮುಂದುವರೆದರು. ಪರಸ್ಪರರಲ್ಲಿರುವ ಸತ್ಯ ಸಂಶೋಧನೆಯ ಹಸಿವು ಇಬ್ಬರನ್ನೂ ಒಂದುಗೂಡಿಸಿತು. ದೇಹಗಳೆರಡು ಆತ್ಮ ಒಂದೇ ಎಂಬಂತೆ, ಕೊಳ್ಳೆಗಾಲದ ಶಂಭುಲಿಂಗನ ಬೆಟ್ಟದ ಗುಹೆಯೊಂದರಲ್ಲಿ ಗುರುಶಿಷ್ಯರು ಸತತ 12 ವರ್ಷ ಅನುಷ್ಠಾನ ಮಾಡಿ ಅಷ್ಟಾವರಣಗಳನ್ನು ಆತ್ಮವಾಗಿಸಿಕೊಂಡು ಲಿಂಗಾಂಗದ ಸಾಮರಸ್ಯವನ್ನು ಸವಿದರು.

ಶಿವಯೋಗ ಸಾಮರಸ್ಯವನ್ನು ಸವಿದ ನಂತರ ಗುರುಶಿಷ್ಯರ  ಆಧ್ಯಾತ್ಮ ಜೀವನದ ಯಾತ್ರ್ರೆ ಯಾವ ಆತಂಕವಿಲ್ಲದೆ ಶಿವಧ್ಯಾನದಲ್ಲಿಯೇ ಮುಂದುವರೆಯಿತು. ಪವಿತ್ರ ವಾತಾವರಣದ ದಿನವೊಂದರಂದು ಹಾಲಯ್ಯನವರಿಗೆ ಗುರೋಪದೇಶದ ದೀಕ್ಷೆಯಾಯಿತು. ಶಿವಯೋಗಿಯೆಂದರೆ ಶಿವಯೋಗದಾನಂದವನ್ನು ತನ್ನಷ್ಟಕ್ಕೆ ತಾನೆ ಸವಿಯುವಾತ£ಲ್ಲ, ಅದನ್ನು ಇತರರೆಲ್ಲರಿಗೂ ಉಣಬಡಿಸಬೇಕು. ಆಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಬೇಕು. ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಬೇಕು.

ಹೀಗೆ ಗುರುಶಿಷ್ಯರ ಜೀವನವಾಹಿನಿ ಮುಂದುವರಿಯುತ್ತಿರುವಾಗ ಅನೀರಿಕ್ಷಿತವಾಗಿ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳು ಶಿವನ ಕರೆಗೆ ಒಗೊಟ್ಟು ಲಿಂಗದೊಳಗಾದರು. ಈ ಅನಿರೀಕ್ಷಿತ ಘಟನೆ ಹಾಲಯ್ಯನವರಿಗೆ ಮಾತೆಯನ್ನೇ ಕಳೆದುಕೊಂಡ ಹಸುಗೂಸಿನ ಪರಿಸ್ಥಿತಿಯನ್ನು ತಂದೊಡ್ಡಿತು. ತಾಯಿಯನ್ನು ಕಳೆದುಕೊಂಡ ಕರುವಿನಂತಾದ ಹಾಲಯ್ಯನವರಿಗೆ, ಕಾರ್ಗತ್ತಲೆ ಆವರಿಸಿದಂತಾಗಿ ದುಖಃದ ಮಡಲಿನಲ್ಲಿ ಕಾಲಕಳೆಯಬೇಕಾಯಿತು. ಆಂತರಿಕ ದುಖಃದಿಂದ ಹೊರಗೆ ಬರುವ ಒಂದೇ ಒಂದು ಹಾದಿಯು ಅನುಷ್ಠಾನ ಎಂದು ಅರಿತ ಹಾಲಯ್ಯನವರು  ಶಿವಧ್ಯಾನದ ಮೊರೆ ಹೋಗಬೇಕಾಯಿತು.ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸೊರಬ ಪ್ರದೇಶದಲ್ಲಿ ಅನುಷ್ಠಾ£ದಲ್ಲಿ ತಲ್ಲೀನಗೊಂಡರು.

