ಸಮಾಜೋ – ಧಾರ್ಮಿಕ ಸೂರ್ಯ ಪೂಜ್ಯಶ್ರೀ ಮೃತ್ಯುಂಜಯ ಅಪ್ಪಗಳು

ಲೇಖಕರು :ಡಾ . ಬಿ . ಆರ್ . ಹಿರೇಮಠ

(ಸುಕುಮಾರ : ಅಗಸ್ಟ ೨೦೦೨)

ಕರ್ನಾಟಕದ ವೀರಶೈವ ಮಠಗಳು ನಾಡಿಗೆ ಸಲ್ಲಿಸಿದ ಸೇವೆ . ಮಾಡಿದ ಸಾಧನೆಗಳು ಅನುಪಮವಾದವುಗಳಾಗಿರುತ್ತವೆ . ಮಠ ಮತ್ತು ಸಮಾಜಗಳಲ್ಲಿ ಲಿಂಗಾಂಗ ಸಾಮರಸ್ಯ’ದಂಥ ಅನ್ಯೋನ್ಯತೆ ಇದೆ . ಇಂಥ ವೀರಶೈವ ಮಠಗಳ ಭವ್ಯ ಹಾಗೂ ಪುಣ್ಯ ಪರಂಪರೆಯ ಸಾಕಾರ ರೂಪವೇ ಧಾರವಾಡದ ಶ್ರೀಮುರುಘಾಮಠ . ಇದು ಧಾರ್ಮಿಕ ವಿಶ್ವವಿದ್ಯಾಲಯದಂತಿದೆ .

 ಧಾರವಾಡದ ಶ್ರೀಮುರುಘಾಮಠವು ‘ ‘ ಅಪ್ಪ’ಗಳ ಪರಂಪರೆಯನ್ನು ನಾಡಿಗೆ ನೀಡಿರುವುದು ಒಂದು ಪುಣ್ಯವಿಶೇಷ . ಶ್ರೀಮಠದ ಪರಂಜ್ಯೋತಿ , ಪುಣ್ಯ ಮೂರುತಿ , ಪರಮಪೂಜ್ಯ ಮೃತ್ಯುಂಜಯ ಅಪ್ಪಗಳು ತಮ್ಮ ಸಮಾಜೋ – ಧಾರ್ಮಿಕ ಕಾವ್ಯಗಳ ಮೂಲಕ ನಾಡಿನಲ್ಲಿ ನವಜಾಗೃತಿಯನ್ನು ಉಂಟು ಮಾಡಿದ್ದಾರೆ . ತಮ್ಮ ಮಹಾಚೈತನ್ಯ ಹಾಗೂ ಪವಿತ್ರ ಸಂಕಲ್ಪಗಳ ಮೂಲಕ ಮೃತ್ಯುಂಜಯ ಅಪ್ಪಗಳು ನಾಡಿನ ಜನರ ಜೀವನ ಪಾವನವಾಗುವಂತೆ , ಸಮಾಜ ಸಂವರ್ಧನಗೊಳ್ಳುವಂತೆ ಮಾಡಿದ್ದಾರೆ . ಅಪ್ಪಗಳು ಧರ್ಮದ ಮೇರುವಾಗಿ , ಸಮಾಜ ಸೂರ್ಯರಾಗಿ , ಭಕ್ತರ ಕಲ್ಪವೃಕ್ಷವಾಗಿ ಅಮೃತಮಯ ಕಾರ್ಯ ಮಾಡಿದ್ದಾರೆ . ಅವರ ನಡೆ ಪರುಷ , ನುಡಿ ಪರುಷ . ಪೂಜ್ಯರು ಪುಣ್ಯದಂತೆ ಬಂದು , ಜ್ಞಾನದಂತೆ ಇದ್ದು , ಮುಕ್ತಿಯಂತೆ ಹೋದರು . ಮೃತ್ಯುಂಜಯ ಅಪ್ಪಗಳು ವೀರಶೈವ ಧರ್ಮಕ್ಕೆ ಧರ್ಮವಾಗಿ , ದರ್ಶನಕ್ಕೆ ದರ್ಶನವಾಗಿ , ತತ್ವಕ್ಕೆ ತತ್ವವಾಗಿದ್ದರು . ಅವರದು ‘ ಲಿಂಗಲೀಲೆ ‘ . ಪ್ರಸಾದಕಾಯರಾಗಿದ್ದ ಅವರದು ಲಿಂಗ ನುಡಿ , ಲಿಂಗ ನಡೆ . ಅವರು ಮನದೆರೆದು ಮಾತನಾಡಿದರೆ ಲಿಂಗದರುಶನ ಆಗುತ್ತಿದ್ದಿತು . ಇಂಥ ಮಹಾಬೆಳಗು ಅವರಾಗಿದ್ದರು . ಈ ಮಹಾಬೆಳಗಿನಲ್ಲಿ ಲೋಕದ ಜನರ ಜೀವನ ಪಾವನವಾಯಿತು .

