ಸಂಪಾದಕೀಯ:

ಸಂಪಾದಕೀಯ:

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

 

ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ ತನ್ನ ಮೂರನೆಯ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಯ ಐದನೆಯ ವಾರ್ಷಿಕೋತ್ಸವ, ಶ್ರೀಕುಮಾರ ತರಂಗಿಣಿ ಯ ಮೂರನೆಯ ವಾರ್ಷಿಕೋತ್ಸವ, ಶ್ರೀಕುಮಾರೇಶ್ವರ ಸೇವಾ ಬಳಗ ಜೋಯಿಸರಹರಳಹಳ್ಳಿ ಸದ್ಭಕ್ತರ ಪಾದಯಾತ್ರೆ ದಿ.12-05-2024 ರಂದು ಶ್ರೀ ಶಿವಯೋಗಮಂದಿರ ದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.ಕಾರ್ಯಕ್ರಮ ದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ.ಮ.ನಿ.ಪ್ರ.ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯ ಶ್ರೀ.ಡಾ. ಶಿವಯೋಗಿ ದೇವರು ನೇತೃತ್ವವಹಿಸಿದ್ದರು.ಪೂಜ್ಯ ಶ್ರೀ ಸಿದ್ಧಲಿಂಗ ದೇಶಿಕರು,ಪೂಜ್ಯ ಶ್ರೀ ಮರಿಕೊಟ್ಟೂರು ದೇಶಿಕರು ಮತ್ತು ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀಕುಮಾರ ತರಂಗಿಣಿ ಕುರಿತು ಅನುಭಾವ ಗಳನ್ನು ದಯಪಾಲಿಸಿದರು.

ಪೂಜ್ಯ ವಟು ಸಾಧಕರ ಸಮ್ಮುಖದಲ್ಲಿ,

ಧರ್ಮದರ್ಶಿಗಳಾದ ಶ್ರೀ ಹಂಗರಗಿ ಯವರು ಮತ್ತು ಪೂಜ್ಯ ಶ್ರೀ ಅನ್ನದಾನ ಶಾಸ್ತ್ರಿಗಳು  ಆಗಮಿಸಿ ಶುಭಹಾರೈಸಿದರು.

ಕಾರ್ಯಕ್ರಮ ದ ಯಶಸ್ವಿ ಕಾರಣೀಭೂತ ರಾದ ಶ್ರೀ ಶಿವಯೋಗಮಂದಿರದ ಆಡಳಿತ ಮಂಡಲಿಯವರಿಗೆ,ಸಿಬ್ಬಂದಿ ಯವರಿಗೆ,ಜೋಯಿಸರಹರಳಹಳ್ಳಿ ಯ ಗುರು ಹಿರಿಯರಿಗೆ ,ಭಜನಾಮಂಡಲಿಯವರಿಗೆ,ಸಂಗೀತಕಾರರಿಗೆ ಮತ್ತು ಸಭೆಗೆ  ಆಗಮಿಸಿದ ಎಲ್ಲ ಸಭಿಕರಿಗೆ,ಹಾಗೂ ಕಾರ್ಯಕ್ರಮ ನಿರೂಪಿಸಿದ ಪೂಜ್ಯ ಶಿವಪ್ರಸಾದ ದೇವರಿಗೆ ಸೇವಾ ಸಮಿತಿಯ ತುಂಬು ಹೃದಯದ ಕೃತಜ್ಞತೆಗಳು .

ನಾವು ನಮ್ಮ ತರಂಗಿಣಿ ಮಾಸಿಕ್‌ನ ಈ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವೆ ಹಾಗೂ ನಮ್ಮ ಅನುಭವಗಳ ಸಾಕ್ಷಿಯಾಗಿ ನಿಮ್ಮ ಪ್ರತಿಕ್ರಿಯೆ ಪಡೆಯುವುದು ನಮಗೆ ಹೆಚ್ಚು ಉತ್ತೇಜನ ತರುತ್ತದೆ.

 

ನಮ್ಮ ತರಂಗಿಣಿ ಮಾಸಿಕ್‌ ಬ್ಲಾಗ್ ನ ಬಳಗ  ಮುಂದಿನ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯುತ್ತಾ ಹೋಗಲು ನಿಮ್ಮ ಪ್ರೋತ್ಸಾಹ ಮತ್ತು ಆತ್ಮೀಯತೆ ನಮಗೆ ಅತ್ಯಂತ ಆವಶ್ಯಕ.

 

ಧನ್ಯವಾದಗಳು!

 

 

ಶ್ರೀಕುಮಾರ ತರಂಗಿಣಿ  ೨೦೨೪ ಜೂನ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ಮಾನವಾ, ನೀನಾರೋ ? ಕಾಯಾ. ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-‌೩೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿವಯೋಗ ಮಂದಿರ ಸ್ಥಾಪನೆ: “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. “ರಾಗ-ದ್ವೇಷ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಷಣ್ಮುಖ ಶಿವಯೋಗಿಗಳು; ಇತಿವೃತ್ತ ಮತ್ತು ಕೃತಿಗಳು: ಲೇಖಕರು: ಡಾ|| ಸಿ .ನಾಗಭೂಷಣ
  6. ಒಂದು ನಿರಾಧಾರ ಆರೋಪದ ಕುರಿತು : ಲೇಖಕರು ಶ್ರೀಕಂಠ.ಚೌಕೀಮಠ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

Related Posts