ಶ್ರೀ ಹಾನಗಲ್ಲ ಕುಮಾರೇಶ್ವರರ ಪದಗಳು

ಶ್ರೀ ವೇ. ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು

ರಾಗ: ಯಮನ     ತಾಳ: ಝಫ್ತ

ಚಾಲ:

ಬಾ ಗುರುವೆ ! ಸುರತರುವೆ !

ಬಾಗಿಲವ ತೆರೆದಿರುವೆ |

ಸ್ವಾಗತಿಪೆ ಜೀವದೇವತೆ |

ಯರಸಬರಲೆಂದು ||ಪ||    

ದೇಹದೇಗುಲದೊಳಗೆ |

ಭಾವ ಸಿಂಹಾಸನವ

ಸಾಹಸದಿ ರಚಿಸಿರುವೆ |

ನೇಹಮನದಿಂದಿಂದು ||೧||

ಲಿಂಗಾಂಗ ಸಮರಸದ |

ಮಂಗಲದ ಸುಧೆಯುಣಿಸಿ |

ತುಂಗ ಗುರು – ಲಿಂಗ |

ಜಂಗಮ ಲೀಲೆಯಿಂ ಮೆರೆವ ||೨||

ಎಲ್ಲ ದೈವಕೂ ನಿನ್ನ |

ಮೆಲ್ಲಡಿಯೆ ಮಿಗಿಲೆಂದು |

ಬಲ್ಲಿದನೆ ನುತಿಪೆ ನಿ ।

ನೋಲ್ಮೆ ಎನ್ನಲ್ಲಿರಲಿ||೩||

ಮೆಲ್ಲಡಿಗೆ ಮನವೆಂಬ |

ಮಲ್ಲಿಗೆಯ ಹಾಸುವೆನು ||

“ನಲ್ಲೆ’ ಭಕ್ತಿಯ ರಸವ |

ನಲ್ಮೆಯಿಂದೆರೆಯುವೆನು||೪||

ಎನ್ನಯ್ಯ ಬರಲೆಂದು |

ಪನ್ನೀರ ನೆರಚುವೆನು |

“ಚೆನ್ನಬಸವನ” ಪುಣ್ಯ |

ರನ್ನ ಶ್ರೀ ಸುಕುಮಾರ |

Related Posts