ದೇವರು ಅಗೋಚರ ಆತನ ಸ್ಪರ್ಶ – ಸಂತೊಷ ಪಡೆಯುವುದಂತೂ ಅಸಾಧ್ಯವೇ ಸರಿ. ಆದರೆ ಆತನು ಅಗೋಚರವಾಗಿದ್ದರೂ ಆತನ ದೃಷ್ಠಿ ಆತನಲ್ಲಿಯೇ ಮುಳುಗಿದವರ ಮೇಲೆ ಬೀಳುವುದು. ಆತನ ಅಸ್ತಿತ್ವದಷ್ಟೇ ಸತ್ಯ ದೇವಭಾಷೆಯನ್ನು ಅರಿತು ಅರ್ಥಮಾಡಿಕೊಳ್ಳುವುದು ಅಸಾಧ್ಯ. ದೇವವಾಣಿ ದೈವೀ ಸೂತ್ರದ ಸಂಗೀತ ಸಂಕೇತಗಳ ಅಂತ್ಯ ಆಳವನ್ನು ಅರಿಯುವುದು ಅಸಾಧ್ಯ. ಮಾನವನ ಅಳತೆ ಪ್ರಮಾಣಗಳಿಗೆ ದೈವಿಶಕ್ತಿ ಸಿಗುವುದು ಅಸಾಧ್ಯವೇ ಸರಿ.

ಹಾನಗಲ್ಲ ಕುಮಾg ಶಿವಯೋಗಿ ಎಂದು ಹೆಸರು ಗಳಿಸಿದ ಹಾಲಯ್ಯನಿಗೂ ಹಾನಗಲ್ಲ ವಿರಕ್ತ ಮಠಕ್ಕೂ ಯಾವುದೇ ಅಗೋಚರ ಸಂಬಂಧವೊಂದು ಇರಲೇಬೇಕು ಹಾನಗಲ್ಲ ಕುಮಾರಸ್ವಾಮಿಗಳೆಂದರೆ ಎಂದೂ ಮುಳಗದ ಸೂರ್ಯನಿದ್ದಂತೆ ಅಮವಾಸ್ಯೆಯನ್ನೇ ಕಾಣದ ಚಂದ್ರನಿದ್ದಂತೆ, ಹಾನಗಲ್ಲ ವಿರಕ್ತಮಠ ಹಾಗೂ ಶ್ರೀ ಕುಮಾರ ಶಿವಯೋಗಿಗಳ ಹೆಸರುಗಳು ವೀರಶೈವ ಧರ್ಮದ  ದಿಗಂತದಲ್ಲಿ ಸೂರ್ಯಚಂದ್ರರಿರುವಷ್ಟು ಕಾಲ ಅಮರ.

ಪೂಜ್ಯ ಫಕೀರಸ್ವಾಮಿಗಳವರ ವಿಶ್ವಾಸ ಅನುಕಂಪಗಳನ್ನು ಹೊತ್ತ ಹಾಲಯ್ಯ ಕುಮಾರ ಸಮಯಾಂತರ್ಗತ ಹಾನಗಲ್ಲ ವಿರಕ್ತ ಪೀಠದ ಅಧಿಪತಿಯಾಗಿ ಕುಮಾರ ಶಿವಯೋಗಿ ಎಂಬ ನಾಮಾಂಕಿತವನ್ನು ಪಡೆದರು. ಹಣತೆ ಆಧಾರದಿಂದ ಜ್ಯೋತಿ ಬೆಳಗುವಂತೆ ಹಾನಗಲ್ಲ ಮಠವನ್ನು ಆಧಾರವನ್ನಾಗಿಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವÀಯೋಗಿಗಳು

