ಗುರುವಿನ ಅವಶ್ಯಕತೆ ನಮಗೆ ಏಕೆ ಬೇಕು

ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳು

ಹೂವಿನಶಿಗ್ಲಿ ಶ್ರೀ ವಿರಕ್ತಮಠ.

ಮಣ್ಣು ಇರದೇ ಮಡಿಕೆ ಆಗದು. ಹಾಗೆಯೇ ಸದ್ಗುರುವಿನ ಸಂಗ ಸಿಗದೆ ಭಗವಂತನ ಸಾನಿಧ್ಯ ಸಿಗಲು ಸಾಧ್ಯವಿಲ್ಲ. ದೇವರು ತಂದೆಯಂತೆ ಗುರುವು ತಾಯಿಯಂತೆ ,ಗುರುವೆಂಬ ತಾಯಿಯನ್ನು ಬಿಟ್ಟು ತಂದೆಯಂಬ ದೇವರನ್ನು ಕಾಣಲು ಸಾಧ್ಯವಿಲ್ಲ. ತಾಯಿ ತನ್ನ ಎದೆ ಹಾಲಿನಿಂದ ತನ್ನ ಮಗನ ತನುವನ್ನು ಸಲುಹಿದರೆ , ಗುರುವು ತನ್ನ ಅಂತರಂಗದ ಉಪದೇಶಾಮೃತವನಿತ್ತು ಶಿಷ್ಯನ ಅತ್ಮವನ್ನು ಸಲುಹಿ ದೇವನಿಗೆ ಎಡೆ ಮಾಡುತ್ತಾನೆ.

 

ಒಬ್ಬ ಮನುಷ್ಯ ದಾರಿಯಲ್ಲಿ ಹೋಗುತ್ತಿದ್ದ. ಆತನ ಹತ್ತಿರ ಒಂದಿಷ್ಟು ಸಂಪತ್ತು ಇತ್ತು. ದಾರಿ ನಿರ್ಜನವಾಗಿತ್ತು. ಢಕಾಯತರು ಬಂದರು, ಸಂಪತ್ತನ್ನೆಲ್ಲ ಕಸಿದುಕೊಂಡರು. ಆ ಬಳಿಕ ಸುಮ್ಮನೆ ಬಿಡಲಿಲ್ಲ. ಕಣ್ಣುಕಟ್ಟಿ ಆತನನ್ನು ದಟ್ಟ ಅರಣ್ಯದಲ್ಲಿ ಬಿಟ್ಟರು.  ಯಾರೂ ಇಲ್ಲ. ಕಣ್ಣುಕಾಣದು, ಕೈ ಕಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಎಷ್ಟು ತಳಮಳಿಸುತ್ತಾ ಇರಬೇಡ ?

 

ಆತ ಪಾರಾಗುವುದು ಹೇಗೆ?  ಭಗವಂತನನ್ನು ಪ್ರಾರ್ಥಿಸಿದ.  ಅಲ್ಲಿಗೆ ಒಬ್ಬ ವ್ಯಕ್ತಿ ಬಂದ.ಅ ನಿಮಿತ್ತ ಭಂಧುವಾಗಿ ಬಂದ   ಕಣ್ಣು ಕೈ ಬಿಚ್ಚಿ ಈ ದಾರಿಯಿಂದ ನೀನು ಹೋಗು  ಎಂದು ದಾರಿ ತೋರಿದ.

 

ಹಾಗೆ ನಮ್ಮ ಬದಕು ಒಂದು ದಟ್ಟವಾದ ಕಾಡು. ಇಂತಲ್ಲಿ ನಮ್ಮನ್ನು ಯಾರೋ ತಂದು ಬಿಟ್ಟಿದ್ದಾರೆ. ನಾವು ಕಣ್ಣು ತೆರೆದಾಗ ಕಂಡದ್ದು ಒಂದು ಮನೆ, ತಂದೆ, ತಾಯಿ, ಈ ಮಾಯಾ ಪ್ರಂಪಚ ಹಿಂದೆ ಏನಾಗಿದೆ ಗೊತ್ತಿಲ್ಲ, ಮುಂದೆ ಏನಾಗಲಿದೆ ಗೊತ್ತಿಲ್ಲ. ತಿಳಿದವರು ನಮಗೆ ಸಿಕ್ಕಿಲ್ಲ. ಉಳಿದವರೆಲ್ಲ ಕಣ್ಣುಕಟ್ಟಿಸಿ  ಕೊಂಡವರೇ. ಇಂತಹ ಸ್ಥಿತಿಯಲ್ಲಿ ಯಾರು ನಮ್ಮ ಕಣ್ಣು ಬಿಚ್ಚುತ್ತಾರೆ. ಯಾರು ನಮಗೆ ನಿಖರವಾದ ಮಾರ್ಗ ತೋರಿಸುತ್ತಾರೆ. ಅವರೇ ಸದ್ಗುರು ದೇವರು.

 

ಅದಕ್ಕಾಗಿಯೇ ಬಸವಣ್ಣನವರು

ಮಡಿಕೆಯ ಮಾಡುವರೆ ಮಣ್ಣೇ ಮೊದಲು

ತೊಡಿಗೆಯ ಮಾಡುವರೇ ಹೊನ್ನ ಮೊದಲು

ಶವಪಥವನರಿವಡೆ ಗುರುಪಥವೇ ಮೊದಲು ಎಂದಿದ್ದಾರೆ

 

 

Related Posts