ಡಾ. ಶಿವಯೋಗಿ ದೇವರು ಕಾರಂಜಿಮಠ ಬೆಳಗಾವಿ
ಹೊಂಗಿರಣಗಳು ಸುಕುಮಾರಗೆ ಸುಪ್ರಭಾತ ಹಾಡ್ಯಾವು
ತರುಲತೆಗಳು ತಲೆದುಗುತ ತಂಗಾಳಿ ಬಿಸ್ಯಾವು
ಶಿವಯೋಗದ ಸೋನೆ ಸುರಿದು ,ಮಲಪಹಾರಿ ನದಿಯು ಹರಿದು
ಮನುಕುಲದ ಜ್ಯಾಡ್ಯ ತೊಳೆದು ,ಮಹಾದೇವನ ಇರುವ ತೋರ್ಯಾವು
ತೆಂಗು ಕಂಗು ಮಾವು ಬಿಲ್ವ ಫಲವ ಬಿಟ್ಟಾವು
ಲಿಂಗ ಪೂಜೆಗೆ ಸೇವೆ ಸಲಿಸಿ ಸಾರ್ಥಕಾಗ್ಯಾವು
ನಾದ ನಿನಾದ ಸುನಾದಗಳ ಕಂಪನಗಳೆದ್ದಾವು
ಅಂಧ ಅನಾಥರ ಭಾಳಬೆಳಗಿದ ತಂದೆ ಎಂದಾವು
ಗಿರಿನವಿಲು ಗಿಳಿಕೋಗಿಲೆ ಸರಿಸಮಯಕೆ ಹಾಡ್ಯಾವು
ಸಮಯ ಬೇದವನಳಿದು ಸಮತೆ ಅರಿದೆ ಎಂದಾವು
ಮತಮತಿಗಳ ಮಾತು ಮತಿಸಿ ಮಹಾಸಭೆಗಳೇ ಆಗ್ಯಾವು
ಮನುಜ ಮತ ವಿಶ್ವಪಥ ಎಂಬುದನೇ ಸಾರ್ಯಾವು
ಸಮಾಜವೆನುತಲಿ ಸುಕುಮಾರ ಶಿವನೊಳು ಬೆರೆತಾನು
ಇದ ನೋಡುತ ಶಿವಯೋಗಿ ಶರಣೆಂದು ನಿಂತಾನು