ಶ್ರೀ ಕುಮಾರ ಶಿವಯೋಗಿಗಳು ,ಹಾನಗಲ್ಲ ಪೀಠದ ಅಧಿಕಾರವಹಿಸಿಕೊಂಡಾಗ ಸಮಾಜದ ತುಂಬೆಲ್ಲಾ ಮೇಲು ಕೀಳೆಂಬ ಕಚ್ಚಾಟಗಳು, ಅಧಿಕಾರ ಅಂತಸ್ತುಗಳಿಗಾಗಿ ಕಿತ್ತಾಟಗಳು, ಧರ್ಮದ  ಸಂಕುಚಿv ಭಾವನೆಗಳು  ಜನರ ನಿತ್ಯ ಬದುಕಿನಲ್ಲಿ ಕಾಡುತ್ತಿದ್ದವು. ಬ್ರಾಹ್ಮಣ – ವೀರಶೈವ ಲಿಂಗಾಯತರ ನಡುವಿನ ಬಿರುಕು ಎದ್ದು ಕಾಣುತ್ತಿತ್ತು. ವೀರಶೈವ – ಲಿಂಗಾಯತರಿಗೆ ಆಗಿದ್ದ ಸಂಸ್ಕøತ ಪಾಠಶಾಲೆಗಳಲ್ಲಿ ಪ್ರವೇಶವಿದ್ದಿಲ್ಲ. ಇದನ್ನು ಕಂಡರಿತ ಕುಮಾರಸ್ವಾಮಿಗಳು ಹಾನಗಲ್ಲಿನಲ್ಲಿ ಪ್ರಥಮ ಸಂಸ್ಕøತ ಪಾಠಶಾಲೆಯನ್ನು ತೆರೆದು ಜಾತಿ ಭೇಧವನ್ನು ಮಾಡದೇ ಸರ್ವ ಸಮಾಜದ ವಿಧ್ಯಾರ್ಥಿಗಳಿಗೆ  ಅಧ್ಯಯನ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದರು. ಊಟ ವಸತಿ ಪಾಠಶಾಲೆಗಳು ಪ್ರಾರಂಭವಾದವು.

ಸಮುಷ್ಠ್ಟಿ ಪ್ರಜ್ಞೆಯ ಶಕ್ತಿಯನ್ನು ಅರಿತ ಸಮಾಜ, ಅವರು ಕೊಟ್ಟ ಸ್ಫೂರ್ತಿ ಶಕ್ತಿಗೆ ಸ್ಪಂಧಿಸಿತು. ಸುತ್ತಮುತ್ತಲಿನ ಗ್ರಾಮಗಳಿಗೆಲ್ಲ ಸಂಚರಿಸಿ ಸಂಕಷ್ಟದಲ್ಲಿದ್ದವರಿಗೆಲ್ಲ ಸಹಾಯ ಹಸ್ತ ನೀಡಿ ಎಲ್ಲರಿಗೂ  ಕೂಡಿ ಜೀವಿಸುವ ಹೊಸ ವಿಧಾನವನ್ನು ಕಲಿಸಿದರು. ಜನರು ಪರಸ್ಪರರನ್ನು ಅರಿತು ಜೀವಿಸಬೇಕೆಂದು ಅವರ  ಮೊದಲ ಪಾಠವಾಗಿತ್ತು. ಮಾತೃಹೃದಯದ ಶ್ರೀ ಕುಮಾರ ಶಿವಯೋಗಿಗಳು ಕೇವಲ ಹಾನಗಲ್ಲ ಮಠದ ವ್ಯಾಪ್ತಿಯಲ್ಲಿಯೇ ಉಳಿಯದೇ ಭೂಮಿಗೆ ಬೆಳಕುಕೊಡುವ ಸೂರ್ಯನೋಪಾದಿಯಲ್ಲಿ ಸಮಗ್ರ ಸಮಾಜವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಗುರುತಿಸಿಕೊಂಡರು. ಆ ಭಾಗದಲ್ಲಿ ಬರ ಆವರಿಸಿದಾಗ ಸಾರ್ವಜನಿಕ ಪ್ರಸಾದ ನಿಲಯಗಳನ್ನು ವ್ಯವಸ್ಥಿತಗೊಳಿಸಿ ಸಮಗ್ರ ಸಮಾಜದ ಹಸಿವನ್ನು ನೀಗಿಸಿದ ಕೀರ್ತಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಸಲ್ಲುತ್ತದೆ.  

