ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
ತೆಳ್ಳನೆಯ ಮೈಕಟ್ಟು,
ತಿಳಿಯ ಕಾವಿಯ ತೊಟ್ಟು,
ಬಂಧನಗಳ ಮೋಹವ ಬಿಟ್ಟು,
ಆತ್ಮನಲಿ ಮನಸನು ಇಟ್ಟು,
ನಿಜಗುರುವಿನ ಅರಸುತ ಹೊರಟು,
ದಿವ್ಯತೆಯ ಭಾವವ ತೊಟ್ಟು,
ಗುರುಪದದಲಿ ಶಿರವನು ಇಟ್ಟು,
ಸಮಾಜೋನ್ನತಿಯ ದೀಕ್ಷೆಯ ತೊಟ್ಟು,
ನಾಡಿಗೆ ಧಾರ್ಮಿಕ ಕೇಂದ್ರವ ಕೊಟ್ಟು,
ಶಿವಮಂದಿರವೆಂಬ ನಾಮವ ಇಟ್ಟು,
ಬಾಲವಟುಗಳ ಪೋಷಿಸ ಹೊರಟು,
ದೈವೀಶಕ್ತಿಯ ಕುರುಹನು ಇಟ್ಟು,
ದುರಿತ ಗುಣಗಳ ದೂಡುತ ಹೊರಟು,
ಕಲ್ಯಾಣ ರಾಜ್ಯವ ಕಟ್ಟುತ ಹೊರಟ
ದ್ವಿತೀಯ ಬಸವ ಅಪ್ಪ ಹಾನಗಲ್ಲ ಕುಮಾರೇಶ