ಸದ್ಧರ್ಮದ ಮಾಣಿಕ್ಯ, ಕುಮಾರೇಶ

ರಚನೆ: ಗುರು ಪಾದ ಸೇವಕ

ಶ್ರೀ ರೇವಣಸಿದ್ದಯ್ಯ ಹಿರೇಮಠ

ಆಕಾಶವಾಣಿ ಕಲಾವಿದರು ಚಿಂಚೋಳಿ

ಕಲಿಯುಗದಿ ಸತ್ಯ ಸಾರಿದ ಕಾರಣಿಕ ಶಿವಯೋಗಿ |

ಕಾವಿ ಲಾಂಛನಕ್ಕೆ ಬೆಲೆ ತಂದ ಸಮರ್ಥ ಗುರುವಾಗಿ |

ಅರಿವು ಆಚಾರ ಶುಚಿಯಾಗಿಸಿದ ಸಮಾಜ ಜಾಗ್ರತೆಗಾಗಿ |

ವಿಶ್ವಮಾನ್ಯ ವ್ಯಕ್ತಿತ್ವದ ವೀರಶೈವ ಧರ್ಮದ ನಿಜಯೋಗಿ ||||

ಭರತ ಖಂಡದಲ್ಲಿ ಅಧ್ಯಾತ್ಮ ನಕ್ಷತ್ರದ ಜೊತಿಯಾಗಿ|

ಆಧ್ಯಾತ್ಮಿಕ ಸಿರಿಯಲ್ಲಿ ವಿಶ್ವದೆತ್ತರಕ್ಕೆ ತಾ ಬೆಳಗಿ|

ಘನವಂತ ಗುಣವಂತ ದಯಾವಂತ ಸ್ವಾಮಿಯಾಗಿ|

ಜನ ಮನ ಕೊಟಿಯ ಸತ್ಯಯುಗದ ಶ್ರೇಷ್ಠಯೋಗಿ ||||

ಜಗದ ಲೇಸನೆ ಬಯಸಿದ ವಿರಾಟ್ಟುರದ ಯತಿಯಾಗಿ |

ಬರದ ಭವಣೆ ನೀಗುವರೆಗೆ ಲೋಟ ಗಂಜಿ ಕುಡಿದ ಹಠಯೋಗಿ |

ಪೂರ್ಣ ಬ್ರಹ್ಮ ನಿರಾಕಾರ ಮೂರ್ತಿ ಲಿಂಗವೆಂದರುಹಿದ ಲಿಂಗಾಗಿ |

ವೀರಶೈವ ವಿಶ್ವಧರ್ಮವೆಂಬ ಸತ್ಯ ಸಾರಿದ ಕುಮಾರ ಶಿವಯೋಗಿ ||||

ಧರ್ಮತತ್ವ ಭೋಧೆಗೈವ ಧರ್ಮಸಭೆ ರಚಿಸಿದ ಶಿವಯೋಗಿ |

ವೀರ ವೈರಾಗ್ಯದ ಅಪರಂಜಿ ರನ್ನ ಜೊತಿ ನಿಜ ವಿರಕ್ತನಾಗಿ |

ಗುರುವಿರಕ್ತರ ಹೃದಯದಿ ಬೆಳಗುತ್ತಿದೆ ನಿರಂಜನ ನಂದಾದೀಪವಾಗಿ |

ಕರ ಮುಗಿದು ಬರೆದನು ಪುಟ್ಟ ರಸಿಕನು ಮಂದಿರದ ಶಿಶುವಾಗಿ ||||

Related Posts