ಅಂದಿನ ಕಾಲಘಟ್ಟದಲ್ಲಿ ಆ ಭಾಗದ  ಜನತೆಗೆ ಗುರುಳೆ ರೋಗವೆಂಬ ವ್ಯಾಧಿ ಆವರಿಸಿದಾಗ ಶ್ರೀ ಕುಮಾರ ಶಿವಯೋಗಿಗಳು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ತ್ಯಾಗ ಮಹಿಮಾಪುರುಷರಾಗಿ ಮನೆಯಿಂದ ಮನೆಗೆ ಹೋಗಿ ಕೈ ಮುಟ್ಟಿ ಉಪಚರಿಸಿ ಅಂದಿನ ಜನರ ದುಃಖಗಳಲ್ಲಿ ಬೆರೆತು ಅವರಲ್ಲಿ ಒಂದಾದರು.

ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಪರಿಶುದ್ಧತೆಯೇ ಶ್ರೀ ಕುಮಾರ ಶಿವಯೋಗಿಗಳ ಮುಖ್ಯ ಉದ್ಧೇಶ. ಪುರುಷನಾಗಲಿ ಮಹಿಳೆಯಾಗಲಿ ವ್ಯಕ್ತಿಯ ಬಾಹ್ಯ ಸ್ವರೂಪಕ್ಕಾಗಲಿ ಜಾತಿಗಳಿಗಾಗಲಿ ಅವರು ಮಹತ್ವ ನೀಡಲಿಲ್ಲ ಬದಲಾಗಿ ಆತ್ಮದ ಅಸ್ತಿತ್ವಕ್ಕೆ ಬೆಲೆ ಕೊಟ್ಟರು, ದೇವರು ಸೃಷ್ಟಿಸಿದ ನಿಸರ್ಗದ ಪಂಚಮಹಾಭೂತಗಳಿಗೆ ಸಮಗ್ರ ಸೃಷ್ಟಿಗೆ ಹಾನಿಯಾಗದಂತೆ ಮಾನವ ತನ್ನ ಆಂತರಿಕ ಹಾಗೂ ಬಾಹ್ಯ ಜೀವನದಲ್ಲಿ ಶುಚಿತ್ವವನ್ನು ಅಳವಡಿಸಿ ಆಂತರ್‍ಬಾಹ್ಯ ಸಮತೋಲನೆಯೊಂದಿಗೆ ಮುನ್ನಡೆಯಬೇಕು. ಶ್ರೀ ಕುಮಾರ ಶಿವಯೋಗಿಗಳಿಗೆ ನಿಸರ್ಗದ ಮೇಲೆ ಬಹಳ ಪ್ರೀತಿ, ಸಮಾಜವೇ ಅವರ ಮನೆ ,ಸಂಸ್ಕøತಿ ಅವರ ಬದುಕು, ಸಮಾಜ ಸಂಸ್ಕøತಿಗಳ ಉನ್ನತಿಯೇ ಅವರ ಭಾಗ್ಯ ತಮ್ಮ ಸರ್ವ ಸುಧಾರಣೆಗಳನ್ನು ಮೂಲತಃ ಹಾನಗಲ್ಲ ಮಠದಿಂದಲೇ ಪ್ರಾರಂಭಿಸಿದರು.

ಅಂದಿನ ಕಾಲದ ಸಾಮಾಜಿಕ ಕ್ರಾಂತಿಗೆ ಸಂಬಂಧಪಟ್ಟಂತೆ ವೀರಶೈವ ಲಿಂಗಾಯತ ಧರ್ಮದ ಒಳಿತಿಗಾಗಿ ಚರ ಜಂಗಮರಾದ  ಬಾಗಲಕೋಟೆ ಮಲ್ಲಣಾರ್ಯರು ಕುಮಾರ ಶಿವಯೋಗಿಗಳಿಗೆ ಸಕಾಲಿಕವಾಗಿ ಎಚ್ಚರಿಸಿದ ಘಟನೆ ಸಮಗ್ರ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಇದೊಂದು ರೀತಿಯ ಆಧ್ಯಾತ್ಮಿಕ ಕ್ರಾಂತಿ ವ್ಯಕ್ತಿ ಮಟ್ಟದಿಂದ ಹಿಡಿದು ಸಮಗ್ರ ಸಮಾಜಕ್ಕೆ ಇದರ ಪರಿಣಾಮವಾಯಿತು  ಕುಮಾg ಶಿವಯೋಗಿಗಳ ಪವಿತ್ರವಾದ ಸ್ವಪ್ರಜ್ಞೆಯಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟವರು. ಮಲ್ಲಣಾರ್ಯರ ಬಯಕೆಯನ್ನು ತಮ್ಮ ಕರ್ತವ್ಯವೆಂದು ತಿಳಿದು ತಮ್ಮ ಆಯುಷ್ಯವನ್ನೆಲ್ಲಾ ಧರ್ಮ ಜಾಗೃತಿ ಸಮಾಜ ಸುಧಾರಣೆಗೋಸ್ಕರ ವ್ಯಯಮಾಡಿದರು.