ಪೂಜ್ಯಅಪ್ಪಗಳು , ವೀರಶೈವ ಮಠಗಳು ಸಮಾಜಪರ , ಜನಪರವಾಗುವಂತೆಯೂ ಮಠಾಧೀಶರು ಆತ್ಮಕಲ್ಯಾಣದಲ್ಲಿ ಮಾತ್ರ ನಿರತರಾಗಿರದೆ ಲೋಕಕಲ್ಯಾಣ ಕಾವ್ಯದಲ್ಲಿ ತೊಡಗಿಕೊಳ್ಳುವಂತೆಯೂ ಪ್ರೇರೇಪಿಸಿದರು . ಅವರ ಅಂದಿನ ಆ ಪ್ರೇರಣೆಯ ಪುಣ್ಯದ ಫಲವೇ ಇಂದಿನ ವೀರಶೈವ ಮಠಗಳು .

 ಪರಮಪೂಜ್ಯ ಮೃತ್ಯುಂಜಯ ಅಪ್ಪಗಳು ಶ್ರೀಮುರುಘಾಮಠದ ಕಾರುಣ್ಯ ಮೂರುತಿಗಳಾಗಿದ್ದರು . ಪೂಜ್ಯರು ಶ್ರೀಮಠದ ಅಧಿಪತಿಗಳಾಗಿ , ವೈರಾಗ್ಯನಿಧಿಯಾಗಿ , ಮಾನವತೆಯ ಆರಾಧಕರಾಗಿ , ಸಮಾಜೋದ್ದಾರಕರಾಗಿ , ಮಾನವ ಧರ್ಮದ ಪ್ರತಿ ಪಾದಕರಾಗಿ , ಸಾಹಿತ್ಯ – ಸಂಸ್ಕೃತಿಗಳ ಸಂರಕ್ಷಕರಾಗಿ , ಮಾನವೀಯ ಮೌಲ್ಯಗಳ ಪ್ರಸಾರಕರಾಗಿ ಮಾಡಿದ ಕಾರ್ಯ ಅನನ್ಯ ಹಾಗೂ ಅನುಪಮವಾದುದಾಗಿದೆ .

