ಸಂಪಾದಕೀಯ :ಪಥಿಕನ ಟಿಪ್ಪಣೆಗಳು

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

ನೋವು-ಸಂತಸ ಗಳ ಮಿಶ್ರವಾಗಿದ್ದ ೨೦೨೧ ಕ್ಕೆ ವಿದಾಯ ವನ್ನೀಯುತ್ತ ೨೦೨೨ ವರ್ಷವನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳುವ ಪರ್ವದಲ್ಲಿ

ಮೂವರು ಮಹಾನ್‌ ಶಿವಯೋಗಿಗಳ  ಪವಿತ್ರ ಸ್ಮರಣೆ ಮಾಡುವ ಪುಣ್ಯ ಯೋಗ “ಸುಕುಮಾರ” ಕ್ಕೆ ಸಿಕ್ಕಿರುವುದು  ಒಂದು ಸುಯೋಗ.

ಶಿವಯೋಗಿಗಳು ಶಿವನಲ್ಲಿ ಒಂದಾಗಿ ಶಿವಸ್ವರೂಪಿಗಳಾದವರು

ಮಹಾಗುರುವಿನ ಗುರು ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು (೧೮೯೪)

ಯೋಗಿಗಳಲ್ಲಿ ಯೋಗಿ ಪರಮ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳು (೧೯೧೧)

ರಾಜಯೋಗಿ ಪರಮ ಪೂಜ್ಯ ಶಿವಬಸವ ಶಿವಯೋಗಿಗಳು ಹಾವೇರಿ (೧೯೫೪)

ಈ ಮಹಾತ್ಮರು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪಾವನ ಜೀವನದಲ್ಲಿ ಮತ್ತು ಸಮಾಜಮುಖಿ ಹೆಜ್ಜೆಗಳಿಗೆ  ಅವಿಸ್ಮರಣೀಯ ಕೊಡುಗೆಗಳನ್ನಿತ್ತವರು.

ಮಹಾಗುರುವಿನ ಗುರು ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಚಿನ್ಮಯ ದೀಕ್ಷೆಯನ್ನಿತ್ತವರು.

ಯೋಗಿಗಳಲ್ಲಿ ಯೋಗಿ ಪರಮ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳು ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ನಿರಂಜನ ಪಟ್ಟಾಧಿಕಾರ ಅನುಗ್ರಹ ವನ್ನಿತ್ತವರು.

ರಾಜಯೋಗಿ ಪರಮ ಪೂಜ್ಯ ಶಿವಬಸವ ಶಿವಯೋಗಿಗಳು ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ದೇಹ ಎರಡಾದರೂ ಒಂದೇ ಆತ್ಮದಂತೆ ,ಹೆಗಲಿಗೆ ಹೆಗಲು ಕೊಟ್ಟುಶ್ರೀ ಮದ್ವೀರಶೈವ ಶಿವಯೋಗಮಂದಿರಕ್ಕೆ ಮಾತೃಸ್ವರೂಪರಾಗಿ  ದುಡಿದವರು.

ಪರಮಪೂಜ್ಯರ ಕುರಿತು ವಿಶೇಷ ಲೇಖನಗಳ ಸಂಗ್ರಹ ಜನೇವರಿ ೨೦೨೨ ರಲ್ಲಿಮೂಡಿಬರುತ್ತಿವೆ.

ಸಂತಸದ ವಿಷಯ ವೇನೆಂದರೆ ಸುಕುಮಾರ ಪತ್ರಿಕೆಯ ಓದುಗರ ಸಂಖ್ಯೆ ೫೦೦೦ ರ ಗಡಿ ದಾಟಿದೆ. ವಿದೇಶದ ಕನ್ನಡಿಗ ಓದುಗರ ಅಭಿಮಾನದ ಜೊತೆಗೆ ಕರ್ನಾಟಕದ ಓದುಗರ ಸಹಕಾರದ ರಕ್ಷಾಕವಚ ಸುಕುಮಾರವನ್ನು ಲಕ್ಷದ ಗಡಿ ದಾಟುವ ಸಮಯ ದೂರವಿಲ್ಲ.

ಜನೆವರಿ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಯೋಗಿರಾಡ್ಜಯ ಮಂಗಲಂ|| ಪರತರಶಿವ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಮೂಲ ಲೇಖನ :ಲಿಂ. ಕುಮಾರ ಸ್ವಾಮಿಗಳು ಕಲ್ಮಠ ಸವದತ್ತಿ-ಬಿದರಿ.

ಮಾಹಿತಿ ಸಹಾಯ : ಪೂಜ್ಯ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ.ಹಾವೇರಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

Related Posts