ನಾಡಿನುದ್ದಗಲಕ್ಕೂ ಕಾಲುನಡಿಗೆಯಿಂದ ಸಂಚರಿಸಿ ಸರ್ವ ಸಮಾಜದ ಮುಖಂಡರನ್ನು ಸಂಧಿಸಿ ಅವರೊಡನೆ ಚಿಂತನ-ಮಂಥನ ಮಾಡಿ ಹೌದು ಅಲ್ಲಗಳನ್ನು ವಿಶ್ಲೇಷಿಸಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಸದಾವಕಾಲ ಶ್ರಮಿಸಿದವರು. ಈ ನಿಟ್ಟಿನಲ್ಲಿ ಮೊದಲ ವೀರಶೈವ ಸಮ್ಮೇಳನವು ನವಲಗುಂದ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಜಾಯಪ್ಪ ಸರ್ ದೇಸಾಯಿ ಇವರ ಅಧ್ಯಕ್ಷತೆಯಲ್ಲಿ 1904 ಮೇ ತಿಂಗಳು 13,14 ಮತ್ತು 15,ರಂದು ಧಾರವಾಡದ ದರ್ಬಾರ ಹಾಲ್ ಈಗಿನ ಲಿಂಗಾಯತ ಟೌನ್ ಹಾಲ್  ದಲ್ಲಿ ವ್ಯವಸ್ಥೆಗೊಳಿಸಿದರು. ಸಮಾಜದ ಸರ್ವ ಸ್ತರಗಳ ಜನತೆ ಇಲ್ಲಿ ಸೇರಿ ಬದುಕಿನ ಸರ್ವ ಮುಖಗಳಿಗೂ ಗಮನ ಹರಿಸಿತು. ಸಮಾಜದ  ಬಡವ ಬಲ್ಲಿದರೆಂಬ ಕಂದಕವನ್ನು ಕಿತ್ತೊಗೆದು , ಶ್ರೀಮಂತರ ಮನೋಧರ್ಮದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಪ್ರಯತ್ನಿಸಿ ಸಫಲರಾದವರು ಶ್ರೀ ಕುಮಾರ ಶಿವಯೋಗಿಗಳು.

ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವÀಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.

ಶ್ರೀ ಕುಮಾರ ಶಿವಯೋಗಿಗಳು  ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು. ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ  ನಾಡಿನ ತುಂಬೆಲ್ಲ  ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.

ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದÀ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.

ಶಿವಯೋಗಮಂದಿರವನ್ನು ಸ್ಥಾಪಿಸುವ ಹಂತzಲ್ಲಿಯಾಗಲಿ ಹಾಗೂ ತದನಂತರ ಅದರ ಅಭೀವೃದ್ಧಿಗಳಿಗೆ ಚಿತ್ತರಗಿ-ಇಲಕಲ್ ಮಹಾಂತಸ್ವಾಮಿಗಳ ಮಾರ್ಗದರ್ಶನ, ಸಹಕಾರ ಪಡೆದರು, ಶ್ರೀ ವಿಜಯಮಹಾಂತ ಶಿªಯೋಗಿ ಹಾಗೂ ಅವರ ಸದ್ಭಕ್ತರೊಂದಿಗೆ ಶಿವಯೋಗಮಂದಿರದ ಸ್ಥಳದ ಆಯ್ಕೆಯ ಪ್ರಯತ್ನ ಒಂದು ಇತಿಹಾಸವಾಗಿ ಹೋಯಿತು.

ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು  ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ   ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ  ಮಾತೃ ಪ್ರೇಮವನ್ನು ತೋರಿಸಿದವರು.  ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ.  ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ  ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.

              ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ  ಇವೆಲ್ಲವೂ  ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು  ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು  ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ  ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.

              ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು.   ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .

              ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು.  ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.

              ಮಹಾರಾಷ್ಟ್ರದ ಪರಳಿ ವೈಜನಾಥದೇವಾಲಯದಲ್ಲಿ ವೀರಶೈವರಿಗೂ ಪೂಜೆ ಸಲ್ಲಿಸಲು ಹಕ್ಕಿದೆ ಎಂದು ನ್ಯಾಯಾಲಯದಲ್ಲಿ ನಿರಂತರವಾಗಿ ಹೋರಾಡಿ ಗೆದ್ದು ನಿಯಮ ಜಾರಿಗೆ ತಂದದ್ದು, ವೀರಶೈವ ಸಮಾಜಕ್ಕೆ ಶ್ರೀ ಕುಮಾರ ಶಿವಯೋಗಿಗಳು  ನೀಡಿದ ಗಮನಾರ್ಹ ಕೊಡುಗೆ.

              ತಮ್ಮ ಆರೋಗ್ಯ,  ಜೀವನದ ಸುಖಗಳನ್ನೆಲ್ಲ ತ್ಯಾಗಮಾಡಿ, ಹಗಲು ರಾತ್ರಿಯನ್ನದೆ, ಶ್ರೀ ಕುಮಾರ ಶಿವಯೋಗಿಗಳು ಶ್ರಮಿಸಿದರು, ಕಾಯಕ ನಿಷ್ಠೆಯಲ್ಲಿ ತೊಡಗಿ ಪ್ರಸಾದ ಪೂಜೆಗಳನ್ನು ಮರೆತ ಶ್ರೀ ಕುಮಾರ ಶಿವಯೋಗಿಗಳು , ಫೆಬ್ರುವರಿ 19,1930 ಬುಧವಾರ ಕುಮಾg ಶಿವಯೋಗಿಗಳಿಗೆ ವಿಪರೀತ ಜ್ವರಬಾಧೆಯುಂಟಾಗಿ ಕ್ಷಣಮಾತ್ರದಲ್ಲಿ ಅಪಾಯ  ತಂದೊಡ್ಡಿತು. ಶ್ರೀ ಕುಮಾರ ಶಿವಯೋಗಿಗಳು ಲಿಂಗದೊಳಗೆ ಬೆರೆಯುವ ಸ್ವ ಇಚ್ಛೆಯನ್ನು ಪ್ರಕಟಿಸಿ ವಟು ಸಾಧಕರು ದೇಶಿಕರನ್ನೊಳಗೊಂಡು ಸರ್ವರನ್ನು ಸರ್ವ ಸಮಾಜದವರನ್ನು ದುಃಖತಪ್ತರನ್ನಾಗಿ ಮಾಡಿದರು .ಅನಂತತೆಯಲ್ಲಿ ಬೆರೆಯುವುದು ತಮ್ಮ ಸ್ವ ಇಚ್ಛೆಯಾಗಿದೆ ಎಂದು ದೃಢಪಡಿಸಿ  ಅಂದು ಸಾಯಂಕಾಲ  3 ಘಂಟೆಗೆ  ದೇಶಿಕರನ್ನು, ಸಾಧಕರನ್ನು, ವಟುಗಳನ್ನು, ಶಿವಯೋಗ ಮಂದಿರದ ವಿವಿಧ ಶಾಖೆಗಳಲ್ಲಿ ಕಾಯಕ ಮಾಡುವವರನ್ನು, ಗೋ ರಕ್ಷಕರನ್ನು ,ಪ್ರಸಾದ, ವಿಭೂತಿ, ವ್ಯವಸ್ಥಾಪಕರನ್ನು ಕರೆದು ಕುಮಾರಯೋಗಿಗಳು ಹೇಳಿದ ಮಾತುಗಳು ಕರುಣಾ ಸಾಗರದಲ್ಲಿ ಹರಿಯುವ ಮುತ್ತುಗಳಾಗಿ ಪರಿಣಮಿಸಿದವು.