 ಪೂಜ್ಯರದು ಸ್ವಭಾವ ವೈರಾಗ್ಯ , ಸಹಜ ವೈರಾಗ್ಯ . ಇಂಥ ಸ್ವಭಾವ ವೈರಾಗ್ಯದ ಮಠಾಧೀಶರನ್ನು ಪಡೆಯುವುದು ಸಮಾಜದ ಸೌಭಾಗ್ಯ . ಇದು ನಾಡಿನ ಜನರ ಅನಂತ ಕಾಲದ ಪುಣ್ಯದ ಫಲ . ಸಹಜ ವೈರಾಗ್ಯ ಅಷ್ಟು ಸರಳವಾದುದಲ್ಲ . ಅದು ದಿವ್ಯ ತಪಸ್ಸು , ಜೀವನವ್ರತ , ಶ್ರೀಗಳ ಗುರುಸೇವೆ , ಲಿಂಗ ಪೂಜೆ , ಜಂಗಮ ದಾಸೋಹಗಳು ಆದಿ ಸ್ಮರಣೀಯವಾದವುಗಳಾಗಿರುತ್ತವೆ . ಮೃತ್ಯುಂಜಯ ಅಪ್ಪಗಳು ಸಕಲರಿಗೂ ಸಕಲಕ್ಕೂ ಒಳ್ಳೆಯದನ್ನೇ ಮಾಡಿದವರು . ಒಳ್ಳೆಯದನ್ನೇ ಬಯಸಿದವರು . ಯಾರಿಗೂ ಯಾವುದಕ್ಕೂ ಎಂದೂ ಕೆಟ್ಟದ್ದನ್ನು ಬಯಸಿದವರಲ್ಲ , ಕೆಟ್ಟದ್ದನ್ನು ಮಾಡಿದವರಲ್ಲ . ಪ್ರತಿಯೊಂದು ವಸ್ತು – ವ್ಯಕ್ತಿಯಲ್ಲಿಯೂ ` ಶಿವಸ್ವರೂಪ’ವನ್ನು ಕಂಡವರು . ಅಂಗಕ್ರಿಯೆಗಳನ್ನು ಲಿಂಗಕ್ರಿಯೆಗಳನ್ನಾಗಿಸಿಕೊಂಡಿದ್ದ ಅವರಿಗೆ ಬಡವ ಶ್ರೀಮಂತ , ಅಧಿಕಾರಿ -ಸೇವಕ , ದೊಡ್ಡವ – ಸಣ್ಣವ ಎಂಬ ವರ್ಗಭೇದವಾಗಲೀ , ಮೇಲುವರ್ಗ – ಕೆಳವರ್ಗ , ಶ್ರೇಷ್ಠ ಕನಿಷ್ಠ ಎಂಬ ವರ್ಣಭೇದವಾಗಲೀ , ಪುರುಷರು ಸ್ತ್ರೀಯರು , ಹಿರಿಯರು – ಕಿರಿಯರು ಲಿಂಗಭೇದವಾಗಲೀ ಇರಲಿಲ್ಲ . ಮಠಾಧೀಶರಿಗೆ ಇಂಥ ಸಾಮಾಜಿಕ ಸೂತಕಗಳಿರಬಾರದೆಂದು ಹೇಳುತ್ತಿದ್ದರು . ವ್ಯಕ್ತಿ ನಿರ್ಮಾಣ , ಸಮಾಜ ನಿರ್ಮಾಣಗಳು ಶ್ರೀಮಠಗಳ ಪರಮ ಕರ್ತವ್ಯವಾಗಿರಬೇಕೆಂದು ಬಲವಾಗಿ ಪ್ರತಿಪಾದಿಸುತ್ತಿದ್ದರು .

 ಕೇವಲ ಅಧಿಕಾರ- ಅಂತಸ್ತುಗಳು ದೊಡ್ಡವಿದ್ದರೆ ಸಾಲದು , ಭಾವ ಮನಸ್ಸುಗಳೂ ದೊಡ್ಡವಾಗಿರಬೇಕು . ಶ್ರೀಮಂತಿಕೆ , ಅಧಿಕಾರ , ಅಂತಸ್ತು , ಹುದ್ದೆ , ವೃತ್ತಿಗಳಲ್ಲಿ ಯಾವಾಗಲೂ ‘ ಶುಚಿತ್ವ ‘ ವಿರಬೇಕು . ಪ್ರೀತಿ , ವಾತ್ಸಲ್ಯ , ಅನುಕಂಪ , ಅಂತಃಕರಣ ಮೊದಲಾದ ಮಾನವೀಯ ಗುಣಗಳನ್ನು ಆರಾಧಿಸಬೇಕು . ಮನುಷ್ಯ ಪ್ರೀತಿ , ಸಮಾಜ ಪ್ರೀತಿಗಳನ್ನು ಬೆಳೆಸಿಕೊಳ್ಳಬೇಕು . ವ್ಯಕ್ತಿ ದ್ವೀಪವಾಗಿ ಬಾಳಬಾರದು , ದೀಪವಾಗಿ ಬೆಳಗಬೇಕೆಂದು ಪೂಜ್ಯ ಅಪ್ಪಗಳು ಗಟ್ಟಿಯಾಗಿ ಹೇಳುತ್ತಿದ್ದರು . ಅವರ ಅಂದಿನ ಈ ಅಮೃತನುಡಿಗಳು ಇಂದಿನ ಸಮಾಜಕ್ಕೆ ಸಂಜೀವಿನಿಯಂತಿವೆ . ಅಪ್ಪಗಳ ಈ ನುಡಿಗಳು ಇಂದು ಹೆಚ್ಚು ಪ್ರಸ್ತುತವಾಗಿದ್ದು , ವ್ಯಕ್ತಿಯ ಶುದ್ಧೀಕರಣ ಹಾಗೂ ಎಂದೂ ಸಮಾಜದ ಶುದ್ಧೀಕರಣ ಕ್ಕೆ ಅವಶ್ಯಕವಾದವುಗಳಾಗಿರುತ್ತವೆ .

