ಮಾರಾರಿಯೆ ಪಾಲಿಸು ಕಾಲಾರಿ ಬೇಗ

ರಚನೆ: ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮಾರಾರಿಯೆ ಪಾಲಿಸು ಕಾಲಾರಿ ಬೇಗ

ಪಾರುಗೊಳಿಸದೆನ್ನ ಮಾಯಾಸಂಗ  ||

ಮನಸಿಜನಾಗಿತಾ  ಘನಬಾಧೆಗೊಳಿಪನು

ವನಿತೆಯರೊಲವಿತ್ತು  ವಿನಯದಿ ಸಾಧಿ

ಸನುಮತದಿಂದಿವ ನಾಶಗೊಳಿಸಿ   ||  ||

ಮರಣದ ಭೀತಿಯಿಂ ಕೊರಗುತ್ತಿರುವೆನು                         

ಕರುಣವಿಲ್ಲದ ಯಮ ಧೂತರ ಕಾಟದಿ

 ದುರುಳರ ಸಾಹಸ ಪರಿಹರಿಸಭವ   ||  ||

 ಆಶಾಪಾಶದಿ ಘಾಸಿಯಾಗುವೆ ನಾನು !

ಮೋಸದ ಮಾಯೆಯ ಬಲೆಯೊಳು ವಾಸಿಪೆ

ಭಾಸುರಾನಂದ ಶಿವಯೋಗದೊಳಿರಿಸಿ  ||  ||

Related Posts