ರಚನೆ. ಶಶಿಧರ ಜಿಗಜಿನ್ನಿ ಬಾಗಲಕೋಟೆ
ಕರುಣಿಸಿ ಎನ್ನ ಕರೆದುಕೊ ನಿನ್ನಲಿ
ಶಿರವ ಬಾಗಿಸಿ ಮುಗಿಯುವೆ ಕೈ
ಎನ್ನ ತಂದೆ ಗುರುಕುಮಾರ
ನಿನ್ನ ಸೇವೆಗೆ ನಾ ಬಂದೆ ಓಡಿ
ಸೇವೆಯ ಭಾಗ್ಯವ ನೀ ನೀಡಿ
ಕರುಣಿಸಿ ಕಂದನ ಕರೆದುಕೊ ಮಡಿಲಲಿ
ಎನ್ನ ಗುರುವೆ ಹಾನಗಲ್ ಸ್ವಾಮಿ
ನಮಿಸುವೆ ನಾನು ಶಿರವ ಬಾಗಿ
ಪೂಜಿಸುವೆ ನಿನ್ನ ಪಾದಕೆ ಎರಗಿ
ಕರುಣಿಸಿ ಕಂದನ ಕರೆದುಕೊ ಒಡಲಲಿ
ಎನ್ನ ದೇವನೇ ಮಂದಿರದ ಯೋಗಿ
ಸಂಗೀತ ಕಲೆಯ ಕೋರಿ ನಿಂದೆ
ನಿನ್ನಯ ನಂಬಿ ನಿನ್ನಲಿ ಬಂದೆ
ಕರುಣಿಸಿ ಕಂದನ ಕರೆದುಕೊ ನಿನ್ನಲಿ