ಬೇಕೆಂಬುದು ಕಾಯಗುಣ , ಬೇಡೆಂಬುದು ವೈರಾಗ್ಯ , ಆಶೆ ಇಲ್ಲದುದೆ ವೈರಾಗ್ಯ , ತನ್ನ ಅರಿದವಂಗೆ ಇದಿರೆಂಬುದಿಲ್ಲ , ದಯವೇ ಧರ್ಮದ ಮೂಲ . ನಾನು ಮಾಡಿದೆನು ಎನ್ನದಿರು – ಈ ಮೊದಲಾದ ವಚನೋಕ್ತಿಗಳಿಗೆ ಪೂಜ್ಯರು ಉಜ್ವಲ ದೃಷ್ಟಾಂತ ಎನಿಸಿದ್ದರು .

ಅವರು ತಮಗಾಗಿಯಾಗಲೀ , ಶ್ರೀಮಠಕ್ಕಾಗಿಯಾಗಲೀ ಜನರಿಂದ ಕಾಡಿಸಿ ಪೀಡಿಸಿ ಪಡೆದವರಲ್ಲ . ಯಾವುದೇ ಸ್ವಾರ್ಥಕ್ಕಾಗಿಯಾಗಲೀ , ಆಶೆ – ಆಮಿಷಗಳಿಂದಾಗಲೀ ಯಾವ ವಸ್ತುವನ್ನೂ ಅವರು ತೆಗೆದುಕೊಂಡವರಲ್ಲ . ಅಗ್ಗದ ಪ್ರಚಾರ , ಕೀರ್ತಿ ಪ್ರಕೀರ್ತನೆ , ಪ್ರಸಿದ್ಧಿ -ಪ್ರಲೋಭನೆ – ಪ್ರಶಸ್ತಿಗಳಿಗಾಗಿ ಅವರು ಹಾತೊರೆದವರಲ್ಲ . ಅವೆಲ್ಲವುಗಳನ್ನು ಮೀರಿನಿಂತ ವೀರ ವಿರಾಗಿಗಳು ಅವರಾಗಿದ್ದರು .

ಪೂಜ್ಯರು ಆಚಾರದ , ಅರಿವಿನ ಅನರ್ಘ್ಯರತ್ನವೆನಿಸಿದ್ದರು . ತಮ್ಮ ಆಚಾರಶೀಲತೆಯಿಂದ ಶ್ರೀಮಠದ ವಿದ್ಯಾರ್ಥಿಗಳನ್ನು , ಶ್ರೀಮಠದ ಪರಮ ಭಕ್ತರನ್ನು “ ಆಚಾರವಂತರನ್ನಾಗಿ ರೂಪಗೊಳಿಸಿದ ಶ್ರೇಯಸ್ಸಿಗೆ ಪಾತ್ರರಾದರು . ಜನರು ಕೇವಲ ವಿಚಾರವಂತರಾದರೆ ಸಾಲದು , ಅವರು ಆಚಾರವಂತರೂ ಆಗಿರಬೇಕೆಂದು ಪೂಜ್ಯರು ಮೇಲಿಂದ ಮೇಲೆ ಹೇಳುತ್ತಿದ್ದರು . ಅವರು ಆಚಾರವಂತ ಜನರನ್ನು , ಆಚಾರವಂತ ಮಠಾಧಿಪತಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು . ಸದಾಚಾರವಿಲ್ಲದ ವಿರಕ್ತರು , ಮಠಾಧೀಶರು ಸಮಾಜವನ್ನು ಎಂದೂ ತಿದ್ದಲಾರರು . ಇಂಥವರಿಂದ ಮಠಗಳು ಬೆಳೆಯುವುದಿಲ್ಲ ; ಲೋಕ ಕಲ್ಯಾಣ , ವ್ಯಕ್ತಿ ಕಲ್ಯಾಣ ಕಾರ್ಯಗಳು ನೆರವೇರಲಾರವೆಂದು ಅಪ್ಪಗಳು ಪದೇಪದೇ ನುಡಿಯುತ್ತಿದ್ದರು . ಅವರ ಈ ದಾರ್ಶನಿಕ ನುಡಿಗಳನ್ನು ಇಂದಿನ ಸಮಾಜ ಮತ್ತು ಮಠಾಧೀಶರು ಗಮನಿಸುವುದು ಅವಶ್ಯವಿದೆ . ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳದು ಆಚಾರ – ವಿಚಾರಗಳ ಸಂಗಮ ವ್ಯಕ್ತಿತ್ವ : ಜ್ಞಾನ – ಕ್ರಿಯೆಗಳ ಸಾಮರಸ್ಯದ ಮಹಾಚೈತನ್ಯ .