“ಓ, ನನ್ನ ನಿರಂಜನ ದೇಶಿಕರೇ, ನೀವೆಲ್ಲಾ ನನ್ನ ಪೋಷಕರು  ನಿಮ್ಮ ಬಾಹ್ಯ ತಪ್ಪುಗಳಿಗೆ ನೀವೇ ಕಾರಣರು .ನಿಮ್ಮ ಅಂತರಂಗದ ತಪ್ಪುಗಳಿಗೆ ನಾನು ಕಾರಣ” ಎಂಬ ನುಡಿಮುತ್ತುಗಳನ್ನು ಉಸುರಿ ಸಮಾಜ , ಸಮಾಜ , ನನ್ನ ಸಮಾಜವೆಂದು ನುಡಿದು ಸಮಾಜ ಸೇವೆಗಾಗಿ ಹುಟ್ಟಿ ಬರುವೆನೆಂದು ಭರವಸೆ ಕೊಟ್ಟು ಕೊನೆಯುಸಿರೆಳೆದರು.

ದೃಢ ಸಂಕಲ್ಪದಿಂದ ಕೊನೆಯುಸಿರೆಳೆದರು. ಸಮಾಜ ಸೇವೆಗೆ ಮರಳಿ ಹುಟ್ಟಿ ಬರುವೆನೆಂದು ನುಡಿದ ಮಾತುಗಳು ದೈವಿ ಸಂಕಲ್ಪ ಸಾಧನೆಯ ಕುರುಹು. ಶ್ರೀ ಕುಮಾರ ಶಿವಯೋಗಿಗಳ ದೇಹ ಕಣ್ಣಿಗೆ ಕಾಣದಿದ್ದರೂ ಅಂದಿಗೂ ಇಂದಿಗೂ ಮುಂದೆಂದಿಗೂ ಅವರು ಕೊಟ್ಟ ಸ್ಪೂರ್ತಿ ಸಮಾಜಕ್ಕೆ ಅವರು ದಯಪಾಲಿಸಿದ ಅಮರವಾಣಿ ಶಾಶ್ವತವಾಗಿ ಉಳಿಯುತ್ತದೆ.

ಶ್ರೀ ಕುಮಾರ ಶಿವಯೋಗಿಗಳು ಧರ್ಮದ ಹಾದಿಯಲ್ಲಿ ತಮ್ಮದೇ ಆದ ವಿಶಿಷ್ಟ ಮಾರ್ಗ ತುಳಿದವರು . ಅವರು  ದೈವಿಪುರುಷರಾಗಿ   ಶಿವನಲ್ಲಿ ಬೆರೆತು ಶಿವ ಶಕ್ತಿಯಾಗಿ ಶಿವಯೋಗಮಂದಿರದಲ್ಲಿ ವಾಸವಾಗಿದ್ದಾರೆ.

ನೀರು ಹರಿಯುತ್ತದೆ, ತನ್ನ ಸ್ವಾರ್ಥಕ್ಕಾಗಿ ಅಲ್ಲ .ಸರ್ವರ ತೃಷೆಯನ್ನು  ಹಿಂಗಿಸುವುದಕ್ಕಾಗಿ ಅದು ಗಿಡ ಮರಗಳನ್ನು ರಕ್ಷಿಸುತ್ತದೆ. ಜೀವಿಗಳಿಗೆ ಪ್ರಾಣಿಗಳಿಗೆ ಜೀವ ತುಂಬುತ್ತದೆ. ಹೂ ಅರಳಿಸುತ್ತದೆ. ಹಣ್ಣುಗಳಿಗೆ ಮಧುರತೆಯನ್ನು ತರುತ್ತದೆ,  ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಹೀಗೆಯೇ ಜೀವಿಸಿದರು.

 ಸತ್ಯಂ,ಶಿವಂ, ಸುಂದರಮ್,