ರಚನೆ: ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
ಮಾರಾರಿಯೆ ಪಾಲಿಸು ಕಾಲಾರಿ ಬೇಗ
ಪಾರುಗೊಳಿಸದೆನ್ನ ಮಾಯಾಸಂಗ ||
ಮನಸಿಜನಾಗಿತಾ ಘನಬಾಧೆಗೊಳಿಪನು
ವನಿತೆಯರೊಲವಿತ್ತು ವಿನಯದಿ ಸಾಧಿಪ
ಸನುಮತದಿಂದಿವ ನಾಶಗೊಳಿಸಿ || ೧ ||
ಮರಣದ ಭೀತಿಯಿಂ ಕೊರಗುತ್ತಿರುವೆನು
ಕರುಣವಿಲ್ಲದ ಯಮ ಧೂತರ ಕಾಟದಿ
ದುರುಳರ ಸಾಹಸ ಪರಿಹರಿಸಭವ || ೨ ||
ಆಶಾಪಾಶದಿ ಘಾಸಿಯಾಗುವೆ ನಾನು !
ಮೋಸದ ಮಾಯೆಯ ಬಲೆಯೊಳು ವಾಸಿಪೆ
ಭಾಸುರಾನಂದ ಶಿವಯೋಗದೊಳಿರಿಸಿ || ೩ ||