ಹೀಗೆ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಸಮಾಜಪ್ರೀತಿ , ಮನುಷ್ಯ ಪ್ರೀತಿ , ಸದಾಚಾರ , ಸಹಜತೆ , ಸರಳತೆ , ಧರ್ಮನಿಷ್ಠೆ , ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ದಿವ್ಯಮೂರುತಿಯೆನಿಸಿದ್ದರು . ಪೂಜ್ಯ ಅಪ್ಪಗಳು ವೈರಾಗ್ಯಕ್ಕೆ , ವಿರಕ್ತತ್ವಕ್ಕೆ , ಮಠಾಧೀಶ ಪದಕ್ಕೆ ವಿಶೇಷ ಅರ್ಥ ತುಂಬಿದರು . ಪೂಜ್ಯರು ತಮ್ಮ ವ್ಯಕ್ತಿತ್ವದ ಮೂಲಕ ವಿರಾಗಿಗಳಿಗೆ , ವಿರಕ್ತರಿಗೆ , ಮಠಾಧೀಶರಿಗೆ , ವೀರಶೈವ ಮಠಗಳಿಗೆ ಹೆಚ್ಚಿನ ಬೆಲೆ ತಂದು ಕೊಟ್ಟಿದ್ದಾರೆ .

ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಟಾಪಿಸಿದುದು ಮಹತ್ತರ ಪುಣ್ಯಮಯ ಕಾರ್ಯವೆನಿಸಿದೆ . ಪರಮ ಪೂಜ್ಯ ಮಹಾಂತ ಅಪ್ಪಗಳನ್ನು ರೂಪಿಸಿ , ಶ್ರೀಮಠಕ್ಕೆ ಧಾರೆಯೆರೆದುದು ಇನ್ನೊಂದು ಅವಿಸ್ಮರಣೀಯ ಸಾಧನೆಯೆನಿಸಿದೆ , ಈ ಉಭಯ ಶ್ರೀಗಳ ಭವ್ಯ ಪರಂಪರೆಯಲ್ಲಿ ಶ್ರೀಮ.ನಿ.ಪ್ರ . ಶಿವಯೋಗೀಶ್ವರ ಮಹಾಸ್ವಾಮಿಗಳು ಮುನ್ನಡೆದಿದ್ದಾರೆ . ಮಹಾಚೈತನ್ಯ ಸ್ವರೂಪಿಗಳೂ ಸಾಹಿತ್ಯ – ಸಮಾಜ – ಸಂಸ್ಕೃತಿಯ ಪರಮ ಆರಾಧಕರೂ ಆಗಿದ್ದ ಪರಮಪೂಜ್ಯ ಮೃತ್ಯುಂಜಯ ಅಪ್ಪಗಳನ್ನು ನೆನೆವುದೇ ಹರುಷ , ಪರುಷ , ಗತಿ , ಮತಿ , ತಪ , ಜಪ , ಸತ್ಯ , ನಿತ್ಯ ,

Related Posts